Aug 8, 2013

ಇದ್ದರು ಮಹಾನುಬಾವುಲು .....

ಗುಜರಾತಿನ ಜನ ಅಪೌಷ್ಟಿಕತೆಯಿಂದ ನರಳುತ್ತಿಲ್ಲ ಅವರು "diet conscious" ಆಗಿದ್ದಾರೆ ಆಷ್ಟೇ  - ನರೇಂದ್ರ ಮೋದಿ . 
ಬಡತನ ಎಂಬುದು ಒಂದು ಮಾನಸಿಕ ಸ್ಥಿತಿ ಅಷ್ಟೇ - ರಾಹುಲ್ ಗಾಂಧಿ .


ಮೊದಲ ಮಹಾನುಭಾವನ ಹೇಳಿಕೆಯನ್ನು ಖಂಡಿಸಿದರೆ ನೀವು ಬುದ್ಧಿವಿಹೀನರಾಗಿದ್ದರೂ ಅಪ್ಪಟ ಕಂದಾಚಾರಿಯಾಗಿದ್ದರೂ ನಿಮಗೆ ಬುದ್ಧಿಜೀವಿ - ಪ್ರಗತಿಪರ ಎಂಬ ಪಟ್ಟವನ್ನು ನಮೋ ಭಕ್ತರು ನಿಮಗೆ ದಯಪಾಲಿಸುತ್ತಾರೆ!

ಇನ್ನು ಎರಡನೇ ಮಹಾನುಭಾವನ ಹೇಳಿಕೆಯನ್ನು ಖಂಡಿಸಿದರೆ ನಿಮ್ಮಲ್ಲಿ ಕೋಮಿನ ನಂಜಿರದಿದ್ದಾಗ್ಯೂ ನಿಮ್ಮನ್ನು ಕೋಮುವಾದಿ ಎಂದು ಜರೆದುಬಿಡುತ್ತಾರೆ!

ಭಾರತದಲ್ಲಿ ಇವರಿಬ್ಬರನ್ನೂ ಬಿಟ್ಟರೆ ಬೇರೆಯಾರೂ ಪ್ರಧಾನಿ ಹುದ್ದೆಗೆ ಅರ್ಹರಾಗಿರುವ ವ್ಯಕ್ತಿ ಇಲ್ಲವೇ? ಇವರಿಬ್ಬರಲ್ಲಿ ಒಬ್ಬರನ್ನು ವಿರೋಧಿಸಿ ಮಾತನಾಡಿದರೂ ಇನ್ನೊಂದು ಗುಂಪಿನ ಬೆಂಬಲಿಗನಾಗಿ ಮಾಡಿಬಿಡುವ ಈ ಅಪಾಯಕಾರಿ ಸನ್ನಿವೇಶದಲ್ಲಿ ಈರ್ವರ ಬೆಂಬಲಿಗರ ಮಾತಿನ ವ್ಯಂಗ್ಯದ ಅಪಹಾಸ್ಯದ ಚುಚ್ಚುಮಾತಿನ ದಾಳಿಯಿಂದ ಸಾಮಾಜಿಕ ಮಾನಸಿಕ ಸ್ವಸ್ಥತೆಯನ್ನು ಉಳಿಸಿಕೊಳ್ಳಲೇ ಹೆಣಗಬೇಕಾದ ಪರಿಸ್ಥಿತಿ!

cartoon - satish acharya
cartoon source - cartoonistsatish

No comments:

Post a Comment