ಏಪ್ರಿ 1, 2019
ಮಾರ್ಚ್ 28, 2019
ಒಂದು ಬೊಗಸೆ ಪ್ರೀತಿ - 11
ಡಾ. ಅಶೋಕ್. ಕೆ. ಆರ್.
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕರೆಂಟು ಬಂದು ಟಿವಿ ಆನ್ ಆಯಿತು. ಯಾಕಿಷ್ಟು ಖುಷಿ. ಗೊತ್ತಾಗಲಿಲ್ಲ. ಸಾಗರ್ ಇಷ್ಟವಾಗುತ್ತಿದ್ದ. ಎಂಬಿಬಿಎಸ್ ಮಾಡಿದಾಗಲೇ ಇಷ್ಟವಾಗಿದ್ದ, ಈಗ ಮತ್ತಷ್ಟು ಇಷ್ಟವಾಗುತ್ತಿದ್ದಾನೆ. ಹತ್ತಿರವೂ ಆಗುತ್ತಿದ್ದಾನೆ. ಅವನ ಬಗ್ಗೆ ಇನ್ನೂ ಹೆಚ್ಚೇನು ಗೊತ್ತಿಲ್ಲ. ನನ್ನ ಬಗ್ಗೆಯೂ ಅವನಿಗೆ ಇನ್ನೂ ಹೆಚ್ಚು ತಿಳಿದಿಲ್ಲ. ಆದರೂ ಯಾಕವನು ಇಷ್ಟವಾಗಬೇಕು? ಕಪಟ ನಾಟಕವಿಲ್ಲದ ಅವನ ಮಾತುಗಳಿಂದಲೇ ಹೆಚ್ಚು ಇಷ್ಟವಾಗುತ್ತಾನೆ. ಇದ್ದದನ್ನು ಇದ್ದಂಗೆ ಹೇಳಿಬಿಡುವ ಅವನ ಗುಣ ಕೆಲವೊಮ್ಮೆ ಕಿರಿಕಿರಿ ಉಂಟುಮಾಡುತ್ತೆ. ಕೆಲವೊಮ್ಮೆ ಮಾತ್ರ. ಅವನನ್ನು ಭೇಟಿಯಾಗಿ ಎದುರಾಎದುರು ಕುಳಿತು ಮಾತನಾಡಬೇಕು ಅನ್ನಿಸುತ್ತೆ. ನನ್ನಿಡೀ ಜೀವನದ ಕತೆಯನ್ನು ಹೇಳಿಕೊಂಡು ಹಗುರಾಗಬೇಕು ಅನ್ನಿಸುತ್ತೆ. ಏನ್ ಮಾಡೋದು ಅವನಿರೋದು ಮಂಗಳೂರಿನಲ್ಲಿ ನಾನಿರೋದು ಮೈಸೂರಿನಲ್ಲಿ. ಪರೀಕ್ಷೆಯೆಲ್ಲ ಮುಗಿಸಿಕೊಂಡ ತಕ್ಷಣ ಮೈಸೂರಿಗೆ ಬಾ ತುಂಬಾ ಮಾತನಾಡಬೇಕು ನಿನ್ನೊಟ್ಟಿಗೆ ಅಂದುಬಿಡಲಾ? ಅವನ ಪರೀಕ್ಷೆ ಮುಗಿಯೋದಿಕ್ಕೆ ತಿಂಗಳುಗಟ್ಟಲೆ ಕಾಯಬೇಕು. ಮನದ ದುಗುಡವೇನೋ ಅಲ್ಲಿಯವರೆಗೂ ಕಾಯುತ್ತೆ, ಕಾಯೋ ತಾಳ್ಮೆ ನನಗೇ ಇಲ್ಲದಂತಾಗಿದೆ. ಮೆಸೇಜಿನಲ್ಲೇ ಸಾಧ್ಯವಾದಷ್ಟು ಹೇಳಿಬಿಡಬೇಕು ಇವತ್ತೇ. ಈಗಲೇ ಹೇಳಿಬಿಡೋಣ ಎಂದು ಮೊಬೈಲು ತೆಗೆದುಕೊಂಡೆ. ಮೆಸೇಜ್ ಟೈಪು ಮಾಡಲು ಪ್ರಾರಂಭಿಸುವಷ್ಟರಲ್ಲಿ ರಾಜೀವನ ಫೋನ್ ಬಂತು.
‘ಹಲೋ ಎಲ್ರೀ ಇದ್ದೀರ. ನಾಟ್ ರೀಚೆಬಲ್ ಬರ್ತಿತ್ತು’
“ಹನುಮಂತನ ಗುಂಡಿ ಫಾಲ್ಸಿಗೆ ಬಂದಿದ್ದೋ. ಅಲ್ಲಿ ನೆಟ್ ವರ್ಕ್ ಇರಲಿಲ್ಲ. ಈಗ ಮಿಸ್ಡ್ ಕಾಲ್ ತೋರಿಸ್ತು. ಫೋನ್ ಮಾಡ್ದೆ”
‘ಹಲೋ ಎಲ್ರೀ ಇದ್ದೀರ. ನಾಟ್ ರೀಚೆಬಲ್ ಬರ್ತಿತ್ತು’
“ಹನುಮಂತನ ಗುಂಡಿ ಫಾಲ್ಸಿಗೆ ಬಂದಿದ್ದೋ. ಅಲ್ಲಿ ನೆಟ್ ವರ್ಕ್ ಇರಲಿಲ್ಲ. ಈಗ ಮಿಸ್ಡ್ ಕಾಲ್ ತೋರಿಸ್ತು. ಫೋನ್ ಮಾಡ್ದೆ”
‘ಫ್ರೆಂಡ್ಸ್ ಜೊತೆ ಹೋದ ಮೇಲೆ ಇರೋ ಒಬ್ಳು ಹೆಂಡ್ತೀನ ಮರೆತೇಬಿಟ್ರಲ್ಲ’
“ಹೆ ಹೆ. ಹಂಗೆಲ್ಲ ಏನೂ ಇಲ್ಲ ಡಾರ್ಲಿಂಗ್”
‘ಎಷ್ಟು ಕುಡಿದಿದ್ದೀರ’
“ಇಲ್ಲಪ್ಪ”
“ಹೆ ಹೆ. ಹಂಗೆಲ್ಲ ಏನೂ ಇಲ್ಲ ಡಾರ್ಲಿಂಗ್”
‘ಎಷ್ಟು ಕುಡಿದಿದ್ದೀರ’
“ಇಲ್ಲಪ್ಪ”
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಮಾರ್ಚ್ 18, 2019
ಒಂದು ಬೊಗಸೆ ಪ್ರೀತಿ - 10
ಡಾ. ಅಶೋಕ್. ಕೆ. ಆರ್.
‘ರೀ ನನಗೂ ಈಗ ರಜೆ ಸಿಕ್ತಿತ್ತು. ನಾನೂ ಬರ್ತಿದ್ದೆನಲ್ಲ’
“ಹೇ ಹೋಗೆ. ನಾವು ಹುಡುಗರುಡುಗರು ಹೋಗ್ತಿದ್ದೀವಿ. ಅಲ್ಲಿ ನಿನ್ನ ಕರ್ಕೊಂಡು ಹೋಗೋದಿಕ್ಕಾಗುತ್ತ?”
‘ನಾನು ನೀವೇ ಎಲ್ಲದ್ರೂ ಹೋಗಿ ಬರೋಣ ನಡೀರಿ. ನನಗೂ ಅದೇ ಕೆಲಸ ಮಾಡಿ ಮಾಡಿ ಸಾಕಾಗಿಹೋಗಿದೆ’
“ಅಯ್ಯೋ ನೀನು ಮುಂಚೆ ಹೇಳ್ಬಾರ್ದ. ನಮ್ ಹುಡುಗರಿಗೆ ಗ್ಯಾರಂಟಿ ಬರ್ತೀನ್ರಮ್ಮ ಅಂತ ಹೇಳ್ಬಿಟ್ಟಿದ್ದೀನಿ”
‘ಹೇಳೋಕ್ಮುಂಚೆ ನನಗೊಂದು ಮಾತು ಕೇಳಬಾರದಾ?’
“ಅಯ್ಯೋ ಹೋಗ್ಲಿ ಬಿಡು. ಮೂರು ದಿನ ಹೋಗಿ ಬಂದುಬಿಡ್ತೀನಿ. ಮುಂದಿನ ವಾರ ನಾವಿಬ್ರೂ ಝುಮ್ಮಂತ ಕಾರಿನಲ್ಲಿ ಎಲ್ಲಿಗಾದರೂ ಹೋಗಿ ಬರೋಣ. ಮತ್ತೆ ವಯನಾಡಿಗೆ ಹೋಗೋಣ್ವಾ?” ಕಣ್ಣು ಮಿಟುಕಿಸುತ್ತ ಕೇಳಿದ.
‘ಮುಂದಿನ ವಾರ ನನಗೆ ರಜೆ ಸಿಗಬೇಕಲ್ಲ. ಏನಾದ್ರೂ ಮಾಡ್ಕೊಳ್ಳಿ. ಫ್ರೆಂಡ್ಸ್ ಜೊತೆ ಹೋಗೋದು ಅಂದ್ರೆ ಎಲ್ಲಿಲ್ಲದ ಖುಷಿ ಬಂದುಬಿಡುತ್ತೆ. ಹೆಂಡತಿ ಜೊತೆ ಹೋಗ್ಬೇಕಂದ್ರೆ ಮುಖ ಸಿಂಡರಿಸಿಕೊಂಡಂಗೆ ಇರುತ್ತೆ. ಅವರ ಜೊತೆ ಇದ್ರೆ ತೂರಾಡಿ ಬೀಳುವಷ್ಟು ಕುಡೀಬೋದಲ್ಲ’
“ನಮ್ ಫಾರ್ಮಸಿ ಫ್ರೆಂಡ್ಸೆಲ್ಲ ಮೂರು ದಿನ ಚಿಕ್ಕಮಗಳೂರು ಕಡೆಗೆ ಟ್ರಿಪ್ಪು ಹೊರಟಿದ್ದೀವಿ. ನಾಳೆ ರಾತ್ರಿ ಹೊರಡ್ತೀವಿ” ಮನೆಗೆ ಬರುತ್ತಿದ್ದಂತೆ ಘೋಷಿಸಿದರು ರಾಜಿ.
‘ರೀ ನನಗೂ ಈಗ ರಜೆ ಸಿಕ್ತಿತ್ತು. ನಾನೂ ಬರ್ತಿದ್ದೆನಲ್ಲ’
“ಹೇ ಹೋಗೆ. ನಾವು ಹುಡುಗರುಡುಗರು ಹೋಗ್ತಿದ್ದೀವಿ. ಅಲ್ಲಿ ನಿನ್ನ ಕರ್ಕೊಂಡು ಹೋಗೋದಿಕ್ಕಾಗುತ್ತ?”
‘ನಾನು ನೀವೇ ಎಲ್ಲದ್ರೂ ಹೋಗಿ ಬರೋಣ ನಡೀರಿ. ನನಗೂ ಅದೇ ಕೆಲಸ ಮಾಡಿ ಮಾಡಿ ಸಾಕಾಗಿಹೋಗಿದೆ’
“ಅಯ್ಯೋ ನೀನು ಮುಂಚೆ ಹೇಳ್ಬಾರ್ದ. ನಮ್ ಹುಡುಗರಿಗೆ ಗ್ಯಾರಂಟಿ ಬರ್ತೀನ್ರಮ್ಮ ಅಂತ ಹೇಳ್ಬಿಟ್ಟಿದ್ದೀನಿ”
‘ಹೇಳೋಕ್ಮುಂಚೆ ನನಗೊಂದು ಮಾತು ಕೇಳಬಾರದಾ?’
“ಅಯ್ಯೋ ಹೋಗ್ಲಿ ಬಿಡು. ಮೂರು ದಿನ ಹೋಗಿ ಬಂದುಬಿಡ್ತೀನಿ. ಮುಂದಿನ ವಾರ ನಾವಿಬ್ರೂ ಝುಮ್ಮಂತ ಕಾರಿನಲ್ಲಿ ಎಲ್ಲಿಗಾದರೂ ಹೋಗಿ ಬರೋಣ. ಮತ್ತೆ ವಯನಾಡಿಗೆ ಹೋಗೋಣ್ವಾ?” ಕಣ್ಣು ಮಿಟುಕಿಸುತ್ತ ಕೇಳಿದ.
‘ಮುಂದಿನ ವಾರ ನನಗೆ ರಜೆ ಸಿಗಬೇಕಲ್ಲ. ಏನಾದ್ರೂ ಮಾಡ್ಕೊಳ್ಳಿ. ಫ್ರೆಂಡ್ಸ್ ಜೊತೆ ಹೋಗೋದು ಅಂದ್ರೆ ಎಲ್ಲಿಲ್ಲದ ಖುಷಿ ಬಂದುಬಿಡುತ್ತೆ. ಹೆಂಡತಿ ಜೊತೆ ಹೋಗ್ಬೇಕಂದ್ರೆ ಮುಖ ಸಿಂಡರಿಸಿಕೊಂಡಂಗೆ ಇರುತ್ತೆ. ಅವರ ಜೊತೆ ಇದ್ರೆ ತೂರಾಡಿ ಬೀಳುವಷ್ಟು ಕುಡೀಬೋದಲ್ಲ’
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ತೆವಳುವ ಕಾಲ
ಕು.ಸ.ಮಧುಸೂದನ ರಂಗೇನಹಳ್ಳಿ
ಬೇಸಿಗೆ ಬಿಸಿಲಿಗೆ ಕಾದ ನೆಲದೊಳಗೆ
ಉರಿಯುವ ಕಾಣದ ಕೆಂಪು
ಮದ್ಯಾಹ್ನದ ಧಗೆಗೆ ಉಬ್ಬೆ ಹಾಕಿದಂತೆ
ನಿಸ್ತೇಜವಾಗಿ ಬಿಳಿಚಿಕೊಂಡ ಕಣ್ಣುಗಳಿಗೆ ಜೊಂಪು
ಹೊಲವಿದ್ದರೂ ಹಸಿರಿಲ್ಲ
ಹಸಿರಿದ್ದರೂ ಉಸಿರಿಲ್ಲ
ತೆವಳುವ ಮುಳ್ಳುಗಳ ಗಡಿಯಾರ ನಿಂತ ವರುಷ ಜ್ಞಾಪಕಕೆ ಬರುತಿಲ್ಲ
ಮೊನ್ನೆ ಹಾರಿ ಹೋದ ಹಕ್ಕಿಗಳು
ಹಿಂದಿನ ಸಾಯಂಕಾಲ ಬಾರದೆ ಇರುಳಿಡೀ ಖಾಲಿಯುಳಿದ ಗೂಡುಗಳು
ಮೇಯಲು ಹೋದ ಹಸುವ ಹುಲಿ ಹಿಡಿಯಿತೊ
ಹುಲಿ ಹೆಸರಲಿ ಮನುಜರೇ ಮುಕ್ಕಿದರೊ
ಹುಡುಕುತ್ತ ಕಾಡಿಗೋದವನ ಹೆಣ ಹೊತ್ತು ತಂದರು
ಹಾಡಿಯ ಜನ ಗೋಣಿತಾಟೊಳಗೆ ಸುತ್ತಿ
---
ಮಾರ್ಚ್ 16, 2019
ಮುಗಿದ ಕಥೆ
ಹರ್ಷಿತಾ ಕೆ.ಟಿ
ಏನೋ ಸಾಲುತ್ತಿಲ್ಲ
ಆದರೂ ಏನೂ ಬೇಕೆನಿಸುತ್ತಿಲ್ಲ
ತೀರಾ ಖಾಲಿಯಾಗಿದೆ ಮನವು
ಆದರೂ ಏನೋ ಭಾರವೆನಿಸಿದಂತೆ
ನನ್ನೆಲ್ಲಾ ನೋವುಗಳು ಮಾಗಿರಬೇಕು
ಕಣ್ಣಂಚೂ ಕಟ್ಟೆಯೊಡೆಯುತ್ತಿದೆ ಗಳಿಗೆಗೊಮ್ಮೆ
ಏನಾಗಿದೆ ನಿನಗೆ ಎಂದು
ಹುಬ್ಬೇರಿಸಿದಾಗಲೆಲ್ಲಾ ಅವನು
ನೀನೇ ಕಾರಣ ಎಲ್ಲದಕ್ಕೂ
ಎಂದು ಕುತ್ತಿಗೆ ಪಟ್ಟಿ ಹಿಡಿದು
ಚೀರಿ ಹೇಳಬೇಕೆನಿಸಿತು
ಅವನ ಕಣ್ಣಲ್ಲಿ ದಿಟ್ಟಿಸಿ
ನಾವು ಕಟ್ಟಿದ ಕನಸುಗಳು ಈಗೆಲ್ಲಿ
ಎಂದು ಕೇಳಬೇಕೆನಿಸಿತು
ಮಾರ್ಚ್ 15, 2019
ಮಾರ್ಚ್ 12, 2019
ಒಂದು ಬೊಗಸೆ ಪ್ರೀತಿ - 9
ಡಾ. ಅಶೋಕ್. ಕೆ. ಆರ್.
ರಾಜೀವ್ ಮದುವೆಯಾದ ಹೊಸತರಲ್ಲಿ ಸರಿಯಾಗೇ ಇದ್ದರು. ಕೇರಳದ ವಯನಾಡಿನ ಹತ್ತಿರವಿರುವ ವಿಲೇಜ್ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದರು ಹನಿಮೂನಿಗೆಂದು. ತುಂಬಾ ಚೆಂದದ ಜಾಗವದು. ಐದೇ ಐದು ಗುಡಿಸಲಿನಂತಹ ಮನೆ. ಒಂದು ಮೂಲೆಯಲ್ಲಿ ಊಟದ ಕೋಣೆ. ಸುತ್ತಲೂ ಅಡಿಕೆ ತೋಟ. ಅಡಿಕೆಯ ಮಧ್ಯೆ ಅಲ್ಲೊಂದಿಲ್ಲೊಂದು ಬಾಳೆಗಿಡಗಳು. ಸುತ್ತಮುತ್ತ ಎರಡು ಕಿಲೋಮೀಟರು ಯಾವ ಮನೆಯೂ ಇರಲಿಲ್ಲ. ರೂಮು ಹನಿಮೂನಿಗೆಂದು ಬರುವವರಿಗೇ ಮಾಡಿಸಿದಂತಿತ್ತು. ದೊಡ್ಡ ಮಂಚ, ಮೆದುವಾದ ಹಾಸಿಗೆ, ಮಂಚದ ಪಕ್ಕದ ಮೇಜಿನ ಮೇಲೆ ಘಮ್ಮೆನ್ನುವ ಮಲ್ಲಿಗೆ ಮತ್ತು ಸಂಪಿಗೆ ಹೂವು. ಕುಳಿತುಕೊಳ್ಳಲು ಕುರ್ಚಿಯೇ ಇಟ್ಟಿರಲಿಲ್ಲ! ಇನ್ನು ರೂಮಿಗೆ ಹೊಂದಿಕೊಂಡಿದ್ದ ಬಚ್ಚಲು ಕೋಣೆಯಲ್ಲಿ ಒಂದು ಮೂಲೆಗೆ ಕಮೋಡು. ಮತ್ತೊಂದು ಮೂಲೆಯಲ್ಲಿ ಇಬ್ಬರು ಆರಾಮಾಗಿ ಕೂರಬಹುದಾದ ಬಾತ್ ಟಬ್. ಬಿಸಿ ನೀರು ಟಬ್ಬಿನೊಳಗಡೆ ಮಾತ್ರ ಬರುತ್ತಿತ್ತು! ರಾಜಿ ಮುಂದೆ ಮೊದಲು ಬೆತ್ತಲಾಗಿದ್ದು ಬಚ್ಚಲು ಮನೆಯ ಆ ಟಬ್ಬಿನಲ್ಲೇ. ನಾನು ಪ್ಯಾಂಟು ಟಿ ಶರಟು ಧರಿಸಿದ್ದೆ, ಅವರು ಬನಿಯನ್ನು, ಚೆಡ್ಡಿ. ಇಬ್ಬರೂ ಬಟ್ಟೆಯಲ್ಲೇ ಟಬ್ಬಿನೊಳಗಡೆ ಕುಳಿತೆವು. ನಾನು ನೀರು ತಿರುಗಿಸಿದೆ. ಬೆಚ್ಚಗಿನ ನೀರು ದೇಹವನ್ನಾವರಿಸುತ್ತಿತ್ತು. ರಾಜಿ ಮುಖದ ತುಂಬ ಮುತ್ತಿನ ಮಳೆ ಸುರಿಸುತ್ತಿದ್ದರು. ನಿಧಾನಕ್ಕೆ ನನ್ನ ಬಟ್ಟೆಗಳನ್ನೆಲ್ಲ ಕಳಚಿದರು. ಇಬ್ಬರೂ ಬೆತ್ತಲಾಗುವಷ್ಟರಲ್ಲಿ ಟಬ್ಬಿನ ನೀರು ತುಂಬಿತ್ತು. ನೀರಿನೊಳಗಡೆಯೇ ನನ್ನ ದೇಹವನ್ನೆಲ್ಲ ಸ್ಪರ್ಶಿಸಿದರು. ಸತತ ಸ್ಪರ್ಶದ ಕೆಲಸದಿಂದ ಸುಸ್ತಾಗಿ ಕುಳಿತಾಗ ಅವರ ದೇಹವನ್ನು ಸ್ಪರ್ಶಿಸುವ ಕೆಲಸ ನನ್ನದಾಯಿತು. ಗಡುಸಾಗಿದ್ದರು. ಹಾಗೇ ಮೇಲೆ ಎದ್ದು ಬಂದು ಒಂದಷ್ಟು ಚೇಷ್ಟೆ ಮಾಡಿಕೊಳ್ಳುತ್ತ ಮೈ ಒರೆಸಿಕೊಂಡೆವು. ನನ್ನನ್ನು ಹಿಂದಿನಿಂದ ತಬ್ಬಿಕೊಂಡು ‘ಇದು ತುಂಬಾ ಚೆನ್ನಾಗಿದೆ’ ಎಂದು ಎರಡೂ ಮೊಲೆಗಳನ್ನು ಬಿಗಿಯಾಗಿ ಹಿಡಿದುಕೊಂಡರು. ‘ರೀ ಮೆಲ್ಲಗೆ’ ಎಂದು ಕಿರುಚಿದೆ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಮಾರ್ಚ್ 11, 2019
ಮಾರ್ಚ್ 5, 2019
ಸುಮಲತಾ ಅಂಬರೀಷ್ ಗೊಂದು ಪತ್ರ.
ಪ್ರೀತಿಯ ಸುಮಲತಾ ಅಂಬರೀಷ್ ರವರಿಗೆ,
ದಶಕಗಳ ಕಾಲದಿಂದ ಜೊತೆಗಿದ್ೲದ ಸಂಗಾತಿಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿರುವವರಿಗೆ ಹೇಗಿದ್ದೀರಿ ಅಂತೆಲ್ಲ ಕೇಳಿ ಮುಜುಗರಕ್ಕೊಳಪಡಿಸಬಾರದೆಂಬ ಅರಿವಿದೆ. ಅಂಬರೀಷ್ ಎಂಬ ಚಿತ್ರ ನಟನ ಸಾವು ಅಭಿಮಾನಿ ಜನರ ನೆನಪಿನಿಂದ ದೂರಾಗುವ ಹೊತ್ತಿನಲ್ಲೇ ‘ಸುಮಲತಾ ಅಂಬರೀಷ್' ಎಂಬ ಹೆಸರು ಪತ್ರಿಕೆಗಳಲ್ಲಿ - ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪವಾಗುವುದರ ಮೂಲಕ ಅಂಬರೀಷ್ ಎಂಬ ರಾಜಕಾರಣಿ ಮತ್ತೆ ಮತ್ತೆ ನೆನಪಾಗುವಂತೆ ಮಾಡುತ್ತಿದ್ದೀರಿ. ಇನ್ನೇನು ಬರಲಿರುವ ಲೋಕಸಭಾ ಚುನಾವಣೆಗೆ ನಿಲ್ಲಲು ತಾವು ತಯಾರಿ ನಡೆಸುತ್ತಿದ್ದೀರಿ ಎಂಬ ಮಾಹಿತಿ ಪತ್ರಿಕೆಗಳ ಮೂಲಕ ಅರಿವಾಯಿತು.
ಸುತ್ತಿಬಳಸಿ ಮಾತನಾಡುವ ಬದಲು ನೇರವಾಗಿ ಮುಖ್ಯ ವಿಷಯಕ್ಕೇ ಬರುವುದಾದರೆ ಅಂಬರೀಷ್ ರ ಮಡದಿ ಎಂಬುದೊಂದು ಅಂಶದ ಹೊರತಾಗಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಬೇರಾವ ಅರ್ಹತೆ ನಿಮ್ಮಲ್ಲಿದೆ? ಹೌದು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ, ಸಹಜವಾಗಿಯೇ ಆ ಹಕ್ಕು ನಿಮಗೂ ಇದೆ. ಅಂಬರೀಷ್ ರ ಮಡದಿಯಾಗಿರದೆ ಹೋಗಿದ್ದರೂ ನೀವು ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡುತ್ತಿದ್ದಿರಾ? ಅಂಬರೀಷ್ ಬದುಕಿದ್ದರೆ ಚುನಾವಣೆಗೆ ನೀವು ನಿಲ್ಲುತ್ತಿದ್ದಿರಾ? ಅಂಬರೀಷ್ ಸಾವಿನ ಸೂತಕದ ಸಂತಾಪದ ಲಾಭ ಪಡೆದು ಗೆಲುವು ಪಡೆಯುವುದಷ್ಟೇ ನಿಮ್ಮ ಉದ್ದೇಶವಾಗಿದೆ ಎಂಬ ಭಾವನೆ ಮೂಡಿದರದು ತಪ್ಪೇ?