ಕು.ಸ.ಮಧುಸೂದನ ರಂಗೆನಹಳ್ಳಿ
ನಿಮ್ಮ ಮತ್ತು ನಿಮ್ಮ ಪಕ್ಷದ ಈ ಸೋಲು ಅನಿರೀಕ್ಷಿತವಾಗಿದ್ದರೂ, ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿದರ ಮುನ್ಸೂಚನೆ ನನಗೇ ಅರಿವಿಲ್ಲದಂತೆ ಇತ್ತೆಂಬುದು ಇದೀಗ ನಿಜವೆನಿಸುತ್ತಿದೆ. ಹಾಗಾಗಿಯೇ ಚುನಾವಣೆಗಳು ಘೋಷಣೆಯಾದ ಮೊದಲ ದಿನಗಳಲ್ಲಿಯೇ 'ಟಾರ್ಗೆಟ್ ಸಿದ್ದರಾಮಯ್ಯ' ಎಂಬುದೊಂದು ಲೇಖನ ಬರೆದಿದ್ದೆ. ಹೌದು ಈ ನೆಲದ ಮೆಲ್ವರ್ಗಗಳು, ಪಾಳೇಗಾರಿಕೆಯ ಪಳೆಯುಳಿಕೆಗಳು, ಜೊತೆಗೆ ನಿಮ್ಮದೇ ಪಕ್ಷದ ನಿಮ್ಮ ಹಿತ ಶತ್ರುಗಳು ಕಾಂಗ್ರೆಸ್ಸನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಸೋಲಿಸಲು ಪಣತೊಟ್ಟು ನಿಂತಿದ್ದವು. ಆ ಶಕ್ತಿಗಳಿಗೆ ಗೊತ್ತಿತ್ತು ವರ್ತಮಾನದಲ್ಲಿ ರಾಜ್ಯ ಕಾಂಗ್ರೆಸ್ಸನ್ನು ಸೋಲಿಸಬೇಕೆಂದರೆ ಮೊದಲು ಸಿದ್ದರಾಮಯ್ಯನವರನ್ನು ಹಣಿಯಬೇಕೆಂಬುದು. ಇದೇನು ಈ ಚುನಾವಣೆ ಘೋಷಣೆಯಾದ ನಂತರ ಉದ್ಭವವಾದ ಹೊಸ ಬೆಳವಣಿಗೆಯೇನಲ್ಲ.
ನಿಮ್ಮ ಮತ್ತು ನಿಮ್ಮ ಪಕ್ಷದ ಈ ಸೋಲು ಅನಿರೀಕ್ಷಿತವಾಗಿದ್ದರೂ, ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿದರ ಮುನ್ಸೂಚನೆ ನನಗೇ ಅರಿವಿಲ್ಲದಂತೆ ಇತ್ತೆಂಬುದು ಇದೀಗ ನಿಜವೆನಿಸುತ್ತಿದೆ. ಹಾಗಾಗಿಯೇ ಚುನಾವಣೆಗಳು ಘೋಷಣೆಯಾದ ಮೊದಲ ದಿನಗಳಲ್ಲಿಯೇ 'ಟಾರ್ಗೆಟ್ ಸಿದ್ದರಾಮಯ್ಯ' ಎಂಬುದೊಂದು ಲೇಖನ ಬರೆದಿದ್ದೆ. ಹೌದು ಈ ನೆಲದ ಮೆಲ್ವರ್ಗಗಳು, ಪಾಳೇಗಾರಿಕೆಯ ಪಳೆಯುಳಿಕೆಗಳು, ಜೊತೆಗೆ ನಿಮ್ಮದೇ ಪಕ್ಷದ ನಿಮ್ಮ ಹಿತ ಶತ್ರುಗಳು ಕಾಂಗ್ರೆಸ್ಸನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಸೋಲಿಸಲು ಪಣತೊಟ್ಟು ನಿಂತಿದ್ದವು. ಆ ಶಕ್ತಿಗಳಿಗೆ ಗೊತ್ತಿತ್ತು ವರ್ತಮಾನದಲ್ಲಿ ರಾಜ್ಯ ಕಾಂಗ್ರೆಸ್ಸನ್ನು ಸೋಲಿಸಬೇಕೆಂದರೆ ಮೊದಲು ಸಿದ್ದರಾಮಯ್ಯನವರನ್ನು ಹಣಿಯಬೇಕೆಂಬುದು. ಇದೇನು ಈ ಚುನಾವಣೆ ಘೋಷಣೆಯಾದ ನಂತರ ಉದ್ಭವವಾದ ಹೊಸ ಬೆಳವಣಿಗೆಯೇನಲ್ಲ.