ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?
ಜುಲೈ 31, 2012
ಜುಲೈ 30, 2012
ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಮ್ಯಾನ್ಹೋಲ್ ವಿಷಾನಿಲ ಸೇವನೆಯಿಂದ ಮೃತಪಟ್ಟ ಇಬ್ಬರ ಸಾವಿನ ಕುರಿತ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.
ಧರ್ಮ ಸಂಸ್ಕೃತಿ ನಗ್ನತೆ ಸಭ್ಯತೆ ಬುರ್ಖ ದನ ಹಂದಿ ಮಾಂಸ ಎಣ್ಣೆ ಬಾರು ಪಬ್ಬುಗಳ ಬಗ್ಗೆಯೇ ಬರೆಯುತ್ತ ಕೂರುವ ನಮ್ಮಂಥವರ ನಡುವೆ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ರವರಿಂದ ಕೌಂಟರ್ ಮೀಡಿಯ ಪ್ರಶಸ್ತಿ ಪಡೆದುಕೊಂಡ ದಯಾನಂದ್ ಟಿ.ಕೆರವರು ಮಲದಗುಂಡಿ ಸ್ವಚ್ಛಗೊಳಿಸಲು ಹೋಗಿ ಪ್ರಾಣ ಕಳೆದುಕೊಂಡವರ ಬಗ್ಗೆ ಸತ್ಯಶೋಧನಾ ವರದಿ ಬರೆದಿದ್ದಾರೆ. ಇಂಥ ವಿಪರ್ಯಾಸದ ಸಂಗತಿಗಳು ಕೂಡ ನಮ್ಮ ಭಾರತದ ಸಂಸ್ಕೃತಿಯೇ ಅಲ್ಲವೇ??
ನಾನು ಪತ್ರಕರ್ತನಾಗಿ ಸರಿಯಾಗಿದ್ದೀನಾ ?
ಕಸ್ತೂರಿ ವಾಹಿನಿಯ ವರದಿಗಾರ ನವೀನ್ ಮಂಗಳೂರಿನಲ್ಲಿ ನಡೆದ ದಾಳಿಯನ್ನು ಮೊದಲು ವರದಿ ಮಾಡಿದವರು. ಮಾಧ್ಯಮಗಳ ನಡವಳಿಕೆಯ ಬಗ್ಗೆ ಎಲ್ಲೆಡೆಯೂ ವಿಮರ್ಶೆ ನಡೆಯುತ್ತಿರುವ ಈ ದಿನಗಳಲ್ಲಿ ಸ್ವತಃ ವರದಿಗಾರನೊಬ್ಬನೇ ಸ್ವವಿಮರ್ಶೆ ಮಾಡಿಕೊಂಡಿದ್ದು ಅಪರೂಪ. ಬರೆಯುವ ಕಷ್ಟ ತೆಗೆದುಕೊಂಡು ನವೀನ್ ಶೆಟ್ಟಿಯವರು ಫೇಸ್ ಬುಕ್ಕಿನಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ. ಮಂಗಳೂರಿನಲ್ಲಿ ನಡೆದ ಘಟನೆಯ ಈ ವಿಸ್ತೃತವಾದ ಬರಹ ಹಿಂದೂ ಸಂಘಟನೆಗಳು, ಪೋಲೀಸರ ಬಗ್ಗೆ ನೂರಾರು ಪ್ರಶ್ನೆಗಳನ್ನು ಮೂಡಿಸುತ್ತದೆ.
ಜುಲೈ 26, 2012
'ಆ ಅಂಗಡಿ' ಮತ್ತು 'ಈ ಅಂಗಡಿ' ನಡುವೆ...
ಫೇಸ್ ಬುಕ್ಕಿನಲ್ಲಿ ಕೊನೆಯ ಕಂತೆಂಬಂತೆ ವ್ಯಂಗ್ಯಚಿತ್ರಕಾರ ಪಿ ಮಹಮ್ಮದ್ ರವರು ಪ್ರಜಾವಾಣಿ ತೊರೆಯುತ್ತಿರುವ ಸಂಗತಿ ತಿಳಿಸಿದ್ದಾರೆ! ಪ್ರಜಾವಾಣಿಯನ್ನು ಆ ಅಂಗಡಿಯೆಂದು ಕರೆಯುತ್ತ ಯಡಿಯೂರಪ್ಪನವರನ್ನು ಚೂಪು ಮೀಸೆಯ ಸರದಾರನೆಂದು ಕರೆಯುತ್ತ ಕಾರಣಗಳನ್ನು ಹೇಳಿದ್ದಾರೆ. ಯಾವ ಪಕ್ಷಕ್ಕೂ ಸೇರಿದ್ದಲ್ಲವೆಂಬ ಭಾವನೆ ಮೂಡಿಸಿದ್ದ 'ಕರ್ನಾಟಕದ ವಿಶ್ವಾಸರ್ಹ ದಿನಪತ್ರಿಕೆಯ' ವಿಶ್ವಾಸಾರ್ಹತೆಯನ್ನು ಬೆತ್ತಲು ಮಾಡಿದ್ದಾರೆ. ಖುಷಿಯ ಸಂಗತಿಯೆಂದರೆ ಅವರು ಈ ಅಂಗಡಿಯನ್ನು ಸೇರಲಿದ್ದಾರೆ. 'ನಂಬರ್ ಒನ್' ಈ ಅಂಗಡಿ ವಿಜಯ ಕರ್ನಾಟಕವೇ ತಾನೇ?!!
ಮುಸ್ಲಿಮರ ವಿರುದ್ಧ ಕೆಂಡಕಾರುವುದಕ್ಕಷ್ಟೇ ಹಿಂದೂ ಜಾಗೃತಿ ಸೀಮಿತವಾಗಬೇಕಾ?
ಡಾ. ಅಶೋಕ್. ಕೆ. ಆರ್.
ಅನಾಗರೀಕ, ಹಿಂದುಳಿದ ರಾಜ್ಯಗಳೆಂಬ ಹಣೆಪಟ್ಟಿ ಹೊತ್ತ ದೂರದ ಬಿಹಾರ, ಉತ್ತರಪ್ರದೇಶದಲ್ಲಿ
ನಡೆಯುತ್ತದೆಂದು ಕೇಳುತ್ತಿದ್ದ ಅಮಾನವೀಯ ಘಟನೆಯೊಂದು ನಮ್ಮ ಕರ್ನಾಟಕದ ಮಂಡ್ಯಜಿಲ್ಲೆಯಲ್ಲಿ ನಡೆದುಹೋಗಿದೆ.
ನಾಲ್ವರು ಯುವಕರು ಯಶವಂತಪುರ – ಮೈಸೂರು ರೈಲಿನಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸಿದ್ದಾರೆ. ಬೇಸತ್ತ
ಯುವತಿ ಬಾಗಿಲಿನ ಬಳಿ ಬಂದು ನಿಂತಿದ್ದಾಳೆ. ಅಲ್ಲಿಗೂ ಬಂದು ರೇಗಿಸಲಾರಂಭಿಸಿದವರಿಗೆ ಪೋಲೀಸರಿಗೆ ದೂರು
ನೀಡುವುದಾಗಿ ಹೇಳಿದ್ದಾಳೆ. ಕೋಪಗೊಂಡ ಆ ನಾಲ್ಕು ಮನುಷ್ಯರೂಪಿ ರಾಕ್ಷಸರು ಚಲಿಸುವ ರೈಲಿನಿಂದ ಆಕೆಯನ್ನು
ಹೊರತಳ್ಳಿಬಿಟ್ಟಿದ್ದಾರೆ. ರೈಲಾಗ ಮದ್ದೂರಿನ ಶಿಂಷಾ ನದಿಯ ಸೇತುವೆಯ ಮೇಲೆ ಚಲಿಸುತ್ತಿತ್ತು. ಅದೃಷ್ಟವಶಾತ್
ಬದುಕುಳಿದಿದ್ದಾಳೆ. ಬೆನ್ನುಹುರಿಗೆ ಬಿದ್ದ ಏಟು, ಮೂಳೆಮುರಿತದಿಂದ ಎಷ್ಟರ ಮಟ್ಟಿಗೆ ಆ ಯುವತಿ ಚೇತರಿಸಿಕೊಳ್ಳುತ್ತಾಳೆ
ಎಂಬುದನ್ನು ಕಾದುನೋಡಬೇಕಷ್ಟೇ.
ಜುಲೈ 25, 2012
ಮೂರುವರೆ ರುಪಾಯಿಯ ಓದುಗ ಆರೂವರೆ ರುಪಾಯಿಯ ಜಾಹೀರಾತುದಾರ...
ಪ್ರಜಾವಾಣಿಯಿಂದ ನಿವೃತ್ತರಾದ
ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ರವರು ವ್ಯಂಗ್ಯಚಿತ್ರಕಾರರ ಬವಣೆ, ಹಣ ನೀಡದ ಪತ್ರಿಕಾ ಸಂಸ್ಥೆಗಳಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ಕಿನಲ್ಲಿ
ಕೆಳಗಿನಂತೆ ಬರೆದಿದ್ದಾರೆ.
ಜುಲೈ 22, 2012
ಪ್ರತಿ ಓದಿನಲ್ಲೂ ಹೊಸ ಹೊಳಹು ನೀಡುವ “ಕರ್ವಾಲೋ”
ತೇಜಸ್ವಿಯ ಪುಸ್ತಕಗಳೇ ಹಾಗೆ. ವಿಡಂಬನೆ, ಹಾಸ್ಯ ಪ್ರಸಂಗಗಳು, ಒಂದಷ್ಟು ವ್ಯಂಗ್ಯ – ಇವಿಷ್ಟೂ ಇದ್ದ ಮೇಲೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆಯೆನ್ನುವುದರಲ್ಲಿ ಸಂಶಯವಿಲ್ಲ. ಕೊನೆಯ ಹಾಳೆ ಮಗುಚಿ ನಕ್ಕು ಪುಸ್ತಕವನ್ನು ಕಪಾಟಿಗೆ ಸೇರಿಸಿಯೋ ಅಥವಾ ಸ್ನೇಹಿತರಿಗೆ ಎರವಲು ಕೊಟ್ಟ ನಂತರ ತೇಜಸ್ವಿಯವರ ‘ಕಥೆ’ ಕಾಡಲಾರಂಭಿಸುತ್ತದೆ! ಉಹ್ಞೂ, ನಕ್ಕು ಮರೆಯಲಷ್ಟೇ ಈ ಕೃತಿ ಸೀಮಿತವಾಗಿಲ್ಲ. ನನ್ನರಿವಿಗೆ ಬಾರದ ತಿರುಳಿದೆ ಇದರಲ್ಲಿ ಎಂದೆನ್ನಿಸಲಾರಂಭಿಸುತ್ತದೆ. ಮತ್ತೊಮ್ಮೆ ಓದಲು ತೊಡಗಿ ಒಂದಷ್ಟನ್ನು ತಿಳಿದುಕೊಂಡಂತೆ ಭಾವಿಸಿ ಪುಸ್ತಕ ಮಡುಚಿಟ್ಟರೆ ಮತ್ಯಾವುದೋ ಪಾತ್ರ ಯಾವುದೋ ಸಾಲುಗಳು ನೆನಪಿಗೆ ಬಂದು ಪುನಃ ಪುನಃ ಓದಲು ಪ್ರೇರೇಪಿಸುತ್ತದೆ.
ಜುಲೈ 21, 2012
ಮುದ್ರಣ ಮಾಧ್ಯಮದಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಿಗೆ ಭವಿಷ್ಯ ಇದೆಯೇ?
ನಿನ್ನೆಯ ಪ್ರಜಾವಾಣಿಯ ಪತ್ರಿಕೆಯಲ್ಲಿ ಪಿ.ಮೊಹಮ್ಮದ್ ರವರ ವ್ಯಂಗ್ಯಚಿತ್ರ ಪ್ರಕಟವಾಗುವ ಜಾಗದಲ್ಲಿ ಈ ಪ್ರಕಟಣೆ ಇತ್ತು. ಮೊಹಮ್ಮದ್ ರವರು ಪ್ರಜಾವಾಣಿ ಪತ್ರಿಕೆ ತೊರೆಯುತ್ತಿರುವುದಾಗಿ ಫೇಸ್ ಬುಕ್ಕಿನಲ್ಲಿ ಈಗಾಗಲೇ ತಿಳಿಸಿದ್ದರಾದರೂ ಯಾವಾಗ ಬಿಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಮೊಹಮ್ಮದ್ ಪ್ರಜಾವಾಣಿ ತೊರೆದಿದ್ದಾರೆ ನಿನ್ನೆಯಿಂದ. ಇನ್ನವರ ಮೊನಚಾದ ವ್ಯಂಗ್ಯಚಿತ್ರಗಳನ್ನು ಪ್ರಜಾವಾಣಿಯಲ್ಲಿ ನೋಡುವ ಹಾಗಿಲ್ಲ. ಪ್ರಜಾವಾಣಿ ಕೊಂಚ ಸಪ್ಪೆಯೆನಿಸುವುದು ಖಂಡಿತ. ಕೆಲಸದ ಬದಲಾವಣೆಗಳು ಹೊಸದಲ್ಲ. ಮೊಹಮ್ಮದ್ ಗಿಂತಲೂ ಉತ್ತಮವಾದ ವ್ಯಂಗ್ಯಚಿತ್ರಕಾರಕ ಪ್ರಜಾವಾಣಿಗೆ ಬರಬಹುದು; ಬರಲಿ. ಮೊಹಮ್ಮದ್ ರವರು ಮತ್ತೊಂದು ಪತ್ರಿಕೆಗೆ ಹೋಗುತ್ತಿದ್ದಾರೇನೋ ಎಂಬ ಭಾವನೆಯಲ್ಲಿದ್ದೆ. ಆದರಿಂದು ಫೇಸ್ ಬುಕ್ಕಿನಲ್ಲಿ ಅವರು ಬರೆದಿರುವುದನ್ನು ನೋಡಿದರೆ ಅವರು ತಮ್ಮ ಕುಂಚಕ್ಕೆ ಸಂಪೂರ್ಣ ವಿರಾಮ ಕೊಡುವಂತೆ ಕಾಣಿಸುತ್ತಿದ್ದಾರೆ. ವ್ಯಂಗ್ಯಚಿತ್ರಕಾರನ ನೋವು ನಲಿವುಗಳನ್ನು ಈ ಪುಟ್ಟ ಪತ್ರದಲ್ಲಿ ವಿವರಿಸಿದ್ದಾರೆ. ಬ್ಯುಸಿನೆಸ್ಸಿಗೆ ಇಳಿಯುವುದಾಗಿ ಹೇಳಿದ್ದಾರೆ. ಜೀವನಕ್ಕೆ ಬ್ಯುಸಿನೆಸ್ಸು ಅನಿವಾರ್ಯವೆಂದವರಿಗೆ ಅನ್ನಿಸಿದ್ದರೆ ಸಂತಸವೇ ಆದರೆ ಕೊನೇ ಪಕ್ಷ ತಮ್ಮ ಮನಸ್ಸಂತೋಷಕ್ಕಾದರೂ ವ್ಯಂಗ್ಯಚಿತ್ರಗಳನ್ನು ರಚಿಸುವ ಕಾರ್ಯ ಮುಂದುವರೆಸಲಿ .....ಈ ದುಷ್ಕೃತ್ಯವನ್ನು ಪ್ರಾಯೋಜಿಸಿದವರು – ಮಾಧ್ಯಮವೃಂದ!
- ಡಾ. ಅಶೋಕ್, ಕೆ, ಆರ್
| ಪ್ರಶಸ್ತಿ ಪಡೆದ ಕೆವಿನ್ ಚಿತ್ರ |
| ಕೆವಿನ್ ಕಾರ್ಟರ್ |
ಅದು
1993ರ ಇಸವಿ. ಧೀರ್ಘಕಾಲೀನ ಬರ ಮತ್ತು ಅಂತರ್ಯುದ್ಧದಿಂದ ಸೂಡಾನ್ ದೇಶ ಬಸವಳಿದಿತ್ತು. ಯು ಎನ್ ನ
ವತಿಯಿಂದ ಕೆವಿನ್ ಕಾರ್ಟರ್ ಎಂಬ ಛಾಯಾವರದಿಗಾರ ಸೂಡಾನ್ ದೇಶದಲ್ಲಿ ಸಂಚರಿಸುತ್ತಿದ್ದ. ಅಲ್ಲಿ ಆತ
ತೆಗೆದ ಒಂದು ಚಿತ್ರಕ್ಕೆ 1994ರಲ್ಲಿ ಪ್ರತಿಷ್ಠಿತ ಪುಲಿಟ್ಜಿರ್ ಪ್ರಶಸ್ತಿ ಲಭಿಸಿತು. ಬರಪೀಡಿತ ಪ್ರದೇಶದ
ಅಪೌಷ್ಟಿಕ ಮಗುವೊಂದು ಆಯಾಸದಿಂದ ತಲೆತಗ್ಗಿಸಿ ಕುಳಿತಿದೆ, ಹಿನ್ನೆಲೆಯಲ್ಲಿ ಆ ಮಗುವಿನ ಸಾವಿಗೆ ಕಾದಿರುವಂತೆ
ರಣಹದ್ದೊಂದು ಕುಳಿತಿರುವ ಚಿತ್ರವದು.
ಜುಲೈ 17, 2012
ಬಡವರ “ಕೊಳಚೆ” ಉಳಿದವರ “ಶುದ್ಧತೆ”
ಸನ್ಮಾನ್ಯ ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳಿಗೆ ಸೆಡ್ಡು ಹೊಡೆಯಲು ಮತ್ತೊಬ್ಬ ಹುಟ್ಟಿದ್ದಾನೆ. ಶ್ರೀಗಳು ಮಾಂಸಾಹಾರಿಗಳ ಪಕ್ಕ ಕುಳಿತು ಊಟ ಮಾಡಿದರೆ ಸಸ್ಯಾಹಾರಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿಬಿಡುತ್ತಾರೆಂದು ಗಾಬರಿಗೊಂಡಿದ್ದರು. ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಷಿಗಳನ್ನೂ ಕೊಟ್ಟಿದ್ದರು. ಇಂದು ಕರ್ನಾಟಕ ಅನುದಾನರಹಿತ ಶಾಲೆಗಳ ಸಂಘ ಕುಸ್ಮಾದ ಅಧ್ಯಕ್ಷ ಜಿ.ಎಸ್. ಶರ್ಮರವರು ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುತ್ತ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧ ಆಗಿರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆಗೆ ಪತ್ರ ಕೇಳುವ ಅಪಾಯವಿದೆ.
