ನವೆಂ 21, 2012

ಶಮೀನ



ಅನ್ಸಿಲಾ ಫಿಲಿಪ್ ವಾಸ್

ಛೇ! ನಾನೇನ್ಮಾಡ್ಲಿ? ಶಮೀನಾಗಿಂತ ತಾನು ಚೆನ್ನಾಗಿರುವುದು ನನ್ನ ತಪ್ಪೇ? ತನಗೆ ಹೇರಳವಾಗಿ ದೊರೆತ ಸೌಂದರ್ಯದ ಕುರಿತು ಚಿಂತಿಸುತ್ತಾಳೆ ಸೀಮ.

ಸೀಮ, ಶಮೀನರ ಮನೆಯ ಇಬ್ಬರು ಅಣ್ಣಂದಿರು ಸೌದಿಯಲ್ಲಿರುವುದರಿಂದ ಆಧುನಿಕ ಸಾಮಗ್ರಿಗಳನ್ನೊಳಗೊಂಡು ಸುಂದರವಾಗೇ ಇದ್ದಿತು ಶಮೀನಾಳಿಗಿಂತ ಸೀಮ ಚೆನ್ನಾಗಿದ್ದಾಳೆ ಎಂದು ಎಲ್ಲರೂ ಹೇಳುವಾಗ ಸೀಮಳಿಗೇಕೋ ವೇದನೆಯಾಗುತ್ತಿತ್ತು. “ಶಮೀನಾ ತನ್ನ ಅಕ್ಕ ಅವಳು ಚೆನ್ನಾಗಿ ಕಾಣಬೇಕು” ಇದು ಸೀಮಳ ಯೋಚನೆ.

ನವೆಂ 20, 2012

ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ....


ಡಾ ಅಶೋಕ್ ಕೆ ಆರ್
 
‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.

ನವೆಂ 18, 2012

ಆದರ್ಶವೇ ಬೆನ್ನು ಹತ್ತಿ ... ಭಾಗ 12



ಡಾ ಅಶೋಕ್ ಕೆ ಆರ್
ಬೆಳಿಗ್ಗೆ ಎದ್ದ ಕೂಡಲೇ ಲೋಕಿಗೆ ಸಯ್ಯದನ ನೆನಪಾಯಿತು. ‘ನಿನ್ನೆ ನಡೆದ ವಿಷಯಗಳ್ಯಾವುದನ್ನೂ ಆತನಿಗೆ ತಿಳಿಸಲೇ ಇಲ್ಲವಲ್ಲ. ಕಾಂತರಾಜ್ ಸರ್ ನ ಅಮಾನತ್ತು ಮಾಡಿದ ದಿನ ಆತ ನನಗೋಸ್ಕರ ಕಾಲೇಜೆಲ್ಲ ಹುಡುಕಾಡಿದನಂತೆ. ಅಂತಹದ್ರಲ್ಲಿ ನಿನ್ನೆ ನಾನು ಅವನಿಗೆ ಒಂದು ಮಾತೂ ತಿಳಿಸಲಿಲ್ಲವಲ್ಲ. ಪೂರ್ಣಿಯೊಡನೆ ಮಾತನಾಡಿದ ಖುಷಿಯಲ್ಲಿ ಸಯ್ಯದನನ್ನೇ ಮರೆತು ಬಿಟ್ಟೆ’ ಒಂದಷ್ಟು ಬೇಸರವಾಯಿತು ತನ್ನ ವರ್ತನೆಯ ಬಗ್ಗೆ. ಅವನ ಮನೆಗೆ ಹೋಗಿ ವಿಷಯ ತಿಳಿಸಿ ಕಾಲೇಜಿಗೆ ಅವನೊಡನೆಯೇ ಹೋದರಾಯಿತು ಎಂದುಕೊಂಡು ಸ್ನಾನ ಮಾಡಿ ‘ತಿಂಡಿ ಕ್ಯಾಂಟೀನಿನಲ್ಲೇ ತಿಂತೀನಿ’ ಎಂದು ಸ್ನೇಹಳಿಗೆ ತಿಳಿಸಿ ಸಯ್ಯದ್ ಮನೆ ಕಡೆ ಹೊರಟ. ಬಸ್ಸಿನಲ್ಲಿ ಹೋದರೆ ಮೂರು ನಿಮಿಷದ ಪಯಣ, ನಡಿಗೆಯಲ್ಲಿ ಹದಿನೈದು ನಿಮಿಷ ಸಾಕು. ನಡೆದೇ ಹೊರಟ. ಮನೆಯ ಆವರಣದಲ್ಲಿದ್ದ ತೆಂಗಿನಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತಿದ್ದ ಸಯ್ಯದ್. ಕಾಫಿ ಹೀರುತ್ತ ಪತ್ರಿಕೆ ಓದುತ್ತಿದ್ದ. ಗೇಟಿನ ಶಬ್ದವಾದಾಗ ತಿರುಗಿ ನೋಡಿದ.

ನವೆಂ 15, 2012

ರಿಮೋಟಿಗಿಂದು ನಾನೇ ಒಡತಿ!

ಡಾ ಅಶೋಕ್ ಕೆ ಆರ್
ಇವರು ನಿನ್ನೆ ರಾತ್ರಿ ಚಿತ್ರದುರ್ಗಕ್ಕೆ ಹೊರಟರು, ಇವರ ಅಕ್ಕನ ಮಗಳಿಗೆ ಹೆರಿಗೆಯಾಗಿತ್ತು. ವಾರದಿಂದ ಬೆನ್ನು ನೋವು ನನಗೆ, ಮಗನೊಟ್ಟಿಗೆ ಇನ್ನೊಂದು ದಿನ ಹೋದರಾಯಿತೆಂದು ಸುಮ್ಮನಾಗಿದ್ದೆ. ಹಿರಿಮಗ ಹುಣಸೂರಿಗೆ ಸ್ನೇಹಿತನ ಮದುವೆಗೆಂದು ಇವತ್ತು ಬೆಳಿಗ್ಗೆ ಹೊರಟ. ಸೊಸೆ, ಮೊಮ್ಮಗಳು ಅವನೊಂದಿಗೆ ಹೋಗಿದ್ದಾರೆ. ಗೆಳೆಯರೆಲ್ಲಾ ಬಂದಿದ್ದಾರೆ ಅನ್ನೋ ನೆಪ ಮಾಡಿಕೊಂಡು ಬೆಳಗಿನ ಜಾವ ಐದು ಘಂಟೆಗೇ ಬೈಕನ್ನೇರಿ ಕಿರಿಯವನು ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದ. ಎಂಟು ಘಂಟೆಯವರೆಗೆ ಪತ್ರಿಕೆ ತಿರುವಿ ಹಾಕಿ ಸ್ನಾನಕ್ಕೆ ಹೋದೆ. ಹಂಡೆಯಿಂದ ಬಕೇಟಿಗೆ ನೀರು ವರ್ಗಾಯಿಸುವುದರಲ್ಲಿ ‘ಸ್ನಾನ ಯಾಕೆ ಮಾಡಬೇಕಿವತ್ತು?’ ಎಂದೆನ್ನಿಸಿ ಕೈಕಾಲಿಗೊಂದು ಮುಖ ತೊಳೆಯಲೊಂದು ಚೊಂಬು ನೀರು ಖರ್ಚು ಮಾಡಿ ಉಳಿದದ್ದನ್ನು ಬಚ್ಚಲಿಗೆ ಚೆಲ್ಲಿ ಹೊರಬಂದೆ.

ನವೆಂ 5, 2012

ಜೀವೋತ್ಪಾದಕರ ‘ಹತ್ಯೆ’ಯ ಕಥೆ!



jagadish koppa

ಡಾ ಅಶೋಕ್ ಕೆ ಆರ್

ಭುವಿಯ ಮೇಲೆ ಮೊದಲ ಜೀವಿಯ ಉಗಮವಾಗಿದ್ದು ನೀರಿನಲ್ಲಿ. ಮಂಗಳ ಮತ್ತಿನ್ನಿತರ ಗ್ರಹಗಳ ಮೇಲಿನ ಅಧ್ಯಯನದಲ್ಲಿ ಪ್ರಾಮುಖ್ಯತೆ ದೊರೆಯುವುದು ನೀರಿನ ಅಸ್ತಿತ್ವಕ್ಕೆ. ನಮ್ಮ ದೇಹತೂಕದ ಅರ್ಧಕ್ಕೂ ಅಧಿಕ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ ಎಂಬುದು ಕೂಡ ನೀರಿನ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ. “ನದಿಯ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ” ಎಂಬರ್ಥದ ಮಾತುಗಳನ್ನು ಕೇಳಿದಾಗಲೆಲ್ಲ ನನ್ನಲ್ಲಿ ನೂರಾರು ಪ್ರಶ್ನೆಗಳೇಳುತ್ತವೆ. ನದಿ ನೀರು ಸಮುದ್ರಕ್ಕೆ ಸೇರದಿದ್ದರೆ ಪ್ರಾಕೃತಿಕ ಸಮತೋಲನದಲ್ಲಿ ಏರುಪೇರುಗಳಾಗುವುದಿಲ್ಲವೇ? ಸಮುದ್ರದ ಜೀವಿಗಳ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದಿಲ್ಲವೇ? ಬೃಹತ್ ಅಣೆಕಟ್ಟು ಕಟ್ಟುವುದರಿಂದ ನದಿ ಕೆಳಗಿನ ಪಾತ್ರದ ಜೀವಸಮುದಾಯ, ನಾಗರೀಕತೆಗಳಿಗೆ ಹಾನಿಯುಂಟಾಗುವುದಿಲ್ಲವೇ? ಇನ್ನು ಬೃಹತ್ ಅಣೆಕಟ್ಟೆಗಳಿಂದ ಭೂತಾಪಮಾನದ ಏರುವಿಕೆಯೂ ಹೆಚ್ಚುತ್ತದಂತೆ! ಇಂಥ ಗೊಂದಲಗಳೇ ತುಂಬಿರುವಾಗ ಒಂದಷ್ಟು ಉತ್ತರ ದೊರಕಿಸಿದ್ದು ಡಾ ಎನ್ ಜಗದೀಶ್ ಕೊಪ್ಪರವರ ಕೃತಿ ‘ಜೀವನದಿಗಳ ಸಾವಿನ ಕಥನ’

ಆದರ್ಶವೇ ಬೆನ್ನು ಹತ್ತಿ....ಭಾಗ 11



ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ....ಭಾಗ 10


“ನೀವು ಕೊಟ್ಟಿದ್ದು ಸುಳ್ಳು ಕಂಪ್ಲೇಂಟಾ?! ಏನ್ರೀ ಫಾತಿಮಾ ನೀವು ಹೇಳ್ತಿರೋದು?!”
“ಹೌದು ಸರ್. ಪಾಪ ನಮ್ಮ ಕಾಂತರಾಜ್ ಸರ್ ಯಾವತ್ತೂ ನನ್ನ ಜೊತೆ ಕೆಟ್ಟದಾಗಿ ವರ್ತಿಸಿಲ್ಲ”
“ಮತ್ತೆ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ಯಾಕೆ?”
“ಇದರಲ್ಲಿ ನನ್ನ ತಪ್ಪೇನೂ ಇಲ್ಲ ಸರ್. ರಾಜೇಶ್ ಸರ್ ಮತ್ತು ಅಲಿಯ ಒತ್ತಡದಿಂದ ಇಂಥ ಮಣ್ಣು ತಿನ್ನೋ ಕೆಲಸ ಮಾಡಿಬಿಟ್ಟೆ”

ನವೆಂ 2, 2012

ಭಾಷೆ, ಸಂಸ್ಕೃತಿ ಮತ್ತು ಸಮಾಜ: ಒಂದು ಸಮಾಜಶಾಸ್ತ್ರೀಯ ಪ್ರತಿಫಲನ

kannada
ಜಯಪಾಲ್ ಹಿರಿಯಾಲು 
ಕನ್ನಡ ರಾಜ್ಯೋತ್ಸವ. ಭಾರತದಲ್ಲಿ ಭಾಷೆಯ ಮೇಲೆ ಭೌಗೋಳಿಕ ಪ್ರದೇಶಗಳನ್ನು ರಚಿಸಿದ ದಿನ. ಭಾಷೆ ಮನುಷ್ಯನ ಸಾಂಘಿಕ ಜೀವನದಲ್ಲಿ ಹೊಂದಿರುವ ಪ್ರಾಮುಖ್ಯತೆಯನ್ನು ಅರಿಯಲು ಒಂದು ಪುಟ್ಟ ಪ್ರಯತ್ನ ಮಾಡುತ್ತಿರುವೆ.

ನವೆಂ 1, 2012

ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?!



prakash jha

ಡಾ ಅಶೋಕ್ ಕೆ ಆರ್

ಜಮೀನ್ದಾರಿ ಪದ್ಧತಿಯ ವಿರುದ್ಧ, ಭೂರಹಿತರಿಗೆ ಭೂಮಿ ಹಂಚುವ ಪರವಾಗಿ ಪ್ರಾರಂಭವಾದ ನಕ್ಸಲ್ ಬರಿ ಹೋರಾಟ ಭಾರತದ ಚಳುವಳಿಗಳ ಇತಿಹಾಸದಲ್ಲಿ ಕ್ರಮಿಸಿರುವ ಹಾದಿ ದೊಡ್ಡದು, ವಿಸ್ತಾರವಾದುದು. ತನ್ನೊಳಗೇ ಕಾಲಕಾಲಕ್ಕೆ ನಡೆದ ಸೈದ್ಧಾಂತಿಕ ಸಂಘರ್ಷಗಳು, ಒಡಕುಗಳು, ಹಿಂಸಾತ್ಮಕ ಚಳುವಳಿಗಳ ಬಗ್ಗೆ ಮುಖ್ಯವಾಹಿನಿಯ ಬಹುತೇಕ ಜನರಲ್ಲಿರುವ ಭಯಭರಿತ ತಿರಸ್ಕಾರ, ಸಾವಿರಾರು ಕಾರ್ಯಕರ್ತರ – ಮುಖಂಡರ ಸಾವಿನ ನಂತರವೂ ನಕ್ಸಲ್ ಚಳುವಳಿ ಅಂತ್ಯ ಕಂಡಿಲ್ಲ. ನಕ್ಸಲೈಟ್, ಸಿಪಿಐ – ಎಂ.ಎಲ್, ಪೀಪಲ್ಸ್ ವಾರ್ ಗ್ರೂಪ್ ಮುಂತಾದ ಹೆಸರುಗಳಲ್ಲಿ ಚಲಾವಣೆಗೊಳ್ಳುತ್ತಲೇ ಇರುವ ಈ ಸಿದ್ಧಾಂತ ಹತ್ತನ್ನೆರಡು ವರುಷದ ಹಿಂದೆ ಸಣ್ಣ ಸಣ್ಣ ಸಂಘಟನೆಗಳ ವಿಲೀನದ ನಂತರ ಪಡೆದ ಹೆಸರು ಸಿಪಿಐ – ಮಾವೋವಾದಿ. ಪ್ರಧಾನಿ ಮನಮೋಹನಸಿಂಗ್ ಪದೇ ಪದೇ ಉಚ್ಛರಿಸಿರುವುದನ್ನು ಕೇಳಿರುವಿರಾದರೆ ಈ ಚಳುವಳಿ ಭಾರತದ ಅತಿದೊಡ್ಡ ಆಂತರಿಕ ಶತ್ರು. ಸಾವಿರಾರು ಪೋಲೀಸರು – ಅರೆಸೈನಿಕ ಪಡೆ, ಕೋಟ್ಯಾಂತರ ರುಪಾಯಿಯ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ತಂತ್ರಜ್ಞಾನ, ಅಭಿವೃದ್ಧಿ – ವಿಕಾಸ ಹೊಂದಲು ನಮ್ಮೊಡನೆ ಕೈಜೋಡಿಸಿ ಎಂಬ ಸರಕಾರದ ಘೋಷಣೆಗಳ ನಡುವೆಯೂ ತನ್ನದೇ ಮಾರ್ಗದಲ್ಲಿ ದೇಶದ ವಿವಿಧ ರಾಜ್ಯ – ಜಿಲ್ಲೆಗಳಲ್ಲಿ ನಕ್ಸಲ್ ಚಳುವಳಿ ಬೆಳೆಯುತ್ತಲೇ ಸಾಗುತ್ತಿದೆ. ಕೆಲವೊಮ್ಮೆ ಅಬ್ಬರದಿಂದ, ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನಕ್ಸಲ್ ಚಳುವಳಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ಪರಿಣಾಮಕಾರಿ ಚಿತ್ರ ಪ್ರಕಾಶ್ ಝಾ ನಿರ್ದೇಶನದ “ಚಕ್ರವ್ಯೂಹ”.