ಏಪ್ರಿ 25, 2012

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

siachen glacier; source
ಡಾ ಅಶೋಕ್. ಕೆ. ಆರ್.
ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.

ಏಪ್ರಿ 16, 2012

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ!


ಮೂಲ
ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!

ಏಪ್ರಿ 12, 2012

ಬರ ಬಿದ್ದ ನಾಡಿನಲ್ಲಿ ವಿವೇಕಕ್ಕೂ ಅಭಾವ


          ಇಡೀ ಕರ್ನಾಟಕ ಬರ ಪರಿಸ್ಥತಿಯನ್ನೆದುರಿಸುತ್ತಿರುವ ಸಂದರ್ಭದಲ್ಲಿ ಒಂದು ಚಿತ್ರದ ಮೂಲದ ಬಗ್ಗೆ ಶುರುವಾದ ವಿವಾದ ಪಡೆಯುತ್ತಿರುವ ಅಸಹ್ಯಕರ ತಿರುವುಗಳು ಮಾಧ್ಯಮದ ಮೇಲೆ ನಂಬುಗೆಯಿಟ್ಟ ಜನರನ್ನೆಲ್ಲ ತಲೆತಗ್ಗಿಸುವ ಹಾಗೆ ಮಾಡಿದೆ. ಪತ್ರಿಕೆಗಳಿಗಿಂತ ಹೆಚ್ಚು ಜನರನ್ನು ತಲುಪಲು ಶಕ್ತವಾಗಿರುವ ದೃಶ್ಯಮಾಧ್ಯಮಗಳು ತಮ್ಮ ವೈಯಕ್ತಿಕ ದ್ವೇಷ ಸಾಧನೆಗೆ ಮಾಧ್ಯಮದ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.

ಮಾರ್ಚ್ 14, 2012

ಒಂದು ಅಪಘಾತ ಮತ್ತು ನಮ್ಮ ‘ಅಭಿವೃದ್ಧಿ’

ಫೋಟೋ ಮೂಲ - ಡೆಕ್ಕನ್ ಹೆರಾಲ್ಡ್
ಡಾ ಅಶೋಕ್.ಕೆ.ಆರ್.
‘Oh my god’ ನಮ್ಮ ಬೆಂಗಳೂರು ಎಷ್ಟೆಲ್ಲ ಅಭಿವೃದ್ಧಿಯಾಗಿಬಿಟ್ಟಿದೆ! ಮೆಟ್ರೋ ರೈಲಾಗಲೇ ಚುಕುಬುಕು ಅಂತ ಓಡಾಡಲಾರಂಭಿಸಿದೆ. ಅಷ್ಟದಿಕ್ಕುಗಳಲ್ಲೂ ಫ್ಲೈಓವರ್ ಮೇಲೆ ಫ್ಲೈಓವರ್ ಕಟ್ಟಲಾಗುತ್ತಿದೆ. ಮಾಲ್ ಗಳು ಗಲ್ಲಿಗೊಂದರಂತೆ ಪ್ರಾರಂಭವಾಗುತ್ತಿವೆ. ವೋಲ್ವೋ ಬಸ್ಸಿಗೆ ಸೆಡ್ಡು ಹೊಡೆಯಲು ಮರ್ಸಿಡಿಸ್ ಬಸ್ಸುಗಳು ರಾಜಠೀವಿಯಿಂದ ಸಂಚರಿಸಲಾರಂಭಿಸಿವೆ. ಓಹ್! ಯಾವ ದುಬಾರಿ ಕಾರಾದರೂ ಲಭ್ಯವಿದೆ ನಮ್ಮಲ್ಲಿ! ಇನ್ನೇನು ಬೇಕು? ಬೆಂಗಳೂರು ಸಿಂಗಪುರವಾಗಿ ಭಾರತ ಸೂಪರ್ ಪವರ್ ರಾಷ್ಟ್ರವಾಗುವುದಕ್ಕೆ ಇನ್ನು ಕ್ಷಣಗಣನೆ ಆರಂಭಿಸಿಯೇಬಿಡಬಹುದಲ್ಲವೇ? ! ಒಂದ್ನಿಮಿಷ ತಡೀರಿ!

ಮಾರ್ಚ್ 8, 2012

ತಾಕತ್ತಿದ್ದರೆ ಇದನ್ನೂ ಬ್ರೇಕಿಂಗ್ ನ್ಯೂಸ್ ಮಾಡಿ!!

ಪತ್ರಕರ್ತರ ಗ್ರಹಚಾರವೇ ನೆಟ್ಟಗಿಲ್ಲವೇನೋ! ದುಡ್ಡು ತೆಗೊಂಡು ವರದಿ ಮಾಡಿದ ಆರೋಪ ಎದುರಿಸಿದ್ದಾಯಿತು, ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣದಲ್ಲಿ ಪತ್ರಕರ್ತೆಯೊಬ್ಬರ ಬಂಧನ ನಡೆಯಿತು, ಇತ್ತೀಚೆಗೆ ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಛೇರಿ ಮೇಲೆ ನಡೆದ ದಾಳಿಯಲ್ಲೂ ಮೊದಲ ಬಂಧನವಾಗಿರುವುದು ಒಬ್ಬ ಪತ್ರಕರ್ತ! ಅಫ್ ಕೋರ್ಸ್ ಇದ್ಯಾವುದೂ ಇನ್ನು ಸಾಬೀತಾಗದ ಆರೋಪಗಳು, ಆದರೆ ಇತರರ ಮೇಲೆ ಆರೋಪಪಟ್ಟಿ ತಯಾರಾಗುವ ಮುಂಚೆಯೇ ಆರೋಪಿ ಪಟ್ಟ ಕಟ್ಟಿ ನ್ಯೂಸನ್ನು ಬ್ರೇಕ್ ಮಾಡುತ್ತಲೇ ಸಾಗುವ ಪತ್ರಕರ್ತರ ಮೇಲೆ ಆರೋಪ ಬಂದಾಗಲೂ ಸಾಬೀತಾಗುವ ಮೊದಲು ಆರೋಪಿಯೆಂದು ಗಣಿಸುವುದರಲ್ಲಿ ತಪ್ಪಿಲ್ಲವೇನೋ!!

ಮಾರ್ಚ್ 5, 2012

ಕರ್ತವ್ಯ ಮರೆತವರ ಕರುನಾಡಿನಲ್ಲಿ

ಪೋಲೀಸರಿಂದ ದಾಂಧಲೆ. ಮೂಲ - ಫೇಸ್ ಬುಕ್

ಪತ್ರಕರ್ತರ ಪ್ರತಿಭಟನೆ. ಮೂಲ - ಡೆಕ್ಕನ್ ಹೆರಾಲ್ಡ್
ವಕೀಲರ ದೌರ್ಜನ್ಯ. ಮೂಲ - ಫೇಸ್ ಬುಕ್
ಮೊದಲು ವಕೀಲರಿಗೆ ಧನ್ಯವಾದಗಳನ್ನರ್ಪಿಸಿಬೇಕು! ವಿವಿಧ ರಾಜಕೀಯ ಪಕ್ಷಗಳ ವಸಾಹತಾಗಿರುವ ಮಾಧ್ಯಮಗಳನ್ನು, ಪತ್ರಕರ್ತರನ್ನು ಒಂದುಗೂಡಿಸಿದ ಕೀರ್ತಿ ವಕೀಲರಿಗೆ ಸಲ್ಲಬೇಕು. ವಕೀಲರು ಮತ್ತು ಮಾಧ್ಯಮ – ಪೋಲೀಸರ ನಡುವೆ ನಡೆದ ‘ಬ್ಲ್ಯಾಕ್ ಫ್ರೈಡೆ’ ಕದನದಲ್ಲಿ ಸೋಲನುಭವಿಸಿದ್ದು ಅವರಲ್ಲಿನ ಕರ್ತವ್ಯನಿಷ್ಠೆ ಎಂಬುದು ಕರ್ನಾಟಕದ ಇವತ್ತಿನ ಸಾಮಾಜಿಕ ಪರಿಸರದ ಪ್ರತಿಬಿಂಬ. ಪ್ರಾರಂಭೋತ್ಸವ ವಕೀಲರಿಂದಾಗಿದ್ದಾದರೂ ಉಳಿದೀರ್ವರು ತಮ್ಮ ಕೊಡುಗೆ ನೀಡುವುದರಲ್ಲಿ ಹಿಂದೆ ಬೀಳಲಿಲ್ಲ.

ಫೆಬ್ರ 27, 2012

“ಮರೀನಾ” ಎಂಬ ದೃಶ್ಯಕಾವ್ಯ

ಡಾ. ಅಶೋಕ್. ಕೆ. ಆರ್.
 ಅದು ಕಡಲಕಿನಾರೆಯ ಕಥೆ. ಮನೆಬಿಟ್ಟು ಓಡಿಬಂದವರ, ಮನೆಯಿಲ್ಲದೆ ಬಂದವರ, ಮನೆಯಿಂದ ಓಡಿಸಿಕೊಂಡವರ ಮನಮುಟ್ಟುವ ಕಥೆ. ಪಾಂಡಿರಾಜ್ ಎಂಬ ನಿರ್ದೇಶಕನ ಮನದ ಪಟದಲ್ಲಿ ಮೂಡಿದ ಕಥೆಯ ಯಶಸ್ಸು ಚಿತ್ರ ನೋಡುವಾಗ ನಮ್ಮ ಕಣ್ಣಂಚಿನಲ್ಲಿ ಮೂಡುವ ಹನಿಗಳಲ್ಲಿದೆ. ಧಾರಾಕಾರವಾಗಿ ಗೊಳೋ ಎಂದಳುತ್ತಾ ಕುಳಿತರೆ ನಿರ್ದೇಶಕ ಜವಾಬ್ದಾರನಲ್ಲ!

ಫೆಬ್ರ 16, 2012

ಪಾಕಿಸ್ತಾನ್ ಜಿಂದಾಬಾದ್!!


ವಿಧಾನಸಭಮ್ಮ ಶ್ಯಾನೆ ಬೇಸರದಲ್ಲಿ ಕುಂತಿದ್ದಳು. ‘ಇದ್ಯಾಕಕ್ಕ ಹಿಂಗ್ ಆಕಾಶ್ವೇ ತಲೆ ಮೇಲ್ ಬಿದ್ದೋಳ್ತರ ಮುಖ ಮಾಡ್ಕಂಡಿದ್ದೀಯೆ? ಅದರಲ್ಲೂ ಕಲಾಪ ನಡೆಯೋ ಟೇಮ್ನಾಗೆ?’ ಎಂದು ಕುಶಲೋಪರಿ ವಿಚಾರಿಸಿದ ಹೈಕೋರ್ಟ್. ‘ಹಲ್ಕಾ ನನ್ ಮಕ್ಳು’ ಗೊಣಗಿ ತಲೆತಗ್ಗಿಸಿದಳು. ಕಡತದಿಂದ ತೆಗೆಯುವಂಥ ಮಾತುಗಳನ್ನು ವಿಧಾನಸಭಮ್ಮನೇ ಆಡಿದ್ದು ಕೇಳಿ ಅಚ್ಚರಿಯಾಯ್ತು. ‘ಯಾರಕ್ಕ ಹಲ್ಕ ನನ್ ಮಕ್ಳು?’

ಜನ 23, 2012

ಒಂದಷ್ಟು ಆಚರಣೆಗಳ ಪೋಸ್ಟ್ ಮಾರ್ಟಮ್!


ಕೆಲವು ದಿನಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನೊಂದು ಲೇಖನ
ನೆಂಟರೊಬ್ಬರ ಮದುವೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಬಾಳೆಎಲೆ ಬಡಿಸುತ್ತಿದ್ದವನಿಗೆ ನನ್ನ ಪಕ್ಕ ಕುಳಿತಿದ್ದ ಚಿಕ್ಕಪ್ಪ ‘ಎಲೆಯ ತುದಿ ಎಡಕ್ಕೆ ಬರುವಂತೆ ಹಾಕಪ್ಪ’ ಎಂದು ಸೂಚಿಸಿದರು. ಅವನು ಅದನ್ನೇ ಪಾಲಿಸಿದ. ‘ಯಾಕೆ?’ ಪ್ರಶ್ನೆಯೆಸೆದು ಚಿಕ್ಕಪ್ಪನೆಡೆಗೆ ನೋಡಿದೆ. ‘ಎಲ್ಲಾದಕ್ಕೂ ಯಾಕೆ ಅಂತ ಕೇಳ್ತಾರಾ? ನಡೆದುಕೊಂಡು ಬಂದಿದೆ. ಸಂಪ್ರದಾಯ’ ಅವರ ಉತ್ತರ ಸಿದ್ಧವಾಗಿತ್ತು. ಉಪ್ಪು, ಕೋಸಂಬರಿ, ಬೀನಿಸ್ಸು ಪಲ್ಯ, ಮೊಸರು ಬಜ್ಜಿ ಎಲ್ಲ ಬಡಿಸಿದರು. ಎಲೆ ನೋಡಿದೆ. ಸಂಪ್ರದಾಯವೂ ಅಲ್ಲ, ಮಣ್ಣೂ ಅಲ್ಲ ಎಂದು ಎಲೆ ನೋಡುತ್ತಿದ್ದಂತೆ ತಿಳಿಯಿತು! ಹೆಚ್ಚಾಗಿ ನಾವೆಲ್ಲ ಬಲಗೈ ಉಪಯೋಗಿಸುವವರು. ಎಲೆಯ ಬಲಭಾಗ ತುದಿಯ ಭಾಗಕ್ಕಿಂತ ಅಗಲವಾಗಿರುತ್ತೆ, ತಿನ್ನಲು ಅನುಕೂಲವಾಗಲಿಕ್ಕಾಗಿ ತುದಿ ಎಡಭಾಗಕ್ಕಿರಬೇಕು ಎಂಬುದು ಸರಿಯಾದ ವಿವರಣೆ, ಮತ್ತೇನಿಲ್ಲ. ಬಹಳಷ್ಟು ಆಚರಣೆಗಳ ಹಿಂದೆ ವೈಚಾರಿಕ ಕಾರಣವಿರುತ್ತದೆಯಾದರೂ ಆ ಆಚರಣೆಗಳು ಇವತ್ತಿನ ಮಟ್ಟಿಗೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕಷ್ಟೇ.

ಜನ 19, 2012

ಪಬ್ಲಿಕ್ ಟಿ.ವಿ ಪಬ್ಲಿಕ್ಕಿಗಾಗಿಯೇ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತಾ . . .

ಡಾ. ಅಶೋಕ್. ಕೆ. ಆರ್.
  ಹತ್ತರ ನಂತರ ಹನ್ನೊಂದಾಗುವುದಿಲ್ಲ ಎಂಬ ಭರವಸೆಯೊಂದಿಗೆ ಇದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕನ್ನಡಕ್ಕೆ ಮತ್ತೊಂದು ಸುದ್ದಿವಾಹಿನಿಯ ರಂಗಪ್ರವೇಶವಾಗುತ್ತಿದೆ. ಪಬ್ಲಿಕ್ ಟಿ.ವಿ ಎಂಬ ಹೆಸರಿನಲ್ಲಿ. ಕನ್ನಡಪ್ರಭದಲ್ಲಿ ಕೆಲಸದಲ್ಲಿದ್ದ ನಂತರ ಕೆಲಕಾಲ ಸುವರ್ಣವಾಹಿನಿಯನ್ನು ಮುನ್ನಡೆಸಿದ ರಂಗನಾಥ್ ಪಬ್ಲಿಕ್ ಟಿ.ವಿಯ ಕ್ಯಾಪ್ಟನ್. ಸುವರ್ಣಸುದ್ದಿವಾಹಿನಿಗೆ ಹೋಗುವಾಗ ತಮ್ಮೊಡನೆ ಕನ್ನಡಪ್ರಭದ ವಿಶ್ವಾಸಾರ್ಹ ಪ್ರತಿಭಾವಂತ ಪತ್ರಕರ್ತರನ್ನು ಕರೆದೊಯ್ದ ರಂಗನಾಥ್ ಅದೇ ಪತ್ರಕರ್ತರನ್ನು ಹೊಸ ವಾಹಿನಿಯ ಬೆನ್ನೆಲುಬಾಗಿ ನಿಲ್ಲಿಸಿಕೊಂಡಿದ್ದಾರೆ. ಯಶ ಪಡೆಯುತ್ತಾರಾ? ನಿರ್ಧರಿಸಲು ಹೆಚ್ಚು ಸಮಯ ಕಾಯಬೇಕಿಲ್ಲ.