ಜನ 7, 2014

ವಿಚಾರಣೆ

ಕು ಸ ಮಧುಸೂದನ

ನನ್ನ ಮುಂದೆ ಮೂರು ಜನ ಕೂತಿದ್ದರು. ಮದ್ಯದವನು ಕೆಂಪಗೆ ಇದ್ದು,ಸುಮ್ಮನಿದ್ದರೂ ಮುಗುಳ್ನಗುವಂತೆ ಕಾಣುತ್ತಿದ್ದ. ಆತನ ಕಣ್ಣುಗಳಲ್ಲಿ ನನ್ನ ಬಗ್ಗೆ ಅನುಕಂಪ ತುಂಬಿರುವಂತೆ ಅನಿಸಿತ್ತು. ನನ್ನ ಮುವತ್ತಮೂರು ದಿವಸಗಳ ಜೈಲಿನ ವಾಸದಲ್ಲಿ ಹಿಂದೆಂದೂ ಆತನನ್ನು ನೋಡಿದ ನೆನಪಾಗಲಿಲ್ಲ.ಅವನನ ಎಡಗಡೆಗೆ ಬೊಕ್ಕತಲೆಯವನೊಬ್ಬ ಕುಳಿತಿದ್ದ. ಆತನನ್ನು ಈ ರೂಮಿನಲ್ಲೇ ನೋಡಿದ್ದೆ. ಅಲ್ಲಿದ್ದ ಮೂರನೆಯವನು ಮಾತ್ರ ಪೋಲಿಸರ ಉಡುಪಿನಲ್ಲಿರದೆ,ಇದೆಲ್ಲ ತನಗೆ ಸಂಬಂದಿಸಿಯೇ ಇಲ್ಲವೇನೊ ಎಂಬಂತೆ ಕುಳಿತಿದ್ದ. ಬಹುಶ: ಅವನು ಬೇರೆ ಇಲಾಖೆಯವನಿರಬೇಕು.

ಜನ 6, 2014

ಕೆ.ವಿ. ಸುಬ್ಬಣ್ಣ 2

ಅರೆ ಶತಮಾನದ ಅಲೆಬರಹಗಳು ಪುಸ್ತಕದಿಂದ

'ಆಮ್ ಆದ್ಮಿ' ಪಕ್ಷವನ್ನು ಹೊಗಳುವ ಉತ್ಸಾಹದಲ್ಲಿ.......

Noel Chungigudde
'ಆಮ್ ಆದ್ಮಿ' ಪಕ್ಷವನ್ನು ಹೊಗಳುವ ಉತ್ಸಾಹದಲ್ಲಿ ಇವರನ್ನೆಲ್ಲ ನಾವು ಸಹಿಸಿಕೊಳ್ಳುತ್ತೇವೆ! ಕಮ್ಯೂನಿಸ್ಟರನ್ನು ತೆಗಳುತ್ತೇವೆ!!!

ಹೋರಾಟ ಮಾಡಿದ್ರೆ ಈ ಬಿಜೆಪಿ- ಕಾಂಗ್ರೆಸ್ ತರ ಮಾಡ್ಬೇಕು. ಚುನಾವಣೆ ಬಂದಾಗ ರಥಯಾತ್ರೆ, ಪಾದ ಯಾತ್ರೆ, ರೋಡ್ show. ಮೈ-ಕೈ ನೋವಿಲ್ಲ, ಲಾಠಿ ಏಟು ತಿನ್ನುವ ಪ್ರಶ್ನೆಯೇ ಇಲ್ಲ,

ಜನ 5, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 14



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 13 ಓದಲು ಇಲ್ಲಿ ಕ್ಲಿಕ್ಕಿಸಿ
ಗೌತಮ್ – ತರಗತಿಯಲ್ಲಿದ್ದ ಎಲ್ಲಾ ಹುಡುಗರಲ್ಲೂ ಅಸೂಯೆ ಹುಟ್ಟಿಸುವಂಥ ವ್ಯಕ್ತಿತ್ವ. ನೋಡ್ಲಿಕ್ಕೆ ಚೆನ್ನಾಗಿದ್ದ ಅನ್ನೋದಕ್ಕಿಂತ ಎಲ್ಲಾ ವಿಷಯಗಳಲ್ಲೂ ಮುಂದು. ಒಂದು ರೀತೀಲಿ ಸಕಲಕಲಾವಲ್ಲಭ. ಹುಡುಗೀರ ಜೊತೆ ಮಾತನಾಡೋದರಲ್ಲಿರಬಹುದು, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಲ್ಲಿರಬಹುದು ಎಲ್ಲಾದರಲ್ಲೂ ಮುಂದು. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಮಯದಲ್ಲಿ ನಡೆಸಿದ್ದ ಆಶುಭಾಷಣ ಸ್ಪರ್ಧೆ, ಪ್ರಬಂಧ ರಚನೆ, ಸಂಗೀತ, ಡಿಬೇಟ್, ನಾಟಕ ಎಲ್ಲದರಲ್ಲೂ ಮೊದಲ ಸ್ಥಾನ ಗೌತಮನಿಗೆ. ಹುಡುಗಿಯರು ಪ್ರತೀ ವಿಷಯಕ್ಕೂ ‘ಗೌತಮ್ ಗೌತಮ್’ ಅಂತ ಕೂಗುತ್ತಿದ್ದರೆ ಹುಡುಗರೆಲ್ಲಾ ‘ನಮಗೇ ಅದೃಷ್ಟ ಇಲ್ವಲ್ಲಾ ಗುರೂ’ ಎಂದು ಪೇಚಾಡಿಕೊಳ್ಳುತ್ತಿದ್ದರು. ಲೋಕಿಗೂ ಮೊದಮೊದಲು ‘ಛೇ ನಾನು ಯಾವುದರಲ್ಲೂ ಭಾಗವಹಿಸುವುದಿಲ್ಲವಲ್ಲಾ. ನಿಜಕ್ಕೂ ನಾನೊಬ್ಬ ದಂಡಪಿಂಡ’ ಎನ್ನಿಸುತ್ತಿತ್ತು. ಆದರೆ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದಾಗಲೆಲ್ಲ ಈ ಕೀಳರಿಮೆ ಕಡಿಮೆಯಾಗುತ್ತಿತ್ತು.

ಡಿಸೆಂ 31, 2013

ಪುಟ ತಿರುವುವ ಮುನ್ನ



ಡಾ ಅಶೋಕ್ ಕೆ ಆರ್
ಮಾಧ್ಯಮ ಮತ್ತು ‘ಭವಿಷ್ಯಕರ್ತರು’ ಸೃಷ್ಟಿಸಿದ ಪ್ರಳಯದ ‘ಭೀತಿ’ ಅಸ್ತಂಗತವಾಗಿ ಒಂದು ವರುಷ ಕಳೆದು ಹೋಗಿ ಶತಮಾನಗಳಿಂದ ಸಹಜವೆಂಬಂತೆ ಒಪ್ಪಿಕೊಂಡಿದ್ದ ಗುಲಾಮತ್ವದ ಮನಃಸ್ಥಿತಿಯ ಸಮಾಜವನ್ನು  ಪ್ರಳಯರೂಪದಲ್ಲಿ ಬಂದು ಶುದ್ಧೀಕರಿಸಿದ ನೆಲ್ಸನ್ ಮಂಡೇಲಾರ ಸಾವಿನೊಂದಿಗೆ ಮತ್ತೊಂದು ವರುಷ ಉರುಳಿ ಹೋಗಿದೆ. ಹಿಂದಿನ ವರುಷಗಳಿಗೂ ಹೊಸ ವರುಷದ ಬರುವಿಕೆಗಾಗಿ ಕಾಯ್ದಿರುವ 2013ಕ್ಕೂ ಹೆಚ್ಚಿನ ವ್ಯತ್ಯಾಸಗಳಿವೆಯೇ?

ಕಲಿಕಾ ಮಾಧ್ಯಮ ವಿವಾದ

ವೆಂಕಟೇಶ ಮಾಚಕನೂರ, ನಿವೃತ್ತ ಶಿಕ್ಷಣ ಆಯುಕ್ತರು, ಧಾರವಾಡ
(ಕೃಪೆ - ಜಗದೀಶ್ ಕೊಪ್ಪ ರವರ ಫೇಸ್ಬುಕ್ ಪುಟ )
ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮ ಇರಬೇಕೆಂಬ ಕರ್ನಾಟಕ ಸರ್ಕಾರದ ಆದೇಶದ ವಿವಾದವು ಈಗ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗನ್ನೊಳಗೊಂಡ ಸಂವಿಧಾನಿಕ ಪೀಠದ ಮುಂದೆ ಜನೇವರಿ 21 ರಿಂದ ವಿಚಾರಣೆಗೆ ಬರಲಿರುವ ವಿಷಯ ಎಲ್ಲರಿಗೂ ಗೊತ್ತಿರಲು ಸಾಕು.

ಡಿಸೆಂ 25, 2013

ನಿರೀಕ್ಷಿತ ಫಲಿತಾಂಶದಲ್ಲಿ ‘ಆಮ್ ಆದ್ಮಿ’ ಜಯಶಾಲಿ



ಡಾ ಅಶೋಕ್ ಕೆ ಆರ್.
ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮುಂದಿನ ವರುಷ ನಡೆಯುವ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹೊಸ ಹುರುಪಿನಿಂದ ಮತ್ತಷ್ಟು ಆತ್ಮಾವಲೋಕನದಿಂದ ತಯ್ಯಾರಿ ನಡೆಸಲು ಬೇಕಾದ ಮಾರ್ಗದರ್ಶನವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಕೆಲವರ ಪ್ರಕಾರ ಇದು ಮುಂದಿನ ಫೈನಲ್ ಲೋಕಸಭಾ ಚುನಾವಣಾ ಪೂರ್ವದಲ್ಲಿ ನಡೆದ ಸೆಮಿಫೈನಲ್! ದಕ್ಷಿಣದ ಯಾವೊಂದು ರಾಜ್ಯದಲ್ಲೂ ನಡೆಯದ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ನಡೆಯದ ಈ ಚುನಾವಣೆಯನ್ನು ಸೆಮಿಫೈನಲ್ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ?