ಕು.ಸ.ಮಧುಸೂದನ
ಸುದ್ದಿವಾಹಿನಿಯೊಂದರಲ್ಲಿ ಉಪಚುನಾವಣೆಯ ಪಲಿತಾಂಶ ನೋಡುತ್ತಿದ್ದಾಗ ಪ್ರಸಾರವಾದ ಜಾಹೀರಾತೊಂದು ನನ್ನ ಗಮನ ಸೆಳೆಯಿತು. ಅದು ಬೆಂಗಳೂರಿನ ಹಲವು ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ನಡೆಸುತ್ತಿರುವ ಬೃಹತ್ ಎಜುಕೇಶನ್ ಎಕ್ಸಪೊ ಕುರಿತದ್ದು. ಅದೇ ಸಮಯಕ್ಕೆ ಸರಿಯಾಗಿ ನನ್ನ ಪರಿಚಿತರೊಬ್ಬರು ಒಂದು ಸಮಸ್ಯೆಯೊಂದಿಗೆ ಮನಗೆ ಬಂದರು. ಅವರ ಮಗ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 74ರಷ್ಟು ಅಂಕ ಪಡೆದಿದ್ದರೂ ಯಾವುದೇ ಒಳ್ಳೆಯ( ಅವರ ದೃಷ್ಠಿಯಲ್ಲಿ ನೂರಕ್ಕೆ ನೂರು ಪಲಿತಾಂಶ ನೀಡುವ) ಕಾಲೇಜುಗಳಲ್ಲಿ ಅವನಿಗೆ ಸೀಟು ಸಿಗಲು ಸಾದ್ಯವಿರಲಿಲ್ಲ. ಪ್ರವೇಶದ ಅರ್ಜಿ ಪಾರಂ ತರಲು ಹೋದಾಗಲೇ ಸಿಬ್ಬಂದಿ ಈ ಬಗ್ಗೆ ಅವರಿಗೆ ಸೂಚನೆ ನೀಡಿ ಮ್ಯಾನೇಜುಮೆಂಟ್ ಕೋಟಾದಲ್ಲಿ ಒಂದೂವರೆ ಲಕ್ಷ ಕಟ್ಟಿದರೆ ಮಾತ್ರ ಸೀಟು ಸಿಗುವುದಾಗಿಯೂ, ಅದಕ್ಕೆ ಮುಂಗಡವಾಗಿ ಟೋಕನ್ ಅಡ್ವಾನ್ಸ್ ನೀಡಿ(ಸೈಟು ವ್ಯಾಪಾರ ಮಾಡುವ ರಿಯಲ್ ಎಸ್ಟೇಟ್ ದಂದೆಯವರಂತೆ) ಸೀಟು ಬುಕ್ ಮಾಡಿ ಎಂದಿದ್ದಾರೆ. ಇವರೊ ನೋಡುವ ಮತ್ತೆ ಬರುವೆ ಅಂತ ಹೇಳಿ ಇನ್ನೂ ಮೂರ್ನಾಲ್ಕು ಕಾಲೇಜುಗಳಲ್ಲಿ ವಿಚಾರಿಸಿದಾಗ ಬಹುತೇಕ ಎಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಅಂತಹುದೇ ಉತ್ತರ ಸಿಕ್ಕಿದೆ. ಈಗೇನು ಮಾಡಲಿ ಎಂದು ಕೇಳಲು ಎಂದು ನನ್ನ ಮನೆಗೆ ಬಂದಿದ್ದರು. ನಾನು ನಿಮ್ಮ ಮಗನಿಗೆ ಸೈನ್ಸೇ ಆಗಬೇಕೆ ಆರ್ಟ್ಸ್ ಓದಲು ಆಗುವುದಿಲ್ಲವೇ ಎಂದಾಗ ಮುಖ ಕಿವುಚಿ (ನನ್ನನ್ನು ತಮ್ಮ ಹೊಸ ಶತ್ರುವಂತೆನೋಡುತ್ತ) ಏನು ಸಾರ್ ಹೀಗೆ ಹೇಳ್ತೀರಿ. ದುಡ್ಡಿಗಾಗಿ ಅವನ ಭವಿಷ್ಯ ಹಾಳು ಮಾಡೋಕಾಗುತ್ತ? ಅದಕ್ಕೆ ಬೆಲೆ ಎಲ್ಲಿದೆ? ಪಿಯುಸಿ ಆದ ಮೇಲೆ ಬಿಎ, ಎಂಎ ಬಿಟ್ಟರೆ ಬೇರೇನು ಓದೋಕಾಗುತ್ತೆ. ಅವನ್ನು ಓದಿದರೆ ಕೆಲಸ ಎಲ್ಲಿ ಸಿಗುತ್ತೆ? ಅಂತ ನನಗೇನೆ ಹತ್ತಾರು , ಉತ್ತರವಿರದ ಪ್ರಶ್ನೆಗಳನ್ನು ಕೇಳಿದರು. ಸದ್ಯದ ಸ್ಥಿತಿಯಲ್ಲಿ ಅವರ ಮಾತು ನಿಜ ಅನಿಸಿತು. ನನಗೂ ಬೇರೇನು ಹೇಳಲು ತೋಚದೆ ನೋಡುವ ತಡೆಯಿರಿ ಸೀಟುಗಳು ಅಧಿಕೃತವಾಗಿ ಅನೌನ್ಸ್ ಆಗಲಿ. ನಾನೂ ನಿಮ್ಮ ಜೊತೆ ಬರುತ್ತೇನೆ. ಹೇಗಾದರು ಮಾಡಿ ಫೀಸು ಕಡಿಮೆ ಮಾಡಿಸೋಣ ಅಂತ ಹೇಳಿ ಕಳಿಸಿ ನಿಟ್ಟುಸಿರುಬಿಟ್ಟೆ.
ಕು.ಸ. ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.