ಮಾರ್ಚ್ 18, 2019

ಒಂದು ಬೊಗಸೆ ಪ್ರೀತಿ - 10

ಡಾ. ಅಶೋಕ್.‌ ಕೆ. ಆರ್.‌
“ನಮ್ ಫಾರ್ಮಸಿ ಫ್ರೆಂಡ್ಸೆಲ್ಲ ಮೂರು ದಿನ ಚಿಕ್ಕಮಗಳೂರು ಕಡೆಗೆ ಟ್ರಿಪ್ಪು ಹೊರಟಿದ್ದೀವಿ. ನಾಳೆ ರಾತ್ರಿ ಹೊರಡ್ತೀವಿ” ಮನೆಗೆ ಬರುತ್ತಿದ್ದಂತೆ ಘೋಷಿಸಿದರು ರಾಜಿ.

‘ರೀ ನನಗೂ ಈಗ ರಜೆ ಸಿಕ್ತಿತ್ತು. ನಾನೂ ಬರ್ತಿದ್ದೆನಲ್ಲ’

“ಹೇ ಹೋಗೆ. ನಾವು ಹುಡುಗರುಡುಗರು ಹೋಗ್ತಿದ್ದೀವಿ. ಅಲ್ಲಿ ನಿನ್ನ ಕರ್ಕೊಂಡು ಹೋಗೋದಿಕ್ಕಾಗುತ್ತ?”

‘ನಾನು ನೀವೇ ಎಲ್ಲದ್ರೂ ಹೋಗಿ ಬರೋಣ ನಡೀರಿ. ನನಗೂ ಅದೇ ಕೆಲಸ ಮಾಡಿ ಮಾಡಿ ಸಾಕಾಗಿಹೋಗಿದೆ’

“ಅಯ್ಯೋ ನೀನು ಮುಂಚೆ ಹೇಳ್ಬಾರ್ದ. ನಮ್ ಹುಡುಗರಿಗೆ ಗ್ಯಾರಂಟಿ ಬರ್ತೀನ್ರಮ್ಮ ಅಂತ ಹೇಳ್ಬಿಟ್ಟಿದ್ದೀನಿ”

‘ಹೇಳೋಕ್ಮುಂಚೆ ನನಗೊಂದು ಮಾತು ಕೇಳಬಾರದಾ?’

“ಅಯ್ಯೋ ಹೋಗ್ಲಿ ಬಿಡು. ಮೂರು ದಿನ ಹೋಗಿ ಬಂದುಬಿಡ್ತೀನಿ. ಮುಂದಿನ ವಾರ ನಾವಿಬ್ರೂ ಝುಮ್ಮಂತ ಕಾರಿನಲ್ಲಿ ಎಲ್ಲಿಗಾದರೂ ಹೋಗಿ ಬರೋಣ. ಮತ್ತೆ ವಯನಾಡಿಗೆ ಹೋಗೋಣ್ವಾ?” ಕಣ್ಣು ಮಿಟುಕಿಸುತ್ತ ಕೇಳಿದ.

‘ಮುಂದಿನ ವಾರ ನನಗೆ ರಜೆ ಸಿಗಬೇಕಲ್ಲ. ಏನಾದ್ರೂ ಮಾಡ್ಕೊಳ್ಳಿ. ಫ್ರೆಂಡ್ಸ್ ಜೊತೆ ಹೋಗೋದು ಅಂದ್ರೆ ಎಲ್ಲಿಲ್ಲದ ಖುಷಿ ಬಂದುಬಿಡುತ್ತೆ. ಹೆಂಡತಿ ಜೊತೆ ಹೋಗ್ಬೇಕಂದ್ರೆ ಮುಖ ಸಿಂಡರಿಸಿಕೊಂಡಂಗೆ ಇರುತ್ತೆ. ಅವರ ಜೊತೆ ಇದ್ರೆ ತೂರಾಡಿ ಬೀಳುವಷ್ಟು ಕುಡೀಬೋದಲ್ಲ’
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ತೆವಳುವ ಕಾಲ

ಕು.ಸ.ಮಧುಸೂದನ ರಂಗೇನಹಳ್ಳಿ
ಬೇಸಿಗೆ ಬಿಸಿಲಿಗೆ ಕಾದ ನೆಲದೊಳಗೆ 
ಉರಿಯುವ ಕಾಣದ ಕೆಂಪು 
ಮದ್ಯಾಹ್ನದ ಧಗೆಗೆ ಉಬ್ಬೆ ಹಾಕಿದಂತೆ 
ನಿಸ್ತೇಜವಾಗಿ ಬಿಳಿಚಿಕೊಂಡ ಕಣ್ಣುಗಳಿಗೆ ಜೊಂಪು 
ಹೊಲವಿದ್ದರೂ ಹಸಿರಿಲ್ಲ 
ಹಸಿರಿದ್ದರೂ ಉಸಿರಿಲ್ಲ 

ತೆವಳುವ ಮುಳ್ಳುಗಳ ಗಡಿಯಾರ ನಿಂತ ವರುಷ ಜ್ಞಾಪಕಕೆ ಬರುತಿಲ್ಲ 
ಮೊನ್ನೆ ಹಾರಿ ಹೋದ ಹಕ್ಕಿಗಳು 
ಹಿಂದಿನ ಸಾಯಂಕಾಲ ಬಾರದೆ ಇರುಳಿಡೀ ಖಾಲಿಯುಳಿದ ಗೂಡುಗಳು 
ಮೇಯಲು ಹೋದ ಹಸುವ ಹುಲಿ ಹಿಡಿಯಿತೊ 
ಹುಲಿ ಹೆಸರಲಿ ಮನುಜರೇ ಮುಕ್ಕಿದರೊ 
ಹುಡುಕುತ್ತ ಕಾಡಿಗೋದವನ ಹೆಣ ಹೊತ್ತು ತಂದರು 
ಹಾಡಿಯ ಜನ ಗೋಣಿತಾಟೊಳಗೆ ಸುತ್ತಿ 
--- 

ಮಾರ್ಚ್ 16, 2019

ಮುಗಿದ ಕಥೆ

ಹರ್ಷಿತಾ ಕೆ.ಟಿ
ಏನೋ ಸಾಲುತ್ತಿಲ್ಲ 
ಆದರೂ ಏನೂ ಬೇಕೆನಿಸುತ್ತಿಲ್ಲ
ತೀರಾ ಖಾಲಿಯಾಗಿದೆ ಮನವು 
ಆದರೂ ಏನೋ ಭಾರವೆನಿಸಿದಂತೆ 
ನನ್ನೆಲ್ಲಾ ನೋವುಗಳು ಮಾಗಿರಬೇಕು
ಕಣ್ಣಂಚೂ ಕಟ್ಟೆಯೊಡೆಯುತ್ತಿದೆ ಗಳಿಗೆಗೊಮ್ಮೆ 

ಏನಾಗಿದೆ ನಿನಗೆ ಎಂದು 
ಹುಬ್ಬೇರಿಸಿದಾಗಲೆಲ್ಲಾ ಅವನು 
ನೀನೇ ಕಾರಣ ಎಲ್ಲದಕ್ಕೂ
ಎಂದು ಕುತ್ತಿಗೆ ಪಟ್ಟಿ ಹಿಡಿದು 
ಚೀರಿ ಹೇಳಬೇಕೆನಿಸಿತು 
ಅವನ ಕಣ್ಣಲ್ಲಿ ದಿಟ್ಟಿಸಿ 
ನಾವು ಕಟ್ಟಿದ ಕನಸುಗಳು ಈಗೆಲ್ಲಿ 
ಎಂದು ಕೇಳಬೇಕೆನಿಸಿತು 

ಮಾರ್ಚ್ 15, 2019

ಪರಿಭ್ರಮಣ

ಹರ್ಷಿತಾ ಕೆ.ಟಿ
ನನ್ನೆಲ್ಲಾ ಕವನಗಳೂ
ಬರೀ ಅವನ ಸುತ್ತಲ್ಲೇ ಸುತ್ತುವವು
ಭ್ರಮಿತ ಜೇನುಹುಳುಗಳಂತೆ
ಕಣ್ಣಂಚು ನೀರು ಕಚ್ಚುವಂತೆ
ಮನಬಿಚ್ಚಿ ನಕ್ಕಿದ್ದು
ಕನ್ನಡಕದ ಮರೆಯಲ್ಲಿ
ಕಂಬನಿಯೆರಡ ಒರೆಸಿದ್ದು
ಚಂದಿರನತ್ತ ಬೊಟ್ಟು ಮಾಡಿ
ಬೆಳದಿಂಗಳ ತುತ್ತು ಉಣಿಸಿದ್ದು

ಮಾರ್ಚ್ 12, 2019

ಒಂದು ಬೊಗಸೆ ಪ್ರೀತಿ - 9

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ರಾಜೀವ್ ಮದುವೆಯಾದ ಹೊಸತರಲ್ಲಿ ಸರಿಯಾಗೇ ಇದ್ದರು. ಕೇರಳದ ವಯನಾಡಿನ ಹತ್ತಿರವಿರುವ ವಿಲೇಜ್ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದರು ಹನಿಮೂನಿಗೆಂದು. ತುಂಬಾ ಚೆಂದದ ಜಾಗವದು. ಐದೇ ಐದು ಗುಡಿಸಲಿನಂತಹ ಮನೆ. ಒಂದು ಮೂಲೆಯಲ್ಲಿ ಊಟದ ಕೋಣೆ. ಸುತ್ತಲೂ ಅಡಿಕೆ ತೋಟ. ಅಡಿಕೆಯ ಮಧ್ಯೆ ಅಲ್ಲೊಂದಿಲ್ಲೊಂದು ಬಾಳೆಗಿಡಗಳು. ಸುತ್ತಮುತ್ತ ಎರಡು ಕಿಲೋಮೀಟರು ಯಾವ ಮನೆಯೂ ಇರಲಿಲ್ಲ. ರೂಮು ಹನಿಮೂನಿಗೆಂದು ಬರುವವರಿಗೇ ಮಾಡಿಸಿದಂತಿತ್ತು. ದೊಡ್ಡ ಮಂಚ, ಮೆದುವಾದ ಹಾಸಿಗೆ, ಮಂಚದ ಪಕ್ಕದ ಮೇಜಿನ ಮೇಲೆ ಘಮ್ಮೆನ್ನುವ ಮಲ್ಲಿಗೆ ಮತ್ತು ಸಂಪಿಗೆ ಹೂವು. ಕುಳಿತುಕೊಳ್ಳಲು ಕುರ್ಚಿಯೇ ಇಟ್ಟಿರಲಿಲ್ಲ! ಇನ್ನು ರೂಮಿಗೆ ಹೊಂದಿಕೊಂಡಿದ್ದ ಬಚ್ಚಲು ಕೋಣೆಯಲ್ಲಿ ಒಂದು ಮೂಲೆಗೆ ಕಮೋಡು. ಮತ್ತೊಂದು ಮೂಲೆಯಲ್ಲಿ ಇಬ್ಬರು ಆರಾಮಾಗಿ ಕೂರಬಹುದಾದ ಬಾತ್ ಟಬ್. ಬಿಸಿ ನೀರು ಟಬ್ಬಿನೊಳಗಡೆ ಮಾತ್ರ ಬರುತ್ತಿತ್ತು! ರಾಜಿ ಮುಂದೆ ಮೊದಲು ಬೆತ್ತಲಾಗಿದ್ದು ಬಚ್ಚಲು ಮನೆಯ ಆ ಟಬ್ಬಿನಲ್ಲೇ. ನಾನು ಪ್ಯಾಂಟು ಟಿ ಶರಟು ಧರಿಸಿದ್ದೆ, ಅವರು ಬನಿಯನ್ನು, ಚೆಡ್ಡಿ. ಇಬ್ಬರೂ ಬಟ್ಟೆಯಲ್ಲೇ ಟಬ್ಬಿನೊಳಗಡೆ ಕುಳಿತೆವು. ನಾನು ನೀರು ತಿರುಗಿಸಿದೆ. ಬೆಚ್ಚಗಿನ ನೀರು ದೇಹವನ್ನಾವರಿಸುತ್ತಿತ್ತು. ರಾಜಿ ಮುಖದ ತುಂಬ ಮುತ್ತಿನ ಮಳೆ ಸುರಿಸುತ್ತಿದ್ದರು. ನಿಧಾನಕ್ಕೆ ನನ್ನ ಬಟ್ಟೆಗಳನ್ನೆಲ್ಲ ಕಳಚಿದರು. ಇಬ್ಬರೂ ಬೆತ್ತಲಾಗುವಷ್ಟರಲ್ಲಿ ಟಬ್ಬಿನ ನೀರು ತುಂಬಿತ್ತು. ನೀರಿನೊಳಗಡೆಯೇ ನನ್ನ ದೇಹವನ್ನೆಲ್ಲ ಸ್ಪರ್ಶಿಸಿದರು. ಸತತ ಸ್ಪರ್ಶದ ಕೆಲಸದಿಂದ ಸುಸ್ತಾಗಿ ಕುಳಿತಾಗ ಅವರ ದೇಹವನ್ನು ಸ್ಪರ್ಶಿಸುವ ಕೆಲಸ ನನ್ನದಾಯಿತು. ಗಡುಸಾಗಿದ್ದರು. ಹಾಗೇ ಮೇಲೆ ಎದ್ದು ಬಂದು ಒಂದಷ್ಟು ಚೇಷ್ಟೆ ಮಾಡಿಕೊಳ್ಳುತ್ತ ಮೈ ಒರೆಸಿಕೊಂಡೆವು. ನನ್ನನ್ನು ಹಿಂದಿನಿಂದ ತಬ್ಬಿಕೊಂಡು ‘ಇದು ತುಂಬಾ ಚೆನ್ನಾಗಿದೆ’ ಎಂದು ಎರಡೂ ಮೊಲೆಗಳನ್ನು ಬಿಗಿಯಾಗಿ ಹಿಡಿದುಕೊಂಡರು. ‘ರೀ ಮೆಲ್ಲಗೆ’ ಎಂದು ಕಿರುಚಿದೆ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಮಾರ್ಚ್ 11, 2019

ಹೇಗೆ ?

ಪ್ರವೀಣಕುಮಾರ್ ಗೋಣಿ
ಉಕ್ಕಲಾಡುವ ಭಾವಗಳ
ತೊರೆಗೆ ಹರಿದು ಸಾಗುವ
ಹರಿವಿಲ್ಲದಾಗಿರಲು
ಹಾಡೊಂದು ಮೂಡಿತಾದರೂ ಹೇಗೆ ?

ಸಾಗಬೇಕೆನ್ನುವ ದಾರಿಗಳೆಲ್ಲ
ಮುಂದೆ ಹಾದಿಯಿಲ್ಲದಂತೆ
ಕಂದಕವೇ ನಿಲ್ಲುತ್ತಿರಲು
ಮುನ್ನುಗ್ಗುವ ಹುಕಿ ಮೊಳೆಯುವುದಾದರೂ ಹೇಗೆ ?

ಮಾರ್ಚ್ 5, 2019

ಸುಮಲತಾ ಅಂಬರೀಷ್ ಗೊಂದು ಪತ್ರ.

ಪ್ರೀತಿಯ ಸುಮಲತಾ ಅಂಬರೀಷ್ ರವರಿಗೆ,

ದಶಕಗಳ ಕಾಲದಿಂದ ಜೊತೆಗಿದ್ೲದ ಸಂಗಾತಿಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿರುವವರಿಗೆ ಹೇಗಿದ್ದೀರಿ ಅಂತೆಲ್ಲ ಕೇಳಿ ಮುಜುಗರಕ್ಕೊಳಪಡಿಸಬಾರದೆಂಬ ಅರಿವಿದೆ. ಅಂಬರೀಷ್ ಎಂಬ ಚಿತ್ರ ನಟನ ಸಾವು ಅಭಿಮಾನಿ ಜನರ ನೆನಪಿನಿಂದ ದೂರಾಗುವ ಹೊತ್ತಿನಲ್ಲೇ ‘ಸುಮಲತಾ ಅಂಬರೀಷ್' ಎಂಬ ಹೆಸರು ಪತ್ರಿಕೆಗಳಲ್ಲಿ - ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪವಾಗುವುದರ ಮೂಲಕ ಅಂಬರೀಷ್ ಎಂಬ ರಾಜಕಾರಣಿ ಮತ್ತೆ ಮತ್ತೆ ನೆನಪಾಗುವಂತೆ ಮಾಡುತ್ತಿದ್ದೀರಿ. ಇನ್ನೇನು ಬರಲಿರುವ ಲೋಕಸಭಾ ಚುನಾವಣೆಗೆ ನಿಲ್ಲಲು ತಾವು ತಯಾರಿ ನಡೆಸುತ್ತಿದ್ದೀರಿ ಎಂಬ ಮಾಹಿತಿ ಪತ್ರಿಕೆಗಳ ಮೂಲಕ ಅರಿವಾಯಿತು. 

ಸುತ್ತಿಬಳಸಿ ಮಾತನಾಡುವ ಬದಲು ನೇರವಾಗಿ ಮುಖ್ಯ ವಿಷಯಕ್ಕೇ ಬರುವುದಾದರೆ ಅಂಬರೀಷ್ ರ ಮಡದಿ ಎಂಬುದೊಂದು ಅಂಶದ ಹೊರತಾಗಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಬೇರಾವ ಅರ್ಹತೆ ನಿಮ್ಮಲ್ಲಿದೆ? ಹೌದು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ, ಸಹಜವಾಗಿಯೇ ಆ ಹಕ್ಕು ನಿಮಗೂ ಇದೆ. ಅಂಬರೀಷ್ ರ ಮಡದಿಯಾಗಿರದೆ ಹೋಗಿದ್ದರೂ ನೀವು ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡುತ್ತಿದ್ದಿರಾ? ಅಂಬರೀಷ್ ಬದುಕಿದ್ದರೆ ಚುನಾವಣೆಗೆ ನೀವು ನಿಲ್ಲುತ್ತಿದ್ದಿರಾ? ಅಂಬರೀಷ್ ಸಾವಿನ ಸೂತಕದ ಸಂತಾಪದ ಲಾಭ ಪಡೆದು ಗೆಲುವು ಪಡೆಯುವುದಷ್ಟೇ ನಿಮ್ಮ ಉದ್ದೇಶವಾಗಿದೆ ಎಂಬ ಭಾವನೆ ಮೂಡಿದರದು ತಪ್ಪೇ? 

ಮಾರ್ಚ್ 3, 2019

ಒಂದು ಬೊಗಸೆ ಪ್ರೀತಿ - 8

ondu bogase preeti
ಡಾ. ಅಶೋಕ್. ಕೆ. ಆರ್ 
ಸಾಗರ್ ಅವನಾಗಿದ್ದವನೇ ಮೆಸೇಜು ಮಾಡುತ್ತಿದ್ದುದು ಕಮ್ಮಿ. ನಾನಾಗೇ ‘ಹಾಯ್’ ಎಂದೋ ‘ಏನ್ ಮಾಡ್ತಿದ್ದೆ’ ಎಂದೋ ಮೆಸೇಜು ಮಾಡಿದರೆ ಪ್ರತಿಕ್ರಯಿಸುತ್ತಿದ್ದ. ಅವನಾಗೇ ಮೆಸೇಜು ಮಾಡ್ಲಿ ನೋಡೋಣ ಎಂದು ಕಾದರೆ ಎರಡು ಮೂರು ದಿನವಾದರೂ ಮೆಸೇಜು ಮಾಡುತ್ತಿರಲಿಲ್ಲ. ಕೊನೆಗೆ ನಾನೇ ಮೆಸೇಜು ಮಾಡುತ್ತಿದ್ದೆ. ಉಭಯ ಕುಶಲೋಪರಿಗಳೆಲ್ಲ ಮುಗಿದಿದ್ದವು. ದಿನ ಕಳೆದಂತೆ ವಿನಿಮಯವಾಗುತ್ತಿದ್ದ ಮೆಸೇಜುಗಳ ಸಂಖೈ ಕಡಿಮೆಯಾಗುತ್ತಿತ್ತು. ಅವತ್ತು ನನಗೆ ನೈಟ್ ಡ್ಯೂಟಿ. ಹತ್ತರ ನಂತರ ಹೆಚ್ಚೇನು ರೋಗಿಗಳಿರಲಿಲ್ಲ. ಫೇಸ್ ಬುಕ್ ನೋಡುತ್ತಿದ್ದಾಗೊಂದು ಆಕಳಿಕೆ ಬಂದು ರೂಮಿಗೆ ಹೋದೆ. ಇವನೇನು ಮಲಗಿದ್ದಾನೋ ಹೇಗೆ ಎಂದುಕೊಂಡು ‘ಆಯ್ತಾ ಊಟ’ ಎಂದು ಮೆಸೇಜಿಸಿದೆ.

ಹತ್ತು ನಿಮಿಷದ ನಂತರ ಮೊಬೈಲ್ ವೈಬ್ರೇಟ್ ಆದಾಗ ಅರೆಮಂಪರಿನಲ್ಲಿದ್ದವಳಿಗೆ ಎಚ್ಚರವಾಯಿತು.

“ಆಯ್ತು ನಿಂದು”

‘ಆಗಲೇ ಆಯ್ತು’

“ಮ್. ಏನ್ಮಾಡ್ತಿದ್ದೆ”

‘ಇವತ್ತು ನೈಟ್ ಡ್ಯೂಟಿ ಇತ್ತು. ಪೇಷೆಂಟ್ಸ್ ಕಡಿಮೆ ಇದ್ರು. ಡ್ಯೂಟಿ ಡಾಕ್ಟರ್ಸ್ ರೂಮಲ್ಲಿ ಮಲಗಿದ್ದೆ’

“ಅದೇ ಅಂದ್ಕೊಂಡೆ ಇಷ್ಟೊತ್ತಲ್ಲಿ ಮೆಸೇಜು ಮಾಡಿದ್ದಾಳೆ ಅಂದ್ರೆ ನೈಟ್ ಡ್ಯೂಟಿ ಇರಬೇಕು ಅಂತ”

‘ತಪ್ಪಾ?’

“ಹೇ ತಪ್ಪೇನಿಲ್ಲ. ನೀನು ಫ್ರೀ ಇದ್ದಾಗ ಮೆಸೇಜ್ ಮಾಡ್ತೀಯ. ನಾನು ಫ್ರೀ ಇದ್ದಾಗ ರಿಪ್ಲೈ ಮಾಡ್ತೀನಿ. ಇದರಲ್ಲಿ ತಪ್ಪೇನು ಬಂತು”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 25, 2019

ಒಂದು ಬೊಗಸೆ ಪ್ರೀತಿ - 7

ondu bogase preeti
ಡಾ. ಅಶೋಕ್. ಕೆ. ಆರ್ ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕೆಲವೊಮ್ಮೆ ಮದುವೆಯಾಗಿದ್ದಾದರೂ ಯಾವ ಸಂಭ್ರಮಕ್ಕೆ ಎನ್ನಿಸಿಬಿಡುತ್ತೆ. ಒಂದಿಷ್ಟು ಪ್ರೀತಿಯೂ ರಾಜೀವನಿಗೆ ನನ್ನ ಮೇಲೆ ಇಲ್ಲವೇನೋ ಎನ್ನುವ ಅನುಮಾನ ಬರುವುದು ಅಪರೂಪವಾದರೂ ಬರುತ್ತದೆಯೆನ್ನುವುದು ಯಾಕೋ ಎಲ್ಲವೂ ಸರಿ ಹೋಗ್ತಿಲ್ಲದಿರುವುದರ ಸೂಚನೆಯಾ? ನಮ್ಮ ಮನೆಯ ಪಕ್ಕವೇ ಅವರ ಮನೆಯಿದ್ದಿದ್ದು. ನಾನು ಎಂಟನೇ ತರಗತಿ ಓದುತ್ತಿರುವಾಗಲೇ ಅವರಿಗೆ ನನ್ನ ಮೇಲೆ ಮನಸ್ಸಿತ್ತಂತೆ. ಆಗವರು ಹತ್ತನೇ ಕ್ಲಾಸು. ‘ಏನ್ರೀ ನಾನು ದೊಡ್ಡೋಳಾಗ್ತಿದ್ದ ವಿಷಯ ಗೊತ್ತಾಗ್ತಿದ್ದಂತೆ ಲೈನ್ ಹೊಡೆಯೋಕೆ ಶುರು ಮಾಡಿದ್ರಾ’ ಎಂದು ರೇಗಿಸುತ್ತಿರುತ್ತೇನೆ. ಮೂಡ್ ಚೆನ್ನಾಗಿದ್ರೆ ನಕ್ಕು ಒಂದು ಮುತ್ತು ಕೊಡುತ್ತಾರೆ, ಎರಡೂ ಕೆನ್ನೆಗೊಂದೊಂದು. ನನಗೇನೋ ಮುತ್ತು ಎಂದರೆ ತುಟಿಗೆ ತುಟಿಗೆ ಒತ್ತಿ ಕಳೆದುಹೋಗೋದೇ ಚೆಂದ ಅನ್ನಿಸುತ್ತೆ. ಅವರಿಗದು ಅಷ್ಟು ಇಷ್ಟವಾಗಲ್ಲ, ಎಂಜಲಾಗುತ್ತೆ ಅಂತಾರೆ! ಮೂಡ್ಸರಿ ಇರಲಿಲ್ಲವಾ ಅದೇ ನಾನು ಜೀವನದಲ್ಲಿ ಮಾಡಿದ ಮೊದಲ ಮತ್ತು ಕೊನೆಯ ತಪ್ಪು. ನಿನ್ನ ಕಟ್ಕೊಳ್ಳದೇ ಹೋಗಿದ್ರೆ ಜೀವನ ಚೆನ್ನಾಗಿರ್ತಿತ್ತು ಅಂತ ಮುಖದ ಮೇಲೆ ಹೊಡೆದಂಗೆ ಹೇಳಿಬಿಡೋರು. ಇವತ್ತು ಸಂಜೆ ಅವರ ಮೂಡು ಸ್ವಲ್ಪವೂ ಸರಿಯಿರಲಿಲ್ಲ ಎನ್ನಿಸುತ್ತೆ. ಬಾಗಿಲು ತೆಗೆಯುತ್ತಿದ್ದಂತೆ ‘ವೆಲಕಮ್ ರಾಜಿ ಡಾರ್ಲಿಂಗ್’ ಎಂದ್ಹೇಳಿ ತಬ್ಬಿಕೊಳ್ಳಲು ಕೈಚಾಚಿದೆ. ಎಷ್ಟೇ ಕೋಪವಿದ್ದರೂ ಒಮ್ಮೆ ತಬ್ಬಿ ದೂರ ತಳ್ಳುತ್ತಿದ್ದರು. ಇವತ್ಯಾಕೋ ಪೂರ್ತಿ ಅನ್ಯಮನಸ್ಕರಾಗಿಬಿಟ್ಟಿದ್ದಾರೆ. ನೆಪಕ್ಕೂ ತಬ್ಬಿಕೊಳ್ಳದೆ “ಬರೀ ಪ್ರೀತಿ ಪ್ರೇಮದಿಂದ ಹೊಟ್ಟೆ ತುಂಬಲ್ಲ ಧರಣಿ. ಮೂರೊತ್ತು ತಬ್ಕೊಂಡು ಮಲಗಿಕೊಂಡ್ರೆ ಇಂತ ಚಿಕ್ಕ ಚಿಕ್ಕ ಬಾಡಿಗೆ ಮನೆಯಲ್ಲೇ ಸತ್ತು ಹೋಗಬೇಕಾಗುತ್ತೆ” ಎಂದ್ಹೇಳಿ ನನ್ನನ್ನು ಬದಿಗೆ ಸರಿಸಿ ಚಪ್ಪಲಿಯನ್ನು ಕಳಚಿ ಸೀದಾ ರೂಮಿಗೋಗಿ ಮಲಗಿಕೊಂಡರು. ಮಧ್ಯಾಹ್ನದ ಅಡುಗೆ ಮಾಡಿ ಸ್ವಲ್ಪೇ ಸ್ವಲ್ಪ ಊಟ ಮಾಡಿದ್ದೆ. ಎರಡು ಘಂಟೆ ಮಲಗಿ ಎದ್ದಾಗ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಬೇಕೆನ್ನಿಸಿತ್ತು. ಗೀಸರ್ ಆನ್ ಮಾಡಿ ಇಪ್ಪತ್ತು ನಿಮಿಷ ಪತ್ರಿಕೆ ಓದಿ ಸ್ನಾನಕ್ಕೆ ಹೋಗಿ ಬೆತ್ತಲಾದೆ. ನೀರು ಸುಡುವಷ್ಟು ಬಿಸಿಯಿತ್ತು. ತಣ್ಣೀರು ಬೆರೆಸಿಕೊಳ್ಳಬೇಕು ಎನ್ನಿಸಲಿಲ್ಲ. ಬಿಸಿ ಬಿಸಿ ನೀರನ್ನು ಸುರಿದುಕೊಳ್ಳುತ್ತಾ ದೇಹದ ಮೇಲೆಲ್ಲಾ ಸೋಪು ಸರಿಸುತ್ತಿರಬೇಕಾದರೆ ಕಾಮನೆಗಳು ಅರಳಿದವು. ನಾನೂ ರಾಜಿ ಸೇರಿ ಹತ್ತು ದಿನದ ಮೇಲಾಗಿತ್ತು. ಇವತ್ತವರು ಆರೂವರೆಗೆಲ್ಲ ಬಂದರೆ ಸಂಜೆಯೇ ಒಮ್ಮೆ ಸೇರಿ ತಬ್ಬಿಕೊಂಡು ಮಲಗಿ ಎದ್ದು ಊಟ ಮಾಡಿ ಮತ್ತೆ ರಾತ್ರಿ ಸುಸ್ತಾಗುವವರೆಗೆ ಸೇರಿಬಿಡಬೇಕು ಎಂದುಕೊಂಡಿದ್ದೆ. ಅದೇ ಮನಸ್ಸಿನಲ್ಲಿ ಅವರನ್ನು ತಬ್ಬಿಕೊಳ್ಳಲು ಬಾಗಿಲು ತೆರೆದರೆ ಈ ರೀತಿಯ ಮಾತುಗಳು. ರೂಮಿಗೆ ಹೋಗಿ ಏನಾಯ್ತುರೀ ಎಂದು ಕೇಳಲೂ ಮನಸ್ಸಾಗಲಿಲ್ಲ. ಹಾಲಿನಲ್ಲೇ ಟಿವಿ ನೋಡುತ್ತಾ ಕುಳಿತೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 17, 2019

ಒಂದು ಬೊಗಸೆ ಪ್ರೀತಿ - 6

ondu bogase preeti
ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮನೆಗೆ ಹೋದರೆ ರಾಜೀವ್ ಇನ್ನೂ ಎದ್ದಿರಲಿಲ್ಲ. ರಾತ್ರಿ ಪಾರ್ಟಿ ಜೋರಾಗಿರಬೇಕು, ಬಾಗಿಲು ತೆರೆದಾಗ ವಿಸ್ಕಿಯ ವಾಸನೆ ಗಮ್ಮೆನ್ನುತ್ತಿತ್ತು. ನಿದ್ರೆಯ ಮತ್ತಲ್ಲೇ ಮುತ್ತು ಕೊಡಲು ಬಂದರು, ‘ಮೊದ್ಲು ಸ್ನಾನ ಮಾಡ್ ನಡೀರಿ. ವಾಸ್ನೆ ಹೊಡೀತಿದೀರ. ಮುತ್ತೆಲ್ಲ ಆಮೇಲೆ’ ನಗುತ್ತ ದೂರ ತಳ್ಳಿದೆ. ರಾತ್ರಿ ಅವರಿಗೆಂದು ಮಾಡಿಟ್ಟಿದ್ದ ಅನ್ನ ಬೇಳೆಸಾರನ್ನು ಅವರು ಮುಟ್ಟೇ ಇರಲಿಲ್ಲ. ಕೆಲವೊಮ್ಮೆ ಬೇಸರವಾಗುತ್ತೆ. ಹೊರಗಡೆ ಕೆಲಸ, ಮನೇಲೂ ಕೆಲಸ. ರಾಜೀವ್ ಒಂದು ಲೋಟವನ್ನೂ ಅತ್ತಿತ್ತ ಜರುಗಿಸುವವರಲ್ಲ. ಇರೋದ್ರಲ್ಲಿ ಅಡುಗೆ ಬಗ್ಗೆ ತಕರಾರು ತೆಗೆಯದೇ ತಿನ್ನುತ್ತಾರೆ. ಮಾಂಸದ ಅಡುಗೆ ಚೆನ್ನಾಗೇ ಮಾಡ್ತೀನಿ ಈ ಸೊಪ್ಪು ತರಕಾರೀದೇ ಸಮಸ್ಯೆ. ನನಗೇ ತಿನ್ನೋದಿಕ್ಕೆ ಬೇಜಾರಾಗುತ್ತೆ ಅಷ್ಟು ಕೆಟ್ಟದಾಗಿ ಮಾಡ್ತೀನಿ. ಎಷ್ಟೇ ಕೆಟ್ಟದಾಗಿ ಮಾಡಿದರೂ ದೂಸರಾ ಮಾತನಾಡದೆ ತಿಂದು ಮುಗಿಸುತ್ತಾರೆ. ನಾನೇ ಕೆಲವೊಮ್ಮೆ ‘ಯಾಕೋ ಊಟ ಮಾಡಂಗಿಲ್ಲ ಕಣ್ರೀ’ ಅಂತ್ಹೇಳಿ ಹಣ್ಣೋ ಬಿಸ್ಕೆಟ್ಟೋ ತಿಂದು ಮಲಗಿಬಿಡ್ತೀನಿ. ನಿನ್ನೆ ಬರೀ ಬೇಳೆಸಾರು ಮಾಡಿದ್ದೆ ನೀರು ನೀರಾಗಿತ್ತು. ನನ್ನದೂ ನೈಟ್ ಡ್ಯೂಟಿ ಇತ್ತಲ್ಲ ಇವರು ಹೊರಗೇ ಕುಡಿದು ಊಟಾನೂ ಮುಗಿಸಿ ಬಂದಿರಬೇಕು. ‘ಅನ್ನ ಸಾರು ತಿನ್ನದೇ ಇದ್ರೆ ಫ್ರಿಜ್ಜಿನೊಳಗಿಡೋದಿಕ್ಕೂ ಆಗಲ್ವ’ ಅಡುಗೆ ಮನೆಯೊಳಗಿಂದ ಕೂಗಿ ಹೇಳಿದೆ. ‘ಮಲ್ತುಬುಟ್ಟೆ’ ಹಲ್ಲುಜ್ಜುತ್ತ ಉತ್ತರಿಸಿದ ರಾಜೀವ. ವಾಸನೆ ನೋಡಿದೆ ಅನ್ನ ಚೆನ್ನಾಗಿತ್ತು. ಸಾರು ಹಳಸಿತ್ತು. ಸದ್ಯ ಕೆಟ್ಟಿರದಿದ್ದರೆ ಇವತ್ತು ಮಧ್ಯಾಹ್ನ ಅದನ್ನೇ ತಿನ್ನಬೇಕಿತ್ತು! ‘ನೋಡಿ ನೀವು ಮಾಡೋ ಕೆಲಸಕ್ಕೆ ಸಾರು ಕೆಟ್ಟೇ ಹೋಗಿದೆ. ಮಧ್ಯಾಹ್ನಕ್ಕೆ ಮತ್ತೆ ಮಾಡಬೇಕು’ ಎಂದು ರೇಗಿದಂತೆ ಮಾಡಿ ‘ಡ್ಯೂಟಿಗೆ ಹೋಗೋ ಮೊದಲು ಒಂದಾರು ಮೊಟ್ಟೆನಾದರೂ ತಂದಿಟ್ಟು ಹೋಗಿ ಮೊಟ್ಟೆ ಸಾರಾದ್ರೂ ಮಾಡಿಡ್ತೀನಿ’ ಎಂದೆ. ಸ್ನಾನ ಮಾಡುತ್ತಿದ್ದರೇನೋ. ಉತ್ತರಿಸಲಿಲ್ಲ. ಸ್ನಾನ ಮಾಡುವಾಗ ಮೆಲ್ಲಗಿನ ದನಿಯಲ್ಲಿ ಹಾಡು ಗುನುಗುತ್ತಿರುತ್ತಾರೆ. ಅವರದೇ ಲೋಕ. ಹೊರಗೆ ಏನು ನಡೆದರೂ ಉತ್ತರಿಸುವುದಿಲ್ಲ. ತಲೆಯಲ್ಲಿರುವ ಸಾವಿರ ಚಿಂತೆಗಳನ್ನು ಮರೆತು ಅವರು ಸುಖವಾಗಿರುವುದು ಬಚ್ಚಲುಮನೆಯಲ್ಲಿ ಮಾತ್ರ! ಈ ಬಚ್ಚಲುಮನೆಯನ್ನು ಕಂಡರೆ ನನಗೆ ಸವತಿ ಮಾತ್ಸರ್ಯ! ಸ್ನಾನ ಮುಗಿಸಿ ಸೊಂಟಕ್ಕೊಂದು ಟವೆಲ್ ಸುತ್ತಿಕೊಂಡು ಹೊರಬರುವಾಗ “ಏನೋ ಹೇಳ್ತಿದ್ದೆ?” ಎಂದರು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.