ಆಗ 12, 2018

ದಳದ ಅದ್ಯಕ್ಷರಾಗಿ ಹೆಚ್.ವಿಶ್ವನಾಥ್: ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುತ್ತಿರುವ ಶ್ರೀ ಹೆಚ್.ಡಿ.ದೇವೇಗೌಡರು

ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಮಾಜಿ ಸಚಿವರಾದ ಶ್ರೀ ಹೆಚ್. ವಿಶ್ವನಾಥ್ ಅವರನ್ನು ಜಾತ್ಯಾತೀತ ಜನತಾದಳದ ರಾಜ್ಯಾದ್ಯಕ್ಷರನ್ನಾಗಿ ಮಾಡುವ ಮೂಲಕ ಶ್ರೀ ದೇವೇಗೌಡರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಚಾಣಾಕ್ಷ್ಯ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ಆದರೆ ಅದು ಅವರದೇ ಪಕ್ಷದ ಮೈತ್ರಿ ಸರಕಾರದ ಮೇಲೆ ಬೀರಬಹುದಾದ ಪ್ರಭಾವಗಳೇನು ಎಂಬುದನ್ನು ನಾವು ಅವಲೋಕಿಸಬೇಕಾಗಿದೆ

ಇದೀಗ ಕರ್ನಾಟಕ ರಾಜ್ಯದ ಜಾತ್ಯಾತೀತ ಜನತಾದಳದ ರಾಜ್ಯಾದ್ಯಕ್ಷರನ್ನಾಗಿ ಶ್ರೀ ಹೆಚ್. ವಿಶ್ವನಾಥವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಆಂತರೀಕ ವಲಯದಲ್ಲಿ ಇದರ ಬಗ್ಗೆ ಯಾವುದೇ ಭಿನ್ನಮತದ ಮಾತುಗಳು ಕೇಳಿಬರುತ್ತಿಲ್ಲವಾದರೂ ಮೈತ್ರಿ ಸರಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ಸಿನಲ್ಲಿ ಮಾತ್ರ ಈ ನೇಮಕದ ಹಿಂದಿನ ತಂತ್ರಗಾರಿಕೆಯ ಬಗ್ಗೆ ಪಿಸುಮಾತಿನ ಅಸಮಾದಾನಗಳು ಕೇಳಿ ಬರುತ್ತಿವೆ. ಅದರಲ್ಲೂ ಕಾಂಗ್ರೇಸ್ ಒಳಗಿನ ಸಿದ್ದರಾಮಯ್ಯನವರ ಗುಂಪಿಗೆ ಈ ನೇಮಕ ಇರುಸುಮುರುಸು ಉಂಟು ಮಾಡಿರುವುದಂತು ಸುಳ್ಳೇನಲ್ಲ.

ರಾಜಕೀಯದಲ್ಲಿ ಬಹಳಷ್ಟು ವಿದ್ಯಾಮಾನಗಳು ಸಾಮಾನ್ಯ ಜನರ ಊಹೆಗೂ ನಿಲುಕದ ರೀತಿಯಲ್ಲಿ ನಡೆದು ಹೋಗುವುದು ಸಾಮಾನ್ಯ. ಅದರಲ್ಲೂ ಇಂಡಿಯಾದ ಬಹುಪಕ್ಷೀಯ ರಾಜಕಾರಣದ ಚದುರಂಗದಾಟದಲ್ಲಿ ಮಿತ್ರರು ಶತ್ರುಗಳಾಗುವುದು, ಶತ್ರುಗಳು ಮಿತ್ರರಾಗುವುದು ತೀರಾ ಸಹಜವಾದ ಕ್ರಿಯೆಗಳು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಅವರ ಒಂದು ಕಾಲದ ಗೆಳೆಯ ಶ್ರೀ ಹೆಚ್. ವಿಶ್ವನಾಥ್ ಅವರು. 

ಆಗ 11, 2018

ನಮ್ಮನ್ನಗಲಿದ ಸುಮತೀಂದ್ರ ನಾಡಿಗರ ನೆನಪಿನಲ್ಲಿ….

sumateendra nadig
ಸುಮತೀಂದ್ರ ನಾಡಿಗ್
ಕು.ಸ.ಮಧುಸೂದನ ರಂಗೇನಹಳ್ಳಿ 
ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ ಮನಸಿಗೆ ಪಿಚ್ಚೆನ್ನಿಸಿ ಬಿಟ್ಟಿತ್ತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನ ಬಹುದು. 

ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು ಕೆಲಕಾಲ ನನ್ನ ಹಿತೈಷಿಯಾಗಿ, ನಾನು ತೀವ್ರವಾದ ಅನಾರೋಗ್ಯ ಪೀಡಿತನಾಗಿದ್ದ ಸಮಯದಲ್ಲಿ ಬದುಕುವ ಧೈರ್ಯ ತುಂಬಿದಂತವರು. 

2000ನವೆಂಬರಿನಲ್ಲಿ ನನ್ನ ದೇಹದ ಎಡಭಾಗಕ್ಕೆ ಆದ ಪಾರ್ಶ್ವವಾಯುವಿನಿಂದ ಸತತ ಎರಡು ವರ್ಷ ಆಸ್ಪತ್ರೆಯಲ್ಲಿ ಅಕ್ಷರಶ: ಜೀವ ಶವದಂತೆ ಮಲಗಿದ್ದೆ. ನಂತರ ನಿದಾನವಾಗಿ ಎದ್ದು ಓಡಾಡುವಂತಾದಾಗ ಎಂದೂ ಸುಮ್ಮನೆ ಕೂರದ ನಾನು ಕವಿತೆಗಳಿಗೆ ಮಾತ್ರ ಮೀಸಲಾಗಿದ್ದ ಕಾವ್ಯ ಖಜಾನೆ( ಕಾವ್ಯ ಕನ್ನಡಿ) ಎನ್ನುವ ಖಾಸಗಿ ಪತ್ರಿಕೆಯೊಂದನ್ನು ಶುರು ಮಾಡಿದ್ದೆ.

ಸ್ತ್ರೀ ಸುತ್ತ ಪುರುಷನೆಂಬ ವಿಷವರ್ತುಲ!


ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ

ಪುರುಷ ಕೇಂದ್ರಿತ ವ್ಯವಸ್ಠೆಯಲಿ
ಬದುಕ ನದಿ ಈಜುತ್ತೆನೆಂದರೆ 
ಎಲ್ಲಿ ನೋಡಿದರು ಅಲ್ಲಿ ಪುರುಷ ಮೊಸಳೆಗಳು 
ತಪ್ಪಿಸಿಕೊಂಡರೆ ಬಾ ಯಿ ತೆರೆದು 
ಪತಾಳ ಸೇರಿಸುವ ಸುಳಿ ..!

ಹರಸಾಹಸ ಮಾಡಿ ದಂಡೆಗೆ ಬಂದರೆ 
ಹೆಜ್ಜೆ ಹೆಜ್ಜೆಗೂ ಬುಸುಗುಡುವ 
ಕಾಮುಕ ಕಾಳಿಂಗಗಳು 
ಮುಂಗುಸಿಯಾದರೂ ಷಡ್ಯಂತ್ರದಲಿ 
ಮುಗಿಸಿ ಬಿಡುವ ಹುನ್ನಾರ 
ತಲುಪಬೇಕಾದ ಗುರಿ ದೂರ ಬಹುದೂರ ..!

ಆಗ 5, 2018

ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ.

ಚಿತ್ರ ೧: ಕಾವೇರಿ ತೀರದ ಕಳ್ಳಿಪೀರಗಳು.
ಡಾ. ಅಶೋಕ್. ಕೆ. ಆರ್.
ಶ್ರೀರಂಗಪಟ್ಟಣದ ನಗುವನಹಳ್ಳಿ - ಚಂದಗಾಲು ಗ್ರಾಮದಲ್ಲಿನ ಕಾವೇರಿ ನದಿ ತೀರದಲ್ಲಿ ಅತಿ ಹೆಚ್ಚು ಚಿತ್ರ ತೆಗೆಸಿಕೊಂಡಿರುವ ಖ್ಯಾತಿ ನೀಲಿಬಾಲದ ಕಳ್ಳಿಪೀರಗಳದ್ದು. 

ಆಂಗ್ಲ ಹೆಸರು: Blue tailed bee eater (ಬ್ಲೂ ಟೈಲ್ಡ್ ಬೀಈಟರ್) 

ವೈಜ್ಞಾನಿಕ ಹೆಸರು: Merops Philippinus (ಮೆರೋಪ್ಸ್ ಫಿಲಿಪ್ಪಿನಸ್) 

ಥಳ ಥಳ ಹೊಳೆಯುವ ಬಣ್ಣಗಳನ್ನೊಂದಿರುವ ಪಕ್ಷಿಗಳಿವು. ಹಸಿರು - ಹಳದಿ - ಕಿತ್ತಳೆ ಕಂದು ಬಣ್ಣಗಳನ್ನೊಂದಿವೆಯಾದರೂ ಹಸಿರು ಬಣ್ಣವೇ ಹೆಚ್ಚಿದೆ. ಕೆಂಪು ಕಣ್ಣಿನ ಸುತ್ತ ಕಪ್ಪು ಪಟ್ಟಿಯಿದೆ. ಕಣ್ಣಿನ ಮೇಲ್ಭಾಗದಲ್ಲಿ ಗಿಣಿ ಹಸಿರು ಬಣ್ಣದ ಸಣ್ಣ ಪಟ್ಟಿಯಿದೆ. ನೆತ್ತಿ ಹಸಿರು - ಕಂದು ಮಿಶ್ರಿತ ಬಣ್ಣದ್ದು. ಕಣ್ಣಿನ ಕೆಳಗೆ ಬಿಳಿ ಪಟ್ಟಿ, ಅದರ ಕೆಳಗೆ ಕೇಸರಿ ಕಂದು ಮಿಶ್ರಿತ ಬಣ್ಣದ ಪಟ್ಟಿ. ಬಿಳಿ ಮತ್ತು ಕೇಸರಿ ಕಂದು ಪಟ್ಟಿ ಪಕ್ಷಿಯ ಕತ್ತಿಗೂ ಹರಡಿಕೊಂಡಿವೆ. ದೇಹದ ಇತರೆ ಭಾಗಗಳಲ್ಲಿ ಹಳದಿ ಹಸಿರು ಬಣ್ಣದ ವಿವಿಧ ವರ್ಣಗಳಿವೆ. ಬಾಲದ ಭಾಗದಲ್ಲಿ ನೀಲಿ ಬಣ್ಣವಿರುವ ಕಾರಣ ಇವಕ್ಕೆ ನೀಲಿಬಾಲದ ಕಳ್ಳಿಪೀರಗಳೆಂದು ಹೆಸರು. ಕಿಬ್ಬೊಟ್ಟೆಯ ಭಾಗವೂ ನೀಲಿ ಬಣ್ಣವನ್ನೊಂದಿದೆ. ನೀಲಿ ಬಾಲಕ್ಕೆ ಬೂದು ಬಣ್ಣದ ಪುಕ್ಕಗಳಂಟಿಕೊಂಡಿವೆ. ಬಾಲದ ತುದಿಗೆ ಕಿರುಬಾಲಗಳಂತೆ ಎರಡು ಪುಟ್ಟ ರೆಕ್ಕೆಗಳಂಟಿಕೊಂಡಿವೆ. ಹಾರುವಾಗ ನಡುವಿನಲ್ಲೊಂದು ಅತ್ಲಾಗಿತ್ಲಾಗೊಂದೊಂದು ಬಾಲದ ರೆಕ್ಕೆಗಳನ್ನು ಗಮನಿಸಬಹುದು. ಕೊಕ್ಕು ಮತ್ತು ಕಾಲುಗಳು ಕಪ್ಪು ಬಣ್ಣದ್ದಾಗಿವೆ. 
ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ. 

ಆಗ 3, 2018

ಯಾಕೆ ಅಲೆವೇ ನೀ ಮನವೇ ?

ಪ್ರವೀಣಕುಮಾರ್ .ಗೋಣಿ
ಪ್ರೀತಿಯೊಂದೇ ಅವನ 
ತಲುಪಲು ಇರುವ 
ಹಾದಿಯಾಗಿರುವಾಗ ಯಾಕೇ
ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .

ನಿನ್ನೊಳಗೆ ಅವನೇ ಬಿತ್ತಿದ 
ಪ್ರೀತಿಯ ಬೀಜ ಇರುವಾಗ 
ಅದಕ್ಕೆ ನೀರೆರೆದು ಮರವಾಗಿ ಬೆಳೆಸೋ 
ಯಾಕೇ ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .

ಆಗ 2, 2018

ವಿದಾಯ

ಪದ್ಮಜಾ ಜೋಯಿಸ್ 
ಅಂತಿಮವಾಗಿ ವಿದಾಯವೇ
ಬಯಸುವೆಯಾದರೇ..,.
ಇದೋ ನೀಡುತಿರುವೆ
ನಿಬಂಧನೆಗಳೊಂದಿಗೆ.,,

ಮತ್ತೆಂದೂ ನೆನೆಯದಿರು ನನ್ನ 
ನೆನೆದ ಕ್ಷಣದಲಿ ನಿನ್ನ
ಕಣ್ರೆಪ್ಪೆಗಳಲಿ ಮೂಡುವ
ನನ್ನ ಪ್ರತಿಬಿಂಬದ ಕಣ್ಣಂಚಿನ 
ಹನಿ ಕರಗಿಸಬಹುದು
ನಿನ್ನ ಕಲ್ಲು ಹೃದಯವನ್ನು ....

ಮತ್ತೇರಿಸುವ ಈ ರಾತ್ರಿ ..

ಕೆ.ಜಿ .ಸರೋಜಾ ನಾಗರಾಜ್ ಪಾಂಡೊಮಟ್ಟಿ
ಮತ್ತೇರಿಸುವ ನಿನ್ನ ಮಾತಿನಲ್ಲಿ 
ಇಂದೇಕೆ ಈ ಗಮಲು ಅಮಲಿನಲ್ಲಿ ..

ಕಾಡುವುದಿದ್ದರೆ ಈ ರಾತ್ರಿ ಕಾಡಿಬಿಡು
ಸಮಯ ಕ್ಷಣ ಕ್ಷಣಕ್ಕೂ ಕಮ್ಮಿಯಾಗುತ್ತಿದೆ ..

ಸಂಬಂಧದ ಕೊಂಡಿ ಕಳಚುತ್ತಾ ಇದೆ ಎಂದಾಗ ನನ್ನಲ್ಲಿ 
ಸ್ಪಷ್ಟವಾಗಿ ಕಂಡಿದ್ದು ನಿನ್ನ ಹೃದಯ ಸಾರಾಯಿಯಲ್ಲಿ .

ಆಗ 1, 2018

ಯಾರಿವನು?

ಪದ್ಮಜಾ ಜೋಯಿಸ್ 
ಹೋದಲ್ಲಿ ಬಂದಲ್ಲಿ ,
ಕುಳಿತಲ್ಲಿ ನಿಂತಲ್ಲಿ.
ಪರಿಚಿತರು ಕಾಡುತ್ತಾರೆ
ಸಖಿಯರು ದುಂಬಾಲು ಬೀಳುವರು, 
ನಿನ್ನ ಕನಸು ಮನಸುಗಳಲ್ಲಿ,
ಕಾವ್ಯ ಕಥನಗಳಲ್ಲಿ,
ಬದುಕು ಸಾವುಗಳಲಿ
ಝರಿಯಾಗಿ ಹರಿದವ
ಜೀವವಾಗಿ ಮಿಡಿದವ 
ಪ್ರೇಮಿಯಾಗಿ ಕಾಡಿದವ
ವಿರಹವನೇ ಉಣಿಸಿದವ
ಯಾರವ ಹೇಳೇ ಯಾರವ ??

ಜುಲೈ 29, 2018

ಪಕ್ಷಿ ಪ್ರಪಂಚ: ಕೆಂಪು ಕಿಬ್ಬೊಟ್ಟೆಯ ಪಿಕಳಾರ.

ಚಿತ್ರ ೧: ಕೆಂಪು ಕಿಬ್ಬೊಟ್ಟೆಯ ಪಿಕಳಾರ
ಡಾ. ಅಶೋಕ್. ಕೆ. ಆರ್
ಪಿಕಳಾರಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದು ಕೆಮ್ಮೀಸೆ ಪಿಕಳಾರವಾದರೆ ಅದರ ನಂತರದಲ್ಲಿ ಹೆಚ್ಚು ಕಣ್ಣಿಗೆ ಬೀಳುವುದು ಕೆಂಪು ಕಿಬ್ಬೊಟ್ಟೆಯ ಪಿಕಳಾರ. 


ಆಂಗ್ಲ ಹೆಸರು: Red vented bulbul (ರೆಡ್ ವೆಂಟೆಡ್ ಬುಲ್ ಬುಲ್)

ವೈಜ್ಞಾನಿಕ ಹೆಸರು: Pycnonotus cafer (ಪಿಕ್ನೋನಾಟಸ್ ಕ್ಯಾಫರ್) 


ಕಪ್ಪು ತಲೆ, ಕಪ್ಪು ಕೊಕ್ಕು ಹೊಂದಿರುವ ಈ ಪಕ್ಷಿಗಳ ದೇಹದ ಭಾಗದಲ್ಲಿ ಕಂದು ಬಣ್ಣವೇ ಪ್ರಮುಖವಾದುದು. ಬೆನ್ನಿನ ಭಾಗದಲ್ಲಿ ಗಾಢ ಕಂದು - ಕಪ್ಪು - ಬಿಳಿ ಬಣ್ಣಗಳ ಸಂಯೋಜನೆಯಿದೆ. ಎದೆ ಭಾಗದಲ್ಲಿ ತಿಳಿ ಕಂದು, ಬಿಳಿ ಬಣ್ಣಗಳಿವೆ. ಎದೆಯ ಮೇಲ್ಭಾಗ ಮತ್ತು ಇಡೀ ಬೆನ್ನಿನ ಮೇಲಿರುವ ಬಣ್ಣಗಳು ಮೀನಿನ ಹೊರಭಾಗದಂತೆ ಕಾಣಿಸುತ್ತದೆ. ಕಿಬ್ಬೊಟ್ಟೆಯ ಜಾಗದಲ್ಲಿರುವ ಕೆಂಪು ಬಣ್ಣದ ಸಹಾಯದಿಂದ ಈ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ಬಾಲದ ಬಣ್ಣು ಕಂದುಗಪ್ಪು. ತುದಿಯಲ್ಲಿ ಚೂರೇ ಚೂರು ಬಿಳಿ ಬಣ್ಣವಿದೆ. ಪುಟ್ಟ ಕಪ್ಪು ಕಾಲುಗಳಿವೆ.
ಹೆಣ್ಣು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.

ಜುಲೈ 26, 2018

ಶಿಷ್ಟಾಚಾರದ ರಾಜಕಾರಣವನ್ನು ಮೀರಿದ ಒಂದು ಅಪ್ಪುಗೆ!

ಕು.ಸ.ಮಧುಸೂದನರಂಗೇನಹಳ್ಳಿ
ಬಹುಶ: ಅದೊಂದು ಸಣ್ಣ ತಪ್ಪನ್ನು ರಾಹುಲರು ಮಾಡದೇ ಹೋಗಿದ್ದರೆ ಮೊನ್ನೆಯ ವಿಸ್ವಾಸ ಮತ ಯಾಚನೆಯ ದಿನದಂದು ರಾಹುಲ್ ಗಾಂದಿಯವರು ನಡೆದುಕೊಂಡ ರೀತಿ ಮತ್ತು ಮಾಡಿದ ಬಾಷಣ ಬಹುಕಾಲ ಇಂಡಿಯಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಿತ್ತು.

ವಿಶ್ವಾಸಮತದ ಪರವಾಗಿ ಸುದೀರ್ಘವಾಗಿ ವಸ್ತುನಿಷ್ಠವಾಗಿ(ಬಹುಶ: ಪ್ರಾನ್ಸ್ ಸರಕಾರದ ಹೇಳಿಕೆಯ ಉಲ್ಲೇಖವೊಂದನ್ನು ಹೊರತು ಪಡಿಸಿ) ಯಾವ ಹಿಂಜರಿಕೆಯೂ ಇರದಂತೆ ಮಾತಾಡಿದ ರಾಹುಲರ ಸರಕಾರದ ವಿರುದ್ದದ ಟೀಕೆಗಳಿಗೆ ಅಷ್ಟೇ ವಸ್ತುನಿಷ್ಠವಾಗಿ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಅದರೆ ತಮ್ಮ ಮಾತು ಮುಗಿಸಿದಾಕ್ಷಣ ಅವರು ನೇರವಾಗಿ ಪ್ರದಾನ ಮಂತ್ರಿಗಳ ಆಸನದ ಬಳಿ ಹೋಗಿ ಪ್ರದಾನಿಯವರನ್ನು ಅಪ್ಪಿಕೊಂಡಿದ್ದು ಸದನವನ್ನಿರಲಿ ಸ್ವತ: ಪ್ರದಾನಿಯವರಿಗೆ ವಿಸ್ಮಯವನ್ನುಂಟು ಮಾಡಿದ್ದು ನಿಜ. ಅಲ್ಲಿಯವರೆಗು ಎಲ್ಲವೂ ಚೆನ್ನಾಗಿಯೇ ಇತ್ತು. ಅದರೆ ಪ್ರದಾನಿಯವರ ಅಪ್ಪುಗೆಯ ನಂತರ ತಮ್ಮ ಸ್ಥಾನಕ್ಕೆ ಮರಳಿದ ರಾಹುಲ್ ಕ್ಯಾಮೆರಾಗಳಿವೆಯೆಂಬುದನ್ನು ಮರೆತವರಂತೆ ತಮ್ಮ ಗೆಳೆಯ ಸಹ ಸಂಸದನತ್ತ ತಿರುಗಿ ಎಡಗಣ್ಣು ಮಿಟುಕಿಸಿದ್ದು ಅಲ್ಲಿಯವರೆಗಿನ ರಾಹುಲರ ವರ್ತನೆಯ ಗಾಂಭೀರ್ಯತೆಯನ್ನು ಮರೆಸಿಬಿಟ್ಟಿತು. ಅವರು ಸಹಜವಾಗಿಯೇ ಕಣ್ಣು ಮಿಟುಕಿಸಿದ್ದರೂ ನೇರ ಪ್ರಸಾರ ನೋಡುತ್ತಿದ್ದ ಜನರಿಗೆ ರಾಹುಲ್ ಪ್ರದಾನಿಯವರನ್ನು ತಬ್ಬಿಕೊಂಡಿದ್ದೇ ಒಂದು ನಾಟಕವೇನೊ ಎನ್ನುವಂತಹ ತಪ್ಪು ಸಂದೇಶ ನೀಡಿಬಿಟ್ಟಿತು. ಮೊದಲೇ ರಾಹುಲರನ್ನು ಸಮಯ ಬಂದಾಗಲೆಲ್ಲ ನೆಗೆಟಿವ್ ಶೇಡ್ ನಲ್ಲಿಯೇ ತೋರಿಸುವ ಪಟ್ಟಭದ್ರ ವಿದ್ಯುನ್ಮಾನ ಮಾಧ್ಯಮಗಳು ಸಹ ಅದನ್ನೆ ಹೈಲೈಟ್ ಮಾಡುತ್ತ ರಾಹುಲರ ಗಂಬೀರವಾದ ಬಾಷಣ ಮತ್ತು ಅಪ್ಪುಗೆಯ ಹಿಂದಿದ್ದ ಮಹತ್ವವನ್ನು ಮತ್ತು ನೈಜತೆಯನ್ನು ಮರೆಮಾಚಿ ಬಿಟ್ಟವು.