ಆಗ 22, 2012
ಆಗ 19, 2012
ಆದರ್ಶವೇ ಬೆನ್ನು ಹತ್ತಿ . . . ಭಾಗ 3
ಮಹಾರಾಜ ಪದವಿ
ಪೂರ್ವ ಕಾಲೇಜಿನ ಆವರಣದಲ್ಲಿರುವ ಬ್ಯಾಸ್ಕೆಟ್ ಬಾಲ್ ಮೈದಾನದಲ್ಲಿ ಸಂಜೆಯ ವೇಳೆ ಹತ್ತಾರು ಚಿಕ್ಕ ಚಿಕ್ಕ
ಮಕ್ಕಳು ಸ್ಕೇಟಿಂಗ್ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಜೊತೆಯಲ್ಲಿ ಅವರ ಮನೆಯ ಹಿರಿಯರೊಬ್ಬರು.
ಲೋಕಿಗೆ ಬೇಸರವಾದಾಗಲೆಲ್ಲ ಇಲ್ಲಿಗೆ ಬಂದು ಕಲ್ಲು ಬೆಂಚಿನ ಮೇಲೆ ಕೂರುತ್ತಿದ್ದ. ಹೊಸಬರು ಸ್ಕೇಟಿಂಗ್
ಕಲಿಯುವ ರೀತಿ, ಹಳಬರು ಹೊಸ ಹುಡುಗರ ಮುಂದೆ ತಮಗೆ ಎಲ್ಲಾ ಗೊತ್ತು ಎಂಬಂತೆ ಮಾಡುತ್ತಿದ್ದ ಮುಖಭಾವವನ್ನು
ನೋಡಿದರೆ ಮನಸ್ಸಿಗೆಷ್ಟೋ ಸಮಾಧಾನವಾಗುತ್ತಿತ್ತು. ಅಂದು ಕೂಡ ಲೋಕಿ ಅಲ್ಲಿ ಬಂದು ಕುಳಿತಿದ್ದ. ಸಯ್ಯದ್
ಈತನನ್ನು ಕಂಡು ಬಳಿಗೆ ಬಂದ.
ಆಗ 10, 2012
ಬ್ರಹ್ಮಚಾರಿ

ಕಥೆಯ ಆರಂಭಕ್ಕೂ ಮುಂಚೆ ಒಂದು Disclaimer! – ಈ ಕಥೆಯಲ್ಲಿ ಉಪಯೋಗಿಸಿರುವ ಜಾತಿ ಧರ್ಮದ ಹೆಸರುಗಳು ಕೇವಲ ಸಾಂಕೇತಿಕ. ಒಂದು ಜಾತಿಯ ಬದಲಿಗೆ ಮತ್ತೊಂದು ಜಾತಿಯ ಹೆಸರು ಬರೆದಾಗ್ಯೂ ಈ ಕಥೆಯ ಪ್ರಸ್ತುತತೆಗೆ ಧಕ್ಕೆಯಾಗುವುದಿಲ್ಲವೆಂಬುದು ನಮ್ಮ ಇವತ್ತಿನ ಸಮಾಜದ ದುರಂತ ಮತ್ತು ನಮ್ಮೆಲ್ಲರ ವೈಯಕ್ತಿಕ ವೈಫಲ್ಯ. ಈ ಕೆಳಗೆ ಹೆಸರಿಸಿರುವ ಯಾವುದಾದರೂ ಜಾತಿ ಧರ್ಮದವರು ನೀವಾಗಿದ್ದ ಪಕ್ಷದಲ್ಲಿ ಕಥೆ ಓದಿ ಮುಗಿಸಿದ ನಂತರ ನಿಮ್ಮಲ್ಲಿ ಖುಷಿ ಅಥವಾ ಕೋಪದ ಭಾವನೆ ಮೂಡಿದರೆ ಅದು ನಿಮ್ಮ ಕಲ್ಮಶ ಮನಸ್ಸಿನ ಸಂಕೇತ!
ಆಗ 9, 2012
ಆದರ್ಶವೇ ಬೆನ್ನು ಹತ್ತಿ....ಭಾಗ 2
“ಹಬ್ಬದ ದಿನ
ಏನೇನೋ ಹೇಳಿ ನಿನ್ನ ಮನಸ್ಸಿಗೆ ಬೇಸರ ಉಂಟುಮಾಡುವ ಇಚ್ಛೆ ನನಗಿಲ್ಲ. ಮತ್ತೊಮ್ಮೆ ಹೇಳ್ತೀನಿ” ನಗುತ್ತಾ
ಉತ್ತರಿಸಿ ಹೊರಟುಹೋದ.
ಗಣೇಶ ಚತುರ್ಥಿಯಾಗಿ
ಒಂದು ವಾರ ಕಳೆದ ನಂತರ ಲೋಕಿಯ ಹುಟ್ಟುಹಬ್ಬ. ಪಿ.ಯು.ಸಿಗೆ ಬಂದ ನಂತರ ಸ್ನೇಹಿತರಿಗೆ ಪಾರ್ಟಿ ಕೊಡಿಸುವ
ನೆಪದಲ್ಲಿ ಮನೆಯಲ್ಲಿ ಹಣ ಪಡೆದುಕೊಂಡು ನೂರು ರುಪಾಯಿಗೆ ಒಂದು ಪುಸ್ತಕ, ಸಾಮಾನ್ಯವಾಗಿ ಸ್ವಾತಂತ್ರ್ಯ
ಹೋರಾಟಗಾರರ ಬಗೆಗಿನ ಪುಸ್ತಕವನ್ನು ಖರೀದಿಸುತ್ತಿದ್ದ. ಮಿಕ್ಕ ದುಡ್ಡನ್ನು ಭಿಕ್ಷುಕರಿಗೆ ಕೊಟ್ಟುಬಿಡುತ್ತಿದ್ದ.
ಇಂದ್ಯಾಕೋ ಹಣ ಕೊಡುವುದು ಬೇಡ, ಹೋಟೆಲ್ಲಿಗೆ ಕರೆದೊಯ್ದು ಊಟ ಕೊಡಿಸೋಣ ಎಂದೆನಿಸಿತು. ಇದೇ ಯೋಚನೆಯಲ್ಲಿ
ಸಯ್ಯಾಜಿರಾವ್ ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ಇಂದ್ರ ಭವನ್ ಹೋಟೆಲ್ ಎದುರಿಗೆ ಒಬ್ಬ ವ್ಯಕ್ತಿ
ಭಿಕ್ಷೆ ಬೇಡುತ್ತಿರುವುದು ಕಂಡಿತು. ಆತನಿಗೆ ಎರಡೂ ಕಾಲುಗಳಿರಲಿಲ್ಲ. ಎಡಗೈ ಇರಲಿಲ್ಲ. ಅವನ ಹತ್ತಿರ
ಹೋಗಿ “ಏನಾದರೂ ತಿಂತೀರಾ?” ಅಂದ. “ದುಡ್ಡೇ ಇಲ್ಲ ಸಾಮಿ” ಅವನ ಮಾತು ಕೇಳಿ ಲೋಕಿಗೆ ‘ಸಮಾನತೆ ಅನ್ನೋದು
ಕೈಗೆಟುಕದ ನಕ್ಷತ್ರದಂತೆಯೇ ಉಳಿದುಹೋಗುತ್ತದಾ?’ ಎಂಬ ಯೋಚನೆ ಬಂತು. ಯೋಚನೆಗಳನ್ನು ಹತ್ತಿಕ್ಕುತ್ತಾ
“ನಾನು ಕೊಡಿಸ್ತೀನಿ ನಡೀರಿ” ಎಂದ್ಹೇಳಿ ಆತನ ಮಾತಿಗೂ ಕಾಯದೆ ಅವನನ್ನು ಅನಾಮತ್ ಮೇಲೆತ್ತಿಕೊಂಡು ಇಂದ್ರ
ಭವನದ ಒಳಗೆ ಹೋದ. ಸುತ್ತಲಿನವರ ಗಮನ ಲೋಕಿಯ ಮೇಲಿತ್ತು.
ಆಗ 8, 2012
ಕನಸುಗಳ ಬೆಂಬತ್ತಿದ ಬರ್ಟ್ ಮನ್ರೋ – The worlds fastest Indian
![]() |
ಡಾ ಅಶೋಕ್. ಕೆ. ಆರ್.
ಜೀವಿತದಲ್ಲಿ ನಮ್ಮ ಮನದಾಳದ ಕನಸನ್ನು ನನಸಾಗಿಸಲು ಪ್ರಮುಖವಾಗಿ ಬೇಕಿರುವುದೇನು? ಸತತ ಪರಿಶ್ರಮ, ಸೋಲೊಪ್ಪಿಕೊಳ್ಳದ ಛಲ, ಕೊಂಚ ಮಟ್ಟಿಗಿನ ಅದೃಷ್ಟ, ತಾಳ್ಮೆ. ಇವೆಲ್ಲವೂ ಇದ್ದ ಬರ್ಟ್ ಮನ್ರೋ ತನ್ನ ಹಾದಿಯಲ್ಲಿ ಬಂದ ಕಾಠಿಣ್ಯವನ್ನೆಲ್ಲ ದಾಟಿ ಕನಸನ್ನು ನನಸಾಗಿಸುತ್ತಾನೆ. 1899ರಲ್ಲಿ ನ್ಯೂಝಿಲೆಂಡಿನ ಇನ್ವರ್ ಕಾರ್ಗಿಲ್ಲಿನಲ್ಲಿ ಜನಿಸಿದ ಮನ್ರೋಗೆ ಚಿಕ್ಕಂದಿನಿಂದ ಬೈಕುಗಳ ಹುಚ್ಚು. ಮೊದಲು ಖರೀದಿಸಿದ್ದು ಇಂಡಿಯನ್ ಸ್ಕೌಟ್ ಬೈಕನ್ನು ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ. ಆಗ ಅದರ ವೇಗ ಕೇವಲ 55 ಮೈಲಿ/ ಘಂಟೆಗೆ. ತನ್ನದೇ ಗ್ಯಾರೇಜನ್ನು ಸ್ಥಾಪಿಸಿ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದಲೇ ಬೈಕನ್ನು ಉತ್ತಮಗೊಳಿಸುತ್ತ ಕೊನೆಗೆ 1967ರಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಾನೆ, ತನ್ನ 68ನೇ ವಯಸ್ಸಿನಲ್ಲಿ! ಬರ್ಟ್ ಮನ್ರೋನ ಜೀವನಗಾಥೆಯನ್ನು ಆಧಾರವಾಗಿಸಿಕೊಂಡು ರೋಜರ್ ಡೋನಾಲ್ಡ್ ಸನ್ The Worlds fastest Indian ಸಿನಿಮಾ ತೆಗೆದಿದ್ದಾರೆ.
ಜೀವಿತದಲ್ಲಿ ನಮ್ಮ ಮನದಾಳದ ಕನಸನ್ನು ನನಸಾಗಿಸಲು ಪ್ರಮುಖವಾಗಿ ಬೇಕಿರುವುದೇನು? ಸತತ ಪರಿಶ್ರಮ, ಸೋಲೊಪ್ಪಿಕೊಳ್ಳದ ಛಲ, ಕೊಂಚ ಮಟ್ಟಿಗಿನ ಅದೃಷ್ಟ, ತಾಳ್ಮೆ. ಇವೆಲ್ಲವೂ ಇದ್ದ ಬರ್ಟ್ ಮನ್ರೋ ತನ್ನ ಹಾದಿಯಲ್ಲಿ ಬಂದ ಕಾಠಿಣ್ಯವನ್ನೆಲ್ಲ ದಾಟಿ ಕನಸನ್ನು ನನಸಾಗಿಸುತ್ತಾನೆ. 1899ರಲ್ಲಿ ನ್ಯೂಝಿಲೆಂಡಿನ ಇನ್ವರ್ ಕಾರ್ಗಿಲ್ಲಿನಲ್ಲಿ ಜನಿಸಿದ ಮನ್ರೋಗೆ ಚಿಕ್ಕಂದಿನಿಂದ ಬೈಕುಗಳ ಹುಚ್ಚು. ಮೊದಲು ಖರೀದಿಸಿದ್ದು ಇಂಡಿಯನ್ ಸ್ಕೌಟ್ ಬೈಕನ್ನು ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ. ಆಗ ಅದರ ವೇಗ ಕೇವಲ 55 ಮೈಲಿ/ ಘಂಟೆಗೆ. ತನ್ನದೇ ಗ್ಯಾರೇಜನ್ನು ಸ್ಥಾಪಿಸಿ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದಲೇ ಬೈಕನ್ನು ಉತ್ತಮಗೊಳಿಸುತ್ತ ಕೊನೆಗೆ 1967ರಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಾನೆ, ತನ್ನ 68ನೇ ವಯಸ್ಸಿನಲ್ಲಿ! ಬರ್ಟ್ ಮನ್ರೋನ ಜೀವನಗಾಥೆಯನ್ನು ಆಧಾರವಾಗಿಸಿಕೊಂಡು ರೋಜರ್ ಡೋನಾಲ್ಡ್ ಸನ್ The Worlds fastest Indian ಸಿನಿಮಾ ತೆಗೆದಿದ್ದಾರೆ.
ಆಗ 7, 2012
ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ...
![]() |
Team anna |
- ಡಾ. ಅಶೋಕ್. ಕೆ. ಆರ್
ನನ್ನ
ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ
ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ
ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’
‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!ಆಗ 6, 2012
ಆದರ್ಶವೇ ಬೆನ್ನು ಹತ್ತಿ.... ಭಾಗ 1
![]() | |
ದಾರಿ ಹುಡುಕುತ್ತ.... |
ವೈದ್ಯಕೀಯ ಓದುತ್ತಿದ್ದಾಗ ಕೊನೆಯ ವರ್ಷ ಕಾಲೇಜಿಗೆ ಹೋಗುವುದನ್ನೂ ಮರೆತು ಬರೆದ ಕಾದಂಬರಿಯಿದು! ಆಗ ಈ ಕಾದಂಬರಿಯ ಕೆಲವು ಭಾಗಗಳು 'ಮಾರ್ಗದರ್ಶಿ' ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಕಾದಂಬರಿ ಕಾಲಿಟ್ಟ ಘಳಿಗೆಯೋ ಏನೋ ಕೆಲವೇ ತಿಂಗಳಲ್ಲಿ ಆ ಪತ್ರಿಕೆಯೇ ಮುಚ್ಚಿಹೋಯಿತು!! ನಂತರದ ದಿನಗಳಲ್ಲಿ ಕಾದಂಬರಿಯನ್ನು ಪುನಃ ಓದಿದಾಗ ಎಳಸೆಳಸು ಬರಹ ಎಂಬ ಭಾವನೆ ಬಂತು[ಇವತ್ತಿಗೂ ಅದೇ ಭಾವನೆಯಿದೆ!]. ಒಂದಷ್ಟು ಬದಲಾವಣೆಗಳೊಂದಿಗೆ ಇಲ್ಲಿ ಪ್ರಕಟಿಸುತ್ತಿದ್ದೀನಿ, ಓದುವ ಕಷ್ಟ ನಿಮ್ಮದಾಗಲಿ! - ಡಾ ಅಶೋಕ್. ಕೆ. ಆರ್.
ಆಗ 5, 2012
ಫಾಲ್ಕೆಯ ಸಿನಿಮಾಗಾಥೆ - 'ಹರೀಶ್ಚಂದ್ರಾಚಿ ಫ್ಯಾಕ್ಟರಿ'
![]() |
ಹರೀಶ್ಚಂದ್ರಾಚಿ ಫ್ಯಾಕ್ಟರಿ |
ದಾದಾ ಸಾಹೇಬ ಫಾಲ್ಕೆಯ ಹೆಸರು ಕೇಳಿದ್ದು ನಮ್ಮ ರಾಜಣ್ಣನಿಗೆ ಆ ಪ್ರಶಸ್ತಿ ಬಂದಾಗ. ದಾದಾ ಸಾಹೇಬ ಫಾಲ್ಕೆ ಯಾರೆಂಬುದೂ ಸರಿಯಾಗಿ ತಿಳಿದಿರಲಿಲ್ಲ. ತಿಳಿದಿದ್ದು ಮರಾಠಿ ಚಿತ್ರ ಹರೀಶ್ಚಂದ್ರಾಚಿ ಫ್ಯಾಕ್ಟರಿಯನ್ನು ನೋಡಿದಾಗ. ಪರೇಶ್ ಮೊಕಾಶಿಯ ಸಮರ್ಥ ನಿರ್ದೇಶನದಲ್ಲಿ ಪಡಿಮೂಡಿರುವ ಈ ಚಿತ್ರ ಭಾರತೀಯ ಸಿನಿಮಾರಂಗದ ಹುಟ್ಟಿನ ಕಥೆಯೂ ಹೌದು. ಅದು 1911ರ ಇಸವಿ, ಜೊತೆಗಾರನಿಂದ ಬೇರ್ಪಟ್ಟು ಪ್ರಿಂಟಿಂಗ್ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಜಾದೂಗಾರನಾಗುತ್ತಾನೆ ಫಾಲ್ಕೆ.
ಆಗ 3, 2012
ಗುಡ್ಡೆ ಮೇಲೆ ದೇವಸ್ಥಾನ
- S. ಅB ಹನಕೆರೆ.
“ಹತ್ತೋವಾಗಲೆ ಎಷ್ಟು ಮೆಟ್ಟಿಲು ಇದೆ ಅಂತ ಎಣಿಸಿಬಿಟ್ಟು ಇನ್ನು ಇಳಿಯುವಾಗ relax ಆಗ್ಬಿಟ್ರೆ ಅಂತ ಅದರ ಕಡೆ ಗಮನ ಕೊಡಲಿಲ್ಲ” ಎಂದು ಸಮರ್ಥನೆ ಮಾಡಿಕೊಂಡಳು ಗಾಯತ್ರಿ. ಸುತ್ತಲೂ ನೋಡುತ್ತಾಳೆ, ಕೆಳಗಿನ ಊರು, ರಸ್ತೆ ಮೇಲಿನ ವಾಹನ ಎಲ್ಲವೂ ಸ್ತಬ್ಧವಾಗಿ ಮತ್ತೊಮ್ಮೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತವೆ. “ನಿನ್ನ ಈ ವಕ್ರ ದೃಷ್ಟೀನೆ ನನಗೆ ಇಷ್ಟ ಆಗೋದು” ಎಂದು ಗಾಯತ್ರಿ ಕಣ್ಣನ್ನೇ ದೃಷ್ಟಿಸಿದ ಶೇಖರನ್ನ ನೋಡಿ, ಗಾಯತ್ರಿ ಮನದೊಳಗೆ ‘ನನ್ನ ದೃಷ್ಟಿ ಇವನಿಗೆ ಹೇಗೆ ಗೊತ್ತಾಯ್ತು? ಈ ಮನುಷ್ಯನಿಗೆ ಸೃಷ್ಟಿ ಯಾವುದು? ದೃಷ್ಟಿ ಯಾವುದು? ಸಮರ್ಥನೆ ಯಾವುದೆಂದು ಗೊತ್ತಾಗಿದ್ರೆ ನನ್ನ ಹಿಂದೆ ಯಾಕ್ ಬೀಳ್ತಿದ್ದ’ ಎಂದುಕೊಂಡು ಶೇಖರನೊಡನೆ ದೇವಸ್ಥಾನದೊಳಗೆ ಹೋದಳು.
ಆಗ 2, 2012
ಎಚ್ಚರ ಪತ್ರಕರ್ತ ಎಚ್ಚರ....!
