ಏಪ್ರಿ 28, 2017

ಮೇ ಸಾಹಿತ್ಯ ಮೇಳ

ಫ್ಯಾಸಿಸಂ ಚಹರೆಗಳು : ಅಪಾಯ-ಪ್ರತಿರೋಧ

೨೦೧೭, ಮೇ ೬ ಮತ್ತು ೭
ಆಲೂರು ವೆಂಕಟರಾವ್ ಸಭಾ ಭವನ, ಧಾರವಾಡ


ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ, ಧಾರವಾಡ


ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೧೫

ಉದ್ಘಾಟನೆ: ಗೀತಾ ಹರಿಹರನ್, ಇಂಡಿಯನ್ ರೈಟರ‍್ಸ್ ಫೋರಂ ಅಧ್ಯಕ್ಷೆ, ದೆಹಲಿ
ಮುಖ್ಯ ಅತಿಥಿಗಳು:
ಮದಿವಣ್ಣನ್, ಕವಿ, ವಿಮರ್ಶಕ, ಈರೋಡು
ಕೆ ನೀಲಾ, ಕಲಬುರಗಿ
ಸಮನ್ವಯ: ಪ್ರೊ. ಅರವಿಂದ ಮಾಲಗತ್ತಿ, ಮೈಸೂರು 
          
ಗೌರವ ಉಪಸ್ಥಿತಿ: ಪ್ರೊ. ಶಿವರುದ್ರ ಕಲ್ಲೋಳಿಕರ, ಎನ್. ಡಿ. ವೆಂಕಮ್ಮ, ವಿಠ್ಠಪ್ಪ ಗೋರಂಟ್ಲಿ, ಅಶೋಕ ಬರಗುಂಡಿ, ಕೆ. ಎನ್. ದೊಡಮನಿ, ರವಿ ನಾಯ್ಕರ
 
ಸಂಯೋಜನೆ : ಡಾ. ಎಚ್. ಎಸ್. ಅನುಪಮಾ

ಮುಸ್ಲಿಂ ಯುವ ಸಮಾವೇಶ

ಅನುಮಾನಿತ, ಅವಮಾನಿತ ಸಮುದಾಯದ ನೋವು ನಲಿವುಗಳ ಕುರಿತು ಚರ್ಚೆ, ಸಂವಾದ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ಮುಸ್ಲಿಂ ಸಮುದಾಯ ಇಂದು ಬಹುದೊಡ್ಡ ಬಿಕ್ಕಟ್ಟಿಗೆ, ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯ ಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ. 

ಏಪ್ರಿ 18, 2017

ಖೋಡಿ ಮನ

ಸವಿತ ಎಸ್ ಪಿ
ನಿನ್ನ ಕಿರುನಗೆಯ ಸುಳಿಯಿಂದ ಹೊರ ಬಂದು
ಎಲ್ಲ ಭಾವಗಳ ಬಚ್ಚಿಟ್ಟು ನಾನು ನೀನು ದ್ವೀಪಗಳಂತೆ, 
ಅಪರಿಚಿತರಂತೆ ಸೋಗು ಹಾಕಿ ಬದುಕುವುದೊಂದು 
ಸಂಘರ್ಷವಲ್ಲದೇ ಮತ್ತೇನೋ ಹುಡುಗಾ...!

ಹೀಗೊಂದು ಪತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರೀತಿಯ ಕೆ,

ಮೊನ್ನೆ ನೀವೆಲ್ಲ ಮಾತಾಡಿದ ಪರ್ಯಾಯ ರಾಜಕಾರಣದ ಮಾತುಗಳನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಕೇಳಿಸಿಕೊಂಡೆ. ಬಹಳ ವಿದ್ವತ್ ಪೂರ್ಣವಾದ ಆ ಮಾತುಗಳನ್ನು, ಅದರಲ್ಲಿದ್ದ ಸಮರ್ಥನೀಯ ಗುಣವನ್ನು ಅಲ್ಲಗೆಳೆಯಲು ಸಾದ್ಯವೇ ಇಲ್ಲವಾದರೂ ಆ ಕ್ಷಣಕ್ಕೆ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತು ನಿಜ. ಆದರೆ ಆ ಪ್ರಶ್ನೆಗಳಿಗೆ ಒಂದು ಸ್ಪಷ್ಟರೂಪ ಬರಲು ಒಂದಷ್ಟು ದಿನಗಳೇ ಬೇಕಾಗಿದ್ದು, ಇದೀಗ ಆ ಪ್ರಶ್ನೆಗಳನ್ನು ನಿನಗೆ ಕೇಳುತ್ತಿರುವೆ. ನಿಮ್ಮ ಬದ್ದತೆಯನ್ನಾಗಲಿ, ನೀವು ನಡೆಯಹೊರಟಿರುವ ಹಾದಿಯ ಬಗ್ಗೆಯಾಗಲಿ ನನಗೆ ಕಿಂಚಿತ್ತೂ ಅನುಮಾನವಿಲ್ಲ ಮತ್ತು ಅಸಹನೆಯೂ ಇಲ್ಲ. 

ಏಪ್ರಿ 5, 2017

ಒಂದು ಕತೆ....

ಎಸ್. ಅಭಿ ಗೌಡ, ಹನಕೆರೆ.
ಕಳ್ಳ ಸಂಬಂಧಗಳ ಸಿಗ್ನಲ್‍ಗಳು ನೈತಿಕ ಸಂಬಂಧಗಳ ಸಿಗ್ನಲ್‍ಗಳಿಗಿಂತ ಸೂಕ್ಷ್ಮ. ರೂಮಿನೊಳಗೆ “ಯಾ ಆಲಿ” ಹಾಡು ಅಷ್ಟು ಜೋರಾಗಿ ಮೊಳಗುತ್ತಿತ್ತು, ಸ್ನೇಹಿತರೆಲ್ಲ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದದ್ದು ಮಾತ್ರವಲ್ಲ ಪೂರ್ಣನೂ ಕುಡಿದು ಕುಣಿಯುತ್ತಿದ್ದ. ಆರ್.ಎಕ್ಸ್100 ಬೈಕಿನ ಹಾರ್ನ್ ಒಂದು ಬಾರಿ ಆಗುತ್ತಿದ್ದಂತೆ ಹಾಗೆ ರೂಮಿನಿಂದ ಹೊರಬಂದ ಪೂರ್ಣ ಕತ್ತಲಲ್ಲಿ ಆರ್.ಎಕ್ಸ್ 100 ಏರಿ ಹೊರಟುಹೋದ. ಸಮಯ ರಾತ್ರಿ 10:45. ಯಾರು ಕೂಡ ಅಷ್ಟೊತ್ತು ರಾತ್ರಿಯಲ್ಲಿ ಆರ್.ಎಕ್ಸ್100 ಬೈಕಲ್ಲಿ ಅಲ್ಲಿ ಬಂದು ಪೂರ್ಣನನ್ನು ಕರೆದುಕೊಂಡು ಹೋಗಿದ್ದು ಸುಂದರವಾದ ಹುಡುಗಿಯೆಂದು ಊಹಿಸಲು ಸಾಧ್ಯವಿಲ್ಲ, ಆಕೆ ಎಷ್ಟು ಸುಂದರಿಯೆಂದರೆ ಬೈಕ್ ಹತ್ತಿದ ಮರುಕ್ಷಣವೇ ಹೆಲ್ಮೆಟ್ ತೆಗೆದು ಮುತ್ತಿಕಲು ಆತುರ ಪಡುತ್ತಿದ್ದ ಪೂರ್ಣ.

ಏಪ್ರಿ 4, 2017

ಗದ್ದರ್ ನೆನಪಲ್ಲೊಂದು ಗೆಳೆಯರ ಕತೆ......

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಗದ್ದರ್!
ಗದ್ದರ್ !!
ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಿರುವ ಗದ್ದರ್ ಇಷ್ಟು ವರ್ಷಗಳ ಕಾಲ ತಾವು ನಂಬಿಕೊಂಡಿದ್ದ ಮಾರ್ಕ್ಸ್ ವಾದವನ್ನು ಹಾಡುನೃತ್ಯಗಳ ಮೂಲಕ ಜನರಿಗೆ ಅದರಲ್ಲಿಯೂ ತಳ ಸಮುದಾಯಗಳ ಯುವಕರಿಗೆ ತಲುಪಿಸುತ್ತಿದ್ದ ಕ್ರಾಂತಿಕಾರಿ ನಾಯಕ. ಇದೀಗ ಇಂತಹ ಗದ್ದರ್ ಪುರೋಹಿತರ ಪಾದದ ಬಳಿ ಮಂಡಿಯೂರಿ ಕುಳಿತು ಪೂಜೆ ಸಲ್ಲಿಸಿದ ಬಗ್ಗೆ ಪರವಿರೋಧಗಳ ಚರ್ಚೆ ಬಿರುಸಿನಿಂದ ನಡೆಯುತ್ತಿದೆ.

ಯಾಕೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ಹೀಗೆ ಬದಲಾಗಿ ಬಿಡುತ್ತಾನೆ? ಅಥವಾ ನಾವು ಅಂದುಕೊಳ್ಳುವ ಆ ‘ಇದ್ದಕ್ಕಿದ್ದಂತೆ’ ಎಂಬುದು ಆ ವ್ಯಕ್ತಿಯ ಒಳಗೆ ವರುಷಗಳಿಂದ ನಡೆಯುತ್ತಿದ್ದ ತಳಮಳಗಳ ಪ್ರತಿಫಲವೇ ಎಂಬುದನ್ನು ಯೋಚಿಸಲೂ ಕಾಯದೆ ತತ್ ಕ್ಷಣದ ಪ್ರತಿಕ್ರಿಯೆ ನೀಡುವ ಭರದಲ್ಲಿ ನಾವು ಎಡವುತ್ತಿದ್ದೇವೆಯೇ? ಗೊತ್ತಿಲ್ಲ!

ಹೇ ಹುಡುಗಿ.

ನಾಗಪ್ಪ.ಕೆ.ಮಾದರ
ಹೇ ಹುಡಗಿಯೇ
ಕೇಳು ನನ್ನ ಪ್ರೀತಿಯ
ಮಧುರ ಆಪಾಪನೆಯನು!

ಮಾರ್ಚ್ 29, 2017

ಮಾಧ್ಯಮಗಳನ್ನು ನಿಯಂತ್ರಿಸುವುದು ಸರಿಯೇ?

ಡಾ. ಅಶೋಕ್. ಕೆ. ಆರ್.
ಇತ್ತೀಚೆಗೆ ಕರ್ನಾಟಕದ ಉಭಯ ಸದನಗಳಲ್ಲಿ ಮಾಧ್ಯಮದ, ಅದರಲ್ಲೂ ದೃಶ್ಯ ಮಾಧ್ಯಮದವರ ಅತಿಗಳ ಬಗ್ಗೆ ನಾಲ್ಕು ಘಂಟೆಗಳಷ್ಟು ಸುದೀರ್ಘ ಅವಧಿಯವರೆಗೆ ಚರ್ಚೆಗಳಾಗಿತ್ತು. ವೈಯಕ್ತಿಕ ಅವಹೇಳನ, ವ್ಯಕ್ತಿಗತ ಟೀಕೆಗಳ ಬಗ್ಗೆ ಬಹಳಷ್ಟು ಸದಸ್ಯರು ಬೇಸರ, ಕೋಪ ವ್ಯಕ್ತಪಡಿಸಿದ್ದರು. ಮಾಧ್ಯಮಗಳನ್ನು ನಿಯಂತ್ರಿಸಬೇಕು, ವೈಯಕ್ತಿಕ ತೇಜೋವಧೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದರು. ವರದಿ ಮಾಡಲು ಸದನ ಸಮಿತಿ ರಚಿಸಲಾಗುತ್ತದೆ ಎಂದು ಸ್ಪೀಕರ್ ಕೋಳಿವಾಡರು ತಿಳಿಸಿದ್ದರು. ಅಂದು ಮಾಧ್ಯಮದ ವಿರುದ್ಧ ನಡೆದ ಚರ್ಚೆಯಲ್ಲಿ ಭಾಗವಹಿಸದವರೂ ಸಹಿತ ಮೌನದಿಂದಿದ್ದು ಒಪ್ಪಿಗೆ ಸೂಚಿಸಿದ್ದರು. ಸರಕಾರದ ಮಟ್ಟದಲ್ಲಿ ಕೆಲಸ ನಡೆಯುವ ವೇಗ ನಮಗೆ ಗೊತ್ತೇ ಇದೆ. ಈ ವಿಷಯದಲ್ಲಿ ಆ ರೀತಿಯಾಗದೆ ಅತಿ ಶೀಘ್ರವಾಗಿ ಸದನ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯ ಕೆ.ಎಸ್. ಈಶ್ವರಪ್ಪನವರು ಸಮಿತಿ ರಚನೆಯನ್ನು ವಿರೋಧಿಸಿದ್ದಾರೆ, ಸಮಿತಿ ರಚನೆ ಯಾಕೆ ತಪ್ಪು – ಮಾಧ್ಯಮಗಳನ್ನು ನಿಯಂತ್ರಿಸುವುದು ಯಾಕೆ ಸರಿಯಲ್ಲ ಎಂದು ಕಾಂಗ್ರೆಸ್ಸಿನ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ. ಮಾಧ್ಯಮಗಳನ್ನು ನಿಯಂತ್ರಿಸಬೇಕೆ?

ಉಪಚುನಾವಣೆಗಳೆಂಬ ಅನಿವಾರ್ಯ ಅನಿಷ್ಠಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೇ ಏಪ್ರಿಲ್ ಒಂಭತ್ತನೇ ತಾರೀಖಿನಂದು ಕರ್ನಾಟಕದ ಎರಡು ವಿದಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯ ಶಾಸಕರಾಗಿದ್ದ ಶ್ರೀ ಮಹದೇವ ಪ್ರಸಾದ್ ನಿಧನರಾಗಿದ್ದರೆ, ಇದೇ ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಿದ್ದ ಶ್ರೀ ಶ್ರೀನಿವಾಸ್ಪ್ರಸಾದ್ ತಾವು ಆಯ್ಕೆಯಾಗಿ ಬಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರ ಮುಂದುವರೆದ ಭಾಗವಾಗಿ ತಮ್ಮ ಶಾಸಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ತೆರವಾದ ಈ ಎರಡೂ ಕ್ಷೇತ್ರಗಳಿಗೆ ಇದೀಗ ಉಪಚುನಾವಣೆಗಳು ನಡೆಯುತ್ತಿವೆ.

ಇರಲಿ, ನಮ್ಮ ರಾಜ್ಯದ ವಿದಾನಸಭೆಯ ಐದು ವರ್ಷಗಳ ಅವಧಿ ಮುಗಿಯುವುದು ಮುಂದಿನ ವರ್ಷದ ಅಂದರೆ 2018ರ ಮೇ ತಿಂಗಳಿಗೆ. ಅಂದರೆ ಈ ಸದನದ ಅವಧಿ ಬಾಕಿ ಇರುವುದು ಇನ್ನು ಕೇವಲ ಹದಿನಾಲ್ಕು ತಿಂಗಳುಗಳು ಮಾತ್ರವಾದರು, ಮೂರು ತಿಂಗಳ ಮುಂಚೆಯೇ ಚುನಾವಣೆಯ ಅಧಿಕೃತ ಅದಿಸೂಚನೆ ಹೊರಬೀಳುವುದರಿಂದ ಶಾಸಕರು ಸಕ್ರಿಯವಾಗಿ ಕೆಲಸ ಮಾಡಲು ಉಳಿದಿರುವುದು ಕೇವಲ 11 ತಿಂಗಳುಗಳು ಮಾತ್ರ. ಇಷ್ಟು ಕಡಿಮೆ ಅವಧಿಗಾಗಿ ಒಂದು ಚುನಾವಣೆ ನಡೆಸಬೇಕೇ ಮತ್ತು ಸರಕಾರವೊಂದು ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಬೇಕೇ ಎಂಬ ಸರಳ ಪ್ರಶ್ನೆ ಜನತೆಯಲ್ಲಿ ಉದ್ಭವವಾದರೆ ಅಚ್ಚರಿಯೇನಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ, ಸರಕಾರದಲ್ಲಿ ಜನರ ಬಾಗವಹಿಸುವಿಕೆ ಬಹಳ ಮುಖ್ಯವಾಗಿರುವುದರಿಂದ ಇಂತಹ ಚುನಾವಣೆಗಳಿಗೆ ಸರಕಾರ ವೆಚ್ಚ ಮಾಡಲೇ ಬೇಕಾದುದು ಅನಿವಾರ್ಯವಾಗಿದೆ ಎಂಬುದು ಸಹ ಅಷ್ಟೇ ಸತ್ಯ. ನನ್ನ ತಕರಾರು ಇರುವುದು ಈ ವೆಚ್ಚದ ಬಗೆಗಲ್ಲ. ಬದಲಿಗೆ ಉಪಚುನಾವಣೆಗಳಿಗೆ ಕಾರಣವಾಗುವ ವಿಷಯಗಳ ಬಗ್ಗೆ. ಅದರ ಬಗ್ಗೆ ಒಂದಿಷ್ಟು ನೋಡೋಣ:

ಮಾರ್ಚ್ 22, 2017

ಪದ್ಯವಾಗ ಹೊರಟ ಗದ್ಯದಂತ ಸಾಲುಗಳು….

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜದ್ರೋಹ!
ಒಮ್ಮೊಮ್ಮೆ ಹೀಗಾಗಿ ಬಿಡುತ್ತೆ:
ಸತ್ಯ ಹೇಳೋದು
ಸುಳ್ಳನ್ನ ಧಿಕ್ಕರಿಸೋದು
ರಾಜದ್ರೋಹ ಆಗುತ್ತೆ!