ಡಿಸೆಂ 9, 2017

ಅಕ್ಷರ ಪ್ರೀತಿ ಬೆಳೆಸಿದ ರವಿ ಬೆಳಗೆರೆಯ ನೆನಪಲ್ಲಿ......

ಡಾ. ಅಶೋಕ್.ಕೆ.ಆರ್

ರವಿ ಬೆಳಗೆರೆ ಅರೆಸ್ಟ್ ಎಂಬ ಸುದ್ದಿ ನಿನ್ನೆ ಮಧ್ಯಾಹ್ನದಿಂದ ಟಿವಿ, ಸುದ್ದಿ ಯ್ಯಾಪ್‍ಗಳು, ಎಫ್.ಬಿಯಲ್ಲಿ ರಾರಾಜಿಸಲಾರಂಭಿಸಿದೆ. ರವಿ ಬೆಳಗೆರೆ ಎಂಬ ವ್ಯಕ್ತಿ ಹೊತ್ತು ತಂದ ನೆನಪುಗಳ ಬುತ್ತಿ ಚಿಕ್ಕದಲ್ಲ. 

ಎರಡನೆ ವರ್ಷದ ಪಿ.ಯು.ಸಿಯ ದಿನಗಳವು. ಅವತ್ಯಾವ ಕಾರಣಕ್ಕೋ ನೆನಪಿಲ್ಲ, ಕಾಲೇಜು ಬೇಗ ಮುಗಿದಿತ್ತು. ಮನೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಸ್ಟೇಡಿಯಂ ಬಳಿ ಚೆಂದದ ಚುರ್ಮುರಿ ಮಾಡುತ್ತಿದ್ದ ಗಾಡಿಯ ಬಳಿ ನಿಂತು ಚುರ್ಮುರಿ ತಿನ್ನುವಾಗ ಎದುರುಗಡೆ ನಗರ ಕೇಂದ್ರ ಗ್ರಂಥಾಲಯ ಅನ್ನೋ ಬೋರ್ಡು ಕಾಣಿಸಿತು. ಹುಣಸೂರಿನಲ್ಲಿದ್ದಾಗ ಅಪರೂಪಕ್ಕೆ ಲೈಬ್ರರಿಗೆ ಹೋಗುತ್ತಿದ್ದೆ, ಮಂಡ್ಯದ ಲೈಬ್ರರಿಗಿನ್ನೂ ಕಾಲಿಟ್ಟಿರಲಿಲ್ಲ. ನಡೀ ಲೈಬ್ರರಿಗಾದ್ರೂ ಹೋಗೋಣ ಅಂದ್ಕೊಂಡು ಒಳಗೆ ಕಾಲಿಟ್ಟೆ. ಒಂದಷ್ಟು ದಿನಪತ್ರಿಕೆ ತಿರುವು ಹಾಕಿ, ರೂಪತಾರ ತರಂಗ ಮಂಗಳ ತಿರುವು ಹಾಕಿದ ನಂತರ ಕಣ್ಣಿಗೆ ಬಿದ್ದಿದ್ದು ಕಪ್ಪು ಸುಂದರಿ! ಕೈಗೆತ್ತಿಕೊಂಡ ಮೊದಲ ಟ್ಯಾಬ್ಲಾಯ್ಡ್ ಪತ್ರಿಕೆ ಹಾಯ್ ಬೆಂಗಳೂರ್! ಆ ವಯಸ್ಸಲ್ಲಿ ಪತ್ರಿಕೆಯಲ್ಲಿದ್ದ ಕ್ರೈಂ – ರಾಜಕೀಯ ವರದಿಗಳ ರಂಜನೀಯ ಟೈಟಲ್ಲುಗಳು ಇಷ್ಟವಾಯ್ತೋ, ಖಾಸ್ ಬಾತ್ ಬಾಟಮ್ ಐಟಮ್ ಹಲೋ ಕೇಳಿ ಅನ್ನೋ ಹೆಸರುಗಳು ಇಷ್ಟವಾಯ್ತೋ ಈಗ ನಿರ್ಧರಿಸುವುದು ಕಷ್ಟದ ಕೆಲಸ. ಹೀಗೆ ಶುರುವಾಗಿತ್ತು ಹಾಯ್ ಬೆಂಗಳೂರ್ ಜೊತೆಗಿನ ಒಡನಾಟ.

ಕನ್ಯತ್ವವೂ ಕನ್ಯಾಪೊರೆಯೂ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮೊದಲಿಗೆ ನಿರಂಜನ ವಾನಳ್ಳಿ ಅಂತವರು ಅದರಲ್ಲೂ ಪತ್ರಿಕೋದ್ಯಮದ ಬಗ್ಗೆ ಶಿಕ್ಷಣ ನೀಡುವಂತವರು ಕನ್ಯತ್ವದ ಬಗ್ಗೆ ಮಾತನಾಡಿರುವುದೇ ಅತ್ಯಂತ ಅಸಹ್ಯಕರವಾದ ಮತ್ತು ಅಸಂಗತವಾದ ವಿಚಾರ.

ಅಷ್ಟಕ್ಕೂ ಈ ಕನ್ಯತ್ವಎಂದರೇನು? ಯೋನಿಯೊಳಗಿನ ಕನ್ಯಾಪೊರೆಯನ್ನು ಉಳಿಸಿಕೊಳ್ಳುವುದೇ ಕನ್ಯತ್ವವೇ ವಾನಳ್ಳಿಸರ್?

ಹೆಣ್ಣೊಬ್ಬಳ ಯೋನಿನಾಳದ ಆವರಣದ ತೆಳುವಾದ ಪೊರೆಯನ್ನು ಕನ್ಯಾಪೊರೆ ಎಂದು ಕರೆಯುವುದುಂಟು. ಯಾವತ್ತಿಗೂ ಸಂಭೋಗ ಕ್ರಿಯೆಯಲ್ಲಿ ಬಾಗವಹಿಸದ ಹೆಣ್ಣಿನ ಕನ್ಯಾಪೊರೆ ಹರಿಯುವುದಿಲ್ಲ ಎಂಭ ಭ್ರಮೆಯೊಂದು ಸಮಾಜದಲ್ಲಿ ಬೆಳೆದು ಬಂದಿದೆ.

ನವೆಂ 17, 2017

ಇಂಡಿಯಾದಲ್ಲಿ ಮತೀಯವಾದದ ರಾಜಕಾರಣದ ಬೆಳವಣಿಗೆಗೆ ಕಾರಣವಾದ ಅಂಶಗಳು!

ಕು.ಸ.ಮಧುಸೂದನರಂಗೇನಹಳ್ಳಿ
(ಇಂಡಿಯಾದ ರಾಜಕಾರಣದಲ್ಲಿ ಮತೀಯವಾದವೇನು ಇದ್ದಕ್ಕಿದ್ದಂತೆ ಸೃಷ್ಠಿಯಾಗಿದ್ದಲ್ಲ. ಬದಲಿಗೆ ಎಪ್ಪತ್ತರ ದಶಕದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳು ತೆಗೆದುಕೊಂಡ ತಪ್ಪು ನಿರ್ದಾರಗಳಿಂದಾಗಿ ಮತ್ತು ತದನಂತರದಲ್ಲೂ ಸಿದ್ದಾಂತಕ್ಕಿಂತ ಅಧಿಕಾರವೇ ಮುಖ್ಯ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಮತೀಯವಾದ ಎನ್ನುವುದು ನಿದಾನವಾಗಿ ಇಂಡಿಯಾದ ರಾಜಕಾರಣದಲ್ಲಿ ವಿಷದಂತೆ ತುಂಬಿಕೊಳ್ಳತೊಡಗಿತು. ಇಂದಿನ ಯುವಜನತೆಗೆ ಇದರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದಷ್ಟೆ ಈ ಲೇಖನದ ಉದ್ದೇಶ)

ಅದು ಶಕ್ತಿ ರಾಜಕಾರಣದ ಪಡಸಾಲೆಯೇ ಇರಲಿ, ವಿಚಾರವಂತರು ಮತ್ತು ಪ್ರಗತಿಪರರ ವೈಚಾರಿಕಗೋಷ್ಠಿಗಳಿರಲಿ, ಇಲ್ಲ ಅತಿ ಸಾಮಾನ್ಯಜನರ ಸರಳ ಮಾತುಕತೆಗಳ ಪಟ್ಟಾಂಗದಲ್ಲಿರಲಿ ಒಂದುಮಾತು ಮಾತ್ರ ಪದೆಪದೇ ಪುನರುಚ್ಚರಿಸಲ್ಪಡುತ್ತಿದೆ ಮತ್ತು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗುತ್ತಲಿದೆ: ಅದೆಂದರೆ ಇಂಡಿಯಾದಲ್ಲಿ ಮತಾಂಧ ರಾಜಕಾರಣ ಮೇಲುಗೈ ಸಾದಿಸುತ್ತಿದೆಮತ್ತು ಅದರ ಕಬಂದ ಬಾಹುಗಳು ಈ ನೆಲದ ಬುಡಕಟ್ಟುಜನಾಂಗಗಳನ್ನೂ ಸಹ ಆವರಿಸಿಕೊಳ್ಳುತ್ತಿದೆ ಅನ್ನುವುದಾಗಿದೆ.ನಿಜ ಇವತ್ತು ಮತೀಯ ರಾಜಕಾರಣ ಮಾಡುತ್ತಲೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಾಜಪ ದಿನೇದಿನೇ ತನ್ನ ಶಕ್ತಿಯನ್ನು ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.ಎಂಭತ್ತರ ದಶಕದಲ್ಲಿ ಶುರುವಾದ ಬಾಜಪದ ಕೋಮುರಾಜಕಾರಣವೀಗ ತನ್ನ ಉತ್ತುಂಗ ಸ್ಥಿತಿಯನ್ನು ತಲುಪಿದ್ದು ಈ ನಾಡಿನ ಜಾತ್ಯಾತೀತ ನೇಯ್ಗೆಯನ್ನು ಚಿಂದಿ ಮಾಡಿದೆ ಮತ್ತು ಮಾಡುತ್ತಿದೆ. ಈಹಿನ್ನೆಲೆಯಲ್ಲಿಯೇ ನಾವು ಬಾಜಪ ಹೇಗೆ ಬೆಳೆಯುತ್ತಬಂದಿತು ಮತ್ತು ಹೇಗೆ ತನ್ನ ಮತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಭಾರತೀಯರು ಒಪ್ಪುವಂತೆಮಾಡುವಲ್ಲಿ ಯಶಸ್ವಿಯಾಯಿತು ಎನ್ನುವುದನ್ನು ವಿಶ್ಲೇಷಿಸಿ ನೋಡಬೇಕಿದೆ. 

ಅಮೃತಯಾನ.

ಚಿತ್ರಕಲಾವಿದೆ, ವಿನ್ಯಾಸಕಿ, ರಂಗನಟಿಯಾಗಿದ್ದ ಅಮೃತಾ ರಕ್ಷಿದಿ ತನ್ನ ಬದುಕಿನ ಅನುಭವಗಳನ್ನು "ಅಮೃತ ಯಾನ" ಎಂಬ ಹೆಸರಿನಲ್ಲಿ ಪುಟಗಳ ಮೇಲಿಳಿಸಿದ್ದಾಳೆ. ಆತ್ಮಕತೆ ಬರೆದಾಯ್ತಲ್ಲ ಇನ್ನೇನು ಕೆಲಸ ಎನ್ನುವಂತೆ ತುಂಬಾ ಚಿಕ್ಕ ವಯಸ್ಸಿಗೇ ಅನಾರೋಗ್ಯದಿಂದ ಅಸುನೀಗಿಬಿಟ್ಟಳು ಅಮೃತಾ. ಅವಳ ಅನುಪಸ್ಥಿತಿಯಲ್ಲಿ ಐದು ಸಂಪುಟಗಳ "ಅಮೃತ ಯಾನ" ಇದೇ ಭಾನುವಾರ (19/11/2017) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಬೇಸ್ ಮೆಂಟ್ ಗ್ಯಾಲರಿಯಲ್ಲಿ ಬಿಡುಗಡೆಗೊಳ್ಳಲಿದೆ. ಬಿಡುವು ಮಾಡಿಕೊಂಡು ಬನ್ನಿ. 
ಅಮೃತಯಾನದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ. 

ಅಜ್ಜಮನೆ

ಅಣ್ಣಯ್ಯನಿಗೆ ಅಕ್ಟೋಬರ್ ರಜೆ ಪ್ರಾರಂಭವಾಗಿತ್ತು. ಮಳೆಗಾಲ ಕಳೆದು ಬಿಸಿಲು ಬಂದಿತ್ತು. ಈ ನಡುವೆ ಅಪ್ಪ ದೇವಾಲದ ಕೆರೆಯಲ್ಲಿನ ಕೆಲಸವನ್ನು ಬಿಟ್ಟು ಹಾರ್ಲೆಗೆ ಕೆಲಸಕ್ಕೆ ಸೇರಿದ್ದರು. ಒಮ್ಮೆ ಅಜ್ಜಮನೆಗೆ ಹೋಗಿಬರಬೇಕೆಂದು ಅಮ್ಮ ಅಪ್ಪನಲ್ಲಿ ಹೇಳುತ್ತಿದ್ದುದು ಅಣ್ಣಯ್ಯ ಮತ್ತು ಅಮೃತಾರ ಕಿವಿಗೆ ಬದ್ದಿತ್ತು. ರಜೆ ಬಂದ ಕೂಡಲೇ ಅಣ್ಣಯ್ಯ ಮತ್ತು ಅಮೃತಾ “ಅಮ್ಮ ಅಜ್ಜಮನೆಗೋಗದು ಯಾವಾಗ?” ಎಂದು ಗೋಗರೆಯಲಾರಂಭಿಸಿದರು. ಆದರೆ ಅಮ್ಮ “ಅಪ್ಪನ ಕೇಳ್ಬೇಕಷ್ಟೆ” ಎನ್ನುತ್ತಿದ್ದಳು. ಅಜ್ಜಿಯನ್ನು ಬಿಟ್ಟು ಅಮ್ಮನಿಗೆ ತಕ್ಷಣ ಹೊರಡಲಾಗುತ್ತಿರಲಿಲ್ಲ. ಅಮ್ಮ ಇಲ್ಲದಿದ್ದಾಗ ಒಬ್ಬರೇ ಮನೆಕೆಲಸಗಳನ್ನು ಮಾಡಲು ಅಜ್ಜಿಗೆ ಆಗುತ್ತಿರಲಿಲ್ಲ. ಅಪ್ಪ ಯಾವಾಗಲೂ ಹೊರಗಡೆ ದುಡಿಯಲು ಹೋಗುತ್ತಿದ್ದರು. ಹಾಗಾಗಿ ಅಪ್ಪ ಒಪ್ಪಿದ ಮೇಲೆಯೇ ಅವರೆಲ್ಲರೂ ಹೊರಡುವುದು. ಅಣ್ಣಯ್ಯ ಅಪ್ಪ ಮನೆಯಲ್ಲಿಲ್ಲದಾಗ ಅಮ್ಮನೊಂದಿಗೆ ಹಟ ಮಾಡುತ್ತಿದ್ದ. ಆದರೆ ಅಮೃತಾಳಿಗಾಗಲೀ ಅಣ್ಣಯ್ಯನಿಗಾಗಲೀ ಅಪ್ಪನಲ್ಲಿ ಕೇಳಲು ಧೈರ್ಯವಿರಲಿಲ್ಲ.

ನವೆಂ 14, 2017

ಮತಾಂದರುಗಳನ್ನು ಇಲ್ಲಿಗೆ ಕರೆತನ್ನಿ

ಕು.ಸ.ಮಧುಸೂದನರಂಗೇನಹಳ್ಳಿ
ಒಮ್ಮೆಯಾದರು ಅಲ್ಲಿಗೆ ನಮ್ಮ ಎಲ್ಲ ಧರ್ಮಗಳ ಮತಾಂದರನ್ನು ಕರೆದುಕೊಂಡು ಹೋಗಬೇಕು ಅನಿಸುತ್ತಿದೆ.

ಅದು ಅಷ್ಟೇನೂ ಪ್ರಸಿದ್ದವಲ್ಲದ, ರಾಜ್ಯದ ಭೂಪಟದಲ್ಲಿ ಅಧಿಕೃತವಾಗಿ ಗುರುತಿಸಿಕೊಳ್ಳದ ಪುಟ್ಟ ಊರು! ಹೆಸರು ಹಣೆಗೆರೆ ಕಟ್ಟೆ-ನೀವು ಶಿವಮೊಗ್ಗದಿಂದ ಆಯನೂರಿಗೆ ಹೋಗಿ ಅಲ್ಲಿಂದ ಎಡಕ್ಕೆ ತಿರುಗಿ ಕಾಡಿನೊಳಗೆ ಇಪ್ಪತ್ತು ಕಿಲೊಮೀಟರ್ ಪ್ರಯಾಣ ಮಾಡಿದರೆ ಆ ಊರುಸಿಗುತ್ತದೆ. ಊರಪ್ರವೇಶದಿಂದಲೇ ರಸ್ತೆಯ ಬಲ ಬದಿಯಲ್ಲಿ ಹೂವು, ಹಣ್ಣು,ಕಾಯಿ,

ನವೆಂ 3, 2017

ಗೂಗಲ್ ಮ್ಯಾಪಿಗೆ ಕನ್ನಡದ ಹೆಸರುಗಳನ್ನು ಸೇರಿಸುವ ಬಗೆ || How to add kannada name...









ಪುರುಸೊತ್ತಾದಾಗಲೆಲ್ಲ ಗೂಗಲ್ ಮ್ಯಾಪಿನಲ್ಲಿ ಕನ್ನಡದ ಹೆಸರುಗಳನ್ನು ಸೇರಿಸುತ್ತಾ ಹೋಗಿ. 

ಕನ್ನಡದ ಹೆಸರುಗಳನ್ನು ಮೊಬೈಲಿನಲ್ಲಿ ಸೇರಿಸಲು ಸುಲಭ ವಿಧಾನವನ್ನರಿಯಲು ಈ ವೀಡಿಯೋ ನೋಡಿ 

ಅಕ್ಟೋ 30, 2017

ಸುಡುಗಾಡು ಕವಿತೆಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮರಣಪತ್ರವನ್ನೂ ಕೇಳುತ್ತಿಲ್ಲ
ಸುದೀರ್ಘ ಸಂಜೆಗಳ ಉದ್ದುದ್ದ ನೆರಳುಗಳು
ಅಂಗಳದ ತುಂಬಾ ಹರಡಿಕೊಂಡವು
ಎಲ್ಲಿಂದಲೋ ಸುಟ್ಟವಾಸನೆಯ ಘಮಲು
ಮಧುಬಟ್ಟಲಿಗೆ ಕಾತರಿಸುತಿಹ ಕೆಂಡದ ತುಟಿಗಳು

ಅಕ್ಟೋ 13, 2017

ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.


ಡಾ. ಅಶೋಕ್. ಕೆ. ಆರ್

ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಗುಜರಾತಿನಲ್ಲಿದ್ದಾಗ ಮೇಲ್ನೋಟಕ್ಕೆ ಅಪಹಾಸ್ಯವೆನ್ನಿಸುವ, ರಾಹುಲ್ ಗಾಂಧಿಯ ದಡ್ಡತನವನ್ನು ಎತ್ತಿ ತೋರಿಸುವಂತನ್ನಿಸುವ ಘಟನೆಯೊಂದು ಸಂಭವಿಸಿದೆ. ರಾಹುಲ್ ಗಾಂಧಿ ಮಹಿಳೆಯರ ಟಾಯ್ಲೆಟ್ಟಿನೊಳಗೋಗಿಬಿಟ್ಟಿದ್ದರಂತೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಆ ಮಹಿಳೆಯರ ಟಾಯ್ಲೆಟ್ಟಿನಿಂದ ಹೊರಬರುತ್ತಿರುವ ಚಿತ್ರ ಪ್ರಕಟವಾಗಿದೆ. ಆ ಟಾಯ್ಲೆಟ್ಟಿನ ಬಾಗಿಲಿನ ಮೇಲೆ ‘ಮಹಿಳೆಯರಿಗೆ’ ಎಂದು ಬರೆಯಲಾಗಿದೆ. ರಾಹುಲ್ ಗಾಂಧಿ ಯಾಕದನ್ನು ಗಮನಿಸದೇ ಒಳಹೋದರು? ಯಾಕೆ ಒಳಹೋದರೆಂದರೆ ‘ಮಹಿಳೆಯರಿಗೆ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ರಾಹುಲ್ ಗಾಂಧಿಗೆ ಗುಜರಾತಿ ಓದಲು ಬರುವುದಿಲ್ಲ. ಹೀಗಾಗಿ ಟಾಯ್ಲೆಟ್ಟಿನ ಒಳಹೊಕ್ಕು ಪೇಚಿಗೆ ಸಿಲುಕಿ ನಗೆಪಾಟಲಿಗೀಡಾಗಿದ್ದಾರೆ.

ಅಕ್ಟೋ 12, 2017

ಅವತ್ತೊಂದು ದಿನ.....

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ವರುಷಗಳಿಂದ ನಾನು ತಳವೂರಿದ್ದ ಭೂಮಿಯ ಕಿತ್ತುಕೊಂಡು 
ಏಳಿಸಿದ ನಿನ್ನರಮನೆಯ ಎತ್ತರದ ಪಾಗಾರದ ಗೋಡೆಯ ಮೇಲೆ ಚುಚ್ಚಲ್ಪಟ್ಟ ಗಾಜಿನ ಚೂರುಗಳು ಸಾಲದೆಂಬಂತೆ
ಖಡ್ಘಗಳ ಹಿಡಿದ ಕಾವಲು ಭಟರನ್ನಿಟ್ಟು ಕೊಂಡೆ
ಕೂತಾಗನಿಂತಾಗ ನಡೆಯುವಾಗ ಕೊನೆಗೆ
ಮಲಗುವಾಗಲೂ ಇರಲೆಂದು ಹೇಡಿಯಂತೆ
ಅಂಗರಕ್ಷಕರನ್ನಿಟ್ಟುಕೊಂಡು ಭೋಪರಾಕು ಹಾಕಿಸಿಕೊಂಡೆ.

ಅಕ್ಟೋ 11, 2017

ಈ ಸರ್ಕಾರಿ ಹತ್ಯೆಗಳಿಗೆ ಕೊನೆ ಎಂದು?

ಬೆಂಗಳೂರಿನ ಗುಂಡಿಗಳು.
ಚಿತ್ರ: ರವಿಸೂರ್ಯ ಈಶ್ವರ 
ಡಾ. ಅಶೋಕ್. ಕೆ. ಆರ್.
ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತಷ್ಟು ಬಲಿ ಪಡೆದುಕೊಂಡಿವೆ. ಹುಷಾರು ತಪ್ಪಿದ್ದ ಮೊಮ್ಮಗಳನ್ನು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ಸಾಗುತ್ತಿದ್ದ ದಂಪತಿಗಳು ರಸ್ತೆ ಗುಂಡಿಯ ಸಮೀಪ ವಾಹನದ ವೇಗವನ್ನು ಕಡಿಮೆ ಮಾಡಿದ್ದಷ್ಟೇ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ಸೊಂದು ಅವರ ವಾಹನದ ಮೇಲರಿದು ಇಬ್ಬರೂ ದಂಪತಿಗಳನ್ನು ಬಲಿ ತೆಗೆದುಕೊಂಡಿದೆ. ಅದೃಷ್ಟವಶಾತ್ ಮೊಮ್ಮಗಳು ಬದುಕುಳಿದಿದ್ದಾಳೆ. ಈ ಸಾವಿಗೆ ಹೊಣೆ ಯಾರು? ಪೋಲೀಸರ ಡೈರಿಗಳಲ್ಲಿ, ನ್ಯಾಷನಲ್ ಕ್ರೈಮ್ ಬ್ಯೂರೋದ ದಾಖಲೆಗಳಲ್ಲಿ ಬಸ್ಸು ಚಾಲಕನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಶರಾ ಬರೆಯಲಾಗುತ್ತದೆ. ಬಸ್ಸು ಚಾಲಕನ ಕೆಲಸ ಹೋಗುತ್ತದೆ, ವಿಚಾರಣೆಯ ನಂತರ ಆತನಿಗೊಂದಷ್ಟು ಶಿಕ್ಷೆಯೂ ಆಗಬಹುದು. ಅಥವಾ ಸ್ಕೂಟರಿನವರ ಅಜಾಗರೂಕ ಚಾಲನೆಯಿಂದ ಇದಾಯಿತೇ ಹೊರತು ಬಸ್ಸು ಚಾಲಕನ ತಪ್ಪೇನಿರಲಿಲ್ಲ ಎಂದು ಆತನಿಗೆ ಬಿಡುಗಡೆಯೂ ಸಿಕ್ಕಬಹುದು. ಒಟ್ಟಿನಲ್ಲಿ ಇಬ್ಬರಲ್ಲಿ ಒಬ್ಬ ಚಾಲಕನ ಅಜಾಗರೂಕತೆ ಈ ಅಪಘಾತಕ್ಕೆ ಕಾರಣ ಎಂಬ ಅಭಿಪ್ರಾಯದೊಂದಿಗೆ ವಿಚಾರಣೆ ಮುಗಿಯುತ್ತದೆ. ಆದರದು ಪೂರ್ಣ ಸತ್ಯವೇ?

ಅಕ್ಟೋ 6, 2017

ಕವಿತೆಗಳ ಕೊಂದವರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹಗಲಿಡೀ ಧೇನಿಸಿ ಬರೆದ ಕವಿತೆಗಳು
ನೋವಿನಿಂದ ನರಳಿದ ಸದ್ದು ಕೇಳಿ ಎಚ್ಚರವಾಯಿತು
ನಡುರಾತ್ರಿ ಬರೆಯುವ ಮೇಜಿಗೆ ಬಂದು ಬರೆದಷ್ಟೂ ಹಾಳೆಗಳ
ಕತ್ತಲಲೆ ಸ್ಪರ್ಶಿಸಿದೆ

ಸೆಪ್ಟೆಂ 28, 2017

ತುತ್ತು...

ಈ ಕವಿತೆಯನ್ನು ಈ ಮುಂಚೆ ರಘು ಮಾಗಡಿಯವರು ಹಿಂಗ್ಯಾಕೆಯ ಮಿಂಚೆಗೆ ಕಳುಹಿಸಿದ್ದರು. ಅವರು ಈ ಮುಂಚೆಯೂ ಕೆಲವು ಕವಿತೆಗಳನ್ನು ಕಳುಹಿಸಿದ್ದರು, ಅದನ್ನು ಹಿಂಗ್ಯಾಕೆಯಲ್ಲಿ ಪ್ರಕಟಿಸಲಾಗಿತ್ತೂ ಕೂಡ. ಇತ್ತೀಚೆಗೆ ಗೀತಾ ಹೆಗ್ಡೆಯವರು ಫೇಸ್ಬುಕ್ಕಿನಲ್ಲಿ ಈ 'ತುತ್ತು' ಕವಿತೆಯು ತಮ್ಮದೆಂದು ಹಾಗೂ ರಘು ಮಾಗಡಿಯವರು ತಮ್ಮ ಕವಿತೆಯನ್ನು ಕದ್ದು ಬಳಸಿಕೊಂಡಿದ್ದರೆಂದು ಆರೋಪಿಸಿದ್ದರು. ಗೀತಾರವರ ಆರೋಪದ ಬಗ್ಗೆ ರಘು ಮಾಗಡಿಯವರಲ್ಲಿ ವಿಚಾರಿಸಲಾಗಿ 'ನಾನು ಅವರಲ್ಲಿ ಕ್ಷಮೆ ಕೇಳಿದ್ದೇನೆ, ಆದರೂ ಅವರು ನನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ' ಎಂದು ಹೇಳಿದರೇ ಹೊರತು ಕವಿತೆ ಅವರದ್ದಾ ಅಥವಾ ತಾವೇ ರಚಿಸಿದ್ದಾ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆ ಕೊಡಲೇ ಇಲ್ಲ. ಕದ್ದ ಕವಿತೆಯೊಂದನ್ನು ಪ್ರಕಟಿಸಿದ್ದಕ್ಕೆ ಹಿಂಗ್ಯಾಕೆ ವಿಷಾದಿಸುತ್ತದೆ. ಈ ಕವಿತೆಯ ಲೇಖಕಿಯ ಕ್ಷಮೆ ಕೇಳುತ್ತದೆ. ಹಿಂಗ್ಯಾಕೆಯಲ್ಲಿ ಪ್ರಕಟವಾಗಿರುವ ರಘು ಮಾಗಡಿಯವರ ಇನ್ನಿತರೆ ಕವಿತೆಗಳನ್ನು ತೆಗೆದುಹಾಕಲಾಗುತ್ತದೆ. ಇದೊಂದು ಕವಿತೆಯನ್ನು ಗೀತಾ ಹೆಗ್ಡೆಯವರ ಕ್ಷಮೆ ಕೇಳುವ ಸಲುವಾಗಿ ಉಳಿಸಿಕೊಳ್ಳಲಾಗಿದೆ. ಅಂತರ್ಜಾಲದ ಯುಗದಲ್ಲಿ ಕದಿಯುವಿಕೆ ಸುಲಭದ ಕೆಲಸ. ಆದರೆ ಮನಸ್ಸಾಕ್ಷಿ ಇರುವ ಬರಹಗಾರರ್ಯಾರು ಆ ಕೆಲಸವನ್ನು ಮಾಡಬಾರದು. ಕದ್ದ ಲೇಖಕರದು ಎಷ್ಟು ತಪ್ಪೋ ಕದ್ದ ಕವಿತೆಯನ್ನು ಪ್ರಕಟಿಸಿದ್ದು ಅಷ್ಟೇ ದೊಡ್ಡ ತಪ್ಪು. ಇನ್ನೊಮ್ಮೆ ಇಂಥಹ ತಪ್ಪುಗಳಾಗದಂತೆ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಲಾಗುವುದು - ಹಿಂಗ್ಯಾಕೆ. 
ಗೀತಾ ಹೆಗ್ಡೆ.
ಬೀದಿ ಬದಿ ಆಯ್ದ ಹೊಲಿದ ದೊಡ್ಡ ಚೀಲ
ತನಗಿಂತ ದೊಡ್ಡದೆಂಬ ಪರಿವೆ
ಎಂದೂ ಕಂಡಿಲ್ಲ ಅವರಿಗಿಲ್ಲದರ ಚಿಂತೆ.

ರಣ ಹದ್ದಿನ ತೆರದಿ ಬಿಟ್ಟ ಕಣ್ಣೆರಡು
ಬೀದಿ ಬದಿ ಹುಡುಕುತ್ತ ಸಾಗುವರು
ನಾಳಿನ ಆಗು ಹೋಗುಗಳ ಮರೆತು
ದಿಕ್ಕು ದೆಸೆಯಿಲ್ಲದೆ ನಡೆಯುವವರು.

ನಾನೀಗ ಮಾತನಾಡಲೇಬೇಕಿದೆ: ಯಶವಂತ್ ಸಿನ್ಹಾ

ಯಶವಂತ್ ಸಿನ್ಹಾ
ಬಿಜೆಪಿ ಸದಸ್ಯ, ಮಾಜಿ ಹಣಕಾಸು ಸಚಿವ. 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್ 
ನಮ್ಮ ಹಣಕಾಸು ಸಚಿವರು ದೇಶದ ಆರ್ಥಿಕತೆಯನ್ನು ಗಬ್ಬೆಬ್ಬಿಸಿಬಿಟ್ಟಿರುವುದರ ಬಗ್ಗೆ ನಾನು ಈಗಲೂ ಮಾತನಾಡದೇ ಹೋದರೆ ದೇಶದೆಡೆಗಿನ ನನ್ನ ಕರ್ತವ್ಯಕ್ಕೆ ದ್ರೋಹ ಬಗೆದಂತೆ. ನಾನೀಗ ಹೇಳಲೊರಟಿರುವ ವಿಷಯವು ಬಿಜೆಪಿಯ ಬಹಳಷ್ಟು ಜನರ ಅಭಿಪ್ರಾಯವು ಹೌದು, ಆದರವರು ಭೀತಿಯ ಕಾರಣದಿಂದಾಗಿ ಮಾತನಾಡುತ್ತಿಲ್ಲ ಅಷ್ಟೇ.

ಈ ಸರಕಾರದಲ್ಲಿ ಅರುಣ್ ಜೇಟ್ಲಿಯವರನ್ನು ಅತ್ಯುತ್ತಮ ಮಂತ್ರಿ ಎಂದು ಪರಿಗಣಿಸಲಾಗಿದೆ. ೨೦೧೪ರ ಚುನಾವಣೆ ನಡೆಯುವುದಕ್ಕೆ ಮೊದಲೇ ಹೊಸ ಸರ್ಕಾರದಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗುತ್ತಾರೆನ್ನುವುದು ನಿರ್ಧಾರವಾಗಿಬಿಟ್ಟಿತ್ತು. ಅವರು ಅಮೃತಸರದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಅವರ ಮಂತ್ರಿ ಪದವಿಗೆ ಅಡ್ಡಿಯಾಗಲಿಲ್ಲ. ಇದೆ ರೀತಿಯ ಪರಿಸ್ಥಿತಿ ೧೯೯೮ರಲ್ಲೂ ಉಂಟಾಗಿತ್ತು. ಆಗ ಚುನಾವಣೆ ಸೋತಿದ್ದ ಜಸ್ವಂತ್ ಸಿಂಗ್ ಮತ್ತು ಪ್ರಮೋದ್ ಮಹಾಜನ್ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹತ್ತಿರದವರಾಗಿದ್ದರೂ ಕೂಡ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಆದರೆ ಅರುಣ್ ಜೇಟ್ಲಿಯವರ ವಿಷಯದಲ್ಲಿ ಇದಾಗಲಿಲ್ಲ. ಬದಲಿಗೆ ಪ್ರಧಾನ ಮಂತ್ರಿಯವರು ಅರುಣ್ ಜೇಟ್ಲಿಯವರಿಗೆ ಹಣಕಾಸು ಸಚಿವಾಲಯದ ಜೊತೆಗೆ, ಡಿಸ್ ಇನ್ವೆಸ್ಟ್ಮೆಂಟ್, ರಕ್ಷಣೆ ಮತ್ತು ಕಾರ್ಪೊರೇಟ್ ಕಾರುಬಾರಿನ ಸಚಿವಾಲಯವನ್ನೂ ನೀಡಿದರು. ಒಂದೇ ಏಟಿಗೆ ಒಟ್ಟು ನಾಲ್ಕು ಸಚಿವಾಲಯಗಳನ್ನು ಪಡೆದುಕೊಂಡರು. ಈಗಲೂ ಅವರ ಬಳಿ ಮೂರೂ ಖಾತೆಗಳಿವೆ. ನಾನೂ ಕೂಡ ಹಣಕಾಸು ಸಚಿವನಾಗಿದ್ದವನು. ಆ ಸಚಿವಾಲಯದಲ್ಲಿ ಎಷ್ಟು ಶ್ರಮ ಬೀಳಬೇಕೆನ್ನುವುದು ನನಗೆ ಗೊತ್ತಿದೆ. ಹಣಕಾಸು ಸಚಿವಾಲಯ ಸರಿಯಾಗಿ ಕಾರ್ಯನಿರ್ವಹಿಸಲು ಅದರ ಸಚಿವರು ತಮ್ಮೆಲ್ಲ ಗಮನವನ್ನು ಅತ್ತಲೇ ಕೇಂದ್ರೀಕರಿಸಬೇಕಾದ ಅವಶ್ಯಕತೆಯಿದೆ. ಸವಾಲಿನ ಸಮಯದಲ್ಲಿ ಇಲ್ಲಿನದು ೨೪/೭ ಗಿಂತಲೂ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ಎಂದರದು ಅತಿಶಯೋಕ್ತಿಯೇನಲ್ಲ. ಸಹಜವಾಗಿ, ಜೇಟ್ಲಿಯಂತಹ ಸೂಪರ್ ಮ್ಯಾನ್ ಕೂಡ ಈ ಕಾರ್ಯದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. 

ಸೆಪ್ಟೆಂ 22, 2017

ಸಾಕಾಗುವುದಿಲ್ಲ ಮೂರು ಗುಂಡುಗಳು!

ಕು.ಸ.ಮಧುಸೂದನ್
ಮೊದಲ ಗುಂಡು ಬಿದ್ದಾಗ
ಅದರ ಶಬ್ದಕ್ಕೆ ಎದೆ ನಡುಗಿತು!

ಎರಡನೆ ಗುಂಡು ಬಿದ್ದಾಗ
ಹೃದಯದಿಂದ ರಕ್ತ ಹೊರಚಿಮ್ಮಿತು!

ಆಗ 27, 2017

ಕೃಷಿ-ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣಸಂಸ್ಥೆಗಳ ಪ್ರವೇಶ ಬೇಡ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೃಷಿಕ್ಷೇತ್ರ ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸದರಿ ಬಿಕ್ಕಟ್ಟುಗಳಿಗೆ ಕಾರಣವಾದ ಅಂಶಗಳನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾದ ಸರಕಾರಗಳು ತಮ್ಮ ಖಾಸಗೀಕರಣದ ನೀತಿಯನ್ನುಕೃಷಿಕ್ಷೇತ್ರಕ್ಕೂ ಅನ್ವಯಿಸುವ ಭರದಲ್ಲಿ, ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲು ಹೊರಟಿರುವಂತೆ ಕಾಣುತ್ತಿದೆ. ಇದುವರೆಗೂ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದ ಕೃಷಿ ಶಿಕ್ಷಣವನ್ನು ನೀಡುವ ಕಾಲೇಜುಗಳನ್ನು ಪ್ರಾರಂಭಿಸಲು ಖಾಸಗಿ ಕ್ಯಾಪಿಟೇಶನ್ ಕುಳಗಳಿಗೆ ಅನುಮತಿ ನೀಡುವಬಗ್ಗೆ ಚಿಂತನೆ ನಡೆಸುತ್ತಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಈಗಾಗಲೆ ಬಡವರ ಕೈಗೆಟುಕದಷ್ಟು ದುಬಾರಿಯಾಗಿರುವಾಗ ಬಹುತೇಕ ಗ್ರಾಮೀಣ ಭಾಗದ ರೈತರ ಮಕ್ಕಳು ಕಡಿಮೆವೆಚ್ಚದಲ್ಲಿ ಪಡೆಯುತ್ತಿದ್ದ ಕೃಷಿಸಂಬಂದಿತ ಶಿಕ್ಷಣವೂ ಈಗ ಅದೇ ಸಾಲಿಗೆ ಸೇರುವತ್ತ ಸಾಗಿದೆ.

ಆಗ 16, 2017

ಸ್ಪಷ್ಟ ನಿಲುವೊಂದನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಜಾತ್ಯಾತೀತ ಜನತಾದಳ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಿಹಾರದಲ್ಲಿನ ಮಹಾಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ಬಾಜಪ ನೇತೃತ್ವದ ಎನ್.ಡಿ.ಎ.ಜೊತೆ ಸೇರಿ ಸರಕಾರ ರಚಿಸಿದ ಮೇಲೆ ರಾಷ್ಟ್ರಮಟ್ಟದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಕೂಟವೊಂದರ ರಚನೆಯ ಕನಸು ಮೇಲ್ನೋಟಕ್ಕಂತು ಕರಗಿಹೋಗಿದೆ. ಇಂತಹ ಗಾಡಾಂಧಕಾರದಲ್ಲಿ ಮುಳುಗಿರುವ ಕಾಂಗ್ರೇಸ್ಸೇತರ ವಿರೋಧಪಕ್ಷಗಳ ಸ್ಥಿತಿ ಕರುಣಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕನರ್ಾಟಕದಲ್ಲಿನ ಶ್ರೀ ದೇವೇಗೌಡರ ನೇತೃತ್ವದ 'ಜಾತ್ಯಾತೀತಜನತಾದಳ' ಒಂದೇ ಕನಿಷ್ಠ ನಮ್ಮ ರಾಜ್ಯದ ಮಟ್ಟಗಾದರೂ ಬಾಜಪವನ್ನು ದೃಢವಾಗಿ ನಿಂತು ಎದುರಿಸಬಲ್ಲಂತಹ ಶಕ್ತಿಯನ್ನು ಹೊಂದಿರುವಂತೆ ಕಾಣುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ನಾವು ಉಳಿದ ವಿರೋಧಪಕ್ಷಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿನೋಡಬೇಕಾಗಿದೆ:

ಜುಲೈ 31, 2017

ಬಾಜಪದ ಬಾಹುಗಳಿಗೆ ಮರಳಿದ ನಿತೀಶ್ ಕುಮಾರ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನಿತೀಶ್ ಕುಮಾರ್ ದಿಡೀರ್ ರಾಜೀನಾಮೆ! 

ಮಹಾಘಟಬಂದನ್ ಮುರಿದುಕೊಂಡ ನಿತೀಶ್! 

ಇಂತಹ ತಲೆಬರಹಗಳು ಆದಷ್ಟು ಬೇಗ ಬಂದರೆ ಅಚ್ಚರಿಯೇನಿಲ್ಲ ಎಂದು ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಾನು ಬರೆದಿದ್ದೆ. ಅದೀಗ ನಿಜವಾಗಿದೆ. ರಾಷ್ಟ್ರೀಯ ಜನತಾದಳದ ನಾಯಕ ಶ್ರೀ ಲಾಲೂ ಪ್ರಸಾದ್ ಯಾದವರ ಪುತ್ರರೂ, ಬಿಹಾರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿಯಾದವರ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ನೆಪಮಾಡಿಕೊಂಡ ನಿತೀಶ್ ಬುದವಾರ ಸಂಜೆ ರಾಜಿನಾಮೆ ನೀಡಿದ್ದಾರೆ. ಮತ್ತು ನಾವು ನಿರೀಕ್ಷಿಸಿದಂತೆಯೇ ಬಾಜಪದ ಜೊತೆ ಸೇರಿ ಇಪ್ಪತ್ನಾಲ್ಕು ಗಂಟೆಯ ಒಳಗೆಯೇ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

ನಿತೀಶರ್ ಈ ಕ್ರಮದ ಹಿಂದಿರುವುದು ತೇಜಸ್ವಿ ಯಾದವರ ಮೇಲಿನ ಆರೋಪಗಳಷ್ಟೇ ಕಾರಣವೇನಲ್ಲ. ಬದಲಿಗೆ ಮೈತ್ರಿ ಮುರಿದುಕೊಳ್ಳಲು ವರ್ಷದ ಹಿಂದೆಯೇ ನಿರ್ದರಿಸಿದ್ದ ನಿತೀಶರ ನಡೆಯ ಹಿಂದೆ ಅವರ ಮತ್ತು ಬಾಜಪದ ದೀರ್ಘಕಾಲೀನ ಪಿತೂರಿಯೊಂದಿದೆ. ಅದನ್ನೀಗ ನಾವು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. 

ಮೇ 25, 2017

ಭಗ್ನಗೊಂಡ ಕೋಟ್ಯಾಂತರ ಜನರ ಪರ್ಯಾಯ ರಾಜಕಾರಣದ ಕನಸು!

ಕು.ಸ,ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದ ಕೋಟ್ಯಾಂತರ ಜನರ ಕನಸುಗಳು ಒಂದೇ ದಿನದಲ್ಲಿ ಛಿದ್ರಗೊಂಡಿವೆ!

ಹೌದು,ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಮೇಲೆ ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮತ್ತು ಸುಳ್ಳು ಕಂಪನಿಗಳ ಮೂಲಕ ಹವಾಲ ಹಣಕಾಸು ವ್ಯವಹಾರ ನಡೆಸಿದ ಆರೋಪ ಹೊರಬೀಳುತ್ತಲೇ ಜನತೆಯಲ್ಲಿ ಭ್ರಮನಿರಸನದ ನಿಟ್ಟುಸಿರು ಕೇಳಿ ಬರುತ್ತಿದೆ. ಯಾಕೆಂದರೆ ಭಾರತೀಯರ ಮಟ್ಟಿಗೆ, ಅದರಲ್ಲೂ ಇಂದಿನ ಅಕ್ಷರಸ್ಥ ಯುವಪೀಳಿಗೆಯ ಪಾಲಿಗೆ ಆಮ್ ಆದ್ಮಿ ಪಕ್ಷ ಕೇವಲ ಒಂದು ರಾಜಕೀಯ ಪಕ್ಷ ಮಾತ್ರವಾಗಿರಲಿಲ್ಲ. ಈ ನಾಡಿನಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ರಾಜಕಾರಣ ಮಾಡುತ್ತ ಬರುತ್ತಿದ್ದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ನಿಂತ ಪರ್ಯಾಯ ರಾಜಕಾರಣದ ಒಂದು ಆಯುಧವಾಗಿತ್ತು.

ಮೇ 13, 2017

ಮೇ 9, 2017

ಮುದ್ದು ಮನವೇ ಬುದ್ದಿ ಮಾತು ಕೇಳು.....

ಸವಿತ ಎಸ್ ಪಿ
ಹೇಳು ಮನವೇ....‌?ಯಾಕೀ ಪರಿ ಪರಿತಾಪ....! ಭಾವತಂತುವಿನೊಂದು ಕೊಂಡಿ ಕಳಚಿದಂತೆ.....ಏನೀ ಕಸಿವಿಸಿ...? ಬೊಗಸೆಯಷ್ಟು ಪ್ರೀತಿ ಬಯಸುವೆಯಾದರೂ ಯಾಕೆ....? ಅಣುವಿನಷ್ಟು ದೊರಕಲಿಲ್ಲವೆಂಬ ಕೊರಗೇಕೇ‌..? ನೋವ ಅಲೆ ಅಲೆ ನಿನ್ನೊಡಲಿಗೆ ಅಪ್ಪಳಿಸಿತೆಂದು ಭೋರಿಡುವೆಯೇಕೆ.....?

ಯಾಕೀ ನಿರೀಕ್ಷೆ.....? ಇದು ಸಾಧುವೇ....ಯಂತ್ರ ತಾಂತ್ರಿಕತೆಯ ಹುಚ್ಚು ಹಚ್ಚಿಸಿಕೊಂಡಿರುವ ಜಗದ ಜನರ ನಾಗಾಲೋಟದ ವೇಗಕೆ ನೀನೇಕೆ ಓಡದೆಯೇ ಸೋತೆ....? ಗೆಲ್ಲುವ ಹಂಬಲದ ಕುದುರೆಯನೇಕೇ ಹತ್ತದೇ ಹೋದೇ....?

ಮೇ 5, 2017

ಕಾವೇರಿ

ಸವಿತ ಎಸ್ ಪಿ
ಭೂಮಾಲೀಕರ ನಿರ್ಲಕ್ಷ್ಯ 
ಬೇಜವಾಬ್ದಾರಿ.., ಮಿತಿ ಮೀರಿ....
ಆಡಾಡಿ ನಲಿಯುತ್ತಿದ್ದ
ಮುದ್ದು ಕಾವೇರೀ.....
ಬಿದ್ದೆಯೆಲ್ಲ ಬಾಯ್ತೆರೆದ
ಕೊಳವೆ ಬಾವಿಗೆ ಜಾರಿ....!!

ಮೇ 2, 2017

ಮೃತ್ಯು ಕೂಪಗಳಾಗುತ್ತಿರುವ ತೆರೆದ ಕೊಳವೆಬಾವಿಗಳಿಗೊಂದು ಕಠಿಣ ಕಾಯ್ದೆಯ ಅಗತ್ಯ

ಸಾಂದರ್ಭಕ ಚಿತ್ರ 
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಗಾಗ ತೆರದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇವೆ. ಇಂತಹ ಪ್ರತಿ ಘಟನೆ ನಡೆದಾಗಲೂ ಜನ ಸರಕಾರಗಳ ವಿರುದ್ದ ಪ್ರತಿಭಟಿಸುವುದು, ಸರಕಾರಗಳು ಕೊಳವೆಬಾವಿಗಳಿಗೆ ಸಂಬಂದಿಸಿದಂತೆ ಒಂದಷ್ಟು ನೀತಿಗಳನ್ನು ರೂಪಿಸುವುದಾಗಿ ಹೇಳುವುದು ನಡೆದೆ ಇದೆ. 

ಆದರೆ ಸರಕಾರ ರೂಪಿಸಿರುವ ಯಾವ ನೀತಿಗಳೂ ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಯಾವುದೇ ಇಚ್ಚಾಶಕ್ತಿ ಇರದೆ ರೂಪಿಸಿದ ನೀತಿನಿಯಮಗಳಿಂದ, ಕಾನೂನುಗಳಿಂದ ಇಂತಹ ಅಪಘಾತಗಳನ್ನು ತಡೆಯಲು ಸಾದ್ಯವಿಲ್ಲ. ಹಾಗಾಗಿ ಕೆಲವಾದರು ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಭವಿಷ್ಯದಲ್ಲಿಯಾದರು ಇಂತಹ ಅನಾಹುತಗಳನ್ನು ನಿಯಂತ್ರಿಸ ಬಹುದಾಗಿದೆ. 

ಏಪ್ರಿ 28, 2017

ಮೇ ಸಾಹಿತ್ಯ ಮೇಳ

ಫ್ಯಾಸಿಸಂ ಚಹರೆಗಳು : ಅಪಾಯ-ಪ್ರತಿರೋಧ

೨೦೧೭, ಮೇ ೬ ಮತ್ತು ೭
ಆಲೂರು ವೆಂಕಟರಾವ್ ಸಭಾ ಭವನ, ಧಾರವಾಡ


ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ, ಧಾರವಾಡ


ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೧೫

ಉದ್ಘಾಟನೆ: ಗೀತಾ ಹರಿಹರನ್, ಇಂಡಿಯನ್ ರೈಟರ‍್ಸ್ ಫೋರಂ ಅಧ್ಯಕ್ಷೆ, ದೆಹಲಿ
ಮುಖ್ಯ ಅತಿಥಿಗಳು:
ಮದಿವಣ್ಣನ್, ಕವಿ, ವಿಮರ್ಶಕ, ಈರೋಡು
ಕೆ ನೀಲಾ, ಕಲಬುರಗಿ
ಸಮನ್ವಯ: ಪ್ರೊ. ಅರವಿಂದ ಮಾಲಗತ್ತಿ, ಮೈಸೂರು 
          
ಗೌರವ ಉಪಸ್ಥಿತಿ: ಪ್ರೊ. ಶಿವರುದ್ರ ಕಲ್ಲೋಳಿಕರ, ಎನ್. ಡಿ. ವೆಂಕಮ್ಮ, ವಿಠ್ಠಪ್ಪ ಗೋರಂಟ್ಲಿ, ಅಶೋಕ ಬರಗುಂಡಿ, ಕೆ. ಎನ್. ದೊಡಮನಿ, ರವಿ ನಾಯ್ಕರ
 
ಸಂಯೋಜನೆ : ಡಾ. ಎಚ್. ಎಸ್. ಅನುಪಮಾ

ಮುಸ್ಲಿಂ ಯುವ ಸಮಾವೇಶ

ಅನುಮಾನಿತ, ಅವಮಾನಿತ ಸಮುದಾಯದ ನೋವು ನಲಿವುಗಳ ಕುರಿತು ಚರ್ಚೆ, ಸಂವಾದ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ಮುಸ್ಲಿಂ ಸಮುದಾಯ ಇಂದು ಬಹುದೊಡ್ಡ ಬಿಕ್ಕಟ್ಟಿಗೆ, ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯ ಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ. 

ಏಪ್ರಿ 18, 2017

ಖೋಡಿ ಮನ

ಸವಿತ ಎಸ್ ಪಿ
ನಿನ್ನ ಕಿರುನಗೆಯ ಸುಳಿಯಿಂದ ಹೊರ ಬಂದು
ಎಲ್ಲ ಭಾವಗಳ ಬಚ್ಚಿಟ್ಟು ನಾನು ನೀನು ದ್ವೀಪಗಳಂತೆ, 
ಅಪರಿಚಿತರಂತೆ ಸೋಗು ಹಾಕಿ ಬದುಕುವುದೊಂದು 
ಸಂಘರ್ಷವಲ್ಲದೇ ಮತ್ತೇನೋ ಹುಡುಗಾ...!

ಹೀಗೊಂದು ಪತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರೀತಿಯ ಕೆ,

ಮೊನ್ನೆ ನೀವೆಲ್ಲ ಮಾತಾಡಿದ ಪರ್ಯಾಯ ರಾಜಕಾರಣದ ಮಾತುಗಳನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಕೇಳಿಸಿಕೊಂಡೆ. ಬಹಳ ವಿದ್ವತ್ ಪೂರ್ಣವಾದ ಆ ಮಾತುಗಳನ್ನು, ಅದರಲ್ಲಿದ್ದ ಸಮರ್ಥನೀಯ ಗುಣವನ್ನು ಅಲ್ಲಗೆಳೆಯಲು ಸಾದ್ಯವೇ ಇಲ್ಲವಾದರೂ ಆ ಕ್ಷಣಕ್ಕೆ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತು ನಿಜ. ಆದರೆ ಆ ಪ್ರಶ್ನೆಗಳಿಗೆ ಒಂದು ಸ್ಪಷ್ಟರೂಪ ಬರಲು ಒಂದಷ್ಟು ದಿನಗಳೇ ಬೇಕಾಗಿದ್ದು, ಇದೀಗ ಆ ಪ್ರಶ್ನೆಗಳನ್ನು ನಿನಗೆ ಕೇಳುತ್ತಿರುವೆ. ನಿಮ್ಮ ಬದ್ದತೆಯನ್ನಾಗಲಿ, ನೀವು ನಡೆಯಹೊರಟಿರುವ ಹಾದಿಯ ಬಗ್ಗೆಯಾಗಲಿ ನನಗೆ ಕಿಂಚಿತ್ತೂ ಅನುಮಾನವಿಲ್ಲ ಮತ್ತು ಅಸಹನೆಯೂ ಇಲ್ಲ. 

ಏಪ್ರಿ 5, 2017

ಒಂದು ಕತೆ....

ಎಸ್. ಅಭಿ ಗೌಡ, ಹನಕೆರೆ.
ಕಳ್ಳ ಸಂಬಂಧಗಳ ಸಿಗ್ನಲ್‍ಗಳು ನೈತಿಕ ಸಂಬಂಧಗಳ ಸಿಗ್ನಲ್‍ಗಳಿಗಿಂತ ಸೂಕ್ಷ್ಮ. ರೂಮಿನೊಳಗೆ “ಯಾ ಆಲಿ” ಹಾಡು ಅಷ್ಟು ಜೋರಾಗಿ ಮೊಳಗುತ್ತಿತ್ತು, ಸ್ನೇಹಿತರೆಲ್ಲ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದದ್ದು ಮಾತ್ರವಲ್ಲ ಪೂರ್ಣನೂ ಕುಡಿದು ಕುಣಿಯುತ್ತಿದ್ದ. ಆರ್.ಎಕ್ಸ್100 ಬೈಕಿನ ಹಾರ್ನ್ ಒಂದು ಬಾರಿ ಆಗುತ್ತಿದ್ದಂತೆ ಹಾಗೆ ರೂಮಿನಿಂದ ಹೊರಬಂದ ಪೂರ್ಣ ಕತ್ತಲಲ್ಲಿ ಆರ್.ಎಕ್ಸ್ 100 ಏರಿ ಹೊರಟುಹೋದ. ಸಮಯ ರಾತ್ರಿ 10:45. ಯಾರು ಕೂಡ ಅಷ್ಟೊತ್ತು ರಾತ್ರಿಯಲ್ಲಿ ಆರ್.ಎಕ್ಸ್100 ಬೈಕಲ್ಲಿ ಅಲ್ಲಿ ಬಂದು ಪೂರ್ಣನನ್ನು ಕರೆದುಕೊಂಡು ಹೋಗಿದ್ದು ಸುಂದರವಾದ ಹುಡುಗಿಯೆಂದು ಊಹಿಸಲು ಸಾಧ್ಯವಿಲ್ಲ, ಆಕೆ ಎಷ್ಟು ಸುಂದರಿಯೆಂದರೆ ಬೈಕ್ ಹತ್ತಿದ ಮರುಕ್ಷಣವೇ ಹೆಲ್ಮೆಟ್ ತೆಗೆದು ಮುತ್ತಿಕಲು ಆತುರ ಪಡುತ್ತಿದ್ದ ಪೂರ್ಣ.

ಏಪ್ರಿ 4, 2017

ಗದ್ದರ್ ನೆನಪಲ್ಲೊಂದು ಗೆಳೆಯರ ಕತೆ......

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಗದ್ದರ್!
ಗದ್ದರ್ !!
ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಿರುವ ಗದ್ದರ್ ಇಷ್ಟು ವರ್ಷಗಳ ಕಾಲ ತಾವು ನಂಬಿಕೊಂಡಿದ್ದ ಮಾರ್ಕ್ಸ್ ವಾದವನ್ನು ಹಾಡುನೃತ್ಯಗಳ ಮೂಲಕ ಜನರಿಗೆ ಅದರಲ್ಲಿಯೂ ತಳ ಸಮುದಾಯಗಳ ಯುವಕರಿಗೆ ತಲುಪಿಸುತ್ತಿದ್ದ ಕ್ರಾಂತಿಕಾರಿ ನಾಯಕ. ಇದೀಗ ಇಂತಹ ಗದ್ದರ್ ಪುರೋಹಿತರ ಪಾದದ ಬಳಿ ಮಂಡಿಯೂರಿ ಕುಳಿತು ಪೂಜೆ ಸಲ್ಲಿಸಿದ ಬಗ್ಗೆ ಪರವಿರೋಧಗಳ ಚರ್ಚೆ ಬಿರುಸಿನಿಂದ ನಡೆಯುತ್ತಿದೆ.

ಯಾಕೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ಹೀಗೆ ಬದಲಾಗಿ ಬಿಡುತ್ತಾನೆ? ಅಥವಾ ನಾವು ಅಂದುಕೊಳ್ಳುವ ಆ ‘ಇದ್ದಕ್ಕಿದ್ದಂತೆ’ ಎಂಬುದು ಆ ವ್ಯಕ್ತಿಯ ಒಳಗೆ ವರುಷಗಳಿಂದ ನಡೆಯುತ್ತಿದ್ದ ತಳಮಳಗಳ ಪ್ರತಿಫಲವೇ ಎಂಬುದನ್ನು ಯೋಚಿಸಲೂ ಕಾಯದೆ ತತ್ ಕ್ಷಣದ ಪ್ರತಿಕ್ರಿಯೆ ನೀಡುವ ಭರದಲ್ಲಿ ನಾವು ಎಡವುತ್ತಿದ್ದೇವೆಯೇ? ಗೊತ್ತಿಲ್ಲ!

ಹೇ ಹುಡುಗಿ.

ನಾಗಪ್ಪ.ಕೆ.ಮಾದರ
ಹೇ ಹುಡಗಿಯೇ
ಕೇಳು ನನ್ನ ಪ್ರೀತಿಯ
ಮಧುರ ಆಪಾಪನೆಯನು!

ಮಾರ್ಚ್ 29, 2017

ಮಾಧ್ಯಮಗಳನ್ನು ನಿಯಂತ್ರಿಸುವುದು ಸರಿಯೇ?

ಡಾ. ಅಶೋಕ್. ಕೆ. ಆರ್.
ಇತ್ತೀಚೆಗೆ ಕರ್ನಾಟಕದ ಉಭಯ ಸದನಗಳಲ್ಲಿ ಮಾಧ್ಯಮದ, ಅದರಲ್ಲೂ ದೃಶ್ಯ ಮಾಧ್ಯಮದವರ ಅತಿಗಳ ಬಗ್ಗೆ ನಾಲ್ಕು ಘಂಟೆಗಳಷ್ಟು ಸುದೀರ್ಘ ಅವಧಿಯವರೆಗೆ ಚರ್ಚೆಗಳಾಗಿತ್ತು. ವೈಯಕ್ತಿಕ ಅವಹೇಳನ, ವ್ಯಕ್ತಿಗತ ಟೀಕೆಗಳ ಬಗ್ಗೆ ಬಹಳಷ್ಟು ಸದಸ್ಯರು ಬೇಸರ, ಕೋಪ ವ್ಯಕ್ತಪಡಿಸಿದ್ದರು. ಮಾಧ್ಯಮಗಳನ್ನು ನಿಯಂತ್ರಿಸಬೇಕು, ವೈಯಕ್ತಿಕ ತೇಜೋವಧೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದರು. ವರದಿ ಮಾಡಲು ಸದನ ಸಮಿತಿ ರಚಿಸಲಾಗುತ್ತದೆ ಎಂದು ಸ್ಪೀಕರ್ ಕೋಳಿವಾಡರು ತಿಳಿಸಿದ್ದರು. ಅಂದು ಮಾಧ್ಯಮದ ವಿರುದ್ಧ ನಡೆದ ಚರ್ಚೆಯಲ್ಲಿ ಭಾಗವಹಿಸದವರೂ ಸಹಿತ ಮೌನದಿಂದಿದ್ದು ಒಪ್ಪಿಗೆ ಸೂಚಿಸಿದ್ದರು. ಸರಕಾರದ ಮಟ್ಟದಲ್ಲಿ ಕೆಲಸ ನಡೆಯುವ ವೇಗ ನಮಗೆ ಗೊತ್ತೇ ಇದೆ. ಈ ವಿಷಯದಲ್ಲಿ ಆ ರೀತಿಯಾಗದೆ ಅತಿ ಶೀಘ್ರವಾಗಿ ಸದನ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯ ಕೆ.ಎಸ್. ಈಶ್ವರಪ್ಪನವರು ಸಮಿತಿ ರಚನೆಯನ್ನು ವಿರೋಧಿಸಿದ್ದಾರೆ, ಸಮಿತಿ ರಚನೆ ಯಾಕೆ ತಪ್ಪು – ಮಾಧ್ಯಮಗಳನ್ನು ನಿಯಂತ್ರಿಸುವುದು ಯಾಕೆ ಸರಿಯಲ್ಲ ಎಂದು ಕಾಂಗ್ರೆಸ್ಸಿನ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ. ಮಾಧ್ಯಮಗಳನ್ನು ನಿಯಂತ್ರಿಸಬೇಕೆ?

ಉಪಚುನಾವಣೆಗಳೆಂಬ ಅನಿವಾರ್ಯ ಅನಿಷ್ಠಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೇ ಏಪ್ರಿಲ್ ಒಂಭತ್ತನೇ ತಾರೀಖಿನಂದು ಕರ್ನಾಟಕದ ಎರಡು ವಿದಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯ ಶಾಸಕರಾಗಿದ್ದ ಶ್ರೀ ಮಹದೇವ ಪ್ರಸಾದ್ ನಿಧನರಾಗಿದ್ದರೆ, ಇದೇ ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಿದ್ದ ಶ್ರೀ ಶ್ರೀನಿವಾಸ್ಪ್ರಸಾದ್ ತಾವು ಆಯ್ಕೆಯಾಗಿ ಬಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರ ಮುಂದುವರೆದ ಭಾಗವಾಗಿ ತಮ್ಮ ಶಾಸಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ತೆರವಾದ ಈ ಎರಡೂ ಕ್ಷೇತ್ರಗಳಿಗೆ ಇದೀಗ ಉಪಚುನಾವಣೆಗಳು ನಡೆಯುತ್ತಿವೆ.

ಇರಲಿ, ನಮ್ಮ ರಾಜ್ಯದ ವಿದಾನಸಭೆಯ ಐದು ವರ್ಷಗಳ ಅವಧಿ ಮುಗಿಯುವುದು ಮುಂದಿನ ವರ್ಷದ ಅಂದರೆ 2018ರ ಮೇ ತಿಂಗಳಿಗೆ. ಅಂದರೆ ಈ ಸದನದ ಅವಧಿ ಬಾಕಿ ಇರುವುದು ಇನ್ನು ಕೇವಲ ಹದಿನಾಲ್ಕು ತಿಂಗಳುಗಳು ಮಾತ್ರವಾದರು, ಮೂರು ತಿಂಗಳ ಮುಂಚೆಯೇ ಚುನಾವಣೆಯ ಅಧಿಕೃತ ಅದಿಸೂಚನೆ ಹೊರಬೀಳುವುದರಿಂದ ಶಾಸಕರು ಸಕ್ರಿಯವಾಗಿ ಕೆಲಸ ಮಾಡಲು ಉಳಿದಿರುವುದು ಕೇವಲ 11 ತಿಂಗಳುಗಳು ಮಾತ್ರ. ಇಷ್ಟು ಕಡಿಮೆ ಅವಧಿಗಾಗಿ ಒಂದು ಚುನಾವಣೆ ನಡೆಸಬೇಕೇ ಮತ್ತು ಸರಕಾರವೊಂದು ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಬೇಕೇ ಎಂಬ ಸರಳ ಪ್ರಶ್ನೆ ಜನತೆಯಲ್ಲಿ ಉದ್ಭವವಾದರೆ ಅಚ್ಚರಿಯೇನಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ, ಸರಕಾರದಲ್ಲಿ ಜನರ ಬಾಗವಹಿಸುವಿಕೆ ಬಹಳ ಮುಖ್ಯವಾಗಿರುವುದರಿಂದ ಇಂತಹ ಚುನಾವಣೆಗಳಿಗೆ ಸರಕಾರ ವೆಚ್ಚ ಮಾಡಲೇ ಬೇಕಾದುದು ಅನಿವಾರ್ಯವಾಗಿದೆ ಎಂಬುದು ಸಹ ಅಷ್ಟೇ ಸತ್ಯ. ನನ್ನ ತಕರಾರು ಇರುವುದು ಈ ವೆಚ್ಚದ ಬಗೆಗಲ್ಲ. ಬದಲಿಗೆ ಉಪಚುನಾವಣೆಗಳಿಗೆ ಕಾರಣವಾಗುವ ವಿಷಯಗಳ ಬಗ್ಗೆ. ಅದರ ಬಗ್ಗೆ ಒಂದಿಷ್ಟು ನೋಡೋಣ:

ಮಾರ್ಚ್ 22, 2017

ಪದ್ಯವಾಗ ಹೊರಟ ಗದ್ಯದಂತ ಸಾಲುಗಳು….

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜದ್ರೋಹ!
ಒಮ್ಮೊಮ್ಮೆ ಹೀಗಾಗಿ ಬಿಡುತ್ತೆ:
ಸತ್ಯ ಹೇಳೋದು
ಸುಳ್ಳನ್ನ ಧಿಕ್ಕರಿಸೋದು
ರಾಜದ್ರೋಹ ಆಗುತ್ತೆ!

ಮಾರ್ಚ್ 15, 2017

ಗೋವಾ: ಕಾಂಗ್ರೆಸ್ಸಿನ ದಿವ್ಯ ನಿರ್ಲಕ್ಷ್ಯದಿಂದ ಅಧಿಕಾರ ಪಡೆದ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಹುಶ: ಇತಿಹಾಸ ಮರುಕಳಿಸುತ್ತದೆ ಎನ್ನುವ ನಾಣ್ಣುಡಿ ಹುಟ್ಟಿಕೊಂಡಿದ್ದೇ ಇಂಡಿಯಾದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡೆನಿಸುತ್ತಿದೆ. ಕಳೆದ ಆರು ದಶಕಗಳ ಕಾಲ ರಾಜ್ಯಗಳ ರಾಜ್ಯಪಾಲರುಗಳನ್ನು ತನ್ನ ಪಕ್ಷದ ಕಾರ್ಯಕರ್ತರುಗಳಂತೆ ಬಳಸಿಕೊಂಡ ಕಾಂಗ್ರೆಸ್ ಇವತ್ತು ಗೋವಾದಲ್ಲಿ ರಾಜ್ಯಪಾಲರಿಂದ ತನ್ನ ಪಕ್ಷಕ್ಕೆ ಅನ್ಯಾಯವಾಗಿದೆಯೆಂದು ಬೊಬ್ಬೆ ಹೊಡೆಯುತ್ತಿದೆ. ಬಹುಶ: ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತಾಡುವ ಬಾಜಪ ಕಾಂಗ್ರೆಸ್ಸಿನ ಇಂತಹ ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲವೆಂದು ಬಾವಿಸಿದಂತಿದೆ.

ಆಧುನಿಕ ಯಾತನಾ ಶಿಬಿರಗಳು!

ಸಾಂದರ್ಭಿಕ ಚಿತ್ರ.
ಕು.ಸ.ಮಧುಸೂದನ ರಂಗೇನಹಳ್ಳಿ
ಮುಂಚೆಲ್ಲಾ ಯಾತನಾ ಶಿಬಿರಗಳು
ದೇಶದ ಗಡಿಗಳಂಚಿನಲ್ಲಿದ್ದು
ದೇಶದೊಳಗಿನ ಶತ್ರುಗಳ ಗುರುತಿಸುವ ಗೂಡಚಾರ ಪಡೆ
ಅಂತಹವರನ್ನು ಒಬ್ಬೊಬ್ಬರನ್ನಾಗಿ ಹೆಕ್ಕಿ ತೆಗೆದು
ನಡುರಾತ್ರಿಯ ನೀರವ ಮೌನಗಳಲ್ಲಿ
ಸದ್ದೇ ಇರದಂತೆ ಬಂದಿಸಿ
ಯಾತನಾ ಶಿಬಿರಕ್ಕೆ ಬಿಟ್ಟು ಬರುತ್ತಿದ್ದರು
ಅಲ್ಲಿಗವರ ಕೆಲಸ ಮುಗಿಯುತ್ತಿತ್ತು.

ಮಾರ್ಚ್ 13, 2017

ಪ್ರಾದೇಶಿಕ ಪಕ್ಷಗಳ ತಲೆದಂಡ ಪಡೆಯುತ್ತಿರುವ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಐದು ರಾಜ್ಯಗಳ ಚುನಾವಣಾ ಪಲಿತಾಂಶಗಳು ಹೊರಬಿದ್ದಿದ್ದು, ಎರಡು ರಾಜ್ಯಗಳಲ್ಲಿ ಬಾಜಪ ಸ್ಪಷ್ಟ ಬಹುಮತವನ್ನು, ಕಾಂಗ್ರೆಸ್ ಒಂದು ರಾಜ್ಯದಲ್ಲಿಯೂ ಬಹುಮತವನ್ನು ಪಡೆದಿವೆ. ಇನ್ನೆರಡು ರಾಜ್ಯಗಳಲ್ಲಿ ಇವೆರಡೂ ಪಕ್ಷಗಳೂ ಇತರೆ ಪುಡಿ ಪಕ್ಷಗಳ ಮತ್ತು ಪಕ್ಷೇತರರ ಸಹಕಾರದೊಂದಿಗೆ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದಿದ್ದು, ಅವುಗಳನ್ನು ಸೇರಿಸಿಕೊಂಡು ಸರಕಾರ ರಚಿಸುವ ಪ್ರಯತ್ನಕ್ಕೆ ಚಾಲನೆ ಕೊಟ್ಟಿದ್ದು. ಈಗಾಗಲೇ ಈ ಸಂಬಂದ ಮಾತುಕತೆಗಳು ಶುರುವಾಗಿವೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಾಜಪಕ್ಕೆ ಈ ಕುದುರೆ ವ್ಯಾಪಾರದಲ್ಲಿ ಒಂದಷ್ಟು ಅನಕೂಲವಿದೆ. ಇರಲಿ, ನಾನಿಲ್ಲಿ ಈ ಪಕ್ಷಗಳ ಸೋಲು ಗೆಲುವಿನ ಬಗ್ಗೆ ವಿಶ್ಲೇಷಣೆ ಮಾಡಲು ಇಚ್ಚಿಸುವುದಿಲ್ಲ. ಆದರೆ ಈ ಚುನಾವಣೆಗಳ ಒಂದು ಪರಿಣಾಮದ ಬಗ್ಗೆ ನಾನಿಲ್ಲಿ ಮಾತನಾಡಲು ಬಯಸುತ್ತೇನೆ. ಅದು ಪ್ರಾದೇಶಿಕ ಪಕ್ಷಗಳಿಗೆ ಒದಗಿದ ದುರ್ಗತಿಯ ಬಗ್ಗೆ! 

ಮುಂಬೈ ಮಹಾನಗರ ಪಾಲಿಕೆ ಪಲಿತಾಂಶ: ಕಾಂಗ್ರೆಸ್ಸಿನ ಒಳಜಗಳಗಳ ನಡುವೆ ಗೆಲುವು ಕಂಡ ಬಿಜೆಪಿ ಶಿವಸೇನೆ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪಲಿತಾಂಶಗಳು ರಾಜಕೀಯ ವಲಯದಲ್ಲಿ ನಿರೀಕ್ಷಿಸಿದವೇ ಆಗಿದ್ದರೂ, ಕಾಂಗ್ರೆಸ್ ಈ ಮಟ್ಟದಲ್ಲಿ ಸೋಲುತ್ತದೆಯೆಂದು ಸ್ವತ: ಅದರ ವಿರೋಧಿಗಳೂ ಊಹಿಸಿರಲಿಲ್ಲವೆಂಬುದು ಮಾತ್ರ ಸತ್ಯ! ಮಹಾರಾಷ್ಟ್ರದ ಬಹುತೇಕ ನಗರ ಪಾಲಿಕೆಗಳನ್ನು ಮತ್ತು ಜಿಲ್ಲಾ ಪರಿಷದ್ ಗಳನ್ನು ಬಿಜೆಪಿ ಮತ್ತು ಶಿವಸೇನೆ ವಶ ಪಡಿಸಿಕೊಂಡಿದ್ದು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿಯೂ ತಾನು ಬಲಿಷ್ಠವಾಗುತ್ತಿದ್ದೇನೆಂಬ ಸೂಚನೆಯನ್ನೂ ಬಿಜೆಪಿ ನೀಡಿದೆ. ಅದರಲ್ಲೂ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದ್ದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸೋಲನ್ನಪ್ಪಿದ್ದು, ಕಳೆದ ಬಾರಿಗಿಂತ ಹೀನಾಯಪ್ರದರ್ಶನ ನೀಡಿದೆ. ರಾಷ್ಟ್ರದ ವಾಣಿಜ್ಯ ರಾಜದಾನಿಯೆಂದೇ ಪ್ರಸಿದ್ದವಾಗಿರುವ ಮುಂಬೈ ಅನ್ನು ಗೆಲ್ಲುವುದು ಎಲ್ಲಪಕ್ಷಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಚುನಾವಣೆಗು ಮೊದಲು ನಾನು ಮುಂಬೈ ಚುನಾವಣೆಯನ್ನು ವಿಶ್ಲೇಷಣೆ ಮಾಡುವಾಗಲೇ ಬಿಜೆಪಿ ಶಿವಸೇನೆಯ ಪ್ರಾಬಲ್ಯದ ಬಗ್ಗೆ ಬರೆದಿದ್ದೆ. ಈಗ ಸ್ವಲ್ಪ ಪಲಿತಾಂಶಗಳ ಬಗ್ಗೆ ಅದರ ಹಿಂದಿರುವ ಕಾರಣಗಳ ಬಗ್ಗೆ ನೋಡೋಣ:

ಮಾರ್ಚ್ 8, 2017

ವೃದ್ದಾಪ್ಯ ವೇತನವೂ ಹನುಮಕ್ಕನ ಅಲೆದಾಟವೂ!

ಚಿತ್ರಮೂಲ: youthkiawaaz
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹುಲಿಹಳ್ಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹನುಮಕ್ಕ ಕಾಲಿಟ್ಟಾಗ ನಿಂಗಣ್ಣ ಅನ್ನೊ ಆರಡಿಯ ಅಟೆಂಡರ್ ಕಷ್ಟಪಟ್ಟು ಸೊಂಟ ಬಗ್ಗಿಸಿ ಕಸ ಹೊಡೆಯುತ್ತಿದ್ದ.

ಅಪ್ಪಾ ಸಾಮಿ, ಡಾಕುಟರು ಎಷ್ಟೊತ್ತಿಗೆ ಬರ್ತಾರೆ? ಅನ್ನೊ ದ್ವನಿ ಕೇಳಿಸಿದಾಕ್ಷಣ ಕೈಲಿದ್ದ ಪೊರಕೆಯನ್ನು ಮೂಲೆಗೆ ಬಿಸಾಕಿ ಯಾಕವ್ವಾ? ಅವರು ಬರೋದು ಹನ್ನೊಂದು ಗಂಟೆ ಮೇಲೇನೆ ಅನ್ನುತ್ತ ಖಾಲಿ ಹೊಡೆಯುತ್ತ ಬಿದ್ದಿದ್ದ ಆಸ್ಪತ್ರೆಯೊಳಗೆ ಯಾರೊ ಒಬ್ಬರು ಮಾತಿಗೆ ಸಿಕ್ಕಿದ ಖುಶಿಯಲ್ಲಿ ಮುಖವರಳಿಸಿ ಅಲ್ಲೆ ಇದ್ದ ಬೆಂಚಿನಲ್ಲಿ ಅವಳ ಜೊತೆ ಅವನೂ ಆಸೀನನಾದ. ಏನಿಲ್ಲ ಸಾಮಿ, ವಯಸಾದೋರಿಗೆ ಸರಕಾರದೋರು ಐನೂರು ರೂಪಾಯಿ ಕೊಡ್ತಾರಲ್ಲ ಅದಕ್ಕೆ ಡಾಕುಟರ ಸಯಿನ್ ಬೇಕಾಗಿತ್ತು ಅಂತ ಹನುಮಕ್ಕ ಹೇಳಲು ಎಲ್ಲ ಹೊಳೆದವನಂತೆ ಅಯ್ಯೋ ಅವ್ವ ಅದು ವೃದ್ದಾಪ್ಯವೇತನ ಅದನ್ನ ಮಾಡಿಕೊಡೋನು ವಿಲೇಜ್ ಅಕೌಂಟೆಂಟ್ ಅಂದ್ರೆ ಸೆಕ್ರೇಟರಿ. ಅವರು ಪಂಚಾಯಿತಿ ಆಪೀಸಲ್ಲಿ ಇರ್ತಾರೆ. ಅಲ್ಲಿಗೋಗೋದು ಬಿಟ್ಟು ಇಲ್ಲಿಗ್ಯಾಕೆ ಬಂದೆ ಅಂದ. ಅವನ ಮಾತಿಗೆ ತಬ್ಬಿಬ್ಬಾದ ಹನುಮಕ್ಕ ನಿಜಾನ? ಮತ್ತೆ ನಮ್ಮ ಪಕ್ಕದ ಮನೆ ಹುಡುಗ ಡಾಕುಟರ ಹತ್ರ ವಯಸಿನ ಬಗ್ಗೆ ಬರೆಸಿಕೊಂಡು ಬಾ ಅಂದನಲ್ಲ. ಹೂನವ್ವಾ, ನಿಂಗೆ ಅರವತ್ತು ವರ್ಷ ಆಗಿದೆ ಅಂತಷ್ಟೆ ಡಾಕ್ರ್ಟು ಬರಕೊಡೋದು ಮಿಕ್ಕಿದ್ದೆಲ್ಲ ಸೆಕ್ರೇಟರೀನೆ ಮಾಡಿಕೊಡೋದು. ಹೋಗಲಿ, ವಯಸ್ಸಿನ ಫಾರಂ ತಂದಿದಿಯಾ ಅಂತ ಕೇಳಿದ. ಪಾರಮ್ಮು ಕೋಳಿ ಎಲ್ಲ ನಂಗೆ ಗೊತ್ತಿಲ್ಲ ಅಂದ ಹನುಮಕ್ಕನ ನೋಡಿ ನಿಂಗಣ್ಣಂಗೆ ಅಯ್ಯೋ ಅನಿಸಿ, ಅವ್ವಾ ಇಲ್ಲಿಂದ ಬಸ್ಸ್ಟಾಂಡ್ ಹೋಗೋ ದಾರೀಲಿ ಒಂದು ಪೆಟ್ಟಿಗೆ ಅಂಗಡಿ ಐತಲ್ಲ ಅದೇ ಐಯ್ನೋರ್ದು ಅವರ ಹತ್ರ ವಯಸಿನ ಫಾರಂ ತಗೊಂಬಾ. ಬರೇ ಎಂಟಾಣೆಯಷ್ಟೆ! ಅಂದ.

ಮಾರ್ಚ್ 1, 2017

ಬೇಡಿಕೆ ಈಡೇರುವವರೆಗೆ ಧರಣಿ: ಚಲೋ ಗುಡಿಬಂಡೆ.

ಚಿಕ್ಕಬಳ್ಳಾಪುರದ ಗುಡಿಬಂಡೆ ಸರ್ಕಾರಿ ಪ್ರೌಡಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ದಲಿತ ಯುವಕ ಮುರಳಿ ಜನವರಿ 20 ರಂದು ಗುಡಿಬಂಡೆ ಕೆರೆಯ ಬಳಿ ಹೆಬ್ಬೆಟ್ಟಿನ ಗಾತ್ರದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಕ್ಕದ ಕೊಂಬೆ ಮುರಿದಿದೆ.

ಈ ಘಟನೆಯ ಹಿನ್ನೆಲೆ ಎಂತಹವರನ್ನೂ ನಡುಗಿಸುತ್ತದೆ. ನಮ್ಮ ದೇಶದ ಜಾತಿ ಪದ್ದತಿ, ಶೈಕ್ಷಣಿಕ ಪದ್ಧತಿಯ ಕರಾಳ ಮುಖವನ್ನು ಮತ್ತೆ ನಮ್ಮ ಮುಂದಿಟ್ಟಿದೆ. ಮುರಳಿ ಅದೇ ಶಾಲಾವರಣದಲ್ಲಿರುವ 8 ನೇ ತರಗತಿಯ ಮೇಲ್ಜಾತಿ ಹೆಣ್ಣು ಮಗಳೊಂದಿಗೆ ಸ್ನೇಹದಿಂದಿದ್ದಾನೆ. ಇದನ್ನು ಅದೇ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗಿಯ ಅಣ್ಣ ಸಾಯಿ ಗಗನ್ ಗೆ ಸಹಿಸಲಾಗಿಲ್ಲ. ತನ್ನ ತಂಗಿಯನ್ನು ಚುಡಾಯಿಸಿದ ಎಂಬ ನೆಪ ಒಡ್ಡಿ ದಿನಾಂಕ 18 ರಂದು ಶಾಲಾವರಣದಲ್ಲಿಯೇ ತನ್ನ ಸ್ನೇಹಿತರೊಂದಿಗೆ ಕೂಡಿ ಮುರಳಿಯನ್ನು ಥಳಿಸಿದ್ದಾನೆ. ಶಿಕ್ಷಕರು ಜಗಳ ಬಿಡಿಸಿ ಬುದ್ಧಿ ಹೇಳಿ ಕಳಿಸಿದ್ದಾರೆ. ಮುರಳಿ ಸಹಜವಾಗಿ ಮನೆಗೆ ಮರಳಿದ್ದಾನೆ. ಮಾರನೇ ದಿನ ಶಾಲೆಗೆ ಹೋದಾಗ ಮತ್ತೆ ಮುರಳಿಯನ್ನು ಸಾಯಿ ಗಗನ್ ಮತ್ತು ಸ್ನೇಹಿತರ ತಂಡ ಹಿಗ್ಗಾ ಮುಗ್ಗ ಥಳಿಸಿದೆ. ಅಂದೂ ಸಹ ಮುರಳಿ ಶಾಲೆ ಮುಗಿಸಿ ಮನೆಗೆ ಮರಳಿದ್ದಾನೆ. ದಿನಾಂಕ 20 ರಂದೂ ಸಹ ಎಂದಿನಂತೆ ಶಾಲೆಗೆ ಹೋಗಿರುವ ಮುರಳಿಯನ್ನು ಮತ್ತೆ ಸಾಯಿಗಗನ್ ತಂಡ ಶಾಲಾ ಆವರಣದೊಳಗೆ ಹಾಗೂ ಹೊರಗೆ ಥಳಿಸಿದ್ದಾರೆ. ಅಷ್ಟೆ ಅಲ್ಲ ಒಂದಷ್ಟು ಬೈಕುಗಳಲ್ಲಿ ಮುರಳಿಯನ್ನು ಹೊತ್ತೊಯ್ದಿದ್ದಾರೆ. ಇದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ದಸಂಸದ ಸಿ.ಜಿ.ಗಂಗಪ್ಪ ಹೇಳುತ್ತಾರೆ‌. ಹೀಗೆ ಮುರಳಿಯನ್ನು ಬೈಕಿನಲ್ಲಿ ಹೊತ್ತೊಯ್ದ ನಂತರ ಸಂಜೆ 3:00 ಗಂಟೆಗೆ ಸಮೀಪ ಮುರಳಿ ಶವವಾಗಿ ಪತ್ತೆಯಾಗಿದ್ದಾನೆ.

ಫೆಬ್ರ 27, 2017

ಡೈರಿ-ಸಿ.ಡಿ.ಇತ್ಯಾದಿಗಳು ಮತ್ತು ರಾಜಕೀಯ ಪಕ್ಷಗಳ ಪಾರದರ್ಶಕತೆಯೂ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವಕ್ಕೆ ರಾಜಕೀಯ ಪಕ್ಷಗಳೇ ಜೀವಾಳ. ಅದರಲ್ಲೂ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುಂದೆ ಸಾಗಲು ಸಿದ್ದಾಂತಗಳ ಮೂಲದಿಂದ ಹುಟ್ಟಿದ ಬಲಾಢ್ಯ ರಾಜಕೀಯ ಪಕ್ಷಗಳು ಅತ್ಯವಶ್ಯ. ಹಾಗೆ ಪಕ್ಷಗಳ ಸಂಖ್ಯಾದೃಷ್ಠಿಯಿಂದ ನೋಡಿದರೆ ನಾವು ಭಾರತೀಯರು ಶ್ರೀಮಂತರೇನೆ! ಯಾಕೆಂದರೆ ನಮ್ಮ ದೇಶದಲ್ಲಿ ಈಗ 7 ರಾಷ್ಟ್ರೀಯ ಪಕ್ಷಗಳು ಹಾಗು ಸುಮಾರು 48 ಮಾನ್ಯತೆ ಪಡೆಯಲ್ಪಟ್ಟ ಪ್ರಾದೇಶಿಕ ಪಕ್ಷಗಳು ಇವೆ, ಇನ್ನು ನೊಂದಾಯಿತವಾಗಿದ್ದರೂ ಮಾನ್ಯತೆ ಪಡೆಯದ ನೂರಕ್ಕೂ ಹೆಚ್ಚು ಪಕ್ಷಗಳಿವೆ. ಸಾವಿರಾರು ಜಾತಿ ಉಪಜಾತಿಗಳಿರುವನಮ್ಮಲ್ಲಿ ಮುಂದೊಂದು ದಿನ ಜಾತಿಗಳ ಸಂಖ್ಯೆಯನ್ನೂ ಮೀರಿ ಪಕ್ಷಗಳು ಸೃಷ್ಠಿಯಾದರೆ ಅಚ್ಚರಿ ಪಡಬೇಕಿಲ್ಲ. ಇವೆಲ್ಲ ಮಾತುಗಳನ್ನು ಈಗ ಹೇಳಲು ಕಾರಣ. ಕಳೆದೊಂದು ವಾರದಿಂದ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಠಿಸಿರುವ ಕಾಂಗ್ರೆಸ್ ಪರಿಷದ್ ಸದಸ್ಯರೊಬ್ಬರ ಡೈರಿ ಪ್ರಕರಣ. ಆದಾಯ ತೆರಿಗೆ ಇಲಾಖೆಯವರು ವಶಪಡಿಸಿಕೊಂಡಿದ್ದಾರೆಂದು ಹೇಳಲಾಗುತ್ತಿರುವ ಈ ಡೈರಿಯಲ್ಲಿ ಕಾಂಗ್ರೆಸ್ಸಿನ ಸಚಿವರುಗಳಿಂದ ಹಣ ಸಂಗ್ರಹಿಸಿ ಪಕ್ಷದ ಹೈಕಮ್ಯಾಂಡಿಗೆ ದೇಣಿಗೆ ನೀಡಿದ್ದಾರೆಂಬ ವಿವರಗಳು ಅದರಲ್ಲಿವೆಯೆಂದು ಬಾಜಪದ ರಾಜ್ಯಾದ್ಯಕ್ಷರಾದ ಶ್ರೀ ಯಡಿಯೂರಪ್ಪನವರು ಆರೋಪಿಸಿದ ಬೆನ್ನಲ್ಲೆ ಆಂಗ್ಲಬಾಷೆಯ ವಾಹಿನಿಯೊಂದು ಸದರಿ ಡೈರಿಯದು ಎನ್ನಲಾದ ಕೆಲವು ಪುಟಗಳನ್ನು ಪ್ರಕಟಿಸಿದೆ. ಇದೀಗ ಇದು ಬಾರಿ ವಿವಾದಕ್ಕೆ ಕಾರಣವಾಗಿದ್ದು, ಆರೋಪ ಪ್ರತ್ಯಾರೋಪಗಳು ಎಗ್ಗಿರದೆ ನಡೆಯುತ್ತಿವೆ. ಈ ಡೈರಿಯ ಸತ್ಯಾಸತ್ಯತೆಯನ್ನಾಗಲಿ, ಅದರಲ್ಲಿರುವ ಹೆಸರು ಮೊತ್ತಗಳ ಬಗ್ಗೆ ನಾನು ಮಾತನಾಡಲು ಇಲ್ಲಿ ಇಚ್ಚಿಸುವುದಿಲ್ಲ. ನನ್ನ ಕುತೂಹಲ ಮತ್ತು ವಿಷಾದ ಇರುವುದು ಈ ರಾಷ್ಟ್ರೀಯ ಪಕ್ಷಗಳು ತಮ್ಮತಮ್ಮ ಹೈಕಮ್ಯಾಂಡಿಗೆ ಪಕ್ಷವನ್ನು ನಡೆಸಲು ಮತ್ತು ಇತರೆ ರಾಜ್ಯಗಳ ಚುನಾವಣೆಗಳನ್ನು ನಡೆಸಲು ಹಣ ನೀಡುತ್ತಲೇ ಬಂದಿರುವ ಕೆಟ್ಟ ಸಂಪ್ರದಾಯದ ಬಗ್ಗೆ ಮಾತ್ರ. 

ದುಸ್ವಪ್ನ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಅದೇಗೆ ಬಂದುಬಿಟ್ಟೆ ನೀನು
ಅಮಂಗಳಕರವಾದ ಕನಸೊಂದು
ಮುಂಜಾನೆಯೊಳಗೆ ನನಸಾಗಿಬಿಡುವಂತೆ
ಅದ್ಯಾವ ಎದೆಗಾರಿಕೆಯ ಅಮಲು ನಿನ್ನದು

ಫೆಬ್ರ 24, 2017

ರಾಜಕೀಯ ಪಕ್ಷಗಳ ಮ್ಯಾನೇಜರುಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೆಸ್ಸಿಗೆ ಬೇಕಾಗಿರುವುದು ಮ್ಯಾನೇಜರುಗಳು ಮಾತ್ರ, ನಾಯಕರುಗಳಲ್ಲ! ಮಾಜಿಮುಖ್ಯಮಂತ್ರಿಗಳಾದ ಶ್ರೀಎಸ್.ಎಂ.ಕೃಷ್ಣಾ ಎವರು ಹೇಳಿದ ಈ ಮಾತು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆಯೊ ಬಿಡುತ್ತದೆಯೊ ಗೊತ್ತಿಲ್ಲ. ಆದರೆ ಜನರಲ್ ಆಗಿ ನೋಡಿದರೆ ಈ ಮಾತು ಬಹುತೇಕ ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ಯಾಕೆಂದರೆ ಇವತ್ತು ಒಂದು ರಾಜಕೀಯ ಪಕ್ಷವನ್ನು ನಡೆಸಲು ನಾಯಕನಾಗಲಿ, ಸಿದ್ದಾಂತವಾಗಲಿ ಬೇಕಾಗಿರುವಂತೆ ಕಾಣುತ್ತಿಲ್ಲ. ಯಾಕೆಂದರೆ ನಾಯಕನೊಬ್ಬನ ಮರ್ಜಿಯಿಂದ, ಸಿದ್ದಾಂತಗಳ ಹಂಗಿನಿಂದಲೇ ಒಂದು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವ ಕಾಲ ಬದಲಾಗಿದೆ. ಈಗೇನಿದ್ದರೂ ಪಕ್ಷದ ಕಛೇರಿ ಮತ್ತು ಅದರ ದೈನಂದಿನ ಖರ್ಚುವೆಚ್ಚಗಳನ್ನು ನೋಡಿಕೊಳ್ಳಬಲ್ಲ, ಜಾತಿಜಾತಿಗಳ ಸಮಾವೇಶವನ್ನು ಸಂಘಟಿಸಬಲ್ಲ, ಚುನಾವಣಾ ಸಮಯದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಬಲ್ಲ, ಸ್ಪರ್ದಿಸಿದ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ಅಗತ್ಯವಿರುವ ಹಣವನ್ನು ಅಥವಾ ಪಕ್ಷದ ನಿದಿಯನ್ನು ಕ್ರೋಡೀಕರಿಸುವ ಮತ್ತು ವಿತರಿಸುವ ಸಾಮಥ್ರ್ಯವುಳ್ಳ ವ್ಯಕ್ತಿಯೊಬ್ಬ ಸಹಜವಾಗಿಯೇ ಪಕ್ಷದ ನಾಯಕನಾಗಿ ಬಿಡುವುದು ಇವತ್ತಿನ ರಾಜಕಾರಣದ ಶೈಲಿಯಾಗಿದೆ. ಇಂಡಿಯಾದ ರಾಜಕೀಯದಲ್ಲಿ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ. ತೀರಾ ಇತ್ತೀಚಿನದೆ ಒಂದು ನಿದರ್ಶನವೆಂದರೆ, ತಮಿಳುನಾಡಿನ ರಾಜಕೀಯದಲ್ಲಿ ಶ್ರೀಮತಿ ಶಶಿಕಲಾ ನಟರಾಜನ್ ವಹಿಸಿದ ಪಾತ್ರ!

ಫೆಬ್ರ 19, 2017

ಅಲೆಮಾರಿಯ ಹಾದಿಯೊಳಗೆ……

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾವ ಅಪರಿಚಿತ ಹಾದಿಯಲಿ ಅಡ್ಡಾಡಿದೆ?
ನಡೆದಷ್ಟೂ ಸಾಗದ ಪಯಣ
ಕಲ್ಲು ಮುಳ್ಳುಗಳ ಸಹಯಾನ
ಮುಂದೆ ಹೋಗಿ ತಲುಪಿದವರು ಕಾಯಲಿಲ್ಲ ನಮ್ಮ ಬರುವಿಕೆಗೆ

ಫೆಬ್ರ 18, 2017

ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಡಾ. ಸುಶಿ ಕಾಡನಕುಪ್ಪೆ
ತಂತ್ರಜ್ನಾನ ವ್ಯಕ್ತಿಯ ಮೇಲೆ ಮಾಂತ್ರಿಕ ಹಿಡಿತ ಹೊಂದಿದೆ ಎಂಬುದಕ್ಕೆ ಸಾಮಾನ್ಯವಾದ ಉದಾಹರಣೆ ನಮ್ಮ ಸುತ್ತ ನಡೆಯುವ ಸಾರ್ವಜನಿಕ ಘಟನೆಯನ್ನು ತಮ್ಮ ಸ್ಮಾರ್ಟ್ ಫೋನ್‌ನ್‌ನಲ್ಲಿ ಸೆರೆ ಹಿಡಿಯುವುದು, ವಿಡಿಯೋ ತೆಗೆಯುವುದು ಮತ್ತು ತಕ್ಷಣವೇ ಅಂತರ್ಜಾಲಕ್ಕೆ ಹರಿಬಿಡುವುದು. 

ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆಂದು ಕೆಳಗೆ ಬೀಳಲು ಪ್ರಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವರದಿಯಲ್ಲಿ ವಿವರಿಸಿದ್ದಂತೆ, ಅಲ್ಲಿ ನೆರೆದ ಹಲವರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಆತ ಬೀಳುವುದನ್ನು ವಿಡಿಯೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕೆಲವರು ತಮ್ಮ ವಿಡಿಯೋಗೆ ಬೇಕಾದ ಘಟನೆ ಸೃಷ್ಟಿಸಲೋ ಎಂಬಂತೆ ಆತನನ್ನು ಕೆಳಗೆ ಬೀಳಲು ಹುರಿದುಂಬಿಸುತ್ತಿದ್ದರು. ಇಲ್ಲಿ ಯಾರೂ ಆತನ ಆತ್ಮಹತ್ಯೆಯ ಪ್ರಯತ್ನವನ್ನು ತಡೆಯುವ ಗೋಜಿಗೆ ಹೋಗಲಿಲ್ಲ ಎಂದು ವರದಿಯಾಗಿದೆ. ಇದನ್ನು ಗಮನಿಸಿದಾಗ ಮಾನವನ ಒಂದು ಹೊಸ ರೀತಿಯ ಅಪಾಯಕಾರಿ ನಡತೆ ರೂಪುಗೊಂಡಿರುವುದು ತಿಳಿಯುತ್ತದೆ. ಈ ರೀತಿಯ ಮಾನವನ ನಡತೆಯ ಬಗ್ಗೆ ಆತಂಕ ವ್ಯಕ್ತ ಪಡೆಸಿರುವ ಅಲ್ಲಿನ ಮನೋವಿಜ್ನಾನಿಗಳು ಸಮೂಹ ಮಾಧ್ಯಮಗಳು ಸಮಾಜವನ್ನು ರೂಪಿಸುತ್ತಿರುವ ಬಗೆಯನ್ನು ಚರ್ಚಿಸಿದ್ದಾರೆ. 

ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ ಬಡಪಾಯಿ ರೈತರೂ!

ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಕೇಂದ್ರ ಸರಕಾರ ಬರಪರಿಹಾರಕ್ಕೆಂದು ಕರ್ನಾಟಕಕ್ಕೆ ನಾಲ್ಕು ನೂರಾ ಐವತ್ತು ಕೋಟಿ ರೂಪಾಯಿಗಳ ಮೊದಲ ಕಂತನ್ನು ಆರ್ಥಿಕ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿದೆ. ಕೇಂದ್ರ ಕಳುಹಿಸಿದ್ದ ಬರ ಅಧ್ಯಯನ ತಂಡ ಒಂದೆರಡು ದಿನ ಬರಪೀಡಿತ ಪ್ರದೇಶಗಳಲ್ಲಿ ಅಡ್ಡಾಡಿ ಸಲ್ಲಿಸಿದ ವರದಿಯ ಪರಿಣಾಮವಾಗಿ ಕೇಂದ್ರ ಸುಮಾರು ಒಂದು ಸಾವಿರದ ಏಳುನೂರು ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದು, ಈಗದರ ಮೊದಲ ಕಂತು ಬಿಡುಗಡೆಯಾಗಿದೆ. ವಿಪರ್ಯಾಸ ಎಂದರೆ ತನ್ನ ರಾಜ್ಯದ ಬರಪರಿಹಾರ ಕಾರ್ಯಗಳಿಗೆ ನಮ್ಮ ರಾಜ್ಯ ಕೇಂದ್ರವನ್ನು ಕೇಳಿದ್ದು ಸರಿ ಸುಮಾರು ನಾಲ್ಕು ಸಾವಿರ ಕೋಟಿರೂಪಾಯಿಗಳನ್ನು! ಇರಲಿ, ಬಿಡುಗಡೆಯಾದ ಪರಿಹಾರ ಮೊತ್ತದ ಬಗ್ಗೆ ನಾನಿಲ್ಲ ಮಾತನಾಡಲು ಇಚ್ಚಿಸುವುದಿಲ್ಲ. ನನ್ನ ತಕರಾರು ಇರುವುದು ಬರದ ಅಧ್ಯಯನಕ್ಕೆಂದು ರಾಜ್ಯಗಳಗೆ ಬೇಟಿ ನೀಡುವ ಕೇಂದ್ರದ ತಂಡಗಳು ಬರಪ್ರದೇಶಗಳ ವೀಕ್ಷಣೆ ಮಾಡುವ ರೀತಿಯ ಬಗ್ಗೆ.

ಫೆಬ್ರ 14, 2017

ಸಮಾಜದ ಕ್ರೌರ್ಯದ ಗುಂಡಿಯೊಳಗಿಳಿಸುವ 'ಅಮರಾವತಿ'

ಡಾ. ಅಶೋಕ್. ಕೆ. ಆರ್
ಕನ್ನಡದಲ್ಲಿ ಇಂತಹುದೊಂದು ಹಸಿ ಹಸಿ ಚಿತ್ರವನ್ನು ನೋಡಿ ಬಹಳ ದಿನಗಳಾಗಿತ್ತು. ನಿನ್ನೆ ರಾತ್ರಿ ಮೂಗಿಗಂಟಿದ ಮಲದ ಗುಂಡಿಯ ವಾಸನೆಯು ಇನ್ನೂ ಹೋಗಿಲ್ಲ ಎನ್ನುವುದಷ್ಟೇ ಸಾಕು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಲು. ಪೌರ ಕಾರ್ಮಿಕರ ಬಗ್ಗೆ ವರದಿಗಳು ಬರುತ್ತವೆ, ಡಾಕ್ಯುಮೆಂಟರಿಗಳೂ ಸಿಗುತ್ತವೆ, ಅವರ ಸುತ್ತಲೇ ಸುತ್ತುವ ಪೂರ್ಣ ಪ್ರಮಾಣದ ಚಿತ್ರವೊಂದು ಇಲ್ಲಿಯವರೆಗಂತೂ ಬಂದಂತಿಲ್ಲ. ಪೌರ ಕಾರ್ಮಿಕರ ಬದುಕಿನ ಸಂಗತಿಗಳನ್ನು ಕತೆಯಾಗಿಸಿ ಸಿನಿಮಾ ಮಾಡುವ ಧೈರ್ಯವನ್ನು ನಿರ್ದೇಶಕ ಗಿರಿರಾಜ್ ತೆಗೆದುಕೊಂಡಿರುವುದರಲ್ಲಿ ಹೆಚ್ಚಿನ ಅಚ್ಚರಿಯೇನಿಲ್ಲ. ನವಿಲಾದವರು ಎಂಬ ಯ್ಯೂಟ್ಯೂಬ್ ಸಿನಿಮಾ, ಜಟ್ಟ, ಮೈತ್ರಿ ಚಿತ್ರಗಳಲ್ಲೂ ಅವರು ವಿಭಿನ್ನ ಕತೆಯನ್ನೇ ಆಯ್ದುಕೊಂಡಿದ್ದರು. ಮುಖ್ಯವಾಹಿನಿಯ ಜನರು ನೋಡದ ಬದುಕನ್ನು, ಊಹಿಸದ ಜೀವನ ರೀತಿಯನ್ನು ತೆರೆಯ ಮೇಲೆ ನೇಯ್ದಿದ್ದರು. ಆ ಎಲ್ಲಾ ಸಿನಿಮಾಗಳಿಗಿಂತಲೂ ಕಷ್ಟಕರವಾದ ಕತೆಯನ್ನು ಈ ಬಾರಿ ಆಯ್ದುಕೊಂಡಿದ್ದಾರೆ, ಅದರಲ್ಲವರು ಸಂಪೂರ್ಣವಾಗಿ ಗೆದ್ದಿದ್ದಾರಾ?

ಮಹಾರಾಷ್ಟ್ರ-ಸ್ಥಳೀಯ ಚುನಾವಣೆಗಳು: ಬಾಜಪ-ಶಿವಸೇನೆಗಳ ಪ್ರತ್ಯೇಕ ಸ್ಪರ್ದೆಯು, ಕಾಂಗ್ರೆಸ್ಸಿಗೆ ಗೆಲ್ಲಲೇಬೇಕಾದ ಅನಿವಾರ್ಯತೆಯೂ!

ಕು.ಸ.ಮಧುಸೂದನ್
ಇದೇ ತಿಂಗಳ 16ನೇ ಮತ್ತು 21ನೇ ತಾರೀಖಿನಂದು ಮಹಾರಾಷ್ಟ್ರದ 10ಮುನ್ಸಿಪಲ್ ಕೌನ್ಸಿಲ್ಲುಗಳಿಗೆ, 283 ಪಂಚಾಯತ್ ಸಮಿತಿಗಳಿಗೆ, 26 ಜಿಲ್ಲಾ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರಲ್ಲಿ ಬಹು ಪ್ರಮುಖವಾದದ್ದು ಮುಂಬೈ ನಗರದ ಆಡಳಿತದ ಹೊಣೆ ಇರುವ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳಾಗಿವೆ. ಇದಕ್ಕೆ ಕಾರಣಗಳೂ ಇವೆ:

ಮುಂಬೈ ಇಂಡಿಯಾದ ವಾಣಿಜ್ಯ ನಗರಿಯಾಗಿದ್ದು ಈ ನಗರದ ಆಡಳಿತ ಹಿಡಿಯುವುದು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿರುತ್ತದೆ. ದೇಶದ ಹಲವಾರು ಪುಟ್ಟ ರಾಜ್ಯಗಳ ಬಜೆಟ್ಟಿಗಿಂತ ಈ ನಗರ ಪಾಲಿಕೆಯ ಬಜೆಟ್ ದೊಡ್ಡದಿದ್ದು ವಾರ್ಷಿಕವಾಗಿ ಲಕ್ಷಾಂತರ ಕೋಟಿಗಳ ಆಯವ್ಯಯ ಮಂಡನೆಯಾಗುತ್ತಿದೆ. ಇವೆಲ್ಲವನ್ನೂ ಮೀರಿ ಮುಂಬೈ ನಗರದಲ್ಲಿ ದೇಶದ ಎಲ್ಲಾ ಭಾಗಗಳ ಜನರು ವಾಸವಾಗಿದ್ದು, ಒಂದು ಮಿನಿ ಇಂಡಿಯಾ ಎನ್ನಬಹುದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ನೂರಾರು ಉದ್ಯಮಗಳು ಇಲ್ಲವೆ. ಹೀಗಾಗಿ ಮಹಾರಾಷ್ಟ್ರದ ಪೌರ ಚುನಾವಣೆಗಳಲ್ಲಿ ಮುಂಬೈ ನಗರ ಪಾಲಿಕೆಯ ಚುನಾವಣೆಗಳಿಗೆ ವಿಶೇಷ ಮಹತ್ವ ಇದೆ.

ಫೆಬ್ರ 1, 2017

ಬಾಜಪದ ಪಾಲಿಗೆ ಮಹತ್ತರವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಇನ್ನಿರದ ಪ್ರಯತ್ನ ಮಾಡುತ್ತಿದೆ.ಇದೀಗ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಈಗಾಗಲೇ ಎರಡು ರಾಜ್ಯಗಳಲ್ಲಿ ಬಾಜಪ ಆಳ್ವಿಕೆ ನಡೆಸುತ್ತಿದ್ದು, ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಅದು ಎದುರಿಸುತ್ತಿದೆ.ಹಿಮಾಚಲಪ್ರದೇಶ ಮತ್ತು ಮಣಿಪುರದಂತಹ ಪುಟ್ಟ ರಾಜ್ಯಗಳ ಪಲಿತಾಂಶಗಳು ರಾಷ್ಟ್ರ ರಾಜಕಾರಣದಲ್ಲಿ ಅಂತಹ ಕಂಪನಗಳನ್ನು ಉಂಟು ಮಾಡಲಾರವು. ಇಂತಹ ಸನ್ನಿವೇಶದಲ್ಲಿ, ಅದೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸರಿಸುಮಾರು ಮೂರುವರ್ಷಗಳಾಗುತ್ತಿರುವ ಈ ಸಮಯದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ಬಾಜಪದ ಪಾಲಿಗೆ ಮಹತ್ವದ್ದಾಗಿವೆ.ಉತ್ತರಪ್ರದೇಶವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಾಜಪಕ್ಕೆ ಇರಲು ಎರಡು ಮುಖ್ಯ ಕಾರಣಗಳಿವೆ. ಅವೆಂದರೆ:

ಪ್ರೀತಿಯ ಕನವರಿಕೆ.

ನಾಗಪ್ಪ.ಕೆ.ಮಾದರ
ಮನಸ್ಸಿನ ಭಾವದಿ ಕಲರವ ಮೂಡಿಸಿ 
ಬೆಳದಿಂಗಳ ಬೆಳಕು ನೀ ತಾಗಿಸಿ
ಸವಿ ನುಡಿಯ ನುಡಿಯಲು ಬಲ್ಲೆಯಾ 
ಜೀವದ ಗೆಳತಿಯೇ!

ಜನ 23, 2017

ಧೋಬಿಘಾಟ್’ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ‘ಮೈಲುತುತ್ತ’ ಪದ್ಯಸಂಕಲನ ಬಿಡುಗಡೆ

ಜ.20ರಂದು ಬೆಂಗಳೂರಿನಲ್ಲಿ ಪತ್ರಕರ್ತ, ಸಿನೆಮಾ ನಿರ್ದೇಶಕರೂ ಆಗಿರುವ ಚಕ್ರವರ್ತಿ ಚಂದ್ರಚೂಡ್ ಅವರ “ಮೈಲುತುತ್ತ’ ಪದ್ಯಸಂಕಲನ ವಿಭಿನ್ನ ರೀತಿಯಲ್ಲಿ ಲೋಕಾರ್ಪಣೆಗೊಂಡಿತು. ಮಲ್ಲೇಶ್ವರದ ಧೋಬಿಘಾಟ್’ನಲ್ಲಿ ‘ಪದ್ಯಗಳಿಗೆ ಬಿಡುಗಡೆ’ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಚಕ್ರವರ್ತಿಯವರ ದರ್ವೇಶ್ ಚೌಕಿ ತಂಡ ಈವರೆಗಿನ ಸಾಹಿತ್ಯಲೋಕದ ಶಿಷ್ಟಾಚಾರಗಳನ್ನು ಮೀರಿ ಕಾರ್ಯಕರ್ಮ ರೂಪಿಸಿತ್ತು. 

ತಲ್ಲಣ

ಸವಿತ ಎಸ್ ಪಿ
ಕಂಗಳಲಿ ನಿಂತು
ಕಾಡುವ ಬಗೆ ಏನು
ನೋಟದಲಿ ಸೆಳೆದು
ಮಾಡಿರುವೆ ಮೋಡಿ

ಜನ 20, 2017

ಮನದ ಮರೆಯಲಿ ನಿಂತ ಚಲುವೆ

ನಾಗಪ್ಪ.ಕೆ.ಮಾದರ
ರವಿಯ ಕಿರಣಗಳ ನಡುವೆ 
ಬಳಲುವ ಚಲುವೆ ನಿನ್ನಂದವನ್ನು 
ನೋಡಲು ಸೂರ್ಯ ತನ್ನ 
ರಶ್ಮಿಯನ್ನು ಚಿಮ್ಮುಕಿಸುತಿಹನು