ಸೆಪ್ಟೆಂ 10, 2014

ಆರಂಭ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ


ಮಧುಗಿರಿಯಲ್ಲಿ ಸೇರಿದ್ದ ಜನಸ್ತೋಮ
ಚಿತ್ರವೊಂದರ ಹಾಡುಗಳು ಜನರನ್ನು ಚಿತ್ರಮಂದಿರದೆಡೆಗೆ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ನಂತರದಲ್ಲಿ ಆ ಹಾಡುಗಳು ಅನೇಕ ವರುಷಗಳ ಕಾಲ ಜನಮಾನಸದಲ್ಲಿ ಉಳಿಯಲು ಚಿತ್ರದ ಗುಣಮಟ್ಟ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಚಿತ್ರದ ಹಾಡುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರರಂಗ ಅನೇಕ ಯೋಜನೆಗಳನ್ನಾಕುತ್ತವೆ. ಅಂತರ್ಜಾಲದ ಲಭ್ಯತೆ ಹೆಚ್ಚುತ್ತಿದ್ದಂತೆ ಮತ್ತು ಬ್ಲೂಟೂಥ್ ಆಧಾರಿತ ಮೊಬೈಲ್ಗಳು ಹೆಚ್ಚಾದ ನಂತರ ಕ್ಯಾಸೆಟ್ಟುಗಳನ್ನಾಗಲೀ ಸಿಡಿಗಳನ್ನಾಗಲೀ ಕೊಳ್ಳುವವರು ಇಲ್ಲವೇ ಇಲ್ಲ ಎಂದು ಹೇಳಬಹುದು. ರೇಡಿಯೋ ಮುಖಾಂತರ, ಟಿ.ವಿ. ಮುಖಾಂತರ ಜನರಿಗೆ ತಲುಪಲು ಪ್ರಯತ್ನಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ನೇರವಾಗಿ ಜನರಿಗೇ ತಲುಪಿಸುವ ಹೊಸ ಪ್ರಯತ್ನ ಮಾಡುತ್ತ ನಿಧಾನವಾಗಿಯಾದರೂ ಗೆಲುವು ಕಾಣುತ್ತಿರುವುದು ‘ಆರಂಭ’ ಚಿತ್ರತಂಡ.

ಸೆಪ್ಟೆಂ 9, 2014

North Karnataka Chronicle part - 1

Dr Manjunath Chalawadi
It has always been the case with me to keep even some important things to be completed at the eleventh hour. So still not sure whether I will get my insurance renewed. We (me and my colleague, rohith) left our abodes (sweet city of Pondicherry) for the planned one week trip. Fortunately insurance was ready when I wanted, which was one last problem troubling me. We were already two hours late from our scheduled departure. It was around 6.30 pm when we left Pondy to Bangalore. After losing the planned route we struggled with bad roads and pelting rain to reach Bangalore at 3.00 am. After moderate rest Guru, and Kumar joined the entourage heading towards Belgaum, which was the first desination. Bharath joined on the way. We picked up another friend, Bharath, from Davanagere.
The Gang of Harapanahalli (I am the cameraman... so, the special effect!)

ಸೆಪ್ಟೆಂ 2, 2014

ಆರಂಭ – The Last Chance ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ


Audio release
ಆರಂಭ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ
Press Release
ಯುಗಾದಿ ಹಬ್ಬದ ದಿನದಂದು ಜನನಿಬಿಡ ಕೆ.ಜಿ ರಸ್ತೆಯಲ್ಲಿನ ಮುಹೂರ್ತ ಸಮಾರಂಭ ನೆರವೇರಿಸಿದ್ದ, ಜನರನ್ನು ತಲುಪಲು ಹೊಸ ವರುಷದ ಮುನ್ನಾದಿನದಂದು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿದ್ದ ಆರಂಭ – The Last Chance ಚಿತ್ರತಂಡವು ಈಗ ಸಂಪೂರ್ಣ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಿನ ಕೊನೆಯ ಹಂತದಲ್ಲಿದೆ. ಗುರುಕಿರಣ್ ಸಂಗೀತ ಚಿತ್ರಕ್ಕಿದ್ದು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನೂ ವಿಭಿನ್ನವಾಗಿ ಆಯೋಜಿಸಿದೆ ಚಿತ್ರತಂಡ.

ಇದು ಮಂಗಳೂರಿನ ದುರಂತವಲ್ಲದೆ ಬೇರೇನೂ ಅಲ್ಲ.....

hingyake
ಅಬ್ದುಲ್ ಶಮೀರ್
ಮುನೀರ್ ಕಾಟಿಪಳ್ಳ
ಜಾನುವಾರು ಸಾಗಾಟದ ಸಂಧರ್ಭ ಭಜರಂಗದಳದ ಕಾರ್ಯಕರ್ತರಿಂದ ಪೆಟ್ಟುತಿಂದ ಯುವಕ ಅಬ್ದುಲ್ ಶಮೀರ್ ಹತ್ತು ದಿನದ ನಂತರವೂ ಕೋಮಾದಿಂದ ಹೊರಬಂದಿಲ್ಲ. ಮೂರುಮಕ್ಕಳ ತಂದೆಯಾದ ಈ ಬಡಪಾಯಿ ಬದುಕುವ ಸಾಧ್ಯತೆ ಇಲ್ಲ, ಮನೆಗೆ ಕರೆದುಕೊಂಡು ಹೋಗಿ ಅಂತ ವೈದ್ಯರು ಕುಟುಂಬಸ್ಥರೊಂದಿಗೆ ಹೇಳಿಯಾಗಿದೆ.
ಇಷ್ಟಕ್ಕೂ ಈತ ಮಾರ್ಗಮಧ್ಯೆ ನೈತಿಕಪೊಲೀಸ ರಿಂದ ಬಡಿಸಿಕೊಂಡು ಸಾಯುವಂತ ತಪ್ಪೇನು ಮಾಡಿದ್ದಾನೆ ? ಪೊಲೀಸರ ಪ್ರಕಾರ ಇವರ ವಾಹನದಲ್ಲಿ ಇದ್ದದ್ದು ಕದ್ದ ಜಾನುವಾರುಗಳಲ್ಲ,
ಇದು ನಿಯಮ ಮೀರಿ ಸಾಗಾಟದ ಪ್ರಕರಣ ಅಷ್ಟೆ.

ಆಗ 29, 2014

Aarambha Songs

Download all songs in zip click here
Adda.mp3
Hadi Hadi.mp3
Iduvarege iddilla.mp3
Swarga Nisarga.mp3
ಎಸ್ ಅಭಿ ಹನಕೆರೆ ನಿರ್ದೇಶಿಸುತ್ತಿರುವ ಆರಂಭ - The Last Chance ಚಿತ್ರದ ಎಲ್ಲಾ ನಾಲ್ಕೂ ಹಾಡುಗಳು ಇಂದಿನಿಂದ ಉಚಿತವಾಗಿ ಲಭ್ಯ. ಶರ ಪ್ರೊಡಕ್ಷನ್ ಲಾಂಛನದಲ್ಲಿ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸುತ್ತಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್. ಗುರುಕಿರಣ್, ಗೋಟೂರಿ, ವಿ.ಮನೋಹರ್, ಅಭಿ ಹನಕೆರೆ, ಕವಿರಾಜ್ ಬರೆದಿರುವ ಹಾಡುಗಳಿಗೆ ಧ್ವನಿಯಾಗಿರುವುದು ಗುರುಕಿರಣ್, ಮುರುಳಿ ಮೋಹನ್, ಗುರುರಾಜ್ ಹೊಸ್ಕೋಟೆ, ಮಾಲ್ಗುಡಿ ಶುಭ.
"ಇದುವರೆಗೆ ಇದ್ದಿಲ್ಲ........................ಲವ್ ಮೂಡಿತಣ್ಣ" (ಈ ಹಾಡು ಈ ವರ್ಷದ ಹಿಟ್ ಸಾಲಿಗೆ ಸೇರುವುದರಲ್ಲಿ ನನಗಂತೂ ಸಂಶಯವಿಲ್ಲ - ಸಂ)
"ಹಾಡಿ ಹಾಡಿ ರೇಡಿಯೋಗೆ ಬೋರು ಆಗೋದಿಲ್ಲ"

ಮನೆಮುರಿಯೋ ಐಡಿಯಾಗಳು ಎಲ್ಲಿ ಸಿಗುತ್ತೆ ಗೊತ್ತಾ? ಈ ಹಾಡು ಕೇಳಿ

"ಸ್ವರ್ಗ ನಿಸರ್ಗ"
Summary - Aarambha - The Last Chance, Kannada movie audio released. Songs are available for free download. Music by Gurukiran. Produced by D Ganesh V Nagenahalli

ಆಗ 28, 2014

ಅತಿ ಶೀಘ್ರದಲ್ಲಿ ಸಂಗೀತದ "ಆರಂಭ"

aarambha
"ಆರಂಭ"
ಹೊಸಬರ ತಂಡವನ್ನು ಕಟ್ಟಿ ಚಿತ್ರ ನಿರ್ಮಿಸುವುದು ಕಷ್ಟಕರವಾದ ಕೆಲಸ. ಹೊಸತೇನನ್ನಾದರೂ ಕೊಡಲೇಬೇಕೆಂಬ ತುಡಿತದಿಂದ ಬಹುತೇಕ ಹೊಸಬರನ್ನೇ ಸೇರಿಸಿ ರೂಪಿಸಿ "ಆರಂಭ" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಸ್. ಅಭಿ ಹನಕೆರೆ. ಚಿತ್ರ ಶೂಟಿಂಗ್ ಮುಗಿಸಿ ಈಗ ಡಬ್ಬಿಂಗಿನ ಕೊನೆಯ ಹಂತದಲ್ಲಿದೆ. ಚಿತ್ರದ ಹಾಡುಗಳನ್ನು ಶೀಘ್ರದಲ್ಲೇ ಜನರ ಮುಂದಿಡುವುದಾಗಿ ಚಿತ್ರ ತಂಡ ತಿಳಿಸಿದೆ. 
ಹೊಸಬರ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿ ಸಂಗೀತ ನೀಡಿರುವುದು ಹೊಸಬರಿಗೆ ಹೊಸ ಆಲೋಚನೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹಿಸುತ್ತ ಬಂದಿರುವ ಗುರುಕಿರಣ್. ಗುರುಕಿರಣ್, ಅಭಿ ಹನಕೆರೆ, ವಿ.ಮನೋಹರ್, ಗೊಟೂರಿ ಮತ್ತು ಕವಿರಾಜ್ ರಚಿಸಿರುವ ಸಾಹಿತ್ಯಕ್ಕೆ ದನಿ ನೀಡಿರುವವರು ಮುರುಳಿ ಮೋಹನ್, ಗುರುರಾಜ್ ಹೊಸಕೋಟೆ, ಮಾಲ್ಗುಡಿ ಶುಭ ಮತ್ತು ಗುರುಕಿರಣ್.

ಆಗ 27, 2014

ಆದರ್ಶವೇ ಬೆನ್ನು ಹತ್ತಿ .... ಕೊನೆಯ ಕಂತು.



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 37 ಓದಲು ಇಲ್ಲಿ ಕ್ಲಿಕ್ಕಿಸಿ
ಉಳಿದ ಸದಸ್ಯರು ಪೋಲೀಸರು ಅಲ್ಲಿ ಕುಳಿತು ತಮ್ಮ ಪೊಸಿಷನ್ ತೆಗೆದುಕೊಳ್ಳುವಷ್ಟರಲ್ಲಿ ಹೊರಟು ಹೋಗಿದ್ದರು. ಕೈಯಲ್ಲಿಡಿದಿದ್ದ ಟಾರ್ಚಿನ ಬೆಳಕೇ ನಮಗೆ ಶತ್ರುವಾಗಿತ್ತು. ಅವರಿಗೆ ತೀರ ಸಮೀಪಕ್ಕೆ ಬರುವವರೆಗೂ ಸುಮ್ಮನಿದ್ದರು. ಅವರ ಹತ್ತಿರಕ್ಕೆ ಬರುತ್ತಿದ್ದಂತೆ ಪೋಲೀಸರಿಗೆ ಪ್ರೇಮ್ ನ ಹೆಗಲಿನಲ್ಲಿದ್ದ ಎ.ಕೆ.47 ಬಂದೂಕು ಕಾಣಿಸಿತು. “ಫೈರ್” ಪೋಲೀಸನೊಬ್ಬ ಕೂಗಿ ಮುಗಿಸುವಷ್ಟರಲ್ಲಿ ಪೋಲೀಸರು ಹಾರಿಸಿದ ಗುಂಡು ಪ್ರೇಮ್ ನ ಹಣೆ ಹೊಕ್ಕಿತು. ಒಂದು ಸಣ್ಣ ಕಿರುಚಾಟವನ್ನು ಮಾಡಿ ನೆಲಕ್ಕುರುಳಿದರು ಕಾ.ಪ್ರೇಮ್.

ಆಗ 25, 2014

ಇತಿಹಾಸವನ್ನರಸುತ್ತ.....


Saketh Rajan
Making History

ಡಾ. ಅಶೋಕ್. ಕೆ. ಆರ್.
ಇತಿಹಾಸವೆಂದರೆ ಏನು? ಶಾಲೆಯಲ್ಲಿ ಸಮಾಜ ವಿಜ್ಞಾನವೆಂದರೆ ಆಸಕ್ತಿಯೇ ಮೂಡಿಸದ ಪಾಠಗಳ ಸರಮಾಲೆ. ಜಿಯೋಗ್ರಫಿಯಲ್ಲಿ ಮ್ಯಾಪುಗಳನ್ನು ಬರೆಬರೆದು ಅಭ್ಯಸಿಸಿ, ಸಿವಿಕ್ಸಿನಲ್ಲಿ ಅರ್ಥವಾಗದ್ದನ್ನೆಲ್ಲಾ ಉರು ಹೊಡೆದು ಇತಿಹಾಸದ ಪುಸ್ತಕ ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು! ಆ ಇತಿಹಾಸದ ಪುಸ್ತಕದಲ್ಲಾದರೂ ಏನಿರುತ್ತಿತ್ತು? ಒಂದಾದ ಮೇಲೊಂದರಂತೆ ಅಸಂಖ್ಯ ಇಸವಿಗಳು. ಇಂತಿಪ್ಪ ಇಸವಿಯಲ್ಲಿ ಇಂತಿಪ್ಪ ಜಾಗದಲ್ಲಿ ಇಂತೀರ್ವ ರಾಜರು ಕಾದಾಡಿ ಇಂತಿಪ್ಪ ರಾಜ ಗೆದ್ದು ಅಂತಿಪ್ಪ ರಾಜ ಸೋತೋ – ಸತ್ತೋ ಯುದ್ಧ ಮುಗಿಯುವುದೇ ಇತಿಹಾಸ. ಸದ್ಯ ಹತ್ತನೇ ತರಗತಿಗೆ ಆ ಪಠ್ಯದ ಇತಿಹಾಸದಿಂದ ಮುಕ್ತನಾದೆ!