ಡಾ. ಅಶೋಕ್. ಕೆ. ಆರ್.
ಬೆಳಿಗ್ಗೆ ಮನೆ ತಲುಪುವವರೆಗೂ ಸಾಗರನಿಗೆ ಮೆಸೇಜ್ ಮಾಡಲು ಆಗಿರಲಿಲ್ಲ. ರಾಜಿ ಇನ್ನೂ ಆಫೀಸಿಗೆ ಹೊರಟಿರಲಿಲ್ಲ. ಸಾಗರನಿಗೆ ರಾತ್ರಿ ಮಾಡಿದ್ದ ಕಾಲ್ ಡೀಟೇಲ್ಸನ್ನು ಡಿಲೀಟ್ ಮಾಡಿದ್ದೀನಾ ಎಂದು ಮರುಪರಿಶೀಲಿಸಿದೆ. ರಾಜಿ ನನ್ನ ಮೊಬೈಲನ್ನು ತೆಗೆದು ಪರಿಶೀಲಿಸೋರೇನಲ್ಲ. ನಾನೂ ಅವರ ಮೊಬೈಲನ್ನು ಮುಟ್ಟುವವಳಲ್ಲ. ಆದರೂ ಸುಮ್ನೆ ಯಾಕೆ ರಿಸ್ಕು ಅಂತ್ಹೇಳಿ ಡಿಲೀಟ್ ಮಾಡ್ತಿದ್ದೆ. ರಾಜಿ ಆಫೀಸಿಗೆ ಹೊರಟ ಮೇಲೆ ಸಾಗರನಿಗೊಂದು 'ಗುಡ್ ಮಾರ್ನಿಂಗ್' ಮೆಸೇಜು ಕಳುಹಿಸಿದೆ. ಅರ್ಧ ಘಂಟೆಯ ನಂತರ ಉತ್ತರಿಸಿದ್ದ. ಅಷ್ಟರಲ್ಲಿ ಗೇಟಿನ ಸದ್ದಾಯಿತು. ಮೆಸೇಜುಗಳನ್ನು ಡಿಲೀಟು ಮಾಡಿ ಬಾಗಿಲು ತೆರೆದರೆ ಶಶಿ ಬಂದಿದ್ದ, ಸೋನಿಯಾ ಕೂಡ ಜೊತೆಯಲ್ಲಿ ಬಂದಿದ್ದಳು.
'ಏನ್ರಪ್ಪಾ ಯುವಪ್ರೇಮಿಗಳು. ಕೆಲಸಕ್ ಹೋಗೋದ್ ಬಿಟ್ಟು ಇಷ್ಟು ದೂರ. ಮದುವೆಯಾಗೋಕೆ ಓಡಿಬಂದಿದ್ದೀರಾ ಹೆಂಗೆ' ನಗುತ್ತಾ ಸೋನಿಯಾಳ ಹೆಗಲ ಮೇಲೆ ಕೈ ಹಾಕಿಕೊಂಡು ಒಳಗೆ ಕರೆದುಕೊಂಡೆ.
“ಅಪ್ಪ ಅಮ್ಮ ಅಕ್ಕ ಭಾವ ಒಪ್ಕಂಡ ಮೇಲೆ ಓಡೋಗಿ ಮದುವೆಯಾಗೋ ದರ್ದು ನಮಗಿಲ್ಲಪ್ಪ" ಶಶಿಯ ದನಿಯಲ್ಲಿ ಒಂದಷ್ಟು ದಿನದಿಂದ ಕಾಣೆಯಾಗಿದ್ದ ಲವಲವಿಕೆ ಮರಳಿ ಬಂದಂತಿತ್ತು. ಸೋನಿಯಾಳ ಮುಖದಲ್ಲಿ ಮಾತ್ರ ಆ ಲವಲವಿಕೆ ಪ್ರತಿಫಲಿಸಲಿಲ್ಲ.
ಒಂದಷ್ಟು ಸಮಯ ಮೂರೂ ಮಂದಿ ಸುಮ್ಮನೆ ಕುಳಿತಿದ್ದೆವು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.