ಜೂನ್ 3, 2018

ಪಕ್ಷಿ ಪ್ರಪಂಚ: ನೇರಳೆ ಸೂರಕ್ಕಿ

ಗಂಡು ನೇರಳೆ ಸೂರಕ್ಕಿ. 
ಡಾ. ಅಶೋಕ್.ಕೆ.ಅರ್ 
ಭಾರತದಲ್ಲಿ ರೆಕ್ಕೆಯನ್ನು ಪಟಪಟನೆ ಬಡಿಯುವ ಹಮ್ಮಿಂಗ್ ಬರ್ಡುಗಳಿಲ್ಲ. ಅವುಗಳ ಬದಲಿಗೆ ನಮ್ಮಲ್ಲಿ ವಿಧವಿಧದ ಸೂರಕ್ಕಿಗಳಿವೆ. ಸೂರಕ್ಕಿಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವುದು ನೇರಳೆ ಸೂರಕ್ಕಿ.

ಆಂಗ್ಲ ಹೆಸರು: - Purple sunbird (ಪರ್ಪಲ್ ಸನ್ ಬರ್ಡ್)

ವೈಜ್ನಾನಿಕ ಹೆಸರು: - Cinnyris asiaticus (ಸಿನಿರಿಸ್ ಏಷಿಯಾಟಿಕಸ್)

ಗುಬ್ಬಿ ಗಾತ್ರದ ಪಕ್ಷಿಯಿದು. ಹೂವಿನ ಮಕರಂದವನ್ನು ಹೀರಲು ಅನುಕೂಲ ಮಾಡಿಕೊಡುವಂತೆ ಚೂರೇ ಚೂರು ಬಾಗಿದ ಉದ್ದನೆಯ ಕೊಕ್ಕಿದೆ. ನೇರಳೆ ಸೂರಕ್ಕಿ ಎಂಬ ಹೆಸರು ಬಂದಿರುವುದು ಗಂಡು ಪಕ್ಷಿಯ ಬಣ್ಣದ ದೆಸೆಯಿಂದ. ದೂರದಿಂದ ನೋಡಿದರೆ, ಪಕ್ಷಿಯು ನೆರಳಿನಲ್ಲಿದ್ದಾಗ ಗಮನಿಸಿದರೆ ಇಡೀ ಪಕ್ಷಿ ಕಪ್ಪಾಗಿ ಕಾಣುತ್ತದೆ. ಸೂರ್ಯನ ಬೆಳಕಿನಲ್ಲಿ ಪಕ್ಷಿ ದೇಹ ಮಿಂದಾಗಷ್ಟೇ ತಲೆಯ ಭಾಗ ಮತ್ತು ದೇಹದ ಮೇಲ್ಭಾಗ ನೇರಳೆ ಬಣ್ಣದಿಂದ ಹೊಳೆಯುತ್ತಿರುವುದನ್ನು ಗಮನಿಸಬಹುದು.
Click here to read in English.

ಜೂನ್ 2, 2018

ಕಥೆ: ತಂದೂರಿ.

ಅಭಿಗೌಡ
ಊರಲ್ಲಿ ಯಾರದೇ ಬರ್ತ್‍ಡೇ ಆಚರಣೆಯಾದ್ರು ಶಿವನ ಅಂಗಡಿ ಕಬಾಬಿಗೆ ಭಾರಿ ಬೇಡಿಕೆ. ಏಕೆಂದರೆ ಕಬಾಬ್ ಜೊತೆ ಕಾಂಪ್ಲಿಮೆಂಟರಿ ಕಾಪಿ ಥರ ಒಂದು ತಂದೂರಿ ಚಿಕನ್ ಕೊಡುತ್ತಿದ್ದ. ಕೇಕ್ ಕತ್ತರಿಸುವುದರ ಬದಲು ಅದನ್ನೆ ಆತ ಮಾರ್ಕ್ ಮಾಡಿರುವ ಜಾಗದಲ್ಲಿ ಚಾಕುವಿನಿಂದ ಕಟ್ ಮಾಡಿದರೆ ಸರಾಗವಾಗಿ ಕೇಕ್ ಪೀಸ್‍ನಂತೆಯೇ ಎಲ್ಲರ ಬಾಯಿಗು ಹಾಕಿ ಬರ್ತ್‍ಡೇ ಸಂಭ್ರಮ ಆಚರಿಸಿಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಇರಿಸು-ಮುರಿಸು ತೋರಿದ ಜನ ದಿನೇ ದಿನೇ ಕೇಕ್ ಜೊತೆ ಇದನ್ನು ಕತ್ತರಿಸಲು ಶುರು ಮಾಡಿದ್ರು. ಈಗ ಕೇಕ್ ಬಿಟ್ಟೇ ಬಿಟ್ಟಿದ್ದಾರೆ. ಜನರೇ ಅವರಿಗೆ ಇಷ್ಟವಾದ ಮಾಂಸದ ತುಂಡು ತಂದು ಬರ್ತ್‍ಡೇ ಪಾರ್ಟಿಲಿ ಕತ್ತರಿಸಲು ರೆಡಿ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ.
ಹೆಚ್ಚು ಕೇಕ್ ಸೇಲ್ ಆಗ್ತಿದ್ದ ಬೇಕರಿಯ ರವೀಂದ್ರ ಸ್ವಲ್ಪ ದಿನ ‘ಛೇ ಕೇಕ್ ಬಿಸಿನೆಸ್‍ಗೆ ಕುತ್ ತಂದ್ ಬಿಟ್ನಲ್ಲ ಈ ಕಬಾಬ್ ಶಿವ’ ಎಂದು ಮನದೊಳಗೆ ಗೊಣಗಿಕೊಳ್ಳುತ್ತಿದ್ದರು. ಆತ ನೀಡುತ್ತಿದ್ದ ಆ ಬರ್ತ್‍ಡೇ ಸ್ಪೆಷಲ್ ತಂದೂರಿ ಚಿಕನ್ ರುಚಿ ನೆನಪಾದೊಡನೆ ಯಾರಾದ್ರು ಬರ್ತ್‍ಡೇಗೆ ಕರೆದಿದ್ದಾರ ಎಂದು ನೆನೆಪಿಸಿಕೊಳ್ಳುತ್ತಿದ್ದ.
 
ಇನ್ನಷ್ಟು ಕತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಜೂನ್ 1, 2018

ಹೋಗಿಬನ್ನಿ ಸಿದ್ದರಾಮಯ್ಯನವರೆ......

ಕು.ಸ.ಮಧುಸೂದನ ರಂಗೆನಹಳ್ಳಿ
ನಿಮ್ಮ ಮತ್ತು ನಿಮ್ಮ ಪಕ್ಷದ ಈ ಸೋಲು ಅನಿರೀಕ್ಷಿತವಾಗಿದ್ದರೂ, ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿದರ ಮುನ್ಸೂಚನೆ ನನಗೇ ಅರಿವಿಲ್ಲದಂತೆ ಇತ್ತೆಂಬುದು ಇದೀಗ ನಿಜವೆನಿಸುತ್ತಿದೆ. ಹಾಗಾಗಿಯೇ ಚುನಾವಣೆಗಳು ಘೋಷಣೆಯಾದ ಮೊದಲ ದಿನಗಳಲ್ಲಿಯೇ 'ಟಾರ್ಗೆಟ್ ಸಿದ್ದರಾಮಯ್ಯ' ಎಂಬುದೊಂದು ಲೇಖನ ಬರೆದಿದ್ದೆ. ಹೌದು ಈ ನೆಲದ ಮೆಲ್ವರ್ಗಗಳು, ಪಾಳೇಗಾರಿಕೆಯ ಪಳೆಯುಳಿಕೆಗಳು, ಜೊತೆಗೆ ನಿಮ್ಮದೇ ಪಕ್ಷದ ನಿಮ್ಮ ಹಿತ ಶತ್ರುಗಳು ಕಾಂಗ್ರೆಸ್ಸನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಸೋಲಿಸಲು ಪಣತೊಟ್ಟು ನಿಂತಿದ್ದವು. ಆ ಶಕ್ತಿಗಳಿಗೆ ಗೊತ್ತಿತ್ತು ವರ್ತಮಾನದಲ್ಲಿ ರಾಜ್ಯ ಕಾಂಗ್ರೆಸ್ಸನ್ನು ಸೋಲಿಸಬೇಕೆಂದರೆ ಮೊದಲು ಸಿದ್ದರಾಮಯ್ಯನವರನ್ನು ಹಣಿಯಬೇಕೆಂಬುದು. ಇದೇನು ಈ ಚುನಾವಣೆ ಘೋಷಣೆಯಾದ ನಂತರ ಉದ್ಭವವಾದ ಹೊಸ ಬೆಳವಣಿಗೆಯೇನಲ್ಲ.

ಮೇ 27, 2018

ಪಕ್ಷಿ ಪ್ರಪಂಚ: ಮೈನಾ

Maina
ಮೈನಾ/ ಗೊರವಂಕ.
ಕೆನಾನ್ 550ಡಿ, ಕೆನಾನ್ 75 - 300 ಎಂ ಎಂ ಲೆನ್ಸ್
ಎಫ್/5.6, 1/125, ಐ ಎಸ್ ಓ 100
ಡಾ. ಅಶೋಕ್. ಕೆ. ಆರ್ 
ಗೊರವಂಕವೆಂದೂ ಕರೆಯಲ್ಪಡುವ ಈ ಹಕ್ಕಿಯು ನಗರ ಪ್ರದೇಶಕ್ಕೆ ಸಂಪೂರ್ಣವಾಗಿ ಒಗ್ಗಿಹೋಗಿದೆ. ಆ ಕಾರಣದಿಂದಲೇ ಇವುಗಳ ಸಂತತಿ ಹೆಚ್ಚುತ್ತಲಿದೆ.

ಆಂಗ್ಲ ಹೆಸರು: - Common myna (ಕಾಮನ್ ಮೈನಾ)

 ವೈಜ್ಞಾನಿಕ ಹೆಸರು: - Acridotheris tristis (ಆಕ್ರಿಡೋಥೆರಿಸ್ ಟ್ರಿಸ್ಟಿಸ್)

ಮೈನಾ ಪಕ್ಷಿಯ ದೇಹ ಕಂದು ಬಣ್ಣದ್ದಾಗಿದೆ. ತಲೆಯ ಭಾಗ ಮತ್ತು ರೆಕ್ಕೆಗಳ ಕೊನೆಯ ಭಾಗ ಕಪ್ಪು ಅಥವಾ ಕಪ್ಪು ಮಿಶ್ರಿತ ಕಂದ ಬಣ್ಣವನ್ನೊಂದಿವೆ. ಹಳದಿ ಬಣ್ಣದ ಕಾಲು - ಕೊಕ್ಕುಗಳಿವೆ. ಮೈನಾ ಹಕ್ಕಿ ಹಾರುವಾಗ ರೆಕ್ಕೆಯ ಒಳ ಮತ್ತು ಹೊರಭಾಗದಲ್ಲಿ ಕೆಲವು ಬಿಳಿ ಪಟ್ಟಿಗಳನ್ನೂ ಕಾಣಬಹುದು. ಕಣ್ಣಿನ ಸುತ್ತ - ಕೆಳ ಮತ್ತು ಹಿಂಭಾಗದಲ್ಲಿ - ಹಳದಿ ಪಟ್ಟೆಯು ಎದ್ದು ಕಾಣಿಸುತ್ತದೆ. ಮೈನಾ ಪಕ್ಷಿಯ ಕಣ್ಣಿಗೊಂದು ಕೋಪದ ಭಾವವನ್ನು ಈ ಹಳದಿ ಪಟ್ಟಿ ಕರುಣಿಸುತ್ತದೆ.

Click here to read in English

ಮೇ 22, 2018

ಬಹುಮತ! ಒಂದು ಒಳನೋಟ

ಕು.ಸ. ಮಧುಸೂದನ ರಂಗೇನಹಳ್ಳಿ
ನಾವೆಷ್ಟೇ ಮಾತಾಡಿದರೂ ಕೆಲವೊಮ್ಮೆ ನಮ್ಮ ಸಂವಿದಾನದ ಆಶಯಗಳನ್ನು ನಾವು ಈಡೇರಿಸಲೇ ಆಗದಂತಹ ಪರಿಸ್ಥಿತಿ ಬಂದೊದಗಿಬಿಡುತ್ತದೆ. ಪ್ರಜಾಪ್ರಭುತ್ವದ ಅಡಿಗಲ್ಲುಗಳೆಂದು ನಾವು ಕೊಂಡಾಡುವ ಚುನಾವಣೆಗಳು ಮತ್ತು ಅದರಲ್ಲಿ ಬಹುಮತ ಪಡೆಯುವ ಪಕ್ಷಗಳು ಅಧಿಕಾರ ಪಡೆಯಬೇಕೆನ್ನುವ ನಮ್ಮ ಆಶಯಗಳು ಕೆಲವೊಮ್ಮೆ ತಲೆಕೆಳಗಾಗಿ ಬಿಡುತ್ತವೆ. ಮತ್ತೆ ಕಾನೂನಿನ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಕೆಲವೊಂದು ಹೆಜ್ಜೆಗಳನ್ನಿಟ್ಟು ಪ್ರಜಾಸತ್ತೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇದನ್ನು ನಾನು ನಮ್ಮ ಅಸಹಾಯಕತೆಯೆಂದೇ ಬಾವಿಸುತ್ತೇನೆಯೇ ಹೊರತು ಇದು ಸರಿಯೊ-ತಪ್ಪೊ ಎಂದು ತೀರ್ಪು ನೀಡಲು ಹೋಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊನ್ನೆ ಹೊರಬಿದ್ದ ಕರ್ನಾಟಕ ರಾಜ್ಯದ ವಿದಾನಸಭಾ ಚುನಾವಣೆಗಳ ಪಲಿತಾಂಶಗಳನ್ನು ನಂತರ ನಡೆದ ಸರಕಾರ ರಚನೆಯ ಸರ್ಕಸ್ಸುಗಳನ್ನು ಸೂಕ್ಷ್ಮವಾಗಿ ಅದ್ಯಯನ ಮಾಡಬೇಕಾಗುತ್ತದೆ: 

ಪಲಿತಾಂಶ ಹೀಗಿತ್ತು: ಒಟ್ಟು 224 ಕ್ಷೇತ್ರಗಳ ಪೈಕಿ ಚುನಾವಣೆ ನಡೆದು ಪಲಿತಾಂಶ ಹೊರಬಿದ್ದಿದ್ದು 222 ಕ್ಷೇತ್ರಗಳಲ್ಲಿ ಮಾತ್ರ. ಇದರಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಹೀಗಿವೆ. ಬಾಜಪ-104, ಕಾಂಗ್ರೇಸ್-78, ಜನತಾದಳ-37, ಬಹುಜನ ಪಕ್ಷ-01, ಪಕ್ಷೇತರ-02. ಸರಕಾರ ರಚಿಸಲು ಬೇಕಿದ್ದ ಸಂಖ್ಯೆ- 112. 

ಮೇ 20, 2018

ಪಕ್ಷಿ ಪ್ರಪಂಚ: ಕಾಗೆ.

House crow Karnataka
ಊರು ಕಾಗೆ.
ಕೆನಾನ್ 550ಡಿ, ಕೆನಾನ್ 75 - 300 ಎಂ.ಎಂ ಲೆನ್ಸ್
ಎಫ್/5.6, 1/200, ಐ.ಎಸ್.ಓ 400
ಡಾ. ಅಶೋಕ್. ಕೆ. ಆರ್. 
ಕಾಗೆಯನ್ನು ಪಕ್ಷಿಯೆಂದು ಪರಿಗಣಿಸುವುದೇ ನಮಗೆ ಮರೆತುಹೋಗುವಷ್ಟರ ಮಟ್ಟಿಗೆ ಅವುಗಳು ನಮ್ಮ ಜೀವನದಲ್ಲಿ ಬೆರೆತುಹೋಗಿವೆ. ನಮ್ಮಲ್ಲಿ ಕಾಣುವ ಕಾಗೆಗಳಲ್ಲಿ ಮುಖ್ಯವಾಗಿ ಎರಡು ವಿಧ - ಊರು ಕಾಗೆ ಮತ್ತು ಕಾಡು ಕಾಗೆ.


ಆಂಗ್ಲ ಹೆಸರು: - 

ಊರು ಕಾಗೆ - House crow (ಹೌಸ್ ಕ್ರೊ) 
ಕಾಡು ಕಾಗೆ - Jungle crow (ಜಂಗಲ್ ಕ್ರೊ) 


ವೈಜ್ಞಾನಿಕ ಹೆಸರು: -

ಊರು ಕಾಗೆ - Corvus splendens (ಕಾರ್ವಸ್ ಸ್ಪ್ಲೆಂಡೆನ್ಸ್) 
ಕಾಡು ಕಾಗೆ - Corvus macrorhynchos (ಕಾರ್ವಸ್ ಮ್ಯಾಕ್ರೊರಿಂಕೋಸ್) 

Click here to read in English

ಎರಡೂ ವಿಧದ ಕಾಗೆಗಳು ಕಪ್ಪು ಬಣ್ಣದ್ದೇ ಆಗಿರುತ್ತವಾದರೂ ಊರು ಕಾಗೆಯ ಕತ್ತು ಮತ್ತು ಎದೆಯ ಭಾಗವು ಬೂದು ಬಣ್ಣದ್ದಾಗಿರುತ್ತದೆ. ಕಾಡು ಕಾಗೆಯ ಕಪ್ಪು ಊರು ಕಾಗೆಯ ಕಪ್ಪಿಗೆ ಹೋಲಿಸಿದರೆ ಹೆಚ್ಚು ಹೊಳಪಿನಿಂದ ಕೂಡಿದೆ.

ಮೇ 15, 2018

ಕತ್ತಿ ಝಳಪಿಸತೊಡಗಿದರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹೊರಗಿನವರು ಒಳಗಿನವರ ತಲೆ ತರಿದರೆಂಬ
ಇತಿಹಾಸಗಳ ಓದಿ ಬೆಳೆದವರು
ಒಪ್ಪುತಪ್ಪುಗಳ ನಡುವೆ ಗೆರೆ ಕೊರೆಯಲಾಗದೆ
ಸತ್ಯವನರಿಯಲಾಗದೆ ಜಿದ್ದಿಗೆ ಬಿದ್ದರು.
ಹಗಲೂರಾತ್ರಿಗಳ ಪರಿವೆಯಿರದೆ
ಕತ್ತಿಗಳ ಮಸೆದದ್ದೇ ಮಸೆದದ್ದು
ಹರಿತವಾದ ಮೇಲೆ ಆಯುಧ
ಹುಡುಕತೊಡಗಿದರು:

ಮೇ 8, 2018

ಬಾಜಪದೊಂದಿಗೆ ಮೈತ್ರಿ! ಸ್ಪಷ್ಟನಿಲುವೊಂದನ್ನು ತೆಗೆದುಕೊಳ್ಳಬೇಕಿರುವ ಜನತಾದಳದ ಅನಿವಾರ್ಯತೆ

ಸಾಂದರ್ಭಿಕ ಚಿತ್ರ 
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸದ್ಯದ ಮಟ್ಟಿಗೆ ಕರ್ನಾಟಕದ ಜಾತ್ಯಾತೀತ ಜನತಾದಳದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರುವಂತೆ ಕಾಣುತ್ತಿಲ್ಲ. ತನ್ನೆಲ್ಲ ರಾಜಕೀಯ ಮೇಲಾಟಗಳ ಹೊರತಾಗಿಯೂ ಕರ್ನಾಟಕದ ಜನತೆಗೆ ಕಾಂಗ್ರೆಸ್ ಮತ್ತು ಬಾಜಪದ ಹೊರತಾದ ಮೂರನೇ ಆಯ್ಕೆಯೊಂದನ್ನು ತನ್ನ ಮೂಲಕ ನೀಡಿದ್ದ ಜನತಾದಳದ ವರ್ತಮಾನದ ರಾಜಕೀಯ ನಡವಳಿಕೆಗಳಿಂದ ಕರ್ನಾಟಕದ ಜನತೆಗೆ ಭ್ರಮನಿರಸನವಾಗಿದೆ. ದಿನದಿಂದ ದಿನಕ್ಕೆ ತಾನು ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದ ಮತ್ತು ಗೊಂದಲಪೂರ್ಣ ನಡವಳಿಕೆಯಿಂದಾಗಿ ಅದು ಒಟ್ಟು ಜನತೆಯಲ್ಲಿ ಮಾತ್ರವಲ್ಲದೆ, ತನ್ನದೇ ಕಾರ್ಯಕರ್ತರ ಪಡೆಯಲ್ಲಿಯೂ ನಿರಾಸೆಯನ್ನುಂಟು ಮಾಡಿದೆ. ಜನತಾದಳದ ಈ ಗೊಂದಲಗಳು ಇವತ್ತಿನದೇನಲ್ಲ. 2006ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾತ್ರೋರಾತ್ರಿ ಬಾಜಪದ ಜೊತೆ ಸೇರಿ ಸರಕಾರ ರಚಿಸಿದ ದಿನ ಶುರುವಾದ ಅದರ ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ವರ್ಷಗಳಲ್ಲಿ ಅದು ಪ್ರಯತ್ನವನ್ನೇನೂ ಮಾಡಿದಂತಿಲ್ಲ.

ಮೇ 3, 2018

ನಿರೀಕ್ಷೆ ಮತ್ತು ವಾಸ್ತವ......

ಸಾಂದರ್ಭಿಕ ಚಿತ್ರ 
ಡಾ. ಅಶೋಕ್. ಕೆ. ಆರ್. ಪೇಪರ್ರಿನವನು ಪತ್ರಿಕೆಯನ್ನು ಕಾಂಪೌಂಡಿನೊಳಗೆ ಎಸೆದ ಸದ್ದಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ಬಾಗಿಲು ತೆರೆದು ಪತ್ರಿಕೆ ತೆಗೆದುಕೊಂಡು ಒಳಬಂದು ಓದಲಾರಂಭಿಸಿದೆ. ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳ ಮಾತುಗಳಲ್ಲದೆ ಬೇರೆ ಸುದ್ದಿಗಳನ್ನು ಕಾಣಲು ಸಾಧ್ಯವೇ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾತುಗಳೇ ಇವತ್ತಿನ ಪ್ರಮುಖ ಸುದ್ದಿ:

ನೀನೊಮ್ಮೆ ಹೆಣ್ಣಾಗಿ ಬಾ

ಪಮ್ಮಿದರಲಗೋಡು 
ಅತ್ಯುನ್ನತ ಸ್ಥಾನಕ್ಕೇರಿ ಅತ್ಯದ್ಭುತ ಶಕ್ತಿ ಪಡೆದೂ.. 
ಸಮಾಜ ಸಂಸಾರ ಸಂಪ್ರದಾಯಗಳ, 
ಆವರಣದೊಳಗೆ ಅನಾವರಣಗೊಳ್ಳುವ 
ಹೆಣ್ಣಿನ ಜೀವನದ ವಿವಿಧ ಮಜಲುಗಳಲ್ಲಿ 
ಎಲೆಮರೆಯ ಕಾಯಾಗಿ ಎಲ್ಲಿಯೂ ಸಲ್ಲದವಳಾಗಿ 
ಕಳೆದೇ ಹೋಗುವ ಪರಿಯ ಅರಿಯಲು 
ನೀನೊಮ್ಮ ಹೆಣ್ಣಾಗಿ ಬಾ.....