ಡಾ. ಅಶೋಕ್. ಕೆ. ಆರ್.ಈ ಹಿಂದಿನ ಪೋಸ್ಟ್ ಓದಿಲ್ಲವಾದರೆ ಒಮ್ಮೆ ಓದಿ ಬನ್ನಿ. ಓದಲು
ಇಲ್ಲಿ ಕ್ಲಿಕ್ಕಿಸಿ ಇ-೨೦ ಪೆಟ್ರೋಲ್ ಬಗ್ಗೆ, ಅದರಿಂದ ವಾಹನಗಳಿಗಾಗುತ್ತಿರುವ ಹಾನಿಯ ಬಗ್ಗೆ ವಿಪರೀತ ಚರ್ಚೆಗಳು ಶುರುವಾದ ಮೇಲೆ ಪೆಟ್ರೋಲಿಯಂ ಸಚಿವರಲ್ಲದ, ಹೆದ್ದಾರಿ ಸಚಿವರು ಒಂದಾದ ಮೇಲೊಂದರಂತೆ ಹೇಳಿಕೆಗಳನ್ನು ಕೊಟ್ಟರು. ಇ-೨೦ ಪೆಟ್ರೋಲಿನಿಂದ ಗಾಡಿಗಳಿಗೆ ಯಾವುದೇ ತರದ ಹಾನಿಯಾಗುವುದಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಜನ ಸುಳ್ಳು ಸುಳ್ಳೇ ಹೇಳುತ್ತಿದ್ದಾರೆ ಅಂತ ಆರೋಪಿಸಿದರು. ಅಂತರ್ಜಾಲ ತಾಣಗಳನ್ನೂ ಸೇರಿಸಿ ಒಂದಷ್ಟು ಜನರ ಮೇಲೆ ಕೇಸೂ ದಾಖಲಿಸಲಾಯಿತು. ಇರಲಿ.