ಮಾರನೆಯ ದಿನ
ಗೌತಮ್ ಕಾಲೇಜಿಗೆ ಬಂದರೂ ತರಗತಿಗಳಿಗೆ ಬರಲಿಲ್ಲ. ಮಧ್ಯಾಹ್ನ ಕ್ಯಾಂಟೀನಿನಲ್ಲಿ ಕುಳಿತಿದ್ದಾಗ ದೂರದಲ್ಲಿ
ಸಿಂಚನಾ ಪೂರ್ಣಿಮಾಳ ಜೊತೆ ಕ್ಯಾಂಟೀನಿನ ಕಡೆಯೇ ಬರುತ್ತಿದ್ದುದನ್ನು ನೋಡಿದ. ಎದೆ ಡವಗುಟ್ಟಲಾರಂಭಿಸಿತು.
‘ಆಕೆ ಏನು ಹೇಳಬಹುದು. ದೂರದಿಂದ ಅವಳ ಮುಖ ಬೇರೆ ಕಾಣುತ್ತಿಲ್ಲ. ಅವಳ ಮುಖದಲ್ಲಿ ಕೋಪ? ಊಹ್ಞೂ ಕಾಣ್ತಿಲ್ಲ.
ಜೊತೆಯಲ್ಲಿ ಪೂರ್ಣಿಮಾಳನ್ನು ಯಾಕೆ ಕರೆದುಕೊಂಡು ಬರ್ತಾ ಇದ್ದಾಳೆ. ನಾನು ಪತ್ರ ಕೊಟ್ಟಿರೋ ವಿಷಯ ಆಕೆಗೂ
ಹೇಳಿಬಿಟ್ಟಿದ್ದಾಳೆ ಅನ್ಸುತ್ತೆ. ಛೇ! ಏನು ಹುಡುಗೀನಪ್ಪ; ಪ್ರೀತಿ ಪ್ರೇಮದಂಥ ಖಾಸಗಿ ವಿಷಯಗಳನ್ನು
ಕೂಡ ಆಕೆಗೆ ಹೇಳಿಬಿಟ್ಟಿದ್ದಾಳಲ್ಲ. ಇವರಿಬ್ಬರ ಮಧ್ಯೆ ಗೌಪ್ಯತೆಯೇ ಇಲ್ಲವಾ?’ ಗೌತಮನಿಗೆ ಪೂರ್ಣಿಮಾಳನ್ನು
ಕಂಡು ಈರ್ಷ್ಯೆ ಉಂಟಾಯಿತು. ಸಿಂಚನಾ ನನಗಿಂತ ಇವಳಿಗೇ ಆಪ್ತಳಲ್ಲಾ ಅನ್ನೋ ಕಾರಣಕ್ಕೆ.
ಜನ 17, 2014
ಜನ 14, 2014
ಬೆನ್ನಿ ಹಿನ್ ಬಾಬಾನನ್ನು ವಿರೋಧಿಸೋಣ- ಬೆನ್ ಹಿಂದೆನೂ ಒಮ್ಮೆ ನೋಡಿಕೊಳ್ಳೋಣ
ಶಶೀಧರ್ ಹೆಮ್ಮಾಡಿ
ಕಡಲು ಕಂಗಳ ಹುಡುಗಿಯಿಂದ ತೆಗೆದುಕೊಂಡಿದ್ದು
ಕಡಲು ಕಂಗಳ ಹುಡುಗಿಯಿಂದ ತೆಗೆದುಕೊಂಡಿದ್ದು
ಬೇವಕೂಫೋಂ
ಕಿ ಕಮಿ ನಹಿ
ಏಕ್ ಢೂಂಡೊ ಹರಝಾರ್ ಮಿಲ್ತೆಂ
ಹೈಂ
(ಮೂರ್ಖರಿಗೇನೂ
ಕೊರತೆ ಇಲ್ಲ, ಒಬ್ಬರನ್ನು ಹುಡುಕಿದರೆ
ಸಾವಿರ ಮಂದಿ ಸಿಗುತ್ತಾರೆ)
ಜನ 9, 2014
ಮಂಗಳೂರಿನ ಬೀದಿಗಳಲ್ಲಿ ಮತ್ತೆ ಧರ್ಮ ಯುದ್ಧದ ರಣೋತ್ಸಾಹ
Muneer Katipalla
“ ಧರ್ಮ ರಕ್ಷಕರ ನಾಡು” ಮಂಗಳೂರಿನಲ್ಲಿ ಮತ್ತೆ ಧರ್ಮ ರಕ್ಷಣೆಯ ಅತ್ಯುತ್ಸಾಹ ಕಂಡುಬರುತ್ತಿದೆ. ಒಂದೆರಡು ತಿಂಗಳ ಹಿಂದೆ ಮುಸ್ಲಿಂ ಧರ್ಮ ರಕ್ಷಕರು ವಿಟ್ಲದ ಪತ್ರಕರ್ತ ವಿಟಿ ಪ್ರಸಾದ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಆರಂಭವಾದ ಈ ಸುತ್ತಿನ ಧರ್ಮದಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪುತಿದೆ. ವಿಟ್ಲ ಘಟನೆ, ಬಂಟ್ವಾಳದ ಜಯರಾಮ್ ಮೇಲಿನ ಹಲ್ಲೆ , ದೇರಳ ಕಟ್ಟೆಯಲ್ಲಿ ಮುಸ್ಲಿಂ ನಾಮಧಾರಿ ಹೀನ ಜಂತುಗಳು ನಡೆಸಿದ ಹೇಯ ಕೃತ್ಯ , ನಗರದ ಹೃದಯ ಭಾಗದಲ್ಲಿ ಮುಸ್ಲಿಂ ನೈತಿಕ ಪೊಲೀಸರು ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ( ಮಧ್ಯೆ ಮಧ್ಯೆ ಹಿಂದುತ್ವವಾದಿಗಳ ನೈತಿಕ ಪೊಲೀಸ್ ಗಿರಿ ಯಥಾಪ್ರಕಾರ ನಡೆಯುತಿತ್ತು ಬಿಡಿ) ಇವುಗಳನ್ನು ಬಳಸಿಕೊಂಡು ಹಿಂದೂಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಸಂಘಟನೆಗಳು ರಕ್ತಪಾತದ ಘೋಷಣೆಯೊಂದಿಗೆ ಬೀದಿಗಿಳಿದು ವಾರ ಕಳೆದಿದೆ.
“ ಧರ್ಮ ರಕ್ಷಕರ ನಾಡು” ಮಂಗಳೂರಿನಲ್ಲಿ ಮತ್ತೆ ಧರ್ಮ ರಕ್ಷಣೆಯ ಅತ್ಯುತ್ಸಾಹ ಕಂಡುಬರುತ್ತಿದೆ. ಒಂದೆರಡು ತಿಂಗಳ ಹಿಂದೆ ಮುಸ್ಲಿಂ ಧರ್ಮ ರಕ್ಷಕರು ವಿಟ್ಲದ ಪತ್ರಕರ್ತ ವಿಟಿ ಪ್ರಸಾದ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಆರಂಭವಾದ ಈ ಸುತ್ತಿನ ಧರ್ಮದಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪುತಿದೆ. ವಿಟ್ಲ ಘಟನೆ, ಬಂಟ್ವಾಳದ ಜಯರಾಮ್ ಮೇಲಿನ ಹಲ್ಲೆ , ದೇರಳ ಕಟ್ಟೆಯಲ್ಲಿ ಮುಸ್ಲಿಂ ನಾಮಧಾರಿ ಹೀನ ಜಂತುಗಳು ನಡೆಸಿದ ಹೇಯ ಕೃತ್ಯ , ನಗರದ ಹೃದಯ ಭಾಗದಲ್ಲಿ ಮುಸ್ಲಿಂ ನೈತಿಕ ಪೊಲೀಸರು ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ( ಮಧ್ಯೆ ಮಧ್ಯೆ ಹಿಂದುತ್ವವಾದಿಗಳ ನೈತಿಕ ಪೊಲೀಸ್ ಗಿರಿ ಯಥಾಪ್ರಕಾರ ನಡೆಯುತಿತ್ತು ಬಿಡಿ) ಇವುಗಳನ್ನು ಬಳಸಿಕೊಂಡು ಹಿಂದೂಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಸಂಘಟನೆಗಳು ರಕ್ತಪಾತದ ಘೋಷಣೆಯೊಂದಿಗೆ ಬೀದಿಗಿಳಿದು ವಾರ ಕಳೆದಿದೆ.
ಜನ 7, 2014
ಮೋಕ್ಷದ ಹುಡುಕಾಟದಲ್ಲಿ ಕಳೆದುಹೋದ ಸಿದ್ಧಾರ್ಥ...
ಡಾ. ಅಶೋಕ್. ಕೆ. ಆರ್
ಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.
ಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.
ವಿಚಾರಣೆ
ಕು ಸ ಮಧುಸೂದನ
ನನ್ನ ಮುಂದೆ ಮೂರು ಜನ ಕೂತಿದ್ದರು. ಮದ್ಯದವನು ಕೆಂಪಗೆ ಇದ್ದು,ಸುಮ್ಮನಿದ್ದರೂ ಮುಗುಳ್ನಗುವಂತೆ ಕಾಣುತ್ತಿದ್ದ. ಆತನ ಕಣ್ಣುಗಳಲ್ಲಿ ನನ್ನ ಬಗ್ಗೆ ಅನುಕಂಪ ತುಂಬಿರುವಂತೆ ಅನಿಸಿತ್ತು. ನನ್ನ ಮುವತ್ತಮೂರು ದಿವಸಗಳ ಜೈಲಿನ ವಾಸದಲ್ಲಿ ಹಿಂದೆಂದೂ ಆತನನ್ನು ನೋಡಿದ ನೆನಪಾಗಲಿಲ್ಲ.ಅವನನ ಎಡಗಡೆಗೆ ಬೊಕ್ಕತಲೆಯವನೊಬ್ಬ ಕುಳಿತಿದ್ದ. ಆತನನ್ನು ಈ ರೂಮಿನಲ್ಲೇ ನೋಡಿದ್ದೆ. ಅಲ್ಲಿದ್ದ ಮೂರನೆಯವನು ಮಾತ್ರ ಪೋಲಿಸರ ಉಡುಪಿನಲ್ಲಿರದೆ,ಇದೆಲ್ಲ ತನಗೆ ಸಂಬಂದಿಸಿಯೇ ಇಲ್ಲವೇನೊ ಎಂಬಂತೆ ಕುಳಿತಿದ್ದ. ಬಹುಶ: ಅವನು ಬೇರೆ ಇಲಾಖೆಯವನಿರಬೇಕು.
ನನ್ನ ಮುಂದೆ ಮೂರು ಜನ ಕೂತಿದ್ದರು. ಮದ್ಯದವನು ಕೆಂಪಗೆ ಇದ್ದು,ಸುಮ್ಮನಿದ್ದರೂ ಮುಗುಳ್ನಗುವಂತೆ ಕಾಣುತ್ತಿದ್ದ. ಆತನ ಕಣ್ಣುಗಳಲ್ಲಿ ನನ್ನ ಬಗ್ಗೆ ಅನುಕಂಪ ತುಂಬಿರುವಂತೆ ಅನಿಸಿತ್ತು. ನನ್ನ ಮುವತ್ತಮೂರು ದಿವಸಗಳ ಜೈಲಿನ ವಾಸದಲ್ಲಿ ಹಿಂದೆಂದೂ ಆತನನ್ನು ನೋಡಿದ ನೆನಪಾಗಲಿಲ್ಲ.ಅವನನ ಎಡಗಡೆಗೆ ಬೊಕ್ಕತಲೆಯವನೊಬ್ಬ ಕುಳಿತಿದ್ದ. ಆತನನ್ನು ಈ ರೂಮಿನಲ್ಲೇ ನೋಡಿದ್ದೆ. ಅಲ್ಲಿದ್ದ ಮೂರನೆಯವನು ಮಾತ್ರ ಪೋಲಿಸರ ಉಡುಪಿನಲ್ಲಿರದೆ,ಇದೆಲ್ಲ ತನಗೆ ಸಂಬಂದಿಸಿಯೇ ಇಲ್ಲವೇನೊ ಎಂಬಂತೆ ಕುಳಿತಿದ್ದ. ಬಹುಶ: ಅವನು ಬೇರೆ ಇಲಾಖೆಯವನಿರಬೇಕು.
ಜನ 6, 2014
ಜನ 5, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 14
ಗೌತಮ್ –
ತರಗತಿಯಲ್ಲಿದ್ದ ಎಲ್ಲಾ ಹುಡುಗರಲ್ಲೂ ಅಸೂಯೆ ಹುಟ್ಟಿಸುವಂಥ ವ್ಯಕ್ತಿತ್ವ. ನೋಡ್ಲಿಕ್ಕೆ ಚೆನ್ನಾಗಿದ್ದ
ಅನ್ನೋದಕ್ಕಿಂತ ಎಲ್ಲಾ ವಿಷಯಗಳಲ್ಲೂ ಮುಂದು. ಒಂದು ರೀತೀಲಿ ಸಕಲಕಲಾವಲ್ಲಭ. ಹುಡುಗೀರ ಜೊತೆ ಮಾತನಾಡೋದರಲ್ಲಿರಬಹುದು,
ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಲ್ಲಿರಬಹುದು ಎಲ್ಲಾದರಲ್ಲೂ ಮುಂದು. ಕಾಲೇಜಿನ ವಾರ್ಷಿಕೋತ್ಸವ
ಸಮಾರಂಭದ ಸಮಯದಲ್ಲಿ ನಡೆಸಿದ್ದ ಆಶುಭಾಷಣ ಸ್ಪರ್ಧೆ, ಪ್ರಬಂಧ ರಚನೆ, ಸಂಗೀತ, ಡಿಬೇಟ್, ನಾಟಕ ಎಲ್ಲದರಲ್ಲೂ
ಮೊದಲ ಸ್ಥಾನ ಗೌತಮನಿಗೆ. ಹುಡುಗಿಯರು ಪ್ರತೀ ವಿಷಯಕ್ಕೂ ‘ಗೌತಮ್ ಗೌತಮ್’ ಅಂತ ಕೂಗುತ್ತಿದ್ದರೆ ಹುಡುಗರೆಲ್ಲಾ
‘ನಮಗೇ ಅದೃಷ್ಟ ಇಲ್ವಲ್ಲಾ ಗುರೂ’ ಎಂದು ಪೇಚಾಡಿಕೊಳ್ಳುತ್ತಿದ್ದರು. ಲೋಕಿಗೂ ಮೊದಮೊದಲು ‘ಛೇ ನಾನು
ಯಾವುದರಲ್ಲೂ ಭಾಗವಹಿಸುವುದಿಲ್ಲವಲ್ಲಾ. ನಿಜಕ್ಕೂ ನಾನೊಬ್ಬ ದಂಡಪಿಂಡ’ ಎನ್ನಿಸುತ್ತಿತ್ತು. ಆದರೆ
ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದಾಗಲೆಲ್ಲ ಈ ಕೀಳರಿಮೆ ಕಡಿಮೆಯಾಗುತ್ತಿತ್ತು.
ಜನ 3, 2014
ಡಿಸೆಂ 31, 2013
ಪುಟ ತಿರುವುವ ಮುನ್ನ
ಡಾ ಅಶೋಕ್ ಕೆ ಆರ್
ಮಾಧ್ಯಮ ಮತ್ತು ‘ಭವಿಷ್ಯಕರ್ತರು’ ಸೃಷ್ಟಿಸಿದ ಪ್ರಳಯದ ‘ಭೀತಿ’ ಅಸ್ತಂಗತವಾಗಿ
ಒಂದು ವರುಷ ಕಳೆದು ಹೋಗಿ ಶತಮಾನಗಳಿಂದ ಸಹಜವೆಂಬಂತೆ ಒಪ್ಪಿಕೊಂಡಿದ್ದ ಗುಲಾಮತ್ವದ ಮನಃಸ್ಥಿತಿಯ ಸಮಾಜವನ್ನು ಪ್ರಳಯರೂಪದಲ್ಲಿ ಬಂದು ಶುದ್ಧೀಕರಿಸಿದ ನೆಲ್ಸನ್ ಮಂಡೇಲಾರ
ಸಾವಿನೊಂದಿಗೆ ಮತ್ತೊಂದು ವರುಷ ಉರುಳಿ ಹೋಗಿದೆ. ಹಿಂದಿನ ವರುಷಗಳಿಗೂ ಹೊಸ ವರುಷದ ಬರುವಿಕೆಗಾಗಿ ಕಾಯ್ದಿರುವ
2013ಕ್ಕೂ ಹೆಚ್ಚಿನ ವ್ಯತ್ಯಾಸಗಳಿವೆಯೇ?