ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪಂಜಾಬ್ ರಾಜ್ಯದ ವಿದಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ಒಳಗೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈ ಚುನಾವಣಾ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿರುವವರಿಗೆ ಪ್ರಮುಖವಾಗಿ ಗೋಚರಿಸುತ್ತಿರುವ ಎರಡು ವಿಷಯಗಳಿವೆ. ಅದರಲ್ಲಿ ಮೊದಲನೆಯದು ಪಂಜಾಬಿನಲ್ಲಿ ತೀವ್ರವಾಗಿ ಚರ್ಚಿತವಾಗುತ್ತಿರುವ ಡ್ರಗ್ಸ್ ಮಾಫಿಯಾದ ಕಾನೂನುಬಾಹಿರ ಚಟುವಟಿಕೆಗಳು. ಇನ್ನೊಂದು ಪಂಜಾಬಿನ ರಾಜಕೀಯ ವಲಯದಲ್ಲಿ ಅಷ್ಟೇನೂ ಪ್ರಾಮುಖ್ಯ ಪಡೆಯದ ದಲಿತ ರಾಜಕಾರಣ ಎಲ್ಲ ಪಕ್ಷಗಳ ಒಳಗೆ ಚರ್ಚಿತವಾಗುತ್ತಿರುವುದಾಗಿದೆ. ಅದು ಇದುವರೆಗು ಪಂಜಾಬಿನ ರಾಜಕಾರಣದಲ್ಲಿ ದಲಿತ ಶಕ್ತಿಯ ಪ್ರಭಾವವೇ ಇರದಂತಹ ವಾತಾವರಣವಿದ್ದು, ಇದೀಗ ಅದು ಬದಲಾಗುವ ಮುನ್ಸೂಚನೆಯೊಂದು ಕಾಣುತ್ತಿರುವುದಾಗಿದೆ. ಈ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ: