M L Lingaraju, Prajasamara
ಸದುದ್ದೇಶದಿಂದ ಜಾರಿಗೆ ಬಂದಿದ್ದ ಜಾತಿನಿಂದನೆ, ಅಟ್ರಾಸಿಟಿ ಪ್ರಕರಣ ಇಂದು ಎಷ್ಟರ ಮಟ್ಟಿಗೆ ದುರುಪಯೋಗವಾಗುತ್ತಿದೆ ಎಂದರೆ, ನಿಜಕ್ಕೂ ಬೇಸರವಾಗುತ್ತದೆ. ಮೊನ್ನೆ ಫೇಸ್ಬುಕ್ನಲ್ಲಿ ದಲಿತ ಯುವಕನು ಹಾಕಿದ್ದ ಸ್ಟೇಟಸ್ಗೆ ಇನ್ನಾವುದೋ ಕೋಮಿನ ಯುವಕ ಕಮೆಂಟು ಮಾಡಿದ್ದಕ್ಕೆ ರಾದ್ಧಾಂತವೇ ನಡೆದುಹೋಯಿತು. ಸ್ಟೇಟಸ್ ಹಾಕಿದ್ದ ದಲಿತ ಯುವಕ, ಕಮೆಂಟ್ ಮಾಡಿದವನ ಮೇಲೆ ನಾಳೆ ಅಟ್ರಾಸಿಟಿ ದಾಖಲು ಮಾಡುವುದಾಗಿ ಅದಕ್ಕಾಗಿ ನನ್ನ ಬೆಂಬಲಕ್ಕೆ ಬರುವ ಸ್ನೇಹಿತರಿದ್ದರೆ, ಬನ್ನಿ ಎಂದು ಕರೆ ನೀಡಿದ್ದ.