ನವೆಂ 25, 2011
ಅಕ್ಟೋ 26, 2011
ಕೊನೆಯ ಪುಟಗಳು
ಡಾ. ಅಶೋಕ್. ಕೆ. ಆರ್.
ಅಕ್ಟೋಬರ್ 1 – ಪ್ರತಿಯೊಬ್ಬನಿಗೂ ವರ್ಷದ ಯಾವುದಾದರೊಂದು
ದಿನ ಪ್ರಮುಖವಾಗಿರುತ್ತೆ. ಹೈಸ್ಕೂಲಿನಲ್ಲಿ ಪುಂಡಾಟಗಳು; ಮುಂಜಾನೆ ಟ್ಯೂಷನ್ನೂ, ಬೆಳಿಗ್ಗೆ ಕಾಲೇಜು,
ಸಂಜೆ ಮತ್ತೊಂದೆರಡು ಟ್ಯೂಷನ್ನೂ, ರಾತ್ರಿ ಒಂದಷ್ಟು ಓದು – ಪಿ ಯು ಸಿಯಲ್ಲಿ ಬೇರೇನನ್ನೂ ಯೋಚಿಸಲು
ಸಮಯವಿರಲಿಲ್ಲ. ಓದಿದ್ದು ವ್ಯರ್ಥವಾಗದೆ ಮೆಡಿಕಲ್ ಸೀಟು ಸಿಕ್ಕಿ ಇವತ್ತಿಗಾಗಲೇ ಹತ್ತು ವರ್ಷವಾಯಿತು.
ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದ ಚೇತನ್ ನ ಪರಿಚಯವಾದ ದಿನವಿದು. ನನ್ನ ಜೀವನದ ಪ್ರಮುಖ ದಿನ.
ಕೆಲವು ವರ್ಷಗಳ ಹಿಂದಿನವರೆಗೂ ನನ್ನಲ್ಲಿ ಉತ್ಸಾಹ ಮೂಡಿಸುತ್ತಿದ್ದ ದಿನ. ಆದರೀಗ? ಆತ್ಮಸಾಕ್ಷಿಯ ಇರಿತಕ್ಕೆ
ಜರ್ಝರಿತನಾಗಿದ್ದೇನೆ.
ಅಕ್ಟೋ 15, 2011
ಅಂತ್ಯ ಕಾಣದ ತೆಲಂಗಾಣ ಚಳುವಳಿ
![]() |
telangana;source - wikipedia |
ಮತ್ತೆ ತೆಲಂಗಾಣ ಸುದ್ದಿಯಲ್ಲಿದೆ. ಎಲ್ಲ ಸಂಚಾರ ಮಾರ್ಗಗಳನ್ನು
ಮುಚ್ಚಿಸಲಾರಂಭಿಸಿದ್ದಾರೆ ತೆಲಂಗಾಣ ರಾಜ್ಯ ಪರ ಹೋರಾಟಗಾರರು. ಕನ್ನಡ ಪತ್ರಿಕೆಗಳಲ್ಲಿ ಈ ಹೋರಾಟದಿಂದ
ಕರ್ನಾಟಕ್ಕೆ ವಿದ್ಯುತ್ ಉತ್ಪಾದಿಸಲು ಸರಬರಾಜಾಗುವ ಕಲ್ಲಿದ್ದಲ್ಲಿನ ಬಗೆಗಿನ ಚಿಂತೆಯೇ ಅಧಿಕವಾಗಿ
ಪ್ರಕಟವಾಗುತ್ತಿದೆ. ದಶಕಗಳ ಹೋರಾಟದ ಇತಿಹಾಸದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲುತ್ತಿರುವವರೇ
ಕಡಿಮೆ. ತೆಲಂಗಾಣ ಹೋರಾಟದ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಸಂಕ್ಷಿಪ್ತ ಕನ್ನಡಾನುವಾದ
ಹಿಂಗ್ಯಾಕೆ?!ಯಲ್ಲಿ.
ಅಕ್ಟೋ 11, 2011
ಅನ್ನದ ಉತ್ಪಾದಕರಿಗೆ ಮೂರು ಫೇಸು ಮೂರೇ ತಾಸು
- ಡಾ.ಅಶೋಕ್. ಕೆ. ಆರ್
ಅನಧಿಕೃತವಾಗಿ
ಹೋಗುತ್ತಿದ್ದ ವಿದ್ಯುತ್ತಿಗೆ ಈಗ ಅಧಿಕೃತೆಯ ಮುದ್ರೆ ಬಿದ್ದಿದೆ; ಅಷ್ಟೇ ವ್ಯತ್ಯಾಸ! ಆಳುವ ವರ್ಗದ
ಹಿತಾಸಕ್ತಿಗಳೇನು ಎಂಬುದನ್ನು ಅರಿಯಲು ಸರಕಾರದ ಈ ಅಧಿಕೃತ ಲೋಡ್ ಶೆಡ್ಡಿಂಗ್ ವಿವರವನ್ನು ಪರಿಶೀಲಿಸಬೇಕು.
ಬೆಂಗಳೂರು ನಗರದಲ್ಲಿ ಲೋಡ್ ಶೆಡ್ಡಿಂಗಿಲ್ಲ, ಇತರೆ ನಗರಗಳಲ್ಲಿ ಒಂದು ತಾಸಿನ ಶೆಡ್ಡಿಂಗ್. ಹಳ್ಳಿಗಳಿಗೆ
ಮೂರು ತಾಸು ಮಾತ್ರ ಮೂರು ಫೇಸಿನ ವಿದ್ಯುತ್. ಸಂಜೆ ಆರರಿಂದ ಮಾರನೇ ಬೆಳಿಗ್ಗೆ ಆರರವರೆಗೆ ಬಲ್ಬುಗಳು
ಹತ್ತುವುದಕ್ಕೇ ಏದುಸಿರುಬಿಡುವ ಒಂದು ಫೇಸಿನ ವಿದ್ಯುತ್. ಆರು ತಾಸು ಕೊಡಲಾಗುತ್ತಿದ್ದ ಮೂರು ಫೇಸಿನ
ವಿದ್ಯುತ್ತನ್ನು ಈಗ ಮೂರು ತಾಸಿಗೆ ಇಳಿಸಲಾಗಿದೆ. ಕಾರಣ?- ಬೆಂಗಳೂರು ಮತ್ತಿತರ ನಗರಗಳಿಗೆ ಅಭಾದಿತ
ವಿದ್ಯುತ್ ಪೂರೈಕೆ ಮಾಡಬೇಕಿರುವುದು.
ಅಕ್ಟೋ 3, 2011
ಸೆಪ್ಟೆಂ 27, 2011
ಪೀಠದ ಬಾಗಿಲಲ್ಲಿ ಅಜ್ಞಾನದ ಪ್ರಭೆ!
- ಡಾ ಅಶೋಕ್. ಕೆ. ಆರ್.

ಸೆಪ್ಟೆಂ 22, 2011
ಸೆಪ್ಟೆಂ 15, 2011
ಚಿಂತನೆಗೆ ತಡೆಯೊಡ್ಡುವ ಆಧುನಿಕತೆ?
ಡಾ ಅಶೋಕ್. ಕೆ. ಆರ್.
ಡಿಗ್ರಿ ಸರ್ಟಿಫಿಕೇಟ್ ಪಡೆದುಕೊಳ್ಳುವ ಸಲುವಾಗಿ ಗೆಳೆಯ ಮಂಜನ ಜೊತೆ ಯುನಿವರ್ಸಿಟಿಗೆ ಹೋಗಿ ಅರ್ಜಿ ಕೊಟ್ಟೆ. ಮಧ್ಯಾಹ್ನದ ನಂತರ ಬರಲು ತಿಳಿಸಿದರು. ಅಲ್ಲಿಯವರೆಗೆ ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಮಂಜು ‘ಫೋರಮ್’ ಮಾಲಿಗೆ ಹೋಗೋಣವಾ? ಎಂದ. ಬೆಂಗಳೂರಿಗರ ಬಾಯಲ್ಲಿ ಪದೇ ಪದೇ ಕೇಳಿಬರುತ್ತಿದ್ದ ಫೋರಮ್ ನಲ್ಲಿ ಏನಿದೆ ಎಂಬ ಕುತೂಹಲ ನನ್ನಲ್ಲೂ ಇತ್ತು. ನಡಿಯಪ್ಪ ಹೋಗೋಣ ಎಂದೆ. ‘ಓಹೋ! ಇದೇನಾ ನಮ್ಮ ದೇಶದ ಯುವಜನತೆ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿರುವ ಜಾಗ’ - ಫೋರಮ್ಮಿಗೆ ಕಾಲಿಡುತ್ತಿದ್ದಂತೆಯೇ ಬಂದ ಯೋಚನೆಯಿದು. ‘ಲೇ ಇಲ್ಲಿ ನಾವೇನು ಮಾಡೋದೋ ಮಾರಾಯಾ? ಏನನ್ನೂ ತೆಗೆದುಕೊಳ್ಳೋ ಅವಶ್ಯಕತೆಯೂ ಇಲ್ಲ; ಜೇಬಿನಲ್ಲಿ ಹೆಚ್ಚು ದುಡ್ಡೂ ಇಲ್ಲ. ನಡಿ ವಾಪಸ್ಸಾಗೋಣ’ ಎಂದೆ. ‘ಲ್ಯಾಂಡ್ ಸ್ಟೋನ್ ಪುಸ್ತಕದಂಗಡಿ ಇದೆ’ ಎಂದ. ‘ನಮಗೆ ಇಷ್ಟವಾಗೋ ಜಾಗ ಇದೊಂದೇ ಇರಬೇಕು ಇಲ್ಲಿ’ ಎಂದುಕೊಳ್ಳುತ್ತಾ ಆ ಅಂಗಡಿಗೆ ಹೊಕ್ಕು ಘಂಟೆಯ ಮೇಲೆ ಪುಸ್ತಕಗಳನ್ನು ಜಾಲಾಡಿದೆವು. ಹಣದ ಅಭಾವವಿದ್ದ ಕಾರಣ ಇಬ್ಬರಿಗೂ ಒಂದೊಂದು ಪುಸ್ತಕ ಖರೀದಿಸಲಷ್ಟೇ ಶಕ್ಯವಾಯಿತು. ನಂತರ ಏನನ್ನೋ ವಿಚಾರಿಸಲು ಮೊಬೈಲ್ ಅಂಗಡಿಗೆ ಹೋದೆವು. ಆ ಅಂಗಡಿಯಲ್ಲಿ ಹಿನ್ನೆಲೆಯಲ್ಲಿ ಸಂಗೀತವಿತ್ತು. ಅಂದು ಆರಂಭವಾದ ಈ ಕೆಳಗಿನ ಯೋಚನೆ ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ ಒಂದು ವರದಿಯಿಂದಾಗಿ ಮೂರ್ತ ರೂಪ ಪಡೆದುಕೊಳ್ಳಲಾರಂಭಿಸಿದೆ.
ಸೆಪ್ಟೆಂ 10, 2011
ಅಮ್ಮಂದಿರ ಮರೆತ ‘ರಾಮ’ಭಕ್ತರ ನಾಡಿನಲ್ಲಿ. . .
ಸೆಪ್ಟೆಂಬರ್ 3, 2006: - ಕರ್ನಾಟಕ – ಆಂಧ್ರಪ್ರದೇಶ ಗಡಿಯಲ್ಲಿನ ಬಳ್ಳಾರಿಯ ಹಳ್ಳಿಯೊಂದರಲ್ಲಿದ್ದ 200 ವರ್ಷಗಳಷ್ಟು ಹಳೆಯದಾದ ಸುಗ್ಗಾಲಮ್ಮ ದೇವಾಲಯವನ್ನು ರೆಡ್ಡಿ ಬೆಂಬಲಿತ ವ್ಯಕ್ತಿಗಳು ದ್ವಂಸ ಮಾಡಿದರು, ಹಳ್ಳಿಯವರ ವಿರೋಧದ ನಡುವೆ. ಕಾರಣ? ಅಮ್ಮನ ಪಾದದಡಿಯಲ್ಲಿ ಕಬ್ಬಿಣದ ಅದಿರಿತ್ತು! ಪೂಜಾರಿಗಳನ್ನು ಕರೆಯಿಸಿ ಹೋಮ – ಹವನ – ಶಾಂತಿ ವಗೈರೆ ವಗೈರೆ ಮಾಡಿಸಿ ದೇವಾಲಯವನ್ನು ಕೆಡವಿದ್ದರಾದರೂ ಊರ ಜನರ ಕೋಪ ಶಮನವಾಗಿರಲಿಲ್ಲ. ಪೋಲೀಸ್ ಕೇಸ್ ಮಾಡಿದರು. ಅದೂ ಕೂಡ ಈಗ ರೆಡ್ಡಿಯ ವಿರುದ್ಧವಿದೆ.