ಸೆಪ್ಟೆಂ 22, 2011
ಸೆಪ್ಟೆಂ 15, 2011
ಚಿಂತನೆಗೆ ತಡೆಯೊಡ್ಡುವ ಆಧುನಿಕತೆ?
ಡಾ ಅಶೋಕ್. ಕೆ. ಆರ್.
ಡಿಗ್ರಿ ಸರ್ಟಿಫಿಕೇಟ್ ಪಡೆದುಕೊಳ್ಳುವ ಸಲುವಾಗಿ ಗೆಳೆಯ ಮಂಜನ ಜೊತೆ ಯುನಿವರ್ಸಿಟಿಗೆ ಹೋಗಿ ಅರ್ಜಿ ಕೊಟ್ಟೆ. ಮಧ್ಯಾಹ್ನದ ನಂತರ ಬರಲು ತಿಳಿಸಿದರು. ಅಲ್ಲಿಯವರೆಗೆ ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಮಂಜು ‘ಫೋರಮ್’ ಮಾಲಿಗೆ ಹೋಗೋಣವಾ? ಎಂದ. ಬೆಂಗಳೂರಿಗರ ಬಾಯಲ್ಲಿ ಪದೇ ಪದೇ ಕೇಳಿಬರುತ್ತಿದ್ದ ಫೋರಮ್ ನಲ್ಲಿ ಏನಿದೆ ಎಂಬ ಕುತೂಹಲ ನನ್ನಲ್ಲೂ ಇತ್ತು. ನಡಿಯಪ್ಪ ಹೋಗೋಣ ಎಂದೆ. ‘ಓಹೋ! ಇದೇನಾ ನಮ್ಮ ದೇಶದ ಯುವಜನತೆ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿರುವ ಜಾಗ’ - ಫೋರಮ್ಮಿಗೆ ಕಾಲಿಡುತ್ತಿದ್ದಂತೆಯೇ ಬಂದ ಯೋಚನೆಯಿದು. ‘ಲೇ ಇಲ್ಲಿ ನಾವೇನು ಮಾಡೋದೋ ಮಾರಾಯಾ? ಏನನ್ನೂ ತೆಗೆದುಕೊಳ್ಳೋ ಅವಶ್ಯಕತೆಯೂ ಇಲ್ಲ; ಜೇಬಿನಲ್ಲಿ ಹೆಚ್ಚು ದುಡ್ಡೂ ಇಲ್ಲ. ನಡಿ ವಾಪಸ್ಸಾಗೋಣ’ ಎಂದೆ. ‘ಲ್ಯಾಂಡ್ ಸ್ಟೋನ್ ಪುಸ್ತಕದಂಗಡಿ ಇದೆ’ ಎಂದ. ‘ನಮಗೆ ಇಷ್ಟವಾಗೋ ಜಾಗ ಇದೊಂದೇ ಇರಬೇಕು ಇಲ್ಲಿ’ ಎಂದುಕೊಳ್ಳುತ್ತಾ ಆ ಅಂಗಡಿಗೆ ಹೊಕ್ಕು ಘಂಟೆಯ ಮೇಲೆ ಪುಸ್ತಕಗಳನ್ನು ಜಾಲಾಡಿದೆವು. ಹಣದ ಅಭಾವವಿದ್ದ ಕಾರಣ ಇಬ್ಬರಿಗೂ ಒಂದೊಂದು ಪುಸ್ತಕ ಖರೀದಿಸಲಷ್ಟೇ ಶಕ್ಯವಾಯಿತು. ನಂತರ ಏನನ್ನೋ ವಿಚಾರಿಸಲು ಮೊಬೈಲ್ ಅಂಗಡಿಗೆ ಹೋದೆವು. ಆ ಅಂಗಡಿಯಲ್ಲಿ ಹಿನ್ನೆಲೆಯಲ್ಲಿ ಸಂಗೀತವಿತ್ತು. ಅಂದು ಆರಂಭವಾದ ಈ ಕೆಳಗಿನ ಯೋಚನೆ ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ ಒಂದು ವರದಿಯಿಂದಾಗಿ ಮೂರ್ತ ರೂಪ ಪಡೆದುಕೊಳ್ಳಲಾರಂಭಿಸಿದೆ.
ಸೆಪ್ಟೆಂ 10, 2011
ಅಮ್ಮಂದಿರ ಮರೆತ ‘ರಾಮ’ಭಕ್ತರ ನಾಡಿನಲ್ಲಿ. . .
ಸೆಪ್ಟೆಂಬರ್ 3, 2006: - ಕರ್ನಾಟಕ – ಆಂಧ್ರಪ್ರದೇಶ ಗಡಿಯಲ್ಲಿನ ಬಳ್ಳಾರಿಯ ಹಳ್ಳಿಯೊಂದರಲ್ಲಿದ್ದ 200 ವರ್ಷಗಳಷ್ಟು ಹಳೆಯದಾದ ಸುಗ್ಗಾಲಮ್ಮ ದೇವಾಲಯವನ್ನು ರೆಡ್ಡಿ ಬೆಂಬಲಿತ ವ್ಯಕ್ತಿಗಳು ದ್ವಂಸ ಮಾಡಿದರು, ಹಳ್ಳಿಯವರ ವಿರೋಧದ ನಡುವೆ. ಕಾರಣ? ಅಮ್ಮನ ಪಾದದಡಿಯಲ್ಲಿ ಕಬ್ಬಿಣದ ಅದಿರಿತ್ತು! ಪೂಜಾರಿಗಳನ್ನು ಕರೆಯಿಸಿ ಹೋಮ – ಹವನ – ಶಾಂತಿ ವಗೈರೆ ವಗೈರೆ ಮಾಡಿಸಿ ದೇವಾಲಯವನ್ನು ಕೆಡವಿದ್ದರಾದರೂ ಊರ ಜನರ ಕೋಪ ಶಮನವಾಗಿರಲಿಲ್ಲ. ಪೋಲೀಸ್ ಕೇಸ್ ಮಾಡಿದರು. ಅದೂ ಕೂಡ ಈಗ ರೆಡ್ಡಿಯ ವಿರುದ್ಧವಿದೆ.
ಸೆಪ್ಟೆಂ 8, 2011
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಪ್ರಶ್ನಿಸುವರಾರು?
![]() |
ಪ್ರಜಾವಾಣಿ |
ಭ್ರಷ್ಟಾಚಾರ ಕೇವಲ ಸರಕಾರಿ ನೌಕರರ ಮತ್ತು ಸರಕಾರಕಷ್ಟೇ ಸೀಮಿತವಾಗಿಸಬಹುದಾದ ಸಂಗತಿಯಾ? ಅನಧಿಕೃತವಾಗಿ ಸಾವಿರ – ಲಕ್ಷ ರುಪಾಯಿಗಳನ್ನು ಪಡೆಯುವ ಶಾಲಾ ಕಾಲೇಜುಗಳು ಇದರ ವ್ಯಾಪ್ತಿಗೆ ಬರುವುದಿಲ್ಲವಾ? ಎಂ. ಆರ್. ಪಿ ದರಕ್ಕಿಂತ ಹೆಚ್ಚು ಹಣ ಪಡೆಯುವ ಅಂಗಡಿಗಳು? ನಾರ್ಮಾಲ್ಲಾಗೇ ಆಗುವ ನಾರ್ಮಲ್ ಡೆಲಿವರಿಗೆ 50,000 – ಒಂದು ಲಕ್ಷದವರೆಗೆ ಪಡೆಯುವ ಪಂಚತಾರಾ ಆಸ್ಪತ್ರೆಗಳು?
ಸೆಪ್ಟೆಂ 5, 2011
ಕಿಚ್ಚು ಹಚ್ಚಿದ ರಹಮತ್ ರಿಗೊಂದು ಥ್ಯಾಂಕ್ಸ್ ಹೇಳುತ್ತಾ. . .
ನಾನು ಅಧಿಕೃತವಾಗಿ ಸಾಹಿತ್ಯದ ವಿದ್ಯಾರ್ಥಿಯಲ್ಲ. ವೈದ್ಯಕೀಯ, ಇಂಜಿನಿಯರಿಂಗ್ ವಿಭಾಗಗಳಲ್ಲಿ ಓದಿ ಕೆಲಸಕ್ಕೆ ಸೇರಿರುವ ನನ್ನ ಬಹಳಷ್ಟು ಗೆಳೆಯರೂ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಮೊದಮೊದಲು ಸಮಯ ಕಳೆಯಲು, ನಂತರ ಸ್ವಲ್ಪ ಮನೋರಂಜನೆಗೆ ಸ್ವಲ್ಪ ಙ್ಞಾನಕ್ಕೆ ಪಠ್ಯೇತರ ಪುಸ್ತಕಗಳನ್ನು ಓದಲಾರಂಭಿಸಿದವರು ನಾವು. ಗೃಂಥಾಲಯಗಳಲ್ಲಿ ಸಿಕ್ಕುವ ಪುಸ್ತಕಗಳನ್ನೆಲ್ಲ ಓದುತ್ತಿದ್ದೆವು. ಹೆಚ್ಚು ಹಣವಿದ್ದರೆ ಒಂದಷ್ಟು ಖರೀದಿ ಮಾಡುತ್ತಿದ್ದೆವು. ನಮ್ಮ ಅರಿವಿಗೆ ಬಂದಷ್ಟನ್ನು ಹಂಚಿಕೊಳ್ಳುತ್ತಿದ್ದೆವು. ಕಥೆ ಕಾದಂಬರಿ ಪ್ರಕಾರಗಳಿಂದ ನಾಟಕ, ಆತ್ಮಕಥೆ, ರಾಜಕೀಯ, ಆರ್ಥಿಕ ವಿಷಯಗಳ ಕಡೆ ಹೊರಳಲಾರಂಭಿಸಿದೆವು.
ಆಗ 25, 2011
ಅಪೆಕ್ಸ್ ಕೋರ್ಟಿನ ಅಂಗಳದಲ್ಲಿ ದೆಹಲಿಯ ಬಡ ರೋಗಿ
ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಬಟ್ಟೆ, ಮನೆಗೆ ಹಣ ಹೊಂದಿಸಲೂ ಕಷ್ಟಪಡುವ ಜನರೇ ಹೆಚ್ಚಿರುವ ಭಾರತದಲ್ಲಿ ಆರೋಗ್ಯ ರಕ್ಷಣೆಯ ಸಂಪೂರ್ಣ ಹೊಣೆ ಸರಕಾರದ್ದೇ ಆಗಿರಬೇಕಾಗಿತ್ತು. ಜಾಗತೀಕರಣದ ಪ್ರಭಾವ, ಉದ್ಯಮವಾದ ಖಾಸಗಿ ಆಸ್ಪತ್ರೆಗಳು, ನಿರೀಕ್ಷೆಯ ಗುಣಮಟ್ಟ ಒದಗಿಸಲು ವಿಫಲವಾದ ಸರಕಾರಿ ಆಸ್ಪತ್ರೆ ಮತ್ತು ಉಳಿದೆಲ್ಲರಂತೆ ವೈದ್ಯರಿಗೂ ಹಣಗಳಿಕೆಯೇ ಪ್ರಮುಖ ಸಂಗತಿಯಾದ ಕಾರಣ ಸರ್ವರಿಗೂ ಉಚಿತ ಆರೋಗ್ಯವೆಂಬುದು ಕನಸಿನಲ್ಲೂ ಯೋಚಿಸಲಾಗದ ಸಂಗತಿಯಾಗಿದೆ. ಪಶ್ಚಿಮೀಕರಣದ ಫಲವಾಗಿ ಆರೋಗ್ಯಕ್ಕೂ ವಿಮೆ ಮಾಡಿಸಲೇಬೇಕಾದದ್ದು ಇಂದಿನ ಜರೂರತ್ತು. ಬಡವರ ಪಾಲಿಗೆ ವಿಮೆ ಮಾಡಿಸುವುದು ಅಸಾಧ್ಯ.
ಆಗ 23, 2011
The religion and its fanaticism
-->
Out of many meanings of the word religion, the one which should have been the most important for human nature is “the religion is to resolve to mend one’s errant ways”. But unfortunately the mankind except few exceptions has restricted its meaning to “belief in and worship of a god or other superhuman agency”. The foundation for all the man made problems that rose from the religion is because of the followers of respective religion who accept and believe in the latter meaning of religion and either they ignore the former meaning as it is difficult to follow in life or they just reject that view as it will not help in their false propaganda and expansion of false religion.
ಆಗ 22, 2011
ಪ್ರಭುತ್ವ ಮಣಿಸುವ ಅತ್ಯಾತುರದಲ್ಲಿ...
ಕಳೆದ ನಲವತ್ತೆರಡು ವರ್ಷಗಳಿಂದ ಭಾರತವನ್ನು ‘ಆಳಿದ’ ಯಾವೊಂದು ಪಕ್ಷವೂ ಒಂದು ಪ್ರಬಲ ಲೋಕಪಾಲ ಮಸೂದೆಯನ್ನು ಮಂಡಿಸಲು ಬೇಕಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿಲ್ಲ. ಬಹುಶಃ ಶಾಂತರಾಮ್ ಕಾದಂಬರಿಯಲ್ಲಿ ಬರುವ the problem with corruption is it works very fine! ಎಂಬ ವಾಕ್ಯದಂತೆ ನಾವೆಲ್ಲರೂ ಭೃಷ್ಟಾಚಾರಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮದು ಸಂಪ್ರದಾಯಬದ್ಧ ದೇಶ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವ ಪರಿಣಾಮ ನಮಗೆ ಆರಾಧಿಸಲು ಒಬ್ಬ ದೇವರು ಬೇಕು. ಸದ್ಯ ಅಣ್ಣಾ ಹಜಾರೆಗೆ ಆ ದೇವರ ಸ್ಥಾನ ಕೊಟ್ಟು ಬೀದಿಗಿಳಿದಿದ್ದೇವೆ. ಬೆಚ್ಚಗೆ ಮನೆಯಲ್ಲಿ ಕುಳಿತು ಯಾವೊಂದು ಚಳಿವಳಿಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸದೇ ಇದ್ದ ಜನರನ್ನು ಬೀದಿಗಿಳಿದು ದನಿತೆಗೆಯುವಂತೆ ಮಾಡಿದ್ದು ಅಣ್ಣಾರ ನಿಜವಾದ ಸಾಧನೆಯೇ ಹೊರತು ಅವರ ಹೋರಾಟದಿಂದ ಜಾರಿಯಾಗುವ ಅಥವಾ ಜಾರಿಯಾಗದೆ ಇರುವ ಜನಲೋಕಪಾಲ ಮಸೂದೆಯಲ್ಲ.
ಆಗ 21, 2011
ಮಣ್ಣಿನ ಸಿನಿಮಾ ಮತ್ತು ಕಂಪ್ಯೂಟರ್ ಪ್ರಿಂಟ್ ಔಟ್.
ಮಾನ್ಯ ಮುನಿರತ್ನರವರಿಗೆ,
ಶುಭಾಷಯಗಳು, karnataka film producers associationನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಕ್ಕೆ. ಅಧ್ಯಕ್ಷರಾದ ಸಂತಸದಲ್ಲಿ ನೀವು ಉದುರಿಸಿದ ಅಣಿಮುತ್ತುಗಳನ್ನು ಪ್ರಜಾವಾಣಿಯ ಸಿನಿಮಾ ಪುರವಣಿಯಲ್ಲಿ ಕಂಡು ಯಾವ ಭಾವನೆಯನ್ನು ವ್ಯಕ್ತಪಡಿಸಬೇಕೆಂಬುದು ತಿಳಿಯದೆ ಗೊಂದಲವೇರ್ಪಟ್ಟಿದೆ! ‘ಮೂರು ಕೋಟಿಯವರೆಗಷ್ಟೇ ಮಾರ್ಕೆಟ್ ಇರುವ ಗಣೇಶನಂತಹ ನಟ ಎರಡು ಕೋಟಿ ಸಂಭಾವನೆ ಕೇಳುತ್ತಾನೆ, ಅವನೆಗಿಂತ ಹೆಚ್ಚು ಮಾರ್ಕೆಟ್ ಇರುವ ಪುನೀತ್ ನಷ್ಟೇ ದುಡ್ಡು ಕೇಳುತ್ತಾನೆ, ಇದು ತಪ್ಪು. ಇಂಥದು ನಡೆಯಬಾರದು; ಮೊದಲಿವನ್ನು ಸರಿಪಡಿಸಬೇಕು’ ಎಂದು ಆದೇಶ ನೀಡಿದ್ದೀರಿ. ಯಾರು ಸರಿಪಡಿಸಬೇಕೆಂಬುದನ್ನೂ ತಿಳಿಸಿದ್ದರೆ ಅನುಕೂಲವಾಗುತ್ತಿತ್ತು, ಇರಲಿ.
ಆಗ 14, 2011
ಕಡ್ಡಿಗೀರಿ ......................ಹಚ್ಚಿದನು
ಹಳ್ಳಿಹೈದ. S. ಅBಹನಕೆರೆ
ಟೀ ಸ್ಟಾಲ್ ಬಳಿ ಕುಳಿತಿದ್ದವನ ಕೆಣಕಿದವನು ಮೋಗ್ಲಿಯೇ. ಅಲ್ಲಿಂದ ಉರ್ಕೊಂಡು ಹೋಗುವಂತೆ ಮಾಡಿದವನೂ ಮೋಗ್ಲಿಯೇ. ಬೈಕ್ ನಿಲ್ಲಿಸಿ ಒಳಬಂದವನೆ “ಅಣ್ಣಾ ಎರಡ್ ಕಿಂಗ್ ಎರಡ್ ಟೀ” ಅಂದ. ತಕ್ಷಣ ಸುತ್ತಮುತ್ತ ನೋಡಿದೆ, ಯಾರೂ ಇರಲಿಲ್ಲ, mostly ನನಗೇ ಆರ್ಡರ್ ಮಾಡಿರಬೇಕೆಂದುಕೊಂಡು “ನನಗೆ ಬೇಡ” ಅಂದೆ.