ಅಕ್ಟೋ 18, 2014

ನಂ 1 ಸ್ಥಾನ ಸುಲಭವಾಗಿ ದಕ್ಕುವುದಿಲ್ಲ!

vijayavani kannada daily
ನಂ.1 ಆಗಲು ಹೀಗೆಲ್ಲ ಮಾಡಬೇಕೆ
Dr Ashok K R
ಕಳೆದ ಶುಕ್ರವಾರದ ವಿಜಯವಾಣಿಯ ಮುಖಪುಟದಲ್ಲಿ 'ವಿಜಯವಾಣಿ' ಪತ್ರಿಕೆ ಮೊದಲೆರಡು ಸ್ಥಾನಗಳಲ್ಲಿದ್ದ 'ವಿಜಯ ಕರ್ನಾಟಕ' ಮತ್ತು 'ಪ್ರಜಾವಾಣಿ' ಪತ್ರಿಕೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ತಲುಪಿದೆ ಎಂಬ ಸುದ್ದಿ ಭರ್ತಿ ಎರಡು ಪುಟಗಳ ತುಂಬ ಪ್ರಕಟವಾಗಿದೆ. ಜನವರಿಯಿಂದ ಜೂನ್ ವರೆಗಿನ ಆಡಿಟ್ ಬ್ಯೂರೋ ಆಫ್ ಸರ್ಕುಲೇಷನ್ ಪ್ರಕಾರ ವಿಜಯವಾಣಿ ದಿನಂಪ್ರತಿ 6, 67, 879 ಪ್ರತಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಪ ಕಾಲಾವಧಿಯಲ್ಲಿಯೇ ವಿಜಯವಾಣಿ ಇಷ್ಟರಮಟ್ಟಿಗೆ ಯಶ ಸಾಧಿಸಿರುವುದು ಪ್ರಶಂಸಾರ್ಹವೇನೋ ಹೌದು. ಆದರೆ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಿಕೆಗಳು ಮಾರಾಟ ಸಂಖೈ ಹೆಚ್ಚಿಸಲು ಹಿಡಿದಿರುವ ಮಾರ್ಗಗಳನ್ನು ನೋಡಿದರೆ ಬೇಸರವುಂಟಾಗುತ್ತದೆ.
Also Read
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಪ್ರಶ್ನಿಸುವರಾರು?

ಅಕ್ಟೋ 17, 2014

ಇಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು!

raghaveshwara swamy case
ರಾಘವೇಶ್ವರ ಸ್ವಾಮಿ
Dr Ashok K R 


ಅದೊಂದು ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸರ್ವೇಸಾಧಾರಣ ಎಂದೇ ಕರೆಯಬಹುದಾದ ಒಂದು ಪ್ರಕರಣ. ತಮ್ಮ ಸ್ಥಾನವನ್ನು ಬಳಸಿಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು, ಲೈಂಗಿಕ ಹಿಂಸೆಗೆ ಒಳಪಡಿಸಿಬಿಟ್ಟರು ಎಂಬ ದೂರು ಪೋಲೀಸರನ್ನು ತಲುಪುತ್ತದೆ. ದೂರನ್ನು ಸ್ವೀಕರಿಸಿಕೊಂಡ ಪೋಲೀಸರು ಯಾವ ರೀತಿ ಕಾರ್ಯನಿರ್ವಹಿಸಬೇಕು? ನ್ಯಾಯಾಲಯ ಯಾವ ರೀತಿ ಕೆಲಸ ಮಾಡಬೇಕು? ಸಮಾಜದ ಪ್ರತಿಕ್ರಿಯೆ ಯಾವ ರೀತಿ ಇರಬೇಕು? ದೂರು ಸ್ವೀಕರಿಸಿಕೊಂಡ ಪೋಲೀಸರು ಆಪಾದಿತನನ್ನು ವಿಚಾರಿಸಿ ಅಗತ್ಯವಿದ್ದರೆ ಬಂಧಿಸಿ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು. ನ್ಯಾಯಾಲಯ ಅಪರಾಧದ ಹಿಂದು ಮುಂದನ್ನು ಪರಿವೀಕ್ಷಿಸಿ ಆಪಾದಿತನಿಗೆ ಜಾಮೀನು ಕೊಡಬಹುದು ಅಥವಾ ಅಪರಾಧ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಂತೆನ್ನಿಸಿದರೆ ಮತ್ತಷ್ಟು ವಿಚಾರಣೆಗೆ ಅನುಮತಿ ನೀಡಬೇಕು. ಒಂದು ಗುರುತರ ಆರೋಪಕ್ಕೊಳಗಾಗಿರುವ ವ್ಯಕ್ತಿಯನ್ನು ಸಮಾಜ ಆರೋಪ ಸಾಬೀತಾಗುವವರೆಗೂ ಅಪರಾಧಿಯನ್ನಾಗಿ ಮಾಡುವ ಅವಶ್ಯಕತೆಯಿರದಿದ್ದರೂ ಒಂದು ಪುಟ್ಟ ಅನುಮಾನದ ದೃಷ್ಟಿಯಿಂದಲಾದರೂ ನೋಡಬೇಕು. ನಂತರದ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆದು ಸತ್ಯಾಸತ್ಯತೆಗಳು ಹೊರಬರಬೇಕು. ಸಂವಿಧಾನಕ್ಕೆ ಕಾನೂನಿಗೆ ಬೆಲೆ ಇರುವ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಕರಣಗಳ ವಿಚಾರಣೆಗಳೂ ಇದೇ ರೀತಿ ನಡೆಯಬೇಕಲ್ಲವೇ? ಕ್ಷಮಿಸಿ ಈ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಆದರೆ ಕೆಲವರು ಹೆಚ್ಚು ಸಮಾನರು.

Also Read
ಧರ್ಮ ಮರೆತ ನಾಡಿನಲ್ಲಿ

ಅಕ್ಟೋ 16, 2014

ವಾಡಿ ಜಂಕ್ಷನ್ .... ಭಾಗ 3

Dr Ashok K R
“ಭಯ್ಯಾ ಜೀವನ ಅಂದ್ರೆ ಏನು?” ಪ್ರಶ್ನೆ ಕೇಳಿದ ರಾಘವ ಮತ್ತೆ ಮುಸುಕೆಳೆದುಕೊಂಡು ಪಕ್ಕಕ್ಕೆ ಹೊರಳಿದ.
ತುದಿಗಳೆಲ್ಲಾ ಜೀರ್ಣವಾಗಿದ್ದ ಚಾಪೆಯ ಮೇಲೆ ಕೂತು ಕೈಯಲ್ಲಿ ಪಾಲಿಶ್ ಮಾಡಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದ ತಲೆಬುರುಡೆಯ ಅಸಂಖ್ಯಾತ ತೂತುಗಳ ಅಧ್ಯಯನದಲ್ಲಿ ಮುಳುಗಿಹೋಗಿದ್ದ ಅಭಯ ರಾಘವನ ಪ್ರಶ್ನೆಯಿಂದ ವಿಚಲಿತಗೊಂಡ. ತಲೆಬುರುಡೆಯನ್ನು ಪಕ್ಕಕ್ಕಿಟ್ಟು ಅಂಗಿಯ ಜೇಬಿನಿಂದ ಸಿಗರೇಟು ಹೊರತೆಗೆದು ಫಿಲ್ಟರನ್ನು ಬಲಗೈಯ ಬೆರಳುಗಳಲ್ಲಿಟ್ಟುಕೊಂಡು ಎಡ ಹೆಬ್ಬರಳಿನ ಉಗುರ ಮೇಲೆ ನಾಲ್ಕು ಬಾರಿ ಕುಟ್ಟಿದ. ಇನ್ನೊಂದು ತುದಿಯಲ್ಲಿನ ತಂಬಾಕು ಒಂದಷ್ಟು ಒಳಹೋಯ್ತು. ಪಕ್ಕದ ಮೇಜಿನ ಮೇಲೆ ವಿವೇಕಾನಂದರ ಫೋಟೋದ ಮುಂದಿದ್ದ ಕಡ್ಡಿಪೆಟ್ಟಿಗೆಯನ್ನು ತೆಗೆದುಕೊಂಡು ಸಿಗರೇಟತ್ತಿಸಿ ಮೇಜಿನ ಅಂಡಿನಲ್ಲಿದ್ದ ಲೋಟ ಕಮ್ ಆ್ಯಶ್ ಟ್ರೇಯನ್ನು ಬಗುಲಲ್ಲಿಟ್ಟುಕೊಂಡ.
“ಕರೆಕ್ಟು ಗುರು ನೀನ್ಕೇಳಿದ್ದು. ಏನು ಜೀವ್ನ ಅಂದ್ರೆ?” ಧೂಮವನ್ನು ಗಾಳಿಯಲ್ಲಿ ಲೀನವಾಗಿಸುತ್ತಾ ಕೇಳಿದ.
“ಪ್ರಶ್ನೆ ಕೇಳಿದ್ದು ನಾನು. ಉತ್ತರ ಹೇಳು”
“ಪ್ರಶ್ನೆಗೆ ಪ್ರಶ್ನೆಯೇ ನನ್ನ ಉತ್ತರ”
Also read

ಅಕ್ಟೋ 15, 2014

ಡಿ.ಎಸ್.ಎಲ್.ಆರ್ ಕ್ಯಾಮೆರಾ ಖರೀದಿಸುವ ಮುನ್ನ

fast vs slow shutter speed
Understanding shutter speed
Dr Ashok K R
ಸುಳ್ಯದ ಪರಿಸರದಿಂದ ಉತ್ತೇಜಿತನಾಗಿ ‘ದೊಡ್ಡ’ ಕ್ಯಾಮೆರಾ ಖರೀದಿಸಬೇಕೆಂದು ನಿರ್ಧರಿಸಿದೆ. ಒಂದಷ್ಟು ಪರಿಚಯದ ಫೋಟೋಗ್ರಾಫರುಗಳನ್ನು ಕೇಳಿದಾಗ ಬಹುತೇಕರು ‘ನಿಕಾನ್’ ಎಂದರು. ಇಂಟರ್ನೆಟ್ ಯುಗದಲ್ಲಿ ಜನರನ್ನು ಕೇಳಿ ತಿಳಿದು ಸುಮ್ಮನಿರಲಾದೀತೇ! ಸರಿ ಗೂಗಲ್ಲಿನಲ್ಲಿ ‘Best DSLR for beginners’ ಎಂದು ಟೈಪಿಸಿ ಗೂಗಲ್ ಹರವಿದ ಲಕ್ಷಾಂತರ ಪುಟಗಳಲ್ಲಿ ಒಂದಷ್ಟನ್ನು ತೆರೆತೆರೆದು ಓದುವುದಾರಂಭವಾಯಿತು. ನಿಕಾನ್ ಮತ್ತು ಕೆನಾನ್ ಮಧ್ಯೆ ಜೋರು ಯುದ್ಧವೇ ನಡೆದಿತ್ತು. ಹದಿನೈದು ದಿನದ ಓದಿನ ನಂತರವೂ ಯಾವ ಕ್ಯಾಮೆರಾ ಖರೀದಿಸಬೇಕೆಂದು ತೀರ್ಮಾನಿಸಲಾಗಲಿಲ್ಲ. ಹದಿನೈದು ದಿನದ ಓದಿನಿಂದ ಕ್ಯಾಮೆರಾಗಳ ಬಗೆಗಿನ ತಾಂತ್ರಿಕ ವಿವರಗಳ ಬಗ್ಗೆ ಸ್ವಲ್ಪ ತಿಳಿದಂತಾಗಿ ನನಗೆ ಗೊತ್ತಿಲ್ಲದ ಫೋಟೋಗ್ರಫಿಯ ಮೂಲಭೂತ ಅಂಶಗಳೇ ಅಧಿಕವಾಗಿದೆ ಎಂಬುದರಿವಾಯಿತು! ಸದ್ಯಕ್ಕೆ ನಿಕಾನೂ ಬೇಡ, ಕೆನಾನೂ ಬೇಡ ಎಂದು ನಿರ್ಧರಿಸಿ ಅಷ್ಟರವರೆಗೆ ಜೊತೆಗಿದ್ದ ಸೋನಿ DSC S930 ‘ಪಾಯಿಂಟ್ ಅಂಡ್ ಶೂಟ್’ ಕ್ಯಾಮೆರಾ ಕೈಗೆತ್ತಿಕೊಂಡೆ.
Also Read
Flash "ಬ್ಯಾಕ್"

ಅಕ್ಟೋ 14, 2014

ಟಿ.ಕೆ.ತ್ಯಾಗರಾಜ: ಭಾವಭಿತ್ತಿಯ ಚಿತ್ರಗಳು ಕಥಾ ಸಂಕಲನ

hingyake
ಮುಖಪುಟ
ಟಿ.ಕೆ.ತ್ಯಾಗರಾಜರ ಹತ್ತು ಕಥೆಗಳ ಸಂಕಲನ "ಭಾವಭಿತ್ತಿಯ ಚಿತ್ರಗಳು" ಇದೇ ಶುಕ್ರವಾರ (17/10/2014) ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನಲ್ಲಿ ಸಂಜೆ ಐದೂ ಮೂವತ್ತಕ್ಕೆ ಬಿಡುಗಡೆಯಾಗಲಿದೆ.
ಕರಿಯಪ್ಪನ ಆರ್ತಧ್ಯಾನದ ಪರಿಣಾಮವು ಎಂಬ ಕಥೆಯ ಒಂದು ಪುಟ್ಟ ಭಾಗ ಹಿಂಗ್ಯಾಕೆ ಓದುಗರಿಗಾಗಿ
hingyake
ಪುಸ್ತಕ ಬಿಡುಗಡೆಯ ವಿವರ
ಹೀಗೆ ಒಂದು ಹುಣ್ಣಿಮೆಯ ಸಂಜೆ ಇಡೀ ಗ್ರಾಮವೇ ಕಲ್ಲುಬೆಟ್ಟದ ಬಳಿ ಜಮಾಯಿಸಿದ್ದಾಗ ಅಲ್ಲಿಗೆ ಹೋದ ಪೆಮಾಗೆ ಅಚ್ಚರಿ ಕಾದಿತ್ತು. ತನಗೆ ಒಂದು ದಿನ ಕೊಯ್ಲೆ ಮೀನಿನ ಸಾರು ಮತ್ತು ರೊಟ್ಟಿ ತಂದು ಕೊಟ್ಟಿದ್ದ ಕರಿಯಪ್ಪ ಕರಟವಾದನದಲ್ಲಿ ತನ್ಮಯನಾಗಿದ್ದ. ಮಾಸೂರು ಕಲ್ಲಣ್ಣ ಮೈಮರೆತು ಹಾಡುತ್ತಿದ್ದರು. ಅದು ಪೆಮಾ ಪಾಲಿಗೆ ಮರೆಯಲಾಗದ ಸಂಜೆ. ಯಾವುದೇ ಪ್ರಶಸ್ತಿಯ ಭಾರವಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ, ಯಾವುದೇ ಮಹತ್ವಾಕಾಂಕ್ಷೆಯೂ ಇಲ್ಲದೆ ತಮ್ಮ ಪಾಡಿಗೆ ತಾವು ತಮ್ಮದೇ ಖುಷಿಗೆ ಜಾನಪದ ಸಿರಿಯನ್ನು ಮೈತುಂಬಿಕೊಳ್ಳುತ್ತಿದ್ದ ಪರಿಯನ್ನು ಕಂಡು ಪೆಮಾ ನಿಬ್ಬೆರಗಾದಳು. ಅಪ್ಪಟ ಪ್ರತಿಭೆಯ ಕರಿಯಪ್ಪ ಕೇವಲ ರುಚಿರುಚಿಯಾದ ಅಡುಗೆಯನ್ನಷ್ಟೇ ಮಾಡುತ್ತಿರಲಿಲ್ಲ, ಆ ಗ್ರಾಮದಲ್ಲಿ ಆತನೊಬ್ಬ ಫೇಮಸ್ ಕ್ಷೌರಿಕನಷ್ಟೇ ಅಲ್ಲ, ಆತನ ಪುಟ್ಟ ಗುಡಿಸಲಲ್ಲೂ ಎಂಥ ಅಪೂರ್ವ ಕಲೆಯ ಸಂಪತ್ತಿದೆ ಎಂಬುದನ್ನು ಪೆಮಾ ಮನಗಂಡಳು. ದೈಹಿಕ ಮತ್ತು ಮಾನಸಿಕ ಆರೋಗ್ಯ ಇರುವವರಲ್ಲಿ ಮಾತ್ರವಲ್ಲದೇ ಪ್ರತಿಭೆ ಇರುವ ವ್ಯಕ್ತಿಗಳಲ್ಲೂ ಸೌಂದರ್ಯ ಇದೆ ಎಂಬ ಸತ್ಯ ಅವಳ ಅರಿವಿಗೆ ಬಂತು. ಹಾಗೆ ನೋಡಿದರೆ ಕರಿಯಪ್ಪನ ನಿಜವಾದ ಹೆಸರು ಕದಿರಪ್ಪ. ಕಪ್ಪಗಿದ್ದುದರಿಂದ ಎಲ್ಲರೂ ಕರಿಯಪ್ಪ, ಕರಿಯಪ್ಪ ಎಂದು ಕರೆಯುತ್ತಾ ಅದೇ ಅಧಿಕೃತ ಹೆಸರಾಗಿಬಿಟ್ಟಿತ್ತು.
Also Read
ಓದಿನರಮನೆ

 

ಅಕ್ಟೋ 13, 2014

ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ - ವೀರಣ್ಣ ಮಡಿವಾಳರ ಖಂಡಕಾವ್ಯ ಬಿಡುಗಡೆ ಸಮಾರಂಭ

veeranna madiwala
ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ
ವೀರಣ್ಣ ಮಡಿವಾಳರು ಬರೆದಿರುವ ಖಂಡಕಾವ್ಯ "ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ" ಚಾನೂ ಪ್ರಕಾಶನ, ಗಾವಡ್ಯಾನವಾಡಿಯ ವತಿಯಿಂದ ಪ್ರಕಟವಾಗಿದೆ. ಇದೇ ಭಾನುವಾರ ದಿನಾಂಕ 19/10/2014ರಂದು ಬೆಂಗಳೂರಿನ ಕರ್ನಾಟಕ ಅಕಾಡೆಮಿಯ ಚಾವಡಿಯಲ್ಲಿ ಬೆಳಿಗ್ಗೆ ಹತ್ತಕ್ಕೆ ಲೋಕಾರ್ಪಣೆಯಾಗಲಿದೆ. ಖಂಡಕಾವ್ಯದ ಪುಟ್ಟ ಭಾಗ "ಹಿಂಗ್ಯಾಕೆ" ಓದುಗರಿಗೆ.
                                           
ಸಮಯಾಸಮಯಗಳ ಸಂಗಮದಲ್ಲಿ ಋತುಬಳಗ ದಿಕ್ಕಾಪಾಲು
ಚೈತ್ರ ವಸಂತ ಹಾಡಿದ್ದೆಲ್ಲ ಚರಮಗೀತೆ
ನೋವ ಅಳೆಯುವ ಮಾಪು ಇನ್ನೂ ಬಂದಿಲ್ಲ
ಕಳಂಕ ಮಮತೆ ಗಳೆಲ್ಲ ಅದಲು ಬದಲು
ಎಲ್ಲದಕ್ಕೂ ಇಲ್ಲಿ ಪ್ರತ್ಯಕ್ಷದರ್ಶಿಗಳಿಲ್ಲ
ಮೋಡ ನುಡಿದ ಮೌನ ಸದ್ದಿದು
ಬರೆದವನ ಬಡಬಡಿಕೆಯಲ್ಲ
ಕೋಗಿಲೆಯ ಒಡಲೊಳಗೆ ಉಳಿದ ಪದವಿದು
ನಂಬಿಕೆಯ ರಿಯಾಯಿತಿ ಬೇಡುವುದಿಲ್ಲ
ಸಕಲ ಜೀವದ ಕಣ್ಣಹನಿಯ ಸ್ವಗತ
ತೋರಿ ತಾಕುವ ತಾಕತ್ತು ಯಾವುದರಲ್ಲೂ ಇಲ್ಲ

ಅಕ್ಟೋ 12, 2014

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ ಪುಸ್ತಕ ಬಿಡುಗಡೆ ಸಮಾರಂಭ

jim corbet kannada book
ದೀಪ ಬೆಳಗಿದ ನಾರಾಯಣಗೌಡರು
Dr Ashok K R


ಡಾ ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪಲ್ಲವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಡಾ.ಎನ್ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ” ಪುಸ್ತಕ ಶನಿವಾರ (10/10/2014) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪಲ್ಲವ ಪ್ರಕಾಶನದ ಡಾ ವೆಂಕಟೇಶ್, ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಡಾ. ನಲ್ಲೂರು ಪ್ರಸಾದ್, ಪ್ರೊ. ಹಂಪನಾ, ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ವಿಷುಕುಮಾರ್, ಡಾ. ಎನ್. ಜಗದೀಶ್ ಕೊಪ್ಪ, ವಿಜಯ ಕರ್ನಾಟಕದ ಪತ್ರಕರ್ತ ಮತ್ತು ಕವಿ ಎಸ್. ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
Also Read

ಅಕ್ಟೋ 10, 2014

ವಾಡಿ ಜಂಕ್ಷನ್ .... ಭಾಗ 2

hingyake
Dr Ashok K R
ಪ್ಲಾಟ್‍ಫಾರಂ ನಂ 1
ನಿಲ್ದಾಣ 1
“ನನ್ನ ತಾತ ತಲೆಯಲ್ಲಿ ಯಾವ ಭಾವನೆ ಇಟ್ಟುಕೊಂಡು ನನಗೀ ಹೆಸರು ಇಟ್ಟರೋ? ತೀರ ಮೊನ್ನೆ ಮೊನ್ನೆ ಎನ್‍ಡಿಟಿವಿ ಇಂಡಿಯಾದಲ್ಲಿ ಕಾರು ಮತ್ತು ಬೈಕುಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಡುವವನ ಹೆಸರೂ ಕ್ರಾಂತಿ ಸಂಭವ್ ಎಂದು ನೋಡಿದಾಗ ಮನ ನಿರಾಳವಾಯಿತು. ನನ್ನಿಂದ ಯಾವುದಾದರೂ ಕ್ರಾಂತಿ ಸಂಭವಿಸುತ್ತದೆ ಎಂದು ಭಾವಿಸಿದರೋ ಅಥವಾ ನನ್ನ ಕಾಲಘಟ್ಟದಲ್ಲಿ ದೇಶದಲ್ಲೊಂದು ಮಹತ್ತರ ಬದಲಾವಣೆಯಾಗುತ್ತೆ ಎಂದು ಕನಸಿದ್ದರೋ ಗೊತ್ತಿಲ್ಲ. ಮದ್ದೂರಿನ ಬೆಸಗರಹಳ್ಳಿಯಲ್ಲಿ ಹುಟ್ಟಿದ ಹೈದನಿಗೆ ಕ್ರಾಂತಿ ಸಂಭವ್ ಎಂದು ಹೆಸರಿಟ್ಟುಬಿಟ್ಟರು. ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ನನ್ನ ತಪ್ಪಿಗೆ ದಂಡಿಸುವುದನ್ನು ಬಿಟ್ಟು ನನ್ನ ಹೆಸರಿಡಿದುಕೊಂಡು ವ್ಯಂಗ್ಯವಾಡುತ್ತಿದ್ದರು. ‘ಏನಪ್ಪಾ ಕ್ರಾಂತಿ ಮಾಡೋನು ಈ ರೀತಿ ಮಾಡ್ತೀಯಲ್ಲ’ ಎನ್ನುವವರ ಮಾತಲ್ಲಿ ಲೇವಡಿ ಎದ್ದು ಕಾಣುತ್ತಿತ್ತು. ಅವತ್ತು ಮನೆಗೆ ಹಿಂದಿರುಗಿದ ತಕ್ಷಣ ತಾತನ – ಅಜ್ಜ ಅಷ್ಟೊತ್ತಿಗಾಗಲೇ ತೀರಿಕೊಂಡಿದ್ದರು – ಫೋಟೋ ತೆಗೆದುಕೊಂಡು ಅಟ್ಟ ಸೇರಿ ಮನಸಾರೆ ಮನಸ್ಸಿನಲ್ಲೇ ಬಯ್ಯುತ್ತಿದ್ದೆ. ನೀತಿ ಕಥೆಗಳನ್ನು ಹೇಳಿ ಹೇಳಿ ನನ್ನಲ್ಲೊಂದು ಸ್ಥೈರ್ಯ ಉತ್ಸಾಹ ಮೂಡಿಸಿದ್ದ ಅದೇ ತಾತ ಕ್ರಾಂತಿ ಸಂಭವ್ ಎಂದು ಹೆಸರಿಟ್ಟು ಜನ್ಮ ಜನ್ಮಕ್ಕೂ ಸಾಕಾಗುವಷ್ಟು ಕೀಳರಿಮೆ ಮೂಡಲು ಕಾರಣವಾಗಿಬಿಟ್ಟ”
Also Readವಾಡಿ ಜಂಕ್ಷನ್ .... ಭಾಗ 1

ಅಕ್ಟೋ 9, 2014

ಬೆಂಕಿ ಹಚ್ಚಲು ಪೊಟ್ಣ ಬರ್ತಿದೆ!


hingyake
ಬೆಂಕಿಪಟ್ಣ

Dr Ashok K R
ದಯಾನಂದ ಟಿ.ಕೆ ನಿರ್ದೇಶನದ ಸ್ಟೀವ್ ಕೌಶಿಕ್ ಸಂಗೀತ ನೀಡಿರುವ ‘ಬೆಂಕಿಪಟ್ಣ’ ಚಿತ್ರದ ಹಾಡುಗಳು ಬಿಡುಗಡೆಗೊಂಡಿವೆ. ದಯಾನಂದರನ್ನು ಮೊದಲು ಕಂಡಿದ್ದು ಕುಪ್ಪಳ್ಳಿಯ ‘ನಾವು ನಮ್ಮಲ್ಲಿ’ ಕಾರ್ಯಕ್ರಮದಲ್ಲಿ. ಅವರ ಪುಸ್ತಕ ‘ರಸ್ತೆ ನಕ್ಷತ್ರ’ ಬಿಡುಗಡೆಯಾಗಿತ್ತು. ನಿಜವೆನ್ನಿಸದ ನೈಜ ಕಥಾನಕಗಳ ಗುಚ್ಛವದು. ಅದ್ಭುತ ಶೈಲಿಯ ನಿರೂಪಣೆಯಿಂದ ಗಮನ ಸೆಳೆದಿತ್ತು. ಅದೇ ಶೈಲಿಯ ಕಂಡರೂ ಕಾಣದೇ ಹೋಗುವ ಜನರ ಕಥಾನಕಗಳು ಈಗ ವಿವಿಧ ದಿನಪತ್ರಿಕೆಗಳಲ್ಲೂ ನಿಯಮಿತವಾಗಿ ಬರುತ್ತಿವೆಯೆನ್ನುವುದು ದಯಾನಂದರ ಶೈಲಿಯ ಪ್ರಭಾವವನ್ನು ತಿಳಿಸುತ್ತದೆ. ಇಂಥ ಅದ್ಭುತ ಕಥೆಗಾರರೊಬ್ಬರು ಇದ್ದಕ್ಕಿದ್ದಂತೆ ಸಿನಿಮಾ ತೆಗೆಯುತ್ತೇನೆಂದು ಘೋಷಿಸಿದಾಗ ಅರೆರೇ! ಎಂದು ಅಚ್ಚರಿಯಾದರೂ ಅವರಲ್ಲಿರುವ ಕಥೆಗಾರನ ಮೇಲಿರುವ ನಂಬುಗೆಯಿಂದ ಚಿತ್ರದ ಬಗೆಗಿನ ನಿರೀಕ್ಷೆಯೂ ಹೆಚ್ಚಿದೆ.
Also read

ಅಕ್ಟೋ 7, 2014

ಮಾತಿನ ಮೋಡಿಯಲ್ಲಿ ಚರ್ಚೆಗೊಳಪಡದ ಸಂಗತಿಗಳು

drug mafia hingyake
ಲಾಬಿಗೆ ಮಣಿದ ಸರ್ಕಾರ?
Dr Ashok K R


ಮಾತು ಬೆಳ್ಳಿ ಮೌನ ಬಂಗಾರ”ವೆಂಬ ಗಾದೆಮಾತಿನ ಮೊದಲರ್ಧದ ಅರ್ಥ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಅನುಭವಕ್ಕೆ ಬಂದರೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಗಾದೆಮಾತಿನ ಉಳಿದರ್ಧವನ್ನು ಅರ್ಥ ಮಾಡಿಸುವ ಪಣ ತೊಟ್ಟಂತಿದೆ! ಅನಿವಾರ್ಯವಿದ್ದಾಗಲೂ ಮಾತನಾಡದ ಪ್ರಧಾನಿಯನ್ನು ನೋಡಿದ ನಂತರ ಅವಶ್ಯಕತೆಗಿಂತ ಹೆಚ್ಚಾಗಿ ಅದದೇ ಮಾತುಗಳನ್ನು ನೋಡುವ ಸೌಭಾಗ್ಯ ನಮ್ಮದು! ನರೇಂದ್ರ ಮೋದಿ ತಮ್ಮ ಮಾತಿನ ಮೋಡಿಯಿಂದ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಮತ್ತು ತಾವು ಮಾತನಾಡಿದ್ದೆಲ್ಲ ನಿಜವೆಂದು ಕೇಳುಗರು ನಂಬುವಂತೆ ಮಾಡುತ್ತಿರುವುದು ಸುಳ್ಳಲ್ಲ. ಉಳಿದದ್ದೇನೇ ಇರಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರಂತೆ ಚಾಣಾಕ್ಷತನದಿಂದ ಮಾಧ್ಯಮವನ್ನು ನಿರ್ವಹಿಸಿದವರನ್ನು ನಾನಂತೂ ನೋಡಿಲ್ಲ. ಪಿ.ಎಮ್.ಓದಿಂದ ಏನು ಸುದ್ದಿ ಬರುತ್ತದೋ ಅದಷ್ಟೇ ಸದ್ದು ಮಾಡುತ್ತಿದೆ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳಲ್ಲಿ. ರಾಜಕೀಯ ಪಕ್ಷದ – ರಾಜಕಾರಣಿಯ ದೃಷ್ಟಿಯಿಂದ ಅವರು ಮಾಡುತ್ತಿರುವುದು ನೂರು ಪ್ರತಿಶತಃ ಸರಿ. ಆದರೀ ಮಾಧ್ಯಮಗಳಿಗೆ ಏನಾಗಿದೆ? ಜನಸಮೂಹದ ಮೇಲೆ ಹೊರೆಯಾಗುವಂತಹ ನಿರ್ಧಾರಗಳನ್ನು ಎನ್.ಡಿ.ಎ ಸರಕಾರ ತೆಗೆದುಕೊಂಡಿರುವುದು ಕೇವಲ ಒಳಪುಟಗಳಲ್ಲಿ ಸಣ್ಣ ವರದಿಯಾಗಿ ಮರೆಯಾಗಿದೆ, ಕೆಲವದರಲ್ಲಿ ಆ ಪುಟ್ಟ ವರದಿಯೂ ಇಲ್ಲ, ಕೆಲವೇ ಕೆಲವು ವಿಶ್ಲೇಷಣಾತ್ಮಕ ವರದಿಗಳನ್ನು ನೀಡಿವೆ. ಇನ್ನು ಮುಂದೆ ಔಷಧಗಳ ಬೆಲೆಗಳ ಮೇಲೆ ನಿಯಂತ್ರಣ ಹೇರುವಂತಿಲ್ಲ ಎಂಬ ಎನ್.ಡಿ.ಎ ಸರಕಾರದ ನಿರ್ಣಯ ಭಾರತದ ಜನರಿಗಷ್ಟೇ ಅಲ್ಲದೆ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಿಗೆಲ್ಲವೂ ಆಘಾತ ಕೊಡುವಂತದ್ದು.

Also Read
ಜನಪ್ರಿಯವೂ ಅಲ್ಲ ಜನಪರವೂ ಅಲ್ಲ