ಡಿಸೆಂ 21, 2014

ದಾಂಪತ್ಯ ಗೀತೆ

ಉಮೇಶ ಮುಂಡಳ್ಳಿ ಭಟ್ಕಳ
ತವರು ಸಿರಿಗಿಂತ
ನಿಮ್ಮ ಮನ ಹಿರಿದೆನಗೆ
ನಿಮ್ಮ ಎದೆ ಆಸರೆಯು 
ಒಲವು ನನಗೆ.

ಡಿಸೆಂ 19, 2014

ನಂಬಿಕೆಯ ಸೌಧ

ರೇಷ್ಮಾ ಉಮೇಶ ಭಟ್ಕಳ
ಬೆಳಗಿನಿಂದ ಮನೆಯಲ್ಲಿ ಒಂದೇ ಸವನೆ ಗಜಿವಿಜಿಯಿಂದ ಕೂಡಿದ ಕೆಲಸ ಕಾರ್ಯಗಳು. ಒಂದೆಡೆ ಮಕ್ಕಳ ತಿಂಡಿ ತೀರ್ಥಗಳ ತಕರಾರು,ಇನ್ನೊಂದೆಡೆ ಗಂಡನ ಆಜ್ಞೆಯ ಭೂತಗಳು, ಇವೆಲ್ಲವುಗಳ ನಡುವೆ ತೊಂದರೆ ಅನುಭವಿಸುವವಳು ನನ್ನ ಬೆಟರ್ ಹಾಪ್, ಅಂದರೇ ನನ್ನ ಅರ್ಧಾಂಗಿ. ಆಕೆಯನ್ನು ಅರ್ದಅಂಗಿ ಎಂದು ಸದಾ ನಾನು ರೇಗಿಸುತ್ತಿದ್ದೆ. ಅವಳು ಸಹ ತಮಾಷೆಗೇನು ಕಡಿಮೆ ಇರಲಿಲ್ಲ, ಆಕೆಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವಲ್ಲಿಯೂ ನನ್ನ ಮಾತಿಗೆ ಪ್ರತಿಯಾಗಿ ಅರ್ಧ ಅಂಗಿನೋ ಅಥವಾ ಹರಿದ ಅಂಗಿನೋ ಎಂದು ರೇಗಿಸುತ್ತಿದ್ದಳು. ಆದರೆ ಇಂತಹ ತಮಾಷೆಯ ಸಂದರ್ಭದಲ್ಲು ನನ್ನ ಕಣ್ಮುಂದೆ ಕಟ್ಟುತ್ತಿದ್ದ ಸ್ಥಿತಿ ಅಗೋಚರ, ಚಿತ್ತ ಚಂಚಲ ಮಾಡುವಂತದ್ದು.  ಆದರೆ ಅವಳನ್ನು ನೋಡಿದಾಗಲೆಲ್ಲ ಶರೀಫ್‍ರ ಹಾಡು ನೆನಪಿಗೆ ಬರುತ್ತಿತ್ತು.

ಡಿಸೆಂ 18, 2014

ಸ್ವಚ್ಛತೆಯ ಕಾರ್ಮಿಕರಿಗೆ ಬಿ.ಬಿ.ಎಂ.ಪಿಯ ‘ಗೌರವ’

pourakarmikas protest
ಸಂಬಳ ಕೇಳುತ್ತಿದ್ದೇವೆ ಭಿಕ್ಷೆಯಲ್ಲ
 ಇಂಗ್ಲೀಷ್ ಮೂಲ: ರವಿ ಕೃಷ್ಣರೆಡ್ಡಿ
ಅನುವಾದ: ಡಾ. ಅಶೋಕ್.ಕೆ.ಆರ್
ಈ ದೌರ್ಜನ್ಯದ ಬಗ್ಗೆ ಬೆಂಗಳೂರಿಗರಿಗೆ ನಾಚಿಕೆಯಾಗಬೇಕು. ಮೂರು ವಾರ್ಡಿನ ಇನ್ನೂರು ಮಂದಿ ಪೌರಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಸಂಬಳವಾಗಿಲ್ಲ. ಸಿಗುವ ಕನಿಷ್ಠ ಸಂಬಳಕ್ಕಾಗಿ ಈ ಪೌರಕಾರ್ಮಿಕರು ಈ ವರುಷದಲ್ಲಿದು ಏಳನೇ ಬಾರಿ ಪ್ರತಿಭಟನೆಯ ಹಾದಿ ಹಿಡಿದಿರುವುದು. ಇಡೀ ನಗರದಲ್ಲಿ ಇಂಥವರ ಸಂಖೈ ಸಾವಿರದ ಆಸುಪಾಸಿನಲ್ಲಿರಬಹುದು.

ಆರಂಭ ಚಿತ್ರದ ಹಾಡುಗಳ ವೀಡಿಯೋ ಯೂಟ್ಯೂಬಿನಲ್ಲಿ ಲಭ್ಯ

ಶರ ಪ್ರೊಡಕ್ಷನ್ಸ್ ಬ್ಯಾನರ್ರಿನಡಿಯಲ್ಲಿ ಡಿ.ಗಣೇಶ್ ವಿ. ನಾಗೇನಹಳ್ಳಿ ನಿರ್ಮಿಸುತ್ತಿರುವ ಎಸ್. ಅಭಿ ಹನಕೆರೆ ನಿರ್ದೇಶನದ  "ಆರಂಭ - The Last Chance" ಚಿತ್ರದ ಹಾಡುಗಳ ವೀಡಿಯೋ, ಟ್ರೇಲರ್ ಮತ್ತು ಟೀಸರ್ ಆಲ್ಫಾ ಡಿಜಿಟೆಕ್ ಮೂಲಕ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಒಂದು ಭಾಗವಾಗಿ 'ಹಿಂಗ್ಯಾಕೆ'ಯೂ ಇರುವುದರಿಂದ ಹಾಡುಗಳ ವಿಮರ್ಶೆಯನ್ನು ನಾವೇ ಮಾಡುವುದು ಸಾಧುವಲ್ಲವಲ್ಲವೇ? ಕೇಳಿ ಕಮೆಂಟಿಸಿ ಇಷ್ಟವಾದರೆ ನಿಮ್ಮ ಸ್ನೇಹಿತರ ವಲಯದಲ್ಲಿ ಹಂಚಿಕೊಳ್ಳಿ. ಥೂ ಸರಿಯಿಲ್ಲ ಎನ್ನಿಸುವಂತಹ ದೃಶ್ಯಗಳೂ ಇದ್ದರೆ ಹೇಳಿ ನಿರ್ದೇಶಕರಿಗೆ ತಲುಪಿಸುತ್ತೇವೆ.

ಸ್ಟೋರಿ ಇದ್ರೂ ಮತ್ತೊಂದಿದ್ರು ಈ ರೀತಿ ಪೋಲಿ ಕಮರ್ಷಿಯಲ್ ಇರಲೇ ಬೇಕಾ?
https://www.youtube.com/watch?v=WCe6uecDZY0&authuser=0

ಡಿಸೆಂ 13, 2014

ಪಿರಿಯಾಪಟ್ಟಣ ಎಂಬ ಅಭಿವೃಧ್ದಿ ವಂಚಿತ ತಾಲೂಕು

ಪಿರಿಯಾಪಟ್ಟಣ
Vasanth Raju N
ಪಿರಿಯಾಪಟ್ಟಣ ಮೈಸೂರಿನ ಪ್ರಮುಖ ತಾಲ್ಲೊಕು ಕೇಂದ್ರ. ಕೊಡಗಿನ ಅಂಚಿನಲ್ಲಿರುವ ಈ ತಾಲ್ಲೊಕು ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಕೃಷಿಗೆ ಪ್ರಸಿದ್ದಿ. ಬೈಲ್‍ಕುಪ್ಪೆ (ಟಿಬೆಟ್ ನಿರಾಶ್ರಿತ ಪ್ರದೇಶ) ಕರ್ನಾಟಕದ ಬೌದ್ದ ಧರ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇದಲ್ಲದೇ ಇತಿಹಾಸ ಪ್ರಸಿದ್ದಿ ಕನ್ನಂಬಾಡಿ ಮತ್ತು ಮಸಣಿಕಮ್ಮ ದೇವಸ್ಥಾನಗಳು ಕೂಡ ಪ್ರಮುಖ ಭಕ್ತಿ ಕೇಂದ್ರಗಳು. ಅದರೆ ಈ ತಾಲೂಕು ಯಾವುದೇ ರಚನಾತ್ಮಕ ಅಭಿವೃದ್ದಿ ಕಾಣದೇ ಹಿಂದುಳಿದಿದೆ. ಇದಕ್ಕೆ ಕಾರಣವಾಗಿರುವ ಕೆಲ ಅಂಶಗಳನ್ನು ಕುರಿತು ಚರ್ಚೆಯ ಉದ್ದೇಶ ಈ ಲೇಖನದ್ದು.

ಡಿಸೆಂ 10, 2014

ಅಂಗವಿಕಲರ ರಾಜ್ಯ ಸಂಘಟನೆಗೆ ಸಹಕರಿಸಲು ಮನವಿ

office bearers
ಪತ್ರಿಕಾ ಪ್ರಕಟಣೆ.
ಅಂಗವಿಕಲರ ಅಭಿವೃದ್ಧಿಗಾಗಿ ಕಳೆದ 40 ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವ ಶ್ರೀ ಕೊಡಕ್ಕಲ್ ಶಿವಪ್ರಸಾದರು ಇದೀಗ ಅಖಿಲ ಭಾರತ ಅಂಗವಿಕಲರ ನೌಕರರ ಸಂಘ (ರಿ) ಇದರ ರಾಜ್ಯ ಸಂಚಾಲಕರಾಗಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಅವರೀಗ ಕರ್ನಾಟಕದಲ್ಲಿ ಅಂಗವಿಕಲರ ಸಂಘಟನೆಗಾಗಿ ಕಾರ್ಯತತ್ಪರರಾಗಿದ್ದಾರೆ.

ಕರ್ನಾಟಕ ಮೊಬೈಲ್ ಒನ್: ಕಿರುಪರಿಚಯ

karnataka mobile one
ಮೊದಲ ಪುಟ
ಭಾರತದ ಐಟಿ ಕ್ಯಾಪಿಟಲ್ ಎಂದೇ ಹೆಸರುವಾಸಿಯಾಗಿರುವುದು ನಮ್ಮ ರಾಜಧಾನಿ ಬೆಂಗಳೂರು. ಐಟಿ ಕ್ಯಾಪಿಟಲ್ ಆಗಿರುವುದರಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಅನೇಕ ಅನುಕೂಲಗಳೂ ಆಗಿವೆ, ಅನಾನುಕೂಲಗಳೂ ಆಗಿವೆ. ಐಟಿ ತಂತ್ರಜ್ಞಾನವನ್ನು ಸರಕಾರದ ವತಿಯಿಂದ ಜನರ ಬಳಿಗೆ ಕೆಲಸವೊಂದು ನಡೆದಿದೆ. ಎಲ್ಲರೊಳಗೊಂದಾಗಿರುವ ಮೊಬೈಲು ಫೋನುಗಳನ್ನು ಉಪಯೋಗಿಸಿಕೊಂಡು ಸರಕಾರದ ವಿವಿಧ ಇಲಾಖೆಗಳನ್ನು ಮತ್ತನೇಕ ಖಾಸಗಿ ಸೇವೆಗಳನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೊಬೈಲ್ ಒನ್ ಯೋಜನೆ ಸಿದ್ಧರಾಮಯ್ಯನವರ ಆಸಕ್ತಿಯಿಂದಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಜಾರಿಗೊಂಡಿದೆ.

ಡಿಸೆಂ 9, 2014

ಮೌಡ್ಯದ ವಿರುದ್ಧ ಕಿಕ್ ಔಟ್ ಸಮರ

kickout astrologers
Dr Ashok K R
ನಂಬಿಕೆಗೂ ಮೂಢನಂಬಿಕೆಗೂ ನಡುವಿನ ಗೆರೆ ಅತಿ ತೆಳುವಾದದ್ದು. ಜೊತೆಗೆ ಅನಾದಿ ಕಾಲದಿಂದ ನಂಬಿಕೊಂಡು ಬಂದ ಮೂಢನಂಬಿಕೆ ಕಾಲ ಸವೆದ ಹಾಗೆ ನಂಬಿಕೆಯಾಗಿ ಮಾರ್ಪಟ್ಟು ಆ ಆಚರಣೆಯನ್ನು ಮೌಡ್ಯವೆಂದು ಹೇಳುವವರೇ ಮೂಢರೆಂದು ಜರೆಯುವವರ ಸಂಖೈ ಹೆಚ್ಚುತ್ತದೆ. ಪ್ರತಿ ನಂಬಿಕೆಗೆ ಹೇಗೆ ಪ್ರತ್ಯಕ್ಷ ಪರೋಕ್ಷ ಕಾರಣಗಳಿವೆಯೋ ಅದೇ ರೀತಿ ಮೂಢನಂಬಿಕೆಗೂ ಕಾರಣಗಳಿವೆ. ನಂಬಿದವರಿಗದು ಮೌಡ್ಯತೆ ಎಂದು ತಿಳಿಹೇಳಬೇಕಿರುವುದು ವೈಚಾರಿಕ ಸಮಾಜದ ಕರ್ತವ್ಯವಾ? ಅಥವಾ ಒಬ್ಬರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪಾಗುತ್ತದೆ ಎಂಬ ನಂಬುಗೆಯೊಂದಿಗೆ ಮೂಡತೆಯೆಡೆಗೆ ಸಾಗುವವರ ಸಂಖೈ ಹೆಚ್ಚಾಗುತ್ತಿದ್ದರೂ ತೆಪ್ಪಗಿರಬೇಕಾ? ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಿಧ ಘಟನಾವಳಿಗಳು, ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಪ್ರತಿಭಟನೆಗಳು, ಎಫ್ ಐ ಆರ್, ಪ್ರತಿ – ಎಫ್ ಐ ಆರ್ ಗಳು ಇಂತಹ ಪ್ರಶ್ನೆಗಳನ್ನು ಮೂಡಿಸಿ ಒಂದಷ್ಟು ದ್ವಂದ್ವಗಳನ್ನು ಮೂಡಿಸುತ್ತವೆ.

ಡಿಸೆಂ 8, 2014

LIBRARY FOR A CAUSE

MyLISA
Tent Library
N. S. Harinarayana; Sunil M. V; Dr. N. Vasantharaju
The Mysore Librarian and Information Scientists Association (MyLISA) in Mysore runs a Tent Library.
“Books are for Use” and “Books for all” are the dictums propounded by Padmashree S.R. Ranganathan, also called the ‘Father of Library Movement in India’.

ಡಿಸೆಂ 4, 2014

ಹಿಂದಿ ಹೇರಿಕೆಯ ವಿವಿಧ ಹಂತಗಳು

santemavattur
ಹಿಂದಿ ಹೇರಿಕೆ
Dr Ashok K R
ತಾತ ತೀರಿಹೋಗಿದ್ದ ಕಾರಣ ಕುಣಿಗಲ್ ಸಮೀಪದ ಊರಿಗೆ ತೆರಳಿದ್ದೆ. ಮೇನ್ ರೋಡಿನಿಂದ ಕೊಂಚ ದೂರದಲ್ಲಿದ್ದ ಊರಾದ ಕಾರಣ ಸಾವಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಕರೆತರಲು ರೇಷ್ಮೆ ಮಾರುಕಟ್ಟೆಗೆ ಹೆಸರುವಾಸಿಯಾದ ಸಂತೆಮಾವತ್ತೂರಿಗೆ ಹೋಗಿ ಬಸ್ಸು ನಿಲ್ಲುವ ಜಾಗದಲ್ಲಿ ಬೈಕು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಎದುರಿಗೊಂದು ಮುರಿದು ಬಿದ್ದಂತಿದ್ದ ಮನೆ ಕಾಣಿಸಿತು. ಮತ್ತೊಮ್ಮೆ ಆ ಮನೆಯತ್ತ ಕಣ್ಣಾಡಿಸಿದಾಗ ಮನೆಯ ಒಂದು ಪಾರ್ಶ್ವ ಸಂಪೂರ್ಣ ಪಾಳು ಬಿದ್ದಿದ್ದರೆ ಮತ್ತೊಂದು ಬದಿಯಲ್ಲಿ ಅಂಚೆ ಕಛೇರಿಯಿತ್ತು. ಇದೇನು ಅಂಚೆ ಕಛೇರಿಯ ಹಳೆಯ ಕಟ್ಟಡವೋ ಈಗಲೂ ಕಾರ್ಯನಿರ್ವಹಿಸುತ್ತಿದೆಯೋ ಎಂದು ಅಲ್ಲೇ ರಸ್ತೆ ಬದಿಯಲ್ಲಿ ಒಣಗಿಸಿ ಸುತ್ತಿದ ತಂಬಾಕು ಎಲೆಗಳು, ಅಡಿಕೆ, ವೀಳ್ಯದೆಲೆ ಮಾರುತ್ತಿದ್ದ ಹೆಂಗಸನ್ನು ಕೇಳಿದಾಗ ‘ಅದೇ ಆಪೀಸು. ಮಧ್ಯಾಹ್ನ ಅಲ್ವಾ ಊಟಕ್ಕೆ ಹೋಗಿರ್ತಾರೆ’ ಎಂದ್ಹೇಳಿ ಅಂಚೆ ಕಛೇರಿಯ ಆಧುನೀಕರಣದ ಮತ್ತೊಂದು ಮಜಲನ್ನು ತೋರಿಸಿದರು.