Muneer Katipalla
“ ಧರ್ಮ ರಕ್ಷಕರ ನಾಡು” ಮಂಗಳೂರಿನಲ್ಲಿ ಮತ್ತೆ ಧರ್ಮ ರಕ್ಷಣೆಯ ಅತ್ಯುತ್ಸಾಹ ಕಂಡುಬರುತ್ತಿದೆ. ಒಂದೆರಡು ತಿಂಗಳ ಹಿಂದೆ ಮುಸ್ಲಿಂ ಧರ್ಮ ರಕ್ಷಕರು ವಿಟ್ಲದ ಪತ್ರಕರ್ತ ವಿಟಿ ಪ್ರಸಾದ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಆರಂಭವಾದ ಈ ಸುತ್ತಿನ ಧರ್ಮದಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪುತಿದೆ. ವಿಟ್ಲ ಘಟನೆ, ಬಂಟ್ವಾಳದ ಜಯರಾಮ್ ಮೇಲಿನ ಹಲ್ಲೆ , ದೇರಳ ಕಟ್ಟೆಯಲ್ಲಿ ಮುಸ್ಲಿಂ ನಾಮಧಾರಿ ಹೀನ ಜಂತುಗಳು ನಡೆಸಿದ ಹೇಯ ಕೃತ್ಯ , ನಗರದ ಹೃದಯ ಭಾಗದಲ್ಲಿ ಮುಸ್ಲಿಂ ನೈತಿಕ ಪೊಲೀಸರು ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ( ಮಧ್ಯೆ ಮಧ್ಯೆ ಹಿಂದುತ್ವವಾದಿಗಳ ನೈತಿಕ ಪೊಲೀಸ್ ಗಿರಿ ಯಥಾಪ್ರಕಾರ ನಡೆಯುತಿತ್ತು ಬಿಡಿ) ಇವುಗಳನ್ನು ಬಳಸಿಕೊಂಡು ಹಿಂದೂಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಸಂಘಟನೆಗಳು ರಕ್ತಪಾತದ ಘೋಷಣೆಯೊಂದಿಗೆ ಬೀದಿಗಿಳಿದು ವಾರ ಕಳೆದಿದೆ.
“ ಧರ್ಮ ರಕ್ಷಕರ ನಾಡು” ಮಂಗಳೂರಿನಲ್ಲಿ ಮತ್ತೆ ಧರ್ಮ ರಕ್ಷಣೆಯ ಅತ್ಯುತ್ಸಾಹ ಕಂಡುಬರುತ್ತಿದೆ. ಒಂದೆರಡು ತಿಂಗಳ ಹಿಂದೆ ಮುಸ್ಲಿಂ ಧರ್ಮ ರಕ್ಷಕರು ವಿಟ್ಲದ ಪತ್ರಕರ್ತ ವಿಟಿ ಪ್ರಸಾದ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಆರಂಭವಾದ ಈ ಸುತ್ತಿನ ಧರ್ಮದಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪುತಿದೆ. ವಿಟ್ಲ ಘಟನೆ, ಬಂಟ್ವಾಳದ ಜಯರಾಮ್ ಮೇಲಿನ ಹಲ್ಲೆ , ದೇರಳ ಕಟ್ಟೆಯಲ್ಲಿ ಮುಸ್ಲಿಂ ನಾಮಧಾರಿ ಹೀನ ಜಂತುಗಳು ನಡೆಸಿದ ಹೇಯ ಕೃತ್ಯ , ನಗರದ ಹೃದಯ ಭಾಗದಲ್ಲಿ ಮುಸ್ಲಿಂ ನೈತಿಕ ಪೊಲೀಸರು ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ( ಮಧ್ಯೆ ಮಧ್ಯೆ ಹಿಂದುತ್ವವಾದಿಗಳ ನೈತಿಕ ಪೊಲೀಸ್ ಗಿರಿ ಯಥಾಪ್ರಕಾರ ನಡೆಯುತಿತ್ತು ಬಿಡಿ) ಇವುಗಳನ್ನು ಬಳಸಿಕೊಂಡು ಹಿಂದೂಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಸಂಘಟನೆಗಳು ರಕ್ತಪಾತದ ಘೋಷಣೆಯೊಂದಿಗೆ ಬೀದಿಗಿಳಿದು ವಾರ ಕಳೆದಿದೆ.