ಜುಲೈ 11, 2019

ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ

ಕು.ಸ.ಮಧುಸೂದನ
ಕತ್ತಲಾಗಲೆಂದೆ ಬೆಳಗಾಗುವುದು 
ಆರಲೆಂದೇ ದೀಪ ಉರಿಯುವುದು
ಬಾಡಲೆಂದೇ ಹೂವು ಅರಳುವುದು 
ಕಮರಲೆಂದೆ ಕನಸು ಹುಟ್ಟುವುದು 
ಗೊತ್ತಿದ್ದರೂ ಹಣತೆ ಹಚ್ಚಿಟ್ಟಳು 
ಬರಲಿರುವ ಸಖನಿಗಾಗಿ. 

ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು 
ಬರಲಿರುವ ಸಖನ ಮೂಗಿಗೆ ಘಮಿಸಲೆಂದು 
ಬರಡು ಎದೆಗೆ ವಸಂತನ ಕನವರಿಸಿ 
ಹೊಸ ಕನಸು ಚಿಗುರಿಸಿಕೊಂಡಳು 
ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು 

ಜುಲೈ 9, 2019

ಶಬ್ದವೊಂದು ಕವಿತೆಯಾಗುವ ಮೊದಲು!

ಕು.ಸ.ಮಧುಸೂದನ
ಶಬ್ದವೊಂದು ಕವಿತೆಯಾಗುವ ಮೊದಲು 
ಕಣ್ಣುಗಳಿಗೆ ಕನಸಿನ ಪಾಠ ಮಾಡಿ ಹೋಯಿತು

ಕವಿತೆಯೊಂದು ಹಾಳೆಗಿಳಿಯುವ ಮೊದಲು
ಕನಸೊಂದ ಕಣ್ಣಿಗಿಳಿಸಿ ಹೋಯಿತು. 

ಹಕ್ಕಿಯೊಂದು ಬಾನೊಳಗೆ ಹಾರುವ ಮೊದಲು 
ಭುವಿಗೆ ವಿದಾಯದ ಅಪ್ಪುಗೆಯನೊಂದ ನೀಡಿ ಹೋಯಿತು 

ಮರಣವೊಂದು ಮನುಜನ ತಬ್ಬುವ ಮೊದಲು 
ಜೀವನದ ಗುಟ್ಟೊಂದ ಕಿವಿಯಲುಸುರಿ ಹೋಯಿತು. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಜುಲೈ 7, 2019

ಒಂದು ಬೊಗಸೆ ಪ್ರೀತಿ - 21

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
‘ಸರಿ ಕಣೋ. ಡ್ಯೂಟಿಗೆ ಹೊರಟೆ. ಒಂಭತ್ತರ ಮೇಲೆ ಬಿಡುವಾಗ್ತೀನಿ. ಮೆಸೇಜು ಮಾಡ್ತೀನಿ’ 

“ಸರಿ ಸರಿ. ನಂಗೂ ಇವತ್ತು ಡ್ಯೂಟೀನೇ” 

‘ಡ್ಯೂಟಿನಾ? ಪರೀಕ್ಷೆಗೆ ಓದಿಕೊಳ್ಳೋಕೆ ರಜೆ ಕೊಟ್ಟಿದ್ದಾರೆ ಅಂತಿದ್ದೆ’ 

“ನಿನ್ ಜೊತೆ ಡ್ಯೂಟಿ ಅಂದೆ” 

‘ಹ ಹ. ನಿಂಗಿಷ್ಟ ಇಲ್ದೇ ಹೋದ್ರೆ ರಜಾ ಹಾಕೊಳ್ಳಪ್ಪ. ನಂದೇನೂ ಬಲವಂತವಿಲ್ಲ’ 

“ಹಂಗೇನಿಲ್ವೇ ನಂಗೂ ಇಷ್ಟಾನೇ. ಏನೋ ತಲೆಗ್ ಏನೇನೋ ಯೋಚ್ನೆ ಬರ್ತವೆ ಅಷ್ಟೇ” 

‘ತಲೆ ಇರೋದೆ ಯೋಚ್ನೆ ಮಾಡೋದಿಕ್ಕಲ್ವ. ತಲೆ ಕೆಡಿಸ್ಕೋಬೇಡ ಬಿಡು’ 

ಸಾಲುದ್ದದ ಸ್ಮೈಲಿ ಕಳುಹಿಸಿದ. ಸ್ಮೈಲಿಯಲ್ಲಿ ಸರ್ವ ಭಾವನೆಗಳೂ ಅಡಕವಾಗಿದ್ದವು. 

“ಸರಿ ಕಣೇ. ಡ್ಯೂಟಿಗೆ ಹೊರಡು. ಬಿಡುವಾದಾಗ ..... ಅಲ್ಲಲ್ಲ ಬಿಡುವು ಮಾಡಿಕೊಂಡು ಮೆಸೇಜು ಮಾಡು. ಕಾಯ್ತಿರ್ತೀನಿ” 

‘ಬರೀ ಮೆಸೇಜೇ ಸಾಕೇನೋ. ನಾ ಫೋನ್ ಮಾಡಿ ಮಾತಾಡ್ಬೇಕು ಅಂತಿದ್ದೆ ಇವತ್ತು’ 

“ಡ್ಯೂಟಿ?” 

‘ಡ್ಯೂಟಿ ಇದೆ. ಡ್ಯೂಟಿ ಡಾಕ್ಟರ್ ರೂಮಿರುತ್ತಲ್ಲ. ರಾತ್ರಿಯೇನೂ ಅಲ್ಲಿ ಪೇಷೆಂಟ್ಸ್ ಹೆಚ್ಚಿಗೆ ಇರಲ್ಲ. ಹತ್ ಘಂಟೆಗೆಲ್ಲ ರೂಮಿಗೋಗಿ ಮಲಗ್ತೀನಿ ಸಾಮಾನ್ಯವಾಗಿ. ನಿನಗೆ ನಿದ್ರೆ ಬಂದಿಲ್ಲ ಅಂದ್ರೆ ಫೋನ್ ಮಾಡ್ತೀನಿ ಹತ್ತರ ಮೇಲೆ’ 

“ನನಗ್ ನಿದ್ರೆ ಬಂದಿದ್ರೂ ಪರವಾಗಿಲ್ಲ ಫೋನ್ ಮಾಡಿ ಎಬ್ಬಿಸು. ಆದ್ರೆ....”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜುಲೈ 2, 2019

ಗುರುತು!

ಕು.ಸ.ಮಧುಸೂದನ
ನಾನು 
'ಅವಳು' 
ಎಂದು ಬರೆದಾಗೆಲ್ಲ
ನೀವು ಅನುಮಾನದಿಂದ ಅವಳತ್ತ ತಿರುಗಿ ನೋಡದಿರಿ.

ಇದ್ದಿದ್ದು ನಿಜ, ಅವಳಿಗೊಂದು ಹೆಸರು
ಅವರ ಮನೆಯವರು ಇಟ್ಟಿದ್ದು.
ಆ ಹೆಸರಿನಾಚೆ ಅವಳಿಗೇನೂ ಗುರುತಿರಲಿಲ್ಲ ಎಂಬುದೂ ನಿಜ.
ಯಾರದೊ ಮಗಳಾಗಿ ತಂಗಿಯಾಗಿ ಅಕ್ಕನಾಗಿ
ಇದ್ದವಳು ನನ್ನ ಗೆಳತಿಯಾಗಿದ್ದು ಆಕಸ್ಮಿಕವೇ ಸರಿ
ಅವೆಲ್ಲ ದಾಟಿ 
ಅವಳು
ಪತ್ನಿಯಾದಳು,
ತಾಯಾದಳು
ತನ್ನ ಹೆಸರಿನಾಚೆಯೊಂದು ಗುರುತಿಗೆಂದೂ ಹಂಬಲಿಸದೆಯೆ.
ಇದೀಗ ಬಿಟ್ಟು ಬಿಡಬೇಕಾಗಿದೆ ಅವಳ
ನಾವಿಟ್ಟ ಹೆಸರಿನಿಂದಾಚೆಗೊಂದು ಗುರುತು
ತಾನೇ ಕಂಡುಕೊಳ್ಳಲು.
ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಜೂನ್ 29, 2019

ಗೋರಿಯ ಮೇಲೆ.

ಕು.ಸ.ಮಧುಸೂದನ ರಂಗೇನಹಳ್ಳಿ 
ಬರುತ್ತೇನೆಂದಿದ್ದೆ ಬರಲಿಲ್ಲ 
ಕಾಯುತ್ತಿದ್ದೆ 
ಇರುಳ ತಂಪಿನಲಿ ಸ್ವಸ್ಥನಂತೆ 
ಹಗಲ ಬೇಗೆಯಲಿ ಅಸ್ವಸ್ಥನಂತೆ. 

ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ 
ಬೀಸಿಬಂದ ಗಾಳಿ ನನ್ನ ವಾಸನೆ ಹೊತ್ತು ತರಲಿಲ್ಲ 
ಹಗಲ ಬೆನ್ನೇರಿ ಬಂದಿರುಳಿಗೆ 
ಉಸಿರು ನೀಳವಾಯಿತು

ಜೂನ್ 28, 2019

ಒಂದು ಬೊಗಸೆ ಪ್ರೀತಿ - 20

ಡಾ. ಅಶೋಕ್.‌ ಕೆ. ಆರ್.‌
‘ಶಶಿ ವಿಷಯ ಶಶಿಯತ್ರಾನೇ ಮಾತನಾಡಿದ್ರೆ ಚೆಂದ ಅಲ್ವ. ಕೊನೇಪಕ್ಷ ಅವನು ಇದ್ದಾಗಲಾದರೂ ಮಾತನಾಡಬೇಕು. ಅವನಿಲ್ಲದೆ ಇದ್ದಾಗ ಮಾತನಾಡುವುದು ಸರಿಯಲ್ಲವೇನೋ’ ತಾಳ್ಮೆಯ ಪ್ರತಿರೂಪದಂತೆ ಮಾತನಾಡುತ್ತಿರುವ ಅಪ್ಪನ ದನಿ ಯಾವಾಗ ದಿಕ್ಕು ತಪ್ಪಿ ರೇಗುವಿಕೆಯಾಗಿ ಅಸಭ್ಯವಾಗಿ ಪರಿವರ್ತಿತವಾಗುತ್ತದೋ ಎಂಬ ಭಯ ನನಗೆ. 

“ನಿನಗೆ ಗೊತ್ತಾ ಹುಡುಗಿ ಯಾರು ಅಂತ?” 

‘ಮ್. ಗೊತ್ತು’ 

“ನೋಡಿದ್ದೀಯಾ?” 

‘ಮ್’ 

“ಮಾತನಾಡಿದ್ದೀಯ?” 

‘ಮ್’ 

“ನಿಮ್ಮಮ್ಮನಿಗೆ ಗೊತ್ತಾ?” 

‘ಮ್’ 

“ಎಲ್ಲರಿಗೂ ಗೊತ್ತು. ನಾನೊಬ್ನೇ ಬೇವರ್ಸಿ ಈ ಮನೇಲಿ” 

‘ಮತ್ತೆ ಶುರು ಮಾಡಬೇಡಿ ಅಪ್ಪ’ 

“ಸಾರಿ. ಯಾರು ಹುಡುಗಿ?” 

‘ನೀವೇಗಿದ್ರೂ ಮದುವೆಗೆ ಒಪ್ಪಲ್ಲ ಅಂದ ಮೇಲೆ ಹುಡುಗಿ ಯಾರಾದ್ರೇನು ಬಿಡಿ ಅಪ್ಪ’

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಏಕಕಾಲಕ್ಕೆ ಚುನಾವಣೆ' ಬಾಜಪದ ಹಳೆಯಜೆಂಡಾ

ಕು.ಸ.ಮಧುಸೂದನ ರಂಗೇನಹಳ್ಳಿ 
ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೆಹಲಿಯ ಗದ್ದುಗೆ ಹಿಡಿದಾಕ್ಷಣ ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳುವುದರೊಂದಿಗೆ ಬಾಜಪದ ಹಳೆಯ ಗುಪ್ತ ಕಾರ್ಯಸೂಚಿಗೆ ಮತ್ತೆ ಜೀವ ತುಂಬಿದ್ದಾರೆ. 

ಬಾಜಪದ ಈ ಕಾರ್ಯತಂತ್ರ ಹೊಸತೇನಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಪ್ರದಾನಮಂತ್ರಿಗಳಾದ ಕೆಲವೆ ತಿಂಗಳಲ್ಲಿ ಕೇಂದ್ರ ಕಾನೂನು ಸಚಿವಾಲಯ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸುವುದು ಸೂಕ್ತವೆಂಬ ಸಲಹೆನೀಡಿತ್ತು. ನಂತರದ ಕೆಲವೆ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಸಹ ಕಾನೂನು ಇಲಾಖೆಯ ಈ ಸೂಚನೆಗೆ ಸಹಮತ ಸೂಚಿಸುತ್ತ, ಸರಕಾರ ಕಾನೂನು ತಿದ್ದುಪಡಿ ಮಾಡಿ ಹಸಿರು ನಿಶಾನೆ ತೋರಿಸಿದಲ್ಲಿ ತನಗೇನು ಅಭ್ಯಂತರವಿಲ್ಲವೆಂದು ಹೇಳಿತ್ತು. ನಂತರದಲ್ಲಿ ಪ್ರದಾನಿಯವರು ಸಹ ಏಕಕಾಲಕ್ಕೆ ಚುನಾವಣೆ ನಡೆಸಲು ತಾವು ಇಚ್ಚಿಸುವುದಾಗಿ ಸಾರ್ವಜನಿಕವಾಗಿ ಹೇಳುವುದರೊಂದಿಗೆ ಒಂದಷ್ಟು ಚರ್ಚೆಗೆ ನಾಂದಿ ಹಾಡಿದ್ದರು. 

ಜೂನ್ 14, 2019

ಈ ಸೂರ್ಯಾಸ್ತದೊಳಗೆ

ಕು.ಸ.ಮಧುಸೂದನನಾಯರ್
ನೀಲಿ ಹೂವಿನಂತೆ ನಳನಳಿಸಿ 
ಬೆಳದಿಂಗಳ ನಗುವ ಚೆಲ್ಲಿದವಳು 
ನಕ್ಷತ್ರ ಕಣ್ಣುಗಳಲಿ ಬೆಳದಿಂಗಳ ಬೆಳಕ 
ಹರಡಿದಾಗ ಅವನ ಕತ್ತಲ ಜಗಕೆ ಹಗಲು 
ಬಂದಂತಾಗಿ 
ಸಾವಿರ ಕನಸುಗಳು ಸೃಷ್ಠಿಯಾದವು 
ಕನಸುಗಳೊಳಗೆ ಅವಳ 
ಕೆನ್ನೆ ಗಲ್ಲ ತುಟಿಕಟಿಗಳ 
ಗಲ್ಲ ಕುತ್ತಿಗೆಯ ಇಳಿಜಾರು 
ಗರಿಗೆದರಿದವು, 

ಜೂನ್ 12, 2019

ಒಂದು ಬೊಗಸೆ ಪ್ರೀತಿ - 19


ಡಾ. ಅಶೋಕ್.‌ ಕೆ. ಆರ್.‌
‘ಅಡುಗೆ ಏನು ಮಾಡ್ಲಿ? ಮಧ್ಯಾಹ್ನ ಡ್ಯೂಟಿ ಇದೆ ನನಗೆ’ 

“ನನಗೇನೂ ತಿನ್ನೋ ಹಂಗೇ ಇಲ್ಲ. ಬೆಳಿಗ್ಗ ಹತ್ತಕ್ಕೆ ತಿಂಡಿ ತಿಂದಿದ್ದು. ದೋಸೆ ಕಾಲ್ ಸೂಪು ಕೈಮ ಗೊಜ್ಜು. ನಿನಗೆ ಏನು ಬೇಕ ಮಾಡ್ಕೊ. ಇಲ್ಲ ಪಾರ್ಸಲ್ ತಂದುಬಿಡ್ಲಾ?” 

‘ನೋಡ್ದಾ! ನನಗೂ ಎರಡು ಕೈಮ ಉಂಡೆ ತಂದಿದ್ರೆ ಬೇಡ ಅಂತಿದ್ನಾ?! ನನ್ನೊಬ್ಬಳಿಗೇ ಇನ್ನೇನು ಪಾರ್ಸಲ್ ತರ್ತೀರಾ ಬಿಡಿ. ಫ್ರಿಜ್ಜಲ್ಲಿ ಚಪಾತಿ ಹಿಟ್ಟಿರಬೇಕು. ಎರಡು ಚಪಾತಿ ಹಾಕ್ಕೋತೀನಿ. ನಿಮಗೂ ಹಾಕಿಡ್ಲಾ?’ 

“ಎರಡು ಹಾಕಿಡು. ಹಂಗೇ ಮೊಟ್ಟೆಯಿದ್ರೆ ಎರಡು ಆಮ್ಲೆಟ್ ಮಾಡು” 

‘ಎರಡು ಸಲ ಮಾಡಿದ್ದಕ್ಕೆ ಎರಡು ಚಪಾತಿ ಎರಡು ಮೊಟ್ಟೇನಾ?’ ನಗುತ್ತಾ ಕೇಳಿದೆ. ಅವರೂ ನಕ್ಕರು. 

ಊಟ ಮುಗಿಸಿ ಡ್ಯೂಟಿಗೆ ಹೊರಟಾಗ ರಾಜಿ ಮಲಗೇ ಇದ್ದರು. ಏಳಿಸುವ ಮನಸ್ಸಾಗಲಿಲ್ಲ. ಬಾಗಿಲು ಲಾಕ್ ಮಾಡಿಕೊಂಡು ಹೊರಟೆ. ಕಾರು ಓಡಿಸುತ್ತಾ ಆಸ್ಪತ್ರೆಯ ಕಡೆಗೆ ಹೊರಟರೆ ಕಣ್ಣಲ್ಲಿ ತೆಳ್ಳನೆಯ ನೀರಿನ ಪರದೆ. ಸೆಕ್ಸ್ ಮಾಡುವಾಗ ರಾಜೀವನ ಜಾಗದಲ್ಲಿ ಸಾಗರನನ್ನು ನೆನಪಿಸಿಕೊಂಡಿದ್ದು ಬೇಸರ, ಮುಜುಗರ, ಖುಷಿ, ದ್ವಂದ್ವದ ಮಿಶ್ರಭಾವವಗಳನ್ನು ಸ್ಪುರಿಸಿತು. ರಾಜೀವ್ ಅಷ್ಟೊಂದು ಪ್ರೀತಿಯಿಂದ, ಉತ್ಸುಕತೆಯಿಂದ ಸೆಕ್ಸ್ ಮಾಡೋದೇ ಅಪರೂಪ. ಇಂಥ ಅಪರೂಪದ ದಿನದಲ್ಲಿ ಸಾಗರನನ್ನು ಕಲ್ಪಿಸಿಕೊಂಡುಬಿಟ್ಟೆನಲ್ಲಾ? ಇದು ಸರಿಯಾ? ರಾಜಿಯಲ್ಲಿ ಉತ್ಕಟತೆ ಇಲ್ಲದಿದ್ದಾಗ ಸಾಗರನನ್ನು ನೆನಪಿಸಿಕೊಳ್ಳೋದು ಕೂಡ ತಪ್ಪೇ ಅಲ್ಲವಾ? ಗಂಡನ ಜೊತೆ ಸಮಾಗಮದಲ್ಲಿದ್ದಾಗ ಬೇರೊಬ್ಬ ಮನದಲ್ಲಿ ಮೂಡಿಬಿಟ್ಟಿದ್ದು ಇದೇ ಮೊದಲು. ಅಪ್ಪಿತಪ್ಪಿ ಕೂಡ ಪುರೋಷತ್ತಮ ಒಮ್ಮೆಯೂ ನೆನಪಾಗಿರಲಿಲ್ಲ. ಇವತ್ಯಾಕೆ ಈ ರೀತಿ ಆಗಿಹೋಯಿತು ಅನ್ನೋ ಕಾರಣಕ್ಕೆ ಮುಜುಗರ. ಆ ಕ್ಷಣದಲ್ಲಿ ಸಾಗರನ ನೆನಪಾಗಿದ್ದಕ್ಕೆ ಒಂದರೆ ಕ್ಷಣವಾದರ ಖುಷಿಯಾಗದೆ ಇರಲಿಲ್ಲ. ಇದು ಸರಿಯಾ? ಆತನ ನೆನಪಾಗಿದ್ದಾದರೂ ಯಾಕೆ? ಪ್ರಶ್ನೆಗಳಿಗೆ ಉತ್ತರ ಮೂಡುವ ಮೊದಲು ಕಾರು ಆಸ್ಪತ್ರೆಯ ಬಳಿ ಬಂದಿತ್ತ. ಪ್ರಶ್ನೆಗಳನ್ನೆಲ್ಲಾ ಕಾರಿನಲ್ಲೇ ಬಿಟ್ಟು ಆಸ್ಪತ್ರೆಯಲ್ಲಿದ್ದ ರೋಗಿಗಳೆಡೆಗೆ ಗಮನ ಹರಿಸಿದೆ. ಮನಸ್ಸು ಮತ್ತಷ್ಟು ಗೊಂದಲಗೊಳ್ಳದಿರಲೆಂಬ ಕಾರಣಕ್ಕೋ ಏನೋ ಅಂದು ವಿಪರೀತ ರೋಗಿಗಳು. ‘ಏನ್ ಮಾಡ್ತಿದ್ದೆ?’ ಎಂದು ಸಾಗರನಿಗೊಂದು ಮೆಸೇಜು ಕಳಿಸಲೂ ಪುರುಸೊತ್ತಾಗಲಿಲ್ಲ. ಎಂಟು ಘಂಟೆಗೆ ಕೆಲಸ ಮುಗಿಸಿ ಕಾರು ಹತ್ತಿದೊಡನೆ ಮಧ್ಯಾಹ್ನ ಬಿಟ್ಟು ಹೋಗಿದ್ದ ಪ್ರಶ್ನೆಗಳು ಕಾರಿನೊಳಗೆಲ್ಲ ಕುಣಿದು ಕುಪ್ಪಳಿಸಿ ರೊಳ್ಳೆ ತೆಗೆದು ಗಬ್ಬೆಬ್ಬಿಸಿದವು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಮೂರೂ ಕಾಲಕ್ಕೆ.....


ಪಲ್ಲವಿ
ನಿನ್ನೆಗೆ
ನೆನಪುಗಳಿವೆ
ನಾಲಿಗೆ ಚಾಚಿ ಹಿಂಬಾಲಿಸುವ ನಿಯತ್ತಿನ ನಾಯಿಯಂತೆ

ನಾಳೆಗೆ 
ಕನಸುಗಳಿವೆ
ಹೊಳೆದಡದಲ್ಲಿ ಕೂತವನು ಗಾಳಕ್ಕೆಸಿಗಿಸಿಟ್ಟ ಎರೆಹುಳುವಿನಂತೆ

ಇವತ್ತಿಗೆ
ನೆನಪು ಕನಸುಗಳ ನಡುವಣದ ನಿಜವಿದೆ
ಕಣ್ಣೆದುರಿದ್ದರೂ ಕೈಗೆಟುಕದ ಕನ್ನಡಿಯೊಳಗಣ ಗಂಟಿನಂತೆ.
ದಿವ್ಯ ಪಲ್ಲವಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.