ಜನ 31, 2019

ಒಂದಿಷ್ಟು ಸಾಲುಗಳು.

ಶೀಲಾ ಭಂಡಾರ್ಕರ್.
ದೀಪ ಹಚ್ಚಿಡಬೇಕು
ಕನಸುಗಳನರಸಲು,
ಕತ್ತಲೆಯೇ ಬೇಕು
ನೆನಪುಗಳ ಕರಗಿಸಲು!

ಸಂಬಂದ ಯಾವುದೇ ಇರಲಿ
ಮನಸು ಬಯಸುವುದು
ನಿರಾಳತೆಯ ಮಾತ್ರ!

ಕೆಲ ಸಂಬಂದಗಳೇ ಹೀಗೆ
ಎಷ್ಟು ಸಿಂಗರಿಸಿದರೂ
ನಮ್ಮವಾಗುವುದಿಲ್ಲ!

ಗಾಯ ತೋರಿಸಿ
ಬೇಡುವವನಿಗೆ
ಗಾಯ ಮಾದೀತೆಂಬ ಭಯ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ