ಅಕ್ಟೋ 30, 2017

ಸುಡುಗಾಡು ಕವಿತೆಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮರಣಪತ್ರವನ್ನೂ ಕೇಳುತ್ತಿಲ್ಲ
ಸುದೀರ್ಘ ಸಂಜೆಗಳ ಉದ್ದುದ್ದ ನೆರಳುಗಳು
ಅಂಗಳದ ತುಂಬಾ ಹರಡಿಕೊಂಡವು
ಎಲ್ಲಿಂದಲೋ ಸುಟ್ಟವಾಸನೆಯ ಘಮಲು
ಮಧುಬಟ್ಟಲಿಗೆ ಕಾತರಿಸುತಿಹ ಕೆಂಡದ ತುಟಿಗಳು

ಅಕ್ಟೋ 13, 2017

ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.


ಡಾ. ಅಶೋಕ್. ಕೆ. ಆರ್

ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಗುಜರಾತಿನಲ್ಲಿದ್ದಾಗ ಮೇಲ್ನೋಟಕ್ಕೆ ಅಪಹಾಸ್ಯವೆನ್ನಿಸುವ, ರಾಹುಲ್ ಗಾಂಧಿಯ ದಡ್ಡತನವನ್ನು ಎತ್ತಿ ತೋರಿಸುವಂತನ್ನಿಸುವ ಘಟನೆಯೊಂದು ಸಂಭವಿಸಿದೆ. ರಾಹುಲ್ ಗಾಂಧಿ ಮಹಿಳೆಯರ ಟಾಯ್ಲೆಟ್ಟಿನೊಳಗೋಗಿಬಿಟ್ಟಿದ್ದರಂತೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಆ ಮಹಿಳೆಯರ ಟಾಯ್ಲೆಟ್ಟಿನಿಂದ ಹೊರಬರುತ್ತಿರುವ ಚಿತ್ರ ಪ್ರಕಟವಾಗಿದೆ. ಆ ಟಾಯ್ಲೆಟ್ಟಿನ ಬಾಗಿಲಿನ ಮೇಲೆ ‘ಮಹಿಳೆಯರಿಗೆ’ ಎಂದು ಬರೆಯಲಾಗಿದೆ. ರಾಹುಲ್ ಗಾಂಧಿ ಯಾಕದನ್ನು ಗಮನಿಸದೇ ಒಳಹೋದರು? ಯಾಕೆ ಒಳಹೋದರೆಂದರೆ ‘ಮಹಿಳೆಯರಿಗೆ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ರಾಹುಲ್ ಗಾಂಧಿಗೆ ಗುಜರಾತಿ ಓದಲು ಬರುವುದಿಲ್ಲ. ಹೀಗಾಗಿ ಟಾಯ್ಲೆಟ್ಟಿನ ಒಳಹೊಕ್ಕು ಪೇಚಿಗೆ ಸಿಲುಕಿ ನಗೆಪಾಟಲಿಗೀಡಾಗಿದ್ದಾರೆ.

ಅಕ್ಟೋ 12, 2017

ಅವತ್ತೊಂದು ದಿನ.....

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ವರುಷಗಳಿಂದ ನಾನು ತಳವೂರಿದ್ದ ಭೂಮಿಯ ಕಿತ್ತುಕೊಂಡು 
ಏಳಿಸಿದ ನಿನ್ನರಮನೆಯ ಎತ್ತರದ ಪಾಗಾರದ ಗೋಡೆಯ ಮೇಲೆ ಚುಚ್ಚಲ್ಪಟ್ಟ ಗಾಜಿನ ಚೂರುಗಳು ಸಾಲದೆಂಬಂತೆ
ಖಡ್ಘಗಳ ಹಿಡಿದ ಕಾವಲು ಭಟರನ್ನಿಟ್ಟು ಕೊಂಡೆ
ಕೂತಾಗನಿಂತಾಗ ನಡೆಯುವಾಗ ಕೊನೆಗೆ
ಮಲಗುವಾಗಲೂ ಇರಲೆಂದು ಹೇಡಿಯಂತೆ
ಅಂಗರಕ್ಷಕರನ್ನಿಟ್ಟುಕೊಂಡು ಭೋಪರಾಕು ಹಾಕಿಸಿಕೊಂಡೆ.

ಅಕ್ಟೋ 11, 2017

ಈ ಸರ್ಕಾರಿ ಹತ್ಯೆಗಳಿಗೆ ಕೊನೆ ಎಂದು?

ಬೆಂಗಳೂರಿನ ಗುಂಡಿಗಳು.
ಚಿತ್ರ: ರವಿಸೂರ್ಯ ಈಶ್ವರ 
ಡಾ. ಅಶೋಕ್. ಕೆ. ಆರ್.
ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತಷ್ಟು ಬಲಿ ಪಡೆದುಕೊಂಡಿವೆ. ಹುಷಾರು ತಪ್ಪಿದ್ದ ಮೊಮ್ಮಗಳನ್ನು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ಸಾಗುತ್ತಿದ್ದ ದಂಪತಿಗಳು ರಸ್ತೆ ಗುಂಡಿಯ ಸಮೀಪ ವಾಹನದ ವೇಗವನ್ನು ಕಡಿಮೆ ಮಾಡಿದ್ದಷ್ಟೇ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ಸೊಂದು ಅವರ ವಾಹನದ ಮೇಲರಿದು ಇಬ್ಬರೂ ದಂಪತಿಗಳನ್ನು ಬಲಿ ತೆಗೆದುಕೊಂಡಿದೆ. ಅದೃಷ್ಟವಶಾತ್ ಮೊಮ್ಮಗಳು ಬದುಕುಳಿದಿದ್ದಾಳೆ. ಈ ಸಾವಿಗೆ ಹೊಣೆ ಯಾರು? ಪೋಲೀಸರ ಡೈರಿಗಳಲ್ಲಿ, ನ್ಯಾಷನಲ್ ಕ್ರೈಮ್ ಬ್ಯೂರೋದ ದಾಖಲೆಗಳಲ್ಲಿ ಬಸ್ಸು ಚಾಲಕನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಶರಾ ಬರೆಯಲಾಗುತ್ತದೆ. ಬಸ್ಸು ಚಾಲಕನ ಕೆಲಸ ಹೋಗುತ್ತದೆ, ವಿಚಾರಣೆಯ ನಂತರ ಆತನಿಗೊಂದಷ್ಟು ಶಿಕ್ಷೆಯೂ ಆಗಬಹುದು. ಅಥವಾ ಸ್ಕೂಟರಿನವರ ಅಜಾಗರೂಕ ಚಾಲನೆಯಿಂದ ಇದಾಯಿತೇ ಹೊರತು ಬಸ್ಸು ಚಾಲಕನ ತಪ್ಪೇನಿರಲಿಲ್ಲ ಎಂದು ಆತನಿಗೆ ಬಿಡುಗಡೆಯೂ ಸಿಕ್ಕಬಹುದು. ಒಟ್ಟಿನಲ್ಲಿ ಇಬ್ಬರಲ್ಲಿ ಒಬ್ಬ ಚಾಲಕನ ಅಜಾಗರೂಕತೆ ಈ ಅಪಘಾತಕ್ಕೆ ಕಾರಣ ಎಂಬ ಅಭಿಪ್ರಾಯದೊಂದಿಗೆ ವಿಚಾರಣೆ ಮುಗಿಯುತ್ತದೆ. ಆದರದು ಪೂರ್ಣ ಸತ್ಯವೇ?

ಅಕ್ಟೋ 6, 2017

ಕವಿತೆಗಳ ಕೊಂದವರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹಗಲಿಡೀ ಧೇನಿಸಿ ಬರೆದ ಕವಿತೆಗಳು
ನೋವಿನಿಂದ ನರಳಿದ ಸದ್ದು ಕೇಳಿ ಎಚ್ಚರವಾಯಿತು
ನಡುರಾತ್ರಿ ಬರೆಯುವ ಮೇಜಿಗೆ ಬಂದು ಬರೆದಷ್ಟೂ ಹಾಳೆಗಳ
ಕತ್ತಲಲೆ ಸ್ಪರ್ಶಿಸಿದೆ