![]() |
ಸಾಂದರ್ಭಕ ಚಿತ್ರ |
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಗಾಗ ತೆರದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇವೆ. ಇಂತಹ ಪ್ರತಿ ಘಟನೆ ನಡೆದಾಗಲೂ ಜನ ಸರಕಾರಗಳ ವಿರುದ್ದ ಪ್ರತಿಭಟಿಸುವುದು, ಸರಕಾರಗಳು ಕೊಳವೆಬಾವಿಗಳಿಗೆ ಸಂಬಂದಿಸಿದಂತೆ ಒಂದಷ್ಟು ನೀತಿಗಳನ್ನು ರೂಪಿಸುವುದಾಗಿ ಹೇಳುವುದು ನಡೆದೆ ಇದೆ.
ಆದರೆ ಸರಕಾರ ರೂಪಿಸಿರುವ ಯಾವ ನೀತಿಗಳೂ ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಯಾವುದೇ ಇಚ್ಚಾಶಕ್ತಿ ಇರದೆ ರೂಪಿಸಿದ ನೀತಿನಿಯಮಗಳಿಂದ, ಕಾನೂನುಗಳಿಂದ ಇಂತಹ ಅಪಘಾತಗಳನ್ನು ತಡೆಯಲು ಸಾದ್ಯವಿಲ್ಲ. ಹಾಗಾಗಿ ಕೆಲವಾದರು ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಭವಿಷ್ಯದಲ್ಲಿಯಾದರು ಇಂತಹ ಅನಾಹುತಗಳನ್ನು ನಿಯಂತ್ರಿಸ ಬಹುದಾಗಿದೆ.