ಜೂನ್ 12, 2019

ಊರೆಂದರೆ ಹೀಗೇನೆ!

ಕು.ಸ.ಮಧುಸೂದನ ರಂಗೇನಹಳ್ಳಿ 
ಊರೆಂದರೆ ಹೀಗೆ 
ಮನೆಗಳ ಸಾಲುಗಳು 
ಅವುಗಳ ಕಾಯಲು ನಾಯಿಗಳು 
ವಾಕಿಂಗ್ ಕರೆದುಕೊಂಡು ಹೋಗುವ ಕೈಗಳು 
ಬ್ರೆಡ್ಡು ಬಿಸ್ಕೇಟು ಹಾಕುವ ತಾಯಂದಿರು 
ತಮಗು ಅದೇ ಬೇಕೆಂದು ಹಟ ಹಿಡಿಯುವ ಮಕ್ಕಳು 
ಇದನೆಲ್ಲ ಕವಿತೆಯಾಗಿಸುವ ಹೆಂಗರುಳಿನ ಕವಿಗಳು 
ಒಳ್ಳೆಯವರ ನಡುವೆಯೂ ಒಂದಿಬ್ಬರಾದರೂ ಕಳ್ಳರು 
ಹಿಡಿಯಲಷ್ಟು ಪೋಲೀಸರು 

ಜೂನ್ 10, 2019

ಬರುತ್ತೇನೆಂದು ಬರಲಿಲ್ಲ

ಕು.ಸ.ಮದುಸೂದನರಂಗೇನಹಳ್ಳಿ
ಬರುತ್ತೇನೆಂದಿದ್ದೆ ಬರಲಿಲ್ಲ
ಕಾಯುತ್ತಿದ್ದೆ 
ಇರುಳ ತಂಪಿನಲಿ ಸ್ವಸ್ಥನಂತೆ
ಹಗಲ ಭೇಗೆಯಲಿ ಅಸ್ವಸ್ಥನಂತೆ.

ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ
ಬೀಸಿಬಂದ ಗಾಳಿ ನಿನ್ನ ವಾಸನೆ ಹೊತ್ತು ತರಲಿಲ್ಲ.

ಜೂನ್ 3, 2019

ಒಂದು ಬೊಗಸೆ ಪ್ರೀತಿ - 18

ಡಾ. ಅಶೋಕ್.‌ ಕೆ. ಆರ್.‌
ಸಾಗರನ ಜೊತೆ ಪುರುಷೋತ್ತಮನ ಕತೆಯ ಮೊದಮೊದಲ ಭಾಗವನ್ನೇಳಿ ಮಲಗಿದಾಗ ಘಂಟೆ ಮೂರಾಗಿತ್ತು. ಬೆಳಿಗ್ಗೆ ಹತ್ತರವರೆಗೂ ನಿದ್ರೆ ಮಾಡಿದೆ. ಪೂರ್ತಿ ನಿದ್ರೆಯೂ ಅಲ್ಲ, ಪೂರ್ತಿ ಎಚ್ಚರವೂ ಅಲ್ಲ. ಪುರುಷೋತ್ತಮನ ನೆನಪುಗಳು ಕನಸಾಗಿ ಕಾಡುತ್ತಿದ್ದವು. ಹೆಸರಿಗೆ ಏಳು ಘಂಟೆಯಷ್ಟು ನಿದ್ರೆ ಮಾಡಿ ಎದ್ದಿದ್ದರೂ ಮನಸ್ಸಿಗೆ ಮತ್ತು ದೇಹಕ್ಕೆ ಉತ್ಸಾಹವಿರಲಿಲ್ಲ. ಎದ್ದ ತಕ್ಷಣ ಮೊಬೈಲು ನೋಡಿದೆ. ನಿನ್ನೆ ಮಿಸ್ಡ್ ಯು ಕಣೇ ಅಂದಿದ್ದಕ್ಕೇನಾದರೂ ಮತ್ತೆ ಹತ್ತದಿನೈದು ತಪ್ಪೊಪ್ಪಿಗೆಯ ಮೆಸೇಜು ಬಂದಿರುತ್ತವೆ ಸಾಗರನಿಂದ ಎಂದುಕೊಂಡಿದ್ದೆ. ಪುಣ್ಯಕ್ಕೆ ಬಂದಿರಲಿಲ್ಲ. ರಾಜಿಯ ಮಿಸ್ಡ್ ಕಾಲ್ ಇತ್ತು. ಎಂಟರ ಸುಮಾರಿಗೆ ಫೋನ್ ಮಾಡಿದ್ದರು. ಕರೆ ತೆಗೆಯದ ಕಾರಣ ಮೆಸೇಜು ಮಾಡಿದ್ದರು. “ಗುಡ್ ಮಾರ್ನಿಂಗ್ ಡಾರ್ಲಿಂಗ್. ಸುಮಾರು ಹನ್ನೊಂದು ಘಂಟೆಗೆ ಮನೆಗೆ ಬರುತ್ತೇನೆ” ಅಂತ. ‘ಸರಿ’ ಎಂದು ಪ್ರತಿಕ್ರಯಿಸಿ ಹಾಸಿಗೆ ಬಿಟ್ಟೆದ್ದೆ. 

ಸ್ನಾನ ಮಾಡಿ ಒಂದೆರಡು ರೊಟ್ಟಿ ಹಾಕಿಕೊಂಡು ಉಪ್ಸಾರು ಖಾರದಲ್ಲಿ ತಿಂದು ಮುಗಿಸುವಷ್ಟರಲ್ಲಿ ರಾಜಿ ಬಂದರು. ನಿನ್ನೆ ರಾತ್ರಿಯ ಕುಡಿತದ ಸಂಕೇತ ಅವರ ಕಣ್ಣಿನಲ್ಲಿ ಧಾರಾಳವಾಗಿ ಕಾಣುತ್ತಿತ್ತು. ಅವರು ಕುಡಿದು ಬಂದಿದ್ದಕ್ಕೆ ಬೇಜಾರಲ್ಲ, ನನ್ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ತಿರುಗಾಡಿಕೊಂಡು ಬಂದುಬಿಟ್ಟರಲ್ಲ ಅಂತ ಹೊಟ್ಟೆಉರಿ! ಮುಖ ಊದಿಸಿಕೊಂಡೇ ಕುಳಿತಿದ್ದೆ. ಅವರು ಕೇಳಿದ್ದಕ್ಕೆಲ್ಲ ಹಾ ಹೂ ಅಷ್ಟೇ ನನ್ನ ಉತ್ತರ. ಟ್ರಿಪ್ ಹೇಗಿತ್ತು ಎಲ್ಲೆಲ್ಲಿ ಹೋಗಿದ್ರಿ ಅನ್ನೋ ಪ್ರಶ್ನೆ ನಾಲಗೆ ತುದಿಯವರೆಗೆ ಬರೋದು, ಕಷ್ಟಪಟ್ಟು ತಡೆದುಕೊಳ್ಳುತ್ತಿದ್ದೆ. ರಾಜಿಗೂ ಅದೆಲ್ಲ ಅರ್ಥವಾಗಿಬಿಡುತ್ತದೆ! ಮುಗುಳ್ನಗುತ್ತ ಸ್ನಾನ ಮಾಡಿ ಹೊರಬಂದು ಸೋಫಾದ ಮೇಲೆ ಮಲಗಿ ಪೇಪರ್ ಓದುತ್ತಿದ್ದವಳ ಮೇಲೆ ಮಲಗಿ ತುಟಿಗೆ ತುಟಿ ಒತ್ತಿ ಒಂದು ದೀರ್ಘ ಚುಂಬನ ಕೊಟ್ಟು ತಲೆ ಮೇಲೆತ್ತಿದರು. ಇದು ಅವರು ಇತ್ತೀಚೆಗೆ ಕಂಡುಕೊಂಡಿರುವ ಸಮಾಧಾನ ಮಂತ್ರ! ಅವರಿಗೆ ಹಣೆಗೆ ಕೆನ್ನೆಗೆ ಮುತ್ತು ಕೊಡುವುದಿಷ್ಟ. ನನಗೆ ತುಟಿಗೆ ತುಟಿ ಸೇರಿಸುವುದಿಷ್ಟ. ನಾನವರ ಮೇಲೆ ಕೋಪಗೊಂಡಿದ್ದಾಗ ಅವರಿಗಷ್ಟೇನು ಇಷ್ಟವಿಲ್ಲದಿದ್ದರೂ ತುಟಿಗೆ ತುಟಿ ಒತ್ತಿಬಿಡುತ್ತಾರೆ! ನಾನು ಕರಗಿಬಿಡುತ್ತೇನೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಮೇ 30, 2019

ದಕ್ಷಿಣವನ್ನು ಬಾಜಪ ಯಾಕೆ ಗೆಲ್ಲಲಾಗಲಿಲ್ಲ?

ಕು.ಸ.ಮಧುಸೂದನ
ದೇಶದ ಉದ್ದಗಲಕ್ಕೂ ತನ್ನ ಪ್ರಭಾವಳಿಯನ್ನು ವಿಸ್ತರಿಸಿ ಮುನ್ನೂರಕ್ಕೂ ಅಧಿಕಸ್ಥಾನಗಳನ್ನು ಗೆದ್ದ ಬಾಜಪ ದಕ್ಷಿಣ ಭಾರತದಲ್ಲಿ ಮಾತ್ರ ಬಹುತೇಕ ವಿಫಲವಾಗಿದೆ. ಕರ್ನಾಟಕ ಒಂದನ್ನು ಹೊರತು ಪಡಿಸಿದರೆ ಮಿಕ್ಕಂತೆ ಆಂದ್ರಪ್ರದೇಶ, ತಮಿಳುನಾಡು, ಪುದುಚೇರಿ, ಕೇರಳಗಳಲ್ಲಿ ಕನಿಷ್ಠ ಖಾತೆ ತೆರೆಯಲೂ ಅದು ವಿಫಲವಾಗಿದ್ದು ತೆಲಂಗಾಣದಲ್ಲಿ ಮಾತ್ರ ಕಷ್ಟ ಪಟ್ಟು ನಾಲ್ಕು ಸ್ಥಾನಗಳನ್ನು ಗೆದ್ದಿದೆ.

ಯಾವತ್ತಿಗೂ ಬಾಜಪ ಖಾತೆ ತೆರೆಯಲೇ ಅಸಾದ್ಯವೆಂಬ ಬಲವಾದ ಅನಿಸಿಕೆಯಿದ್ದ ಈಶಾನ್ಯಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಅದು ದಕ್ಷಿಣದಲ್ಲಿ ನೆಲೆ ಕಂಡುಕೊಳ್ಳಲು ಏದುಸಿರು ಬಿಡುತ್ತಿರುವುದಾದರೂ ಯಾಕೆಂದು ವಿಶ್ಲೇಷಿಸುತ್ತ ಹೋದರೆ ಹಲವು ಐತಿಹಾಸಿಕ ಕಾರಣಗಳು ಕಂಡುಬರುತ್ತವೆ.

ಮೇ 21, 2019

ಒಂದು ಬೊಗಸೆ ಪ್ರೀತಿ - 17

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

“ಅದನ್ನು ಅವತ್ತೇ ಹೇಳಿದ್ದೆ. ಅದಕ್ಕೆ ನನ್ನ ಉತ್ತರಾನೂ ಕೊಟ್ಟಿದ್ದೆ ಆಗಲೇ. ಮತ್ತೆ ಮತ್ತೆ ಅದನ್ನೇ ಹೇಳೋದಿಕ್ಕೆ ನನ್ನನ್ನು ಹುಡುಕೋ ಕಷ್ಟ ತೆಗೆದುಕೊಳ್ಳಬೇಡ. ಇನ್ನು ನೀನು ಹೋಗು”

‘ಯಾಕೋ ಹಿಂಗೆ ಹೋಗು ಹೋಗು ಅಂತೀಯ. ಫ್ರೆಂಡ್ಸಾಗಿರೋಣ ಕಣೋ ಮೊದಲಿನ ತರಾನೇ ಅನ್ನೋದ್ರಲ್ಲಿ ತಪ್ಪೇನಿದೆ. ನನಗೆ ನಿನ್ನ ಜೊತೆ ಮಾತಾಡ್ದೆ ಇದ್ರೆ ಬೇಜಾರಾಗುತ್ತೆ ಕಣೋ'

“ಮತ್ತೆ ಅದನ್ನೇ ಹೇಳ್ತೀಯಲ್ಲ! ನಾನು ನಿನ್ನ ಲವರ್ ಆಗಿ ಇರಬಲ್ಲೆ, ಫ್ರೆಂಡಾಗಲ್ಲ”

‘ಇದೇ ನಿನ್ನ ಕೊನೇ ತೀರ್ಮಾನಾನ?’

“ನನ್ನ ಮೊದಲ ತೀರ್ಮಾನವೂ ಅದೇ ಕೊನೇ ತೀರ್ಮಾನವೂ ಅದೇ”

‘ನಿನಗೆ ನನ್ನ ಜೊತೆ ಮಾತಾಡ್ದೆ ಇದ್ರೆ ಬೇಜಾರಾಗಲ್ವ?’

“ಆಗುತ್ತೆ”

‘ಮತ್ತೆ’

“ಬೇಜಾರಾಗುತ್ತೆ ಅಂತ ನಿನ್ನ ಜೊತೆ ಫ್ರೆಂಡ್ ತರ ನಾಟಕ ಮಾಡೋಕೆ ನನಗಿಷ್ಟವಿಲ್ಲ. ಇದ್ರೆ ಪ್ರೇಮಿಗಳ ತರ ಇರೋಣ. ಇಲ್ಲಾಂದ್ರೆ ಬೇಜಾರು ಮಾಡ್ಕೊಂಡೇ ಇರ್ತೀನಿ ಬಿಡು”

‘ನೋಡು ಹೆಂಗೆಲ್ಲ ಮಾತಾಡ್ತಿ. ನೀನು ಬೇಜಾರು ಮಾಡ್ಕೊಂಡು ಸಿಗರೇಟು ಸೇದ್ಕೊಂಡು ಸಪ್ಪಗೆ ಕುಳಿತಿದ್ರೆ ನನಗೆ ಖುಷಿಯೇನೋ’

“ನಾನು ಹೆಂಗಿದ್ರೆ ನಿನಗೆ ಏನಾಗ್ಬೇಕು? ನನ್ನ ಯೋಚನೆ ಬಿಡು”

‘ಅಂದ್ರೆ? ನಾನು ಇಷ್ಟಪಡೋ ಫ್ರೆಂಡ್ ಬಗ್ಗೆ ನಾನು ಇಷ್ಟೂ ಯೋಚನೆ ಮಾಡಬಾರದಾ?’

“ಇಷ್ಟಪಡ್ತೀನಿ ಅಂತೀಯ. ಆದ್ರೆ ಲವ್ ಮಾತ್ರ ಮಾಡೋಕಾಗಲ್ಲ ಅಲ್ವ. ಸಿಗರೇಟು ಸೇದ್ತಾನೆ, ಮನೆ ಕಡೆ ಪ್ರಾಬ್ಲಮ್ಮು, ಅಷ್ಟೇನು ಚೆನ್ನಾಗಿ ಓದಲ್ಲ. ಇವನನ್ನು ಲವ್ ಮಾಡಿ ಏನು ಸಿಗುತ್ತೆ ಅಂತೇನೋ?”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಹಳೆ ಕುದುರೆ -ಹೊಸ ದೊರೆ

ಕು.ಸ.ಮಧುಸೂದನ ರಂಗೇನಹಳ್ಳಿ

ಉರಿಯುವ ಹಗಲು
ಗಡಿಯಾರಗಳ ಮುಳ್ಳುಗಳು ತೆವಳುತಿವೆ
ಎಷ್ಟು ಕತ್ತಿಗಳ ತಿವಿತ
ರಕ್ತ ಸ್ರಾವವಿರದೆ ಕೊಲ್ಲುವ ಹೊಸ ಮಾರ್ಗ
ಅನ್ವೇಷಿಸಿದ ಕೀರ್ತಿ ಪತಾಕೆ ಹೊತ್ತ
ಹಳೇ ಕುದುರೆಗಳ ಮೇಲಿನ ಹೊಸ ದೊರೆ
ಊರ ತುಂಬಾ ಭಯದ ಕಂಪನಗಳು
ನಿಟ್ಟುಸಿರನ್ನೂ ಬಿಗಿ ಹಿಡಿದು
ಬಿಲ ಸೇರಿಕೊಂಡ ಹುಳುಗಳು
ಬಿಸಿಲ ಧಗೆಯ ನಡುವೆಯೆದ್ದ ಬಿಸಿ ಗಾಳಿಗೆದ್ದು ದೂಳಿನಬ್ಬರಕೆ
ಮೊಳಗಿಸಿದ ರಣಘೋಷಗಳು ದಿಕ್ಕುಗಳಿಗೆ ಹಬ್ಬಿ
ಸೇನಾಧಿಪತಿಗಳ ಆವೇಶ ಆಕ್ರೋಶಗಳನ್ನೆಲ್ಲ ಮೈಮೇಲೆ ಆವಾಹಿಸಿಕೊಂಡ ಕಾಲಾಳುಗಳು ಸ್ವತ: ರಕ್ಕಸರಂತೆ
ಪರಾಕ್ರಮ ಮೆರೆಯ ತೊಡಗಿದರು
ಹಾಗೆ ಧಗಧಗಿಸಿ ಉರಿದೊಂದು ಸಂಜೆ
ಬರಬಹುದಾದ ಬಿರು ಮಳೆಗೆ ಕಾದ
ಜನ ಊರಾಚೆಯ ದಿಬ್ಬದ ಮೇಲೆ ನೆರೆದು ಹಾಡತೊಡಗಿದರು
ಹುಯ್ಯೋ ಹುಯ್ಯೋ ಮಳೆರಾಯ!

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಪುಟ್ಟ ಹುಡುಗಿಯ ಬಿಟ್ಟುಬಿಡಿ!

ಪಲ್ಲವಿ ದಿವ್ಯಾ
ಆ ಪುಟ್ಟ ಹುಡುಗಿಯ ರೆಕ್ಕೆಗಳ ಕತ್ತರಿಸದಿರಿ
ಆ ಪುಟ್ಟ ಹುಡುಗಿಯ ಕಣ್ಣುಗಳಿಗೆ ಪಟ್ಟಿ ಕಟ್ಟದಿರಿ.

ಆ ಪುಟ್ಟ ಹುಡುಗಿಯ ನಾಲಿಗೆಗೆ ಲಗಾಮು ಹಾಕದಿರಿ
ಆ ಪುಟ್ಟ ಹುಡುಗಿಯ ಕಾಲುಗಳಿಗೆ ಬೇಡಿ ಹಾಕದಿರಿ.

ಅವಳೊಂದು ಹೂವಿನ ಹಾಗೆಂದು ವರ್ಣಿಸಿ
ನಿಯಮಾವಳಿಗಳ ಮುಳ್ಳುಗಳ ಕಾವಲಿಗಿಡದಿರಿ.

ಅವಳ ಬದುಕು ಅವಳದು
ನಡೆಯುತ್ತಲೊ ಓಡುತ್ತಲೊ ಹಾರುತ್ತಲೊ ಅವಳ ಗಮ್ಯವನವಳು
ತಲುಪಿಕೊಳ್ಳಲಿ
ತಡೆಯೊಡ್ಡದಿರಿ.

ಆ ಪುಟ್ಟ ಹುಡುಗಿಯ ಮುನ್ನಡೆಸುವ ಯಜಮಾನಿಕೆ ತೋರದಿರಿ
ಆ ಪುಟ್ಟ ಹುಡುಗಿ ಬೇಡುತ್ತಿಹಳು ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ

ಮೇ 18, 2019

ಅವಿಸ್ಮರಣೀಯ ಅರುಣಾಚಲ ಅದರ ಚಿತ್ರ -ವಿಚಿತ್ರ ಇತಿಹಾಸ: ಪುಸ್ತಕ ವಿಮರ್ಶೆ

ನಂದಕುಮಾರ್. ಕೆ. ಎನ್
ಅರುಣಾಚಲ ಪ್ರದೇಶ ಈಗ ಭಾರತದ ಅಂಗವನ್ನಾಗಿಯೇ ನೋಡಲಾಗುತ್ತಿದೆ. ಆದರೆ ಚೀನ ಅದನ್ನು ಈಗಲೂ ಮಾನ್ಯ ಮಾಡಿಲ್ಲ. ಅದರ ಬಗ್ಗೆ ವಿವಾದಗಳು ಈಗಲೂ ಭಾರತ, ಚೀನ ನಡುವೆ ಇವೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿಸುವ ಪ್ರಕ್ರಿಯೆಗಳು ಬ್ರಿಟೀಷ್ ಭಾರತದಲ್ಲೇ ಶುರುವಾಗಿದ್ದವು. ಆದರೆ ಅದಕ್ಕೆ ಅಲ್ಲಿನ ಸ್ಥಳೀಯ ಸ್ವಯಂಮಾಡಳಿತ ಗಣ ವ್ಯವಸ್ಥೆಯ ಬುಡಕಟ್ಟು ಗುಂಪುಗಳು ಪ್ರಬಲವಾದ ಪ್ರತಿರೋಧ ಒಡ್ಡಿದ್ದವು. ಅವರು ಅನುಮತಿಸದೇ ಅವರ ಪ್ರದೇಶದೊಳಕ್ಕೆ ಯಾರೂ ಹೋಗುವಂತಿರಲಿಲ್ಲ. ಹೋದವರು ಜೀವಂತವಾಗಿ ವಾಪಾಸು ಬರಲಾಗುತ್ತಿರಲಿಲ್ಲ. ಬ್ರಿಟೀಷ್ ಅಧಿಕಾರಿಯೊಬ್ಬ ಆ ಪ್ರದೇಶವನ್ನು ಗ್ರಹಿಸಿ ಬ್ರಿಟೀಷ್ ಭಾರತದ ಭಾಗವಾಗಿಸಿಕೊಳ್ಳುವ ಇರಾದೆಯಿಂದ ಯಾವುದೇ ಅನುಮತಿ ಇಲ್ಲದೇ ಅಲ್ಲಿಗೆ ತೆರಳಿ ಸಾವಿಗೀಡಾಗಿದ್ದು ಬ್ರಿಟೀಷ್ ಆಡಳಿತವನ್ನು ಕೆರಳಿಸಿತ್ತು. ಆ ಪ್ರದೇಶವನ್ನು ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಗಳು ಅಲ್ಲಿಂದ ಚುರುಕುಗೊಂಡವು ಎಂದು ಹೇಳಬಹುದು. ಅಲ್ಲಿ ಸ್ವಾಯತ್ತ ಗಣ ವ್ಯವಸ್ಥೆಯಿರುವ ಬುಡಕಟ್ಟುಗಳು ಸ್ವಯಂಪೂರ್ಣವಾಗಿ ಜೀವನ ಕಟ್ಟಿಕೊಂಡಿದ್ದರೂ ಆ ಪ್ರದೇಶದ ಮೇಲೆ ಚೀನ ಹಾಗೂ ಟಿಬೆಟ್ ನ ಹಿತಾಸಕ್ತಿಗಳೂ ಇದ್ದವು. ಟಿಬೆಟ್ ನಂತರ ಚೀನಾದ ಪ್ರದೇಶವಾಯಿತು. ಇದರ ಮಧ್ಯೆ ಆ ಪ್ರದೇಶದ ಬುಡಕಟ್ಟು ಜನರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡಲಿಲ್ಲ. ಹಾಗಾಗಿ ಆ ಸಮುದಾಯಗಳಲ್ಲಿ ಹಲವು ಈಗಲೂ ಭಾರತವನ್ನೂ ಅಂಗೀಕರಿಸಲಾಗದಂತಹ ಸ್ಥಿತಿಯಲ್ಲಿಯೇ ಇವೆ.

ಮೇ 14, 2019

ಒಂದು ಬೊಗಸೆ ಪ್ರೀತಿ - 16

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

‘ಅಯ್ಯೋ ಹಂಗೆಲ್ಲ ಏನಿಲ್ಲಪ್ಪ. ರಜೆಯಲ್ಲಿ ಅಜ್ಜಿ ಮನೆಗೆ ಹೋಗಿಬಿಟ್ಟಿದ್ದೆ. ಅಲ್ಲಿ ಕಸಿನ್ಸ್ ಜೊತೆಯೆಲ್ಲ ಆಟ ಸುತ್ತಾಟ. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನಲ್ಲಿನ್ನೂ ಪುರುಷೋತ್ತಮನ ಬಗ್ಗೆ ಪ್ರೀತಿ ಪ್ರೇಮದ ಭಾವನೆಗಳು ಹುಟ್ಟಿರಲಿಲ್ಲವಲ್ಲ ಹಾಗಾಗಿ ಹೆಚ್ಚೇನು ಅವನ ನೆನಪಾಗಲಿಲ್ಲ. ಅವನು ಹೇಳಿದ್ದು ನೆನಪಾದಾಗಲೆಲ್ಲ ನನಗೆ ಅಶ್ವಿನಿಯನ್ನು ಹೇಗೆ ಎದುರಿಸುವುದು ಅವಳಿಗೆ ಹೇಗೆ ಹೇಳುವುದು ಎನ್ನುವುದೇ ಹೆಚ್ಚು ಕಾಡುತ್ತಿತ್ತು. ಅವಳಿಗೆ ಊಹಿಸಲು ಸಾಧ್ಯವಾಗಿದ್ದು ನನಗಾಗಲಿಲ್ಲವಲ್ಲ ಎಂದು ಬೇಸರವಾಗುತ್ತಿತ್ತು. ರಜೆಯ ಮಜದ ನಡುವೆ ಅದನ್ನೆಲ್ಲ ಜಾಸ್ತಿ ಯೋಚಿಸಲೂ ಇಲ್ಲ ಬಿಡು. ರಜೆ ಮುಗಿಸಿ ಬಂದ ಮೇಲೆ ಮನೆಯ ಬಳಿಯೇ ಅಶ್ವಿನಿ ಸಿಕ್ಕಿದಳು. ಅವಳ ಮನೆಗೇ ಹರಟಲು ಹೋದೆವು. ಮನೆಯಲ್ಯಾರೂ ಇರಲಿಲ್ಲ. ಹಾಲಿನಲ್ಲಿ ಟಿವಿ ಹಾಕಿ ಕುಳಿತೆವು. ಅದೂ ಇದೂ ಮಾತನಾಡಲು ಪ್ರಾರಂಭಿಸಿದೆವು. ನಾನು ಮುಖಕ್ಕೆ ಮುಖ ಕೊಟ್ಟು ಮಾತನಾಡದೆ ಇದ್ದುದು ಅವಳ ಗಮನಕ್ಕೆ ಬಂತು. ಜನರ ಜೊತೆ ಹೆಚ್ಚು ಬೆರೆಯದೆ ಮೂರೊತ್ತೂ ಓದ್ತಾನೇ ಕೂರ್ತಿದ್ದ ಅವಳಿಗೆ ಬೇರೆಯವರ ನಡವಳಿಕೆಯಿಂದಾನೇ ಅರ್ಧ ವಿಷಯ ಗೊತ್ತಾಗಿಬಿಡುವುದಾದರೂ ಹೇಗೆ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. “ಏನಾಯ್ತೆ?” ಎಂದು ಕೇಳಿದಳು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಮೇ 9, 2019

ಶಕ್ತಿ ನೀಡು!

ಕು.ಸ.ಮಧುಸೂದನ ರಂಗೇನಹಳ್ಳಿ. 
ಹಿತವೆನಿಸುತ್ತಿದೆ ನಿನ್ನೀ ಮೆದು ಸ್ಪರ್ಶ
ಮೆಲು ಮಾತು
ಅಂತೂ ಬಂದೆಯಲ್ಲ ಮರಣಶಯ್ಯೆಯಡೆಗಾದರು
ಅದೇ ಸಂತಸ
ಷ್ಟು ಸನಿಹವಿದ್ದೀಯವೆಂದರೆ ದೂರದ ಪರಲೋಕವೂ ಇದೀಗ ಹತ್ತಿರವೆನಿಸುತ್ತಿದೆ
ಕ್ಷಮಿಸಿಬಿಡಿ ಹಳೆಯ ಮಾತುಗಳನ್ನೂ ಮುನಿಸುಗಳನ್ನೂ
ದಾಟಿದ ಮೇಲೂ ಹೊಳೆಯ ಅಂಬಿಗನ ನೆನಪೇಕೆ
ಏನೂ ಕೊಡಲಿಲ್ಲವೆಂಬ ಕೊರಗೇಕೆ ನಿನಗೆ
ಕೊಡುವುದು ಮುಖ್ಯ ಕೊಟ್ಟದ್ದೇನೆಂದಲ್ಲ
ಸುಖವೋ ದು:ಖವೊ
ಬೇಡಬಿಡು ಯಾಕೆ ವೃಥಾ ವಾದವಿವಾದ
ಹೋಗಿಬಿಡುವ ಸಮಯದಲ್ಲೇಕೆ ತೋರುವೆ ಇಷ್ಟೊಂದು ಪ್ರೀತಿಯ
ಸ್ವರ್ಗವೊ ನರಕವೊ
ನೀನಿರದೆಯೂಬದುಕಬಲ್ಲ ಶಕ್ತಿಯ ನೀಡು!
ಕು.ಸ.ಮಧುಸೂದನರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.