ನವೆಂ 9, 2013

ಗಾನ ಮುಗಿಸಿದ ಮನ್ನಾ ಡೇ



ಡಾ ಅಶೋಕ್ ಕೆ ಆರ್
ಭಾರತೀಯ ಚಲನಚಿತ್ರಗಳಿಗೂ ಸಂಗೀತ – ಹಾಡಿಗೂ ಬಿಡಿಸಲಾರದ ನಂಟು. ವಿಶ್ವದ ಇತರೆ ಚಿತ್ರೋದ್ಯಮಕ್ಕೂ ನಮ್ಮ ವಿವಿಧ ಚಿತ್ರೋದ್ಯಮಗಳಿಗೂ ಇರುವ ಬಹುಮುಖ್ಯ ವ್ಯತ್ಯಾಸವಿದು. ನಮ್ಮಲ್ಲೂ ಅಲ್ಲೊಂದು ಇಲ್ಲೊಂದು ಪ್ರಾಯೋಗಿಕವಾಗಿ ಹಾಡಿಲ್ಲದ ಚಿತ್ರಗಳು ಬರುತ್ತವಾದರೂ ಅವುಗಳ ಸಂಖೈ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅದು ಹಾಸ್ಯ ಚಿತ್ರವಿರಲಿ, ಸಾಹಸ ಪ್ರಧಾನವಿರಲಿ, ಒಂದು ಗಂಭೀರ ಕಥೆಯ ಚಿತ್ರವಾಗಲಿ ಹಾಡುಗಳಿಲ್ಲದೆ ಭಾರತೀಯ ಚಿತ್ರಗಳು ಅಷ್ಟಾಗಿ ರುಚಿಸುವುದಿಲ್ಲ. ಶಾಸ್ತ್ರೀಯ ಸಂಗೀತ, ರಾಕ್ ಪಾಪ್ ಸಂಗೀತಗಳು ಸೀಮಿತ ಆಸಕ್ತ ಜನರನ್ನು ಮಾತ್ರ ತಲುಪಿದರೆ ಎಲ್ಲ ರೀತಿಯ ಸಂಗೀತವನ್ನು ತನ್ನದೇ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಸಿನಿಮಾರಂಗದ್ದು. ಸಂಗೀತದೊಡನೆ ಬೆರೆತ ಸಾಹಿತ್ಯವನ್ನು ಜನರ ಮನ ಮುಟ್ಟಿಸಿದ್ದು ಅತ್ಯಮೋಘ ಗಾಯಕರು.

ನವೆಂ 8, 2013

ಅತ್ಯಾತುರದ ಬದುಕಿನಲ್ಲಿ ಚಿಂತನೆಗಳ ಅಬಾರ್ಷನ್!



ಡಾ ಅಶೋಕ್ ಕೆ ಆರ್.
‘ನಮ್ಮೂರ ತಿಂಡಿ’ ಎದುರಿಗಿನ ಅಂಡರ್ ಪಾಸ್. ಸಮಯ ರಾತ್ರಿ ಎಂಟು ಘಂಟೆ. ಗೆಳೆಯನೊಬ್ಬನನ್ನು ನೋಡಲು ಬೈಕಿನಲ್ಲಿ ಹೋಗುತ್ತಿದ್ದೆ. ಅಂಡರ್ ಪಾಸ್ ಕೆಳಗಿನ ಜಂಕ್ಷನ್ನಿನಲ್ಲಿ ಎಡಬದಿಯಿಂದೊಂದು ಆಟೋ ಬರುತ್ತಿತ್ತು. ಬೈಕ್ ನಿಧಾನಿಸಿದೆ. ಆಟೋ ರಸ್ತೆಯ ಮಧ್ಯೆ ಬಂದು ಮುಂದೆ ಹೋಗದೆ ನಿಂತುಬಿಟ್ಟಿತು. ‘ಥೂ ಈ ಆಟೋದವ್ರು...’ ಎಂದು ಮನದಲ್ಲೇ ಬಯ್ದುಕೊಂಡು ಹಾರ್ನ್ ಒತ್ತಿದೆ. ಪೀಕ್ ಅವರ್ರಿನ ಟ್ರಾಫಿಕ್ಕಿನಲ್ಲಿ ಮನೆಗೆ ಹೋಗಲವಣಿಸುತ್ತಿದ್ದ ನನ್ನ ಜೊತೆಯಿದ್ದ ಇತರೆ ವಾಹನದವರೂ ಹಾರ್ನ್ ಒತ್ತುವುದರಲ್ಲಿ ಹಿಂದೆ ಬೀಳಲಿಲ್ಲ. ಎರಡು ನಿಮಿಷದ ಸತತ ಹಾರ್ನ್ ಹಾವಳಿಯ ನಂತರ ಆಟೋ ನಿಧಾನಕ್ಕೆ ಮುಂದೆ ಸಾಗಿತು. ಆಟೋ ದಾಟಿ ಹೋಗುತ್ತಿದ್ದವನಿಗೆ ನಾಚಿಕೆಯಾಯಿತು.

ನವೆಂ 5, 2013

ಭಾಷೆಯೊಂದರ ಜನನ ಮರಣದ ಸುತ್ತ...


ಡಾ ಅಶೋಕ್ ಕೆ ಆರ್


ಭಾವನೆಗಳ ಅಭಿವ್ಯಕ್ತಿಗೆ, ಸಂವಹನದ ಸರಾಗತೆಗಾಗಿ ಹುಟ್ಟಿದ್ದು ಭಾಷೆ. ಶಬ್ದ, ಮುಖದ ಹಾವಭಾವಗಳ ಮುಖಾಂತರ ಭಾವನೆಗಳು ವ್ಯಕ್ತವಾಗುವುದಕ್ಕೂ ಮುಂಚಿತವಾಗಿ ಕೈಸನ್ನೆ ‘ಭಾಷೆ’ಯಾಗಿ ಬಳಕೆಯಾಗುತ್ತಿತ್ತು ಎಂದು ತಿಳಿಸುತ್ತದೆ ಮಾನವನ ನಿಕಟ ಸಂಬಂಧಿ ಚಿಂಪಾಂಜಿಯ ಮೇಲೆ ನಡೆದ ಕೆಲವು ವೈಜ್ಞಾನಿಕ ಅಧ್ಯಯನಗಳು. ಕೈಸನ್ನೆ, ಹಾವಭಾವಗಳೆಲ್ಲ ಸಮ್ಮಿಲನಗೊಂಡು ಶಬ್ದಕ್ಕೊಂದು ಮಾಧುರ್ಯ ದೊರೆತು ಹುಟ್ಟಿದ್ದು ಮನುಷ್ಯ ಭಾಷೆ. ಸಾವಿರಾರು ವರುಷಗಳ ಹಿಂದೆ ಪ್ರಪಂಚದ ನಾನಾ ಕಡೆಗಳಲ್ಲಿ ನಾನಾ ರೂಪದಲ್ಲಿ ಹುಟ್ಟಿದ ಭಾಷೆಗೂ ಒಂದು ಆಯಸ್ಸಿದೆ. ದಿನನಿತ್ಯದ ಸಂಗಾತಿಯಾಗಿ ತನ್ನನ್ನು ಬಳಸುವವರ ಸಂಖ್ಯೆ ಕಡಿಮೆಯಾಗಲು ಶುರುವಾದ ದಿನವೇ ಭಾಷೆಯ ಅವನತಿಯೂ ಪ್ರಾರಂಭವಾಗುತ್ತದೆ. ಸರಿಸುಮಾರು ಹತ್ತು ಸಾವಿರ ವರುಷಗಳ ಹಿಂದೆ ಅಂದಾಜು ಇಪ್ಪತ್ತು ಸಾವಿರ ಭಾಷೆಗಳಿದ್ದವು. ಸಂಪೂರ್ಣ ನಶಿಸುತ್ತ, ಮಗದೊಂದು ಭಾಷೆಯ ಜೊತೆಗೆ ಬೆರೆತು ಹೋಗಿ ಈಗ ಉಳಿದಿರುವ ಭಾಷೆಗಳ ಸಂಖೈ ಏಳು ಸಾವಿರ ಮಾತ್ರ. ಇನ್ನೂ ಆಘಾತದ ಅಂಶವೆಂದರೆ ಅಧ್ಯಯನವೊಂದರ ಪ್ರಕಾರ ಎರಡು ವಾರಕ್ಕೊಂದು ಭಾಷೆ ವಾರಸುದಾರರಿಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ! 2100ರ ವೇಳೆಗೆ ಇರುವ ಭಾಷೆಗಳಲ್ಲಿ ಅರ್ಧದಷ್ಟು ನಶಿಸುವ ಸಂಭವವಿದೆ!

ನವೆಂ 3, 2013

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕೋರ್ಟ್ ತೀರ್ಪಿನ ಸುತ್ತಮುತ್ತ

medical-malpractice
ಡಾ ಅಶೋಕ್ ಕೆ ಆರ್ 

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಅಬ್ಬಬ್ಬಾ ಎನ್ನಿಸುವ 6 ಕೋಟಿ ಪರಿಹಾರ ಘೋಷಿಸಿದೆ. ಪ್ರಕರಣ ದಾಖಲಾದ ದಿನದಿಂದ ಬಡ್ಡಿಯನ್ನೂ ಸೇರಿಸಿ ಕೊಡಬೇಕಿರುವುದರಿಂದ ಈ ಪರಿಹಾರದ ಮೊತ್ತ ಹನ್ನೊಂದು ಕೋಟಿಯನ್ನು ದಾಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೈದು ವರುಷಗಳ ಹಿಂದೆ ಮರಣಹೊಂದಿದ ಡಾ.ಅನುರಾಧಾ ಸಹಾರ ಪತಿ ಡಾ.ಕುನಾಲ್ ಸಹಾ ನಡೆಸಿದ ದೀರ್ಘ ಹೋರಾಟಕ್ಕೆ ಜಯ ಸಂದಿದೆ.

ಅಕ್ಟೋ 30, 2013

ಜೀವನ ಪ್ರೀತಿಯ ಪ್ರತಿಬಿಂಬ – ಗೋಲ್ಡ್ ಅಂಡ್ ಕಾಪರ್

ಡಾ ಅಶೋಕ್ ಕೆ ಆರ್.

ಸಿನಿಮಾ ಅಂದ್ರೆ ಹೀರೋ ಹೀರೋಯಿನ್ ವಿಲನ್ ಇರಲೇಬೇಕೆಂಬ ಮನೋಭಾವವೇ ಹೆಚ್ಚು. ವಿಲನ್ ಇದ್ದ ಮೇಲೆ ಫೈಟು, ಹೀರೋ ಹೀರೋಯಿನ್ ಇದ್ದ ಮೇಲೆ ಒಂದಷ್ಟು ಸಾಂಗ್ಸು ಕಂಪಲ್ಸರಿ! ಪರದೇಶದ ಚಿತ್ರಗಳನ್ನು ವೀಕ್ಷಿಸಿದಾಗ ಹಾಡುಗಳಿರದೇ ಇದ್ದರೂ ಉಳಿದ ಅಂಶಗಳು ಹೆಚ್ಚು ಕಡಿಮೆ ಇದ್ದೇ ಇರುತ್ತವೆ. ಇವೆಲ್ಲ ಸಿದ್ಧಸೂತ್ರಗಳನ್ನು ತಿರಸ್ಕರಿಸಿ ಹೊಸತೊಂದು ನಿರೂಪಣೆಯ ಚಿತ್ರಗಳು ಅವಾಗಿವಾಗ ನಿರ್ಮಾಣವಾಗುತ್ತವೆ. ಅಂಥದೊಂದು ಇರಾನಿ ಚಿತ್ರ “ಗೋಲ್ಡ್ ಅಂಡ್ ಕಾಪರ್”.

ಹಿಂದೂಗಳೆಲ್ಲ ಒಂದು! ಆದರೆ ಎಂದು??!

ಶಶಿಧರ್ ಹೆಮ್ಮಾಡಿ
ಹಿಂದೂಗಳೆಲ್ಲ ಒಂದು ಎಂಬ ಮಾತನ್ನು ಪದೇ ಪದೇ ಕೇಳುವ ಪ್ರಸಂಗಗಳು ಇತ್ತೀಚೆಗೆ ಹೆಚ್ಚುತ್ತಿದೆಯಾದರೂ ಈಗಲೂ ""   ವಿದ್ಯಾವಂತರೆಂಬ ಹೆಸರು ಗಳಿಸಿದ ಅನಕ್ಷರಸ್ಥರಿರುವ ಬಹುತೇಕ ಎಲ್ಲ ಊರುಗಳಲ್ಲಿ ದಲಿತರಿಗೆ ಮನೆ ಸಿಗುವುದು ಕಷ್ಟದ ಕೆಲಸ. ಗೆಳತಿಯೊಬ್ಬಳು ಹೇಳುತ್ತಿದ್ದಳು ಸ್ವಂತ ಮನೆಯಲ್ಲಿರುವ ಅವರಿಗೆ ಮನೆಗೆಲಸದವರು ಸಿಗುವುದೇ ಕಷ್ಟವಂತೆ, ಕಾರಣ ಅವರಿರುವ ಪ್ರದೇಶದಲ್ಲಿ ದಲಿತರ ಸಂಖೈ ಕಡಿಮೆ ಮತ್ತವರ ಮನೆಗೆ ಇತರೆ ಕೆಲಸದವರು ಬರಲಾಗದ್ದಕ್ಕೆ ಕಾರಣ ಗೆಳತಿ ದಲಿತ ಜಾತಿಗೆ ಸೇರಿದವಳು. ಫೇಸ್ ಬುಕ್ಕಿನಲ್ಲಿ ಶಶಿಧರ ಹೆಮ್ಮಾಡಿ ಬರೆದಿರುವ ಈ ಲೇಖನ ನೋಡಿದೆ. ಓದಿ ಪ್ರತಿಕ್ರಿಯಿಸಿ....

ಅಕ್ಟೋ 22, 2013

ನೂತನ ರಾಜ್ಯಕ್ಕೆ ನೂರಾರು ವಿಘ್ನಗಳು


         ಡಾ ಅಶೋಕ್ ಕೆ ಆರ್

ಚಿಕ್ಕ ರಾಜ್ಯಗಳು ಆಡಳಿತಕ್ಕೆ ಅಭಿವೃದ್ಧಿಗೆ ಅನುಕೂಲಕರವೆಂಬ ದೂರದೃಷ್ಟಿಯಿಂದ ಜಾರ್ಖಂಡ್, ಉತ್ತರಖಂಡ ಮತ್ತು ಚತ್ತೀಸಗಡ ರಾಜ್ಯಗಳನ್ನು 2000ದಲ್ಲಿ ರಚಿಸಲಾಯಿತು. ಕೆಲವೊಂದು ಸಂಗತಿಗಳಲ್ಲಿ ಈ ಚಿಕ್ಕ ರಾಜ್ಯಗಳು ತಮ್ಮ ಮಾತೃ ರಾಜ್ಯಗಳಿಗಿಂತ ಮುನ್ನಡೆದರೆ ಒಟ್ಟಾರೆಯಾಗಿ ದೊಡ್ಡ ರಾಜ್ಯಗಳನ್ನು ಒಡೆದು ಸಣ್ಣ ರಾಜ್ಯಗಳನ್ನು ರಚಿಸಿದ್ದು ರಾಜಕೀಯ ಪಕ್ಷಗಳಿಗೆ ಅಧಿಕಾರಕ್ಕೇರಲು ಅನುಕೂಲಕರವಾಗಿ ಮತ್ತಷ್ಟು ಅಧಿಕಾರಿ ವರ್ಗದವರಿಗೆ ಹೆಚ್ಚಿನ ಭ್ರಷ್ಟಾಚಾರ ಮಾಡಿಕೊಡಲು ಅನುವು ಮಾಡಿಕೊಟ್ಟಿತೇ ಹೊರತು ಚಿಕ್ಕ ರಾಜ್ಯದಿಂದ ಹೆಚ್ಚಿನ ಅಭಿವೃದ್ಧಿ ಎಂಬ ಭರವಸೆಗೆ ನಿರೀಕ್ಷಿತ ಮಟ್ಟದ ಯಶ ಸಿಕ್ಕಿಲ್ಲ. ಚಿಕ್ಕ ರಾಜ್ಯಗಳಿಂದ ಅಭಿವೃದ್ಧಿಯೆಂಬ ನೆಪವೊಡ್ಡಿ ಹೊಸ ರಾಜ್ಯಗಳ ಉದಯವಾಗಿದ್ದು ಒಂದು ಕಡೆಯಾದರೆ 1956ರಲ್ಲಿ ನಡೆದ ರಾಜ್ಯಗಳ ಪುನರ್ ವಿಂಗಡನೆ ಮತ್ತು ರಚನೆಯ ಸಮಯದಲ್ಲಿ ಬಲವಂತದ ವಿಲೀನಗಳು ನಡೆದುಹೋಗಿ ಪ್ರತ್ಯೇಕ ರಾಜ್ಯಕ್ಕೆ ಆ ಪ್ರಾಂತ್ಯದವರು ದಶಕಗಳಿಂದ ಹೋರಾಟಕ್ಕಿಳಿಯುವಂತೆ ಮಾಡಿದ್ದು ಮತ್ತೊಂದು ಕಡೆ. ಪ್ರತ್ಯೇಕ ರಾಜ್ಯಕ್ಕೆ ಹೋರಾಡಿದವರಿಗೆಲ್ಲ ಸ್ಪೂರ್ತಿಯಾದ ಹೋರಾಟ ತೆಲಂಗಾನ ರಾಜ್ಯಕ್ಕಾಗಿ ನಡೆದ ಹೋರಾಟ. ದಶಕಗಳ ರಕ್ತಸಿಕ್ತ ಹೋರಾಟಕ್ಕೆ ಜಯ ಸಿಕ್ಕಿದೆ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಜಾಮರ ಆಳ್ವಿಕೆಯಿಂದ ಹಿಡಿದು ತೆಲಂಗಾಣ ಉದಯಿಸುವವರೆಗೆ ಸಾವಿರಾರು ಜನರ ಬಲಿದಾನವಾಗಿದೆ.

ಅಕ್ಟೋ 11, 2013

ನೆರಳು



 ಡಾ ಅಶೋಕ್ ಕೆ ಆರ್

ಉಹ್ಞೂ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯಲ್ಲಿ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿತ್ತಷ್ಟೇ. ಕಾರು ಕೆಟ್ಟು ನಿಂತಿತು. ಈ ಸಲ ಹಿಂದೆಂದೂ ನೋಡದ ಪ್ರಚಂಡ ಬಿಸಿಲು. ಕಾರಿನ ಎಸಿಯೂ ಬಂದಾಗಿತ್ತು. ‘ಅಲ್ಲೇ ಮರದ ನೆರಳಿನಲ್ಲಿ ನಿಂತಿರಿ ಸರ್. ಏನಾಗಿದೆ ನೋಡ್ತೀನಿ’ ಎಂದ ಡ್ರೈವರ್. ಸರಿ ಎಂದುಕೊಂಡು ಮರದ ಬಳಿ ಬಂದ. ಘಂಟೆ ಮೂರಾಗಿತ್ತು. ಸೂರ್ಯ ಪ್ರಖರವಾಗಿದ್ದ. ಮರದ ನೆರಳು ಕಾಣಲಿಲ್ಲ! ತಲೆಯೆತ್ತಿ ನೋಡಿದ. ಸೂರ್ಯ ನಕ್ಕಂತಾಯಿತು. ರಾತ್ರಿ ಕುಡಿದಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ನಗು ಬಂತು. ರಾತ್ರಿ ಪಾರ್ಟಿಯಲ್ಲಿ ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಂಡು ಮತ್ತೊಂದಷ್ಟು ನಕ್ಕ. ಅಳಿಲಿನ ಕಿಚಪಚ ಸದ್ದು ಕೇಳಿ ಕತ್ತು ತಿರುಗಿಸಿ ಹಿಂದೆ ನೋಡಿದ. ಅಳಿಲು ಕಂಡಿತು, ಆದರೆ ತನ್ನ ನೆರಳೇ ಮಾಯವಾಗಿತ್ತು!

ಅಕ್ಟೋ 6, 2013

ಗಿಮಿಕ್ಕು ಮಾಡುವುದಾದರೆ ಹೀಗೆ ಮಾಡಿ...!!!

Akshatha Humchadakatte
ಜನಾರ್ಧನ ಪೂಜಾರಿಯವರೇ , ಧನ್ಯವಾದಗಳು .
ನೀವು ಮಾಡಿದ ಕೆಲಸ ಬಹಳ ದೊಡ್ಡದು . ಎಷ್ಟು ದೊಡ್ಡದೆಂದರೆ ಅದು ಹೆಣ್ಣು ಕುಲಕ್ಕೆ ಮಾತ್ರವೇ ಅರ್ಥವಾಗುವಂತದ್ದು . ಇದನ್ನು ಗಿಮಿಕ್, ಸ್ಟಂಟ್ , ಮತ್ತೆ ಹೆಣ್ಣು ಮಕ್ಕಳನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳುವ ಪುರುಷ ಪ್ರಧಾನ ಸಮಾಜದ ಒಂದು ಪ್ರಯತ್ನ ... ಹೀಗೆ ಏನೇ ಹೀಗೆಳೆಯಲಿ

ಅಕ್ಟೋ 4, 2013

ಅಕ್ರಮದ ಅದಿರಿನಲ್ಲಿ ಸರ್ವರದೂ ಸಮಪಾಲು



 ಡಾ ಅಶೋಕ್ ಕೆ ಆರ್
ಅತ್ತ ಕಡೆ ಚೀನಾ ಒಂದೊಂದೆ ಹೆಜ್ಜೆ ಭಾರತದೆಡೆಗೆ ಇಟ್ಟಾಗಲೂ ಅವರ ಮರಾಮೋಸದ ಬಗ್ಗೆ, ನಮ್ಮ ನೆಲವನ್ನು ಕಬಳಿಸಬಯಸುವ ಅವರ ಆಕ್ರಮಣಕಾರಿ ನಡಾವಳಿಯ ಬಗ್ಗೆ ನಮ್ಮಲ್ಲಿ ಹತ್ತಾರು ರೀತಿಯ ಚರ್ಚೆಗಳು ಪ್ರಾರಂಭವಾಗಿಬಿಡುತ್ತದೆ. ಅದೇ ಸಮಯದಲ್ಲಿ ಇತ್ತ ಕಡೆ ನಮ್ಮದೇ ದೇಶದ ಜನತೆ ನಮ್ಮದೇ ದೇಶದ ಭೂಮಿಯನ್ನು ಅಗೆದು ಬರಿದು ಮಾಡಿ ಚೀನಾದಂತಹ ದೇಶಗಳಿಗೇ ರಫ್ತು ಮಾಡಿಬಿಡುತ್ತಾರೆ! ಚೀನಾದವರಿಗಿಂದ ನಾವು ಈ ದೇಶಕ್ಕೆ ಹೆಚ್ಚು ಮೋಸ ಮಾಡಿದ್ದೇವೆ ಎಂದು ಮೆರೆಯುತ್ತಿದ್ದ ಜನರಲ್ಲಿ ಕೆಲವರು “ಜನಾನುರಾಗಿಯಾಗಿ”(?) ಮತ್ತೆ ಮತ್ತೆ ಶಾಸಕ ಸ್ಥಾನ ಅಲಂಕರಿಸಿದ್ದಾರೆ. ಸಚಿವರಾದವರೂ ಇದ್ದಾರೆ! 2008, 2011ರ ಜುಲೈನಲ್ಲಿ ವರದಿ ನೀಡಿದ ಕರ್ನಾಟಕ ಲೋಕಾಯುಕ್ತ, ಲೋಕಾಯುಕ್ತದ 2008ರ ವರದಿಯ ನಂತರ ಅಕ್ರಮ ಗಣಿಗಾರಿಕೆಯ ಕುರಿತು ಸುಪ್ರೀಂಕೋರ್ಟಿಗೆ ವರದಿ ನೀಡಿದ ಸಿಇಸಿ; ಇವೆಲ್ಲದರ ಸಹಾಯದಿಂದ ಮತ್ತಷ್ಟು ತನಿಖೆ ನಡೆಸಿದ ಸಿ.ಬಿ.ಐ ಗಣಿ ಹಗರಣದ ಪ್ರಮುಖ ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಿಸುತ್ತ, ವಿಚಾರಣೆಗೊಳಪಡಿಸುತ್ತ ಕೆಲವು ಆರೋಪಿಗಳನ್ನು ಜೈಲಿಗೂ ಅಟ್ಟುತ್ತಿದ್ದಾರೆ. ಮಣ್ಣು ಬಗೆದು ದೇಶಕ್ಕೇ ದ್ರೋಹ ಬಗೆದವರು ಜೈಲು ಸೇರುತ್ತಿರುವುದು ಸಂತಸದ ಸಂಗತಿ.