ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮನೆಗೆ ಹೋದರೆ ರಾಜೀವ್ ಇನ್ನೂ ಎದ್ದಿರಲಿಲ್ಲ. ರಾತ್ರಿ ಪಾರ್ಟಿ ಜೋರಾಗಿರಬೇಕು, ಬಾಗಿಲು ತೆರೆದಾಗ ವಿಸ್ಕಿಯ ವಾಸನೆ ಗಮ್ಮೆನ್ನುತ್ತಿತ್ತು. ನಿದ್ರೆಯ ಮತ್ತಲ್ಲೇ ಮುತ್ತು ಕೊಡಲು ಬಂದರು, ‘ಮೊದ್ಲು ಸ್ನಾನ ಮಾಡ್ ನಡೀರಿ. ವಾಸ್ನೆ ಹೊಡೀತಿದೀರ. ಮುತ್ತೆಲ್ಲ ಆಮೇಲೆ’ ನಗುತ್ತ ದೂರ ತಳ್ಳಿದೆ. ರಾತ್ರಿ ಅವರಿಗೆಂದು ಮಾಡಿಟ್ಟಿದ್ದ ಅನ್ನ ಬೇಳೆಸಾರನ್ನು ಅವರು ಮುಟ್ಟೇ ಇರಲಿಲ್ಲ. ಕೆಲವೊಮ್ಮೆ ಬೇಸರವಾಗುತ್ತೆ. ಹೊರಗಡೆ ಕೆಲಸ, ಮನೇಲೂ ಕೆಲಸ. ರಾಜೀವ್ ಒಂದು ಲೋಟವನ್ನೂ ಅತ್ತಿತ್ತ ಜರುಗಿಸುವವರಲ್ಲ. ಇರೋದ್ರಲ್ಲಿ ಅಡುಗೆ ಬಗ್ಗೆ ತಕರಾರು ತೆಗೆಯದೇ ತಿನ್ನುತ್ತಾರೆ. ಮಾಂಸದ ಅಡುಗೆ ಚೆನ್ನಾಗೇ ಮಾಡ್ತೀನಿ ಈ ಸೊಪ್ಪು ತರಕಾರೀದೇ ಸಮಸ್ಯೆ. ನನಗೇ ತಿನ್ನೋದಿಕ್ಕೆ ಬೇಜಾರಾಗುತ್ತೆ ಅಷ್ಟು ಕೆಟ್ಟದಾಗಿ ಮಾಡ್ತೀನಿ. ಎಷ್ಟೇ ಕೆಟ್ಟದಾಗಿ ಮಾಡಿದರೂ ದೂಸರಾ ಮಾತನಾಡದೆ ತಿಂದು ಮುಗಿಸುತ್ತಾರೆ. ನಾನೇ ಕೆಲವೊಮ್ಮೆ ‘ಯಾಕೋ ಊಟ ಮಾಡಂಗಿಲ್ಲ ಕಣ್ರೀ’ ಅಂತ್ಹೇಳಿ ಹಣ್ಣೋ ಬಿಸ್ಕೆಟ್ಟೋ ತಿಂದು ಮಲಗಿಬಿಡ್ತೀನಿ. ನಿನ್ನೆ ಬರೀ ಬೇಳೆಸಾರು ಮಾಡಿದ್ದೆ ನೀರು ನೀರಾಗಿತ್ತು. ನನ್ನದೂ ನೈಟ್ ಡ್ಯೂಟಿ ಇತ್ತಲ್ಲ ಇವರು ಹೊರಗೇ ಕುಡಿದು ಊಟಾನೂ ಮುಗಿಸಿ ಬಂದಿರಬೇಕು. ‘ಅನ್ನ ಸಾರು ತಿನ್ನದೇ ಇದ್ರೆ ಫ್ರಿಜ್ಜಿನೊಳಗಿಡೋದಿಕ್ಕೂ ಆಗಲ್ವ’ ಅಡುಗೆ ಮನೆಯೊಳಗಿಂದ ಕೂಗಿ ಹೇಳಿದೆ. ‘ಮಲ್ತುಬುಟ್ಟೆ’ ಹಲ್ಲುಜ್ಜುತ್ತ ಉತ್ತರಿಸಿದ ರಾಜೀವ. ವಾಸನೆ ನೋಡಿದೆ ಅನ್ನ ಚೆನ್ನಾಗಿತ್ತು. ಸಾರು ಹಳಸಿತ್ತು. ಸದ್ಯ ಕೆಟ್ಟಿರದಿದ್ದರೆ ಇವತ್ತು ಮಧ್ಯಾಹ್ನ ಅದನ್ನೇ ತಿನ್ನಬೇಕಿತ್ತು! ‘ನೋಡಿ ನೀವು ಮಾಡೋ ಕೆಲಸಕ್ಕೆ ಸಾರು ಕೆಟ್ಟೇ ಹೋಗಿದೆ. ಮಧ್ಯಾಹ್ನಕ್ಕೆ ಮತ್ತೆ ಮಾಡಬೇಕು’ ಎಂದು ರೇಗಿದಂತೆ ಮಾಡಿ ‘ಡ್ಯೂಟಿಗೆ ಹೋಗೋ ಮೊದಲು ಒಂದಾರು ಮೊಟ್ಟೆನಾದರೂ ತಂದಿಟ್ಟು ಹೋಗಿ ಮೊಟ್ಟೆ ಸಾರಾದ್ರೂ ಮಾಡಿಡ್ತೀನಿ’ ಎಂದೆ. ಸ್ನಾನ ಮಾಡುತ್ತಿದ್ದರೇನೋ. ಉತ್ತರಿಸಲಿಲ್ಲ. ಸ್ನಾನ ಮಾಡುವಾಗ ಮೆಲ್ಲಗಿನ ದನಿಯಲ್ಲಿ ಹಾಡು ಗುನುಗುತ್ತಿರುತ್ತಾರೆ. ಅವರದೇ ಲೋಕ. ಹೊರಗೆ ಏನು ನಡೆದರೂ ಉತ್ತರಿಸುವುದಿಲ್ಲ. ತಲೆಯಲ್ಲಿರುವ ಸಾವಿರ ಚಿಂತೆಗಳನ್ನು ಮರೆತು ಅವರು ಸುಖವಾಗಿರುವುದು ಬಚ್ಚಲುಮನೆಯಲ್ಲಿ ಮಾತ್ರ! ಈ ಬಚ್ಚಲುಮನೆಯನ್ನು ಕಂಡರೆ ನನಗೆ ಸವತಿ ಮಾತ್ಸರ್ಯ! ಸ್ನಾನ ಮುಗಿಸಿ ಸೊಂಟಕ್ಕೊಂದು ಟವೆಲ್ ಸುತ್ತಿಕೊಂಡು ಹೊರಬರುವಾಗ “ಏನೋ ಹೇಳ್ತಿದ್ದೆ?” ಎಂದರು.
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮನೆಗೆ ಹೋದರೆ ರಾಜೀವ್ ಇನ್ನೂ ಎದ್ದಿರಲಿಲ್ಲ. ರಾತ್ರಿ ಪಾರ್ಟಿ ಜೋರಾಗಿರಬೇಕು, ಬಾಗಿಲು ತೆರೆದಾಗ ವಿಸ್ಕಿಯ ವಾಸನೆ ಗಮ್ಮೆನ್ನುತ್ತಿತ್ತು. ನಿದ್ರೆಯ ಮತ್ತಲ್ಲೇ ಮುತ್ತು ಕೊಡಲು ಬಂದರು, ‘ಮೊದ್ಲು ಸ್ನಾನ ಮಾಡ್ ನಡೀರಿ. ವಾಸ್ನೆ ಹೊಡೀತಿದೀರ. ಮುತ್ತೆಲ್ಲ ಆಮೇಲೆ’ ನಗುತ್ತ ದೂರ ತಳ್ಳಿದೆ. ರಾತ್ರಿ ಅವರಿಗೆಂದು ಮಾಡಿಟ್ಟಿದ್ದ ಅನ್ನ ಬೇಳೆಸಾರನ್ನು ಅವರು ಮುಟ್ಟೇ ಇರಲಿಲ್ಲ. ಕೆಲವೊಮ್ಮೆ ಬೇಸರವಾಗುತ್ತೆ. ಹೊರಗಡೆ ಕೆಲಸ, ಮನೇಲೂ ಕೆಲಸ. ರಾಜೀವ್ ಒಂದು ಲೋಟವನ್ನೂ ಅತ್ತಿತ್ತ ಜರುಗಿಸುವವರಲ್ಲ. ಇರೋದ್ರಲ್ಲಿ ಅಡುಗೆ ಬಗ್ಗೆ ತಕರಾರು ತೆಗೆಯದೇ ತಿನ್ನುತ್ತಾರೆ. ಮಾಂಸದ ಅಡುಗೆ ಚೆನ್ನಾಗೇ ಮಾಡ್ತೀನಿ ಈ ಸೊಪ್ಪು ತರಕಾರೀದೇ ಸಮಸ್ಯೆ. ನನಗೇ ತಿನ್ನೋದಿಕ್ಕೆ ಬೇಜಾರಾಗುತ್ತೆ ಅಷ್ಟು ಕೆಟ್ಟದಾಗಿ ಮಾಡ್ತೀನಿ. ಎಷ್ಟೇ ಕೆಟ್ಟದಾಗಿ ಮಾಡಿದರೂ ದೂಸರಾ ಮಾತನಾಡದೆ ತಿಂದು ಮುಗಿಸುತ್ತಾರೆ. ನಾನೇ ಕೆಲವೊಮ್ಮೆ ‘ಯಾಕೋ ಊಟ ಮಾಡಂಗಿಲ್ಲ ಕಣ್ರೀ’ ಅಂತ್ಹೇಳಿ ಹಣ್ಣೋ ಬಿಸ್ಕೆಟ್ಟೋ ತಿಂದು ಮಲಗಿಬಿಡ್ತೀನಿ. ನಿನ್ನೆ ಬರೀ ಬೇಳೆಸಾರು ಮಾಡಿದ್ದೆ ನೀರು ನೀರಾಗಿತ್ತು. ನನ್ನದೂ ನೈಟ್ ಡ್ಯೂಟಿ ಇತ್ತಲ್ಲ ಇವರು ಹೊರಗೇ ಕುಡಿದು ಊಟಾನೂ ಮುಗಿಸಿ ಬಂದಿರಬೇಕು. ‘ಅನ್ನ ಸಾರು ತಿನ್ನದೇ ಇದ್ರೆ ಫ್ರಿಜ್ಜಿನೊಳಗಿಡೋದಿಕ್ಕೂ ಆಗಲ್ವ’ ಅಡುಗೆ ಮನೆಯೊಳಗಿಂದ ಕೂಗಿ ಹೇಳಿದೆ. ‘ಮಲ್ತುಬುಟ್ಟೆ’ ಹಲ್ಲುಜ್ಜುತ್ತ ಉತ್ತರಿಸಿದ ರಾಜೀವ. ವಾಸನೆ ನೋಡಿದೆ ಅನ್ನ ಚೆನ್ನಾಗಿತ್ತು. ಸಾರು ಹಳಸಿತ್ತು. ಸದ್ಯ ಕೆಟ್ಟಿರದಿದ್ದರೆ ಇವತ್ತು ಮಧ್ಯಾಹ್ನ ಅದನ್ನೇ ತಿನ್ನಬೇಕಿತ್ತು! ‘ನೋಡಿ ನೀವು ಮಾಡೋ ಕೆಲಸಕ್ಕೆ ಸಾರು ಕೆಟ್ಟೇ ಹೋಗಿದೆ. ಮಧ್ಯಾಹ್ನಕ್ಕೆ ಮತ್ತೆ ಮಾಡಬೇಕು’ ಎಂದು ರೇಗಿದಂತೆ ಮಾಡಿ ‘ಡ್ಯೂಟಿಗೆ ಹೋಗೋ ಮೊದಲು ಒಂದಾರು ಮೊಟ್ಟೆನಾದರೂ ತಂದಿಟ್ಟು ಹೋಗಿ ಮೊಟ್ಟೆ ಸಾರಾದ್ರೂ ಮಾಡಿಡ್ತೀನಿ’ ಎಂದೆ. ಸ್ನಾನ ಮಾಡುತ್ತಿದ್ದರೇನೋ. ಉತ್ತರಿಸಲಿಲ್ಲ. ಸ್ನಾನ ಮಾಡುವಾಗ ಮೆಲ್ಲಗಿನ ದನಿಯಲ್ಲಿ ಹಾಡು ಗುನುಗುತ್ತಿರುತ್ತಾರೆ. ಅವರದೇ ಲೋಕ. ಹೊರಗೆ ಏನು ನಡೆದರೂ ಉತ್ತರಿಸುವುದಿಲ್ಲ. ತಲೆಯಲ್ಲಿರುವ ಸಾವಿರ ಚಿಂತೆಗಳನ್ನು ಮರೆತು ಅವರು ಸುಖವಾಗಿರುವುದು ಬಚ್ಚಲುಮನೆಯಲ್ಲಿ ಮಾತ್ರ! ಈ ಬಚ್ಚಲುಮನೆಯನ್ನು ಕಂಡರೆ ನನಗೆ ಸವತಿ ಮಾತ್ಸರ್ಯ! ಸ್ನಾನ ಮುಗಿಸಿ ಸೊಂಟಕ್ಕೊಂದು ಟವೆಲ್ ಸುತ್ತಿಕೊಂಡು ಹೊರಬರುವಾಗ “ಏನೋ ಹೇಳ್ತಿದ್ದೆ?” ಎಂದರು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.