ಆಗ 2, 2018

ಮತ್ತೇರಿಸುವ ಈ ರಾತ್ರಿ ..

ಕೆ.ಜಿ .ಸರೋಜಾ ನಾಗರಾಜ್ ಪಾಂಡೊಮಟ್ಟಿ
ಮತ್ತೇರಿಸುವ ನಿನ್ನ ಮಾತಿನಲ್ಲಿ 
ಇಂದೇಕೆ ಈ ಗಮಲು ಅಮಲಿನಲ್ಲಿ ..

ಕಾಡುವುದಿದ್ದರೆ ಈ ರಾತ್ರಿ ಕಾಡಿಬಿಡು
ಸಮಯ ಕ್ಷಣ ಕ್ಷಣಕ್ಕೂ ಕಮ್ಮಿಯಾಗುತ್ತಿದೆ ..

ಸಂಬಂಧದ ಕೊಂಡಿ ಕಳಚುತ್ತಾ ಇದೆ ಎಂದಾಗ ನನ್ನಲ್ಲಿ 
ಸ್ಪಷ್ಟವಾಗಿ ಕಂಡಿದ್ದು ನಿನ್ನ ಹೃದಯ ಸಾರಾಯಿಯಲ್ಲಿ .

ನಶೆ ದುರ್ಬಲತೆ ಎನ್ನುವುದಾದರೇ 
ಪ್ರೀತಿ ಗುಲಾಮಗಿರಿಗೇ ದಾರಿ ಎನ್ನುವುದೇ ತತ್ವವಾದರೇ ..

ಪ್ರೀತಿ ತುಂಬಿಕೊಂಡ ನಿಶೆ ನಿನಗಾಗಿ 
ಕಾಯುತ್ತಿದೆ ಕಣ್ಣಲ್ಲಿ ಅರಳಿದ ಕನಸ ಗಮ್ಮತ್ತಿಗಾಗಿ ..

ಮುಂಗೋಪದ ಮಾಲಿಷ್ ಕೊಡಬೇಡ 
ಈ ರಾತ್ರಿಯನ್ನು ನನ್ನ ಹೆಸರಿಗೆ ನೀ ಬರೆಯಬೇಡ !

5 ಕಾಮೆಂಟ್‌ಗಳು: