ಜೂನ್ 6, 2015

‘ಮ್ಯಾಗಿ’ ಮೂಡಿಸಿದ ಎಚ್ಚರ ‘ಗಣೇಶ’ನಿಂದ ಮರೆಯಾಗಿಬಿಡುವುದೇ?

ಮೂರು ದಿನಗಳಿಂದ ಮಾಧ್ಯಮಗಳಲ್ಲೆಲ್ಲಾ ಮ್ಯಾಗಿಯದ್ದೇ ಸುದ್ದಿ. ಎರಡಲ್ಲದಿದ್ದರೂ ಐದು ನಿಮಿಷಕ್ಕೆ ಪಟಾಫಟ್ ಎಂದು ತಯಾರಾಗಿ ಅಡುಗೆ ಮಾಡಿಕೊಳ್ಳಬಯಸುವ ಹಾಸ್ಟೆಲ್ ವಾಸಿಗಳಿಗೆ, ಮಕ್ಕಳಿಗೆ, ದೊಡ್ಡೋರಿಗೆಲ್ಲ ಸಾಥ್ ಕೊಟ್ಟ, ರುಚಿ ಕೊಟ್ಟ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಇರುವುದು ಬೆಳಕಿಗೆ ಬರುತ್ತಿದ್ದಂತೆ ಎಲ್ಲರೂ ಅಂಡು ಸುಟ್ಟ ಬೆಕ್ಕಿನ ಥರ ವಿಲವಿಲ ಒದ್ದಾಡುತ್ತಿದ್ದಾರೆ. ನೂಡಲ್ಸ್ ಎಂದರೆ ಮ್ಯಾಗಿ ಎಂಬಷ್ಟರ ಮಟ್ಟಿಗೆ ಬೆಳೆದ, ಬಹುತೇಕರ ಮೆಚ್ಚುಗೆಗೆ ಪಾತ್ರವಾದ ಮ್ಯಾಗಿ ಹೀಗೆ ನಮಗೆ ವಿಷವುಣ್ಣಿಸಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮ್ಯಾಗಿಯಲ್ಲಿ ವಿಷವಿದೆ ಎಂಬ ಅಂಶ ನಮ್ಮನ್ನು ಇಷ್ಟೊಂದು ವಿಹ್ವಲಗೊಳಿಸಬೇಕೆ? 

ಮ್ಯಾಗಿಯಲ್ಲಿ ಪತ್ತೆಯಾದದ್ದೇನು?
ಮ್ಯಾಗಿಯಲ್ಲಿ ದೇಹಕ್ಕೆ ಹಾನಿಯುಂಟುಮಾಡಬಲ್ಲಂಥಹ ಎರಡು ಪ್ರಮುಖ ಅಂಶಗಳು ಪತ್ತೆಯಾಗಿವೆ. ಒಂದು ಸೀಸ(lead), ಮತ್ತೊಂದು ಮೊನೋಸೋಡಿಯಮ್ ಗ್ಲುಟಾಮೇಟ್. ಸೀಸ ವಿಷಕಾರಿಯೆಂಬುದು ಸಾಬೀತಾಗಿರುವಂತದ್ದು. ದೇಹದೊಳಗೆ ಸೀಸ ಸಣ್ಣ ಪ್ರಮಾಣದಲ್ಲಿ ಸೇರುತ್ತಿದ್ದರೂ ಸಾಕು, ದೀರ್ಘಾವಧಿಯಲ್ಲಿ ತನ್ನ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಕಾರಣ ಸೀಸ ಒಮ್ಮೆ ದೇಹದೊಳಗೆ ಸೇರಿಬಿಟ್ಟರೆ ನೈಸರ್ಗಿಕವಾಗಿ ಹೊರಹಾಕುವ ಕೌಶಲ್ಯ ನಮ್ಮ ದೇಹಕ್ಕಿಲ್ಲ. ದೇಹದ ಬೆಳವಣಿಗೆಗೆ ಕ್ಯಾಲ್ಶಿಯಂ ಅತ್ಯಗತ್ಯ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ದೇಹಕ್ಕೆ ಸೀಸ ಸೇರಿದಾಗ, ನಮ್ಮಲ್ಲಿರುವ ಜೀವಕೋಶಗಳು ಕ್ಯಾಲ್ಶಿಯಂ ಬದಲಿಗೆ ಸೀಸವನ್ನು ಉಪಯೋಗಿಸಿಕೊಳ್ಳಲಾರಂಭಿಸುತ್ತದೆ. ಇದು ಅಸಹಜ ಪ್ರಕ್ರಿಯೆ, ಉಪಯೋಗಿಸಿಕೊಂಡ ಸೀಸದಿಂದ ನನಗೇ ತೊಂದರೆ ಎಂದು ಜೀವಕೋಶಕ್ಕೆ ಅರಿವಾಗುವ ವೇಳೆಗೆ ಅಪಾಯ ಸಂಭವಿಸಿಬಿಟ್ಟಿರುತ್ತದೆ. ಬೆಳೆಯುತ್ತಿರುವ ಜೀವಕೋಶಗಳ ಮೇಲೆ ಪರಿಣಾಮ ಹೆಚ್ಚಾಗಿರುವ ಕಾರಣ ಆರು ವರುಷದ ಒಳಗಿನ ಮಕ್ಕಳು ಸೀಸದ ದುಷ್ಪರಿಣಾಮಗಳಿಂದ ಪೀಡಿತರಾಗುತ್ತಾರೆ. ಮಾಂಸಖಂಡ, ಮೂಳೆ, ಮಿದುಳು, ಮೂತ್ರಪಿಂಡ, ಜಠರ – ಹೀಗೆ ಬೆಳೆಯುತ್ತಿರುವ ಎಲ್ಲಾ ಅಂಗಾಂಗಗಳೂ ಸೀಸದಿಂದ ಹಾನಿಗೊಳಗಾಗುತ್ತವೆ. ಇನ್ನು ಜೀವಕೋಶಗಳ ಬೆಳವಣಿಗೆ ಬಹುತೇಕ ನಿಂತುಹೋಗಿರುವ ದೊಡ್ಡವರಲ್ಲೂ ಸೀಸದಿಂದ ದುಷ್ಪರಿಣಾಮಗಳಿವೆ. ಮುಖ್ಯವಾಗಿ ಸಂತಾನಹೀನತೆ, ಮರೆಗುಳಿತನ, ಅಧಿಕ ರಕ್ತದೊತ್ತಡ, ಮಾಂಸಖಂಡ ಮತ್ತು ಕೀಲುಗಳ ನೋವು. 

ಇನ್ನು ಮ್ಯಾಗಿಯವರು ಲೇಬಲ್ಲಿನ ಮೇಲೆ No MSG ಎಂದು ಬರೆದುಕೊಂಡಿದ್ದರು. ಆದರೆ ನೂಡಲ್ಸಿನಲ್ಲಿ MSG ಅಂದರೆ ಮೊನೋಸೋಡಿಯಮ್ ಗ್ಲುಟಾಮೇಟ್ ಪತ್ತೆಯಾಗಿತ್ತು. ಇದೊಂದೇ ಕಾರಣ ಸಾಕು ಮ್ಯಾಗಿಯನ್ನು ಸಂಪೂರ್ಣವಾಗಿ ನಿಷೇಧಿಸಿಬಿಡಲು. ಅಂದಹಾಗೆ ಈ ಮೊನೋಸೋಡಿಯಮ್ ಗ್ಲುಟಾಮೇಟ್ ಹಾನಿಕಾರಕವಾ ಅಲ್ಲವಾ ಎಂಬುದರ ಬಗ್ಗೆಯೇ ಗೊಂದಲವಿದೆ. ಆಹಾರಕ್ಕೆ ಇದನ್ನು ಹಾಕುವುದಕ್ಕೆ ಪ್ರಮುಖ ಕಾರಣ, ರುಚಿ ಗ್ರಹಿಸುವ ನಾಲಗೆಯಲ್ಲಿರುವ ಜೀವಕೋಶಗಳನ್ನು ಉದ್ರೇಕಿಸುವ ಶಕ್ತಿ ಈ ಎಂ.ಎಸ್.ಜಿಗೆ ಇದೆ. ರುಚಿ ಉದ್ರೇಕಗೊಳ್ಳುವ ಕಾರಣ ಆ ಆಹಾರವನ್ನು ಪದೇ ಪದೇ ತಿನ್ನುವಂತಾಗುತ್ತದೆ. ಕಂಪನಿಗಳ ವ್ಯಾಪಾರ ವೃದ್ಧಿಯಾಗುತ್ತದೆ! ಇಂಥದ್ದೇ ದುಷ್ಪರಿಣಾಮಗಳನ್ನು ಎಂ.ಎಸ್.ಜಿ ಉಂಟುಮಾಡುತ್ತದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲದ ಕಾರಣ ಎಂ.ಎಸ್.ಜಿಯ ಬಳಕೆ ಇನ್ನೂ ಚಾಲ್ತಿಯಲ್ಲಿದೆ. ತಲೆನೋವು, ಎದೆಬಡಿತದ ಹೆಚ್ಚಳ, ಪಾರ್ಕಿನ್ಸನ್ ಖಾಯಿಲೆ, ಮರೆವಿನ ಆಲ್ಜೀಮರ್ಸ್ ಖಾಯಿಲೆಗಳಿಗೆಲ್ಲ ಈ ಎಂ.ಎಸ್.ಜಿ ಕಾರಣವಾಗುತ್ತದೆ ಎಂದನೇಕ ಅಧ್ಯಯನಗಳು ಹೇಳುತ್ತವಾದರೂ ಇದರಿಂದಲೇ ಆ ಖಾಯಿಲೆ ಬಂತು ಎಂದು ಹೇಳುವಷ್ಟು ನಿಖರ ದಾಖಲೆಗಳಿಲ್ಲ. 

ಭಾರತದಲ್ಲಿ ಸೀಸ ಮತ್ತು ಮೊನೋಸೋಡಿಯಮ್ ಗ್ಲುಟಾಮೇಟ್ ಮ್ಯಾಗಿಯಲ್ಲಷ್ಟೇ ಇದೆ ಎಂದುಕೊಳ್ಳುವುದು ಮೂರ್ಖತನ. ಸೀಸದ ಅಂಶ ಆಹಾರದಿಂದ ಹಿಡಿದು ಗೊಂಬೆಗಳವರೆಗೆ, ಮನೆಗೆ ಬಳಿಯುವ ಬಣ್ಣದವರೆಗೆ ಇದೆ. ಸಿದ್ಧ ಆಹಾರದಲ್ಲಷ್ಟೇ ಸೀಸವಿರಬಹುದು, ತರಕಾರಿ ತಿನ್ಕೊಂಡು ಖುಷಿಯಾಗಿರ್ತೀನಿ ಎಂದು ಬೆನ್ನುತಟ್ಟಿಕೊಳ್ಳಬೇಡಿ. ಮನೆ ಹತ್ತಿರದ ತರಕಾರಿ ಅಂಗಡಿಯಿಂದಲೇ (ಅದರಲ್ಲೂ ನಗರಗಳಲ್ಲಿ) ಒಂದಷ್ಟು ಹಸಿ ಬಟಾಣಿ ತಂದು ನೀರಿನಲ್ಲಿ ನೆನೆಸಿಡಿ. ನಿಧಾನಕ್ಕೆ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಮತ್ತಾ ಬಣ್ಣದಲ್ಲಿ ಸೀಸದ ಅಂಶವಿರುತ್ತದೆ! ಹಸಿ ಬಟಾಣಿ ಒಂದು ಉದಾಹರಣೆಯಷ್ಟೇ, ಮಾರುಕಟ್ಟೆಯಲ್ಲಿ ಫಳಫಳ ಹೊಳೆಯುವ ಎಲ್ಲವೂ ವಿಷಕಾರಿಯಾಗಿರುತ್ತದೆ. ಸೀಸವಲ್ಲದಿದ್ದರೆ ಮತ್ತೊಂದು ವಿಷದಿಂದ. ಹೊಳೆಯುವ ವಸ್ತುಗಳೆಡೆಗೇ ಆಕರ್ಷಿತರಾಗೋ ಗ್ರಾಹಕರ ತಪ್ಪಾ? ಗ್ರಾಹಕರ ದೌರ್ಬಲ್ಯವನ್ನು ತನ್ನ ಲಾಭವನ್ನಾಗಿ ಪರಿವರ್ತಿಸಿಕೊಂಡ ವ್ಯಾಪಾರಿಯ ತಪ್ಪಾ? ಇನ್ನು ಮೊನೋಸೋಡಿಯಮ್ ಗ್ಲುಟಾಮೇಟ್ ಬಗ್ಗೆ ಚರ್ಚೆಯೇ ಬೇಡ; ಮನೆಯ ಹೊರಗೆ ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಹುತೇಕ ಎಲ್ಲಾ ತಿಂಡಿಗಳಲ್ಲೂ ಅದು ಇದ್ದೇ ಇರುತ್ತದೆ!
ಭಾರತಕ್ಕೆ ಕೆ.ಎಫ್.ಸಿ, ಮೆಕ್ ಡೊನಾಲ್ಡ್ ನಂತಹ ಬಹುರಾಷ್ಟ್ರೀಯ ಕಂಪನಿಗಳ ಆಗಮನ ಶುರುವಾದಾಗ ಅದನ್ನು ವಿರೋಧಿಸಿದ ರೈತ ಸಂಘದವರು, ಎಡಪಂಥೀಯ ವಿಚಾರಧಾರೆಯವರೆಲ್ಲ ಅಪಹಾಸ್ಯಕ್ಕೀಡಾಗಿದ್ದರು. ‘ಅಭಿವೃದ್ಧಿ’ ಬೇಡ್ವಲ್ರೀ ಇವರಿಗೆ ಎಂದು ಗೇಲಿ ಮಾಡಿದ್ದರು. ಜಾಗತೀಕರಣದ ಪರಿಣಾಮವನ್ನು ತಡೆಯಲು ಯಾರಿಗೂ ಸಾಧ್ಯವಾಗದ ಕಾರಣ ಕೆ.ಎಫ್.ಸಿಯ ಜೊತೆಜೊತೆಗೆ ಹತ್ತಲವು ದಿಡೀರ್ ಆಹಾರ ತಯಾರಕರು ದಾಳಿ ಮಾಡಿದರು. ಅವುಗಳ ಜೊತೆಗೆ ಓಡೋಡಿ ಬಂದದ್ದು ಮ್ಯಾಗಿಯಂಥ ಬಾಯಿ ಚಪ್ಪರಿಸಿಯೇ ತಿನ್ನಬೇಕಾದಂತಹ ಸಿದ್ಧಾಹಾರ ಕಂಪನಿಗಳು. ಸಿದ್ಧ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬರಿವು ಇದ್ದರೂ ನಾವೆಲ್ಲ ಅದನ್ನು ತಿನ್ನುತ್ತಲೇ ಇದ್ದೆವು. ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಮ್ಯಾಗಿಯನ್ನು ಮಾಡುವುದನ್ನೇ ಬಿಟ್ಟುಬಿಡುತ್ತೇವೆ ಎಂದು ಬಡಬಡಿಸುತ್ತಿದ್ದೇವೆ. ಕೋಕೋ ಕೋಲಾ, ಪೆಪ್ಸಿಯಂತಹ ಪಾನೀಯಗಳು ವಿಷಕ್ಕೆ ಸಮ ಎಂದು ಅಧ್ಯಯನಗಳು ಸಾರಿ ಹೇಳಿದ ಮೇಲೆ ಅದನ್ನು ಕುಡಿಯುವುದನ್ನು ಬಿಟ್ಟುಬಿಟ್ಟರಾ? ಕೆಟ್ಟ ವಸ್ತುಗಳು ಬಹುಬೇಗ ಪ್ರಿಯವಾಗಿಬಿಡುವುದು ಸುಳ್ಳಲ್ಲ. ವೃತ್ತಿಯೊಂದು ಉದ್ಯಮವಾಗಿ ಲಾಭ ನಷ್ಟವೇ ಪ್ರಮುಖವಾಗಿಬಿಟ್ಟಾಗ ಲಾಬಿ ಪ್ರಾರಂಭವಾಗುತ್ತದೆ, ಲಾಭಕ್ಕಾಗಿ ತಟ್ಟೆಗೂ ವಿಷವಿಕ್ಕುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಭೂಮಿಯಲ್ಲಿ ಬೀಜವಾಕುವ ಸಮಯದಿಂದಲೇ ವಿಷದ ತಯಾರಿ ನಡೆಯುತ್ತಿದೆ ಎಂಬುದು ವಿಪರ್ಯಾಸ. ಮ್ಯಾಗಿಯನ್ನು ವಿರೋಧಿಸುವ ಸಮೂಹ ಸನ್ನಿ ಈಗ ಕಾಣುತ್ತಿದೆ. ಇದು ಎಷ್ಟು ದಿನಗಳವರೆಗೆ ಇರಬಹುದು? ಒಂದು ತಿಂಗಳು, ಎರಡು ತಿಂಗಳು? ಕೊನೇಪಕ್ಷ ಗಣೇಶನ ಹಬ್ಬದವರೆಗೆ? ಗಣೇಶನ ಹಬ್ಬ ಬಂತೆಂದರೆ ವಿಷವನ್ನೆಲ್ಲ ಮರೆತು ಸೀಸ ತುಂಬಿದ ಬಣ್ಣದಿಂದ ಅಲಂಕೃತನಾದ ಗಣಪತಿಯನ್ನು ಕಣ್ಣಲ್ಲಿ ತುಂಬಿಕೊಂಡು ಕೊನೆಗದನ್ನು ಕೆರೆಗೆ, ನಾಲೆಗೆ ಬಿಟ್ಟು ಕೃತಾರ್ಥವಾಗುವ ಕೆಲಸವನ್ನು ಮ್ಯಾಗಿ ಮೂಡಿಸಿದ ಎಚ್ಚರಿಕೆ ತಡೆಯಬಲ್ಲದೇ? ನಿಮಗಿರುವ ಅನುಮಾನೇ ನನಗೂ ಇದೆ.
ವಿಷಯ ಸಹಾಯ: WHO, Kingcounty, Mercola, Eatingwell

ಜೂನ್ 5, 2015

ಐ.ಎ.ಎಸ್ ಮಾಫಿಯ .... ಭಾಗ 3

ಎಂ.ಎನ್.ವಿಜಯಕುಮಾರ್
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್
ಭ್ರಷ್ಟ ಐ.ಎ.ಎಸ್ ಮಾಫಿಯ ನನ್ನನ್ನು ಗುರಿಯಾಗಿಸಿ, ನನ್ನ ಸಾವನ್ನು ಬಯಸುತ್ತಿದುದ್ಯಾಕೆ? 
ಒಬ್ಬ ಭ್ರಷ್ಟ ಐ.ಎ.ಎಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂಬ ಬೇಡಿಕೆಯಿಟ್ಟಾಗ ಅದರ ಗುರಿ ಇಡೀ ಐ.ಎ.ಎಸ್ ಮಾಫಿಯ ಆಗಿರುತ್ತದೆ. ತನ್ನ ಗುಂಪಿನ ಸದಸ್ಯನೊಬ್ಬ ಚಟುವಟಿಕೆಗಳ ಬಗ್ಗೆ ಬಾಯಿ ಬಿಡುವುದು ಮಾಫಿಯಾಗೆ ಒಪ್ಪಿತವಲ್ಲ. ಮಾಫಿಯಾದ ಸದಸ್ಯನೊಬ್ಬನ ಭ್ರಷ್ಟಾಚಾರವನ್ನು ಯಾರಾದರೂ ಬಯಲಿಗೆಳೆದರೆ ಅಂಥವರ ಜೀವನವನ್ನು ಮಾಫಿಯ ಕಷ್ಟಕರವಾಗಿಸುತ್ತದೆ, ಅಷ್ಟೇ ಅಲ್ಲ ಯಾವ ಮಟ್ಟದ ತೊಂದರೆಯನ್ನು ನೀಡಲೂ ತಯಾರಾಗಿಬಿಡುತ್ತದೆ; ಒಮ್ಮೊಮ್ಮೆ ಜೀವವನ್ನೇ ತೆಗೆದುಬಿಡುತ್ತದೆ. 
ನನ್ನ ಮೇಲೆ ನಡೆದ ಹಲ್ಲೆಗಳ ವಿರುದ್ಧ ಕೊಟ್ಟ ದೂರುಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಯಿತು. ಕೆಲವೊಂದು ವಿವರಗಳು ಈ ಕೆಳಗಿನ ಕೊಂಡಿಗಳಲ್ಲಿದೆ: 

http://depenq.com/PRESSRELEASE/MAFIAS.pdf 
http://depenq.com/PRESSRELEASE/MONNAPPA/SENGUPTA122JAN07.pdf 
http://depenq.com/PRESSRELEASE/MONNAPPA/SENGUPTA15may07.pdf 
http://depenq.com/PRESSRELEASE/SENGUPTA19JUn07.pdf 
http://depenq.com/PRESSRELEASE/MONNAPPA/SENGUPTA28SEP07.pdf 
http://depenq.com/PRESSRELEASE/MONNAPPA/SENGUPTA19DECEMBER07.pdf 
http://depenq.com/PRESSRELEASE/MONNAPPA/SENGUPTA4FEB08.pdf 
http://depenq.com/PRESSRELEASE/MONNAPPA/SENGUPTA5FEB11.pdf 
http://depenq.com/PRESSRELEASE/MNVtoPRESIDENT6MAR12.pdf 

ಸರಕಾರದ ಭ್ರಷ್ಟತೆ ವಿರುದ್ಧ ನಡೆಸಿದ ಹೋರಾಟದ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲು 2009ರಲ್ಲಿ ಸರಕಾರದಿಂದ ಅನುಮತಿ ದೊರೆಯಿತು. 

2007ರಲ್ಲಿ ಪಿ.ಬಿ.ಮಹಿಷಿಯವರ ವಿರುದ್ಧ ಲೋಕಾಯುಕ್ತರಲ್ಲಿ ದೂರು ನೀಡಿದ್ದೆ. ತಿರುಗೇಟು ನೀಡುವವರಂತೆ ನನಗೆ ನೋಟೀಸಿನ ಮೇಲೆ ನೋಟೀಸು ನೀಡಲಾಯಿತು, ಬೆಳಗಾವಿಗೆ ಹೋಗುವಂತೆ ಒತ್ತಾಯಿಸಲಾಯಿತು. ನನ್ನ ಯಾವ ವಿವರಣೆಯನ್ನೂ ಅವರು ಒಪ್ಪಲಿಲ್ಲ. ಡಿಸೆಂಬರ್ 2007ರ ಐದನೇ ತಾರೀಖಿನಂದು, ರಾಷ್ಟ್ರಪತಿ ಆಡಳಿತದಲ್ಲಿದ್ದ ಕರ್ನಾಟಕದ ರಾಜ್ಯಪಾಲರಿಗೆ ಸಲಹೆಗಾರರಾಗಿದ್ದ ಎಸ್. ಕೃಷ್ಣ ಕುಮಾರ್ ಈ ರೀತಿ ಬರೆದರು: 

"ಕ್ರಮ ತೆಗೆದುಕೊಳ್ಳುವುದು (ವಿಜಯಕುಮಾರರ ವಿರುದ್ಧ) ಸರಿಯಾದ ಮಾರ್ಗವೆಂದು ನನಗನ್ನಿಸುವುದಿಲ್ಲ. ವಿವರಗಳು ಜಾಳುಜಾಳಾಗಿದ್ದು ಇಂಥದ್ದೇ ಒಂದು ತೀರ್ಪಿಗೆ ಬಂದು ಕ್ರಮ ತೆಗೆದುಕೊಳ್ಳುವುದು ಕಷ್ಟ. ಅಧಿಕಾರಿಯನ್ನು ವರ್ಗ ಮಾಡುವುದೇ ಉತ್ತಮ ಕ್ರಮ ಮತ್ತವರಿಗೆ ಇನ್ನೂ ಸೂಕ್ತವಾದ ಕೆಲಸ ನೀಡಬೇಕು. "

ಮಾಫಿಯಾದ ಅರ್ಥಕ್ಕನುಗುಣವಾಗಿ, ಭ್ರಷ್ಟ ಅಧಿಕಾರಿಗಳು ಕಾನೂನಿನ ಹಿರಿಯ ಅಧಿಕಾರಿಯ ನಿರ್ಧಾರವನ್ನು ಮೂಲೆಗುಂಪು ಮಾಡಿದರು. ಪಿ.ಬಿ.ಮಹಿಷಿಯವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಅವರೇ ನ್ಯಾಯಾಧೀಶನ ಸ್ಥಾನದಲ್ಲಿದ್ದ ಕೇಸಿನಲ್ಲಿ ಅವರೇ ಸಾಕ್ಷಿದಾರರಾಗಿಬಿಟ್ಟರು! ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲು ನಿರ್ಧರಿಸಿರುವವರು ಮಾತ್ರ ನನ್ನ ಮೇಲೆ ಕೇಸು ಹಾಕಲು ಸಾಧ್ಯ ಎಂದು ಖಡಾಖಂಡಿತವಾಗಿ ತಿಳಿಸಿದೆ. ಈ ಮಧ್ಯೆ ನನ್ನ ಪತ್ನಿಯಿಂದ ಪಿ.ಬಿ.ಮಹಿಷಿಯವರ ಭ್ರಷ್ಟ ಚಟುವಟಿಕೆಗಳು ಸಾರ್ವಜನಿಕವಾಗಿದ್ದವು. ಮಹಿಷಿಯವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯಲಾಯಿತು. ಮಹಿಷಿಯವರ ವಿಚಾರಣೆಯನ್ನಾಧರಿಸಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕಾರ್ಯಸಾಧುವಲ್ಲ ಎಂದು ನಂತರ ಮುಖ್ಯ ಕಾರ್ಯದರ್ಶಿಯಾದ ಸುಧಾಕರ್ ರಾವ್ ರವರಿಗೆ ತಿಳಿದಿತ್ತು. ಡಿ.ಪಿ.ಎ.ಆರ್ ನಲ್ಲಿದ್ದ ಪಿ.ಬಿ.ಮಹಿಷಿಯವರಿಗೆ ವಿಧೇಯರಾಗಿದ್ದ ಅಧಿಕಾರಿಗಳು ನನ್ನ ವಿರುದ್ಧ ವಿಚಾರಣೆ ನಡೆಸಬಲ್ಲ ಅಧಿಕಾರಿಯ ಹುಡುಕಾಟದಲ್ಲಿದ್ದರು; ಒಬ್ಬರೂ ಸಿಗಲಿಲ್ಲ. ಅಹಮದಾಬಾದಿನ ಐ.ಐ.ಎಮ್ ನಲ್ಲಿ ‘ಆಡಳಿತದಲ್ಲಿ ಸೀಟಿಯೂದುಗರ ಪಾತ್ರದ’ ಬಗ್ಗೆ ದೇಶದ ವಿವಿದೆಡೆಯಿಂದ ಬಂದಿದ್ದ ನೂರಕ್ಕೂ ಹೆಚ್ಚು ಐ.ಎ.ಎಸ್ ಅಧಿಕಾರಿಗಳಿಗೆ ವಿವರ ನೀಡಿದೆ. ಆಗ ಅನೇಕರು ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟವನ್ನು ಪುಸ್ತಕರೂಪದಲ್ಲಿ ತರುವಂತೆ ಒತ್ತಾಯಿಸಿದರು. ಸರಕಾರಕ್ಕೆ ಅನುಮತಿಗಾಗಿ ಕೇಳಿಕೊಂಡಾಗ, ಸುಧಾಕರ್ ರಾವ್ ಪುಸ್ತಕ ಬರೆಯಲು ಅನುಮತಿ ನೀಡಿದರು. 

http://depenq.com/PRESSRELEASE/bookpermission17mar09.pdf 

ಭ್ರಷ್ಟ ಐ.ಎ.ಎಸ್ ಮಾಫಿಯಾದ ಭಾಗವಾದವರಿಗಿರುವ ಲಾಭಗಳು. 

1. ಸಾರ್ವಜನಿಕ ಆಸ್ತಿ ಮತ್ತು ಹಣವನ್ನು ಲೂಟಿ ಮಾಡುವವರಿಗೆ ಎಲ್ಲಾ ಹಂತದಲ್ಲೂ ರಕ್ಷಣೆ. 

2. ಇತರೆ ರಾಜ್ಯಗಳಲ್ಲಿ ಪ್ರಾಮಾಣಿಕತೆಯ ಮುಖವಾಡ ಧರಿಸಿರುವ ಅಧಿಕಾರಿಗಳು ನಿಮ್ಮ ಪರವಾಗಿ ಲಂಚವನ್ನು ಸ್ವೀಕರಿಸುತ್ತಾರೆ. ನೀವೂ ಕೂಡ ಪ್ರಾಮಾಣಿಕತೆಯ ಸೋಗು ಧರಿಸಿ ಅವರ ಪರವಾಗಿ ಲಂಚ ಸ್ವೀಕರಿಸಬಹುದು. 

3. ಇತರೆ ರಾಜ್ಯದ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಲು ನಿಮಗೆ ಸಹಕರಿಸುತ್ತಾರೆ. 

4. ಐ.ಎ.ಎಸ್ ಅಧಿಕಾರಿಯೊಬ್ಬರ ಭ್ರಷ್ಟತೆ ಹೊರಬಿದ್ದಾಗ, ಐ.ಎ.ಎಸ್ ಅಧಿಕಾರಿಗಳ ಸಂಘವು ಸಾಧ್ಯವಾದ ಎಲ್ಲಾ ರೀತಿಯಲ್ಲೂ ಭ್ರಷ್ಟರಿಗೆ ಸಹಕಾರ ನೀಡುತ್ತದೆ. ಭ್ರಷ್ಟರ ಪರವಾಗಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತದೆ. ಅದೇ ಒಬ್ಬ ಪ್ರಾಮಾಣಿಕ ಅಧಿಕಾರಿ ಸತ್ಯವನ್ನು ಜನರ ಮುಂದಿಡಲು ತಾನೇ ಮಾಧ್ಯಮದ ಮುಂದೆ ಬರಬೇಕು. 

5. ಪ್ರಾಮಾಣಿಕ ಅಧಿಕಾರಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆದಾಗ ಅಥವಾ ಹತ್ಯೆಯೇ ನಡೆದಾಗಲೂ ಕೂಡ ಐ.ಎ.ಎಸ್ ಅಧಿಕಾರಿಗಳ ಸಂಘ ಅಂಥ ಘಟನೆಗಳನ್ನು ಖಂಡಿಸುವ ನಿರ್ಣಯ ತೆಗೆದುಕೊಳ್ಳುವುದಿಲ್ಲ. 

ನಮ್ಮನ್ನು ಪ್ರಶ್ನಿಸದೆ ನಮ್ಮ ಜೊತೆ ಹೆಜ್ಜೆ ಹಾಕಲು ಒಪ್ಪಿದರೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತೇವೆ! 

ಭಾರತದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮತ್ತನೇಕ ಪ್ರಮುಖರ ಹೆಸರುಗಳನ್ನು ಉಪಯೋಗಿಸಿ ಹಣವನ್ನು ದರೋಡೆ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಒಂದು ಪತ್ರಿಕಾ ಹೇಳಿಕೆಯಿದು 

http://depenq.com/PRESSRELEASE/MENTOR.pdf 

ಮಾಫಿಯ ದುರುಪಯೋಗಪಡಿಸಿಕೊಂಡ ಕೆಲವು ಹೆಸರುಗಳನ್ನು ಕೆಳಗೆ ನೀಡುತ್ತಿದ್ದೇನೆ 

ಕನಕಸೇನ್ ದೇಕ, ಸುನಿಲ್ ಭಾರತಿ ಮಿಟ್ಟಲ್, ಡಾ.ಎಂ.ವೀರಪ್ಪ ಮೊಯ್ಲಿ, ಭ್ರಜೇಶ್ ಮಿಶ್ರಾ, ಡಾ.ಸಿ.ರಂಗರಾಜನ್, ಮೇಧಾ ಪಾಟ್ಕರ್, ಪಿ.ಟಿ.ಉಷಾ, ಡಾ.ಪವನ್.ಕೆ.ಚಾಮ್ಲಿಂಗ್, ಪು ಲಾಲ್ ಥಾನ್ಹವಾಲ, ಕಿರೇಣ್ ರಿಜಿಜು, ಸುಂದರ್ ಲಾಲ್ ಬಹುಗುಣ, ಯಶೆ ದೋರ್ಜೆ ಥಾಂಗ್ ಚಿ, ಒಮರ್ ಅಬ್ದುಲ್ಲ, ಡಾ.ಕಿರಣ್ ಬೇಡಿ, ಜಸ್ಟೀಸ್ ಜೆ.ಎಸ್.ವರ್ಮ, ನಿತೀಶ್ ಕುಮಾರ್, ಎಂ.ಎನ್. ವಿಜಯಕುಮಾರ್, ಅಸಾಉದ್ದಿನ್ ಒವೈಸಿ, ರಾಹುಲ್ ಗಾಂಧಿ, ಮಣಿಪುರದ ಮಹಿಳೆಯರು, ಡಾ.ಪಿ.ಕೆ.ಅಯ್ಯಂಗಾರ್, ಡಾ.ಜಿ.ಮಾಧವನ್ ನಾಯರ್, ಪ್ರೊ. ಆಂಡ್ರೆ ಬೆಟೈಲಿ, ಜಿ.ಜೆ.ಜೆ.ಸಿಂಗ್, ಎನ್.ಆರ್.ನಾರಾಯಣ ಮೂರ್ತಿ.

ಜೂನ್ 3, 2015

ವಾಡಿ ಜಂಕ್ಷನ್ .... ಭಾಗ 12

wadi junction
Dr Ashok K R
ಜಯಂತಿಯ ಬಗೆಗಿನ ನೆನಪುಗಳಲ್ಲಿ ಮುಳುಗಿಹೋದವನು ಇದ್ದಕ್ಕಿದ್ದಂತೆ “ಅರೆರೆ” ಎಂದು ಉದ್ಗರಿಸಿ ಹಾಸಿಗೆಯ ಮೇಲೆ ಎದ್ದು ಕುಳಿತ. ನಿನ್ನೆ ಮತ್ತು ಇವತ್ತಿನ ನಡವಳಿಕೆಯ ಬಗ್ಗೆ ರಾಘವನಿಗೇ ನಗು ಬಂತು. ‘ಅಲ್ಲಾ ಎಲ್ರೂ ಗುಟ್ಟು ಮಾಡ್ತಾ ಇದ್ದಿರಾ ಮಕ್ಳಾ ಅಂತ ನಿನ್ನೆಯಲ್ಲಾ ಬೊಬ್ಬಿರಿದೆನಲ್ಲಾ. ನಾನು ಮಾಡಿರೋದಾದ್ರೂ ಅದೇ ತಾನೇ! ಜಯಂತಿ ಇಷ್ಟವಾಗ್ತಾಳೆ ಅಂತ ಹೇಳಿದ್ದಿದೆ; ಅವತ್ತು ಕಾಲೇಜ್ ಡೇ ದಿನ ಸೀರೆ ಉಟ್ಟು ಬಂದಿದ್ದವಳನ್ನು ನೋಡಿ ಒಂದಷ್ಟು ಹೆಚ್ಚೇ ತಲೆಕೆಡಿಸಿಕೊಂಡು ಇವರಿಗೂ ತಲೆ ತಿಂದಿದ್ದಿದೆ. ಆದರೆ ಅವಳ ಬಗ್ಗೆ ತಲೆಕೆಡಿಸಿಕೊಂಡಿದ್ದಕ್ಕೆ ಕಾರಣ – ಅವಳು ನನ್ನೊಡನೆ ಮಾತನಾಡಿದ್ದಕ್ಕೆ …. ಅಲ್ಲಲ್ಲ ನನ್ನನ್ನು ಗದರಿದ್ದಕ್ಕೆ – ಅನ್ನೋದನ್ನು ನಾನು ಕೂಡ ಮೂವರಲ್ಯಾರಿಗೂ ಹೇಳಿಲ್ಲ ಅಲ್ವ!!’ ಇಷ್ಟು ಯೋಚನೆ ಬರುತ್ತಿದ್ದಂತೆ ಬೆಳಿಗ್ಗೆಯಿಂದ ಮಗುಚಿ ಬಿದ್ದಿದ್ದ ಮನಸ್ಸು ನಿರಾಳವಾಯಿತು. ನಾನೂ ಇವರಿಂದ ವಿಷಯ ಮುಚ್ಚಿಟ್ಟಿದೀನಿ, ಎಲ್ಲವನ್ನೂ ಬಡಬಡಿಸಿಬಿಟ್ಟಿಲ್ಲ ಎಂಬುದಕ್ಕೆ ಸಮಾಧಾನವಾಯಿತು. ಇದರೊಟ್ಟಿಗೆ ಜಯಂತಿಯ ನೆನಪುಗಳೂ ಒತ್ತರಿಸಿ ಬಂದು ಉಲ್ಲಾಸ ಮೂಡಿತು. ಸಮಯ ನೋಡಿದ. ನಾಲ್ಕಕ್ಕೆ ಹತ್ತು ನಿಮಿಷವಿತ್ತು. ಬೆಳಿಗ್ಯೆಯಿಂದ ಏನೂ ಮಾಡಿರಲಿಲ್ಲ, ಏನನ್ನೂ ತಿಂದಿರಲಿಲ್ಲ. ಲಗುಬಗನೇ ಹಲ್ಲುಜ್ಜಿ ಸ್ನಾನ ಮಾಡಿ, ಟೀ ಶರ್ಟು ಪ್ಯಾಂಟು ಧರಿಸಿ ಹೊರಬಿದ್ದಾಗ ಗಡಿಯಾರ ನಾಲ್ಕು ತೋರಿಸುತ್ತಿತ್ತು. ಅಫ್ರೋಜ್ ಭಾಯ್ ಅಂಗಡಿಯ ಬಳಿಗೆ ತೆರಳಿದ. ಗೆಳೆಯರನ್ನು ಭೆಟ್ಟಿಯಾಗಲು. ಅವರಾಗಲೇ ಅಲ್ಲಿ ಸೇರಿದ್ದರು. ಮುಗುಳ್ನಗುತ್ತಾ ಅವರ ಬಳಿಗೆ ಹೋಗಿ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಾ “ನಿನ್ನೆ ನಾ ನಡೆದುಕೊಂಡ ರೀತಿಗೆ ಸಾರಿ ಕಣ್ರಪ್ಪಾ. ನಾನು ಬೆಳಿಗ್ಗೆಯಿಂದ ರೂಮಲ್ಲಿ ಯೋಚಿಸುತ್ತಾ ಮಲಗಿದ್ದೆ. ಯೋಚನೆಗಳು ಎತ್ತೆತ್ತಲೋ ಹರಿದವು. ಕೊನೆಗೆ ಹೊಳೆದದ್ದೆಂದರೆ ನಾನು ಕೂಡ ಒಂದಷ್ಟು ಮುಖ್ಯವಾದ ವಿಷಯಗಳನ್ನೇ ನಿಮ್ಮ ಬಳಿ ಹೇಳಿಲ್ಲ. ನೀವುಗಳು ಹೇಳಿದ್ದೇ ಸತ್ಯ. ತೀರ ನೂರಕ್ಕೆ ನೂರರಷ್ಟು ಎಲ್ಲಾ ವಿಷಯಗಳನ್ನು ಯಾರೊಡನೆಯೂ ಹೇಳಿಕೊಳ್ಳಲಾಗುವುದಿಲ್ಲ. ನಿಮ್ಮ ಮಾತಿಗೆ ನನ್ನದೂ ಸಂಪೂರ್ಣ ಸಹಮತವಿದೆ” ಎಂದ್ಹೇಳಿ ಮೂವರನ್ನೂ ನೋಡಿದ. ‘ಕ್ಷಮೆ ಕೇಳೋ ಅವಶ್ಯಕತೆಯೇನಿರಲಿಲ್ಲ’ ಎಂಬಂತೆ ಅವರೂ ನಕ್ಕರು.
“ಕೊನೆಗೂ ಜ್ಞಾನೋದಯ ಆಯ್ತು ಸಾಹೇಬರಿಗೆ” ಅಭಯನ ಮಾತಿಗೆ ತಲೆಯಾಡಿಸಿದ ರಾಘವ. “ಮತ್ತೆ ಜ್ಞಾನೋದಯವಾಗಿದ್ದಕ್ಕೆ ಇವತ್ತು ನಮ್ಮ ಬಿಲ್ಲನ್ನೂ ನೀನೇ ಕೊಟ್ಟುಬಿಡು” ಎಂದು ಅಭಯ ಅಂದಾಗ “ಹೋಗ್ರೋ ಬಡ್ಡೆತ್ತವ” ಎಂದು ರೇಗಿದ. ಎಲ್ಲರೂ ಮನಸಾರೆ ಜೋರಾಗಿ ನಕ್ಕರು. ತುಷಿನ್ ರಾಘವನ ಹೆಗಲ ಮೇಲೆ ಕೈಹಾಕಿದ.

* * *

“ಅವಳನ್ನ ಅವಳು ಏನಂದುಕೊಂಡುಬಿಟ್ಟಿದ್ದಾಳೆ. ಇಂಥವರನ್ನು ಎಷ್ಟು ಜನನ್ನ ನೋಡಿಲ್ಲ ನಾನು. ಅವಳ ಯೋಗ್ಯತೆಗೆ ಇಲ್ಲದಿರೋ ಕಡೆಯೆಲ್ಲಾ ಧಿಮಾಕು ಅವಳಿಗೆ. ಬಿಡಲ್ಲ ತಮ್ಮ. ಅವಳಿಗೆ ತೊಂದರೆ ಕೊಟ್ಟೇ ತೀರ್ತೀನಿ. ಗೊತ್ತಾಗಲಿ ಅವಳಿಗೆ ನಾನು ಯಾರು ಅಂತ. ನನ್ನ ನಿಜವಾದ ಮುಖ ಗೊತ್ತಿಲ್ಲ ಅವಳಿಗೆ. ಈ ಅನೂಜ್ ಅಂದ್ರೆ ಯಾರೂಂತ ತೋರಿಸ್ತೀನಿ ಅವಳಿಗೆ” ಚಿಗುರಲು ಕಷ್ಟಪಡುತ್ತಿದ್ದ ಮೀಸೆಯ ಮೇಲೆ ಕೈಯಾಡಿಸುತ್ತಾ ಕಣ್ಣನ್ನು ಕಿಟಕಿಯಿಂದಾಚೆಗೆ ಕಾಣುತ್ತಿದ್ದ ತೆಂಗಿನ ಮರದ ಮೇಲೆ ನೆಟ್ಟು ಹೇಳಿದ ಅನೂಜ್. ಅಭಯ ಇವನ ಮಾತಿಗೆ ಏನೂ ಪ್ರತಿಕ್ರಿಯಿಸದೆ ರೆಕಾರ್ಡ್ ಬರೆಯುವುದರಲ್ಲಿ ಮಗ್ನನಾಗಿದ್ದ. ಆಗಷ್ಟೇ ಮೂರು ಚಪಾತಿ, ಹಾಫ್ ರೈಸು, ಡಬಲ್ ಆಮ್ಲೆಟ್ ತಿಂದು ಬಂದಿದ್ದ ರಾಘವನಿಗೆ ಕಣ್ಣೆಳೆಯುತ್ತಿತ್ತು. ಒಂದರ್ಧ ಘಂಟೆ ಮಲಗೆ ಎರಡಕ್ಕಿರುವ ಪ್ರಾಕ್ಟಿಕಲ್ಸಿಗೆ ಹೋದರಾಯಿತು ಎಂದುಕೊಳ್ಳುತ್ತಿದ್ದ. ಅನೂಜನ ವಟಗುಟ್ಟುವಿಕೆಯ ನಡುವೆ ನಿದ್ದೆ ಹತ್ತುವುದು ಕಷ್ಟವಲ್ಲ ಅಸಾಧ್ಯವೇ ಆಗಿತ್ತು. ರಾಘವನಿಗೆ ಅನೂಜನ ಪರಿಚಯ ಅಷ್ಟಾಗಿ ಇರಲಿಲ್ಲ. ಅನೂಜ್ ಮತ್ತು ಅಭಯ್ ಪ್ರಾಕ್ಟಿಕಲ್ಸ್ ನಲ್ಲಿ ಒಟ್ಟಿಗೇ ಇರುತ್ತಿದ್ದರಾದ್ದರಿಂದ ಒಂದಷ್ಟು ಪರಿಚಯ ಬೆಳೆದಿತ್ತು. ಅನೂಜನ ಮೇಲೆ ಬರುತ್ತಿದ್ದ ಸಿಟ್ಟನ್ನು ಅಭಯನ ಕಡೆಗೆ ತಿರುಗಿಸಿದ. 

“ಅಲ್ಲಲೋ ಅಭಿ. ಇವನನ್ನು ಯಾಕೆ ಕರ್ಕೊಂಡು ಬರ್ತೀಯಾ ರೂಮಿಗೆ”. ಅಭಯ ‘ಹಿಂದೆ ಬಂದ್ರೆ ನಾನೇನೋ ಮಾಡ್ಲಿ’ ಎಂಬಂತೆ ನೋಡಿದ. ನಿಧಾನಕ್ಕೆ ತೆಂಗಿನಮರದಿಂದ ದೃಷ್ಟಿ ತೆಗೆದು ಕತ್ತು ತಿರುಗಿಸುತ್ತಾ ಟೇಬಲ್ಲಿನ ಮೇಲಿಟ್ಟಿದ್ದ ಮೂಳೆ, ಅದರ ಪಕ್ಕಕ್ಕಿದ್ದ ಎರಡು ಪುಸ್ತಕ, ಪುಸ್ತಕದ ಮೇಲಿದ್ದ ಸಿಗರೇಟ್ ಪ್ಯಾಕು, ಎಲ್ಲವನ್ನೂ ಸಾವಕಾಶವಾಗಿ ನೋಡುತ್ತಾ ರಾಘವನ ಮುಖದ ಮೇಲೆ ದೃಷ್ಟಿಯನ್ನು ಸ್ಥಿರಪಡಿಸಿದ. ಒಂದು ಕ್ಷಣ ಹಾಗೇ ದಿಟ್ಟಿಸಿ “ಲೋ ರಾಘವ ನಾನು ಬರೋದು ಇಷ್ಟವಿಲ್ಲ ಅಂದ್ರೆ ನೇರಾನೇರ ಹೇಳಿಬಿಡು” ಎಂದ ಗಂಭೀರವಾಗಿ. “ಹಂಗಲ್ಲ ಕಣೋ ಅನೂಜ್….ಅದು”. 

“ಹಂಗೂ ಇಲ್ಲ, ಹಿಂಗೂ ಇಲ್ಲ. ಬರೋದು ಇಷ್ಟವಿಲ್ಲ ಅಂತ ಗೊತ್ತು ನನಗೆ. ಆದರೆ ನೀನ್ಯಾರ್ಗುರೂ ನನಗೆ ಬರ್ಬೇಡ ಅನ್ನಕ್ಕೆ. ನೀವಿಬ್ರೂ ನನಗೆ ಕ್ಲಾಸ್ ಮೇಟ್ಸ್. ಇದು ನನ್ನ ಕ್ಲಾಸ್ ಮೇಟ್ಸ್ ರೂಮು. ಬರಬೇಡ ಅನ್ನಕ್ಕೆ ನಿನಗೆ….ನಿನಗಷ್ಟೇ ಅಲ್ಲ ನಿಮ್ಮಿಬ್ಬರಿಗೂ ಏನು ಹಕ್ಕಿದೆ?”

ಈ ಪ್ರಶ್ನೆಗೆ ರಾಘವ, ಅಭಯ ಇಬ್ಬರ ಬಳಿಯೂ ಉತ್ತರವಿರಲಿಲ್ಲ. ಸುಮ್ಮನೆ ಕುಳಿತಿದ್ದರು. ಅನೂಜನೇ ಮಾತು ಮುಂದುವರೆಸುತ್ತಾ “ಅಲ್ಲ ಅಷ್ಟಕ್ಕೂ ನನ್ನಿಂದ ಏನು ತೊಂದರೆ ಆಗಿದೆ ನಿಮಗೆ? ನಿಜ ಹೇಳ್ಬೇಕು ಅಂದ್ರೆ ನಿಮ್ಮಿಬ್ರಿಂದಾನೇ ನನಗೆ ತೊಂದರೆ. ಇಬ್ಬರೂ ಆ ಸಿಗರೇಟ್ ಹೋಗೇನಾ ಮಿಕ್ಸ್ ಪೆಟ್ರೋಲ್ ಹಾಕ್ಸಿ ಓಡೋ ಆಟೋದ ಥರ ಬಿಡ್ತೀರ. ನನಗೆ ಕೆಮ್ಮು ಕಿತ್ಕೊಂಡು ಬಂದ್ರೂ ಒಂದು ವಾರದಿಂದ ಯಾವತ್ತಾದ್ರೂ ದೂರು ಹೇಳಿದ್ದೀನಾ? ಮುಚ್ಕೊಂಡು ಹೊಗೆ ಕುಡೀತಿಲ್ವಾ? ನನ್ನಿಂದ ಏನು ತೊಂದರೆ ಆಯ್ತು ಹೇಳು” 

‘ಇದು ನಮ್ಮ ರೂಮೋ ಅವನದೋ’ ಎಂದು ಅನುಮಾನವಾಯಿತು ರಾಘವನಿಗೆ. ಸುತ್ತಮುತ್ತ ನೋಡಿದ. ಕಿಟಕಿಯ ಕಂಬಿಯಿಂದ ಎದುರು ಗೋಡೆಯ ಮೊಳೆಗೆ ಕಟ್ಟಿದ್ದ ನೈಲಾನ್ ಹಗ್ಗದ ಮೇಲೆ ಮುದುರಿದಂತೆ ಬಿದ್ದಿದ್ದ ಸ್ಯಾಂಟ್ರೋ ಜಾದೂ ಕಂಪನಿಯ ಕೆಂಪನೆಯ ಒಳಚಡ್ಡಿ, ಪಕ್ಕಕ್ಕೆ ಹಳದಿ ಬಣ್ಣಕ್ಕೆ ತಿರುಗಿದ್ದ ರೂಪಾ ಬನಿಯನ್ನು ‘ಇದು ನಿನ್ನದೇ ರೂಮು ಕಂದಾ’ ಎಂದು ರಾಘವನಿಗಷ್ಟೇ ಕೇಳುವಂತೆ ಚೀರಿ ಹೇಳಿತು.

“ಏನು ಸುಮ್ನೆ ಕುಳಿತ್ಬಿಟ್ಟೆ. ನನ್ನಿಂದಾದ ತೊಂದರೆ ಏನು ಅಂತಾನಾದ್ರೂ ಹೇಳು ನೋಡಾಣ” ರಾಘವನ ಮುಖದಿಂದಾಚೆಗೆ ಅನೂಜನ ದೃಷ್ಟಿ ಕದಲಲಿಲ್ಲ.

“ನೋಡನೂಜ್. ನಿನ್ನಿಂದಾಗೋ ದೊಡ್ಡ ತೊಂದರೆ ಅಂದ್ರೆ ನಿನ್ನ ಮಾತು. ಏನೂಂತ ಮಾತನಾಡ್ತೀಯೋ ಮಾರಾಯ. ನಿನ್ನೆಯಷ್ಟೇ ಅವಳನ್ನ…..ಅವಳ ಹೆಸರೇನಂದೆ”

“ಅವಳ ಹೆಸರು ಹೇಳೋದಿಕ್ಕೂ ಬೇಸರವಾಗುತ್ತೆ ನನಗೆ. ಅಮೃತ ಅಂತ”

“ಹ್ಞಾ ಅಮೃತ. ನಿನ್ನೆಯಷ್ಟೇ ಅವಳನ್ನ ಸಿಕ್ಕಾಪಟ್ಟೆ ಹೊಗಳುತ್ತಿದ್ದೆ. ಅವಳು ತುಂಬಾ ಒಳ್ಳೆಯವಳು. ನೋಡೋದಿಕ್ಕಂತೂ ಥೇಟ್ ದೇವತೆ; ನಕ್ಕಾಗ ಕೆನ್ನೆಯಲ್ಲಿ ಮೂಡೋ ಪುಟ್ಟ ಪುಟ್ಟ ಗುಳಿ ನೋಡಿಬಿಟ್ಟರಂತೂ ಮುಗಿದೇ ಹೋಯಿತು. ಆ ಗುಳೀಲೇ ಮುಳುಗಿ ಸತ್ತುಬಿಡೋಣಾಂತ ಅನ್ನಿಸುತ್ತೆ. ಒಂಚೂರು ಅಹಂಕಾರವಿಲ್ಲ ಹುಡುಗಿಗೆ. ಇದರೊಟ್ಟಿಗೆ ಇನ್ನೂ ಏನೇನೋ ಹೇಳ್ದೆ. ನಾನೂ ಕೇಳ್ದೆ. ಇವತ್ತಾಗಲೇ ಪೂರ್ತಾ ಉಲ್ಟಾ ಮಾತನಾಡ್ತಿದ್ದೀಯ. ಇದನ್ನೂ ಕೇಳೋ ಕರ್ಮ ಏನಿದೆ ನಮಗೆ. ನಿನ್ನ ಹುಚ್ಚುಚ್ಚು ಮಾತುಗಳಿಂದ ನಮಗೆಷ್ಟು ಬೇಸರವಾಗುತ್ತೆ ಅನ್ನೋದನ್ನಾದ್ರೂ ಯೋಚಿಸಬಾರದಾ ನೀನು” ಇಷ್ಟು ಹೇಳಿ ಅಭಯನ ಕಡೆಗೆ ನೋಡಿದ. ಅವನು ರೆಕಾರ್ಡಿನಿಂದ ತಲೆ ಮೇಲೆತ್ತಿರಲಿಲ್ಲ. ಅನೂಜನೂ ಮಾತನಾಡದೆ ಸುಮ್ಮನಿದ್ದ. ಕೈಗಡಿಯಾರದ ಕಡೆ ಕಣ್ಣಾಡಿಸಿದ. ಎರಡಕ್ಕೆ ಐದು ನಿಮಿಷವಿತ್ತು. “ಕಾಲೇಜಿಗೆ ಟೈಮಾಯ್ತು ನಡೀರಿ” ಅಂದ. ಹೊರಟರು. ದಾರಿಯಲ್ಲಿ ಯಾರೂ ಮಾತನಾಡಲಿಲ್ಲ. ಅಭಯ ಒಳಗೊಳಗೇ ನಗುತ್ತಿದ್ದ. ತಮ್ಮ ತಮ್ಮ ಪ್ರಾಕ್ಟಿಕಲ್ಸಿಗೆ ಹೆಜ್ಜೆ ಹಾಕುವ ಮೊದಲು ಅನೂಜ್ ರಾಘವನ ಕಡೆ ನೋಡಿ “ನೋಡು ರಾಘವ ಮಾತನಾಡೋದು ನನ್ನ ಹಕ್ಕು. ಅದರಿಂದ ನಿಮಗೆ ಬೇಸರವಾಗುತ್ತೆ ಅಂದ್ರೆ ಅದು ನಿಮ್ಮಗಳ ಸಮಸ್ಯೇನೆ ಹೊರತು ನನ್ನದಲ್ಲ. ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಬೇಕು” ಗಂಭೀರವಾಗಿ ಹೇಳಿದ. ಅವನ ಗಾಂಭೀರ್ಯವನ್ನು ನೋಡಿ ರಾಘವನಿಗೆ ನಗು ತಡೆಯಲಾಗಲಿಲ್ಲ. “ಥೂ ಹಲ್ಕಾ ನನ್ಮಗನೇ. ಉದ್ಧಾರವಾಗಲ್ಲ ನೀನು. ಬರ್ತೀನಿ ಟೈಮಾಯ್ತು. ನಾಳೆ ಜಗಳವಾಡೋಣ” ಎಂದ್ಹೇಳಿ ನಗುತ್ತಾ ಲ್ಯಾಬಿನ ಕಡೆಗೆ ಹೊರಟ.

ಜೂನ್ 2, 2015

ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

malur lake, channapatna
ಮಳೂರು ಕೆರೆಗೆ ನೀರು ಹರಿಸುತ್ತಿರುವ ದೃಶ್ಯ
ಸಿ.ಪಿ. ಯೋಗೇಶ್ವರ್ ಮೊದಲು ಖ್ಯಾತಿಗೆ ಬಂದಿದ್ದು ಸಿನಿಮಾ ತಾರೆಯಾಗಿ. ಉತ್ತರ ಧ್ರುವದಿಂ ದಕ್ಷಿಣ ದ್ರುವಕೂ, ಸೈನಿಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅದ್ಭುತ ನಟರೇನಲ್ಲ! ನಂತರ ರಾಜಕಾರಣಿಯಾಗಿ ಶಾಸಕರಾಗಿ ಚನ್ನಪಟ್ಟಣದಿಂದ ಆಯ್ಕೆಯಾಗುತ್ತಲೇ ಇದ್ದಾರೆ. ಬಹುತೇಕ ಕರ್ನಾಟಕದ ಎಲ್ಲಾ ಪಕ್ಷಗಳಿಂದಲೂ ಸ್ಪರ್ಧಿಸಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇಲ್ಲದಿದ್ದ ಸಮಾಜವಾದಿ ಪಕ್ಷದ ಸೈಕಲ್ಲನ್ನೂ ಒಮ್ಮೆ ಏರಿ ಇಳಿದಿದ್ದಾರೆ! ಮತ್ತು ಯಾವ ಪಕ್ಷದಲ್ಲಿ ನಿಂತರೂ ಗೆಲುವು ಸಾಧಿಸಿದ್ದಾರೆ, ಸಮಾಜವಾದಿ ಪಕ್ಷದಿಂದ ನಿಂತಾಗಲೂ ಗೆಲುವು ಅವರದ್ದೇ! ಭ್ರಷ್ಟಾತೀತ ವ್ಯಕ್ತಿಯಾ ಎಂದು ನೋಡಿದರೆ ಅದೂ ಇಲ್ಲ. ಸಿನಿಮಾಗಳಿಗಿಂತ ಹೆಚ್ಚು 'ಖ್ಯಾತಿ'ಯನ್ನು ಯೋಗೇಶ್ವರ್ ಪಡೆದದ್ದು ಮೆಗಾ ಸಿಟಿಯೆಂಬ ರಿಯಲ್ ಎಸ್ಟೇಟ್ ವಂಚನೆಯ ಮುಖಾಂತರ. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ ಮೆಗಾಸಿಟಿಯ ದಗಾಕೋರ ಎಂದೇ ಯೋಗೇಶ್ವರ್ ಖ್ಯಾತ! ವರುಷವಿಡೀ ಪತ್ರಿಕೆ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದೆಯೇ, ಇಷ್ಟೆಲ್ಲ ಭ್ರಷ್ಟಾಚಾರದ ಆರೋಪ ಹೊತ್ತ ಯೋಗೇಶ್ವರ್, ಪಕ್ಷದಿಂದ ಪಕ್ಷಕ್ಕೆ ಚಂಗನೆ ಹಾರುತ್ತಿದ್ದರೂ ಗೆಲುವು ಕಾಣುವುದು ಹಿಂದಿನ ಕಾರಣವೇನು? 'ನಮ್ ಜನ ಸರೀ ಇಲ್ಲ ಕಣ್ರೀ. ಇಂಥೋರ್ನೆಲ್ಲ ಗೆಲ್ಲುಸ್ತಾರೆ ನೋಡಿ' ಎಂದು ತೀರ್ಪು ಕೊಡುವ ಮೊದಲು ಚನ್ನಪಟ್ಟಣವನ್ನು ಬೇಸಿಗೆಯಲ್ಲೊಮ್ಮೆ ಸುತ್ತಬೇಕು. ಯೋಗೇಶ್ವರ್ ಗೆಲುವಿನ ರಹಸ್ಯ ತಿಳಿಯುತ್ತದೆ.
cp yogeshwar
ಸಿ.ಪಿ.ಯೋಗೇಶ್ವರ್
ಉತ್ತಮ ರಸ್ತೆ, ಅತ್ಯುತ್ತಮ ಯೋಜನೆ, ಅದೂ ಇದೂ ಎಲ್ಲವೂ ಸರಿಯೇ, ಆದರೆ ಇವೆಲ್ಲಕ್ಕಿಂತ ಮುಖ್ಯವಾದದ್ದು ಮೂಲಭೂತವಾದ ಅಂಶಗೊಳಲ್ಲೊಂದಾದ ನೀರು. ಕೈಗಾರಿಕೆಗಳ ಹೆಚ್ಚಳದ ಮಧ್ಯೆಯೂ ಕೃಷಿ ಮುಖ್ಯವಾಗಿರುವ ದೇಶವಾದ್ದರಿಂದ ನೀರಿನ ಮಹತ್ವ ಮತ್ತಷ್ಟು ಹೆಚ್ಚು. ಕಡು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾದಾಗ ಕೆರೆಗಳೆಲ್ಲ ಬತ್ತಿ ಹೋದಾಗ ಅದನ್ನು ತುಂಬಿಸುವ ವ್ಯಕ್ತಿಯನ್ನು ಭಗೀರಥನೆಂದು ತಿಳಿಯುವುದು ತಪ್ಪಲ್ಲ. ಯೋಗೇಶ್ವರ್ ಗೆಲುವಿನ ರಹಸ್ಯವೇ ಇದು. ಬೇಸಿಗೆಯ ಪ್ರಾರಂಭವಾಗುತ್ತಿದ್ದಂತೆ ಹತ್ತಿರದ ನದಿಗಳಿಂದ ಕೆರೆಗಳಿಗೆ ನೂರಿಪ್ಪತ್ತು ಹೆಚ್.ಪಿಯ ಮೋಟಾರಿನ ಸಹಾಯದೊಂದಿಗೆ ನೀರು ತುಂಬಿಸಲಾಗುತ್ತದೆ. ಊರಿನವರಿಗೆ ಕುಡಿಯುವ ನೀರು ದೊರೆಯುತ್ತದೆ, ಬೇಸಿಗೆ ಕೃಷಿಗೂ ಸಹಾಯವಾಗುತ್ತದೆ ಮತ್ತು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತದೆ. 
kanva reservoir
ಕಣ್ವಾ ಜಲಾಶಯಕ್ಕೆ ನೀರು ಹರಿದಾಗ
ಕೆರೆಗಳನ್ನೇ ತುಂಬಿಸುತ್ತಿದ್ದವರು ಈ ಸಲ ಮತ್ತಷ್ಟು ಆಸಕ್ತಿ ತೋರಿ ಬಳಲಿ ಬರಡಾಗಿ ಬೆಂಡಾಗಿ ಹೋಗಿದ್ದ ಕಣ್ವ ಜಲಾಶಯವನ್ನೂ ತುಂಬಿಸಲು ಶ್ರಮಿಸಿದ್ದಾರೆ! ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕಣ್ವಾ ಜಲಾಶಯವನ್ನು ತುಂಬಿಸಿದ್ದಾರೆ. ನೈಸರ್ಗಿಕವಾಗಿ ಬರಡಾಗುವ ನೀರಿನ ಮೂಲವನ್ನು ಕೃತಕವಾಗಿ ತುಂಬಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಮನುಷ್ಯ ಮಾಡುವ ಬಹುತೇಕ ಯಾವ ಕೆಲಸವೂ ಪರಿಸರಕ್ಕೆ ಪ್ರಕೃತಿಗೆ ಪೂರಕವಾಗಿರುವುದಿಲ್ಲ. ಕೃತಕವಾಗಿ ನೀರು ತುಂಬಿಸುವ ಪ್ರಕ್ರಿಯೆ ಕೂಡ ಪ್ರಕೃತಿಗೆ ತನ್ನದೇ ರೀತಿಯಲ್ಲಿ ಹಾನಿಯುಂಟುಮಾಡುತ್ತದೆ. ಇತರೆ ಹಾನಿಕಾರಕ ಕೆಲಸಗಳಿಗೆ ಹೋಲಿಸಿದರೆ ಇದು ಇದ್ದುದರಲ್ಲಿ ವಾಸಿ! ನೀರು ತುಂಬಿಸುವುದಕ್ಕೆ ತೋರುವ ಆಸಕ್ತಿಯನ್ನು ವರುಷದ ಇನ್ನಿತರೆ ತಿಂಗಳುಗಳಲ್ಲಿ ಅನ್ಯ ಕೆಲಸಗಳಿಗೂ ಯೋಗೇಶ್ವರ್ ತೋರಿಸಲಿ ಎನ್ನುವುದು ಜನರ ಆಶಯ.
kanva reservoir
ನೀರ್ದುಂಬಿದ ಕಣ್ವ

ಜೂನ್ 1, 2015

ಶಾಲೆಯ ಮೇಲೊಂದು ಹೊಲವ ಮಾಡಿ......

terrace garden
ವಿಯೆಟ್ನಾಮಿನ ಹೊ ಚಿ ಮಿನ್ ನಗರದ ಬಳಿ ನಿರ್ಮಿಸಲಾಗಿರುವ ಹೊಸ ಶಾಲೆ ತನ್ನ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಅದ್ಭುತ ವಿನ್ಯಾಸದ ಕಟ್ಟಡಗಳೀಗ ಅಪರೂಪವಲ್ಲವಾದರೂ ಈ ಶಾಲೆ ಗಮನ ಸೆಳೆಯಲು ಕಾರಣ ಮೂರು ಸಾವಿರದ ಎಂಟುನೂರು ಚದರ ಅಡಿಯ ಸೂರನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ! ಕೃಷಿ ಭೂಮಿಯನ್ನು ನಿರಂತರವಾಗಿ ಕೃಷಿಯೇತರ ಚಟುವಟಿಕೆಗಳಿಗೆ ಉಪಯೋಗಿಸುವುದು 'ಆಧುನಿಕ' ಜಗತ್ತೆಂದು ಕರೆದುಕೊಳ್ಳಲು ಹವಣಿಸುವ ಎಲ್ಲಾ ದೇಶಗಳಲ್ಲಿ ಕಂಡುಬರುವ ಸಾಮಾನ್ಯ ಪರಿಸ್ಥಿತಿ. ಕೃಷಿ ಮತ್ತು ಹಳ್ಳಿ ಸಮಾನಾರ್ಥಕವಾಗಿಯೇ ಉಪಯೋಗಿಸುತ್ತಿದ್ದ ಪದಗಳು. ನಗರೀಕರಣದ ಪ್ರಭಾವದಿಂದ ಹಳ್ಳಿಗಳ ವಿಸ್ತೀರ್ಣ ಮತ್ತು ತತ್ ಪರಿಣಾಮವಾಗಿ ಕೃಷಿ ಭೂಮಿಯ ವಿಸ್ತೀರ್ಣದಲ್ಲಿ ಗಾಬರಿ ಹುಟ್ಟಿಸುವಷ್ಟು ಕಡಿತವಾಗುತ್ತಿದೆ. ಇದಕ್ಕೊಂದು ಪರ್ಯಾಯವೆಂಬಂತೆ ಇತ್ತೀಚಿನ ದಿನಗಳಲ್ಲಿ ಖ್ಯಾತವಾಗುತ್ತಿರುವುದು ನಗರ ಕೃಷಿ. 
vietnam roof garden
ವಿಯೆಟ್ನಾಂ ಕೂಡ ಈ ರೀತಿಯ ಕೃಷಿ ಭೂಮಿಯ ಅವಸಾನಕ್ಕೆ ಹೊರತಾಗಿಲ್ಲ. ಕೈಗಾರಿಕೀಕರಣ ಮತ್ತು ನಗರೀಕರಣ ಪ್ರಕ್ರಿಯೆ ವೇಗ ಪಡೆಯಲಾರಂಭಿಸಿದಂತೆ ಭೂಮಿಯೊಡನೆಯ ಸಂಬಂಧವನ್ನು ಕಳೆದುಕೊಳ್ಳುವವರು ಮಕ್ಕಳು. ಭಾರತದಲ್ಲೀಗ ಮೂವತ್ತರ ಆಸುಪಾಸಿನಲ್ಲಿರುವ 'ಓದಿ' 'ಕೆಲಸ' ಹುಡುಕಿಕೊಂಡ ನಮಗೇ ಹೆಚ್ಚು ಕಡಿಮೆ ಭೂಮಿಯೊಡನೆ ಸಂಪರ್ಕ ಕಡಿದು ಹೋಗಿದೆ. ಇನ್ನು ಈಗಿನ ಮಕ್ಕಳಿಗೆ ಗಿಡದಲ್ಲಿ ಬೆಳೆಯುವುದ್ಯಾವುದು, ಮರದಲ್ಲಿ ಬೆಳೆಯುವುದ್ಯಾವುದು ಎಂಬುದರ ಅರಿವೂ ಸಿಗುತ್ತಿಲ್ಲ, ಪುಸ್ತಕಗಳಲ್ಲಿ ಗಟ್ ಹಾಕಿದ್ದು ಹೆಚ್ಚು ದಿನ ಉಳಿಯುವುದಿಲ್ಲ. ವಿಯೆಟ್ನಾಮಿನಲ್ಲೂ ಅದೇ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಗಳಿವೆ. ಓದುವ ಸಲುವಾಗಿ ನಗರದ ಮಕ್ಕಳು ಕೃಷಿಯಿಂದ ವಂಚಿತರಾಗಬಾರದೆಂಬ ಕಾರಣದಿಂದ ಇಂತಹುದೊಂದು ಅದ್ಭುತ ಶಾಲೆ ಕಟ್ಟಲಾಗಿದೆ. ಹತ್ತಿರದ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳು. ನಿಯಮಿತ ಪಾಠದ ಜೊತೆ ಜೊತೆಗೆ ಕೃಷಿಯ ಪಾಠವೂ ಇರುತ್ತದೆ ಮತ್ತಾ ಪಾಠ ತರಗತಿಯೊಳಗೆ ಸೀಮಿತವಾಗದೆ ತರಗತಿಯ ಮೇಲೆ ತಾರಸಿಯಲ್ಲಿ ಮುಂದುವರೆಯುತ್ತದೆ. 
urban farming

school garden

ನೀರಿನ ಮರುಪೂರಣ, ಸೌರ ವಿದ್ಯುತ್ ಶಕ್ತಿಯ ಬಳಕೆಗಳೆಲ್ಲವೂ ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆಗೊಳಿಸುವ ಅಂಶಗಳು. ಅವುಗಳು ಅನೇಕ ಕಡೆ ಸಾಮಾನ್ಯವಾದರೂ ಶಾಲೆಯ ತಾರಸಿಯಲ್ಲಿ ಕೃಷಿ ಕೆಲಸಕ್ಕೆ ಪ್ರೋತ್ಸಾಹ ಕೊಡುವುದು ವಿಶೇಷವೇ ಸರಿ. ಅದರ ಉದ್ದೇಶ ಪ್ರಕೃತಿ ಮತ್ತು ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ಎಂಬ ಅಂಶ ಮತ್ತಷ್ಟು ಸಂತಸ ತರುವಂತಹುದು. ನಮ್ಮಲ್ಲೂ ಇಂಥ ಶಾಲೆಗಳನ್ನು ನಿರ್ಮಿಸುವುದು ಒಳ್ಳೆಯದಲ್ಲವೇ?!
garden children
ಸುದ್ದಿಮೂಲ: John Vibes, trueactivist.com 
ಈ ಮಾಹಿತಿಯ ಅರಿವಾಗಿದ್ದು ಜಿ.ಎನ್.ನಾಗರಾಜ್ ರವರಿಂದ. ಅವರಿಗೆ ಧನ್ಯವಾದಗಳು

ಮೇ 30, 2015

ಅಸಹಾಯಕ ಆತ್ಮಗಳು - ಮಾಯಾಲೋಕದ ಮಾಯೆಯ ಬಲೆಯೊಳಗೆ

asahayaka aatmagalu
ಕು.ಸ.ಮಧುಸೂದನ್
ಅಪ್ಪ ಪ್ರೈವೇಟ್ ಕಂಪನೀಲಿ ಕೆಲಸ ಮಾಡ್ತಿದ್ದರು. ಅವರ ಸಂಬಳ ಸಾಕಾಗ್ತಾ ಇರಲಿಲ್ಲ. ಮನೆಯಲ್ಲಿದ್ದೋರು ನಾವು ಆರುಜನ. ನಾನು ನನ್ನ ತಂಗಿಯರಿಬ್ಬರು ಮತ್ತು ತಮ್ಮ. ವಾಸವಿದ್ದ ಮನೆಯೂ ಸ್ವಂತದ್ದೇನೂ ಅಲ್ಲ. ಹಾಗಾಗಿ ಅಮ್ಮ ಅಕ್ಕಪಕ್ಕದ ಹೆಂಗಸರನ್ನು ಒಟ್ಟಾಕಿಕೊಂಡು ಚೀಟಿ ವ್ಯವಹಾರ ಮಾಡ್ತಾ ಇದ್ದಳು. ನಮ್ಮ ಮನೆ ಮಟ್ಟಿಗೆ ಅಪ್ಪ ನೆಪ ಮಾತ್ರಕ್ಕೆ ಮನೆ ಯಜಮಾನನಾಗಿದ್ದ. ತಿಂಗಳ ಸಂಬಳ ತಂದು ಅಮ್ಮನ ಕೈಲಿ ಕೊಟ್ಟರೆ ಅವನ ಕೆಲಸ ಮುಗಿದು ಹೋಗ್ತಿತ್ತು. ಇನ್ನುಳಿದ ವ್ಯವಹಾರವನ್ನೆಲ್ಲ ಅಮ್ಮನೇ ನೋಡಿಕೊಳ್ತಾ ಇದ್ದಳು. ಚೀಟಿ ನಡೆಸೋದು, ಮುಂತಾದ ವ್ಯವಹಾರಗಳಿಂದ ಬರ್ತಿದ್ದ ದುಡ್ಡಲ್ಲಿ ಮಕ್ಕಳನ್ನು ಮಾತ್ರ ಅದ್ದೂರಿಯಾಗಿ ಸಾಕ್ತಾ ಇದ್ದಳು. ನಾವೆಲ್ಲರೂ ಒಳ್ಳೆಯ ಖಾಸಗಿ ಶಾಲೆಯಲ್ಲೇ ಓದ್ತಾ ಇದ್ದೆವು. ನಾನೇ ದೊಡ್ಡ ಮಗಳಾಗಿದ್ದು, ನನ್ನ ಮೊದಲ ತಂಗಿ ನನಗಿಂತ ಆರು ವರ್ಷಕ್ಕೆ ಸಣ್ಣವಳು; ಅವಳ ಹಿಂದಿನವರಿಗೆಲ್ಲ ಒಂದೊಂದು ವರ್ಷದ ಅಂತರ!

ನಿಜ ಹೇಳಬೇಕು ಅಂದರೆ ನಾನು ನೋಡೋದಿಕ್ಕೆ ಸುಂದರವಾಗಿದ್ದೆ. ಮೈಕೈ ತುಂಬಿಕೊಂಡು ಲಕ್ಷಣವಾಗಿದ್ದ ನನ್ನನ್ನು ಕಂಡರೆ ಅಮ್ಮನಿಗೆ ತುಂಬಾ ಪ್ರೀತಿ. ಮುಂದೆ ಸಂಸಾರದ ಜವಾಬ್ದಾರಿಯನ್ನು ನಾನೇ ಹೊರ್ತೀನಿ ಅನ್ನೋ ನಂಬಿಕೆಯಲ್ಲೇ ನನ್ನ ಸಾಕ್ತಾ ಇದ್ದಳು. ಆದರೆ ಅವಳ ನಿರೀಕ್ಷೆಗಳನ್ನು ಸುಳ್ಳು ಮಾಡೋ ರೀತಿಯಲ್ಲಿ ಯಾಕೊ ವಿದ್ಯೆ ನನ್ನ ತಲೆಗೆ ಹತ್ತಲೇ ಇಲ್ಲ. ನಾನೆಷ್ಟು ಕಷ್ಟಪಟ್ಟು ಓದಿದರೂ ಬರೀ ಪಾಸು ಮಾಡೋಕೆ ಮಾತ್ರ ಆಗ್ತಿತ್ತು. ಹೀಗಿರುವಾಗ ನಾನು ಪಿ.ಯು.ಸಿ.ಗೆ ಬಂದಾಗ ನಮ್ಮ ಕಾಲೇಜಿನ ಯಾವುದೋ ಸಮಾರಂಭದಲ್ಲಿ ಒಂದು ಫ್ಯಾಷನ್ ಶೋ ಇತ್ತು. ಅದರಲ್ಲಿ ನಾನೂ ಬಾಗವಹಿಸಿದ್ದೆ. ಅಮ್ಮನೇ ನನಗೆಲ್ಲ ಅಲಂಕಾರ ಮಾಡಿ ವೇದಿಕೆ ಹತ್ತಿಸಿದ್ದಳು. ಆ ಸಮಾರಂಭಕ್ಕೆ ಒಂದೆರಡು ಜಾಹಿರಾತು ಕಂಪನಿಯವರ ಪ್ರತಿನಿಧಿಗಳೂ ಬಂದಿದ್ದರು. ಅದೇನು ಪವಾಡಾನೋ ಅದರಲ್ಲಿ ನನಗೆ ಮೊದಲ ಬಹುಮಾನ ಬಂತು. ಕಾರ್ಯಕ್ರಮ ಮುಗಿದ ಮೇಲೆ ನಾನು ಜಾಹಿರಾತು ಸಂಸ್ಥೆಯೊಂದರ ಏಜೆಂಟ್ ಅಂತ ಹೇಳಿಕೊಂಡು ಬಂದ ನಡುವಯಸ್ಕನೊಬ್ಬ ನನ್ನನ್ನು, ಅಮ್ಮನನ್ನು ಪರಿಚಯ ಮಾಡಿಕೊಂಡು ನನ್ನ ಸೌಂದರ್ಯದ ಬಗ್ಗೆ ತುಂಬಾ ಹೊಗಳಿದ. ಆತನ ಕಾರಲ್ಲೇ ಮನೆಗೆ ಡ್ರಾಪ್ ಮಾಡಿದ. ಮನೆ ತಲುಪುವಷ್ಟರಲ್ಲಿ ಅವನನ್ನು ಅಮ್ಮ ತುಂಬ ನಂಬಿ ಬಿಟ್ಟಿದ್ದಳು. ಅಷ್ಟು ಚೆನ್ನಾಗಿ ನನ್ನ ಬಗ್ಗೆ ಮುಂದೆ ನಾನು ಗ್ಯಾರಂಟಿಯಾಗಿ ಒಳ್ಳೆಯ ಮಾಡೆಲ್ ಆಗುವ ಬಗ್ಗೆ ಮಾತಾಡಿದ್ದ. ಮನೆಗೆ ಬಿಟ್ಟವನು ಹೋಗುವ ಮುಂಚೆ ನಿಮ್ಮ ಮಗಳ ಭವಿಷ್ಯದ ಬಗ್ಗೆ ಚರ್ಚೆ ಮಾಡೋಕೆ ನಾನು ಒಂದು ದಿನ ನಿಮ್ಮ ಮನೆಗೆ ಬರ್ತೀನಿ ಅಂದವನು ಗೇಟಿನಿಂದ ಹಾಗೆಯೇ ಹೋಗಿಬಿಟ್ಟಿದ್ದ. ಅವತ್ತು ರಾತ್ರಿಯೆಲ್ಲ ನನಗೆ ನಾನು ಮಾಡೆಲ್ ಆದ ಹಾಗೆ ಕೈತುಂಬಾ ಸಂಪಾದಿಸಿದ ಹಾಗೆ ಕಣ್ಣು ತುಂಬಾ ಕನಸುಗಳೋ ಕನಸುಗಳು!

ಬಹುಶ: ಅಮ್ಮನೂ ಅಂತಹುದೇ ಕನಸುಗಳನ್ನ ಕಂಡಿರಬೇಕು.ಹಾಗಾಗಿ ಮಾರನೇ ದಿನ ಬರೀ ನನ್ನ ಬಹುಮಾನದ ಮತ್ತು ಹೊಗಳಿ ಮನೆಗೆ ಬಿಟ್ಟು ಹೋದವನದೇ ಮಾತು. 

ಅದೇನು ಅದೃಷ್ಟವೋ ದುರಾದೃಷ್ಟವೋ ಅದಾದ ಮೂರನೇ ದಿನಕ್ಕೆ ಅವನ ಕಾರು ನಮ್ಮ ಮನೆ ಬಂದು ನಿಂತಿತು.ನಾನು ರೂಮಿಂದ ಹೊರಗೇ ಬರಲಿಲ್ಲ. ಆದರವನ ಮಾತು ಕೇಳಿಸಿಕೊಳ್ತಾ ಇದ್ದೆ. ನನ್ನ ಸೌಂದರ್ಯದ ಬಗ್ಗೆ ಮಾತಾಡುತ್ತ ಒಂದೆರಡು ತಿಂಗಳ ತರಭೇತಿ ಸಿಕ್ಕುಬಿಟ್ಟರೆ ಅವಳು ರಾಜ್ಯದಲ್ಲೇ ದೊಡ್ಡ ಮಾಡೆಲ್ ಆಗಿಬಿಡ್ತಾಳೆ. ನೋಡಿ ನೀವು ಅವಳನ್ನು ಅದಕ್ಕೆ ಸೇರಿಸಿ ಅಂದ. ಅದಕ್ಕೆ ಅಮ್ಮ, ಅಯ್ಯೋ ಅವಳ ಕಾಲೇಜಿಗೆ ಕಳಿಸೋದೇ ಕಷ್ಟವಾಗಿದೆ. ನಾವೇನು ಅಂತಾ ಶ್ರೀಮಂತರಲ್ಲ. ತರಬೇತಿಗೆಲ್ಲ ಸೇರಿಸಿ ಖರ್ಚು ಮಾಡೋದು ಕಷ್ಟ ಅಂದಳು. ಅದಕ್ಕವನು ನೀವ್ಯಾಕೆ ದುಡ್ಡಿನ ಬಗ್ಗೆ ಯೋಚನೆ ಮಾಡ್ತೀರಾ? ಅದು ನಮ್ಮದೇ ಇನ್‍ಸ್ಟಿಟ್ಯೂಟ್ ಅಂದೆನಲ್ಲ. ನಿಮ್ಮ ಹುಡುಗಿಯ ಪ್ರತಿಭೆಗೆ ನಾನು ಅವಳಿಗೆ ಉಚಿತವಾಗಿ ತರಬೇತಿ ಕೊಡಿಸ್ತೇನೆ. ಅಷ್ಟೂ ಮಾಡಲಾರೆನಾ? ಅಂತ ಅಮ್ಮನಿಗೆ ಆಸೆ ಹುಟ್ಟಿಸಿದ. ಅಷ್ಟಾದರೂ ಅಮ್ಮ ಅವಳ ಕಾಲೇಜಿಗೆ ತೊಂದರೆಯಾಗುತ್ತಲ್ಲ ಅಂತ ರಾಗ ಎಳೆದಳು. ಅದಕ್ಕವನು ಇಲ್ಲ ಇಲ್ಲ ಅವಳ ಓದಿಗೇನು ತೊಂದರೆಯಾಗುವುದಿಲ್ಲ. ಅವಳು ಕಾಲೇಜು ಮುಗಿಸಿ ನಾಲ್ಕು ಗಂಟೆಗೆ ಬಂದರೆ ಸಾಕು. ರಾತ್ರಿ ಒಂಭತ್ತಕ್ಕೆಲ್ಲ ಮನೆ ಸೇರಬಹುದೆಂದ. ಮದ್ಯಮವರ್ಗದವರ ಆಸೆಯಿದೆಯಲ್ಲ, ಅದು ಎಂತವರನ್ನು ಪಾತಾಳಕ್ಕೆ ತಳ್ಳಿಬಿಡುತ್ತೆ ನೋಡಿ. ದುಡ್ಡಿಲ್ಲದೆ, ಕಾಲೇಜಿಗು ತೊಂದರೆಯಾಗದೆ ಉಚಿತವಾಗಿ ತರಬೇತಿ ಸಿಗುತ್ತೆ ಅಂದರೆ ಯಾರು ಬೇಡವೆನ್ನುತ್ತಾರೆ. ಮಗಳು ಇದರಲ್ಲಿ ಯಶಸ್ವಿಯಾದರೆ ಕುಟುಂಬದ ಭವಿಷ್ಯ ಉಜ್ವಲವಾಗಿ ಬಿಡುತ್ತದೆಯೆಂಬ ಆಸೆಯಿಂದ ಅಮ್ಮ ನನ್ನನ್ನೂ ಕೇಳದೆ ಆಯಿತು ನಾಳೆಯಿಂದ ಕಳಿಸುತ್ತೇನೆಂದು ಬಿಟ್ಟಳು. ಹೊರಡುವ ಮುಂಚೆ ಅವನ ಇನ್ ಸ್ಟಿಟ್ಯೂಟ್ ಅಡ್ರೆಸ್ ಕೊಟ್ಟು ನಾಳೆ ಕಳಿಸಿ ಅಂತ ಹೇಳಿ ಹೋದ.

ಸರಿ ಮಾರನೇ ದಿನ ಕಾಲೇಜು ಮುಗಿಸಿ ಮನೆಗೆ ಬರದೆ ಅಲ್ಲಿಂದಲೇ ಹೋಗುವುದೆಂದು ತೀರ್ಮಾನಿಸಿ ಅವನು ಕೊಟ್ಟ ಅಡ್ರೆಸ್ಸಿಗೆ ಹೋದೆ. ಅದೊಂದು ರೆಸಿಡೆನ್ಷಿಯಲ್ ಏರಿಯಾದಲ್ಲಿ ದೊಡ್ಡ ಬಂಗಲೆ. ಹೊರಗೆ ಮಾಡೆಲಿಂಗ್ ಮತ್ತು ನಟನಾ ತರಬೇತಿ ಕೇಂದ್ರ ಅನ್ನುವ ಮಾಸಿದ ಬೋರ್ಡ್ ಇತ್ತು. ಒಳಗೂ ಸಹ ಕಾಲೇಜಿನ ವಾತಾವರಣವೇನು ಕಂಡು ಬರಲಿಲ್ಲ. ದೊಡ್ಡ ಹಾಲಿನಲ್ಲಿ ಒಂದಷ್ಟು ಹುಡುಗ ಹುಡುಗಿಯರು ಇದ್ದರು ಅವರಲ್ಲಿ ಕೆಲವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಾ ಇದ್ದರೆ, ಉಳಿದವರು ನಾಟಕದ ರೀತಿಯ ಸಂಭಾಷಣೆಗಳನ್ನು ಹೇಳಿಕೊಂಡು ಕೂತಿದ್ದರು. ನನಗೆ ಬರುವಂತೆ ಹೇಳದವನು ಮಧ್ಯದಲ್ಲಿ ಒಂದು ಆರಾಮ ಕುರ್ಚಿಯ ಮೇಲೆ ಕಾಲು ಮೇಲೆ ಕಾಲು ಹಾಕಿ ಕೊಂಡು ಸಿಗರೇಟು ಸೇದುತ್ತಾ ಕೂತಿದ್ದ.

ನನ್ನನ್ನು ನೋಡಿದವನೇ ಬಾ ಒಳಗೆ ಆಫೀಸು ರೂಮಿಗೆ ಹೋಗಿನ ಮಾತಾಡೋಣ ಅಂತ ಒಂದು ರೂಮಿನ ಒಳಗೆ ಕರೆದುಕೊಂಡು ಹೋದ. ಅಲ್ಲಿ ಒಂದು ಫಾರಂ ಕೊಟ್ಟು ನನ್ನ ಸಹಿ ಹಾಕಲು ಹೇಳಿದ. ಯಾಕೆ ಅಂತ ಕೇಳಿದ್ದಕ್ಕೆ ಇದು ಅಡ್ಮಿಶನ್ ಅರ್ಜಿ ಅಂದ ಸರಿಯೆಂದು ಸೈನ್ ಹಾಕಿದೆ. ಎದುರಿಗೆ ಕೂರಿಸಿಕೊಂಡವನು, ನೋಡು ಇದು ಮಾಡೆಲಿಂಗ್ ಕ್ಷೇತ್ರ. ಇಲ್ಲಿ ಮಡಿವಂತಿಕೆ ಉಪಯೋಗಕ್ಕೆ ಬರಲ್ಲ. ಫ್ರೀಯಾಗಿರಬೇಕು ಬೇರೆ ಯಾರ ಹತ್ತಿರವೂ ಜಾಸ್ತಿ ಮಾತಾಡಬಾರದು. ಯಾಕೆಂದರೆ ಇಲ್ಲಿರುವ ಯಾರೂ ನಿನ್ನಷ್ಟು ಚೆನ್ನಾಗಿಲ್ಲ. ಹಾಗಾಗಿ ಅವರಿಗೆ ಅಸೂಯೆ ಇರುತ್ತೆ. ನೀನು ನನ್ನ ಸ್ಪೆಶಲ್ ಸ್ಟೂಡೆಂಟ್ ಅಂತೆಲ್ಲ ಹೇಳಿ ಹೊರಗೆ ಕರೆದು ಕೊಂಡು ಬಂದು ಒಬ್ಬ ನಡುವಯಸ್ಸಿನ ಹೆಂಗಸಿಗೆ ಇವಳಿಗೆ ತರಬೇತಿ ಶುರು ಮಾಡು ಅಂದು ಹೊರಗೆ ಹೋದ. ಅವಳು ಒಂದು ಕುರ್ಚಿಯಲ್ಲಿ ಕೂತು ನನ್ನನ್ನು ಕೂರಿಸಿಕೊಂಡು ಮಾಡೆಲ್ಲುಗಳು ಹೇಗಿರಬೇಕು ಹೇಗೆ ಡ್ರೆಸ್ ಮಾಡಬೇಕು ಹೇಗೆ ಮಾತಾಡಬೇಕು ಅನ್ನುವುದನ್ನೆಲ್ಲ ಹೇಳುತ್ತಾ ಹೋದಳು. ಮೊದಲ ದಿನವಾದ್ದರಿಂದ ಯಾವ ಪ್ರಶ್ನೆಯನ್ನೂ ಕೇಳದೆ ಅವಳ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಹೋದೆ. ಸತತವಾಗಿ ಎರಡು ಗಂಟೆ ಕೊರೆದವಳು ನಿಲ್ಲಿಸಿಈಗ ನೀನು ಇಲ್ಲಿರುವ ಯಾವ ವಿಭಾಗದಲ್ಲಾದರು ಹೋಗಿ ಏನು ಬೇಕಾದರು ಕಲಿಯಬಹುದು ಅಂದಳು. ಒಂದೂ ಗೊತ್ತಾಗದೆ ಸುಮ್ಮನೆ ಸುತ್ತಲೂ ನೋಡುತ್ತ ಕೂತೆ. ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಅವನು ಬಂದು ಬಾ, ಇವತ್ತು ಮೊದಲದಿನ ಇಷ್ಟು ಸಾಕು ನಿನ್ನನ್ನು ಮನೆಗೆ ಬಿಡುತ್ತೇನೆ ಎಂದಾಗ ನಾನು ಬೇಡ ಬಸ್ಸಲ್ಲಿ ಹೋಗುತ್ತೇನೆ ಎಂದೆ. ಆದರವನು ಇಲ್ಲ ನಿನ್ನ ಯೋಗಕ್ಷೇಮ ನನ್ನ ಜವಾಬ್ದಾರಿ, ನಿಮ್ಮ ಅಮ್ಮನಿಗೆ ಮಾತು ಕೊಟ್ಟಿದ್ದೀನಿ ಅಂತ ಒತ್ತಾಯ ಮಾಡಿ ಕಾರು ಹತ್ತಿಸಿಕೊಂಡ. ಮನೆಗೆ ಹೋಗ್ತಿದಿವಿ ಅಂದುಕೊಂಡರೆ ಕಾರು ಯಾವುದೋ ಸ್ಟಾರ್ ಹೋಟೆಲ್ಲಿಗೆ ಹೋಗಿ ನಿಲ್ತು. ಇಲ್ಲಿಗ್ಯಾಕೆ ಅಂದದ್ದಕ್ಕೆ ಕಾಫಿ ಕುಡಿದು ಹೋಗೋಣ ಅಂದ. ಅಂತಹ ಹೋಟೆಲಿನ ಒಳಗೆ ನಾನೆಂದು ಹೋಗಿರಲಿಲ್ಲ. ಒಳಗೆ ಹೋಗಿ ಫ್ಯಾಮಿಲಿ ರೂಮಿನಲ್ಲಿ ಕೂತೆವು. ಅವನು ನಾನು ಎಂದೂ ಹೆಸರೇ ಕೇಳಿರದ ಎಂತಹದೊ ತಿಂಡಿಯನ್ನು ಆರ್ಡರ ಮಾಡಿದ. ನಾನೆಷ್ಟೇ ಬೇಡವೆಂದರೂ ಅವನು ಕೇಳಲಿಲ್ಲ ಅವನು ಮಾತು ಮಾತಿಗು ನನ್ನನ್ನು ಹೊಗಳುತ್ತಲೇ ಇದ್ದ. ಕೊನೆಗೆ ರಾತ್ರಿ ಎಂಟುಗಂಟೆಗೆ ಮನೆಗೆ ಬಿಟ್ಟ. ಹೀಗೇನೇ ಸುಮಾರು ಒಂದೂವರೆ ತಿಂಗಳು ಕಳೆಯಿತು. ಅಲ್ಲಿ ಕಲಿಯುವುದು ಏನೂ ಇರಲಿಲ್ಲ ಹೋಗಿ ಕೂತು ಅವರು ಹೇಳಿದ್ದನ್ನು ಕೇಳುವುದು ಸಂಜೆ ಅವನ ಕಾರಲ್ಲಿ ವಾಪಾಸು ಬರುವುದು ಇದೇ ಆಗಿತ್ತು. ಅಮ್ಮನಿಗೆ ಹೇಳಿದರೆ ಅವರು ನಮ್ಮ ಒಳ್ಳೆಯದಕ್ಕಾಗಿ ಇಷ್ಟು ಮಾಡುವಾಗ ಹೋದರೆ ತಪ್ಪೇನಿಲ್ಲ ಹೋಗು ಅಂದುಬಿಟ್ಟಳು. ನನಗೂ ಅದರಲ್ಲಿ ತಪ್ಪೇನುಕಾಣಲಿಲ್ಲ. ಕಾರಲ್ಲಿನ ಓಡಾಟ..ದೊಡ್ಡ ಹೋಟೆಲಿನ ತಿಂಡಿ ತೀರ್ಥ, ಸದಾ ನನ್ನನ್ನೇ ಹೊಗಳುವ ಒಬ್ಬ ಗಂಡಸು ಯಾಕೋ ಅದು ಇಷ್ಟವಾಗತೊಡಗಿತ್ತು. ಅದನ್ನೇ ನೋಡಿ ಹರಯ ಅನ್ನೋದು. ಇದು ತಪ್ಪು ಅಂತ ಹೇಳಬೇಕಾದ ಅಮ್ಮ ತಾನೇ ಇದಕ್ಕೆ ಸಪೋರ್ಟ್ ಮಾಡತೊಡಗಿದ್ದಳು. ಆಮೇಲೆ ಗೊತ್ತಾಗಿದ್ದೆಂದರೆ ನಾನು ಕಾಲೇಜಿಗೆ ಹೋದ ಸಮಯದಲ್ಲಿ ಅವನು ನಮ್ಮ ಮನೆಗೆ ಬಂದು ಅಮ್ಮನನ್ನು ಬೇಟಿಯಾಗ್ತಿದ್ದ ಅತ ಅಮ್ಮನಿಗೆ ಮೋಡಿ ಮಾಡಿಬಿಟ್ಟಿದ್ದ. ಅಲ್ಲದೆ ಚೀಟಿವ್ಯವಹಾರದ ನೆಪದಲ್ಲಿ ಅವಳು ಅವನಿಂದ ಸಾವಿರಾರು ರೂಪಾಯಿಗಳನ್ನು ಪಡೆದುಬಿಟ್ಟಿದ್ದಳು. ಅವನ ಈ ತಂತ್ರವೆಲ್ಲ ನನ್ನನ್ನು ತನ್ನ ವ್ಯೂಹದೊಳಗೆ ಸೆಳೆಯುವ ತಂತ್ರವೆಂದು ಅಮ್ಮನಿಗೆ ಗೊತ್ತಿತ್ತಾ ಇಲ್ಲವಾ ನನಗಿವತ್ತಿಗೂ ಗೊತ್ತಾಗಿಲ್ಲ.

ಒಟ್ಟಿನಲ್ಲಿ ಅದು ಯಾರು ಮಾಡಿದ ಸಂಚು ಅಂತ ಹೇಳಲಿ? ಒಂದೂವರೆ ತಿಂಗಳಾದ ಮೇಲೊಂದು ದಿನ ಅವನು ನಾಳೆ ಸಂಜೆ ಮಾಡೆಲಿಂಗ್ ಜಗತ್ತಿನ ದೊಡ್ಡವರದೊಂದು ಪಾರ್ಟಿಯಿದೆ, ಅದಕ್ಕೆ ಇಬ್ಬರೂ ಹೋಗೋಣ. ನಾಳೆ ನೀನು ಕ್ಲಾಸಿಗೆ ಬರೋದು ಬೇಡ. ಮಾಡ್ರನ್ ಆಗಿ ಡ್ರೆಸ್ ಮಾಡಿಕೊಂಡು ಮನೇಲಿರು ಸಂಜೆ ಐದು ಗಂಟೆಗೆ ನಾನು ಬಂದು ಕರೆದುಕೊಂಡು ಹೋಗ್ತೀನಿ ಅಂದ. ಪಾರ್ಟಿಗಳ ಬಗ್ಗೆ ಕೇಳಿದ್ದ, ಆದರೆ ನೋಡಿರದ ನಾನು ಒಪ್ಪಿಕೊಂಡೆ. ಹೇಳಿದಂತೆ ನಾನು ಮಾರನೇ ಸಂಜೆ ಮಿನಿಸ್ಕರ್ಟ ಹಾಕಿ ರೆಡಿಯಾಗಿದ್ದೆ. ಸಂಜೆ ಬಂದವನು ಯಾವುದೋ ಒಂದು ಊರಾಚೆಯ ಫಾರ್ಮ ಹೌಸಿಗೆ ಕರೆದುಕೊಂಡು ಹೋದ. ಅಲ್ಲಿದ್ದವರೆಲ್ಲ ತುಂಬಾ ಶ್ರೀಮಂರಂತೆ ಕಾಣುತ್ತಿದ್ದರು. ಗಂಡು ಹೆಣ್ಣಗಳು ತಮಗಿಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿದ್ದರು. ಒಂದಷ್ಟು ಜನರನ್ನು ನನಗೆ ಇವಳು ನನ್ನ ಸ್ವೀಟ್ ಫ್ರೆಂಡ್ ಅಂತ ಪರಿಚಯಿಸಿಕೊಟ್ಟ. ಕತ್ತಲಾಗುತ್ತಿದ್ದಂತೆ ಎಲ್ಲರೂ ಡ್ರಿಂಕ್ಸ್ ತೆಗೆದುಕೊಳ್ಳತೊಡಗಿದರು. ಅವನೂ ತೆಗೆದುಕೊಳ್ಳತೊಡಗಿದ . ಆಮೇಲೆ ನನ್ನನ್ನು ಒಂದು ಮೂಲೆಗೆ ಕರೆದುಕೊಂಡು ಹೋಗಿ ಒಂದು ಗ್ಲಾಸನ್ನು ಕೈಗಿಟ್ಟು ಇದು ವೈನ್ ಹುಡುಗಿಯರು ಇದನ್ನೇ ಕುಡಿಯೋದು ಅಂತ ಹೇಳಿ ಬಲವಂತವಾಗಿ ಕುಡಿಸಿದ. ಮೊದಮೊದಲು ಒಗರುಒಗರಾಗಿದ್ದ ಡ್ರಿಂಕ್ಸ್ ಒಳಗೆ ಹೋದಮೇಲೆ ಯಾಕೊ ಇನ್ನೂ ಬೇಕೆನಿಸಿಬಿಟ್ಟಿತು. ಒಂದು ತೆರನಾದ ಅಮಲು ಏರ ತೊಡಗಿತು. ಅದರ ಅಮಲಲ್ಲಿ ಅವನು ನನಗೆ ಇನ್ನಷ್ಟು ಕುಡಿಸಿಬಿಟ್ಟ. ಕೊನೆಗೆ ನಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೆನೆಂಬ ಪರಿವೆಯೆ ಇಲ್ಲವಾಯಿತು. ಅದ್ಯಾವಾಗ ಪಾರ್ಟಿ ಮುಗಿಯಿತೋ ಗೊತ್ತಾಗಲಿಲ್ಲ. ಎಚ್ಚರವಾದಾಗ ಬೆಳಿಗ್ಗೆಯಾಗಿದ್ದು, ನಾವು ಫಾರ್ಮಹೌಸಿನ ಒಂದು ರೂಮಿನ ಮಂಚದ ಮೇಲೆ ಮಲಗಿದ್ದೆವು. ಕಣ್ಣು ಬಿಟ್ಟು ನೋಡಿಕೊಂಡರೆ ನನ್ನ ಮೈಮೇಲೆ ಒಂದೂ ಬಟ್ಟೆ ಇರಲಲ್ಲ. ಪಕ್ಕದಲಿ ಮಲಗಿದ್ದ ಅವನಿಗೂ ಬಟ್ಟೆಯಿರಲಿಲ್ಲ. ನನಗೆ ನಡೆದದ್ದೆಲ್ಲ ಅರ್ಥವಾಗಿ ಅಳ ತೊಡಗಿದೆ. ಅಳುವಿನ ಶಬ್ದ ಕೇಳಿ ಎಚ್ಚರವಾದ ಅವನು ರಿಲ್ಯಾಕ್ಸ್ ಮಾಡಿಕೊ ಇದೆಲ್ಲ ಈಗ ಸಹಜ ಮುಂದೆ ನೀನು ದೊಡ್ಡ ಮಾಡೆಲ್ ಆಗಬೇಕಾದವಳು ಇಂತಹದಕ್ಕೆಲ್ಲ ಹೊಂದಿಕೊಂಡು ಹೋಗಬೇಕು.ನಿಮ್ಮಮ್ಮನಿಗೆ ಎಲ್ಲ ಹೇಳಿದ್ದೇನೆ. ಸ್ನಾನ ಮುಗಿಸಿ ತಿಂಡಿತಿಂದು ಹೋಗೋಣ ಎಂದೆಲ್ಲ ಹೇಳಿ ನೀನು ಸ್ನಾನ ಮಾಡಿ ಫ್ರೆಶ್ ಆಗು ಅಂತ ರೂಮಿಂದ ಹೊರಗೆ ಹೋದ. ವಿಧಿಯಿಲ್ಲದೆ ರೂಮಲ್ಲೆ ಇದ್ದ ಅಟ್ಯಾಚ್ ಬಾತ್ ರೂಮಲ್ಲಿ ಸ್ನಾನ ಮಾಡಿ ರೆಡಿಯಾದೆ. ಇಬ್ಬರಿಗೂ ಅವನೇ ರೂಮಿಗೆ ತಿಂಡಿ ತಂದ. ಅಷ್ಟರಲ್ಲಿ ನನಗೆ ಸ್ವಲ್ಪ ದೈರ್ಯ ಬಂದಂತಾಗಿತ್ತು. ಸಾವರಿಸಿಕೊಂಡು ಎಲ್ಲರೂ ಇಲ್ಲೇ ಇದಾರ ಅಂದೆ. ಅವನು ನಗುತ್ತ ಇಲ್ಲ ಇಲ್ಲಿರೋದು ನಾನು ನೀನು ಮತ್ತು ಕೆಲಸದವನು ಮಾತ್ರ ಅಂದು ನೋಡು ರಾತ್ರಿ ನಿನ್ನ ನೋಡಿದ ಒಂದು ಕಂಪನಿಯ ಮ್ಯಾನೇಜರ್ ಹತ್ತು ಸಾವಿರ ಕೊಟ್ಟು ಅವರ ಜಾಹಿರಾತಿಗೆ ನಿನ್ನನ್ನು ಬುಕ್ ಮಾಡಿದ್ದಾರೆ, ಇನ್ನೊಬ್ಬರು ನಾಳೆ ನಿಮ್ಮ ಮನೆಗೆ ಬಂದು ಅಡ್ವಾನ್ಸ್ ಕೊಡೋದಾಗಿ ಹೇಳಿದ್ದಾರೆ ಅಂದು ಹತ್ತು ಸಾವಿರ ರೂಪಾಯಿಯ ಕಟ್ಟೊಂದನ್ನು ನನ್ನ ಕೈಗಿತ್ತ. ನನಗೋ ಆಶ್ವರ್ಯವಾಗಿ ಬಿಟ್ಟಿತು. ಅಷ್ಟು ದುಡ್ಡು ಕೊಟ್ಟಿದ್ದಾರೆಂದರೆ ನನಗಿನ್ನು ಜಾಹಿರಾತು ಲೋಕದಲ್ಲಿ ತುಂಬಾ ಕೆಲಸ ಸಿಗುತ್ತದೆ ಅಂದುಕೊಂಡು ರಾತ್ರಿಯದನ್ನೆಲ್ಲ ಮರೆತು ಬಿಟ್ಟೆ. ದುಡ್ಡಿನ ಮೋಹ ನನ್ನ ಶೀಲದ ಮೇಲಿನ ಕಾಳಜಿಯನ್ನೂ ತೊರೆಸಿಬಿಟ್ಟಿತು. ಇನ್ನೇನು ಹೊರಡುವ ಅನ್ನುವಷ್ಟರಲ್ಲಿ ಅವನು ಊಟ ಮಾಡಿ ಮದ್ಯಾಹ್ನ ಹೋಗೋಣ ಇರು ಅಂದು ನನ್ನನ್ನು ಮಂಚದಲ್ಲಿ ಕೂರಿ ತಾನೂ ಪಕ್ಕ ಬಂದು ಕೂತ. ಮತ್ತೊಮ್ಮೆ ನನ್ನ ಎಚ್ಚರದಲ್ಲಿ ಅನುಭವಿಸಿದ. ಎಲ್ಲ ಮುಗಿದ ಮೇಲೆ ಯಾಕೆ ರಾತ್ರಿ ಸಾಕಾಗಲಿಲ್ಲವೇ ಅಂದೆ. ರಾತ್ರಿ ನಿನ್ನ ಜೊತೆ ನಾನೆಲ್ಲಿ ಮಲಗಿದ್ದೆ. ಈಗ ನಿನ್ನನ್ನು ಬುಕ್ ಮಾಡಿರೋ ಅವರಿಬ್ಬರು ಮಲಗಿದ್ದರು ಅಂದ. ಒಂದು ಕ್ಷಣ ನಾನು ಶಾಕ್ ಆಗಿ ಬಿಟ್ಟೆ ಮಾತಾಗಲಿ ಅಳುವಾಗಲಿ ಬರಲಿಲ್ಲ. ನಾನು ಅದರಿಂದ ಸುದಾರಿಸಿಕೊಳ್ಳುವಷ್ಟರಲ್ಲಿ ನನ್ನ ಕೈ ಹಿಡಿದು ನೋಡು ಇದೆಲ್ಲ ಮೊದಮೊದಲು ಸಹಜ ಒಂದು ಸಾರಿ ನಿನಗೆ ಹೆಸರು ಬಂದುಬಿಟ್ಟರೆ ಆಮೇಲಿವರೆಲ್ಲ ನಿನ್ನ ಕಾಲ ಬಳಿ ಬಿದ್ದಿರುತ್ತಾರೆ. ಹೊಂದಿಕೊಂಡು ಹೋಗುಅಂದ. ಏನೋ ನೀವೊಬ್ಬರಾದರೆ ಪರವಾಗಿಲ್ಲ, ಆದರೆ ಪರಿಚಯವಿಲ್ಲದವರ ಜೊತೆಯಲ್ಲೆಲ್ಲ ಹೀಗೆ ಮಾಡೋದು ತಪ್ಪಲ್ವ ಅಂದೆ. ಅದಕ್ಕವನು ಇದು ಮೊದಲ ಸಲ ಹಾಗನ್ನಿಸುತ್ತೆ. ಮಾಡೆಲಿಂಗಿನಲ್ಲಿ ಹೆಸರು ಮಾಡಿದ ಮೇಲೆ ಸಿನಿಮಾ ಲೋಕಕ್ಕೂ ನೀನು ಹೋಗಬೇಡವಾ ಎಂದೆಲ್ಲ ಸಮಾದಾನ ಪಡಿಸಿದ. ಬಹುಶ: ನನ್ನೊಳಗೂ ಜನಪ್ರಿಯತೆಯ ಹಣದ ಮೋಹ ಇತ್ತು ಅನಿಸುತ್ತೆ. ಹು ಅಂತ ಸುಮ್ಮನಾಗಿಬಿಟ್ಟೆ. ಮದ್ಯಾಹ್ನ ವಾಪಾಸು ಹೋಗುತ್ತ ಕಾರಲ್ಲಿ ನಿನ್ನ ಅಮ್ಮನಿಗೆ ಮೊದಲೆ ನಾಳೆ ಬರುತ್ತೇವೆ ಕೆಲವು ಮೀಟಿಂಗುಗಳಿವೆ ಅಂತ ಹೇಳಿದ್ದೆ. ಆದರೆ ರಾತ್ರಿಯ ವಿಚಾರ ಏನೂ ಹೇಳಿರಲಿಲ್ಲ. ನೀನೂ ಹೇಳಬೇಡ ಎಂದ. ನಾನು ಸರಿ ಎಂದು ಸುಮ್ಮನಾಗಿಬಿಟ್ಟೆ. ಅಮ್ಮನಿಗೆ ಆ ಹತ್ತು ಸಾವಿರ ರೂಪಾಯಿ ನೋಡಿ ಖುಶಿಯೋ ಖುಶಿ. ಮತ್ತೆ ಮಾರನೇ ದಿನದಿಂದ ಮಾಮೂಲಿಯಾದ ದಿನಚರಿ ಶುರುವಾಯಿತು. ವಾರಕ್ಕೆ ಒಂದೆರಡು ದಿನವಾದರು ಜಾಹಿರಾತು ಕಂಪನಿಯ ಮಾಲೀಕರ ಜೊತೆ ಮೀಟಿಂಗ್ ಇದೆ ಅನ್ನುತ್ತ ಅಮ್ಮನಿಗೆ ಹೇಳಿ ನನ್ನನ್ನು ದೊಡ್ಡ ದೊಡ್ಡ ಸ್ಟಾರ್ ಹೋಟೆಲುಗಳಿಗೆ ಕರೆದೊಯ್ಯತೊಡಗಿದ. ನಾನು ಅವನು ಹೇಳಿದವರ ಜೊತೆ ರಾತ್ರಿ ಕಳೆದು ಬೆಳಿಗ್ಗೆ ಅವನು ಅಡ್ವಾನ್ಸ್ ಎಂದು ಕೊಡುತ್ತಿದ್ದ ದುಡ್ಡು ತಂದು ಅಮ್ಮನಿಗೆ ಕೊಡುತ್ತಿದ್ದೆ. ಒಂದೆರಡು ತಿಂಗಳಲ್ಲಿ ನನಗೆ ಇದು ಜಾಹಿರಾತಿನ ಕೆಲಸವೂ ಅಲ್ಲ, ಅಡ್ವಾನ್ಸು ಅಲ್ಲ ಎಂಬುದು ಗೊತ್ತಾಗಿ ಹೋಯಿತು. ಅವನು ನನ್ನನ್ನು ನಗರದ ಹೈಟೆಕ್ ಕಾಲ್ ಗರ್ಲ ಮಾಡಿಬಿಟ್ಟಿದ್ದ. ಅಷ್ಟು ಹೊತ್ತಿಗಾಗಲೆ ನನ್ನ ಬಳಿ ಬಂದ ಕೆಲವರ ವಿಳಾಸ ಮತ್ತು ಪೋನ್ ನಂಬರುಗಳನ್ನು ನಾನು ಪಡೆದಿದ್ದೆ. ಆರೋಗ್ಯ ಸರಿಯಿಲ್ಲವೆಂದು ಹೇಳಿ ಒಂದು ವಾರ ಮನೆಯಿಂದ ಹೊರಗೇ ಹೊಗದೆ ಒಬ್ಬಳೇ ರೂಮಲ್ಲಿ ಕೂತು ಒಂದು ಗಟ್ಟಿಯಾದ ನಿರ್ದಾರಕ್ಕೆ ಬಂದಿದ್ದೆ. ಸದ್ಯ ಅಮ್ಮನಿಗೆ ಏನನ್ನೂ ಹೇಳಬಾರದೆಂದು ತೀರ್ಮಾನಿಸಿಬಿಟ್ಟೆ.

ವಾರದ ನಂತರ ಹುಡುಕಿಬಂದವನಿಗೆ ನಯವಾಗಿಯೇ ಇನ್ನು ಮುಂದೆ ನಾನು ಬರುವುದಿಲ್ಲ, ಕರೆಯಬೇಡಿ ಅಂದು ಬಿಟ್ಟೆ. ಅವನು ಪರಿಪರಿಯಾಗಿ ಕೇಳಿಕೊಂಡ, ನಾನು ಒಪ್ಪಲಿಲ್ಲ. ಅಮ್ಮನ ಹತ್ತಿರ ಹೇಳಿಸಿದರು ನಾನು ಒಪ್ಪದೇ ಹೋದಾಗ ರೌಡಿಗಳಿಂದ ಹೊಡೆಸುತ್ತೇನೆಂದೆಲ್ಲ ಬೆದರಿಕೆ ಹಾಕಿ ಹೋದ. ಅವತ್ತು ಸಂಜೆ ಅಮ್ಮನನ್ನು ಕೂರಿಸಿಕೊಂಡು ನಾನು ಇನ್ನು ಮೇಲೆ ಯಾವನ ತರಬೇತಿ ರೆಕಮೆಂಡೇಶನ್ನನ್ನು ಕಾಯುವುದಿಲ್ಲ. ಈಗ ದಾರಿಗೊತ್ತಾಗಿದೆ. ಇಷ್ಟು ದಿನ ಹೇಗೆ ಆದಾಯ ಬರುತ್ತಿತ್ತೋ ಹಾಗೆಯೇ ಇನ್ನು ಮುಂದೆಯೂ ಬರುತ್ತದೆ. ನನ್ನನ್ನು ಫ್ರೀಯಾಗಿಬಿಡು. ಅಂದೆ. ಅವಳಿಗೆ ಎಲ್ಲವು ಗೊತ್ತಿತ್ತೇ? ಇವತ್ತಿಗು ನನಗೆ ತಿಳಿದಿಲ್ಲ. ಏನೋ ನಿನಗಿಷ್ಟಬಂದ ಹಾಗೆ ಮಾಡು ಅಂದು ಸುಮ್ಮನಾದಳು. ಯಥಾ ಪ್ರಕಾರ ನಾನು ಕಾಲೇಜಿಗೆ ಹೋಗತೊಡಗಿದೆ. ಮುಂಚಿನಂತೆ ಓದಿನಲ್ಲಿ ಆಸಕ್ತಿ ಉಳಿದಿರಲಿಲ್ಲ. ನನಗೆ ಈಗಾಗಲೆ ಗೊತ್ತಿದ್ದ ಹಳೆಯ ಸಂಪರ್ಕಗಳನ್ನು ಬಳಸಿಕೊಂಡು ಸಾಕಷ್ಟು ಜನರ ಪರಿಚಯ ಮಾಡಿಕೊಂಡೆ. ಶನಿವಾರ ಮತ್ತು ಬಾನುವಾರದಂದು ಹೊರಗೆ ಹೋಗುತ್ತಿದ್ದೆ. ಬೆಂಗಳೂರಿನಾಚೆಯ ಯಾವುದಾದರು ಊರುಗಳಲ್ಲಿ ಕರೆದುಕೊಂಡು ಹೋಗುವ ಹೈ ಫ್ರೋಫೈಲ್ ಗಿರಾಕಿಗಳಿಗೆ ಮಾತ್ರ ನಾನು ಸಿಗುತ್ತಿದ್ದೆ. ನನ್ನ ಮನೆಯ ವಿಳಾಸವಾಗಲಿ ಕಾಲೇಜಿನ ಹೆಸರಾಗಲಿ ಯಾರಿಗೂ ಹೇಳುತ್ತಿರಲಿಲ್ಲ.

ಹೀಗೆ ಆ ಕೆಲಸ ಮುಂದುವರಸಿದೆ. ಅದೇಗೊ ಪಾಸಾಗುತ್ತ ಡಿಗ್ರಿಯನ್ನೂ ಮುಗಿಸಿದೆ. ಆಮೇಲಾಮೇಲೆ ಬಹಳಷ್ಟು ರಾಜಕಾರಣಿಗಳ ಪರಿಚಯವಾಯಿತು. ಅವರೊಂದಿಗೆ ದೆಹಲಿ,ಮುಂಬೈಗಳಿಗೆಲ್ಲ ಹೋಗಿ ಬಂದೆ. 

ಒಂದು ದಿನವೂ ಅಮ್ಮ ನೀನು ಏನು ಮಾಡುತ್ತೀಯಾ, ಎಲ್ಲಿಗೆ ಹೋಗುತ್ತೀಯಾ ಅಂತ ಕೇಳಲಿಲ್ಲ. ಅಪ್ಪ ಅಂತು ಬಿಡಿ ಮುಂಚಿನಿಂದಲು ಏನನ್ನು ಕೇಳುತ್ತಿರಲಿಲ್ಲ.ತಮ್ಮ ತಂಗಿಯರು ಅವರ ಪಾಡಿಗವರು ಬೆಳೆಯುತ್ತ ಓದುತ್ತ ಇದ್ದರು. ನಂಬುತ್ತೀರೋ ಬಿಡುತ್ತೀರೋ ನನಗೆ ಮುವತ್ತು ವರ್ಷ ತುಂಬುವವರೆಗು ಹೈಟೆಕ್ ಕಾಲ್ ಗರ್ಲ ಕೆಲಸ ಮಾಡಿದೆ. ಇಬ್ಬರು ತಂಗಿಯರ ಮದುವೆಯಾಯಿತು. ತಮ್ಮ ಬಿ.ಇ. ಮುಗಿಸಿ ಅಮೇರಿಕಾ ಹೊರಟು ಹೋದ. ಅಪ್ಪ ಹಾರ್ಟ ಅಟ್ಯಾಕ್ ಆಗಿ ಸತ್ತು ಹೋದ. ಅಮ್ಮ ಒಬ್ಬಳಿದ್ದಾಳೆ ಮನೆಯಲ್ಲಿ ಒಂಟಿಯಾಗಿ. ನಾನೀಗ ಅವಳ ಜೊತೆಯಲ್ಲಿಲ್ಲ. ಆರು ವರ್ಷಗಳ ಹಿಂದೆ ಪರಿಚಯವಾದ ಉದ್ಯಮಿಯೊಬ್ಬ ನೀನು ಇದನ್ನೆಲ್ಲ ಬಿಟ್ಟು ನನಗೆ ನಿಷ್ಠಳಾಗಿ ಇರುತ್ತೀನಿ ಅಂದರೆ ನಾನು ನಿನ್ನ ಸಾಕುತ್ತೇನೆ ಅಂದ. ಹಾಗಿದ್ದರೆ ಮದುವೆಯಾಗಿ ಎರಡನೆ ಹೆಂಡತಿಯನ್ನಾಗಿ ಮಾಡಿಕೊ ಅಂದೆ. ಆದರವನು ಸಮಾಜದ ಎದುರು ಮದುವೆಯಾಗುವುದು ಆಗೋದು ಕಷ್ಟ, ಆದರೆ ನಿನ್ನ ಹೆಂಡತಿಗಿಂತ ಹೆಚ್ಚಾಗಿ ನೋಡಿಕೊಳ್ತೀನಿ ಅಂದ. ಕೊನೆಗವನ ಮಾತಿಗೆ ಒಪ್ಪಿ ಕಸುಬಿಗೆ ಗುಡ್‍ಬೈ ಹೇಳಿಬಿಟ್ಟೆ. ಒಂದೊಳ್ಳೆಯ ರೆಸಿಡೆನ್ಷಿಯಲ್ ಏರಿಯಾದಲ್ಲಿ ನನ್ನ ಹೆಸರಲ್ಲೇ ಮನೆ ತೆಗೆದುಕೊಟ್ಟಿದ್ದಾನೆ. ಸಣ್ಣದೊಂದು ತೋಟ ಮಾಡಿ ಫಾರ್ಮ ಹೌಸ್ ಕಟ್ಟಿಸಿದ್ದಾನೆ. ನನ್ನ ಹೆಸರಲ್ಲಿಯೂ ಸಾಕಷ್ಟು ಆಸ್ತಿ ಮಾಡಿಟ್ಟಿದ್ದಾನೆ. ದಿನಕ್ಕೊಮ್ಮೆಯಾದರು ಬರುತ್ತಾನೆ. ವಾರಕ್ಕೆರಡು ದಿನ ನನ್ನ ಜೊತೆಯಲ್ಲಿಯೇ ಇರುತ್ತಾನೆ. ಈಗ ಅವರ ಕುಟುಂಬದವರೆಲ್ಲರಿಗೂ ನಮ್ಮ ವಿಷಯ ಗೊತ್ತಾಗಿದೆ. ಯಾರೂ ಗಲಾಟೆ ಮಾಡಿಲ್ಲ. ಒಂದೊಂದು ಸಾರಿ ಬರುವಾಗ ಅವನ ಹತ್ತು ವರ್ಷದ ಮಗನನ್ನು ಕರೆದುಕೊಂಡು ಬರುತ್ತಾನೆ. ಅದು ಆಂಟಿ ಅಂತ ಮಾತಾಡಿಸುತ್ತೆ. ಸಮಾಜದ ದೃಷ್ಟಿಯಲ್ಲಿ ಮಾತ್ರ ನಾನು ಅವನ ಇಟ್ಟುಕೊಂಡವಳು ಅನ್ನುವುದೇ ಖಾಯಂ ಬಿರುದು. ನನಗೇನೂ ಬೇಸರವಿಲ್ಲ. ಒಂದೇ ಕೊರಗೆಂದರೆ ನನಗೊಂದು ಮಗುವಿಲ್ಲವೆಂಬುದು ಈ ವಿಷಯದಲ್ಲಿ ಅವನ ಜೊತೆ ಜಗಳವಾಡಿದ್ದೇನೆ. ಆದರವನು ಬೇಡ ಅನ್ನುತ್ತಾನೆ. ಯಾಕೆ ಅಂತ ಹೇಳಲ್ಲ. ಯಾಕೊ ನನಗಾಗಿ ಇಷ್ಟೆಲ್ಲ ಮಾಡಿದ ಅವನ ಮಾತು ಮೀರಲು ನನಗಿಷ್ಟವಿಲ್ಲ. ಹಾಗಾಗಿ ಮುಂದಿನ ವಾರದಲ್ಲಿ ಒಂದು ಅನಾಥ ಮಗುವನ್ನು ತಂದು ಸಾಕಬೇಕು ಅಂತ ಅಂದುಕೊಂಡು, ಈ ವಿಚಾರವಾಗಿ ನನ್ನ ಲಾಯರ್ ಬಳಿ ಮಾತಾಡಿದ್ದೇನೆ. ಅನಾಥ ಮಗು ಸಾಕೋದಿಕ್ಕೆ ಅವನೂ ಒಪ್ಪಿದಾನೆ. 

ಮನೆಗೆ ಬಂದಿರಿ, ಎಲ್ಲ ಹೇಳಿದೆ. ದಯವಿಟ್ಟು ನನ್ನ ಹೆಸರನ್ನಾಗಲಿ ಅವರ ಹೆಸರನ್ನಾಗಲಿ ಎಲ್ಲೂ ಪ್ರಸ್ತಾಪಿಸ ಬೇಡಿ. ನೀವು ಸಾಹಿತಿಗಳು, ಪತ್ರಕರ್ತರು, ಅನಾಥಾಶ್ರಮದಲ್ಲಿ ಮಗು ದತ್ತು ತೆಗೆದುಕೊಳ್ಳಲು ಬಹಳಷ್ಟು ಕಾನೂನಿನ ಅಡಚಣೆಗಳಿರುತ್ತವೆ ಅನ್ನೋದು ಗೊತ್ತಲ್ಲ. ಅದಕ್ಕೆ ಯಾವುದಾದರು ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವನ್ನು ಬೇಡ ಅಂದು ಬಿಟ್ಟು ಹೋಗುತ್ತಾರಂತಲ್ಲ, ಅಂತಹ ಮಗುವೊಂದನ್ನು ಕೊಡಿಸೋಕೆ ಸಹಾಯ ಮಾಡ್ತೀರಾ,ಸರ್. ನಿಮಗೆ ಆಸ್ಪತ್ರೆಗಳಲ್ಲಿ ಯಾರಾದರು ಪರಿಚಯಸ್ಥರು ಇದ್ದರೆ ದಯವಿಟ್ಟು ಇದೊಂದು ಸಹಾಯ ಮಾಡಿ.

ಅವಳು ಹೇಳುತ್ತಿರುವುದು ಕಾನೂನಿನ ಪ್ರಕಾರ ತಪ್ಪಾದರು ಸಹಾಯ ಮಾಡುವುದರಲ್ಲಿ ಒಂದು ಮಗುವಿನ ಭವಿಷ್ಯ ಇದೆಯೆನಿಸಿ, ಅವಳ ಒಪ್ಪಿಗೆ ಪಡೆದು ಅವಳ ಮನೆಯ ಪೋನಿಂದ ನನಗೆ ಪರಿಚಯವಿದ್ದ ಒಂದಿಬ್ಬರು ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಮಗು ಬೇಕಿರುವ ವಿಚಾರ ತಿಳಿಸಿ, ಸಿಕ್ಕ ತಕ್ಷಣ ನನಗೆ ತಿಳಿಸಬೇಕೆಂದು ಕೋರಿಕೊಂಡೆ.

ಮೇಡಂ, ಹೇಳಿದ್ದೇನೆ. ಅಂತಹದೊಂದು ಮಗು ದೊರೆತ ತಕ್ಷಣ ನಾನು ನಿಮಗೆ ಪೋನ್ ಮಾಡಿ ತಿಳಿಸುತ್ತೇನೆ. ನಿಮ್ಮ ಕೆಲಸ ಆದಂತೆ ಅಂದೆ. ನನ್ನ ಮಾತು ಕೇಳಿದಾಕ್ಷಣ ಅವಳ ಮುಖದಲ್ಲಿ ಸಂತೋಷ ತುಂಬಿ ತುಳುಕ ತೊಡಗಿತ್ತು. ಅದುವರೆಗು ಕೇವಲ ಒಬ್ಬ ಹೆಣ್ಣಾಗಿ ಕಾಣುತ್ತಿದ್ದ ಅವಳ ಮುಖದಲ್ಲಿ ತಾಯಿಯೊಬ್ಬಳು ಕಾಣತೊಡಗಿದಳು. 

ಅಲ್ಲಿಂದ ಹೊರಡುವಾಗ ಅವಳಿಗೆ ಎಂತಹ ಮಗುಬೇಕು ಗಂಡೊ ಹೆಣ್ಣೊ ಎಂದೆ. ಅದಕ್ಕವಳು ಯಾವುದಾರು ಸರಿ ಎಂದು ಮಗು ಸಿಕ್ಕಿಯೇ ಬಿಟ್ಟಿತೇನೋ ಎಂಬಂತೆ ನಕ್ಕ ನಗುವಿದೆಯಲ್ಲ ಅದು ದೇವತೆಯೊಬ್ಬಳ ನಗುವಾಗಿತ್ತು.
(ಅಸಹಾಯಕ ಆತ್ಮಗಳು ಸರಣಿಯ ಕೊನೆಯ ಲೇಖನವಿದು. ಲೇಖಕರು ಮತ್ತೆ ಈ ಸರಣಿಯನ್ನು ಪ್ರಾರಂಭಿಸಲೂಬಹುದು! - ಸಂ)

ಮೇ 29, 2015

ಐ.ಎ.ಎಸ್ ಮಾಫಿಯ .... ಭಾಗ 2

ಎಂ.ಎನ್.ವಿಜಯಕುಮಾರ್
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್
ಪ್ರಬಲವಾಗುವತ್ತ ಐ.ಎ.ಎಸ್ ಮಾಫಿಯ

2005 ಮತ್ತು 2007ರ ನಡುವೆ ಇಂಧನ ಇಲಾಖೆಯಲ್ಲಿನ ಹಗರಣಗಳು, ಭೂಕಬಳಿಕೆ, ಮೈಸೂರು ಮಿನರಲ್ಸ್ ಸೇರಿ ಇತರೆ ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವರದಿಗಳನ್ನು ನೀಡಿದ್ದೆ. ಅವೆಲ್ಲಾ ವರದಿಗಳನ್ನು ಒಟ್ಟುಗೂಡಿಸಿದರೆ ನಡೆದ ಭ್ರಷ್ಟಾಚಾರದ ಮೊತ್ತ ಮೂವತ್ತು ಸಾವಿರ ಕೋಟಿಗಳನ್ನು ದಾಟುತ್ತದೆ. 2007ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದಾಗ ಹಗರಣಗಳ ಸಂಖೈಯಲ್ಲಿ ಬಹಳವಾಗಿ ಹೆಚ್ಚಳವಾಯಿತು. ಎಷ್ಟರಮಟ್ಟಿಗೆಂದರೆ ಚುನಾವಣೆಯಲ್ಲಿ ತಮಗೆ ಅನುಕೂಲಕರವಾದ ಅಭ್ಯರ್ಥಿಯ ಗೆಲುವಿಗಾಗಿ ಹಣ ಕೊಡುವಷ್ಟರ ಮಟ್ಟಿಗೆ ಐ.ಎ.ಎಸ್ ಅಧಿಕಾರಿಗಳ ಭ್ರಷ್ಟಾಚಾರ ಹೆಚ್ಚಾಗಿತ್ತು. ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ನಿಯಮಬಾಹಿರ ಗಣಿಗಾರಿಕೆಯನ್ನು ಮತ್ತು ಭೂಕಬಳಿಕೆಯನ್ನು ಪ್ರೋತ್ಸಾಹಿಸಿದರು. ಇವೆರಡೇ ಹಗರಣಗಳ ಮೊತ್ತ ನಾಲ್ಕು ಲಕ್ಷ ಕೋಟಿ ದಾಟುತ್ತದೆ. ಇಂತ ಎಲ್ಲಾ ಅನ್ಯಾಯದ ಹಗರಣಗಳಲ್ಲೂ ಐ.ಎ.ಎಸ್ ಮಾಫಿಯಾದ ಒಬ್ಬ ವ್ಯಕ್ತಿಯಾದರೂ ಇದ್ದೇ ಇರುತ್ತಾನೆ.
ಭಾರತದಾದ್ಯಂತ ವಿಸ್ತರಿಸಿದ ಐ.ಎ.ಎಸ್ ಮಾಫಿಯ

ಅನೈತಿಕ ಮಾರ್ಗದಲ್ಲಿ ಗಳಿಸಿದ ಸಂಪತ್ತು ತನಿಖಾ ತಂಡಗಳ ಕಣ್ಣಿಗೆ ಬೀಳದಿರಬೇಕಾದರೆ ವಿವಿಧ ರಾಜ್ಯಗಳ ಭ್ರಷ್ಟ ಅಧಿಕಾರಿಗಳು ಜೊತೆ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಒಳ್ಳೆಯದು ಎಂಬಂಶವನ್ನು ಐ.ಎ.ಎಸ್ ಮಾಫಿಯ ಕಂಡುಕೊಂಡಿತ್ತು. ಕರ್ನಾಟಕದ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ಆಂಧ್ರಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿದ್ದರ ಬಗ್ಗೆ ಸರಕಾರಕ್ಕೆ ವರದಿ ಮಾಡಿದ್ದೆ. ಮೂರು ವಾರಗಳ ಕಾಲ ಬೆಂಗಳೂರಿನ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಬಿಹಾರದ ಐ.ಎ.ಎಸ್ ಅಧಿಕಾರಿಯೊಬ್ಬ ಕಛೇರಿಯಲ್ಲಿ ಹಳೆಯ ಅಧಿಕಾರಿಯೇ ಇದ್ದಾರೆಂದುಕೊಂಡು ಫೋನಿನಲ್ಲಿ ‘ಹಣ ರವಾನೆಯಾಗಿದೆ. ಕೆಲಸ ಮುಗಿಸಿಕೊಡಬಹುದು’ ಎಂದು ಹೇಳಿದ್ದರು! ಲೋಕಾಯುಕ್ತ ಸಂಸ್ಥೆಗಳ ಅಧಿಕಾರ ರಾಜ್ಯದ ಗಡಿಯೊಳಗೆ ಮೀಸಲಾಗಿಬಿಟ್ಟಿರುವುದರಿಂದ ಮತ್ತು ಸಿ.ಬಿ.ಐನಂತಹ ಸಂಸ್ಥೆಗಳ ವ್ಯಾಪ್ತಿಗೆ ರಾಜ್ಯದ ಅಧಿಕಾರಿಗಳು ಬರುವುದಿಲ್ಲವಾದ್ದರಿಂದ ಈ ಐ.ಎ.ಎಸ್ ಮಾಫಿಯ ಬಹುಬೇಗನೆ ದೇಶಾದ್ಯಂತ ಹರಡಿತು. 2010ರಿಂದೀಚೆಗೆ ಕಳ್ಳ ಮಾರ್ಗದಲ್ಲಿ ಗಳಿಸಿದ ಹಣ ಐ.ಎ.ಎಸ್ ಮಾಫಿಯಾದ ನೆರವಿನಿಂದ ದೇಶಾದ್ಯಂತ ಹರಡಿತು ಮತ್ತು ವಿದೇಶಗಳಿಗೂ ತಲುಪಿತು. ಸಾಮಾನ್ಯ ಜನರಷ್ಟೇ ಅಲ್ಲ, ಕೆಲವು ಐ.ಎ.ಎಸ್ ಅಧಿಕಾರಿಗಳು ಕೂಡ ಪ್ರಾಮಾಣಿಕತೆಯ ಸೋಗಿನಲ್ಲಿರುವ ಭ್ರಷ್ಟರ ಮುಖವಾಡ ಕಳಚಿಬಿದ್ದರೆ ಅಚ್ಚರಿ ಪಡುತ್ತಾರೆ.

1981ರಲ್ಲಿ ಐ.ಎ.ಎಸ್ ಸೇರಿದಾಗಿನಿಂದ ಇಲ್ಲಿಯವರೆಗೆ ನನ್ನ ಕಾರ್ಯವಿಧಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಆದರೆ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದವರ ನೈತಿಕತೆಯಲ್ಲಿ ಪತನವಾಗಿದೆ, ಕಳೆದ ಹತ್ತು ವರುಷಗಳಿಂದ ಮೂಗು ತೂರಿಸುವಿಕೆ ಹೆಚ್ಚಾಗಿದೆ.

ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ 1976ರಿಂದ 1982ರವರೆಗೆ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. 1981ರಲ್ಲಿ ಐ.ಎ.ಎಸ್ಸಿಗೆ ಆಯ್ಕೆಯಾದೆ. 1982ರಲ್ಲಿ ನಾನು ಮುಸ್ಸೋರಿಯ ಐ.ಎ.ಎಸ್ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿದ್ದಾಗ ಆಗಿನ ನಿರ್ದೇಶಕ ದಿ. ಪಿ.ಎಸ್. ಅಪ್ಪುರವರು ತಪ್ಪು ಮಾಡುತ್ತಿದ್ದ ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿಗಳನ್ನು ಡಿ.ಒ.ಪಿ.ಟಿ (department of personnel and training)ಯವರು ರಕ್ಷಿಸುತ್ತಿದ್ದುದನ್ನು ಕಂಡು ರಾಜೀನಾಮೆ ನೀಡಿಬಿಟ್ಟರು. ಆಗಿನಿಂದಲೇ ಭ್ರಷ್ಟ ವ್ಯವಸ್ಥೆ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾರಂಭಿಸಿದೆ. ಇಲಾಖೆಯವರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದನ್ನು ಬಿಟ್ಟು ಅವರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತು ಪಿ.ಎಸ್.ಅಪ್ಪುರವರ ಸಲಹೆಗಳನ್ನು ಸಾರಸಗಾಟಾಗಿ ತಿರಸ್ಕರಿಸಿದರು. ಭ್ರಷ್ಟ ಅನೈತಿಕ ಕೆಲಸ ಮಾಡುವ ಅಧಿಕಾರಿಗಳನ್ನು ಕಂಡೂ ಕಾಣದಂತೆ ಇರುವುದಿಲ್ಲ ಎಂದು ಪ್ರಮಾಣ ಮಾಡಿಕೊಂಡೆ, ನನ್ನ ಪ್ರಮಾಣದಿಂದ ಯಾವಾಗಲಾದರೂ ನನ್ನ ಕೆಲಸ ಹೋಗುತ್ತದೆ ಎಂಬ ಸತ್ಯ ಮೂವತ್ತನಾಲ್ಕು ವರುಷಗಳ ಹಿಂದೆಯೇ ತಿಳಿದಿತ್ತು.

ಹಿರಿಯ ಐ.ಎ.ಎಸ್ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ 1986ರಿಂದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರಗಳಲ್ಲನೇಕವನ್ನು ನಾನು ಇಟ್ಟಿಲ್ಲವಾದರೂ ಸರಕಾರದ ಫೈಲುಗಳಲ್ಲಿ ಅವುಗಳಿವತ್ತಿಗೂ ಲಭ್ಯವೆಂದು ಆಶಿಸುತ್ತೇನೆ. 1997ರಿಂದ 2013ರವರೆಗೆ ಬರೆದ ಕೆಲವು ಪತ್ರಗಳ ಲಿಂಕುಗಳನ್ನು ಕೆಳಗೆ ನೀಡಿದ್ದೇನೆ. ನನ್ನ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗಿಲ್ಲವೆಂಬುದು ಆ ಪತ್ರಗಳಿಂದ ನಿಮಗೆ ತಿಳಿಯುತ್ತದೆ. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸುತ್ತಲೇ ಬಂದಿದ್ದೇನೆ. ಇದೇ ಸಮಯದಲ್ಲಿ ಐ.ಎ.ಎಸ್ ಅಧಿಕಾರಿಗಳ ನೈತಿಕತೆ ಪಾತಾಳ ತಲುಪುತ್ತಿತ್ತು. 2005ರಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ಕೆ.ಮಿಶ್ರಾ ನಾನವರಿಗೆ ಕೊಟ್ಟ ವರದಿಯನ್ನು ಆಧರಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅವರಿಗಾಗುತ್ತಿದ್ದ ಭಯದ ಬಗ್ಗೆ ಹೇಳಿದರು. 2006ರಲ್ಲಿ ನಾನು ನೀಡಿದ ಭ್ರಷ್ಟರ ವರದಿಯ ಬಗ್ಗೆ ಮೌನವಾಗಿದ್ದ ಬಿ.ಕೆ.ದಾಸ್ ನನ್ನನ್ನು ತತ್ ಕ್ಷಣವೇ ವರ್ಗ ಮಾಡಲು ಮಾತ್ರ ಹೇಸಲಿಲ್ಲ. 2006ರ ಕೊನೆಗೆ ಕೆಲವು ಸಮಯದ ಕಾಲ ಡಾ ಮಾಲತಿ ದಾಸ್ ಮುಖ್ಯ ಕಾರ್ಯದರ್ಶಿಯಾಗಿದ್ದರು. ಭ್ರಷ್ಟರ ಬಗೆಗಿನ ನನ್ನ ವರದಿಗಳ ಕಾರಣದಿಂದ ನನಗೆ ಜೀವ ಭಯವಿದೆ ಎಂದು ಹೇಳಿಕೊಂಡಿದ್ದೆ. ಲಿಖಿತ ಹೇಳಿಕೆಯನ್ನು ಬರೆಸಿಕೊಂಡಿದ್ದರು. ಅದನ್ನಾಧರಿಸಿ ಆಗಿನ ಮುಖ್ಯಮಂತ್ರಿ ನನ್ನ ವರ್ಗಾವಣೆಯನ್ನು ಬದಲಿಸಿದ್ದರು. ಆದರದು ಕಾರ್ಯರೂಪಕ್ಕೆ ಬರಲಿಲ್ಲ. ಕಾರಣ? ಡಾ. ಮಾಲತಿ ದಾಸ್ ರವರ ಸ್ವಂತ ತಮ್ಮ ಕೂಡ ನನ್ನ ವರದಿಯಲ್ಲಿದ್ದ ಭ್ರಷ್ಟ ಅಧಿಕಾರಿಗಳಲ್ಲೊಬ್ಬನಾಗಿದ್ದ! ಮಾಲತಿ ದಾಸರ ನಂತರ ಮುಖ್ಯ ಕಾರ್ಯದರ್ಶಿಯಾಗಿ ಬಂದ ಪಿ.ಬಿ.ಮಹಿಷಿಯವರೇ ಭ್ರಷ್ಟರಾಗಿದ್ದರು, ಯಾವೊಂದು ಹಿಂಜರಿಕೆಯೂ ಇಲ್ಲದೆ ಭ್ರಷ್ಟರನ್ನು ನಾನು ರಕ್ಷಿಸುತ್ತೇನೆ ಎಂದು ಹೇಳಿದ್ದರವರು! ಪಿ.ಬಿ.ಮಹಿಷಿಯವರ ಭ್ರಷ್ಟತೆಯನ್ನು ನನ್ನ ಪತ್ನಿ ಸಾರ್ವಜನಿಕಗೊಳಿಸಿದಾಗ ಮಹಿಷಿಯವರನ್ನು ಕೆಳಗಿಳಿಸಿ ಸುಧಾಕರ್ ರಾವ್ ರವರನ್ನು ಮುಖ್ಯಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧದ ವರದಿಗಳನ್ನು ಮುಂದುವರೆಸಿದರೆ, ನಿಮಗೆ ಬೆಂಬಲ ಕೊಡುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನು ತೊಂದರೆಗೀಡುಮಾಡಬೇಕಾಗುತ್ತದೆ ಎಂಬ ಬೆದರಿಕೆಯ ಮಿಂಚೆ ಕಳುಹಿಸಿದ್ದರು ನನ್ನ ಪತ್ನಿಗೆ. ಸುಧಾಕರ್ ರಾವ್ ನಂತರ ಮುಖ್ಯ ಕಾರ್ಯದರ್ಶಿಯಾದ ಎಸ್.ವಿ.ರಂಗನಾಥ್ ರದು ಮತ್ತಷ್ಟು ತೆರೆದ ವ್ಯಕ್ತಿತ್ವ! ‘ನಿಮಗೆ ಯಾವುದಾದರೂ ಹುದ್ದೆ ದೊರಕಬೇಕೆಂದರೆ ನೀವಿಲ್ಲಿಯವರೆಗೆ ಸರಕಾರಕ್ಕೆ ಭ್ರಷ್ಟರ ವಿರುದ್ಧ ಸಲ್ಲಿಸಿರುವ ವರದಿಗಳನ್ನು ಮರೆತುಬಿಡಬೇಕು ಮತ್ತು ಇನ್ನು ಮುಂದೆ ಭ್ರಷ್ಟಾಚಾರದ ಬಗ್ಗೆ ಕಣ್ಣು ಮುಚ್ಚಿಕೊಂಡಿರಬೇಕು’ ಎಂದು ಹೇಳಿಬಿಟ್ಟರು. ನಂತರ ಬಂದ ಕೌಶಿಕ್ ಮುಖರ್ಜಿ ಐ.ಎ.ಎಸ್ ಮಾಫಿಯ ಕಾರ್ಯನಿರ್ವಹಿಸುವ ರೀತಿಯನ್ನು ಪದೇಪದೇ ತೋರಿಸುತ್ತಿದ್ದಾರೆ!

http://depenq.com/PRESSRELEASE/CS1997.pdf 
http://depenq.com/PRESSRELEASE/BKdas25SEP06.pdf 
http://depenq.com/PRESSRELEASE/BKDASshieldedCORRUPT.pdf
http://depenq.com/PRESSRELEASE/MalatiDAS.pdf
http://depenq.com/PRESSRELEASE/MAHISHIIignoringLOKAYUKTA.pdf
http://depenq.com/PRESSRELEASE/sudhakarrao.pdf
http://depenq.com/PRESSRELEASE/SVR.pdf
http://depenq.com/PRESSRELEASE/MNVtoKM6NOV14.pdf

ಹಿರಿಯ ಐ.ಎ.ಎಸ್ ಅಧಿಕಾರಿಗಳು whistleblowersಗಳನ್ನು ಯಾಕೆ ದ್ವೇಷಿಸುತ್ತಾರೆ?

ಕಾನೂನು ಮತ್ತು ನೈತಿಕತೆಯ ಗಡಿಯಲ್ಲಿ ನಿಂತು whistleblowers ಕಾರ್ಯನಿರ್ವಹಿಸುತ್ತಾರೆ ಎಂದು ಕಾನೂನು ಆಯೋಗ ಗುರುತಿಸಿದೆ. ಆಯಕಟ್ಟಿನ ಜಾಗದಲ್ಲಿರುವ, ವೈಯಕ್ತಿಕ ಹಿತಾಸಕ್ತಿಗಳಿರುವ ಅಧಿಕಾರಿಗಳು ಸೀಟಿ ಹೊಡೆಯುವ ನನ್ನಂತವರ ಕಾಯಕವನ್ನು ಕೆಟ್ಟ ಕೆಲಸವೆಂದು ಪರಿಗಣಿಸುತ್ತಾರೆ, ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯಲಿಕ್ಕಾಗಿ ನಾವಿಂಥ ಕೆಲಸಗಳನ್ನು ಮಾಡುತ್ತಿದ್ದೀವೆಂಬ ಸತ್ಯವನ್ನು ಬೇಕೆಂದೆ ಕಡೆಗಣಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ಸೀಟಿ ಹೊಡೆಯುವವರನ್ನು ಯಾವಾಗಲೂ ಆಜ್ಞಾಭಂಜಕರೆಂದೇ ಗುರುತಿಸುವುದಕ್ಕೆ ಕಾರಣ ಅವರ ಭ್ರಷ್ಟ ಕೆಲಸಗಳು ಹೊರಬಂದುಬಿಡಬಹುದೆಂಬ ಭಯ. ಐ.ಎ.ಎಸ್ಸಿನ ನೀತಿ ನಿಯಮಗಳು ಹಿರಿಯ ಅಧಿಕಾರಿಗಳೆಲ್ಲ ಪ್ರಾಮಾಣಿಕರು ಎಂದು ನಂಬಿದರೆ, ಪ್ರಪಂಚದಾದ್ಯಂತ ಸೀಟಿದಾರರಿಗಾಗಿ ಇರುವ ಕಾಯ್ದೆಗಳು ಹಿರಿಯ ಅಧಿಕಾರಿಗಳು ಅಪ್ರಾಮಾಣಿಕರು ಮತ್ತು ಭ್ರಷ್ಟರಾಗಿರಲು ಸಾಧ್ಯ ಎಂಬ ಸತ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಸೀಟಿದಾರರನ್ನು ರಕ್ಷಿಸಲು ಕಾಯ್ದೆಯಿದೆ, ಅದರ ನೀತಿ ನಿಯಮಗಳು ಇನ್ನೂ ರೂಪಿತವಾಗಿಲ್ಲ. ಆ ಕಾಯ್ದೆ ಆಚರಣೆಗೆ ಬರುವುದಕ್ಕೆ ಮುಂಚೆಯೇ ಸೀಟಿ ಹೊಡೆಯುವುದನ್ನೇ ತಡೆಯಲು ಬೇಕಾದ ಮಾರ್ಪಾಡುಗಳನ್ನು ಡಿ.ಒ.ಪಿ.ಟಿ ಮಾಡುತ್ತಿದೆ. ಕಾಯ್ದೆಯ ಅನುಸಾರ ಎಲ್ಲಾ ಸರಕಾರಿ ಸೇವಕರು ಭ್ರಷ್ಟರ ವಿರುದ್ಧ ಸೀಟಿ ಹೊಡೆಯಬೇಕು, ಆದರೆ ಡಿ.ಒ.ಪಿ.ಟಿ ಇದನ್ನು ಬಲವಾಗಿ ವಿರೋಧಿಸುತ್ತಿರುವುದಕ್ಕೆ ಕಾರಣ ಅನೇಕ ಹಿರಿಯ ಅಧಿಕಾರಿಗಳು ಮತ್ತೀಗಾಗಲೇ ನಿವೃತ್ತಿ ಹೊಂದಿದ ಅಧಿಕಾರಿಗಳ ಜೀವನ ಈ ಕಾಯ್ದೆ ಜಾರಿಯಾಗಿಬಿಟ್ಟರೆ ಶೋಚನೀಯವಾಗಿಬಿಡುತ್ತದೆ ಎಂದು. ಸೀಟಿದಾರ ಸತ್ಯೇಂದ್ರ ದುಬೆಯ ಹತ್ಯೆಯ ನಂತರ ಸುಪ್ರೀಂ ಕೋರ್ಟಿನ ನಿರ್ದೇಶನದ ಪ್ರಕಾರ ಸಂಸತ್ತು ಜುಲೈ 2004ರಂದು ಸೀಟಿದಾರರನ್ನು ರಕ್ಷಿಸುವ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಆದರೆ ಪ್ರಾಮಾಣಿಕರನ್ನು ರಕ್ಷಿಸುವ ಕೆಲಸ ಇಂದಿಗೂ ನಡೆಯುತ್ತಿಲ್ಲ.
http://depenq.com/PRESSRELEASE/MNV16APRL2015.pdf

ಮೇ 23, 2015

ಅಸಹಾಯಕ ಆತ್ಮಗಳು - ಮೋಸದ ಬಲೆಯೊಳಗೆ!

madhusudan
ಕು.ಸ.ಮಧುಸೂದನ್
ನಾಲ್ಕು ಹೆಣ್ಣುಮಕ್ಕಳನ್ನು ಹುಟ್ಟಿಸಿದ ಅಪ್ಪ ಕುಡಿಕುಡಿದೇ ಸತ್ತು ಹೋದ ಮೇಲೆ ನಮ್ಮನ್ನೆಲ್ಲ ಸಾಕಿದ್ದು ನಮ್ಮಮ್ಮನೇ! ನಾಲ್ಕೂ ಜನರಲ್ಲಿ ನಾನೇ ದೊಡ್ಡವಳು.ಇರೋದಕ್ಕೊಂದು ಅಜ್ಜನ ಕಾಲದ ಹಳೇ ಕೆಂಪಂಚಿನ ಮನೆ ಬಿಟ್ಟರೆ ಅಪ್ಪ ಮಾಡಿದ್ದು ಸಾಲ ಮಾತ್ರ. ಅದನ್ನೂ ಅವನು ಸತ್ತಮೇಲೆ ಪಟೇಲರ ಮನೇಲಿ ಕೂಲಿಮಾಡಿ ಅಮ್ಮನೇ ತೀರಿಸಿದ್ದಳು. ಸ್ಕೂಲಿನ ಮುಖವನ್ನ ನಾವ್ಯಾರು ಹೆಣ್ಣು ಮಕ್ಕಳು ನೋಡಲೇಯಿಲ್ಲ.ನಮ್ಮೆಲ್ಲರಿಗೂ ವಯಸ್ಸಲ್ಲಿ ಎರಡೆರಡು ವರ್ಷಗಳ ಅಂತರವಷ್ಟೆ ಇದ್ದಿದ್ದು. ನನಗೊಂದು ಹತ್ತು ವರ್ಷವಾದ ಮೇಲೆ ಅಮ್ಮನ ಜೊತೆ ನಾನೂ ಕೂಲಿಗೆ ಹೋಗ್ತಾ ಇದ್ದೆ. ನನ್ನ ಹಿಂದಿನವಳು ಮಾತ್ರ ಪಟೇಲರ ಮನೆ ಕಸಮುಸುರೆ ಮಾಡ್ತಾ ಇದ್ದಳು. ಇನ್ನು ಉಳಿದಿಬ್ಬರೂ ಮನೆಯಲ್ಲೆ ಇರೋರು. ನಮ್ಮೂರಲ್ಲಿ ಬಸಪ್ಪ ಅಂತ ಇದ್ದ. ಸಾಕಷ್ಟು ಮಟ್ಟಿಗೆ ದುಡ್ಡಿದ್ದವನೇ. ಮುಂಚಿಂದಲೂ ಅವರೇನು ದುಡ್ಡಿದ್ದೋರಲ್ಲ. ಆದರೆ ಅವರ ಅಕ್ಕ ಒಬ್ಬಳು ಮದುವೆಯಾಗಿ ಬೆಂಗಳೂರಲ್ಲಿದ್ದಳು. ಅವಳ ಸಹಾಯದಿಂದ ಬಸಪ್ಪನ ಮನೆಯವರು ಶ್ರೀಮಂತರಾಗಿದ್ದಾರೆ ಅಂತ ಜನ ಮಾತಾಡಿಕೊಳ್ತಾ ಇದ್ದರು. ಆ ಬಸಪ್ಪ ಒಂದು ದಿನ ನಮ್ಮ ಮನೆಗೆ ಬಂದ. ಅವಾಗ ನನಗೆ ಹದಿನಾರು ವರ್ಷ ಅನಿಸುತ್ತೆ. ಬಂದವನು ಅಮ್ಮನ ಹತ್ತಿರ ಮಾತಾಡ್ತಾ ನಮ್ಮ ಅಕ್ಕನಿಗೆ ಮೈಲಿ ಹುಷಾರಿಲ್ಲ. ಅವಳ ಜೊತೆಗಿದ್ದು ಮನೆಗೆಲಸಕ್ಕೆ ಸಹಾಯ ಮಾಡೋಕೆ ಅಂತ ಒಂದು ಹುಡುಗಿ ಹುಡುಕ್ತಾ ಇದ್ದೆ. ಈಗ ನಿನ್ನ ಮನೆಗೆ ಬಂದು ನಿನ್ನ ಮಗಳನ್ನು ನೋಡಿದ ಮೇಲೆ, ಯಾಕೆ ನಿನ್ನ ಮಗಳನ್ನೇ ನಮ್ಮಕ್ಕನ ಹತ್ತಿರ ಬಿಡಬಾರದು ಅನಿಸ್ತು ಅಂತ ಕೇಳ್ತಾ ಇದೀನಿ. ಅದು ಬೆಂಗಳೂರು, ಇಲ್ಲಿ ತರ ಸಗಣಿ ಬಾಚಬೇಕಾಗಿಲ್ಲ. ಎಲ್ಲ ಕರೆಂಟಿನ ಸಾಮಾನುಗಳು. ನಿನ್ನ ಮಗಳು ಹೆಚ್ಚೇನೂ ಕಷ್ಟ ಪಡಬೇಕಿಲ್ಲ.ನಮ್ಮಕ್ಕನ ಜೊತೆ ನೆಮ್ಮದಿಯಾಗಿರಬಹುದು. ಅಲ್ಲಿದ್ರೆ ನಿನ್ನ ಮಗಳೂ ಸ್ವಲ್ಪ ನಾಜೂಕು ಕಲೀಯ ಬಹುದು..ನಾನೇನು ತಿಂಗಳಿಗಿಷ್ಟು ಕೊಡ್ತೀನಿ ಅಂತಾ ಚೌಕಾಸಿ ಮಾಡಲ್ಲ. ಬದಲಿಗೆ ವರ್ಷಕ್ಕಿಷ್ಟು ಅಂತ ಒಂದೇ ಸಾರಿ ಕೊಡ್ತೀನಿ. ಇನ್ನು ಮಿಕ್ಕಂತೆ ನಿನಗೆ ಸಣ್ಣಪುಟ್ಟ ತೊಂದರೆಯಾದರೆ ನಾನು ನೋಡ್ಕೋತಿನಿ. ಅಂತೆಲ್ಲ ಮಾತಾಡಿದ. ಮೊದಮೊದಲು ಅಮ್ಮನಿಗೆ ವಯಸ್ಸಿಗೆ ಬಂದ ಮಗಳನ್ನು ಕಂಡವರ ಮನೆ ಚಾಕರಿಗೆ ಬಿಡೋದು ಇಷ್ಟವಿರಲಿಲ್ಲ. ಅವಳು ಆಗಲ್ಲ ಅಂತಾನೆ ಹೇಳಿದಳು. ಆದರೆ ಅವಾಗಾಗಲೆ ನಮ್ಮ ಮನೆಯ ಹಿಂದುಗಡೆಯ ಭಾಗ ಬೀಳೊಹಾಗಿತ್ತು. ಅದನ್ನ ರಿಪೇರಿ ಮಾಡಿಸ್ದೇ ಹೋದರೆ ಈ ಮಳೆಗಾಲಕ್ಕೆ ಅದು ತಡಿತಾ ಇರಲಿಲ್ಲ. ಹಂಗಾಗಿ ನಾನೇ ಅಮ್ಮನಿಗೆ ನೀನೇನು ಹೆದರಬೇಡ, ನಾನು ಹೋಗ್ತೀನಿ, ದುಡ್ಡು ಕಾಸಿನ ಬಗ್ಗೆ ನೀನು ಮಾತಾಡು ಅಂದೆ. ಆಗ ವಿಧಿಯಿಲ್ಲದೆ ಅಮ್ಮ ಒಪ್ಪಿಕೊಂಡಳು. ಆ ಕಾಲಕ್ಕೆ ಅಂದರೆ ಇಪ್ಪತ್ತು ವರ್ಷಗಳ ಹಿಂದೇನೆ ವರ್ಷಕ್ಕೆ ಆರು ಸಾವಿರ ಕೊಡೋದು ಅಂತ ತೀರ್ಮಾನ ಆಗಿ ಬಸಪ್ಪ ಆಗಲೇ ಐದು ಸಾವಿರ ಕೊಟ್ಟ. ಸದ್ಯಕ್ಕೆ ನೀನು ಮನೆ ರಿಪೇರಿ ಮಾಡಿಸು, ಸಾಲದೆ ಬಂದರೆ ಉಳಿದ್ದನ್ನು ನಾನು ಕೊಡ್ತೀನಿ ಅಂದ. ಎದ್ದು ಹೋಗುವ ಮುಂಚೆ ನನಗೆ, ನಾಳೆ ಸಾಯಂಕಾಲ ಆರುಗಂಟೆ ಬಸ್ಸಿಗೆ ಹೋಗೋಕೆ ರೆಡಿಯಾಗಿರು ಅಂದು ಹೋದ.

ಬೆಂಗಳೂರಿಗೆ ಹೋಗಲು ನನಗೇನು ಸಡಗರವಿರಲಿಲ್ಲ. ಆದರೆ ಮನೆ ರಿಪೇರಿಯಾಗುತ್ತೆ ಮತ್ತೆ ತಂಗಿಯರಿಗೇನಾದರು ಮಾಡಬಹುದು ಅನ್ನೋ ಕಾರಣಕ್ಕೆ ಒಪ್ಪಿಕೊಂಡಿದ್ದೆ.

ಒಟ್ನಲ್ಲಿ ನನ್ನ ಹದಿನಾರನೇ ವರ್ಷಕ್ಕೆ ಬೆಂಗಳೂರು ಸೇರಿಕೊಂಡೆ.

ಬೆಂಗಳೂರಿನಲ್ಲಿ ಬಸಪ್ಪನ ಅಕ್ಕನಿಗೆ ಯಾವುದೇ ಕಾಯಿಲೆ ಇದ್ದಂತೆ ಕಾಣಲಿಲ್ಲ. ಆದರೆ ವಿಪರೀತ ದಪ್ಪವಿದ್ದುದರಿಂದ ಎದ್ದು ಓಡಾಡಿದರೆ ಏದುಸಿರು ಬಿಡ್ತಾ ಇದ್ದಳು. ಅವಳ ಮನೇಲಿ ಅಂತಾ ಹೇಳಿಕೊಳ್ಳುವಂತ ಕೆಲಸವೇನೂ ಇರಲಿಲ್ಲ. ಮನೇಲಿದ್ದವರು ಅವಳ ಮತ್ತು ಅವಳ ಗಂಡ ಇಬ್ಬರೇ. ಮಕ್ಕಳು ಯಾವುದೋ ಬೇರೆ ಊರಲ್ಲಿ ಓದ್ತಾ ಇದ್ದರು. ಅವಳನ್ನು ನಾನು ಅಕ್ಕ ಅಂತ ಕರೆಯೋಕೆ ಶುರು ಮಾಡಿದೆ. ಅವಳು ಕೂತುಕೊಂಡೆ ಎಲ್ಲ ಕೆಲಸವನ್ನು ಹೇಳೋಳು, ನಾನು ಮಾಡ್ತಾ ಹೋಗ್ತಾ ಇದ್ದೆ. ಒಂದೇನು ಅಂದ್ರೆ ಅವಳ ಮನೆಗೆ ತುಂಬಾ ಜನರು ಬರ್ತಾ ಇದ್ದರು. ರಾಜಕೀಯ ಸಮಾಜಸೇವೆ ಅದೂ ಇದೂ ಅಂತ ಹೇಳಿಕೊಂಡು ಹೆಂಗಸರು ಗಂಡಸರು ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಬರ್ತಾನೆ ಇರ್ತಿದ್ದರು. ಅವರುಗಳಿಗೆ ಕಾಫಿ, ಟೀ ಮಾಡಿಕೊಡೋದೇ ಒಂದು ದೊಡ್ಡ ಕೆಲಸವಾಗ್ತಾ ಇತ್ತು. ಹೀಗೆ ಅಕ್ಕನ ಮನೇಲಿ ಒಂದು ತಿಂಗಳು ಕಳೆದೆ. ಆಮೇಲೊಂದು ದಿನ ಅಕ್ಕ ನನ್ನ ಹತ್ತಿರ, ಪುಟ್ಟಿ ಬೇಜಾರಾಗಬೇಡ, ನನಗೆ ಗೊತ್ತಿರೋ ಎಂ.ಎಲ್.ಎ. ಒಬ್ಬರ ಮನೆಗೆ ನಿನ್ನಂತ ಒಬ್ಬ ಹುಡುಗಿ ಬೇಕಂತೆ, ಸ್ವಲ್ಪ ದಿನದ ಮಟ್ಟಿಗೆ ಅವರ ಮನೇಲಿ ಕೆಲಸ ಮಾಡ್ತೀಯಾ? ಅವರಿಗೆ ಬೇರೆ ಕೆಲಸದವರು ಸಿಕ್ಕ ಕೂಡಲೇ ನೀನು ವಾಪಾಸು ಬಂದು ಬಿಡುವಂತೆ ಅಂದಳು. ನಾನು ಸ್ವಲ್ಪ ದಡ್ಡೀನೆ. ಕೆಲಸ ಮಾಡೋಕೆ ಯಾರ ಮನೆಯಾದರೇನು? ದುಡ್ಡು ಕೊಟ್ಟಿದ್ದಾರಲ್ಲ ಪಾಪ ಅಂದುಕೊಂಡು ಒಪ್ಪಿಕೊಂಡೆ.

ಅವತ್ತೇ ಸಾಯಂಕಾಲ ಒಬ್ಬ ಹೆಂಗಸು ಬಂದು ನನ್ನ ಕರೆದುಕೊಂಡು ಹೋಗಿ ಎಂ.ಎಲ್.ಎ. ಮನೆಗೆ ಬಿಟ್ಟಳು. ಆ ದೊಡ್ಡ ಮನೆಯಲ್ಲಿ ಅಡುಗೆಗೆ ಸಾಕವ್ವ ಅನ್ನೊ ಹೆಂಗಸಿದ್ದಳು. ಪರಿಚಯ ಮಾಡಿಕೊಂಡ ಅವಳು, ಸಾಹೇಬರ ಹೆಂಡತಿ ಅವರ ಅಕ್ಕನ ಮಗಳ ಮದುವೆಗೆ ಅಂತ ಊರಿಗೆ ಹೋಗಿದಾರೆ. ಇನ್ನೊಂದೆರಡು ತಿಂಗಳಲ್ಲಿ ಬರ್ತಾರೆ. ನೀನು ಅಡುಗೆ ಮನೆಗೇನು ಬರೋದೇನು ಬೇಡ, ಹೊರಗಡೆ ಕೆಲಸ ನೋಡಿಕೊಂಡು, ಸಾಹೇಬರಿಗೇನು ಬೇಕು ಅಂತ ವಿಚಾರಿಸಿಕೊಳ್ಳೋ ಕೆಲಸ ಮಾಡು ಸಾಕು ಅಂದಳು. ಅವತ್ತು ರಾತ್ರಿ ಹತ್ತು ಗಂಟೆ ಸುಮಾರಿಗೆ ಸಾಹೇಬ್ರು ಬಂದ್ರು. ನನ್ನ ಹತ್ತಿರ ಹೆಚ್ಚಿಗೇನೂ ಮಾಡಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗು ಅಂತ ಹೇಳಿ ಅವರ ರೂಮಿಗೆ ಹೋದರು. ಅಡುಗೆ ಮನೆ ಪಕ್ಕದಲ್ಲಿದ್ದ ಒಂದು ರೂಮಲ್ಲಿ ನಾನು ನನ್ನ ಬಟ್ಟೆ ಬರೆ ಇಟ್ಟುಕೊಂಡು ಮಲಗಿದೆ. ಹೀಗೇ ಎರಡು ದಿನ ಕಳೆದ ಮೇಲೆ ಮೂರನೇ ರಾತ್ರಿ ಹತ್ರ ನನ್ನ ಕೈಲಿ ಹಾಲು ಕೊಟ್ಟ ಅಡುಗೆಯವಳು ತಗೊಂಡು ಹೋಗಿ ಯಜಮಾನರಿಗೆ ಕೊಡು ಅಂದಳು. ಅವರ ರೂಮಿಗೆ ಹೇಗೆ ಹೋಗೋದು ಅಂತ ಹೆದರಿಕೊಂಡೆ ಒಳಗೆ ಹೋದೆ. ಮಂಚದ ಮೇಲೆ ಮಲಗಿದ್ದ ಅವರು ಟೇಬಲ್ಲಿನ ಮೇಲೆ ಹಾಲಿಟ್ಟು ಹತ್ತಿರ ಬಾ ಅಂತ ಕರೆದರು. ಅವರಿಗೆ ಸುಮಾರು ನಲವತ್ತೈದು ವರ್ಷವಾಗಿತ್ತು ಅನಿಸುತ್ತೆ. ಮಂಚದ ಹತ್ತಿರ ಹೋದ ತಕ್ಷಣ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಮುತ್ತು ಕೊಡಲು ಶುರು ಮಾಡಿದ್ರು.ನಾನು ಬೇಡ ಅಂತ ಜೋರಾಗಿ ಕಿರುಚಿಕೊಂಡು ಬಾಗಿಲ ಹತ್ತಿರ ಓಡಿದೆ. ಅವರು ನಗುತ್ತಾ ಬಾಗಿಲು ಹೊರಗಡೆಯಿಂದ ಮುಚ್ಚಿದೆ ಸುಮ್ಮನೇ ಹತ್ತಿರ ಬಂದು ನಾನು ಹೇಳಿದ ಹಾಗೆ ಕೇಳು ಅಂತ ನನ್ನ ಮಂಚಕ್ಕೆ ಎಳೆದುಕೊಂಡು ಹೋದರು. ಬಹಳ ಹೊತ್ತು ನಾನವರಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಆದರೆ ಸಾದ್ಯವಾಗಲಿಲ್ಲ. ಅವತ್ತು ರಾತ್ರಿ ನಾನು ನನ್ನದೆಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೆ. ಎಲ್ಲ ಮುಗಿದಾದ ಮೇಲೆ ಅವರು ನೋಡು ನಾನು ಅಧಿಕಾರದಲ್ಲಿರೋ ದೊಡ್ಡ ವ್ಯಕ್ತಿ, ನಿನಗೋಸ್ಕರ ಏನು ಬೇಕಾದರು ಮಾಡ್ತೀನಿ. ನೀನು ಹೂಂ ಅಂದರೆ ನಾನು ನಿನ್ನ ಮದುವೆಯಾಗ್ತೀನಿ. ನನ್ನ ಹೆಂಡತಿ ಊರಿಂದ ಬರೋಕ್ಕೆ ಇನ್ನೊಂದೆರಡು ತಿಂಗಳಾಗುತ್ತೆ. ಅಷ್ಟರಲ್ಲಿ ನಿನ್ನ ಮದುವೆಯಾಗಿ ಬೇರೆ ಮನೆ ಮಾಡ್ತೀನಿ. ಅಲ್ಲಿಯವರೆಗೂ ನಮ್ಮಿಬ್ಬರ ವಿಚಾರ ಗುಟ್ಟಾಗಿರಲಿ. ಅಂತೆಲ್ಲ ಸಮಾದಾನ ಮಾಡಿದರು. ಎಲ್ಲ ಮುಗಿದು ಹೋದಮೇಲೆ ಅವನು ಏನು ಹೇಳಿದರೆ ನನಗೇನು ಅಂತ ಸುಮ್ಮನೇ ಕೂತಿದ್ದೆ.

ಅವರು ಬೆಳಿಗ್ಗೆ ಹೊರಗೆ ಹೋದಮೇಲೆ ಅಡುಗೆಯವಳನ್ನು ಮಾತಾಡಿಸಿದರೆ ಅವಳು, ಸುಮ್ಮನೆ ಸಾಹೇಬರನ್ನು ನಂಬು, ಅವರು ನಿನ್ನ ಕೈ ಬಿಡಲ್ಲ. ಅವರಿಂದ ನಿನ್ನ ಕಷ್ಟ ಎಲ್ಲ ಬಗೆಹರಿಯುತ್ತೆ ಅಂದಳು. ವಾಪಾಸು ಅಕ್ಕನ ಮನೆಗೆ ಹೋಗೋ ದಾರೀನು ಗೊತ್ತಿರಲಿಲ್ಲ. ಅದೂ ಅಲ್ಲದೆ ಆ ಬಂಗಲೆಯ ಕಾವಲುಗಾರರರನ್ನು ಮೀರಿ ಹೋಗೋದು ಸಾದ್ಯವಿರಲಿಲ್ಲ. ಅವತ್ತು ಹಗಲಿಡೀ ಅಳುತ್ತಲೇ ಇದ್ದೆ. ರಾತ್ರಿ ಅವರು ಬಂದಾಗ ಅಡುಗೆಯವಳು ಸಾಹೇಬರಿಗೆ ನೀನೆ ಊಟ ಬಡಿಸಬೇಕಂತೆ ಅಂತ ಹೇಳಿ ಅಡುಗೆ ಮನೆಯಲ್ಲೆ ಇದ್ದುಬಿಟ್ಟಳು. ನಾನು ವಿಧಿಯಿಲ್ಲದೆ ಅವರಿಗೆ ಊಟ ಬಡಿಸಿದೆ. ನಂತರ ಅವರ ರೂಮಿಗೆ ಹಾಲು ತೆಗೆದುಕೊಂಡು ಹೋದೆ. ಹಿಂದಿನ ದಿನದಂತೆ ಅವರು ಆತುರ ಪಡಲಿಲ್ಲ. ಬಾ ಅಂತ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಮನೆಯವರ ಬಗ್ಗೆಯೆಲ್ಲ ವಿಚಾರಿಸಿ ತಿಳಿದುಕೊಂಡರು. ಅವರಷ್ಟು ಸಮಾಧಾನದಿಂದ ಎಲ್ಲವನ್ನೂ ಕೇಳಿಸಿಕೊಂಡದ್ದನ್ನು ನೋಡಿ ನನಗೆ ಅವರ ಮೇಲೆ ನಂಬಿಕೆ ಬಂತು. ಇವರು ನನ್ನನ್ನು ಮದುವೆಯಾದರೆ, ಎರಡನೇ ಹೆಂಡತಿಯಾದರು ಪರವಾಗಿಲ್ಲ, ನಮ್ಮ ಮನೆಯವರಿಗೆಲ್ಲ ಒಂದು ದಾರಿಯಾಗುತ್ತೆ ಅನಿಸಿತು. ಅವತ್ತು ಸಂತೋಷದಿಂದ ನಾನೇ ಅವರಿಗೆ ನನ್ನನ್ನು ಒಪ್ಪಿಸಿಕೊಂಡು ಬಿಟ್ಟೆ. 

ಹೀಗೇ ಎರಡು ತಿಂಗಳಾದ ನಂತರ ಒಂದು ದಿನ ರಾತ್ರಿ ಅವರು ನಾಳೆ ಸಾಯಂಕಾಲ ನನ್ನ ಹೆಂಡತಿ ಊರಿಂದ ಬರ್ತಾಳೆ. ಅವಳು ಬಂದಾಗ ನೀನಿಲ್ಲಿದ್ದರೆ ಅಷ್ಟು ಚೆನ್ನಾಗಿರೊಲ್ಲ. ನಾಳೆ ಬೆಳಿಗ್ಗೆ ನನ್ನ ಪರಿಚಯದವರೊಬ್ಬರ ಮನೇಲಿ ಬಿಡ್ತೀನಿ.ಇನ್ನೊಂದು ವಾರದಲ್ಲಿ ಎಲೆಕ್ಷನ್ ಶುರುವಾಗುತ್ತೆ. ಅದು ಮುಗಿದ ಕೂಡಲೇ ಮದುವೆಯಾಗೋಣ. ಹೇಗಾದ್ರು ಮಾಡಿ ಅಲ್ಲೀತನಕ ಅವರ ಮನೇಲಿರು ಅಂತ ಹೇಳಿದರು. ಹೇಳಿದ ಹಾಗೇನೆ ಮಾರನೇ ದಿನ ಒಂದು ದೊಡ್ಡ ಮಹಡಿ ಮನೆಗೆ ಕರೆದುಕೊಂಡು ಹೋಗಿಬಿಟ್ಟರು. ಅಲ್ಲಿ ಅಕ್ಕ ಸಹ ಇದ್ದಳು. ಅವಳ ಜೊತೆಯಲ್ಲಿ ಐವತ್ತು ವರ್ಷದ ವಿಮಲಾ ಅನ್ನುವ ಹೆಂಗಸು ಸಹ ಇದ್ದಳು. ಅಕ್ಕ ನನ್ನ ನೋಡಿದೊಡನೆ ಏನೇ ಪುಟ್ಟಿ ಸಾಹೇಬರ ಮನೆಯವಳಾಗಿಬಿಟ್ಟೆ. ನಿನ್ನ ಅದೃಷ್ಟ ನೋಡು ಅಂತ ಹೇಳಿ ಊರಲ್ಲಿ ನಿಮ್ಮ ಮನೆಯವರೆಲ್ಲ ಚೆನ್ನಾಗಿದ್ದಾರೆ ಅವರ ಬಗ್ಗೆ ಯೋಚನೆ ಮಾಡಬೇಡ ಅಂತ ಹೇಳಿ ಹೊರಟು ಹೋದಳು. ಆ ಮನೆಯ ಮಹಡಿಯಲ್ಲಿ ನನಗೊಂದು ರೂಮು ಕೊಟ್ಟರು. ಆ ಮನೆಯಲ್ಲಿ ತುಂಬಾ ಜನ ಹುಡುಗಿಯರು ಹೆಂಗಸರು ಇದ್ದರು. ಯಾಕೋ ಆ ಮನೆಯ ವಾತಾವರಣ ನೋಡಿನನಗೆ ಅನುಮಾನ ಶುರುವಾಯಿತು. ಒಂದು ವಾರ ಯಾರ ಜೊತೆಗೂ ಮಾತಾಡದೆ ಕಾಲ ಕಳೆದೆ. ರಾತ್ರಿ ಎಷ್ಟೊತ್ತಾದರು ಕೆಳಗಿನ ರೂಮುಗಳ ದೀಪ ಆರುತ್ತಿರಲಿಲ್ಲ. ಆಗಾಗ ಯಾರ್ಯಾರೊ ಗಂಡಸರು ಬಂದು ಹೋಗುವುದನ್ನೆಲ್ಲ ನೋಡಿ ನನಗೆ ಯಾರನ್ನಾದರು ಕೇಳಬೇಕು ಅನ್ನಿಸಿತು. ವಯಸ್ಸಲ್ಲಿ ನನಗಿಂತ ಸ್ವಲ್ಪ ದೊಡ್ಡವಳಾದ ಹೆಂಸೊಬ್ಬಳು ನನ್ನ ಜೊತೆ ಸಲಿಗೆಯಿಂದ ಮಾತಾಡುತ್ತಿದ್ದಳು. ಒಂದು ದಿನ ನಾವಿಬ್ಬರೇ ಇದ್ದಾಗ ಅವಳನ್ನು ಇದರ ಬಗ್ಗೆ ಕೇಳಿದೆ. ಆಗವಳು ಆ ಮನೆಯೊಳಗೆ ನಡೆಯುವ ವ್ಯವಹಾರದ ಬಗ್ಗೆ. ಅಲ್ಲಿರುವ ಅಷ್ಟೂ ಹೆಣ್ಣುಮಕ್ಕಳ ಬಗ್ಗೆ ಹೇಳಿದಳು. ನನಗದೆಲ್ಲ ಹೊಸದು. ಆದರೆ ಇವತ್ತಲ್ಲ ನಾಳೆ ಅವರು ಬಂದು ನನ್ನ ಕರೆದುಕೊಂಡು ಹೋಗ್ತಾರೆ ಅನ್ನೊ ನಂಬಿಕೆಯಲ್ಲೇ ಇದ್ದೆ. ಆದರೆ ಆ ಮನೆಯವರಿಗೆ ಅವರು ಬರುವುದಿಲ್ಲವೆಂಬುದು ಮುಂಚೆಯೇ ಗೊತ್ತಿತ್ತೇನೋ ಅನಿಸುತ್ತೆ. ಒಂದು ತಿಂಗಳಾದ ಮೇಲೆ ಮನೆ ಯಜಮಾನಿ ನನ್ನ ರೂಮಿಗೆ ಬಂದು, ನೋಡು, ನಿಮ್ಮ ಸಾಹೇಬರಿಗೆ ಎಲೆಕ್ಷನ್‍ಗೆ ಟಿಕೇಟ್ ಸಿಗಲಿಲ್ಲವಂತೆ. ಇನ್ನವರು ಬೆಂಗಳೂರಿಗೆ ಬರೋದೆ ಅನುಮಾನ, ಇಂತದ್ದರಲ್ಲಿ ಅವರು ಮತ್ತೆ ಬಂದು ಕರೆದುಕೊಂಡು ಹೋಗೋದು ಸಾದ್ಯವಿಲ್ಲ. ಅವರಿಗಿದೆಲ್ಲ ಹೊಸದೇನಲ್ಲ. ಸುಮ್ಮನೆ ನಿನ್ನ ಇಲ್ಲಿ ಸಾಕಿಕೊಳ್ಳೋಕೆ ಆಗಲ್ಲ. ನೀನೂ ಬೇರೇಯವರ ತರಾ ಬದುಕೊದನ್ನ ಕಲಿ ಅಂದಳು. ನಾನು ಅಕ್ಕನ ಮನೆಗೆ ಕಳಿಸಿ ಅಂತ ಅವಳಿಗೆ ಗೋಗರೆದೆ. 

ಮಾರನೇ ದಿನ ಸಂಜೆ ನೋಡು ನಿಮ್ಮಕ್ಕನ ಕಡೆಯವರು ಬಂದಿದ್ದಾರೆ, ಅವರ ಜೊತೆ ಹೋಗು. ನಿನ್ನ ಬಟ್ಟೆಯೆಲ್ಲ ಆಮೇಲೆ ನಾನೇ ಕಳಿಸ್ತೀನಿ ಅಂತ ಯಾವುದೋ ಕಾರಿಗೆ ಹತ್ತಿಸಿಕಳಿಸಿದಳು. ಕಾರಿನಲ್ಲಿದ್ದ ವ್ಯಕ್ತಿ ನನ್ನ ಊರ ಹೊರಗಿನ ಯಾವುದೋ ತೋಟದ ಮನೆಗೆ ಕರೆದುಕೊಂಡು ಹೋಗಿಬಿಟ್ಟ. ನನ್ನ ಈ ದಂಧೆಗೆ ನೂಕಲು ಅವರೆಲ್ಲ ಸೇರಿ ಮಾಡಿದ ಪ್ಲಾನ್ ಅದು. ಒಟ್ಟಿನಲ್ಲಿ ಅವತ್ತು ರಾತ್ರಿ ಅವನೊಂದಿಗೆ ಮಲಗಿ ಜಗತ್ತಿನ ದೃಷ್ಠಿಯಲ್ಲಿ ನಾನು ಸೂಳೆಯಾಗಿ ಬಿಟ್ಟಿದ್ದೆ.

ಇನ್ನೇನು ಉಳಿದಿತ್ತು, ಸರಿ ಸುಮಾರು ಮೂರು ವರ್ಷಗಳ ಕಾಲ ಅದೇ ಮನೆಯಲ್ಲಿ ದಂಧೆ ಮಾಡಿದೆ. ಈ ನಡುವೆ ಇಷ್ಟವಿಲ್ಲದೇ ಹೋದರು ಅಕ್ಕನನ್ನು ಬೇಟಿಯಾಗಿ ಮನೆಯವರ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದೆ. ಅವರ ಮೂಲಕವೇ ಊರಿಗೆ ತಿಂಗಳು ತಿಂಗಳು ದುಡ್ಡು ಕಳಿಸುತ್ತಿದ್ದೆ. ಊರಲ್ಲಿ ಮನೆಯವರಿಗೆ ನಾನೀಗ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಅಕ್ಕನ ಮೂಲಕವೇ ನಂಬಿಸಿ ಬಿಟ್ಟಿದ್ದೆ. 

ಆ ಮನೆಯಲ್ಲಿ ಮೂರು ವರ್ಷಗಳನ್ನು ಕಳೆಯೊವಷ್ಟರಲ್ಲಿ ಈ ದಂಧೆಯ ಎಲ್ಲ ಪಟ್ಟುಗಳನ್ನೂ ಕಲಿತು ಬಿಟ್ಟಿದ್ದೆ. ಅದೇ ಸಮಯದಲ್ಲಿ ಸಿನಿಮಾದಲ್ಲಿ ನಟಿಯರಾಗಲು ಬಂದು ದಂಧೆಗೆ ಇಳಿದಿದ್ದ ಒಂದಿಬ್ಬರು ನನಗೆ ಪರಿಚಯವಾಗಿದ್ದರು. ನಾವು ಮೂರೂಜನ ಮಾತಾಡಿಕೊಂಡು ಆ ಮನೆಯಿಂದ ಹೊರಬಂದು ಒಂದು ಒಳ್ಳೆಯ ಏರಿಯಾದಲ್ಲಿ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗುವ ಹೆಣ್ಣಮಕ್ಕಳ ರೀತಿಯಲ್ಲ ಬದುಕತೊಡಗಿದೆವು. ಹಗಲು ಹೊತ್ತು ಮಾತ್ರ ಕಾಲ್‍ಗರ್ಲಗಳ ರೀತಿಯಲ್ಲಿ ಕೆಲಸ ಮಾಡತೊಡಗಿದ್ದೆವು. ಆಮೇಲೆ ಅಮ್ಮನ ಒತ್ತಾಯದ ಮೇಲೆ ವರ್ಷಕ್ಕೆ ಒಂದುಸಾರಿ ಊರಿಗೆ ಹೋಗಿಬರಲು ಶುರು ಮಾಡಿದೆ. ಏನೂ ಓದದ ನಾನು ಸಾಕಷ್ಟು ದುಡ್ಡು ಖರ್ಚು ಮಾಡಿ ತಂಗಿಯರ ಮದುವೆ ಮಾಡಿದ್ದು ಊರವರಲ್ಲಿ ಅನುಮಾನ ಮೂಡಿಸಿದಂತೆ ಅಮ್ಮನಿಗೂ ಅನುಮಾನ ಮೂಡಿಸಿತು. ಒಂದು ದಿನ ಅವಳನ್ನು ಕೂರಿಸಿಕೊಂಡು ಎಲ್ಲ ವಿಷಯಗಳನ್ನು ಹೇಳಿಬಿಟ್ಟೆ. ಕೇಳಿದ ಅಮ್ಮ ಮೊದಮೊದಲು ಎದೆ ಬಡಿದುಕೊಂಡು ಅತ್ತಳು. ಆದರೆ ನಂತರದಲ್ಲಿ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಮ್ಮನಾದಳು. ಕೊನೆಗೆ ಅಲ್ಲಿ ಊರಲ್ಲಿ ಅವಳೊಬ್ಬಳಿದ್ದು ಏನು ಮಾಡುವುದು ಅಂತ ಹೇಳಿ ಅವಳನ್ನೂ ಬೆಂಗಳೂರಿಗೆ ಕರೆದುಕೊಂಡು ಬಂದು ಬಿಟ್ಟೆ. ಈಗ ನನಗೆ ನಲವತ್ತು ನಡೆಯುತ್ತಿದೆ. ಸೆಕ್ಸ್ ವಿಷಯದಲ್ಲಿ ನನ್ನಂತವಳಿಗೆ ಸುಖದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗ ನಾನು ಎಲ್ಲದರಿಂದ ದೂರವಾಗಿ ಬದುಕುತ್ತಿದ್ದೇನೆ. ವಯಸಿದ್ದಾಗ ಉಳಿಸಿದ ಒಂದಷ್ಟು ದುಡ್ಡನ್ನು ಬ್ಯಾಂಕಿನಲ್ಲಿ ಹಾಕಿದ್ದೀನಿ ಅದರಲ್ಲಿ ಬರೋ ಬಡ್ಡಿಯಲ್ಲಿ ಇಬ್ಬರ ಜೀವನ ಮಾಡೋದು ಕಷ್ಟ ಅಂತಾ ನಾನೊಂದು ಪ್ರೈವೆಟ್ ಕಂಪನಿಯಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಕೊಂಡಿದಿನಿ.

ನೀವು ಹೇಳೋದು ನಿಜಾನೆ. ಊರಿನ ಬಸಪ್ಪನ ಅಕ್ಕ ಆಗ ಮಾಡ್ತಾ ಇದ್ದದ್ದು ಹಳ್ಳಿಗಳಿಂದ ಮನೆಗೆಲಸಕ್ಕೆ ಅಂತ ಹುಡುಗಿಯರನ್ನು ಕರೆದುಕೊಂಡು ಹೋಗಿ ಸಾಹೇಬರಂತ ದೊಡ್ಡವರಿಗೆ ಸಪ್ಲೈ ಮಾಡೋ ಕೆಲಸ. ಆಮೇಲವಳು ಅವರೆಲ್ಲ ಉಪಯೋಗಿಸಿದ ಹುಡುಗಿಯರನ್ನ ಇನ್ನೊಂದು ಮನೆಗೆ ತಲುಪಿಸಿ ಕಸುಬಿಗೆ ಇಳಿಸ್ತಾ ಇದ್ದಳು ಅಂತ. ಇಂತದ್ದೊಂದು ಕೆಲಸದಲ್ಲಿ ಆ ಎಂ.ಎಲ್.ಎ. ಅವನ ಮನೆ ಅಡುಗೆಯವಳು ಎಲ್ಲರೂ ಬಾಗಿಗಳು. ಆದರೆ ಆ ಚಿಕ್ಕ ವಯಸ್ಸಲ್ಲಿ, ಒಂದಕ್ಷರವನ್ನು ಓದಿರದ ನನ್ನಂತ ಹಳ್ಳಿ ಹುಡುಗೀಗೆ ಆಗ ಇವೆಲ್ಲ ಹೇಗೆ ಅರ್ಥವಾಗಬೇಕು ಹೇಳಿ. ಈಗ ಅದನ್ನೆಲ್ಲ ಯೋಚಿಸಿ ಏನು ಮಾಡಬೇಕಾಗಿದೆ, ಬಿಡಿ. ಮಾತು ಮುಗಿಸಿ ಎದ್ದವಳು ಅವರಮ್ಮನನ್ನು ಪರಿಚಯಿಸಿದಳು. ಅವರಿಗೆ ನಮಸ್ಕಾರ ಮಾಡಿ ಎದ್ದು ಬರುವಾಗ ಬದುಕು ನಾವಂದುಕೊಂಡಷ್ಟು ಸುಂದರವೇನಲ್ಲವೆನಿಸಿತು!

ಮೇ 22, 2015

ವಾಡಿ ಜಂಕ್ಷನ್ .... ಭಾಗ 11

wadi junction
Dr Ashok K R
“ಹಲೋ ಹಲೋ….” ಜಯಂತಿಯೆಂದು ಕೂಗಬೇಕೆಂದೂ ಗೊತ್ತಾಗಲಿಲ್ಲ. ದನಿ ಕೇಳಿ ಆಕೆ ನಡಿಗೆ ನಿಲ್ಲಿಸಿ ಹಿಂದೆ ತಿರುಗಿ ನೋಡಿದಾಗ ರಾಘವ ಅವಳ ಸಮೀಪವೇ ಬಂದಿದ್ದ.

“ನನ್ನ ಹೆಸರು ಹಲೋ ಅಲ್ಲ” ಸಿಡಿಲಿನ ಮೊರೆತ ಒಂದಷ್ಟು ಕಡಿಮೆಯಾಗಿತ್ತು.

“ಅದು ನನಗೂ ಗೊತ್ತು. ಆ ವಿಷಯ ಅತ್ಲಾಗಿರಲಿ. ನಮ್ಮ ಮನೆಯವರೇ ತಿಂಗಳ ಖರ್ಚಿಗೆ ಸಿಗರೇಟಿನ ಬೆಲೆಯನ್ನು ಲೆಕ್ಕಾ ಹಾಕಿ ಕೊಡ್ತಾರೆ. ಅವರೇ ನನ್ನನ್ನು ಕೇಳಲ್ಲ. ನೀನ್ಯಾರು ಕೇಳ್ಲಿ….. ಅದೂ ಹೋಗ್ಲಿ ನೀನ್ಯಾಕೆ ಕೇಳ್ತಾ ಇದ್ದೀಯಾ” ಜೋರಾಗಿದ್ದ ದನಿ ‘ಇದ್ದೀಯಾ’ಗೆ ಬರುವಷ್ಟರಲ್ಲಿ ಮೆದುವಾಗಿದ್ದಕ್ಕೆ ಅವಳ ಮುಖಾರವಿಂದ ವಹಿಸಿದ ಪಾತ್ರವನ್ನು ನಿರಾಕರಿಸುವಂತಿಲ್ಲ.

“ನಿನಗೆಲ್ಲಿ ಗೊತ್ತಾಗುತ್ತೆ. ಯಾಕೆ ಕೇಳ್ತಿದ್ದೀಯಾ ಅಂತೆ. ಮನುಷ್ಯರಿಗೆ ಅರ್ಥವಾಗುವ ವಿಷಯ. ನಿನಗೆಲ್ಲಿ ಗೊತ್ತಾಗುತ್ತೆ ಬಿಡು. ಬಾಯ್” ಎಂದ್ಹೇಳಿ ಹೊರಟುಹೋದವಳ ಕಣ್ಣು ತೇವಗೊಂಡಿದ್ದದ್ದು ಜ್ವರದ ತೀರ್ವತೆಗೋ ಅಥವಾ…. ತಲೆಕೊಡವಿ ರೂಮಿನೆಡೆಗೆ ನಡೆದಿದ್ದ ರಾಘವ.
‘ಅಬ್ಬಾ…. ಜಯಂತಿ!’ ಮತ್ತೊಮ್ಮೆ ಉಸಿರೆಳೆದುಕೊಂಡ.

ಎಂದಿಗಿಂತ ಅವತ್ತು ಹೆಚ್ಚೇ ಸಿಗರೇಟು ಸುಟ್ಟಿದ್ದ ರಾಘವ. ಎಲ್ಲಾ ಅಯೋಮಯ. “ಏನಾಯ್ತಲೇ ನಿನಗೆ?” ಎಂದು ಕೇಳಿದ ಅಭಯನಿಗೆ “ಹಿಂಗೆ ಸುಮ್ಮನೆ ಬೇಜಾರು” ಎಂದ್ಹೇಳಿ ತೇಲಿಸಿದ್ದ. ಅವಳೊಡನೆ ಮಾತಾಡಿದ್ದೂ ಇಲ್ಲ. ಅಪರೂಪಕ್ಕೆ ನೋಡಿದಾಗಲೊಮ್ಮೆ ಚೆನ್ನಾಗಿದ್ದಾಳಲ್ವಾ ಎಂದನ್ನಿಸಿದ್ದು ನಿಜವಾದರೂ ಅದರಾಚೆಗೆ ಯಾವ ಯೋಚನೆಗಳೂ ಹೊಳೆದಿರಲಿಲ್ಲ. ತಲೆಯಲ್ಲಿದ್ದ ನೂರಾರು ರೀತಿಯ ಚಿಂತೆ – ಚಿಂತನೆಗಳು, ಸುತ್ತಲಿದ್ದ ಗೆಳೆಯರ ಚಿತ್ರ ವಿಚಿತ್ರ ವಿಚಾರಗಳು, ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿಹೋಗಿದ್ದವನಿಗೆ ಬೇರೆ ವಿಷಯಗಳೆಡೆಗೆ ಅನಾದಾರವಿರದಿದ್ದರೂ ಆಸಕ್ತಿಯಂತೂ ಇರಲಿಲ್ಲ. ನಮ್ಮ ತರಗತಿಯ ಅಸ್ಪೃಶ್ಯ ಹುಡುಗರಲ್ಲೊಬ್ಬನಾದ ನನ್ನನ್ನು ಮಾತನಾಡಿಸಿದ್ದೂ ಅಲ್ಲದೆ ಮೊದಲ ದಿನವೇ ಸಿಗರೇಟು ಸೇದಿದ್ದಕ್ಕೆ ಬಯ್ದು ಹೋದಳಲ್ಲ. …. ಎಷ್ಟು ಧಿಮಾಕು ಅವಳಿಗೆ ಎಂದು ಕೋಪ, ಖುಷಿ, ಅಚ್ಚರಿ ಇವುಗಳೆಲ್ಲವನ್ನು ಮೀರಿದ ಭಾವ ಆವರಿಸಿ ಹಾಗೇ ಕಣ್ಣು ಮುಚ್ಚಿದ.

ಈ ಘಟನೆಯಾದ ನಂತರ ಜಯಂತಿ ಎದುರಿಗೆ ಸಿಕ್ಕರೆ ರಾಘವ ಗಲಿಬಿಲಿಗೊಳ್ಳುತ್ತಿದ್ದ. ತಲೆತಗ್ಗಿಸಿ ಹೋಗುತ್ತಿದ್ದ ಆಕೆ ಇವನತ್ತಲೇ ನೋಡುತ್ತಿದ್ದಾಗ್ಯೂ ಇವನೇ ತಲೆಬಗ್ಗಿಸಿಯೋ ಬೇರೆತ್ತಲೋ ನೋಡುವಂತೆ ನಟಿಸುತ್ತಿದ್ದನಾದರೂ ಕಣ್ಣು ಅಂಚಿಗೆ ಸರಿದು ಅವಳೆಡೆಗೆ ಹರಿಯುತ್ತಿದ್ದುದು ಸುಳ್ಳಲ್ಲ. ಅಂದೊಮ್ಮೆ ಅದೇ ಅಂಗಡಿಗೆ ನಾಲ್ಕೂ ಗೆಳೆಯರು ಹೋಗಿದ್ದಾಗ ಜಯಂತಿಯೂ ಅಲ್ಲೇ ಇದ್ದಳು. ಅಭಯ ಅಂಗಡಿಯವನಿಗೆ ನಾಲ್ಕು ಸಿಗರೇಟ್ ತರುವಂತೆ ಕೈಸನ್ನೆ ಮಾಡಿದ. ಇವನಿಗೋ ಉಭಯಸಂಕಟ, ಯಾಕೋ ಅವಳ ಮುಂದೆ ಸಿಗರೇಟು ಸೇದಲೂ ಮನಸ್ಸಿಲ್ಲ. ಸೇದೋದಿಲ್ಲ ಅಂದರೆ ಯಾಕೆ ಅಂತ ಇವರು ಪ್ರಶ್ನೆ ಮಾಡ್ತಾರೆ. ಏನು ಮಾಡೋದು ಅಂತ ಯೋಚಿಸುತ್ತಲೇ ಜಯಂತಿಯೆಡೆಗೆ ನೋಡಿದ. ಅವಳು ಇವನತ್ತಲೇ ಗಮನವಿರಿಸಿದ್ದಳು. ಪಕ್ಕದಲ್ಲಿ ಕುಳಿತಿದ್ದ ಅವಳ ಗೆಳತಿ ಪ್ರೇರಣಾ ಇವಳನ್ನೇನೋ ರೇಗಿಸಿ ಇವಳು ಹುಸಿಮುನಿಸು ತೋರಿಸಿ ನಕ್ಕು – ನನ್ನ ಬಗ್ಗೆಯೇ ಮಾತನಾಡಿದ್ರಾ? ಅಥವಾ ಇದೆಲ್ಲಾ ನನ್ನ ಭ್ರಮೆಯಾ? ಒಂದೂ ತಿಳಿಯದಂತಾದವನಿಗೆ ಅಭಯ “ತಗೊಳ್ಳೋ ಸಿಗರೇಟು” ಎಂದಾಗಲೇ ವಾಸ್ತವಕ್ಕೆ ಬಂದಿದ್ದು. “ಇಲ್ಲ. ನನಗೆ ಬೇಡ” ಎಂದ. “ಯಾಕಪ್ಪಾ ಸಿಗರೇಟ್ ಬಿಟ್ಬಿಟ್ಟಾ ಹೆಂಗೆ? ನಮಗೆಲ್ಲಾ ಸೀನಿಯರ್ ನೀನು. ನೀನೇ ಸಿಗರೇಟು ಬಿಟ್ಟುಬಿಟ್ಟರೆ ತಂಬಾಕು ಬೆಳೆಯೋ ರೈತರೆಲ್ಲಾ ಏನು ಮಾಡಬೇಕು?” ನಗುತ್ತಾ ಕೇಳಿದ. “ಇಲ್ಲೋ ಮಾರಾಯ. ಯಾಕೋ ಹೊಟ್ಟೆ ಉರಿ ಉರಿ. ಸದ್ಯಕ್ಕೆ ಬೇಡ ಅಷ್ಟೇ” ಎಂದ. ಅಭಯ ತಲೆಯಾಡಿಸಿ ಒಂದು ಸಿಗರೇಟನ್ನು ಜೇಬಿನೊಳಗೆ ಹಾಕಿಕೊಂಡು ಇನ್ನೆರಡು ಸಿಗರೇಟನ್ನು ತುಷಿನ್ ಮತ್ತು ಕ್ರಾಂತಿಗೆ ಕೊಟ್ಟು ತಾನೂ ಒಂದನ್ನು ಹಚ್ಚಿಕೊಂಡ. ಎರಡು ದಿನದ ಹಿಂದೆ ಮೈಸೂರು ಫಿಲ್ಮ್ ಸೊಸೈಟಿಯಲ್ಲಿ ನೋಡಿದ ಖಾಮೋಷ್ ಪಾನಿ ಎಂಬ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು ತುಷಿನ್ ಮತ್ತು ಕ್ರಾಂತಿ. ಅಭಯ್ ಅವರ ಮಾತುಗಳನ್ನು ಮೌನವಾಗಿ ಆಲಿಸುತ್ತಾ ಕುಳಿತಿದ್ದ. ಇಸ್ಲಾಂ ಹೆಸರಿನ ಭಯೋತ್ಪಾದನೆಯ ಬಗ್ಗೆ ಇದ್ದ ಆ ಚಿತ್ರ ಕ್ರಾಂತಿಗೆ ಬಹುವಾಗಿ ಇಷ್ಟವಾಗಿತ್ತು. ಧರ್ಮಿಷ್ಠರಾಗಿ, ಧರ್ಮಾಂಧರಾಗಿರದ ಒಂದಿಡೀ ಹಳ್ಳಿ ಹೇಗೆ ಕೆಲವೇ ಕೆಲವು ಮೂಲಭೂತವಾದಿಗಳ ವಿಚಾರಗಳಿಂದ ತಳಮಳಕ್ಕೊಳಗಾಗಿ ಬಹುತೇಕರು ವಿರೋಧಿಸಿದರೂ, ಒಂದಷ್ಟು ಯುವಕರು ಅವರ ವಿಚಾರಗಳ ಪ್ರಭಾವಕ್ಕೊಳಗಾಗಿ ಇಡೀ ಹಳ್ಳಿಯೇ ಅಧಃಪತನದತ್ತ ಸಾಗುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದರು. ತುಷಿನ್ ಹಿಂದೊಮ್ಮೆ ಟಿ.ವಿಯಲ್ಲಿ ನೋಡಿದ್ದ The Partition ಚಿತ್ರದ ಬಗ್ಗೆ ಹೇಳುತ್ತಿದ್ದ. ರಾಘವ ಅವರ ಮಾತುಗಳನ್ನು ಆಲಿಸುವಂತೆ ಮಾಡುತ್ತಾ ಜಯಂತಿಯತ್ತಲೇ ನೋಡುತ್ತಿದ್ದ. ಉಳಿದ ಮೂವರೂ ಅವಳಿಗೆ ಬೆನ್ನು ಮಾಡಿ ಕುಳಿತಿದ್ದರಿಂದ ಇವನ ನಟನೆ ಅವರಿಗೆ ತಿಳಿಯಲಿಲ್ಲ. ಜಯಂತಿ ಮತ್ತು ಪ್ರೇರಣಾ ದುಡ್ಡು ಕೊಟ್ಟು ಹೊರನಡೆದರು. ಜಯಂತಿಯ ಕಣ್ಣಿನಲ್ಲಿ ‘ಥ್ಯಾಂಕ್ಸ್ ಸಿಗರೇಟು ಸೇದದೇ ಇದ್ದುದಕ್ಕೆ’ ಎಂಬ ಭಾವವಿತ್ತು. ಅವರಿಬ್ಬರೂ ಮುಖ್ಯರಸ್ತೆಯಿಂದ ಎಡಕ್ಕೆ ಹಾಸ್ಟೆಲ್ಲಿನ ಕಡೆಗೆ ಹೊರಳುತ್ತಿದ್ದಂತೆ ರಾಘವ ಅಭಯನ ಜೇಬಿಗೆ ಕೈಹಾಕಿ ಸಿಗರೇಟು ತೆಗೆದುಕೊಂಡ. “ಯಾಕಪ್ಪಾ ಇಷ್ಟು ಬೇಗ ಹೊಟ್ಟೆ ಉರಿ ಕಡಿಮೆಯಾಗಿ ಹೋಯ್ತ?” ಚಿತ್ರದ ಗುಂಗಿನಿಂದ ಹೊರಬರುತ್ತಾ ಕೇಳಿದ ಕ್ರಾಂತಿ. “ಬಿಡೊಲೋ. ಒಂದು ಮಾತ್ರೆ ನುಂಗಿದ್ರೆ ಸರಿಯಾಗುತ್ತೆ. ಹೊಟ್ಟೆ ಉರಿಗೆ ಹೆದರ್ಕೊಂಡು ಸಿಗರೇಟು ಸೇದದಿರೋ ಪಾಪ ಮಾಡಲಿಕ್ಕಾಗುತ್ತಾ?” ಎನ್ನುತ್ತಾ ಸಿಗರೇಟು ಹಚ್ಚಿಕೊಂಡ.

“ಒಂದ್ನಿಮಿಷ ತಡಿ ಬಂದೆ” ಎಂದ್ಹೇಳಿ ಪ್ರೇರಣ ಹಿಂದಕ್ಕೆ ತಿರುಗಿ ಕಳ್ಳಹೆಜ್ಜೆಯನ್ನಿಡುತ್ತಾ ಮುಖ್ಯರಸ್ತೆಯ ಅಂಚಿಗೆ ಬಂದು ನೋಡಿದಳು. ರಾಘವ ಆನಂದವಾಗಿ ಹೊಗೆಯ ಜೊತೆ ನಲಿದಾಡುತ್ತಿದ್ದ. ಜೋರಾಗಿ ನಗುತ್ತಾ ಜಯಂತಿಯೆಡೆಗೆ ಓಡಿಬಂದು “ನಾನಂದುಕೊಂಡಂತೆ ಆಯ್ತು ಕಣೇ. ನೀನೀಕಡೆ ಬರುತ್ತಿದ್ದಾಗೆ ಸಿಗರೇಟು ಹಚ್ಚಿ ಕುಳಿತಿದ್ದಾನೆ ಭೂಪ” ಎಂದಳು. ಜಯಂತಿಗೆ ಒಂದಷ್ಟು ಬೇಸರವಾದರೂ ತೋರ್ಪಡಿಸಿಕೊಳ್ಳದೆ “ಇರ್ಲಿ ಬಿಡು. ಕೊನೇಪಕ್ಷ ನನ್ಮುಂದೇನಾದರೂ ಸೇದಲಿಲ್ಲವಲ್ಲ” ಎಂದು ತನಗೇ ಸಮಾಧಾನ ಹೇಳಿಕೊಂಡಳು. “ಹೌದಮ್ಮ. ನಿನ್ನ ಹುಡುಗನನ್ನು ಎಲ್ಲಿ ಬಿಟ್ಟುಕೊಡ್ತೀಯ. ಆದ್ರೂ ಜಯಂತಿ ಒಂದು ಮಾತು. ನಿನಗೆ ಹೋಲಿಸಿದರೆ ಅವನು ತುಂಬಾ ಚೆನ್ನಾಗೇನೂ ಇಲ್ಲ. ಸಾರಿ ಸಾರಿ, ಚೆನ್ನಾಗೇ ಇದ್ದಾನೆ ಅಂತಿಟ್ಕೋ. ಜೊತೆಗೆ ಹುಡುಗೀರಿಗೆ ಕಾಮನ್ನಾಗಿ ಇಷ್ಟವಾಗೋ ಗುಣಗಳೂ ಅವನಿಗೆ ಇರೋದು ಡೌಟು. ಅಂಥವನನ್ನು ನೀನು ಇಷ್ಟಪಟ್ಟಿದ್ದಾದರೂ ಯಾಕೆ ಅಂತ”. ಕಾಲೇಜಿನ ಗೇಟು ತಲುಪುವವರೆಗೆ ಸುಮ್ಮನೆಯೇ ಇದ್ದಳು ಜಯಂತಿ. “ಯಾಕೆ ಅನ್ನೋದು ನನಗೂ ಸರಿಯಾಗಿ ತಿಳಿದಿಲ್ಲ ಕಣೇ. ಅವನನ್ನು ನೋಡಿದ ದಿನಾನೇ ಏನೋ ಆಕರ್ಷಿಸಿತು. ಯಾರಿಗೂ ಕೇರ್ ಮಾಡದಿರುವ ಹಾಗಿರುವ ಅವನ ಕಣ್ಣುಗಳೋ…. ಏನೋಪ್ಪಾ ಇಂಥಾದ್ದೇ ಕಾರಣ ಅಂಥ ನನಗೂ ಗೊತ್ತಿಲ್ಲ. ಯಾರಿಗೆ ಗೊತ್ತು. ಅವನೆಡೆಗೆ ಈಗಿರೋ ಆಕರ್ಷಣೆ ಅಪ್ಪಿತಪ್ಪಿ ನಾಳೆ ಆತ ಪರಿಚಿತನಾದ ನಂತರ ಕಡಿಮೆಯಾಗಿಬಿಡಬಹುದೋ ಏನೋ ಅದಿಕ್ಕೆ ಒಮ್ಮೊಮ್ಮೆ ಅನ್ನಿಸುತ್ತೆ, ಆತನ ಬಗ್ಗೆ ಕನಸುಗಳೇ ಇರಲಿ, ಆ ಕನಸುಗಳು ನನಸಾಗೋದೇ ಬೇಡ ಅಂತ. ಕನಸು ನನಸಾಗೋ ಭರದಲ್ಲಿ ಭ್ರಮನಿರಸನಾಗಿಬಿಡುತ್ತೋ ಅನ್ನೋ ಭಯ” ಮಾತು ಮುಂದುವರಿಸುತ್ತಾ “ಈ ನಾಲ್ಕೂ ಜನರ ಬಗ್ಗೆ ನಿನಗೇನನ್ನಿಸುತ್ಯೇ ಪ್ರೇರಣ”

“ಹುಚ್ ನನ್ ಮಕ್ಳು ಅನ್ಸುತ್ತೆ” ನಕ್ಕಳು. ಜಯಂತಿಯ ಮುಖದಲ್ಲಿದ್ದ ಗಂಭೀರತೆಯನ್ನು ನೋಡಿ “ಇನ್ನೇನು ಹೇಳೋದೆ ಜಯಂತಿ. ಕ್ಲಾಸಿನ ಬಹುತೇಕರು ಫಿಲಮ್ಮೂ, ಟ್ರಿಪ್ಪೂ, ಸುತ್ತಾಟ, ಶಾಪಿಂಗೂ ಅಂತ ತಿರುಗಾಡ್ತಾ ಲೈಫ್ ನ ಎಂಜಾಯ್ ಮಾಡ್ತೀವಿ. ಇನ್ನೊಂದಷ್ಟು ಜನ ಓದ್ಲಿಕ್ಕೇ ಹುಟ್ಟಿದ್ದಾರೇನೋ ಎಂಬಂತೆ ಪಠ್ಯಪುಸ್ತಕಗಳಿಂದಾಚೆಗೆ ಬರೋದೇ ಇಲ್ಲ. ಇವರು ಅಲ್ಲೂ ಸಲ್ಲದೆ ಇಲ್ಲೂ ಇಲ್ಲದೆ ಏನು ಮಾಡ್ತಿದ್ದೀವಿ ಅನ್ನೋದನ್ನು ಸರಿಯಾಗಿ ತೋರ್ಪಡಿಸದೆ ಇರುತ್ತಾರಲ್ಲ. ಈ ರೀತಿಯಾಗೂ ಸ್ಟೂಡೆಂಟ್ಸಿರಬಹುದು ಅನ್ನೋ ಕಲ್ಪನೇನೆ ನನಗೆ ಬರಲ್ಲ. ನಮ್ಮ ಬ್ಯಾಚಷ್ಟೇ ಅಲ್ಲ. ಪ್ರತಿ ಬ್ಯಾಚಲ್ಲೂ ಇಂಥ ಕೆಲವು ಹುಡುಗ್ರು ಇದ್ದೇ ಇರ್ತಾರೆ. ಆದ್ರೂ ನಿಜ ಹೇಳಬೇಕೂ ಅಂದ್ರೆ ನಮ್ಮ ಬ್ಯಾಚಿನ ಕೆಲವು ಹುಡುಗ್ರು ಯಾವಾಗಲೂ ಅವರು ನಾಲ್ಕೂ ಜನ ಸರಿ ಇಲ್ಲ ಸರಿಯಿಲ್ಲ ಅಂತ ಬಾಯಿ ಬಡಕೋತಾರೆ. ನನಗಂತೂ ಅವರಲ್ಲಿ ಯಾವ ಕೆಟ್ಟತನಾನೂ ಕಂಡಿಲ್ಲಪ್ಪ. Ofcourse ಸಿಗರೇಟ್ ಸೇದ್ತಾರೆ, ಕುಡೀಲೂಬಹುದು….ಅಷ್ಟಕ್ಕೇ ಕೆಟ್ಟೋರಾಗಿಬಿಡೋದಿಲ್ಲ ಅಲ್ವಾ. ಅವರು – ಡಿಸೆಕ್ಷನ್ನಿನಲ್ಲಿ ನನ್ನ ಟೇಬಲ್ಲಿನಲ್ಲಿರೋ ರಾಘವನ ಬಗ್ಗೆಯಷ್ಟೇ ಹೇಳಬಲ್ಲೆ ಬೇರೆಯವರ ಬಗ್ಗೆ ಕೆಟ್ಟದಾಗಿ, atleast ನಮ್ಮ ಮುಂದೆ ಮಾತನಾಡಿದ್ದು ನೋಡಿಲ್ಲ. ನಾನೇ ಏನಾದ್ರೂ ಕೇಳಿದ್ರೆ ಎಷ್ಟು ಹೇಳಬೇಕೋ ಅಷ್ಟೇ. ತೂಕಕ್ಕೆ ಹಾಕಿದಂತೆ ಮಾತು. ಅವರು ಒಳ್ಳೆಯವರಾ ಗೊತ್ತಿಲ್ಲ. ಕೆಟ್ಟವರಂತೂ ಇರಲಿಕ್ಕಿಲ್ಲ”

“ಥ್ಯಾಂಕ್ಸ್”…. “ನನ್ನ ಟೇಬಲ್ಲಲ್ಲಿರೋ ಕ್ರಾಂತೀನೂ ಅಷ್ಟೇ. ಮಾತು ಕಡಿಮೇನೆ. ಆದರೆ ಅವತ್ತೊಂದಿನ ಟೇಬಲ್ಲಲ್ಲಿ ಮಾತು ಪಾಠ ಬಿಟ್ಟು ಎತ್ತೆತ್ತಲೋ ಹರಿದು ಕಥೆ ಕಾದಂಬರಿಗಳ ಕಡೆಗೆ ಹರೀತು. ಸಿಡ್ನಿ ಶೆಲ್ಡನ್, ರಾಬಿನ್ ಕುಕ್, ಚೇತನ್ ಭಗತ್ – ಹೀಗೆ ಒಬ್ಬೊಬ್ಬರು ಒಂದೊಂದು ಪುಸ್ತಕದ ಬಗ್ಗೆಯೋ ಲೇಖಕನ ಬಗ್ಗೆಯೋ ಮಾತನಾಡ್ತಿದ್ವಿ. ನಾನೇ ಕೇಳಿದ್ನೋ ಇನ್ಯಾರು ಕೇಳಿದ್ರೋ ನೆನಪಿಲ್ಲ ನೀನು ಪುಸ್ತಕಳನ್ನು ಓದಲ್ವಾ ಕ್ರಾಂತಿ ಎಂದು ಕೇಳಿದಾಗ. ‘ಓದ್ತೀನಿ’ ಅಂದ. ‘ನಿನ್ನ ಫೇವರೇಟ್ ಲೇಖಕ’ ಅಂತ ಕೇಳಿದ್ದಕ್ಕೆ ‘ಸದ್ಯಕ್ಕೆ ವ್ಯಾಸರಾಯ ಬಲ್ಲಾಳರು’ ಅಂದಿದ್ದಕ್ಕೆ ಆ ಜ್ಯೋತಿ ಜೋರಾಗಿಯೇ ‘ಓ ಕನ್ನಡ ಪುಸ್ತಕ ಓದ್ತೀಯಾ ನೀನು’ ಎಂದು ಒಂದಷ್ಟು ವ್ಯಂಗ್ಯವಾಗಿ ಹೇಳಿದಳು ನೋಡು. ಆ ಕ್ರಾಂತಿ ಇರಿಯೋ ಕಣ್ಣಿನಿಂದ ಅವಳೆಡೆಗೆ ನೋಡುತ್ತಾ ‘ನೀವುಗಳು ಓದೋ ರೀತಿಯ ಇಂಗ್ಲೀಷ್ ಪುಸ್ತಕಗಳನ್ನು ಓದಿದ್ದೀನಿ ಒಂದೆರಡು. ಒಂದಷ್ಟು ತಿರುವುಗಳು, ಬಹಳಷ್ಟು ಸೆಕ್ಸೂ…. ಇದಕ್ಕಿಂತ ಹೆಚ್ಚಾಗಿ ಅವುಗಳಲ್ಲಿ ತಿಳಿದುಕೊಳ್ಳಬಹುದಾದ್ದೇನೂ ಇರಲಿಲ್ಲ. ಸೆಕ್ಸ್ ಬಗ್ಗೇನೆ ಓದಬೇಕು ಅಂದ್ರೆ ಲ್ಯಾಂಡ್ಸ್ ಡೌನ್ ಬಿಲ್ಡಿಂಗ್ ಎದುರಿಗೆ ಸೆಕೆಂಡ್ ಹ್ಯಾಂಡಿನಲ್ಲಿ ಐದು ರುಪಾಯಿಗೆ ಒಂದು ಮೋಜು ಗೋಜು ಸಿಗುತ್ತೆ’ ಅಂದದ್ದಕ್ಕೆ ಜ್ಯೋತಿ ಅಲ್ಲೇ ಕಣ್ಣೀರಾದಳು. ಇವನು ಸಮಾಧಾನ ಮಾಡೋದಿರಲಿ ಅವಳೆಡೆಗೆ ತಿರುಗಿಯೂ ನೋಡಲಿಲ್ಲ. ನಾವೆಲ್ಲಾ ಶೋಕಿಗೋ, ಪ್ರೆಸ್ಟೀಜಂತ ತಿಳ್ಕೊಂಡೋ ಇಂಗ್ಲೀಷ್ ಪುಸ್ತಕದ ಹೆಸರು ಹೇಳಿದ್ದೆವೇನೋ ಅಂತ ನನಗೇ ಅನ್ನಿಸ್ತು. ಇನ್ನೂ ವಿಚಿತ್ರ ಅಂದ್ರೆ ಇನ್ನೇನು ಕ್ಲಾಸಿನಿಂದ ಹೊರಡಬೇಕಾದರೆ ‘ಜ್ಯೋತಿ’ ಎಂದು ಕೂಗಿದ. ಸಾರಿ ಕೇಳೋದಿಕ್ಕಿರಬೇಕು ಅಂದುಕೊಂಡೆ. ಅವಳ ಕೈಗೊಂದು ಎಂಟುನೂರು ಪುಟದ ಪುಸ್ತಕ ಕೊಟ್ಟು ‘ನೀವು ಹೇಳೋ ಪುಸ್ತಕಗಳು ಆ ಕ್ಷಣದ ಮಟ್ಟಿಗಷ್ಟೇ ತೃಪ್ತಿ ಕೋಡೋದು. ಓದಿ ಮುಗಿಸಿ ಎರಡು ದಿನ ಕಳೆಯುವಷ್ಟರಲ್ಲಿ ಪಾತ್ರಗಳು, ಕಥೆ ಯಾವುದೂ ನೆನಪಿನಲ್ಲಿರೋದಿಲ್ಲ. ಈ ಪುಸ್ತಕ ಓದಿ. ವ್ಯತ್ಯಾಸ ನಿಮಗೇ ಗೊತ್ತಾಗುತ್ತೆ’ ಎಂದ್ಹೇಳಿ ಹೊರಟು ಹೋದ. The Fountain Head ಅಂತ ಪುಸ್ತಕದ ಹೆಸರು. ಜ್ಯೋತೀನೂ ತಿರುಗಿಸಿಯೇ ತಿರುಗಿಸಿದಳು. ‘ಇಂಗ್ಲೀಷ್ ಪುಸ್ತಕ ಓದ್ತೀವಿ ಅನ್ನೋ ಕೊಬ್ಬಿತ್ತು. ಮೊದಲ ಓದಿಗೆ ಅರ್ಥ ಮಾಡಿಕೊಳ್ಳುವುದೇ ಕಷ್ಟವಾದ ಪುಸ್ತಕ ಕೊಟ್ಟು ಸರಿಯಾಗೇ ಬುದ್ಧಿ ಕಲಿಸಿದ’ ಎಂದು ನಗುತ್ತಲೇ ಸೋಲು ಸ್ವೀಕರಿಸಿ ಒಂದು ವಾರಕ್ಕೇ ವಾಪಸ್ಸು ಮಾಡಿದಳು. ಅವನು ಏನೂ ಮಾತನಾಡಲಿಲ್ಲ. ನಂತರವೂ ಅವಳ ಜೊತೆ ಮಾತನಾಡಿದ್ದು ನೋಡಿಲ್ಲ”

“ಇವರು ನಿಜಕ್ಕೂ ವಿಚಿತ್ರವೋ ಅಥವಾ ವಿಚಿತ್ರ ನಾವು ಅನ್ನುವ ಹಾಗೆ ನಟಿಸುತ್ತಾರೋ? ಹೇಳೋದು ಕಷ್ಟಾನೇ. ಅವರು ಇಷ್ಟು ನಿಗೂಢವಾಗಿರೋದಿಕ್ಕೇ ಅಲ್ವಾ ಅವರೆಡೆಗೆ ನಮಗೆ ಕುತೂಹಲ” ಎಂದು ಕೇಳಿದಳು ಪ್ರೇರಣ. ಹೌದೆಂಬಂತೆ ತಲೆಯಾಡಿಸಿದಳು ಜಯಂತಿ.

ಮೇ 21, 2015

Arvind Kejriwal vs Lieutenant Governor Najeeb Jung

Narasimhan Khadri
The public spat between Arvind Kejriwal and Lieutenant Governor Najeeb Jung is condemnable but inevitable, given the notorious and dubious roles played by governors and LGs in the past.

Read this story when modi as a CM had such vocal fight between his governor related to the appointment of lokayukta


Reforming the role and appointment process of the governors is the need of the hour. Whimsical and often adhoc manner that every union government uses in the appointments of governors should be done away with and a uniform procedures should be brought in, consistent with the federal nature of our polity. Raj bhavan cannot be a retirement homes for bureaucrats and aged politicians.

As they often do, media always picks the wrong end of the stick. Or rather the end which just creates noice more than anything alse. Salman khan verdict could have been used as a classical case of educating people about the dangers of drunken driving. All they did instead was to give ball-by-ball commentary about salman's road trip to the court. Similarly, Lieutenant Governor v/s Chief Minister issue can be used by the media to educate people about the intricacies about such conflicts and also lobby for reforms. 

Modi's supporters have used this occasion to pounce on Arvind Kejriwal and have labelled him as an anarchist who is not interested in governing but only controversies. It is true that Arvind Kejriwal should stop indulging in theatrics time and time again, there is not an iota of truth that he is doing mal-governance.His innovative idea of decentralized budget preparation, despite its many short comings, requires widest possible publicity. His attempts to bring transparency in the administration deserves credit which is due. Mainstream media has colour blindness for such issues. 

If the delhi Chief Minister can't chose his chief secretary and even that call will be taken by the Home minister or Lieutenant Governor then why did we have an election and why did our PM and his cabinet colleagues canvas?

To conclude, delhi government has raised a very valid issue that many Chief Ministers have raised in the past(including PM modi). It might still be for a half-state of delhi. One can indeed argue that it could have been done in a more mellowed voice. Popular CMs like kejriwal and Mamata Banerjee should learn the 'art' to take the combat into south block and not come back with empty hands.

Share your views
image source: ndtv