ಜುಲೈ 22, 2019

ಒಂದು ಬೊಗಸೆ ಪ್ರೀತಿ - 23

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಮನೆ ತಲುಪುವವರೆಗೂ ಸಾಗರನಿಗೆ ಮೆಸೇಜ್ ಮಾಡಲು ಆಗಿರಲಿಲ್ಲ. ರಾಜಿ ಇನ್ನೂ ಆಫೀಸಿಗೆ ಹೊರಟಿರಲಿಲ್ಲ. ಸಾಗರನಿಗೆ ರಾತ್ರಿ ಮಾಡಿದ್ದ ಕಾಲ್ ಡೀಟೇಲ್ಸನ್ನು ಡಿಲೀಟ್ ಮಾಡಿದ್ದೀನಾ ಎಂದು ಮರುಪರಿಶೀಲಿಸಿದೆ. ರಾಜಿ ನನ್ನ ಮೊಬೈಲನ್ನು ತೆಗೆದು ಪರಿಶೀಲಿಸೋರೇನಲ್ಲ. ನಾನೂ ಅವರ ಮೊಬೈಲನ್ನು ಮುಟ್ಟುವವಳಲ್ಲ. ಆದರೂ ಸುಮ್ನೆ ಯಾಕೆ ರಿಸ್ಕು ಅಂತ್ಹೇಳಿ ಡಿಲೀಟ್ ಮಾಡ್ತಿದ್ದೆ. ರಾಜಿ ಆಫೀಸಿಗೆ ಹೊರಟ ಮೇಲೆ ಸಾಗರನಿಗೊಂದು 'ಗುಡ್ ಮಾರ್ನಿಂಗ್' ಮೆಸೇಜು ಕಳುಹಿಸಿದೆ. ಅರ್ಧ ಘಂಟೆಯ ನಂತರ ಉತ್ತರಿಸಿದ್ದ. ಻ಅಷ್ಟರಲ್ಲಿ ಗೇಟಿನ ಸದ್ದಾಯಿತು. ಮೆಸೇಜುಗಳನ್ನು ಡಿಲೀಟು ಮಾಡಿ ಬಾಗಿಲು ತೆರೆದರೆ ಶಶಿ ಬಂದಿದ್ದ, ಸೋನಿಯಾ ಕೂಡ ಜೊತೆಯಲ್ಲಿ ಬಂದಿದ್ದಳು. 

'ಏನ್ರಪ್ಪಾ ಯುವಪ್ರೇಮಿಗಳು. ಕೆಲಸಕ್ ಹೋಗೋದ್ ಬಿಟ್ಟು ಇಷ್ಟು ದೂರ. ಮದುವೆಯಾಗೋಕೆ ಓಡಿಬಂದಿದ್ದೀರಾ ಹೆಂಗೆ' ನಗುತ್ತಾ ಸೋನಿಯಾಳ ಹೆಗಲ ಮೇಲೆ ಕೈ ಹಾಕಿಕೊಂಡು ಒಳಗೆ ಕರೆದುಕೊಂಡೆ. 

“ಅಪ್ಪ ಅಮ್ಮ ಅಕ್ಕ ಭಾವ ಒಪ್ಕಂಡ ಮೇಲೆ ಓಡೋಗಿ ಮದುವೆಯಾಗೋ ದರ್ದು ನಮಗಿಲ್ಲಪ್ಪ" ಶಶಿಯ ದನಿಯಲ್ಲಿ ಒಂದಷ್ಟು ದಿನದಿಂದ ಕಾಣೆಯಾಗಿದ್ದ ಲವಲವಿಕೆ ಮರಳಿ ಬಂದಂತಿತ್ತು. ಸೋನಿಯಾಳ ಮುಖದಲ್ಲಿ ಮಾತ್ರ ಆ ಲವಲವಿಕೆ ಪ್ರತಿಫಲಿಸಲಿಲ್ಲ. 

ಒಂದಷ್ಟು ಸಮಯ ಮೂರೂ ಮಂದಿ ಸುಮ್ಮನೆ ಕುಳಿತಿದ್ದೆವು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜುಲೈ 14, 2019

ಒಂದು ಬೊಗಸೆ ಪ್ರೀತಿ - 22

ಡಾ. ಅಶೋಕ್.‌ ಕೆ. ಆರ್.‌
“ನಿನಗೆ ಇಂಜಿನಿಯರಿಂಗ್ ಮಾಡ್ಬೇಕು ಅಂತಿತ್ತಾ?” 

'ಹು. ನಿಂಗೇ ಗೊತ್ತಲ್ಲ. ನಾವ್ ಪಿಯುಲಿದ್ದಾಗ ಇಂಜಿನಿಯರಿಂಗ್ ಬೂಮ್ ನಲ್ಲಿತ್ತು. ಸಾಫ್ಟ್ ವೇರು, ಇನ್ಫೋಸಿಸ್ಸು, ಅಮೆರಿಕಾ ಅಮೆರಿಕಾ ಬಹಳಷ್ಟು ಜನರ ಕನಸಾಗಿತ್ತಲ್ಲ. ನಂಗೂ ಹಂಗೇ ಇತ್ತು. ಇಂಜಿನಿಯರಿಂಗ್ ಮಾಡ್ಕಂಡು, ಒಂದಷ್ಟು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡ್ಕಂಡು ಆಮೇಲೆ ಪರಶುವಿನ ಜೊತೆ ವಿದೇಶಕ್ಕೋಗಿ ದುಡಿದು ದುಡಿದು ಕೈತುಂಬಾ ದುಡ್ಡು ಮಾಡ್ಕಂಡು ಬಂದು ಸೆಟಲ್ ಆಗಿಬಿಡಬೇಕು ಅಂತಿತ್ತು. ನಿಂಗಿರಲಿಲ್ವಾ' 

“ಇಲ್ಲಪ್ಪ. ನಂಗೆ ಮೊದಲಿಂದಾನೂ ಡಾಕ್ಟರ್ ಆಗಬೇಕು ಅಂತಲೇ ಇತ್ತು" ಸಾಗರನ ಮಾತಿಗೆ ಮ್ ಎಂದೊಂದು ನಿಟ್ಟುಸಿರುಬಿಟ್ಟೆ. 

“ಮತ್ತೆ ನೀನ್ಯಾಕೆ ಇಂಜಿನಿಯರಿಂಗ್ ಬಿಟ್ಟು ಮೆಡಿಕಲ್ ಸೇರಿದೆ" 

'ಹು. ಅಲ್ಲಿಗೇ ಬಂದೇ ಇರು. ಪಿಯು ರಿಸಲ್ಟು ಬಂತು. ನಂಗೇ ಅಚ್ಚರಿಯಾಗುವಂತೆ ತೊಂಭತ್ತನಾಲ್ಕು ಪರ್ಸೆಂಟ್ ತೆಗೆದೆ. ಅಪ್ಪನ ಕೈಲಿ ಶಹಬ್ಬಾಸ್ ಅನ್ನಿಸಿಕೊಂಡೆ. ಪರಶು ಮೆಚ್ಚುಗೆಯಿಂದ ನೋಡಿದ. ಅವನು ಅರವತ್ತು ಪರ್ಸೆಂಟು ತೆಗೆದುಕೊಂಡು ಪಾಸಾಗಿದ್ದ. ನನ್ನ ತೊಂಭತ್ತನಾಲ್ಕಕ್ಕಿಂತಲೂ ಅವನ ಅರವತ್ತು ದೊಡ್ಡದೆಂದನ್ನಿಸಿತು ನನಗೆ' 

“ಮ್. ಅಶ್ವಿನಿಗಿಂತಾ ಜಾಸ್ತಿ ತೆಗೆದಾ ಇಲ್ಲವಾ?” ವ್ಯಂಗ್ಯದಲ್ಲೇ ಕೇಳಿದ ಸಾಗರ. 

'ಆಹಾ.... ವ್ಯಂಗ್ಯ ನೋಡು! ನಾವ್ ಒಂದ್ಸಲ ಡಿಸೈಡ್ ಮಾಡಿಬಿಟ್ರೆ ನಮ್ ಮಾತ್ ನಾವೇ ಕೇಳಲ್ಲ' 

“ಪಿಚ್ಚರ್ ಡೈಲಾಗು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜುಲೈ 11, 2019

ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ

ಕು.ಸ.ಮಧುಸೂದನ
ಕತ್ತಲಾಗಲೆಂದೆ ಬೆಳಗಾಗುವುದು 
ಆರಲೆಂದೇ ದೀಪ ಉರಿಯುವುದು
ಬಾಡಲೆಂದೇ ಹೂವು ಅರಳುವುದು 
ಕಮರಲೆಂದೆ ಕನಸು ಹುಟ್ಟುವುದು 
ಗೊತ್ತಿದ್ದರೂ ಹಣತೆ ಹಚ್ಚಿಟ್ಟಳು 
ಬರಲಿರುವ ಸಖನಿಗಾಗಿ. 

ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು 
ಬರಲಿರುವ ಸಖನ ಮೂಗಿಗೆ ಘಮಿಸಲೆಂದು 
ಬರಡು ಎದೆಗೆ ವಸಂತನ ಕನವರಿಸಿ 
ಹೊಸ ಕನಸು ಚಿಗುರಿಸಿಕೊಂಡಳು 
ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು 

ಜುಲೈ 9, 2019

ಶಬ್ದವೊಂದು ಕವಿತೆಯಾಗುವ ಮೊದಲು!

ಕು.ಸ.ಮಧುಸೂದನ
ಶಬ್ದವೊಂದು ಕವಿತೆಯಾಗುವ ಮೊದಲು 
ಕಣ್ಣುಗಳಿಗೆ ಕನಸಿನ ಪಾಠ ಮಾಡಿ ಹೋಯಿತು

ಕವಿತೆಯೊಂದು ಹಾಳೆಗಿಳಿಯುವ ಮೊದಲು
ಕನಸೊಂದ ಕಣ್ಣಿಗಿಳಿಸಿ ಹೋಯಿತು. 

ಹಕ್ಕಿಯೊಂದು ಬಾನೊಳಗೆ ಹಾರುವ ಮೊದಲು 
ಭುವಿಗೆ ವಿದಾಯದ ಅಪ್ಪುಗೆಯನೊಂದ ನೀಡಿ ಹೋಯಿತು 

ಮರಣವೊಂದು ಮನುಜನ ತಬ್ಬುವ ಮೊದಲು 
ಜೀವನದ ಗುಟ್ಟೊಂದ ಕಿವಿಯಲುಸುರಿ ಹೋಯಿತು. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಜುಲೈ 7, 2019

ಒಂದು ಬೊಗಸೆ ಪ್ರೀತಿ - 21

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
‘ಸರಿ ಕಣೋ. ಡ್ಯೂಟಿಗೆ ಹೊರಟೆ. ಒಂಭತ್ತರ ಮೇಲೆ ಬಿಡುವಾಗ್ತೀನಿ. ಮೆಸೇಜು ಮಾಡ್ತೀನಿ’ 

“ಸರಿ ಸರಿ. ನಂಗೂ ಇವತ್ತು ಡ್ಯೂಟೀನೇ” 

‘ಡ್ಯೂಟಿನಾ? ಪರೀಕ್ಷೆಗೆ ಓದಿಕೊಳ್ಳೋಕೆ ರಜೆ ಕೊಟ್ಟಿದ್ದಾರೆ ಅಂತಿದ್ದೆ’ 

“ನಿನ್ ಜೊತೆ ಡ್ಯೂಟಿ ಅಂದೆ” 

‘ಹ ಹ. ನಿಂಗಿಷ್ಟ ಇಲ್ದೇ ಹೋದ್ರೆ ರಜಾ ಹಾಕೊಳ್ಳಪ್ಪ. ನಂದೇನೂ ಬಲವಂತವಿಲ್ಲ’ 

“ಹಂಗೇನಿಲ್ವೇ ನಂಗೂ ಇಷ್ಟಾನೇ. ಏನೋ ತಲೆಗ್ ಏನೇನೋ ಯೋಚ್ನೆ ಬರ್ತವೆ ಅಷ್ಟೇ” 

‘ತಲೆ ಇರೋದೆ ಯೋಚ್ನೆ ಮಾಡೋದಿಕ್ಕಲ್ವ. ತಲೆ ಕೆಡಿಸ್ಕೋಬೇಡ ಬಿಡು’ 

ಸಾಲುದ್ದದ ಸ್ಮೈಲಿ ಕಳುಹಿಸಿದ. ಸ್ಮೈಲಿಯಲ್ಲಿ ಸರ್ವ ಭಾವನೆಗಳೂ ಅಡಕವಾಗಿದ್ದವು. 

“ಸರಿ ಕಣೇ. ಡ್ಯೂಟಿಗೆ ಹೊರಡು. ಬಿಡುವಾದಾಗ ..... ಅಲ್ಲಲ್ಲ ಬಿಡುವು ಮಾಡಿಕೊಂಡು ಮೆಸೇಜು ಮಾಡು. ಕಾಯ್ತಿರ್ತೀನಿ” 

‘ಬರೀ ಮೆಸೇಜೇ ಸಾಕೇನೋ. ನಾ ಫೋನ್ ಮಾಡಿ ಮಾತಾಡ್ಬೇಕು ಅಂತಿದ್ದೆ ಇವತ್ತು’ 

“ಡ್ಯೂಟಿ?” 

‘ಡ್ಯೂಟಿ ಇದೆ. ಡ್ಯೂಟಿ ಡಾಕ್ಟರ್ ರೂಮಿರುತ್ತಲ್ಲ. ರಾತ್ರಿಯೇನೂ ಅಲ್ಲಿ ಪೇಷೆಂಟ್ಸ್ ಹೆಚ್ಚಿಗೆ ಇರಲ್ಲ. ಹತ್ ಘಂಟೆಗೆಲ್ಲ ರೂಮಿಗೋಗಿ ಮಲಗ್ತೀನಿ ಸಾಮಾನ್ಯವಾಗಿ. ನಿನಗೆ ನಿದ್ರೆ ಬಂದಿಲ್ಲ ಅಂದ್ರೆ ಫೋನ್ ಮಾಡ್ತೀನಿ ಹತ್ತರ ಮೇಲೆ’ 

“ನನಗ್ ನಿದ್ರೆ ಬಂದಿದ್ರೂ ಪರವಾಗಿಲ್ಲ ಫೋನ್ ಮಾಡಿ ಎಬ್ಬಿಸು. ಆದ್ರೆ....”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜುಲೈ 2, 2019

ಗುರುತು!

ಕು.ಸ.ಮಧುಸೂದನ
ನಾನು 
'ಅವಳು' 
ಎಂದು ಬರೆದಾಗೆಲ್ಲ
ನೀವು ಅನುಮಾನದಿಂದ ಅವಳತ್ತ ತಿರುಗಿ ನೋಡದಿರಿ.

ಇದ್ದಿದ್ದು ನಿಜ, ಅವಳಿಗೊಂದು ಹೆಸರು
ಅವರ ಮನೆಯವರು ಇಟ್ಟಿದ್ದು.
ಆ ಹೆಸರಿನಾಚೆ ಅವಳಿಗೇನೂ ಗುರುತಿರಲಿಲ್ಲ ಎಂಬುದೂ ನಿಜ.
ಯಾರದೊ ಮಗಳಾಗಿ ತಂಗಿಯಾಗಿ ಅಕ್ಕನಾಗಿ
ಇದ್ದವಳು ನನ್ನ ಗೆಳತಿಯಾಗಿದ್ದು ಆಕಸ್ಮಿಕವೇ ಸರಿ
ಅವೆಲ್ಲ ದಾಟಿ 
ಅವಳು
ಪತ್ನಿಯಾದಳು,
ತಾಯಾದಳು
ತನ್ನ ಹೆಸರಿನಾಚೆಯೊಂದು ಗುರುತಿಗೆಂದೂ ಹಂಬಲಿಸದೆಯೆ.
ಇದೀಗ ಬಿಟ್ಟು ಬಿಡಬೇಕಾಗಿದೆ ಅವಳ
ನಾವಿಟ್ಟ ಹೆಸರಿನಿಂದಾಚೆಗೊಂದು ಗುರುತು
ತಾನೇ ಕಂಡುಕೊಳ್ಳಲು.
ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಜೂನ್ 29, 2019

ಗೋರಿಯ ಮೇಲೆ.

ಕು.ಸ.ಮಧುಸೂದನ ರಂಗೇನಹಳ್ಳಿ 
ಬರುತ್ತೇನೆಂದಿದ್ದೆ ಬರಲಿಲ್ಲ 
ಕಾಯುತ್ತಿದ್ದೆ 
ಇರುಳ ತಂಪಿನಲಿ ಸ್ವಸ್ಥನಂತೆ 
ಹಗಲ ಬೇಗೆಯಲಿ ಅಸ್ವಸ್ಥನಂತೆ. 

ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ 
ಬೀಸಿಬಂದ ಗಾಳಿ ನನ್ನ ವಾಸನೆ ಹೊತ್ತು ತರಲಿಲ್ಲ 
ಹಗಲ ಬೆನ್ನೇರಿ ಬಂದಿರುಳಿಗೆ 
ಉಸಿರು ನೀಳವಾಯಿತು

ಜೂನ್ 28, 2019

ಒಂದು ಬೊಗಸೆ ಪ್ರೀತಿ - 20

ಡಾ. ಅಶೋಕ್.‌ ಕೆ. ಆರ್.‌
‘ಶಶಿ ವಿಷಯ ಶಶಿಯತ್ರಾನೇ ಮಾತನಾಡಿದ್ರೆ ಚೆಂದ ಅಲ್ವ. ಕೊನೇಪಕ್ಷ ಅವನು ಇದ್ದಾಗಲಾದರೂ ಮಾತನಾಡಬೇಕು. ಅವನಿಲ್ಲದೆ ಇದ್ದಾಗ ಮಾತನಾಡುವುದು ಸರಿಯಲ್ಲವೇನೋ’ ತಾಳ್ಮೆಯ ಪ್ರತಿರೂಪದಂತೆ ಮಾತನಾಡುತ್ತಿರುವ ಅಪ್ಪನ ದನಿ ಯಾವಾಗ ದಿಕ್ಕು ತಪ್ಪಿ ರೇಗುವಿಕೆಯಾಗಿ ಅಸಭ್ಯವಾಗಿ ಪರಿವರ್ತಿತವಾಗುತ್ತದೋ ಎಂಬ ಭಯ ನನಗೆ. 

“ನಿನಗೆ ಗೊತ್ತಾ ಹುಡುಗಿ ಯಾರು ಅಂತ?” 

‘ಮ್. ಗೊತ್ತು’ 

“ನೋಡಿದ್ದೀಯಾ?” 

‘ಮ್’ 

“ಮಾತನಾಡಿದ್ದೀಯ?” 

‘ಮ್’ 

“ನಿಮ್ಮಮ್ಮನಿಗೆ ಗೊತ್ತಾ?” 

‘ಮ್’ 

“ಎಲ್ಲರಿಗೂ ಗೊತ್ತು. ನಾನೊಬ್ನೇ ಬೇವರ್ಸಿ ಈ ಮನೇಲಿ” 

‘ಮತ್ತೆ ಶುರು ಮಾಡಬೇಡಿ ಅಪ್ಪ’ 

“ಸಾರಿ. ಯಾರು ಹುಡುಗಿ?” 

‘ನೀವೇಗಿದ್ರೂ ಮದುವೆಗೆ ಒಪ್ಪಲ್ಲ ಅಂದ ಮೇಲೆ ಹುಡುಗಿ ಯಾರಾದ್ರೇನು ಬಿಡಿ ಅಪ್ಪ’

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಏಕಕಾಲಕ್ಕೆ ಚುನಾವಣೆ' ಬಾಜಪದ ಹಳೆಯಜೆಂಡಾ

ಕು.ಸ.ಮಧುಸೂದನ ರಂಗೇನಹಳ್ಳಿ 
ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೆಹಲಿಯ ಗದ್ದುಗೆ ಹಿಡಿದಾಕ್ಷಣ ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳುವುದರೊಂದಿಗೆ ಬಾಜಪದ ಹಳೆಯ ಗುಪ್ತ ಕಾರ್ಯಸೂಚಿಗೆ ಮತ್ತೆ ಜೀವ ತುಂಬಿದ್ದಾರೆ. 

ಬಾಜಪದ ಈ ಕಾರ್ಯತಂತ್ರ ಹೊಸತೇನಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಪ್ರದಾನಮಂತ್ರಿಗಳಾದ ಕೆಲವೆ ತಿಂಗಳಲ್ಲಿ ಕೇಂದ್ರ ಕಾನೂನು ಸಚಿವಾಲಯ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸುವುದು ಸೂಕ್ತವೆಂಬ ಸಲಹೆನೀಡಿತ್ತು. ನಂತರದ ಕೆಲವೆ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಸಹ ಕಾನೂನು ಇಲಾಖೆಯ ಈ ಸೂಚನೆಗೆ ಸಹಮತ ಸೂಚಿಸುತ್ತ, ಸರಕಾರ ಕಾನೂನು ತಿದ್ದುಪಡಿ ಮಾಡಿ ಹಸಿರು ನಿಶಾನೆ ತೋರಿಸಿದಲ್ಲಿ ತನಗೇನು ಅಭ್ಯಂತರವಿಲ್ಲವೆಂದು ಹೇಳಿತ್ತು. ನಂತರದಲ್ಲಿ ಪ್ರದಾನಿಯವರು ಸಹ ಏಕಕಾಲಕ್ಕೆ ಚುನಾವಣೆ ನಡೆಸಲು ತಾವು ಇಚ್ಚಿಸುವುದಾಗಿ ಸಾರ್ವಜನಿಕವಾಗಿ ಹೇಳುವುದರೊಂದಿಗೆ ಒಂದಷ್ಟು ಚರ್ಚೆಗೆ ನಾಂದಿ ಹಾಡಿದ್ದರು. 

ಜೂನ್ 14, 2019

ಈ ಸೂರ್ಯಾಸ್ತದೊಳಗೆ

ಕು.ಸ.ಮಧುಸೂದನನಾಯರ್
ನೀಲಿ ಹೂವಿನಂತೆ ನಳನಳಿಸಿ 
ಬೆಳದಿಂಗಳ ನಗುವ ಚೆಲ್ಲಿದವಳು 
ನಕ್ಷತ್ರ ಕಣ್ಣುಗಳಲಿ ಬೆಳದಿಂಗಳ ಬೆಳಕ 
ಹರಡಿದಾಗ ಅವನ ಕತ್ತಲ ಜಗಕೆ ಹಗಲು 
ಬಂದಂತಾಗಿ 
ಸಾವಿರ ಕನಸುಗಳು ಸೃಷ್ಠಿಯಾದವು 
ಕನಸುಗಳೊಳಗೆ ಅವಳ 
ಕೆನ್ನೆ ಗಲ್ಲ ತುಟಿಕಟಿಗಳ 
ಗಲ್ಲ ಕುತ್ತಿಗೆಯ ಇಳಿಜಾರು 
ಗರಿಗೆದರಿದವು,