ಸೆಪ್ಟೆಂ 30, 2014

ಖ್ಯಾತಿಯ ತುದಿಯಲ್ಲಿ ಸೆರೆವಾಸ

shashikala natarajan
ಜಯಲಲಿತ
ಡಾ. ಅಶೋಕ್ ಕೆ ಆರ್
ಮಧ್ಯ ಮತ್ತು ಉತ್ತರಭಾರತದ ಚಿತ್ರರಂಗವನ್ನೆಲ್ಲ ತನ್ನ ಮಾರುಕಟ್ಟೆ ತಂತ್ರದಿಂದ, ಅದ್ದೂರಿತನದಿಂದ ಅಪೋಶನ ತೆಗೆದುಕೊಂಡಿದ್ದು ಹಿಂದಿ ಚಿತ್ರರಂಗ. ಹಿಂದಿ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಇದ್ದರೂ ದಕ್ಷಿಣ ಚಿತ್ರರಂಗ ತನ್ನ ಪಾರಮ್ಯವನ್ನು ಬಿಟ್ಟುಕೊಟ್ಟಿಲ್ಲ. ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಹೊಸತನದ ಚಿತ್ರಗಳಿಂದ, ಮಣ್ಣಿನ ಸೊಗಡಿನ ಚಿತ್ರಗಳಿಂದ ಹೆಸರು ಮಾಡಿರುವುದು ತಮಿಳು ಚಿತ್ರಂಗ. ಹೀರೋ ಆಧಾರಿತ ವಿಪರೀತ ಬಜೆಟ್ಟಿನ ಮಾಸ್ ಚಿತ್ರಗಳಿಂದ ಹಿಡಿದು ಕಥೆಯಾಧಾರಿತ ಅತ್ಯಂತ ಕಡಿಮೆ ಬಜೆಟ್ಟಿನ ಚಿತ್ರಗಳನ್ನು ಸುಂದರವಾಗಿ ಹೆಣೆಯುವುದರಲ್ಲಿ ತಮಿಳು ಚಿತ್ರರಂಗ ಮೇಲುಗೈ ಸಾಧಿಸಿದೆ. ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಿಸುವಾಗ ತಮಗೆ ಮೆಚ್ಚುಗೆಯಾದ ಸನ್ನಿವೇಶ ಬಂದರೆ ಜನರದಕ್ಕೆ ಚಪ್ಪಾಳೆ ತಟ್ಟುತ್ತಾರಂತೆ! ಚಿತ್ರಮಂದಿರಗಳಲ್ಲಿ ಕುಣಿಯುವುದು, ವಿಷಿಲ್ ಹೊಡಿಯುವುದು ಸಾಮಾನ್ಯವಾದರೂ ಚಪ್ಪಾಳೆ ತಟ್ಟುವುದು ಒಂದಷ್ಟು ವಿಚಿತ್ರದಂತೆಯೇ ಕಾಣುತ್ತದೆ. ಅದು ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಬಾಬಾ’ ಚಿತ್ರ ಬಿಡುಗಡೆಯಾಗಿದ್ದ ಸಂದರ್ಭ. ಸಾಧಾರಣವಾದ ಚಿತ್ರವದು. ಚಿತ್ರ ಬಿಡುಗಡೆಯಾದ ಹೊಸದರಲ್ಲಿ ಟಿ.ವಿ ವಾಹಿನಿಯೊಂದು ಚಿತ್ರ ನೋಡಿ ಹೊರಬಂದವರ ಅಭಿಪ್ರಾಯ ಕೇಳುತ್ತಿತ್ತು. ಹೆಂಗಸೊಬ್ಬರು ಚಿತ್ರದಲ್ಲಿ ರಜನೀಕಾಂತ್ ಕೈಯಲ್ಲಿ ಮೂಟೆ ಹೊರಿಸಿದ್ದನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅದು ಸಿನಿಮಾ ಕಣಮ್ಮ ಎಂದರೂ ಅಳು ಕಡಿಮೆಯಾಗಲಿಲ್ಲ. ತಮಿಳುನಾಡಿನಲ್ಲಿ ಸಿನಿಮಾ ಜನರ ಮೇಲೆ ಮಾಡಿರುವ ಅಭೂತಪೂರ್ವ ಪ್ರಭಾವಕ್ಕೆ ಇದೊಂದು ಉದಾಹರಣೆಯಷ್ಟೇ. ಈ ಕಾರಣದಿಂದಲೋ ಏನೋ ದಶಕಗಳಿಂದ ತಮಿಳುನಾಡಿನಲ್ಲಿ ಸಿನಿಮಾದಿಂದ ರಾಜಕೀಯಕ್ಕೆ ಪ್ರವೇಶಿಸಿದವರ ಪ್ರಾಬಲ್ಯವೇ ಹೆಚ್ಚು. ಎಂ.ಜಿ.ಆರ್, ಕರುಣಾನಿಧಿ, ಜಯಲಲಿತ ಮತ್ತೀಗ ಪ್ರವರ್ಧಮಾನಕ್ಕೆ ಬರುತ್ತಿರುವ ವಿಜಯಕಾಂತ್ – ಎಲ್ಲರೂ ಸಿನಿಮಾದೊಂದಿಗೆ ಒಡನಾಡಿದವರು. ಬರಹಗಾರರಾಗಿದ್ದ ಕರುಣಾನಿಧಿಯನ್ನೊರತುಪಡಿಸಿ ಉಳಿದವರೆಲ್ಲರೂ ತಮ್ಮ ನಟನೆಯಿಂದ ಜನಮನ ಸೆಳೆದವರು. ರಜನೀಕಾಂತರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಕ್ಕೂ ಅವರ ಸೂಪರ್ ಸ್ಟಾರ್ ಗಿರಿಯೇ ಕಾರಣ.

ಸೆಪ್ಟೆಂ 29, 2014

ಹೆಸರಲ್ಲೆಲ್ಲಾ ಇದೆ!

religion
ಡಾ ಅಶೋಕ್ ಕೆ ಆರ್
ಇಂಡಿಯನ್ ಮುಜಾಹಿದ್ದೀನೋ ಹಿಜ್ಬುಲ್ ಮುಜಾಹಿದ್ದೀನೋ ಹೆಸರಿನ ಮುಸ್ಲಿಂ ಸಂಘಟನೆಯೊಂದರ ನಾಮಧೇಯದಿಂದ ಪೋಲೀಸರಿಗೆ ಬೆದರಿಕೆಯ ಈ-ಮೇಲ್ ಸಂದೇಶಗಳು ತಲುಪುತ್ತವೆ. ಇಡೀ ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಮೈಮರೆತಾಗ, ದೂರದೂರಿನ ಜನರೆಲ್ಲ ಮೈಸೂರಿಗೆ ಬಂದು ದಸರಾದ ವೈಭವವನ್ನು ಸವಿಯುತ್ತಿರುವಾಗ ಮೈಸೂರಿನ ಹಲವೆಡೆ ಸ್ಪೋಟಗೊಳ್ಳುವಂತೆ ಟೈಂ ಬಾಂಬುಗಳನ್ನು ಇಟ್ಟಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂಬ ಬೆದರಿಕೆ ಮತ್ತು ಪಂಥಾಹ್ವಾನದ ಸಂದೇಶವದು. ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬ್ ಸ್ಪೋಟವೆಂದರೆ ಹೈಅಲರ್ಟ್ ಘೋಷಿಸಬೇಕಾದ ಸಂದರ್ಭವಂತೂ ಹೌದು. ಮೈಸೂರಿನ ಪೋಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ – ಮೇಲ್ ಕಳುಹಿಸಿದ ಐ.ಪಿ ಅಡ್ರೆಸ್ಸನ್ನು ಪತ್ತೆ ಹಚ್ಚಿ ಆ ಕಂಪ್ಯೂಟರ್ ಅಂಗಡಿಯ ಬಳಿಯಲ್ಲಿನ ಮನೆಯಲ್ಲಿದ್ದ ಬೆದರಿಕೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯನ್ನು ಬಂಧಿಸುತ್ತಾರೆ.
ಮೇಲಿನದಷ್ಟು ನಡೆದ ಘಟನಾವಳಿ. ಪತ್ರಿಕೆಗಳು ಮತ್ತು ಮಾಧ್ಯಮದಲ್ಲಿ ಈ ಘಟನೆ ಯಾವ ರೀತಿ ವರದಿಯಾಗುತ್ತದೆ?

P Sainath


ಸೆಪ್ಟೆಂ 27, 2014

ಜನಸಂಗ್ರಾಮ ಪರಿಷತ್ತಿನಿಂದ ಯುವಜನತೆಗಾಗಿ ಯುವಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮ

ಜನ ಸಂಗ್ರಾಮ ಪರಿಷತ್ - ಪತ್ರಿಕಾ ಟಿಪ್ಪಣಿ
ಬೆಂಗಳೂರು, 26-09-2014
ನಾಡಿನ ಸುಸ್ಥಿರ ಅಭಿವೃದ್ಧಿಗೆ ಪ್ರಜ್ಞಾವಂತ ನಾಗರಿಕರ ಅದರಲ್ಲೂ ಯುವಜನರ ಪಾತ್ರ ಮಹತ್ವದ್ದಾಗಿರುತ್ತದೆ. ನಾಡಿನ ನೆಲ ಜಲ ಮತ್ತು ಇತರೆ ನೈಸರ್ಗಿಕ ಸಂಪತ್ತಿನ ರಕ್ಷಣೆಯಲ್ಲಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಜ್ಞಾವಂತ ಯುವಜನರ ಪಾತ್ರ ನಿರ್ಣಾಯಕ ಪಾತ್ರವಹಿಸಲಿದೆ. ಇಂತಹ ಪ್ರಜ್ಞಾವಂತ ಯುವಜನರನ್ನು ಗಮನದಲ್ಲಿ ಇಟ್ಟುಕೊಂಡು ಜನಸಂಗ್ರಾಮ ಪರಿಷತ್ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದೆ. ತರಬೇತಿಯು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಪರಿವರ್ತನಾ ಸದನದಲ್ಲಿ ನಡೆಯಲಿದ್ದು, 18ರಿಂದ 35 ರವರೆಗಿನ ವಯೋಮಿತಿಯ ಆಸಕ್ತ ಯುವಜನರು ಭಾಗವಹಿಸಬಹುದಾಗಿದೆ. ತರಬೇತಿಯ ಸಮಯದಲ್ಲಿ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 500 ರೂಪಾಯಿಗಳ ಶುಲ್ಕವನ್ನು ನೀಡಬೆಕಾಗಿರುತ್ತದೆ. ತರಬೇತಿಗೆ ನೊಂದಾಯಿಸಿಕೊಳ್ಳಲು 9916601969/ 8867186343 ದೂರವಾಣಿಗೆ ಕರೆ ಮಾಡಬೇಕು.
ತರಬೇತಿಯನ್ನು ಅಕ್ರಮ ಗಣಿಗಾರಿಕೆ, ಭೂಗಳ್ಳರ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕರು ಮತ್ತು ಜನ ಸಂಗ್ರಾಮ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಆರ್. ಹಿರೇಮಠ, ಪಶ್ಚಿಮಘಟ್ಟಗಳ ಉಳುವಿಗಾಗಿ, ಸುಸ್ಥಿರ ಅಭಿವೃದ್ಧಿ ಮತ್ತು ಕೃಷಿ ಬಗೆಗಿನ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಿ. ಯತಿರಾಜು, ಸಾಮಾಜಿಕ ಹೋರಾಟಗಾರರಾದ ರವಿ ಕೃಷ್ಣಾರೆಡ್ಡಿ, ಶಾ0ತಲಾ ದಾಮ್ಲೆ, ದೀಪಕ್ ಸಿ. ಎನ್. ತುಮಕೂರಿನ ಸಿಜ್ಞಾ ಸಂಸ್ಥೆಯ ಜ್ಞಾನ ಸಿಂಧು ಸ್ವಾಮಿ ಮತ್ತು ಪ್ರತಿಮಾ ನಾಯಕ್ ಹಾಗೂ ಇನ್ನಿತರರು ನಡೆಸಿಕೊಡಲಿದ್ದಾರೆ. ತರಬೇತಿಯಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರಮುಖವಾಗಿ ಸಾಮಾಜಿಕ ಚಳುವಳಿಗಳು, ಸ್ವರಾಜ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆ, ಸುಸ್ಥಿರ ಬದಲಾವಣೆ, ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದಂತೆ ಸಾಹಿತ್ಯ ಕೃತಿಗಳ ಪರಿಚಯ, ಮಾಹಿತಿ ಹಕ್ಕು ಕಾಯ್ದೆ ಮತ್ತು ಇನ್ನೂ ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ.
ತರಬೇತಿಗೆ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಮೊದಲೇ ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ವಿವರಗಳಿಗೆ 9916601969 / 8867186343 ದೂರವಾಣಿಯನ್ನು ಸಂಪರ್ಕಿಸಬಹುದು.
ದೀಪಕ್ ಸಿ. ಎನ್.
ಪ್ರಧಾನ ಕಾರ್ಯದರ್ಶಿ

“Flash” ಬ್ಯಾಕ್


payaswini
ಸುಳ್ಯದ ಸಮೀಪ

Dr Ashok K R
ಸಾವಿರ ಪದಗಳು ಹೇಳಲಾಗದ್ದನ್ನು ಒಂದು ಫೋಟೋ ಹೇಳುತ್ತದೆ ಎಂಬ ಮಾತಿದೆ. ಫೋಟೋಗ್ರಫಿಗಿರುವ ಈ ಶಕ್ತಿಯನ್ನು ಅರಿಯಲು ನಾನು ಸವೆಸಿದ ಒಂದು ಪುಟ್ಟ ಹಾದಿಯ ಅನುಭವಗಳನ್ನು ಈ ‘ಕ್ಯಾಮೆರಾ ಕಣ್ಣು’ ಅಂಕಣದ ಮೂಲಕ ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ. ಫೋಟೋಗ್ರಫಿಯ ಅ ಆ ಇ ಈ ತಿಳಿಸಿಕೊಡಲು ಸಾವಿರಾರು ಪುಸ್ತಕಗಳು ಲಭ್ಯವಿದೆ (ಬಹುತೇಕ ಪುಸ್ತಕಗಳನ್ನು ಮುಟ್ಟಿ ನೋಡಷ್ಟೇ ತೃಪ್ತಿ ಪಟ್ಟುಕೊಳ್ಳಬೇಕು, ಅಷ್ಟು ದುಬಾರಿ), ಅಂತರ್ಜಾಲದಲ್ಲೂ ನೂರಾರು ತಾಣಗಳು ಉಚಿತವಾಗಿ ಫೋಟೋಗ್ರಫಿಯ ಮೂಲ ಪಾಠಗಳನ್ನು ಹೇಳಿಕೊಡುತ್ತವೆ. Dp review, digital photography school ನಾನು ಪ್ರಾರಂಭದ ದಿನಗಳಲ್ಲಿ ಓದಿದ ತಾಣಗಳು. ಓದೋದ್ಯಾರು ಅನ್ನೋರಿಗೆ ಯೂಟ್ಯೂಬಿನಲ್ಲಿ ಫೋಟೋಗ್ರಫಿ ಟುಟೋರಿಯಲ್ಸಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳಿವೆ. ಕನ್ನಡದಲ್ಲಿ ಫೋಟೋಗ್ರಫಿಯ ಬಗ್ಗೆ ತಿಳಿಸುವ ತಾಣಗಳು ಒಂದಷ್ಟು ಕಡಿಮೆಯೇ.

ಸೆಪ್ಟೆಂ 25, 2014

ಚಿಕ್ಕ ಹಗರಣ

ಮೂಲ – ಹರ್ಷ Think Bangalore
ಅನುವಾದ – ಡಾ ಅಶೋಕ್ ಕೆ ಆರ್.
ರಾಮಸ್ವಾಮಿ ಪ್ರಖ್ಯಾತ ವ್ಯಕ್ತಿ. ಊರಿನ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಕೆಲಸಮಾಡುತ್ತಿದ್ದರು. ಅವರ ಮಾತೆಂದರೆ ಊರವರಿಗೆಲ್ಲ ಬಹಳ ಗೌರವ. ಕಾರಣ, ಅವರ ಆದರ್ಶಯುತ ಜೀವನ. ಸುಳ್ಳಾಡದೆ, ಯಾರೊಬ್ಬರಿಗೂ ಮೋಸ ಮಾಡದೆ, ಕೆಟ್ಟದನ್ನು ಮಾಡದೆ ಎಲ್ಲರೊಡನೆ ಸೌಮ್ಯದಿಂದ ಸ್ನೇಹಮಯದಿಂದಿರುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಬುದ್ಧಿವಂತರು. ಚೆನ್ನಾಗಿ ಓದಿಕೊಂಡರು. ದೊಡ್ಡವ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದರೆ ಚಿಕ್ಕವ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.

ಸೆಪ್ಟೆಂ 20, 2014

‘ಡೆಲ್ಲಿ’ಯ ಗಲ್ಲಿಯೊಳಗೆ…….




khushwant singh
ಖುಷ್ವಂತ್ ಸಿಂಗರ 'ಡೆಲ್ಲಿ'
ಡಾ ಅಶೋಕ್ ಕೆ ಆರ್.

‘ಡೆಲ್ಲಿ’ – ಖುಷ್ವಂತ್ ಸಿಂಗರ ಅತ್ಯುತ್ತಮ ಪುಸ್ತಕವೆನ್ನಲಾಗುತ್ತದೆ. ಖುಷ್ವಂತ್ ಸಿಂಗರ ‘ದಿ ಕಂಪನಿ ಆಫ್ ವಿಮೆನ್’ ಮತ್ತು ‘ಟ್ರೈನ್ ಟು ಪಾಕಿಸ್ತಾನ್’ ಓದಿದ್ದೆನಷ್ಟೇ. ಕಂಪನಿ ಆಫ್ ವಿಮೆನ್ ಸಾಧಾರಣ ಎನ್ನಿಸಿದರೆ ಟ್ರೈನ್ ಟು ಪಾಕಿಸ್ತಾನ್ ಮೆಚ್ಚುಗೆಯಾಗಿತ್ತು. ಇತ್ತೀಚೆಗೆ ‘ಡೆಲ್ಲಿ’ ಖರೀದಿಸಿ ಓದಿ ಮುಗಿಸಿದೆ. ಒಂದಷ್ಟು ಆಕಳಿಕೆಯೊಂದಿಗೇ ಓದು ಮುಂದುವರೆಯಿತು ಎಂದರೆ ಸುಳ್ಳಲ್ಲ! ಆಕಳಿಸುತ್ತಲೇ ಓದು ಮುಗಿಸಿದ ನಂತರ ತನ್ನ ವಸ್ತುವಿನಿಂದ, ಅರ್ಥಗಳಿಂದ ‘ಡೆಲ್ಲಿ’ ನನ್ನ ಮೆಚ್ಚಿನ ಕಾದಂಬರಿಗಳಲ್ಲೊಂದು ಸ್ಥಾನ ಪಡೆದುಕೊಂಡಿತು ಎಂಬುದೂ ಸತ್ಯ!

ಸೆಪ್ಟೆಂ 18, 2014

ಹನುಮಂತ ಹಾಲಿಗೇರಿಯವರ "ಕೆಂಗುಲಾಬಿ" ಇ ಆವೃತ್ತಿಯಲ್ಲಿ.

Hanumant haaligeri
ಕೆಂಗುಲಾಬಿ
ಕೆಲವು ದಿನಗಳ ಹಿಂದೆ ಕನ್ನಡ ಪುಸ್ತಕಗಳ ಇ-ಆವೃತ್ತಿಯ ಬಗ್ಗೆ ಲೇಖನ ಬರೆದಾಗ ತುಂಬಾ ಹೆಚ್ಚೇನೂ ಪ್ರತಿಕ್ರಿಯೆಗಳು ಸಿಕ್ಕಿರಲಿಲ್ಲ. ಕೆಲವರು ಇ-ಆವೃತ್ತಿಗಳು ಮುದ್ರಿತ ಪ್ರತಿಗಳ ಮಾರಾಟ ಕಸಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಒಂದಂತೂ ಸತ್ಯ, ಕನ್ನಡ ಪುಸ್ತಕಕ್ಕೆ ಸದ್ಯಕ್ಕೆ ಇ-ಆವೃತ್ತಿಯ ಮಾರುಕಟ್ಟೆ ಅಷ್ಟಾಗಿ ಇಲ್ಲ. ನಾನು ಹಿಂದೊಮ್ಮೆ ಬರೆದಂತೆ ಇ-ಆವೃತ್ತಿಯನ್ನು ಓದುವವರ ಸಂಖೈ ಹೆಚ್ಚಾದ ದಿನ ಕನ್ನಡ ಪುಸ್ತಕ ಇಲ್ಲದಂತಾಗಬಾರದು. ನನ್ನವೆರಡು ಪುಸ್ತಕಗಳು ಇ-ಆವೃತ್ತಿಯಲ್ಲಿ ಗೂಗಲ್ ಪ್ಲೇ ಮತ್ತು ಸ್ಮಾಶ್ ವರ್ಡ್ಸಿನಲ್ಲಿ ಲಭ್ಯವಿದೆ (ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ). ಪತ್ರಕರ್ತ ಹನುಮಂತ ಹಾಲಿಗೇರಿಯವರು ತಮ್ಮ ಕಾದಂಬರಿ "ಕೆಂಗುಲಾಬಿ - ವೇಶ್ಯಾಜಗತ್ತಿನ ಅನಾವರಣ" ಕಾದಂಬರಿಯನ್ನು ಇ - ಆವೃತ್ತಿಗೆ ಪರಿವರ್ತಿಸುವ ಸಲುವಾಗಿ ಕಳುಹಿಸಿದ್ದರು. ಕೆಂಗುಲಾಬಿ ನಿಜಕ್ಕೂ ಬೆಚ್ಚಿ ಬೀಳಿಸುವ ಕೃತಿ. ತನ್ನ ಸಹಜತೆಯಿಂದ, ಯಾವುದೊಂದನ್ನೂ ಅತಿರೇಕಕ್ಕೆ ಕೊಂಡೊಯ್ಯದ ನಿರೂಪಣೆಯಿಂದಾಗಿ ಗಮನ ಸೆಳೆಯುತ್ತದೆ. ಕಾದಂಬರಿಗೆ ಶಿವಮೊಗ್ಗದ ಕರ್ನಾಟಕ ಸಂಘದಿಂದ ನೀಡಲಾಗುವ ಕುವೆಂಪು ಕಾದಂಬರಿ ಪುರಸ್ಕಾರ ಮತ್ತು ಕಸಾಪದ ಸಮೀರವಾಡಿ ದತ್ತಿ ಪ್ರಶಸ್ತಿಗಳು ದಕ್ಕಿವೆ. ನಾಡಿನ ವಿವಿದೆಡೆ ಈ ಕಾದಂಬರಿಯ ಕುರಿತಾಗಿ ಸಂವಾದಗಳು ನಡೆದಿವೆ.
ಗೂಗಲ್ ಪ್ಲೇನಲ್ಲಿ ಈ ಕಾದಂಬರಿ ಇಂದಿನಿಂದ ಲಭ್ಯವಿದೆ. 
ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ.

ಸೆಪ್ಟೆಂ 16, 2014

“ಚಿದಂಬರ ರಹಸ್ಯ”ವನ್ನೇಕೆ ನಿಷೇಧಿಸಬಾರದು?!



poornachandra tejaswi
ಡಾ ಅಶೋಕ್ ಕೆ ಆರ್.
ಯಾಕೋ ಇತ್ತೀಚೆಗೆ ಕೆಲವು ದಿನಗಳಿಂದ ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಬಹಳವಾಗಿ ಕಾಡುತ್ತಿದೆ. ಅಕಸ್ಮಾತ್ ‘ಚಿದಂಬರ ರಹಸ್ಯ’ವೇನಾದರೂ ಈಗ ಬಿಡುಗಡೆಯ ಭಾಗ್ಯ ಕಂಡಿದ್ದರೆ ಅದು ಯಾವ್ಯಾವ ದಿಕ್ಕಿನಿಂದ ವಿರೋಧವೆದುರಿಸಬೇಕಾಗುತ್ತಿತ್ತು ಎಂಬ ಯೋಚನೆ ಬಂತು!