ಜನ 30, 2014

ದಿನೇಶ್ ಕುಮಾರ್ ಕವಿತೆ

ದಿನೇಶ್ ಕುಮಾರ್

ಹೌದು ಸ್ವಾಮೀ....

ಸ್ವಾಮೀ ಜಾತಿಯೆಂಬುದೇ ಇಲ್ಲ, ಇರಲಿಲ್ಲ
ಎಂಬ ನಿಮ್ಮ ವಾದವೇ ದಿಟ

ನಮಗೆ ಹುಚ್ಚು ನಾಯಿ ಕಚ್ಚಿತ್ತು
ಊರಿಂದ ಹೊರಗೆ ಜೋಪಡಿಗಳಲ್ಲಿ ಬದುಕಿದೆವು

ಜನ 28, 2014

‘ಧರ್ಮ’ ಸಂಕಟಕ್ಕೆ ಒಳಗಾಗುವ ಚುನಾವಣೆಯ ಕಾಲವಿದು….



ಡಾ ಅಶೋಕ್ ಕೆ ಆರ್.
ಧಾರವಾಡ, ಹುಮನಾಬಾದ್ ಮತ್ತಿವೆಲ್ಲವಕ್ಕೂ ಕಳಶವಿಟ್ಟಂತೆ ದಕ್ಷಿಣ ಕನ್ನಡದ ನಾನಾ ಭಾಗಗಳಲ್ಲಿ ಕಳೆದೆರಡು ತಿಂಗಳುಗಳಿಂದ ಒಂದರಹಿಂದೊಂದರಂತೆ ಕೋಮುಗಲಭೆಗಳು ವರದಿಯಾಗುತ್ತಿವೆ. ಅಪರಾಧ ಪ್ರಕರಣಗಳು, ವೈಯಕ್ತಿಕ ಸಂಗತಿಗಳು, ಉದ್ದೇಶಪೂರ್ವಕವೆಂಬಂತೆ ತೋರುವ ಘಟನೆಗಳೆಲ್ಲ ದೊಡ್ಡ ಕೋಮು ಗಲಭೆಗಳಾಗಿ ಮಾರ್ಪಡುತ್ತಿರುವುದು ಏನನ್ನು ಸೂಚಿಸುತ್ತಿದೆ? ಮತ್ತೇನಿಲ್ಲ ಚುನಾವಣೆ ಸಮೀಪಿಸುತ್ತಿದೆ. ಅತಿದೊಡ್ಡ ಪ್ರಜಾಪ್ರಭುತ್ವದ ಬಹುದೊಡ್ಡ ಲೋಕಸಭಾ ಚುನಾವಣೆಗೆ ಸರ್ವಪಕ್ಷಗಳೂ ಸಿದ್ಧಗೊಳ್ಳುತ್ತಿವೆ, ಸಿದ್ಧತೆಯ ಮಾದರಿ ಸಮಾಜದ ಆರೋಗ್ಯಕ್ಕೆ ಮತ್ತು ತತ್ಪರಿಣಾಮವಾಗಿ ವ್ಯಕ್ತಿಯ ವಿಕಸನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

ಜನ 26, 2014

ಗಾಂಧಿ ಈಗ. . . .

You observe any daily news papers supplement these days. They are good enough to see not to read!
Hardly we can expect one or two readable articles and even those readable articles are often forgotten after a day or two.
Prajavani, one of the leading Kannada daily gives better supplements when compared to other leading Kannada daily.
Prajavani's today's supplement (26/01/2014) saphthahika puravina is one of the best supplement in recent days. Outs about Gandhi, his ideals, his confusions and a lot of confusions and discussions which occur because of Gandhi. Eminent writers and thinkers have written about Gandhi.
Don't miss it.
You can read all articles in www.prajavani.net
www.prajavaniepaper.com

The mind of Swamy Vivekananda

ಜನ 25, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 16

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ....ಭಾಗ 15 ಓದಲು ಇಲ್ಲಿ ಕ್ಲಿಕ್ಕಿಸಿ

ಇದ್ದಕ್ಕಿದ್ದಂತೆ ‘ಹುಚ್ಚ’ ತನ್ನನ್ನು ಮಾತನಾಡಿಸಿದ್ದು, ಅದೂ ತನ್ನ ಹೆಸರು ಹಿಡಿದು ಕರೆದದ್ದು – ಲೋಕಿ ಗರಬಡಿದವನಂತೆ ನಿಂತುಬಿಟ್ಟ. ‘ಹುಚ್ಚ’ ಪುಸ್ತಕ ಹುಡುಕುವುದರಲ್ಲೇ ತೊಡಗಿದ್ದ.
 ಕೆಲಕ್ಷಣಗಳ ಮೌನದ ನಂತರ ಲೋಕಿ ಸಾವರಿಸಿಕೊಂಡು
“ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯ್ತು?”
“ಬರೀ ನಿನ್ನ ಹೆಸರೇ ಅಲ್ಲ, ನಿನ್ನ ಎಲ್ಲಾ ವಿಷಯವೂ ಗೊತ್ತು”

ಜನ 24, 2014

ತಾರತಮ್ಯ

ಮುನೀರ್ ಕಾಟಿಪಳ್ಳ
ಇಂದು ಸಾವಿರಾರು ಬಡ ಕಾರ್ಮಿಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರು. ಮೀಡಿಯಾಗಳಿಗೆ ಇದು ಸುದ್ದಿ ಅಲ್ಲ. ಹಜಾರೆ, ಕ್ರೇಜಿ ಮುಂತಾದವರ ಎಲ್ಲ ಪ್ರತಿಭಟನೆಗಳನ್ನು ದಿನವಿಡೀ ತೋರಿಸೋ ಮೀಡಿಯಾ ಕಮ್ಯುನಿಷ್ಟರ ನಾಯಕತ್ವದ ಬಡವರ ನಿಜ ಹೋರಾಟಗಳನ್ನು ಕಡೆಗಣಿಸುತ್ತದೆ. ಇಷ್ಟಕ್ಕೆ ವಾಸ್ತವದ ಅರಿವಿಲ್ಲದವರು ಕಮ್ಯುನಿಷ್ಟರು ಅಪ್ರಸ್ತುತ ಎಂದು ಹೀಗಳೆಯುತ್ತಾರೆ.

ಜನ 17, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 15



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 14 ಓದಲು ಇಲ್ಲಿ ಕ್ಲಿಕ್ಕಿಸಿ
ಮಾರನೆಯ ದಿನ ಗೌತಮ್ ಕಾಲೇಜಿಗೆ ಬಂದರೂ ತರಗತಿಗಳಿಗೆ ಬರಲಿಲ್ಲ. ಮಧ್ಯಾಹ್ನ ಕ್ಯಾಂಟೀನಿನಲ್ಲಿ ಕುಳಿತಿದ್ದಾಗ ದೂರದಲ್ಲಿ ಸಿಂಚನಾ ಪೂರ್ಣಿಮಾಳ ಜೊತೆ ಕ್ಯಾಂಟೀನಿನ ಕಡೆಯೇ ಬರುತ್ತಿದ್ದುದನ್ನು ನೋಡಿದ. ಎದೆ ಡವಗುಟ್ಟಲಾರಂಭಿಸಿತು. ‘ಆಕೆ ಏನು ಹೇಳಬಹುದು. ದೂರದಿಂದ ಅವಳ ಮುಖ ಬೇರೆ ಕಾಣುತ್ತಿಲ್ಲ. ಅವಳ ಮುಖದಲ್ಲಿ ಕೋಪ? ಊಹ್ಞೂ ಕಾಣ್ತಿಲ್ಲ. ಜೊತೆಯಲ್ಲಿ ಪೂರ್ಣಿಮಾಳನ್ನು ಯಾಕೆ ಕರೆದುಕೊಂಡು ಬರ್ತಾ ಇದ್ದಾಳೆ. ನಾನು ಪತ್ರ ಕೊಟ್ಟಿರೋ ವಿಷಯ ಆಕೆಗೂ ಹೇಳಿಬಿಟ್ಟಿದ್ದಾಳೆ ಅನ್ಸುತ್ತೆ. ಛೇ! ಏನು ಹುಡುಗೀನಪ್ಪ; ಪ್ರೀತಿ ಪ್ರೇಮದಂಥ ಖಾಸಗಿ ವಿಷಯಗಳನ್ನು ಕೂಡ ಆಕೆಗೆ ಹೇಳಿಬಿಟ್ಟಿದ್ದಾಳಲ್ಲ. ಇವರಿಬ್ಬರ ಮಧ್ಯೆ ಗೌಪ್ಯತೆಯೇ ಇಲ್ಲವಾ?’ ಗೌತಮನಿಗೆ ಪೂರ್ಣಿಮಾಳನ್ನು ಕಂಡು ಈರ್ಷ್ಯೆ ಉಂಟಾಯಿತು. ಸಿಂಚನಾ ನನಗಿಂತ ಇವಳಿಗೇ ಆಪ್ತಳಲ್ಲಾ ಅನ್ನೋ ಕಾರಣಕ್ಕೆ.

ಜನ 14, 2014

ಬೆನ್ನಿ ಹಿನ್‌ ಬಾಬಾನನ್ನು ವಿರೋಧಿಸೋಣ- ಬೆನ್‌ ಹಿಂದೆನೂ ಒಮ್ಮೆ ನೋಡಿಕೊಳ್ಳೋಣ

ಶಶೀಧರ್ ಹೆಮ್ಮಾಡಿ
ಕಡಲು ಕಂಗಳ ಹುಡುಗಿಯಿಂದ ತೆಗೆದುಕೊಂಡಿದ್ದು

ಬೇವಕೂಫೋಂ ಕಿ ಕಮಿ ನಹಿ
ಏಕ್ಢೂಂಡೊ ಹರಝಾರ್ಮಿಲ್ತೆಂ ಹೈಂ
(ಮೂರ್ಖರಿಗೇನೂ ಕೊರತೆ ಇಲ್ಲ, ಒಬ್ಬರನ್ನು ಹುಡುಕಿದರೆ ಸಾವಿರ ಮಂದಿ ಸಿಗುತ್ತಾರೆ)