Jun 5, 2015

ಐ.ಎ.ಎಸ್ ಮಾಫಿಯ .... ಭಾಗ 3

ಎಂ.ಎನ್.ವಿಜಯಕುಮಾರ್
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್
ಭ್ರಷ್ಟ ಐ.ಎ.ಎಸ್ ಮಾಫಿಯ ನನ್ನನ್ನು ಗುರಿಯಾಗಿಸಿ, ನನ್ನ ಸಾವನ್ನು ಬಯಸುತ್ತಿದುದ್ಯಾಕೆ? 
ಒಬ್ಬ ಭ್ರಷ್ಟ ಐ.ಎ.ಎಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂಬ ಬೇಡಿಕೆಯಿಟ್ಟಾಗ ಅದರ ಗುರಿ ಇಡೀ ಐ.ಎ.ಎಸ್ ಮಾಫಿಯ ಆಗಿರುತ್ತದೆ. ತನ್ನ ಗುಂಪಿನ ಸದಸ್ಯನೊಬ್ಬ ಚಟುವಟಿಕೆಗಳ ಬಗ್ಗೆ ಬಾಯಿ ಬಿಡುವುದು ಮಾಫಿಯಾಗೆ ಒಪ್ಪಿತವಲ್ಲ. ಮಾಫಿಯಾದ ಸದಸ್ಯನೊಬ್ಬನ ಭ್ರಷ್ಟಾಚಾರವನ್ನು ಯಾರಾದರೂ ಬಯಲಿಗೆಳೆದರೆ ಅಂಥವರ ಜೀವನವನ್ನು ಮಾಫಿಯ ಕಷ್ಟಕರವಾಗಿಸುತ್ತದೆ, ಅಷ್ಟೇ ಅಲ್ಲ ಯಾವ ಮಟ್ಟದ ತೊಂದರೆಯನ್ನು ನೀಡಲೂ ತಯಾರಾಗಿಬಿಡುತ್ತದೆ; ಒಮ್ಮೊಮ್ಮೆ ಜೀವವನ್ನೇ ತೆಗೆದುಬಿಡುತ್ತದೆ. 
ನನ್ನ ಮೇಲೆ ನಡೆದ ಹಲ್ಲೆಗಳ ವಿರುದ್ಧ ಕೊಟ್ಟ ದೂರುಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಯಿತು. ಕೆಲವೊಂದು ವಿವರಗಳು ಈ ಕೆಳಗಿನ ಕೊಂಡಿಗಳಲ್ಲಿದೆ: 

http://depenq.com/PRESSRELEASE/MAFIAS.pdf 
http://depenq.com/PRESSRELEASE/MONNAPPA/SENGUPTA122JAN07.pdf 
http://depenq.com/PRESSRELEASE/MONNAPPA/SENGUPTA15may07.pdf 
http://depenq.com/PRESSRELEASE/SENGUPTA19JUn07.pdf 
http://depenq.com/PRESSRELEASE/MONNAPPA/SENGUPTA28SEP07.pdf 
http://depenq.com/PRESSRELEASE/MONNAPPA/SENGUPTA19DECEMBER07.pdf 
http://depenq.com/PRESSRELEASE/MONNAPPA/SENGUPTA4FEB08.pdf 
http://depenq.com/PRESSRELEASE/MONNAPPA/SENGUPTA5FEB11.pdf 
http://depenq.com/PRESSRELEASE/MNVtoPRESIDENT6MAR12.pdf 

ಸರಕಾರದ ಭ್ರಷ್ಟತೆ ವಿರುದ್ಧ ನಡೆಸಿದ ಹೋರಾಟದ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲು 2009ರಲ್ಲಿ ಸರಕಾರದಿಂದ ಅನುಮತಿ ದೊರೆಯಿತು. 

2007ರಲ್ಲಿ ಪಿ.ಬಿ.ಮಹಿಷಿಯವರ ವಿರುದ್ಧ ಲೋಕಾಯುಕ್ತರಲ್ಲಿ ದೂರು ನೀಡಿದ್ದೆ. ತಿರುಗೇಟು ನೀಡುವವರಂತೆ ನನಗೆ ನೋಟೀಸಿನ ಮೇಲೆ ನೋಟೀಸು ನೀಡಲಾಯಿತು, ಬೆಳಗಾವಿಗೆ ಹೋಗುವಂತೆ ಒತ್ತಾಯಿಸಲಾಯಿತು. ನನ್ನ ಯಾವ ವಿವರಣೆಯನ್ನೂ ಅವರು ಒಪ್ಪಲಿಲ್ಲ. ಡಿಸೆಂಬರ್ 2007ರ ಐದನೇ ತಾರೀಖಿನಂದು, ರಾಷ್ಟ್ರಪತಿ ಆಡಳಿತದಲ್ಲಿದ್ದ ಕರ್ನಾಟಕದ ರಾಜ್ಯಪಾಲರಿಗೆ ಸಲಹೆಗಾರರಾಗಿದ್ದ ಎಸ್. ಕೃಷ್ಣ ಕುಮಾರ್ ಈ ರೀತಿ ಬರೆದರು: 

"ಕ್ರಮ ತೆಗೆದುಕೊಳ್ಳುವುದು (ವಿಜಯಕುಮಾರರ ವಿರುದ್ಧ) ಸರಿಯಾದ ಮಾರ್ಗವೆಂದು ನನಗನ್ನಿಸುವುದಿಲ್ಲ. ವಿವರಗಳು ಜಾಳುಜಾಳಾಗಿದ್ದು ಇಂಥದ್ದೇ ಒಂದು ತೀರ್ಪಿಗೆ ಬಂದು ಕ್ರಮ ತೆಗೆದುಕೊಳ್ಳುವುದು ಕಷ್ಟ. ಅಧಿಕಾರಿಯನ್ನು ವರ್ಗ ಮಾಡುವುದೇ ಉತ್ತಮ ಕ್ರಮ ಮತ್ತವರಿಗೆ ಇನ್ನೂ ಸೂಕ್ತವಾದ ಕೆಲಸ ನೀಡಬೇಕು. "

ಮಾಫಿಯಾದ ಅರ್ಥಕ್ಕನುಗುಣವಾಗಿ, ಭ್ರಷ್ಟ ಅಧಿಕಾರಿಗಳು ಕಾನೂನಿನ ಹಿರಿಯ ಅಧಿಕಾರಿಯ ನಿರ್ಧಾರವನ್ನು ಮೂಲೆಗುಂಪು ಮಾಡಿದರು. ಪಿ.ಬಿ.ಮಹಿಷಿಯವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಅವರೇ ನ್ಯಾಯಾಧೀಶನ ಸ್ಥಾನದಲ್ಲಿದ್ದ ಕೇಸಿನಲ್ಲಿ ಅವರೇ ಸಾಕ್ಷಿದಾರರಾಗಿಬಿಟ್ಟರು! ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲು ನಿರ್ಧರಿಸಿರುವವರು ಮಾತ್ರ ನನ್ನ ಮೇಲೆ ಕೇಸು ಹಾಕಲು ಸಾಧ್ಯ ಎಂದು ಖಡಾಖಂಡಿತವಾಗಿ ತಿಳಿಸಿದೆ. ಈ ಮಧ್ಯೆ ನನ್ನ ಪತ್ನಿಯಿಂದ ಪಿ.ಬಿ.ಮಹಿಷಿಯವರ ಭ್ರಷ್ಟ ಚಟುವಟಿಕೆಗಳು ಸಾರ್ವಜನಿಕವಾಗಿದ್ದವು. ಮಹಿಷಿಯವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯಲಾಯಿತು. ಮಹಿಷಿಯವರ ವಿಚಾರಣೆಯನ್ನಾಧರಿಸಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕಾರ್ಯಸಾಧುವಲ್ಲ ಎಂದು ನಂತರ ಮುಖ್ಯ ಕಾರ್ಯದರ್ಶಿಯಾದ ಸುಧಾಕರ್ ರಾವ್ ರವರಿಗೆ ತಿಳಿದಿತ್ತು. ಡಿ.ಪಿ.ಎ.ಆರ್ ನಲ್ಲಿದ್ದ ಪಿ.ಬಿ.ಮಹಿಷಿಯವರಿಗೆ ವಿಧೇಯರಾಗಿದ್ದ ಅಧಿಕಾರಿಗಳು ನನ್ನ ವಿರುದ್ಧ ವಿಚಾರಣೆ ನಡೆಸಬಲ್ಲ ಅಧಿಕಾರಿಯ ಹುಡುಕಾಟದಲ್ಲಿದ್ದರು; ಒಬ್ಬರೂ ಸಿಗಲಿಲ್ಲ. ಅಹಮದಾಬಾದಿನ ಐ.ಐ.ಎಮ್ ನಲ್ಲಿ ‘ಆಡಳಿತದಲ್ಲಿ ಸೀಟಿಯೂದುಗರ ಪಾತ್ರದ’ ಬಗ್ಗೆ ದೇಶದ ವಿವಿದೆಡೆಯಿಂದ ಬಂದಿದ್ದ ನೂರಕ್ಕೂ ಹೆಚ್ಚು ಐ.ಎ.ಎಸ್ ಅಧಿಕಾರಿಗಳಿಗೆ ವಿವರ ನೀಡಿದೆ. ಆಗ ಅನೇಕರು ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟವನ್ನು ಪುಸ್ತಕರೂಪದಲ್ಲಿ ತರುವಂತೆ ಒತ್ತಾಯಿಸಿದರು. ಸರಕಾರಕ್ಕೆ ಅನುಮತಿಗಾಗಿ ಕೇಳಿಕೊಂಡಾಗ, ಸುಧಾಕರ್ ರಾವ್ ಪುಸ್ತಕ ಬರೆಯಲು ಅನುಮತಿ ನೀಡಿದರು. 

http://depenq.com/PRESSRELEASE/bookpermission17mar09.pdf 

ಭ್ರಷ್ಟ ಐ.ಎ.ಎಸ್ ಮಾಫಿಯಾದ ಭಾಗವಾದವರಿಗಿರುವ ಲಾಭಗಳು. 

1. ಸಾರ್ವಜನಿಕ ಆಸ್ತಿ ಮತ್ತು ಹಣವನ್ನು ಲೂಟಿ ಮಾಡುವವರಿಗೆ ಎಲ್ಲಾ ಹಂತದಲ್ಲೂ ರಕ್ಷಣೆ. 

2. ಇತರೆ ರಾಜ್ಯಗಳಲ್ಲಿ ಪ್ರಾಮಾಣಿಕತೆಯ ಮುಖವಾಡ ಧರಿಸಿರುವ ಅಧಿಕಾರಿಗಳು ನಿಮ್ಮ ಪರವಾಗಿ ಲಂಚವನ್ನು ಸ್ವೀಕರಿಸುತ್ತಾರೆ. ನೀವೂ ಕೂಡ ಪ್ರಾಮಾಣಿಕತೆಯ ಸೋಗು ಧರಿಸಿ ಅವರ ಪರವಾಗಿ ಲಂಚ ಸ್ವೀಕರಿಸಬಹುದು. 

3. ಇತರೆ ರಾಜ್ಯದ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಲು ನಿಮಗೆ ಸಹಕರಿಸುತ್ತಾರೆ. 

4. ಐ.ಎ.ಎಸ್ ಅಧಿಕಾರಿಯೊಬ್ಬರ ಭ್ರಷ್ಟತೆ ಹೊರಬಿದ್ದಾಗ, ಐ.ಎ.ಎಸ್ ಅಧಿಕಾರಿಗಳ ಸಂಘವು ಸಾಧ್ಯವಾದ ಎಲ್ಲಾ ರೀತಿಯಲ್ಲೂ ಭ್ರಷ್ಟರಿಗೆ ಸಹಕಾರ ನೀಡುತ್ತದೆ. ಭ್ರಷ್ಟರ ಪರವಾಗಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತದೆ. ಅದೇ ಒಬ್ಬ ಪ್ರಾಮಾಣಿಕ ಅಧಿಕಾರಿ ಸತ್ಯವನ್ನು ಜನರ ಮುಂದಿಡಲು ತಾನೇ ಮಾಧ್ಯಮದ ಮುಂದೆ ಬರಬೇಕು. 

5. ಪ್ರಾಮಾಣಿಕ ಅಧಿಕಾರಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆದಾಗ ಅಥವಾ ಹತ್ಯೆಯೇ ನಡೆದಾಗಲೂ ಕೂಡ ಐ.ಎ.ಎಸ್ ಅಧಿಕಾರಿಗಳ ಸಂಘ ಅಂಥ ಘಟನೆಗಳನ್ನು ಖಂಡಿಸುವ ನಿರ್ಣಯ ತೆಗೆದುಕೊಳ್ಳುವುದಿಲ್ಲ. 

ನಮ್ಮನ್ನು ಪ್ರಶ್ನಿಸದೆ ನಮ್ಮ ಜೊತೆ ಹೆಜ್ಜೆ ಹಾಕಲು ಒಪ್ಪಿದರೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತೇವೆ! 

ಭಾರತದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮತ್ತನೇಕ ಪ್ರಮುಖರ ಹೆಸರುಗಳನ್ನು ಉಪಯೋಗಿಸಿ ಹಣವನ್ನು ದರೋಡೆ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಒಂದು ಪತ್ರಿಕಾ ಹೇಳಿಕೆಯಿದು 

http://depenq.com/PRESSRELEASE/MENTOR.pdf 

ಮಾಫಿಯ ದುರುಪಯೋಗಪಡಿಸಿಕೊಂಡ ಕೆಲವು ಹೆಸರುಗಳನ್ನು ಕೆಳಗೆ ನೀಡುತ್ತಿದ್ದೇನೆ 

ಕನಕಸೇನ್ ದೇಕ, ಸುನಿಲ್ ಭಾರತಿ ಮಿಟ್ಟಲ್, ಡಾ.ಎಂ.ವೀರಪ್ಪ ಮೊಯ್ಲಿ, ಭ್ರಜೇಶ್ ಮಿಶ್ರಾ, ಡಾ.ಸಿ.ರಂಗರಾಜನ್, ಮೇಧಾ ಪಾಟ್ಕರ್, ಪಿ.ಟಿ.ಉಷಾ, ಡಾ.ಪವನ್.ಕೆ.ಚಾಮ್ಲಿಂಗ್, ಪು ಲಾಲ್ ಥಾನ್ಹವಾಲ, ಕಿರೇಣ್ ರಿಜಿಜು, ಸುಂದರ್ ಲಾಲ್ ಬಹುಗುಣ, ಯಶೆ ದೋರ್ಜೆ ಥಾಂಗ್ ಚಿ, ಒಮರ್ ಅಬ್ದುಲ್ಲ, ಡಾ.ಕಿರಣ್ ಬೇಡಿ, ಜಸ್ಟೀಸ್ ಜೆ.ಎಸ್.ವರ್ಮ, ನಿತೀಶ್ ಕುಮಾರ್, ಎಂ.ಎನ್. ವಿಜಯಕುಮಾರ್, ಅಸಾಉದ್ದಿನ್ ಒವೈಸಿ, ರಾಹುಲ್ ಗಾಂಧಿ, ಮಣಿಪುರದ ಮಹಿಳೆಯರು, ಡಾ.ಪಿ.ಕೆ.ಅಯ್ಯಂಗಾರ್, ಡಾ.ಜಿ.ಮಾಧವನ್ ನಾಯರ್, ಪ್ರೊ. ಆಂಡ್ರೆ ಬೆಟೈಲಿ, ಜಿ.ಜೆ.ಜೆ.ಸಿಂಗ್, ಎನ್.ಆರ್.ನಾರಾಯಣ ಮೂರ್ತಿ.

No comments:

Post a Comment