ಮೇ 3, 2018
ಏಪ್ರಿ 28, 2018
Canon DPP tutorials Part 2: Edit Image window
In this tutorial we will see the layout of edit image window of the Canon DPP (Digital photo professional) and we will familiarise ourself with the tool palettes.
Canon DPP tutorials part 1: Introduction - https://youtu.be/H4ipD8vh95g
Subscribe to get notified about future tutorials.
Subscribe to get notified about future tutorials.
ಏಪ್ರಿ 26, 2018
ಇವು ಜೀವಚ್ಛವದಂತ ಆತ್ಮಗಳ ಕರುಳು ಕಿವುಚುವ ಆಕ್ರಂದನ...
(ಕು.ಸ.ಮಧುಸೂದನ್ ರವರ ಅಸಹಾಯಕ ಆತ್ಮಗಳು ಲೇಖನ ಸರಣಿಯು ಹಿಂಗ್ಯಾಕೆಯಲ್ಲಿ ಪ್ರಕಟಗೊಂಡಿತ್ತು. 'ಅಸಹಾಯಕ ಆತ್ಮಗಳೀಗ' ಪುಸ್ತಕದ ರೂಪ ಪಡೆದಿದೆ. ಪುಸ್ತಕದ ಕುರಿತಾಗಿ ಪದ್ಮಜಾ ಜೋಯಿಸ್ ರವರು ಬರೆದಿರುವ ಪರಿಚಯದ ಲೇಖನ ಹಿಂಗ್ಯಾಕೆಯ ಓದುಗರಿಗಾಗಿ)
ಕು. ಸ. ಮಧುಸೂದನನಾಯರ್ ರಂಗೇನಹಳ್ಳಿ ಅವರು ಬರೆದ ಈ ಪುಸ್ತಕದೊಳಗಿನ ಕತೆಗಳನ್ನು ಓದುತ್ತ ಹೋದಂತೆ ಹಲವು ಅಸಹಾಯಕ ಆತ್ಮಗಳ ಆಕ್ರಂದನ ಕೇಳಿದಂತಾಗಿ ಒಂದು ಕ್ಷಣ ಬೆಚ್ಚಿದ್ದು ನಿಜ.
ತಮ್ಮ ಸಂಪೂರ್ಣ ಬದುಕನ್ನು ವೇಶ್ಯಾವೃತ್ತಿಯ ನರಕದಲ್ಲಿ ಕಳೆದ ಹತ್ತೊಂಭತ್ತು ಹೆಣ್ಣುಮಕ್ಕಳ ಕತೆಗಳನ್ನು ಅವರ ಬಾಯಿಂದಲೇ ಕೇಳಿ ಅವನ್ನು ಅಕ್ಷರ ರೂಪಕ್ಕಿಳಿಸಿರುವ ಮಧುಸೂದನ್ ರವರ “ಅಸಹಾಯಕ ಆತ್ಮಗಳು” ಪುಸ್ತಕದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ
Nikon B700 zoom test
In this video we will check out the zoom capacity of B 700, a bridge camera of Nikon Coolpix series.
Nikon Coolpix B 700 specifications:
4K video
20.3 megapixel
60 x optical zoom (=1440 mm)
RAW shooting capability.
ಏಪ್ರಿ 23, 2018
Nikon Coolpix B 700 quick look review
Nikon coolpix B700 is a point and shoot - bridge camera.
Key features:
- 4k UHD video recording
- RAW shooting capacity
- 1440 mm equivalent 60X zoom!
ಏಪ್ರಿ 21, 2018
Canon DPP tutorial part 1 - Introduction
DPP (Digital Photo Professional) is a free software from Canon for editing Canon raw images.
In this tutorial I have just brushed up the basic layout of the software.
In this tutorial I have just brushed up the basic layout of the software.
ಏಪ್ರಿ 20, 2018
ಅತೃಪ್ತ ಆತ್ಮಗಳ ಸ್ಥಳಾಂತರ ಪ್ರಕ್ರಿಯೆಗಳು!!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
(ಇದೀಗ ಕರ್ನಾಟಕದ ಉದ್ದಗಲಕ್ಕೂ ಅತೃಪ್ತ ಆತ್ಮಗಳು ಅಡ್ಡಾಡುತ್ತಿದ್ದು ಸ್ವಪಕ್ಷೀಯರಿಂದ ಅತೃಪ್ತಿ ಶಮನವಾಗದಿದ್ದ ಆತ್ಮಗಳು ಪರಪಕ್ಷಗಳ ಸೆರಗಿನ ಚುಂಗು ಹಿಡಿದು ತಮ್ಮ ಅತೃಪ್ತಿಯನ್ನು ತಣಿಸಿಕೊಳ್ಳಲು ಪ್ರಯತ್ನಿಸುತ್ತಿವೆ, ಹಾಗೆಯೇ ಇಂತಹ ಆತ್ಮಗಳನ್ನು ಹಿಡಿದು ತಂದು ಅವಕ್ಕೊಂದು ಭದ್ರನೆಲೆ ಕಲ್ಪಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅಪಾರವಾಗಿ ಶ್ರಮಿಸುತ್ತಿವೆ. ಆ ಬಗ್ಗೆ ಒಂದು ಟಿಪ್ಪಣಿ)
ಅವೇ ಕ್ಷೇತ್ರಗಳು, ಅವೇ ಹೆಸರುಗಳು, ಅವೇ ಮುಖಗಳು, ಆದರೆ-ಪಕ್ಷದ ಬಾವುಟ ಮತ್ತು ಚಿಹ್ನೆ ಬೇರೆ. ಮೇ ಹನ್ನೆರಡನೆ ತಾರೀಖಿನಂದು ನಡೆಯಲಿರುವ ಕರ್ನಾಟಕ ವಿದಾನಸಭೆಯ ಚುನಾವಣೆಗಳಿಗೆ ಸ್ಪರ್ದಿಸಿರುವ ಸಾಕಷ್ಟು ಕ್ಷೇತ್ರಗಳಲ್ಲಿ ಈ ಮಾತು ನಿಜವಾಗುತ್ತಿದೆ. 2013ರ ಚುನಾವಣೆಯನ್ನು, ಆಗ ಯಾವ್ಯಾವ ಪಕ್ಷದಿಂದ ಯಾರ್ಯಾರು ಸ್ಪರ್ದಿಸಿದ್ದರೆಂಬುದನ್ನು ನಿಖರವಾಗಿ ನೆನಪಿಟ್ಟುಕೊಂಡವರಿಗೆ ನನ್ನ ಮಾತುಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ.
ಏಪ್ರಿ 19, 2018
ಪ್ರದಾನಿಗಳೆ ಘೋಷಣೆಯನ್ನು ಬದಲಾಯಿಸಿ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹೆಣ್ಣಿನ ಬಗ್ಗೆ ನಮಗಿರುವ ಪೂರ್ವಾಗ್ರಹ ಮನಸ್ಥಿತಿಯನ್ನು ಒಮ್ಮೆ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಿದೆ. ಆಳಿಸಿಕೊಳ್ಳುವವರಿರಲಿ, ಆಳುವವರು ಸಹ ಹೆಣ್ಣನ್ನು ಒಬ್ಬ ಸ್ವತಂತ್ರಜೀವಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಒಂದು ಜೀವಿಯಂತೆ ಪರಿಗಣಿಸುತ್ತಿರುವುದನ್ನು ನಾವು ನೋಡಬಹುದು.ಇದಕ್ಕೆ ತತ್ಕ್ಷಣದ ಉದಾಹರಣೆಯೆಂದರೆ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಪ್ರದಾನಮಂತ್ರಿಯವರಾದ ನರೇಂದ್ರಮೋದಿಯವರು ಹೆಣ್ಣುಮಕ್ಕಳ ಬಗ್ಗೆ ಒಂದು ಘೋಷಣೆಯನ್ನು ಹರಿಯಬಿಟ್ಟರು. ಮಾಧ್ಯಮಗಳು ಸಹ ಆ ಘೋಷಣೆಯ ಹಿಂದಿರುವ ಮನಸ್ಥಿತಿಯನ್ನು ವಿಶ್ಲೇಷಣೆ ಮಾಡಲು ಹೋಗದೆ ಪ್ರದಾನಿಯವರನ್ನು ಕೊಂಡಾಡಿದ್ದೇ ಕೊಂಡಾಡಿದ್ದು!
“ಬೇಟಿ ಬಚಾವ್-ಬೇಟಿ ಪಡಾವ್”
“ಮಗಳನ್ನು ರಕ್ಷಿಸಿ- ಮಗಳನ್ನು ಓದಿಸಿ”
ಎನ್ನುವುದೇ ಆ ಜನಪ್ರಿಯ ಘೋಷಣೆಯಾಗಿತ್ತು.
ಏಪ್ರಿ 5, 2018
ಪ್ರಜಾಪ್ರಭುತ್ವದ ಜಯದ ಹಿಂದೆ ಪ್ರಜೆಯ ಸೋಲು!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರಜಾಪ್ರಭುತ್ವ ಜಯಸಾದಿಸಿದೆ!
ಪ್ರತಿ ಚುನಾವಣೆಗಳ ಪಲಿತಾಂಶಗಳು ಹೊರಬಿದ್ದಾಗಲು ನಮ್ಮ ಮಾಧ್ಯಮಗಳ ಮೊದಲಪುಟದ ತಲೆಬರಹವೇ ಇದಾಗಿರುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಮತ್ತು ನಮ್ಮ ಖಾಸಗಿ ಮಾತುಗಳ ನಡುವೆಯೂ ಇಂಡಿಯಾದ ಪ್ರಜಾಪ್ರಭುತ್ವದ ನಿಜವಾದ ಗೆಲುವಿರುವುದೇ ಶಾಂತಿಯುತ ಚುನಾವಣಾ ಪ್ರಕ್ರಿಯೆಯಲ್ಲಿ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ,
ಹಾಗಿದ್ದರೆ ನಿಜಕ್ಕೂ ನಮ್ಮ ಪ್ರಜಾಪ್ರಭುತ್ವ ಗೆಲ್ಲುತ್ತಿದೆಯಾ? ಶಾಂತಿಯುತ ಮತದಾನದ ಮಾನದಂಡವೊಂದರಿಂದಲೇ ನಮ್ಮ ಪ್ರಜಾಪ್ರಭುತ್ವದ ಯಶಸ್ಸನ್ನುಅಲೆಯಬಹುದಾ? ಚುನಾವಣಾ ಪ್ರಕ್ರಿಯೆಯ ಉಳಿದ ಯಾವ ವಿಷಯಗಳಿಗು ಇಲ್ಲಿ ಮಹತ್ವವೇ ಇಲ್ಲವಾ? ಇದು ನನ್ನನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಈ ಬಾರಿಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದ ಹಂತದಿಂದಲೇ ನೋಡೋಣ: