ಆಗ 27, 2017

ಕೃಷಿ-ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣಸಂಸ್ಥೆಗಳ ಪ್ರವೇಶ ಬೇಡ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೃಷಿಕ್ಷೇತ್ರ ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸದರಿ ಬಿಕ್ಕಟ್ಟುಗಳಿಗೆ ಕಾರಣವಾದ ಅಂಶಗಳನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾದ ಸರಕಾರಗಳು ತಮ್ಮ ಖಾಸಗೀಕರಣದ ನೀತಿಯನ್ನುಕೃಷಿಕ್ಷೇತ್ರಕ್ಕೂ ಅನ್ವಯಿಸುವ ಭರದಲ್ಲಿ, ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲು ಹೊರಟಿರುವಂತೆ ಕಾಣುತ್ತಿದೆ. ಇದುವರೆಗೂ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದ ಕೃಷಿ ಶಿಕ್ಷಣವನ್ನು ನೀಡುವ ಕಾಲೇಜುಗಳನ್ನು ಪ್ರಾರಂಭಿಸಲು ಖಾಸಗಿ ಕ್ಯಾಪಿಟೇಶನ್ ಕುಳಗಳಿಗೆ ಅನುಮತಿ ನೀಡುವಬಗ್ಗೆ ಚಿಂತನೆ ನಡೆಸುತ್ತಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಈಗಾಗಲೆ ಬಡವರ ಕೈಗೆಟುಕದಷ್ಟು ದುಬಾರಿಯಾಗಿರುವಾಗ ಬಹುತೇಕ ಗ್ರಾಮೀಣ ಭಾಗದ ರೈತರ ಮಕ್ಕಳು ಕಡಿಮೆವೆಚ್ಚದಲ್ಲಿ ಪಡೆಯುತ್ತಿದ್ದ ಕೃಷಿಸಂಬಂದಿತ ಶಿಕ್ಷಣವೂ ಈಗ ಅದೇ ಸಾಲಿಗೆ ಸೇರುವತ್ತ ಸಾಗಿದೆ.

ಆಗ 16, 2017

ಸ್ಪಷ್ಟ ನಿಲುವೊಂದನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಜಾತ್ಯಾತೀತ ಜನತಾದಳ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಿಹಾರದಲ್ಲಿನ ಮಹಾಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ಬಾಜಪ ನೇತೃತ್ವದ ಎನ್.ಡಿ.ಎ.ಜೊತೆ ಸೇರಿ ಸರಕಾರ ರಚಿಸಿದ ಮೇಲೆ ರಾಷ್ಟ್ರಮಟ್ಟದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಕೂಟವೊಂದರ ರಚನೆಯ ಕನಸು ಮೇಲ್ನೋಟಕ್ಕಂತು ಕರಗಿಹೋಗಿದೆ. ಇಂತಹ ಗಾಡಾಂಧಕಾರದಲ್ಲಿ ಮುಳುಗಿರುವ ಕಾಂಗ್ರೇಸ್ಸೇತರ ವಿರೋಧಪಕ್ಷಗಳ ಸ್ಥಿತಿ ಕರುಣಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕನರ್ಾಟಕದಲ್ಲಿನ ಶ್ರೀ ದೇವೇಗೌಡರ ನೇತೃತ್ವದ 'ಜಾತ್ಯಾತೀತಜನತಾದಳ' ಒಂದೇ ಕನಿಷ್ಠ ನಮ್ಮ ರಾಜ್ಯದ ಮಟ್ಟಗಾದರೂ ಬಾಜಪವನ್ನು ದೃಢವಾಗಿ ನಿಂತು ಎದುರಿಸಬಲ್ಲಂತಹ ಶಕ್ತಿಯನ್ನು ಹೊಂದಿರುವಂತೆ ಕಾಣುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ನಾವು ಉಳಿದ ವಿರೋಧಪಕ್ಷಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿನೋಡಬೇಕಾಗಿದೆ:

ಜುಲೈ 31, 2017

ಬಾಜಪದ ಬಾಹುಗಳಿಗೆ ಮರಳಿದ ನಿತೀಶ್ ಕುಮಾರ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನಿತೀಶ್ ಕುಮಾರ್ ದಿಡೀರ್ ರಾಜೀನಾಮೆ! 

ಮಹಾಘಟಬಂದನ್ ಮುರಿದುಕೊಂಡ ನಿತೀಶ್! 

ಇಂತಹ ತಲೆಬರಹಗಳು ಆದಷ್ಟು ಬೇಗ ಬಂದರೆ ಅಚ್ಚರಿಯೇನಿಲ್ಲ ಎಂದು ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಾನು ಬರೆದಿದ್ದೆ. ಅದೀಗ ನಿಜವಾಗಿದೆ. ರಾಷ್ಟ್ರೀಯ ಜನತಾದಳದ ನಾಯಕ ಶ್ರೀ ಲಾಲೂ ಪ್ರಸಾದ್ ಯಾದವರ ಪುತ್ರರೂ, ಬಿಹಾರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿಯಾದವರ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ನೆಪಮಾಡಿಕೊಂಡ ನಿತೀಶ್ ಬುದವಾರ ಸಂಜೆ ರಾಜಿನಾಮೆ ನೀಡಿದ್ದಾರೆ. ಮತ್ತು ನಾವು ನಿರೀಕ್ಷಿಸಿದಂತೆಯೇ ಬಾಜಪದ ಜೊತೆ ಸೇರಿ ಇಪ್ಪತ್ನಾಲ್ಕು ಗಂಟೆಯ ಒಳಗೆಯೇ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

ನಿತೀಶರ್ ಈ ಕ್ರಮದ ಹಿಂದಿರುವುದು ತೇಜಸ್ವಿ ಯಾದವರ ಮೇಲಿನ ಆರೋಪಗಳಷ್ಟೇ ಕಾರಣವೇನಲ್ಲ. ಬದಲಿಗೆ ಮೈತ್ರಿ ಮುರಿದುಕೊಳ್ಳಲು ವರ್ಷದ ಹಿಂದೆಯೇ ನಿರ್ದರಿಸಿದ್ದ ನಿತೀಶರ ನಡೆಯ ಹಿಂದೆ ಅವರ ಮತ್ತು ಬಾಜಪದ ದೀರ್ಘಕಾಲೀನ ಪಿತೂರಿಯೊಂದಿದೆ. ಅದನ್ನೀಗ ನಾವು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. 

ಮೇ 25, 2017

ಭಗ್ನಗೊಂಡ ಕೋಟ್ಯಾಂತರ ಜನರ ಪರ್ಯಾಯ ರಾಜಕಾರಣದ ಕನಸು!

ಕು.ಸ,ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದ ಕೋಟ್ಯಾಂತರ ಜನರ ಕನಸುಗಳು ಒಂದೇ ದಿನದಲ್ಲಿ ಛಿದ್ರಗೊಂಡಿವೆ!

ಹೌದು,ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಮೇಲೆ ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮತ್ತು ಸುಳ್ಳು ಕಂಪನಿಗಳ ಮೂಲಕ ಹವಾಲ ಹಣಕಾಸು ವ್ಯವಹಾರ ನಡೆಸಿದ ಆರೋಪ ಹೊರಬೀಳುತ್ತಲೇ ಜನತೆಯಲ್ಲಿ ಭ್ರಮನಿರಸನದ ನಿಟ್ಟುಸಿರು ಕೇಳಿ ಬರುತ್ತಿದೆ. ಯಾಕೆಂದರೆ ಭಾರತೀಯರ ಮಟ್ಟಿಗೆ, ಅದರಲ್ಲೂ ಇಂದಿನ ಅಕ್ಷರಸ್ಥ ಯುವಪೀಳಿಗೆಯ ಪಾಲಿಗೆ ಆಮ್ ಆದ್ಮಿ ಪಕ್ಷ ಕೇವಲ ಒಂದು ರಾಜಕೀಯ ಪಕ್ಷ ಮಾತ್ರವಾಗಿರಲಿಲ್ಲ. ಈ ನಾಡಿನಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ರಾಜಕಾರಣ ಮಾಡುತ್ತ ಬರುತ್ತಿದ್ದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ನಿಂತ ಪರ್ಯಾಯ ರಾಜಕಾರಣದ ಒಂದು ಆಯುಧವಾಗಿತ್ತು.

ಮೇ 13, 2017

ಮೇ 9, 2017

ಮುದ್ದು ಮನವೇ ಬುದ್ದಿ ಮಾತು ಕೇಳು.....

ಸವಿತ ಎಸ್ ಪಿ
ಹೇಳು ಮನವೇ....‌?ಯಾಕೀ ಪರಿ ಪರಿತಾಪ....! ಭಾವತಂತುವಿನೊಂದು ಕೊಂಡಿ ಕಳಚಿದಂತೆ.....ಏನೀ ಕಸಿವಿಸಿ...? ಬೊಗಸೆಯಷ್ಟು ಪ್ರೀತಿ ಬಯಸುವೆಯಾದರೂ ಯಾಕೆ....? ಅಣುವಿನಷ್ಟು ದೊರಕಲಿಲ್ಲವೆಂಬ ಕೊರಗೇಕೇ‌..? ನೋವ ಅಲೆ ಅಲೆ ನಿನ್ನೊಡಲಿಗೆ ಅಪ್ಪಳಿಸಿತೆಂದು ಭೋರಿಡುವೆಯೇಕೆ.....?

ಯಾಕೀ ನಿರೀಕ್ಷೆ.....? ಇದು ಸಾಧುವೇ....ಯಂತ್ರ ತಾಂತ್ರಿಕತೆಯ ಹುಚ್ಚು ಹಚ್ಚಿಸಿಕೊಂಡಿರುವ ಜಗದ ಜನರ ನಾಗಾಲೋಟದ ವೇಗಕೆ ನೀನೇಕೆ ಓಡದೆಯೇ ಸೋತೆ....? ಗೆಲ್ಲುವ ಹಂಬಲದ ಕುದುರೆಯನೇಕೇ ಹತ್ತದೇ ಹೋದೇ....?

ಮೇ 5, 2017

ಕಾವೇರಿ

ಸವಿತ ಎಸ್ ಪಿ
ಭೂಮಾಲೀಕರ ನಿರ್ಲಕ್ಷ್ಯ 
ಬೇಜವಾಬ್ದಾರಿ.., ಮಿತಿ ಮೀರಿ....
ಆಡಾಡಿ ನಲಿಯುತ್ತಿದ್ದ
ಮುದ್ದು ಕಾವೇರೀ.....
ಬಿದ್ದೆಯೆಲ್ಲ ಬಾಯ್ತೆರೆದ
ಕೊಳವೆ ಬಾವಿಗೆ ಜಾರಿ....!!

ಮೇ 2, 2017

ಮೃತ್ಯು ಕೂಪಗಳಾಗುತ್ತಿರುವ ತೆರೆದ ಕೊಳವೆಬಾವಿಗಳಿಗೊಂದು ಕಠಿಣ ಕಾಯ್ದೆಯ ಅಗತ್ಯ

ಸಾಂದರ್ಭಕ ಚಿತ್ರ 
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಗಾಗ ತೆರದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇವೆ. ಇಂತಹ ಪ್ರತಿ ಘಟನೆ ನಡೆದಾಗಲೂ ಜನ ಸರಕಾರಗಳ ವಿರುದ್ದ ಪ್ರತಿಭಟಿಸುವುದು, ಸರಕಾರಗಳು ಕೊಳವೆಬಾವಿಗಳಿಗೆ ಸಂಬಂದಿಸಿದಂತೆ ಒಂದಷ್ಟು ನೀತಿಗಳನ್ನು ರೂಪಿಸುವುದಾಗಿ ಹೇಳುವುದು ನಡೆದೆ ಇದೆ. 

ಆದರೆ ಸರಕಾರ ರೂಪಿಸಿರುವ ಯಾವ ನೀತಿಗಳೂ ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಯಾವುದೇ ಇಚ್ಚಾಶಕ್ತಿ ಇರದೆ ರೂಪಿಸಿದ ನೀತಿನಿಯಮಗಳಿಂದ, ಕಾನೂನುಗಳಿಂದ ಇಂತಹ ಅಪಘಾತಗಳನ್ನು ತಡೆಯಲು ಸಾದ್ಯವಿಲ್ಲ. ಹಾಗಾಗಿ ಕೆಲವಾದರು ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಭವಿಷ್ಯದಲ್ಲಿಯಾದರು ಇಂತಹ ಅನಾಹುತಗಳನ್ನು ನಿಯಂತ್ರಿಸ ಬಹುದಾಗಿದೆ. 

ಏಪ್ರಿ 28, 2017

ಮೇ ಸಾಹಿತ್ಯ ಮೇಳ

ಫ್ಯಾಸಿಸಂ ಚಹರೆಗಳು : ಅಪಾಯ-ಪ್ರತಿರೋಧ

೨೦೧೭, ಮೇ ೬ ಮತ್ತು ೭
ಆಲೂರು ವೆಂಕಟರಾವ್ ಸಭಾ ಭವನ, ಧಾರವಾಡ


ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ, ಧಾರವಾಡ


ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೧೫

ಉದ್ಘಾಟನೆ: ಗೀತಾ ಹರಿಹರನ್, ಇಂಡಿಯನ್ ರೈಟರ‍್ಸ್ ಫೋರಂ ಅಧ್ಯಕ್ಷೆ, ದೆಹಲಿ
ಮುಖ್ಯ ಅತಿಥಿಗಳು:
ಮದಿವಣ್ಣನ್, ಕವಿ, ವಿಮರ್ಶಕ, ಈರೋಡು
ಕೆ ನೀಲಾ, ಕಲಬುರಗಿ
ಸಮನ್ವಯ: ಪ್ರೊ. ಅರವಿಂದ ಮಾಲಗತ್ತಿ, ಮೈಸೂರು 
          
ಗೌರವ ಉಪಸ್ಥಿತಿ: ಪ್ರೊ. ಶಿವರುದ್ರ ಕಲ್ಲೋಳಿಕರ, ಎನ್. ಡಿ. ವೆಂಕಮ್ಮ, ವಿಠ್ಠಪ್ಪ ಗೋರಂಟ್ಲಿ, ಅಶೋಕ ಬರಗುಂಡಿ, ಕೆ. ಎನ್. ದೊಡಮನಿ, ರವಿ ನಾಯ್ಕರ
 
ಸಂಯೋಜನೆ : ಡಾ. ಎಚ್. ಎಸ್. ಅನುಪಮಾ

ಮುಸ್ಲಿಂ ಯುವ ಸಮಾವೇಶ

ಅನುಮಾನಿತ, ಅವಮಾನಿತ ಸಮುದಾಯದ ನೋವು ನಲಿವುಗಳ ಕುರಿತು ಚರ್ಚೆ, ಸಂವಾದ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ಮುಸ್ಲಿಂ ಸಮುದಾಯ ಇಂದು ಬಹುದೊಡ್ಡ ಬಿಕ್ಕಟ್ಟಿಗೆ, ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯ ಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ.