ಜುಲೈ 19, 2018

ವರ್ಷಾಂತ್ಯದ ಮೂರು ರಾಜ್ಯಗಳ ಚುನಾವಣೆಗಳ ಮಹತ್ವ.

ಕು.ಸ.ಮಧುಸೂದನ ರಂಗೇನಹಳ್ಳಿ 
2019ರ ಲೋಕಸಭಾ ಚುನಾವಣೆಗಳಿಗೂ ಮೊದಲೇ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೂರು ರಾಜ್ಯಗಳ ವಿದಾನಸಭಾ ಚುನಾವಣೆಗಳಿಗೆ ಈ ಬಾರಿ ವಿಶೇಷವಾದ ರಾಷ್ಟ್ರೀಯ ಮಹತ್ವವೊಂದು ಬಂದು ಬಿಟ್ಟಿದೆ. ಮದ್ಯಪ್ರದೇಶ, ರಾಜಾಸ್ಥಾನ್ ಮತ್ತು ಮಿಜೋರಾಂ ರಾಜ್ಯಗಳಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳು 2019ರ ಲೋಕಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಬಹುದೆಂಬುದು ಬಹುತೇಕ ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ. 

ಇವುಗಳಲ್ಲಿ ಕೇವಲ ನಲವತ್ತು ಸ್ಥಾನಗಳನ್ನು ಹೊಂದಿರುವ ಈಶಾನ್ಯರಾಜ್ಯ ಮಿಜೋರಾಂ ಬಿಟ್ಟರೆ ಉಳಿದೆರಡು ರಾಜ್ಯಗಳಾದ ಮಧ್ಯಪ್ರದೇಶ(230ಸ್ಥಾನ) ರಾಜಾಸ್ಥಾನ(200ಸ್ಥಾನ)ಗಳಲ್ಲಿ ಬಾಜಪ ಅಧಿಕಾರದಲ್ಲಿದ್ದು 2019ರ ಲೋಕಸಭಾ ಚುನಾವಣೆಗಳಲ್ಲಿ ಸುಮಾರು 54 ಸಂಸತ್ ಸದಸ್ಯರನ್ನು ಆರಿಸಿ ಕಳಿಸಿಕೊಡಲಿವೆ. 2014ರ ಚುನಾವಣೆಯಲ್ಲಿ ರಾಜಾಸ್ಥಾನದ 24 ಸ್ಥಾನಗಳಲ್ಲಿ ಬಾಜಪ 20 ಸ್ಥಾನಗಳನ್ನು ಗೆದ್ದಿದ್ದರೆ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ ಬಾಜಪ 26 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಬಾಜಪ ಬಹುಮತ ಪಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದವು. ಹಾಗೆ ನೋಡಿದರೆ. 2013ರಲ್ಲಿ ಈ ರಾಜ್ಯಗಳಲ್ಲಿ ನಡೆದ ವಿದಾನಸಭೆಯ ಚುನಾವಣೆಗಳು 2014ರ ಸಾರ್ವತ್ರಿಕ ಚುನಾವಣೆಗಳಿಗೆ ಬಾಜಪಕ್ಕೆ ಪೂರ್ವಸಿದ್ದತೆಯ ಚುನಾವಣೆಗಳಾಗಿದ್ದು, ಶ್ರೀ ನರೇಂದ್ರ ಮೋದಿಯವರ ಜನಪ್ರಿಯತೆಯ ಮೊದಲ ರಿಹರ್ಸಲ್ ಆಗಿತ್ತೆನ್ನಬಹುದು.ಅವತ್ತು ಆ ಎರಡೂ ರಾಜ್ಯಗಳಲ್ಲಿ ಪಡೆದ ಬಾರಿ ಬಹುಮತದ ಆತ್ಮವಿಶ್ವಾಸವೇ ನಂತರದಲ್ಲಿ ಬಾಜಪ ರಾಷ್ಟ್ರದಾದ್ಯಂತ ಬಿರುಸಿನ ಆಕ್ರಮಣಕಾರಿ ಚುನಾವಣಾ ಪ್ರಚಾರ ಕೈಗೊಳ್ಳಲು ಸ್ಪೂರ್ತಿದಾಯಕವಾಗಿತ್ತು. 

ಇದೀಗ ಬಾಜಪ ಈ ಎರಡೂ ರಾಜ್ಯಗಳಲ್ಲಿ ಹೆಚ್ಚುಕಡಿಮೆ ಐದು ವರ್ಷಗಳ ಕಾಲ ನಿರಾತಂಕವಾಗಿ ತನ್ನ ಆಳ್ಬಿಕೆ ನಡೆಸಿದೆ. ಇವತ್ತು ಬಾಜಪ ಮತ್ತು ಕಾಂಗ್ರೆಸ್ ಎಂಬ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಈ ರಾಜ್ಯಗಳ ಚುನಾವಣೆಗಳು ಹಲವು ಕಾರಣಗಳಿಗಿಂದಾಗಿ ಮಹತ್ವಪೂರ್ಣವಾಗಿವೆ. ಯಾಕೆಂದು ಸ್ವಲ್ಪ ನೋಡೋಣ: 

ಜುಲೈ 18, 2018

ಏಕಕಾಲದ ಚುನಾವಣೆಗಳ ಮಾತು: ಹಿಂದಿರುವ ರಾಜಕೀಯ ಕಾರಣಗಳು

ಕು.ಸ. ಮಧುಸೂದನ ರಂಗೇನಹಳ್ಳಿ
ಕು.ಸ.ಮಧುಸೂದನ ರಂಗೇನಹಳ್ಳಿ
ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂಬ ಹೇಳಿಕೆ ನೀಡುವ ಮೂಲಕ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರ ಮಟ್ಟದ ಚರ್ಚೆಯೊಂದಕ್ಕೆ ಮತ್ತೊಮ್ಮೆ ನಾಂದಿ ಹಾಡಿದ್ದಾರೆ.

ಯಾವುದೋ ಚುನಾವಣೆಯ ಪ್ರಚಾರಸಭೆಯಲ್ಲಿಯೋ ಇಲ್ಲ ಖಾಸಗಿ ಸಮಾರಂಭಗಳಲ್ಲಿ ಪ್ರದಾನಿಯವರು ಈ ಮಾತನ್ನಾಡಿದ್ದರೆ ನಾವು ನಿರ್ಲಕ್ಷಿಸಬಹುದಿತ್ತು. ಆದರೆ ಮೊನ್ನೆ ನೀತಿ ಆಯೋಗದ ಸಭೆಯ ಸಮಾರೋಪ ಸಮಾರಂಭದಲ್ಲಿ ದೇಶದ ಹಲವಾರು ಮುಖ್ಯಮಂತ್ರಿಗಳ ಹಾಗು ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಈ ಮಾತುಗಳನ್ನು ಆಡಿರುವುದರಿಂದ ಅದಕ್ಕೊಂದು ಮಾನ್ಯತೆ ಬಂದಿದೆ ಜೊತೆಗೆ ರಾಜಕೀಯ ಪಕ್ಷಗಳೂ ಸೇರಿದಂತೆ ಚುನಾವಣಾ ತಜ್ಞರುಗಳು, ವಿವಿಧಕ್ಷೇತ್ರಗಳಪರಿಣಿತರು ಈ ವಿಷಯದ ಮೇಲೆ ಚರ್ಚೆ ನಡೆಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. 2016ರಲ್ಲಿ ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಇಂತಹದೊಂದು ಶಿಫಾರಸ್ಸನ್ನು ಮಾಡಿತ್ತುಅಲ್ಲದೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಹ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರ್ಯಾರೂ ಅದರ ಬಗ್ಗೆ ಅಷ್ಟೊಂದು ಗಂಬೀರವಾಗೇನು ಚರ್ಚೆ ಮಾಡಲು ಹೋಗಿರಲಿಲ್ಲ..

ಆದರೆ ಇದೀಗ ನೀತಿ ಆಯೋಗದ ಸಭೆಯಲ್ಲಿ ಪ್ರದಾನಮಂತ್ರಿಯವರು ಅಧಿಕೃತವಾಗಿಯೇ ಈ ಮಾತನ್ನು ಹೇಳಿರುವುದರಿಂದ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ತಿಳಿಯುವುದರ ಜೊತೆಗೆ ಆ ಬಗ್ಗೆ ಚರ್ಚೆ ನಡೆಸಬೇಕಾಗಿರುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಕಾನೂನು ಸಚಿವಾಲಯವೇ ಹೇಳಿದಂತೆ ಇದಕ್ಕೆ ದೇಶದ ಎಲ್ಲ ರಾಜಕೀಯ ಪಕ್ಷಗಳ ಸಮ್ಮತಿ ಬೇಕಾಗುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಮಾತಾಡಿರುವುದು ಇದು ಹೊಸದೇನಲ್ಲ. ಆದರೆ ಇದರ ಹಿಂದಿನ ರಾಜಕೀಯ ಉದ್ದೇಶಗಳನ್ನು ಚರ್ಚಿಸುವ ಮೊದಲು ನಮ್ಮ ಚುನಾವಣೆಗಳು ನಡೆಯುತ್ತಿದ್ದ ಮತ್ತು ನಡೆಯುತ್ತಿರುವ ರೀತಿಗಳನ್ನು ಸ್ವಲ್ಪ ಹಿಂದಕ್ಕೆ ಹೋಗಿ ನೋಡೋಣ:

ಜುಲೈ 16, 2018

ಕರಾಳ ರಾತ್ರಿಯೆಂಬ ಸರ್ಪ್ರೈಸ್ ಪ್ಯಾಕೇಜು!

ಡಾ. ಅಶೋಕ್.ಕೆ.ಆರ್ 
‘ಆ ಕರಾಳ ರಾತ್ರಿ’ ಎಂಬೆಸರಿನ ಸಿನಿಮಾವೊಂದು ಬಿಡುಗಡೆಯಾಗಿರುವ ವಿಷಯವೇ ತಿಳಿದಿರಲಿಲ್ಲ ಎಂದ ಮೇಲೆ ಅದು ಯಾವ ಥಿಯೇಟರಿನಲ್ಲಿದೆ ಅನ್ನುವುದನ್ನೆಲ್ಲ ಹುಡುಕಾಡಿ ಸಿನಿಮಾ ನೋಡುವುದು ದೂರದ ಮಾತೇ ಸೈ! ಬೆಂಗಳೂರು ಮಿರರ್ ನ ಶ್ಯಾಮ್ ಪ್ರಸಾದ್ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ಮೂರುವರೆ ಸ್ಟಾರ್ ಕೊಟ್ಟಿದ್ದೇ ಈ ಸಿನಿಮಾ ನೋಡಲು ಕಾರಣ! ಯಾವ ಸಿನಿಮಾವನ್ನೂ ಸುಖಾಸುಮ್ಮನೆ ಶ್ಯಾಮ್ ಪ್ರಸಾದ್ ಹೊಗಳೋರಲ್ಲ ಅನ್ನೋ ನಂಬುಗೆಯಿಂದ ಚಿತ್ರಮಂದಿರದೊಳಗೆ ಕಾಲಿಟ್ಟಾಗಲೇ ಗೊತ್ತಾಗಿದ್ದು ಇದು ದಯಾಳ್ ಪದ್ಮನಾಭನ್ ನಿರ್ಮಾಣ ನಿರ್ದೇಶನದ ಚಿತ್ರವೆಂದು! 

ದಯಾಳ್ ಅವರ ಸಿನಿಮಾಗಳು ಯಾವುವೂ ಹೇಳಿಕೊಳ್ಳುವಷ್ಟು ಮೆಚ್ಚುಗೆಯಾಗಿರಲಿಲ್ಲ ನನಗೆ. ಇದು ಹೇಗಿದೆಯೋ ಅಂದುಕೊಂಡೇ ಕುಳಿತಿದ್ದೆ. ದೂರದ ಊರೊಂದರ ಚಿತ್ರಣ, ಆ ಊರಲ್ಲೊಂದು ಪುಟ್ಟ ಸಂಸಾರ: ಗಂಡ (ರಂಗಾಯಣ ರಘು), ಹೆಂಡತಿ (ವೀಣಾ ಸುಂದರ್), ಮಗಳು (ಮಲ್ಲಿಕಾ - ಅನುಪಮ ಗೌಡ). ಸಾರಾಯಿ ಅಂಗಡಿಯನ್ನೇ ನೆಚ್ಚಿಕೊಂಡ ಗಂಡ, ಹೆರಿಗೆ ಮಾಡಿಸುವುದರಲ್ಲಿ ಪರಿಣಿತಳಾದ ಹೆಂಡತಿ, ಮನೆಯಲ್ಲಿನ ಬಡತನದ ಕಾರಣದಿಂದ ಇನ್ನೂ ಮದುವೆಯಾಗದ ಹಪಾಹಪಿಯ ಮಗಳು. ಪ್ರತಿ ಪಾತ್ರವನ್ನೂ ತುಂಬಾ ಗಮನವಿಟ್ಟು ಕಟ್ಟಿಕೊಡುತ್ತಾರೆ ನಿರ್ದೇಶಕರು. 

ಜುಲೈ 15, 2018

ಪಕ್ಷಿ ಪ್ರಪಂಚ: ನೀಲಿ ಮಿಂಚುಳ್ಳಿ.

ಚಿತ್ರ ೧: ಹಾರಲು ಸಿದ್ಧವಾದ ನೀಲಿ ಮಿಂಚುಳ್ಳಿ. 
ಡಾ. ಅಶೋಕ್. ಕೆ. ಆರ್ 
ನೀರಿನ ಮೂಲಗಳ ಬಳಿಯಲ್ಲಿನ ಗಿಡಗಳ ಮೇಲೆ, ಕೊಂಬೆಗಳ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ನೀಲಿ ಬಣ್ಣದ ಪಕ್ಷಿಯನ್ನು ನೀವು ಕಂಡಿರುವಿರಾದರೆ ಅದು ನೀಲಿ ಮಿಂಚುಳ್ಳಿಯೇ ಸೈ! 

ಆಂಗ್ಲ ಹೆಸರು: Common kingfisher (ಕಾಮನ್ ಕಿಂಗ್ ಫಿಷರ್), small blue kingfisher (ಸ್ಮಾಲ್ ಬ್ಲೂ ಕಿಂಗ್ ಫಿಷರ್), river kingfisher (ರಿವರ್ ಕಿಂಗ್ ಫಿಷರ್) 

ವೈಜ್ಞಾನಿಕ ಹೆಸರು: Alcedo Atthis (ಅಲ್ಕೆಡೋ ಅಥಿಸ್) 

ಪುಟ್ಟ ಕಾಲುಗಳು, ಚಿಕ್ಕ ಬಾಲ, ಡುಮ್ಮ ದೇಹ, ಉದ್ದ ಕೊಕ್ಕಿನ ಪಕ್ಷಿಯಿದು. ನಮ್ಮಲ್ಲಿ ಕಾಣಸಿಗುವ ಮಿಂಚುಳ್ಳಿಗಳಲ್ಲಿ ಇದೇ ಪುಟ್ಟದು. ಹಾಗಾಗಿ ಕಿರು ಮಿಂಚುಳ್ಳಿಯೆಂದೂ ಕರೆಯುತ್ತಾರೆ. ಬೆನ್ನು, ಬಾಲದ ಬಣ್ಣವೆಲ್ಲಾ ಪಳ ಪಳ ಹೊಳೆಯುವ ಕಡು ನೀಲಿ. ಎದೆಯ ಭಾಗ ಹೊಂಬಣ್ಣವನ್ನೊಂದಿದೆ. ನೆತ್ತಿ ನೀಲಿ ಬಣ್ಣದ್ದು, ಕಣ್ಣಿನ ಸುತ್ತ ಹೊಂಬಣ್ಣದ ಪಟ್ಟಿಯಿದೆ, ಇದರ ಹಿಂದೆ ಬಿಳಿ ಬಣ್ಣದ ಪಟ್ಟಿಯಿದೆ. ಇವುಗಳ ಕೆಳಗೆ ಮತ್ತೆ ನೀಲಿ ಬಣ್ಣದ ಪಟ್ಟಿಯಿದೆ, ಈ ನೀಲಿ ಬಣ್ಣ ಬೆನ್ನಿನ ಮೇಲೆ ಮುಂದುವರಿಯುತ್ತದೆ. ಕತ್ತಿನ ಭಾಗದಲ್ಲಿ ಕೊಂಚ ಬಿಳಿ ಬಣ್ಣವನ್ನು ಕಾಣಬಹುದು. ಕೊಕ್ಕಿನ ಬಣ್ಣ ಕಪ್ಪು.

ಜುಲೈ 14, 2018

ಕೊರಳಮಾಲೆ

ಶೈಲಾ ಶ್ರೀನಿವಾಸ್

ಎದೆಯ ಭಾವ ನುಡಿದೆ ನೀನೇ 

ಅಂದು ನನ್ನ ಶ್ಯಾಮನೇ......!

ಜಡದ ಒಳಗೂ ನುಡಿವ ವೀಣೆ

ಅಹುದೇ ನನ್ನ ಜೀವವೇ....?



ಮನದ ಮುಗಿಲಲಂದು ನಕ್ಕೆ

ಹರಿಸಿ ಹಾಲು ಹುಣ್ಣಿಮೆ....!!

ಒಡೆದ ಚೂರು ಚುಕ್ಕಿಯಾಗಿ 

ಹೊಳೆಯುವೆ ಇಂದು ಕಣ್ಣಿಗೆ..?


ಮೈತ್ರಿಯ ಲಾಭ ನಷ್ಟಗಳು! ಯಾರ್ಯಾರಿಗೆ ಎಷ್ಟೆಷ್ಟು?

ಕು.ಸ.ಮಧುಸೂದನರಂಗೇನಹಳ್ಳಿ
ಮತೀಯವಾದಿ ಬಾಜಪವನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ಮೊದಲ ಬಜೆಟ್ಟನ್ನೂ ಮಂಡಿಸಿಯಾಗಿದೆ.104 ಸ್ಥಾನಗಳನ್ನು ಗೆದ್ದೂ ಅದಿಕಾರ ಹಿಡಿಯಲಾಗದ ಹತಾಶೆಯಲ್ಲಿರುವ ಬಾಜಪ ಈ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಕರೆಯುತ್ತಿದೆ. ಹಾಗೆ ನೋಡಿದರೆ ಚುನಾವಣೋತ್ತರ ಮೈತ್ರಿಗಳ ಹಿಂದಿರುವುದು ಕೇವಲ ಅಧಿಕಾರದಾಹ ಮಾತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ!. 2006ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದ್ದ ಜನತಾದಳ ಮದ್ಯರಾತ್ರಿಯ ರಕ್ತರಹಿತ ಕ್ರಾಂತಿಯಲ್ಲಿ(ಅವತ್ತಿನ ಮಟ್ಟಿಗೆ ಕುಮಾರಸ್ವಾಮಿ ಮತ್ತು ಅವರ ಗೆಳೆಯರ ದೃಷ್ಠಿಯಲ್ಲಿ ಅದು ಕ್ರಾಂತಿಯೇ ಆಗಿತ್ತೆನ್ನಬಹುದು) ಬಾಜಪದ ಜೊತೆ ಸೇರಿ ಅಧಿಕಾರ ಹಿಡಿದಿದ್ದು ಸಹ ಅಪವಿತ್ರ ಮೈತ್ರಿಯ ಫಲವೇ ಆಗಿತ್ತೆಂಬುದನ್ನು ಬಾಜಪದ ನಾಯಕರುಗಳು ಮರೆತಂತಿದೆ. ಶಕ್ತಿ ರಾಜಕಾರಣವೇ ವಿಜೃಂಭಿಸುತ್ತಿರುವ ಇವತ್ತಿನೀ ಕಾಲಘಟ್ಟದಲ್ಲಿ ಪವಿತ್ರ ಎನ್ನುವ ಶಬ್ದ ತನ್ನ ನಿಜಾರ್ಥ ಕಳೆದುಕೊಂಡಾಗಿದೆ. ಕಳೆದ ವರ್ಷ ಗೋವಾದಲ್ಲಿ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಸ್ವತ: ಬಾಜಪವೇ ಇಂತಹ ಹಲವು ಅಪವಿತ್ರ ಮೈತ್ರಿಗಳ ರೂವಾರಿಯಾಗಿದ್ದನ್ನು ಬಾಜಪದ ನಾಯಕರಿಗೆ ನಾವೇನು ನೆನಪು ಮಾಡಿಕೊಡುವ ಅಗತ್ಯವಿಲ್ಲ.

ಇರಲಿ, ಈ ಮೈತ್ರಿ ಇಲ್ಲಿಗೆ ಮುಗಿಯುವುದಿಲ್ಲ, ಬದಲಿಗೆ ಮುಂದಿನ 2019ರ ಲೋಕಸಭಾ ಚುನಾವಣೆಗಳಿಗೂ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಸರಕಾರದಲ್ಲಿ ಆಂತರಿಕವಾಗಿ ಮತ್ತು ಬಹಿರಂಗವಾಗಿ ಭಿನ್ನಮತೀಯ ಚಟುವಟಿಕೆಗಳು ನಡೆಯ ತೊಡಗಿದ್ದು ಸರಕಾರದ ಸ್ಥಿರತೆಯ ಬಗ್ಗೆಯೇ ಅನುಮಾನ ಹುಟ್ಟಿದೆ. ಸಚಿವ ಸ್ಥಾನ ಹಂಚಿಕೆ, ಖಾತಿಗಳ ಹಂಚಿಕೆ, ನಿಗಮ ಮಂಡಳಿಗಳಿಗೆ ಮಾಡಬೇಕಿರುವ ನೇಮಕಾತಿಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಬಹುಶ: ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಗೆ ಕಂಟಕವಾಗಬಹುದಾದಷ್ಟು ಭಿನ್ನಮತೀಯ ಚಟುವಟಿಕೆಗಳು ತಲೆ ಎತ್ತುವುದರಲ್ಲಿ ಸಂಶಯವಿಲ್ಲ.

ಬದುಕು

ಪ್ರವೀಣಕುಮಾರ್.ಗೋಣಿ

ಸಾವಿರ ತಪ್ಪುಗಳ ನಂತರವೂ 

ಮತ್ತದೇ ಪ್ರೀತಿಯಿಂದ ಪೊರೆದು 

ಬಿಗಿದಪ್ಪುವ ತಾಯಿಯಂತಹುದ್ದು ಈ ಬದುಕು !


ಎಲ್ಲಿಂದಾದರೂ ಆರಂಭಿಸಲು 

ಸಾಧ್ಯವಾಗುವಂತಹುದ್ದು 

ಅಸಾಧ್ಯತೆಗಳನ್ನ ಮೀರಲು 

ಅವಕಾಶಗಳ ಬೀಜಕ್ಕೆ ಸತುವೊದಗಿಸುವ 

ಜೀವಸತ್ವದಂತಹುದ್ದು ಈ ಬದುಕು !

ಜುಲೈ 10, 2018

ಅರವಿಂದ್ ಕೇಜ್ರೀವಾಲ್ ವರ್ಸಸ್ ನರೇಂದ್ರಮೋದಿ!

ಸಾಂಧರ್ಬಿಕ ಚಿತ್ರ. ಮೂಲ: ಡಿ.ಏನ್.ಎ ಇಂಡಿಯಾ 
ಕು.ಸ.ಮಧುಸೂದನ ರಂಗೇನಹಳ್ಳಿ 
ನ್ಯಾಯಾಲಯಗಳ ಮದ್ಯಪ್ರವೇಶಗಳ ನಂತರವೂ ದೆಹಲಿಯ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಶ್ರೀ ಕೇಜ್ರೀವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ (ಇವರ ಹಿಂದಿರುವುದು ಅದೇ ದೆಹಲಿಯ ಗದ್ದುಗೆ ಹಿಡಿದಿರುವ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೇಂದ್ರಸರಕಾರ) ನಡುವಿನ ಜಟಾಪಟಿ ಮುಗಿಯುವಂತೆ ಕಾಣುತ್ತಿಲ್ಲ. 

2015ರಲ್ಲಿ ಬಾರೀ ಬಹುಮತದೊಂದಿಗೆ ದೆಹಲಿಯಲ್ಲಿ ಅಧಿಕಾರ ಹಿಡಿದ ಶ್ರೀ ಅರವಿಂದ್ ಕೇಜ್ರೀವಾಲರು ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಅಲ್ಲಿನ ಲೆಫ್ಟಿನಂಟ್ ಗವರ್ನರ್ ಬಿಡಲೇ ಇಲ್ಲ. ಬ್ರಿಟೀಷ್ ಸಂಸದೀಯ ಪ್ರಜಾಸತ್ತೆಯಿಂದ ಎರವಲು ಪಡೆದು ನಾವು ಸ್ಥಾಪಿಸಿಕೊಂಡಿರುವ ಈ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವವರು ಸದಾ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಆಣತಿಯಂತೆ ನಡೆದುಕೊಳ್ಳುವವರೇ ಆಗಿರುತ್ತಾರೆ. ಶೀಲಾ ದೀಕ್ಷಿತ್ ಅಂತವರು ದೆಹಲಿಯ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸಮಸ್ಯೆಗಳೇನು ಎದುರಾಗಿರಲಿಲ್ಲ. ಅದಕ್ಕೆ ಕಾರಣ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಶ್ರೀಮತಿ ಶೀಲಾದೀಕ್ಷೀತರ ಕಾಂಗ್ರೆಸ್ ಪಕ್ಷವೇ. ಹೀಗಾಗಿ ಆಗ ದೆಹಲಿ ಮುಖ್ಯಮಂತ್ರಿಗಳ ಅಧಿಕಾರವನ್ನು ಕೇಂದ್ರಸರಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ನಿಯಂತ್ರಿಸಲು ಹೋಗಿರಲಿಲ್ಲ. ಆ ನಂತರವೂ ಬಾಜಪದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ದಿವಂಗತ ಶ್ರಿ ಮದನಲಾಲ್ ಖುರಾನರವರುಗಳು ಮುಖ್ಯಮಂತ್ರಿಗಳಾಗಿದ್ದಾಗಲೂ ಮುಖ್ಯಮಂತ್ರಿಗಳ ಅಧಿಕಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿರಲಿಲ್ಲ. ತನ್ಮೂಲಕ ಪ್ರಜಾಸತ್ತಾತ್ಮಕವಾಗಿ ದೆಹಲಿಯ ಜನತೆ ಆಯ್ಕೆ ಮಾಡಿದ ಸರಕಾರವೊಂದು ತನಗಿರುವ ಅದಿಕಾರಗಳ ಮಿತಿಯಲ್ಲಿಯೇ ಸುಗಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿತ್ತು.

ಜುಲೈ 8, 2018

ಪಕ್ಷಿ ಪ್ರಪಂಚ: ಕಾಡು ಮೈನಾ.

ಚಿತ್ರ 1: ಕಾಡು ಮೈನಾ 
ಡಾ. ಅಶೋಕ್. ಕೆ. ಆರ್ 
ನಾಡಿಗೆ ಹೊಂದಿಕೊಳ್ಳುತ್ತಿರುವ ಮತ್ತೊಂದು ಕಾಡು ಪಕ್ಷಿಯಿದು. ಕಾಡು ಗೊರವಂಕವೆಂದೂ ಕರೆಯಲ್ಪಡುವ ಈ ಹಕ್ಕಿ 'ಮೈನಾ' ಪಕ್ಷಿಯನ್ನೇ ಹೋಲುತ್ತದೆ, ಕೆಲವೊಂದು ವ್ಯತ್ಯಾಸಗಳಿವೆ ಅಷ್ಟೇ.
ಆಂಗ್ಲ ಹೆಸರು: - Jungle myna

ವೈಜ್ಞಾನಿಕ ಹೆಸರು: - Acridotheres fuscus
ಇನ್ನೂ ಹೆಚ್ಚಿನ ಪಕ್ಷಿಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಬೂದು - ಕಂದು ಮಿಶ್ರಿತ ಬಣ್ಣದ ದೇಹದ ಪಕ್ಷಿಯಿದು. ಎದೆಯಿಂದ ತಲೆಯ ಕಡೆಗೆ ಸಾಗಿದಂತೆ ಬಣ್ಣಗಳು ಗಾಢವಾಗುತ್ತಾ ಸಾಗಿ ತಲೆ ಪೂರ ಕಪ್ಪು ಬಣ್ಣವಾಗಿ ಕಾಣಿಸುತ್ತದೆ. ನೀಟಾಗಿ ಕ್ರಾಪು ತೆಗೆದಂತೆ ಪುಟ್ಟ ಕಪ್ಪು ಕಿರೀಟವಿದೆ. ಕೊಕ್ಕಿನ ಮುಂದರ್ಧ ಹಳದಿ ಬಣ್ಣವಿದ್ದರೆ ಹಿಂದಿನ ಭಾಗ ಕಪ್ಪು ಬಣ್ಣವನ್ನೊಂದಿದೆ. ತೆಳು ನೀಲಿ ಬಣ್ಣದ ಕಣ್ಣು ಆಕರ್ಷಣೀಯ. ಹಳದಿ ಬಣ್ಣದ ಕಾಲುಗಳನ್ನೊಂದಿದೆ. ರೆಕ್ಕೆಗಳಲ್ಲಿ ಕಂದು - ಬೂದು ಬಣ್ಣದ ಜೊತೆಗೆ ಬಿಳಿ ಪಟ್ಟಿಗಳೂ ಇವೆ. ಆದರಿವು ಕಾಣಿಸುವುದು ಕಾಡು ಮೈನಾ ಹಾರಾಟದಲ್ಲಿದ್ದಾಗ ಮಾತ್ರ. ಬಾಲದ ತುದಿಯೂ ಬೆಳ್ಳಗಿದೆ.

ಜುಲೈ 1, 2018

ಪಕ್ಷಿ ಪ್ರಪಂಚ: ನೀಲಕಂಠ.

ಚಿತ್ರ ೧: ಹಸಿರ ನಡುವೆ ನೀಲಕಂಠ 
ಡಾ. ಅಶೋಕ್. ಕೆ. ಅರ್. 
ದಾಸ ಮಗರೆ ಎಂದೂ ಕರೆಯಲ್ಪಡುವ ಈ ವರ್ಣಮಯ ಪಕ್ಷಿ ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ಕರ್ನಾಟಕದ್ದಷ್ಟೇ ಅಲ್ಲ ಆಂಧ್ರ, ತೆಲಂಗಾಣ ಮತ್ತು ಒರಿಸ್ಸಾದ ರಾಜ್ಯಪಕ್ಷಿಯೂ ಹೌದು. 

ಆಂಗ್ಲ ಹೆಸರು: Indian roller (ಇಂಡಿಯನ್ ರೋಲರ್) (ಈ ಮುಂಚೆ ಈ ಪಕ್ಷಿಗೆ Indian blue jay - ಇಂಡಿಯನ್ ಬ್ಲೂ ಜೇ ಎಂದೂ ಕರೆಯಲಾಗುತ್ತಿತ್ತು. ತೇಜಸ್ವಿಯವರ ಹಕ್ಕಿ ಪುಕ್ಕ ಪುಸ್ತಕದಲ್ಲಿ ಬ್ಲೂ ಜೇ ಎಂಬ ಹೆಸರೇ ಇದೆ)
ವೈಜ್ಞಾನಿಕ ಹೆಸರು: Coracias benghalensis (ಕೊರಾಕಿಯಾಸ್ ಬೆಂಗಾಲೆನ್ಸಿಸ್) 

ಈ ಪಕ್ಷಿಯನ್ನೊಮ್ಮೆ ನೋಡಿದರೆ ಮರೆಯುವ ಸಾಧ್ಯತೆ ಕಡಿಮೆ. ಗುರುತಿಸುವಿಕೆಯೂ ಸುಲಭ. ನೀಲಿ ಬಣ್ಣವನ್ನು ಹೆಚ್ಚಾಗಿ ಹೊಂದಿರುವ ಪಕ್ಷಿಯಿದು. 

ಇನ್ನಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.