ಜೂನ್ 28, 2012

ಮುಖ್ಯವಾಹಿನಿಯ ಜಾಣಗುರುಡು


ಡಾ ಅಶೋಕ್ ಕೆ ಆರ್        
 ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!

ಜೂನ್ 13, 2012

ಅಂತ್ಯೋದಯ


ಮೂಲ 
ಡಾ ಅಶೋಕ್. ಕೆ. ಆರ್.
ಅರ್ಧ ಘಂಟೆಯ ಮುಂಚೆ ಅಪೆಂಡಿಸೈಟಿಸ್ ಆಪರೇಷನ್ ಮುಗಿಸಿ ಮಲಗಲು ಹೋದವಳನ್ನು ನರ್ಸ್ ಎಬ್ಬಿಸಿದ್ದಳು. ಆಕ್ಸಿಡೆಂಟ್ ಕೇಸ್ ಬಂದಿದೆ. ಎರಡು ಎರಡೂವರೆ ವರ್ಷದ ಮಗು, ತಲೆಗೆ ಪೆಟ್ಟಾಗಿದೆ ಎಂದು ಹೇಳಿದ್ದಳು. ತಣ್ಣನೆಯ ನೀರನ್ನು ಮುಖಕ್ಕೆರಚಿಕೊಂಡು ಕೂದಲು ಸರಿಮಾಡಿಕೊಂಡು ಎದೆಯ ಮೇಲೊಂದು ದುಪ್ಪಟ್ಟಾ ಹೊದ್ದಿಕೊಂಡು ಕೆಳಮಹಡಿಯಲ್ಲಿದ್ದ ಎಮರ್ಜೆನ್ಸಿ ವಾರ್ಡಿಗೆ ಬಂದಾಗ ಘಂಟೆ ಹನ್ನೊಂದಾಗಿತ್ತು. ಮಗುವಿನ ತಲೆಗೊಂದು ಬ್ಯಾಂಡೇಜನ್ನು ಒತ್ತಿ ಹಿಡಿದಿದ್ದರು, ರಕ್ತಮಯವಾಗಿತ್ತು. ಮಂಚದ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಅಂಗಿ ಪ್ಯಾಂಟು ಅಲ್ಲಲ್ಲಿ ಹರಿದಿತ್ತು. ಅಂಗಿಯ ಎಡಭಾಗದಲ್ಲಿ ರಕ್ತದ ಕಲೆಯಿತ್ತು. ಮಣ್ಣಾಗಿ ಕೆದರಿದ್ದ ಕೂದಲು. ಡಾಕ್ಟರ್ ಬಂದರೆಂದು ತಿರುಗಿ ನೋಡಿದ ರಾಕೇಶ. “ಅರೆ! ರಾಕಿ ನೀನು?!” ಭವ್ಯಳ ದನಿಯಲ್ಲಿ ಅಚ್ಚರಿ ಆಶ್ಚರ್ಯ ಸಂತಸವಿತ್ತು.

ಜೂನ್ 8, 2012

ಬದುಕು ಚಿತ್ರಮಂದಿರ!

-ಹರ್ಷನ್
ಬದುಕು ಚಿತ್ರಮಂದಿರ!
ದಿನ ನಾಲ್ಕು ಆಟ
ನಿತ್ಯ ಇದೇ ಪರಿಪಾಟ.
ಪ್ರದರ್ಶನಕ್ಕಿರುವುದು ನಮ್ಮ ಜೀವನದ 
ಜಂಜಾಟ ಮತ್ತು ಪರದಾಟ.
ಬದುಕು ಚಿತ್ರಮಂದಿರ!
ಅದೇ ಪರದೆ ಅದೇ ಸಿನಿಮಾ.
ಆದರೆ ಕಥೆಯೇ ಬೇರೆ 
ಕಥೆಯಲ್ಲಿನ ವ್ಯಥೆಯೇ ಬೇರೆ.
ಬದುಕು ಚಿತ್ರಮಂದಿರ!
ಕಾಲ್ಪನಿಕ ಕಥೆಗೆ ಜಾಗವಿಲ್ಲ 
ವಾಸ್ತವಿಕತೆಗೆ ಅರ್ಥವಿಲ್ಲ..
ಅರ್ಧವಿರಾಮವಂತೂ ಇಲ್ಲವೇ ಇಲ್ಲ,
ಬದುಕು ಚಿತ್ರಮಂದಿರ!
ಶುರುವಾಗುವುದು ಕೊನೆಯಾಗುವುದು 
ನಾಳಿನ ಆಟಗಳಿಗೆ ಮತ್ತೆ 
ತಯಾರಾಗುವುದು....
ಬದುಕು ಚಿತ್ರಮಂದಿರ!
ದಿನ ನಾಲ್ಕು ಆಟ, ನಿತ್ಯ ಅದೇ ಪರಿಪಾಟ.

ಮೇ 29, 2012

ಸಾಮಾಜಿಕ ಕಳಕಳಿಯೆಂದರೆ.....

ಡಾ ಅಶೋಕ್ ಕೆ ಆರ್
ತೀರ ಗಂಗಾಧರ್ ಮೊದಲಿಯಾರ್ ಕೂಡ ಈ ರೀತಿಯಾಗಿ ಬರೆಯಬಲ್ಲರು ಎಂದು ನಿರೀಕ್ಷಿಸಿರಲಿಲ್ಲ! ಪ್ರಜಾವಾಣಿಯ ಸಿನಿಮಾರಂಜನೆಯ ಫಿಲಂ ಡೈರಿ ಅಂಕಣದಲ್ಲಿ ಅಮೀರ್ ಖಾನನ ಸತ್ಯಮೇವ ಜಯತೆಯ ಬಗ್ಗೆ ಬರೆದಿದ್ದಾರೆ. ‘ಬುರುಡೆ ಪುರಾಣ’ ಎಂಬ ಶೀರ್ಷಿಕೆಯೇ ಅಸಂಬದ್ಧವಾಗಿದೆ. ಅಮೀರ್ ಖಾನನ ಕೆಲಸವನ್ನು ಮೆಚ್ಚುತ್ತಲೇ ಅವನನ್ನು ತೆಗಳುತ್ತಾ ಹೋಗುತ್ತಾರೆ. ಭಾವನೆಗಳನ್ನು ಉದ್ರಿಕ್ತಗೊಳಿಸಿ ಹಣ ಮಾಡುವ ‘ದಂಧೆ’ ಎಂದುಬಿಡುತ್ತಾರೆ. ಅಮೀರ್ ಖಾನ್ ಹೋರಾಟಗಾರನಲ್ಲ, ಸಾಮಾಜಿಕ ಕಾರ್ಯಕರ್ತನೂ ಅಲ್ಲ; ಆತ ಒಬ್ಬ ನಟ, ನಿರ್ಮಾಪಕ, ನಿರ್ದೇಶಕ. ಹಣವಿಲ್ಲದೆ ಏನೂ ಮಾಡಲಾಗದ ಚಿತ್ರರಂಗದವನು. ಯಾವ ಕಾರ್ಯಕ್ರಮ ಮಾಡಿದರೂ ಅದರಿಂದ ಲಾಭ ಬರುವುದನ್ನು ಅವನು ಗಮನಿಸಲೇಬೇಕು. ‘ಏರ್ ಟೆಲ್ನಿಂದ ಮೇಸೇಜ್ ಮಾಡಿ, ಕೇವಲ ಒಂದು ರುಪಾಯಿ’ ಎಂದವನು ಕಾರ್ಯಕ್ರಮದ ಕೊನೆಯಲ್ಲಿ ಹೇಳುವುದು ಕೂಡ ಲಾಭದ ಒಂದು ಮುಖ. ಇವೆಲ್ಲವೂ ಸತ್ಯವೇ, ಆದರೆ....

ಮೇ 8, 2012

ಡಬ್ಬಿಂಗ್ ಅವಶ್ಯಕವೇ?

ಡಾ ಅಶೋಕ್. ಕೆ. ಆರ್.
ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.

ಏಪ್ರಿ 25, 2012

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

siachen glacier; source
ಡಾ ಅಶೋಕ್. ಕೆ. ಆರ್.
ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.

ಏಪ್ರಿ 16, 2012

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ!


ಮೂಲ
ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!

ಏಪ್ರಿ 12, 2012

ಬರ ಬಿದ್ದ ನಾಡಿನಲ್ಲಿ ವಿವೇಕಕ್ಕೂ ಅಭಾವ


          ಇಡೀ ಕರ್ನಾಟಕ ಬರ ಪರಿಸ್ಥತಿಯನ್ನೆದುರಿಸುತ್ತಿರುವ ಸಂದರ್ಭದಲ್ಲಿ ಒಂದು ಚಿತ್ರದ ಮೂಲದ ಬಗ್ಗೆ ಶುರುವಾದ ವಿವಾದ ಪಡೆಯುತ್ತಿರುವ ಅಸಹ್ಯಕರ ತಿರುವುಗಳು ಮಾಧ್ಯಮದ ಮೇಲೆ ನಂಬುಗೆಯಿಟ್ಟ ಜನರನ್ನೆಲ್ಲ ತಲೆತಗ್ಗಿಸುವ ಹಾಗೆ ಮಾಡಿದೆ. ಪತ್ರಿಕೆಗಳಿಗಿಂತ ಹೆಚ್ಚು ಜನರನ್ನು ತಲುಪಲು ಶಕ್ತವಾಗಿರುವ ದೃಶ್ಯಮಾಧ್ಯಮಗಳು ತಮ್ಮ ವೈಯಕ್ತಿಕ ದ್ವೇಷ ಸಾಧನೆಗೆ ಮಾಧ್ಯಮದ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.

ಮಾರ್ಚ್ 14, 2012

ಒಂದು ಅಪಘಾತ ಮತ್ತು ನಮ್ಮ ‘ಅಭಿವೃದ್ಧಿ’

ಫೋಟೋ ಮೂಲ - ಡೆಕ್ಕನ್ ಹೆರಾಲ್ಡ್
ಡಾ ಅಶೋಕ್.ಕೆ.ಆರ್.
‘Oh my god’ ನಮ್ಮ ಬೆಂಗಳೂರು ಎಷ್ಟೆಲ್ಲ ಅಭಿವೃದ್ಧಿಯಾಗಿಬಿಟ್ಟಿದೆ! ಮೆಟ್ರೋ ರೈಲಾಗಲೇ ಚುಕುಬುಕು ಅಂತ ಓಡಾಡಲಾರಂಭಿಸಿದೆ. ಅಷ್ಟದಿಕ್ಕುಗಳಲ್ಲೂ ಫ್ಲೈಓವರ್ ಮೇಲೆ ಫ್ಲೈಓವರ್ ಕಟ್ಟಲಾಗುತ್ತಿದೆ. ಮಾಲ್ ಗಳು ಗಲ್ಲಿಗೊಂದರಂತೆ ಪ್ರಾರಂಭವಾಗುತ್ತಿವೆ. ವೋಲ್ವೋ ಬಸ್ಸಿಗೆ ಸೆಡ್ಡು ಹೊಡೆಯಲು ಮರ್ಸಿಡಿಸ್ ಬಸ್ಸುಗಳು ರಾಜಠೀವಿಯಿಂದ ಸಂಚರಿಸಲಾರಂಭಿಸಿವೆ. ಓಹ್! ಯಾವ ದುಬಾರಿ ಕಾರಾದರೂ ಲಭ್ಯವಿದೆ ನಮ್ಮಲ್ಲಿ! ಇನ್ನೇನು ಬೇಕು? ಬೆಂಗಳೂರು ಸಿಂಗಪುರವಾಗಿ ಭಾರತ ಸೂಪರ್ ಪವರ್ ರಾಷ್ಟ್ರವಾಗುವುದಕ್ಕೆ ಇನ್ನು ಕ್ಷಣಗಣನೆ ಆರಂಭಿಸಿಯೇಬಿಡಬಹುದಲ್ಲವೇ? ! ಒಂದ್ನಿಮಿಷ ತಡೀರಿ!

ಮಾರ್ಚ್ 8, 2012

ತಾಕತ್ತಿದ್ದರೆ ಇದನ್ನೂ ಬ್ರೇಕಿಂಗ್ ನ್ಯೂಸ್ ಮಾಡಿ!!

ಪತ್ರಕರ್ತರ ಗ್ರಹಚಾರವೇ ನೆಟ್ಟಗಿಲ್ಲವೇನೋ! ದುಡ್ಡು ತೆಗೊಂಡು ವರದಿ ಮಾಡಿದ ಆರೋಪ ಎದುರಿಸಿದ್ದಾಯಿತು, ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣದಲ್ಲಿ ಪತ್ರಕರ್ತೆಯೊಬ್ಬರ ಬಂಧನ ನಡೆಯಿತು, ಇತ್ತೀಚೆಗೆ ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಛೇರಿ ಮೇಲೆ ನಡೆದ ದಾಳಿಯಲ್ಲೂ ಮೊದಲ ಬಂಧನವಾಗಿರುವುದು ಒಬ್ಬ ಪತ್ರಕರ್ತ! ಅಫ್ ಕೋರ್ಸ್ ಇದ್ಯಾವುದೂ ಇನ್ನು ಸಾಬೀತಾಗದ ಆರೋಪಗಳು, ಆದರೆ ಇತರರ ಮೇಲೆ ಆರೋಪಪಟ್ಟಿ ತಯಾರಾಗುವ ಮುಂಚೆಯೇ ಆರೋಪಿ ಪಟ್ಟ ಕಟ್ಟಿ ನ್ಯೂಸನ್ನು ಬ್ರೇಕ್ ಮಾಡುತ್ತಲೇ ಸಾಗುವ ಪತ್ರಕರ್ತರ ಮೇಲೆ ಆರೋಪ ಬಂದಾಗಲೂ ಸಾಬೀತಾಗುವ ಮೊದಲು ಆರೋಪಿಯೆಂದು ಗಣಿಸುವುದರಲ್ಲಿ ತಪ್ಪಿಲ್ಲವೇನೋ!!