ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ತಮ್ಮನ್ನು ಬಿಂಬಿಸಿಕೊಳ್ಳುತ್ತ, ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯಲು ಪೈಪೋಟಿ ನಡೆಸುತ್ತಿವೆ. ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಸ್ಪರ್ಧೆ ಹಾಗೂ ಅಸಹನೆ ಹುಟ್ಟುಹಾಕುತ್ತಿವೆ. ಇವುಗಳ ಮುಖವಾಡವನ್ನು ಗುರುತಿಸದವರು ಸನ್ನಿವೇಶದ ಸನ್ನಿಗೆ ಒಳಗಾದಂತೆ ಮಾರುಹೋಗುತ್ತಿದ್ದಾರೆ, ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ಗೊಂದಲಗೊಳಿಸಿ ದಿಕ್ಕು ತಪ್ಪಿಸುವ ಅಪಾಯ ದಟ್ಟವಾಗಿದೆ.
ಡಿಸೆಂ 5, 2016
ಆಗ 10, 2016
ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ: ವಿಚಾರ ಸಂಕಿರಣ.
10/08/2016
ಮೂರು ವರುಷದಿಂದ ಮಂಗಳೂರಿನಲ್ಲಿ "ಜನನುಡಿ", ನುಡಿಯು ಸಿರಿಯಲ್ಲ ಬದುಕು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿಮತ ಬಳಗವು ಈಗ ಬೆಂಗಳೂರಿಗೆ ಆಗಮಿಸಿದೆ! ಸ್ವಾತಂತ್ರೋತ್ಸವಕ್ಕೂ ಎರಡು ದಿನ ಮುಂಚೆ ಆಗಷ್ಟ್ ಹದಿಮೂರರಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ "ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ"ದ ಬಗ್ಗೆ ವಿಚಾರ ಸಂಕೀರ್ಣವನ್ನೇರ್ಪಡಿಸಿದೆ
ಡಿಸೆಂ 21, 2015
ಮಹಾದೇವರು ಹೇಳಿದ ಮೇಕೆಯ ಕತೆ
ಜನನುಡಿ 2015ರ ಮೊದಲ ದಿನ ರಾತ್ರಿ ಊಟವಾದ ಮೇಲೆ ‘ಅಭಿಮತ’ ತಂಡದ ದಿಡೀರ್ ವಿಮರ್ಶಾತ್ಮಕ ಸಭೆ ನಡೆಯುತ್ತಿದ್ದಾಗ ಅವತ್ತು ರಾತ್ರಿಯೇ ಮೈಸೂರಿಗೆ ಹೊರಟಿದ್ದ ದೇವನೂರು ಮಹಾದೇವರವರು ಬಂದರು. ಜನನುಡಿಯನ್ನು ವ್ಯವಸ್ಥಿತವಾಗಿ ಆಯೋಜಿಸಿದ ಕಿರಿಯರನ್ನುದ್ದೇಶಿಸಿ ನೀವೆರಡು ಮಾತುಗಳನ್ನಾಡಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದಾಗ ‘ಓ ಮತ್ತೆ ಮತ್ತೆ ನನ್ನನ್ನು ನೀವು ಹಿರಿಯರು ಮಾಡಿಬಿಡ್ತಿದ್ದೀರಿ’ ಎಂದು ನಗುತ್ತ ಮಾತುಗಳನ್ನಾರಂಭಿಸಿದ ದೇವನೂರು ‘ಇಲ್ಲಿ ನಿಮಗೆಲ್ಲ ಧನ್ಯವಾದ ಹೇಳೋ ಅವಶ್ಯಕತೆಯೆಲ್ಲಾ ಇಲ್ಲವೇ ಇಲ್ಲ. ಇದನ್ನು ನೀವು ನಿಮಗಾಗಿ ಮಾಡಿದ್ದೀರಿ. ಯಾವಾಗಲೂ ನಾನು ನನಗಾಗಿ ಈ ಕೆಲಸ ಮಾಡ್ತಿದ್ದೀನಿ ಅಂದ್ಕೊಂಡೇ ಮಾಡಬೇಕು. ಸಮಾಜಕ್ಕಾಗಿ, ಉದ್ಧಾರಕ್ಕಾಗಿ ಮಾಡ್ತಿದ್ದೀನಿ ಅನ್ನೋ ಮಾತುಗಳನ್ನೆಲ್ಲಾ ಮರೆತು ನನಗಾಗಿ ಮಾಡ್ತಿದ್ದೀನಿ ಅಂದ್ಕೊಂಡು ಮಾಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಒಂದು ಮೇಕೆಯ ಕತೆ ಹೇಳ್ತೀನಿ ಕೇಳಿ. ಅಬ್ರಹಾಂ ಲಿಂಕನ್ ತನ್ನ ಗೆಳೆಯ ಸಚಿವನೊಂದಿಗೆ ಪಯಣಿಸುತ್ತಿರುತ್ತಾನೆ. ಜೋರು ಮಳೆ ಬರುತ್ತಿರುತ್ತೆ. ಚರ್ಚೆಯ ಸಂದರ್ಭದಲ್ಲಿ ಗೆಳೆಯನಿಗೆ ‘ನಾನು ಎಲ್ಲಾ ಕೆಲಸವನ್ನೂ ನನಗಾಗಿ ನನ್ನ ನೆಮ್ಮದಿ ಸುಖಕ್ಕಾಗಿಯಷ್ಟೇ ಮಾಡ್ತೇನೆ’ ಎನ್ನುತ್ತಾರೆ. ಇವರ ಮಾತುಗಳನ್ನು ಒಪ್ಪದ ಗೆಳೆಯ ಬಹಳಷ್ಟು ಕೆಲಸಗಳನ್ನು ನಾವು ಇತರರ ಖುಷಿಗಾಗಿ ಮಾಡುತ್ತೇವೆ ಎಂದೇ ವಾದಿಸುತ್ತಾರೆ. ದಾರಿಯಲ್ಲಿ ಮೇಕೆಯೊಂದು ಕೆಸರಿನ ಹಳ್ಳದಲ್ಲಿ ಸಿಲುಕಿ ಹೊರಬರಲಾರದೆ ಮ್ಯಾ ಮ್ಯಾ ಎಂದು ಕಿರುಚಾಡುತ್ತಿರುತ್ತದೆ. ಇದನ್ನು ನೋಡಿದ ಲಿಂಕನ್ನರು ಮತ್ತೊಂದು ಕ್ಷಣ ಯೋಚಿಸದೆ ಬಿರುಸು ಮಳೆಯಲ್ಲಿ ನಡೆದು ಹೋಗಿ ಕೆಸರಿನಲ್ಲಿ ಸಿಲುಕಿದ್ದ ಮೇಕೆಯನ್ನು ಎತ್ತಿ ತಮ್ಮ ಎದೆಗೆ ಒತ್ತಿ ಹಿಡಿದು ಮೂತಿ ಮೇಲಿನ ಕೆಸರು ಒರೆಸಿ ನೆಲಕ್ಕೆ ಬಿಟ್ಟು ಅಂಡಿನ ಮೇಲೊಂದು ಒಡೆದು ಕಳುಹಿಸುತ್ತಾರೆ. ಲಿಂಕನ್ನರ ಶರ್ಟು ಸೂಟುಗಳೆಲ್ಲ ಕೆಸರುಮಯ. ಪಯಣ ಮತ್ತೆ ಪ್ರಾರಂಭವಾದಾಗ ಗೆಳೆಯ ನಗುತ್ತಿರುತ್ತಾನೆ. ‘ನೋಡಿದ್ರಾ ನನ್ನ ವಾದವೇ ಗೆದ್ದಿತು. ಮೇಕೆಯನ್ನು ನೀವು ಬದುಕಿಸಿಬಿಟ್ಟಿರಿ. ಇದನ್ನು ನೀವು ಮೇಕೆಗಾಗಿ ಮಾಡಿದಿರೇ ಹೊರತು ನಿಮಗಾಗಿ ಅಲ್ಲ’. ಲಿಂಕನ್ ‘ಖಂಡಿತವಾಗಿ ಈ ಕಾರ್ಯವನ್ನು ನಾನು ಮಾಡಿದ್ದು ನನಗಾಗಿ, ಮೇಕೆಗಾಗಿ ಅಲ್ಲ’ ಎಂದ್ಹೇಳಿ ಮುಗುಳ್ನಗುತ್ತಾರೆ. ಅದು ಹೇಗೆ ಎಂಬ ಪ್ರಶ್ನೆಗೆ ‘ನೋಡಿ ನಾನದನ್ನು ಬದುಕಿಸದಿದ್ದರೆ ಅದರ ಮ್ಯಾ ಮ್ಯಾ ಎಂಬ ಕೂಗು ನನ್ನ ಕಿವಿಯಲ್ಲಿ, ತಲೆಯಲ್ಲಿ ಉಳಿದುಹೋಗುತ್ತಿತ್ತು. ಆ ಕೂಗಿನ ನೆನಪಿನಿಂದ ನನಗೆ ಹತ್ತಲವು ರಾತ್ರಿಗಳು ನಿದ್ರೆ ಬರುತ್ತಿರಲಿಲ್ಲ. ನನ್ನ ನೆಮ್ಮದಿಯ ನಿದ್ರೆಗಾಗಿ ಅದನ್ನು ಬದುಕಿಸಿದೆ. ನನಗಾಗಿ ಅದನ್ನು ಬದುಕಿಸಿದೆ’!
ನಿರೂಪಣೆ: ಡಾ. ಅಶೋಕ್. ಕೆ. ಆರ್