ಜುಲೈ 26, 2018

ಶಿಷ್ಟಾಚಾರದ ರಾಜಕಾರಣವನ್ನು ಮೀರಿದ ಒಂದು ಅಪ್ಪುಗೆ!

ಕು.ಸ.ಮಧುಸೂದನರಂಗೇನಹಳ್ಳಿ
ಬಹುಶ: ಅದೊಂದು ಸಣ್ಣ ತಪ್ಪನ್ನು ರಾಹುಲರು ಮಾಡದೇ ಹೋಗಿದ್ದರೆ ಮೊನ್ನೆಯ ವಿಸ್ವಾಸ ಮತ ಯಾಚನೆಯ ದಿನದಂದು ರಾಹುಲ್ ಗಾಂದಿಯವರು ನಡೆದುಕೊಂಡ ರೀತಿ ಮತ್ತು ಮಾಡಿದ ಬಾಷಣ ಬಹುಕಾಲ ಇಂಡಿಯಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಿತ್ತು.

ವಿಶ್ವಾಸಮತದ ಪರವಾಗಿ ಸುದೀರ್ಘವಾಗಿ ವಸ್ತುನಿಷ್ಠವಾಗಿ(ಬಹುಶ: ಪ್ರಾನ್ಸ್ ಸರಕಾರದ ಹೇಳಿಕೆಯ ಉಲ್ಲೇಖವೊಂದನ್ನು ಹೊರತು ಪಡಿಸಿ) ಯಾವ ಹಿಂಜರಿಕೆಯೂ ಇರದಂತೆ ಮಾತಾಡಿದ ರಾಹುಲರ ಸರಕಾರದ ವಿರುದ್ದದ ಟೀಕೆಗಳಿಗೆ ಅಷ್ಟೇ ವಸ್ತುನಿಷ್ಠವಾಗಿ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಅದರೆ ತಮ್ಮ ಮಾತು ಮುಗಿಸಿದಾಕ್ಷಣ ಅವರು ನೇರವಾಗಿ ಪ್ರದಾನ ಮಂತ್ರಿಗಳ ಆಸನದ ಬಳಿ ಹೋಗಿ ಪ್ರದಾನಿಯವರನ್ನು ಅಪ್ಪಿಕೊಂಡಿದ್ದು ಸದನವನ್ನಿರಲಿ ಸ್ವತ: ಪ್ರದಾನಿಯವರಿಗೆ ವಿಸ್ಮಯವನ್ನುಂಟು ಮಾಡಿದ್ದು ನಿಜ. ಅಲ್ಲಿಯವರೆಗು ಎಲ್ಲವೂ ಚೆನ್ನಾಗಿಯೇ ಇತ್ತು. ಅದರೆ ಪ್ರದಾನಿಯವರ ಅಪ್ಪುಗೆಯ ನಂತರ ತಮ್ಮ ಸ್ಥಾನಕ್ಕೆ ಮರಳಿದ ರಾಹುಲ್ ಕ್ಯಾಮೆರಾಗಳಿವೆಯೆಂಬುದನ್ನು ಮರೆತವರಂತೆ ತಮ್ಮ ಗೆಳೆಯ ಸಹ ಸಂಸದನತ್ತ ತಿರುಗಿ ಎಡಗಣ್ಣು ಮಿಟುಕಿಸಿದ್ದು ಅಲ್ಲಿಯವರೆಗಿನ ರಾಹುಲರ ವರ್ತನೆಯ ಗಾಂಭೀರ್ಯತೆಯನ್ನು ಮರೆಸಿಬಿಟ್ಟಿತು. ಅವರು ಸಹಜವಾಗಿಯೇ ಕಣ್ಣು ಮಿಟುಕಿಸಿದ್ದರೂ ನೇರ ಪ್ರಸಾರ ನೋಡುತ್ತಿದ್ದ ಜನರಿಗೆ ರಾಹುಲ್ ಪ್ರದಾನಿಯವರನ್ನು ತಬ್ಬಿಕೊಂಡಿದ್ದೇ ಒಂದು ನಾಟಕವೇನೊ ಎನ್ನುವಂತಹ ತಪ್ಪು ಸಂದೇಶ ನೀಡಿಬಿಟ್ಟಿತು. ಮೊದಲೇ ರಾಹುಲರನ್ನು ಸಮಯ ಬಂದಾಗಲೆಲ್ಲ ನೆಗೆಟಿವ್ ಶೇಡ್ ನಲ್ಲಿಯೇ ತೋರಿಸುವ ಪಟ್ಟಭದ್ರ ವಿದ್ಯುನ್ಮಾನ ಮಾಧ್ಯಮಗಳು ಸಹ ಅದನ್ನೆ ಹೈಲೈಟ್ ಮಾಡುತ್ತ ರಾಹುಲರ ಗಂಬೀರವಾದ ಬಾಷಣ ಮತ್ತು ಅಪ್ಪುಗೆಯ ಹಿಂದಿದ್ದ ಮಹತ್ವವನ್ನು ಮತ್ತು ನೈಜತೆಯನ್ನು ಮರೆಮಾಚಿ ಬಿಟ್ಟವು.

ಜುಲೈ 25, 2018

ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ!

ಡಾ. ಅಶೋಕ್. ಕೆ. ಆರ್. 
ಕ್ಯಾಮೆರಾ ಖರೀದಿಸುವ ಯೋಚನೆ ನಿಮ್ಮಲ್ಲಿದ್ದರೆ ಸ್ವಲ್ಪ ದಿನದ ಮಟ್ಟಿಗೆ ಖರೀದಿಯನ್ನು ಮುಂದೂಡಿ. ಹವ್ಯಾಸಿ ಫೋಟೋಗ್ರಾಫರುಗಳಿಗೆಂದೇ ವಿಶೇಷವಾದ ಕ್ಯಾಮೆರಾವೊಂದು ಇನ್ನೇನು ಮಾರುಕಟ್ಟೆಯಲ್ಲಿ ಲಭಿಸಲಿದೆ. ನಿಸರ್ಗದ ಚಿತ್ರಗಳಿಂದ ಹಿಡಿದು ದೂರದ ಚಂದ್ರನ ಮೇಲಿನ ಕುಳಿಗಳನ್ನೂ ಸುಸ್ಪಷ್ಟವಾಗಿ ಚಿತ್ರೀಕರಿಸಲು ಸಹಾಯ ಮಾಡುವ ಕ್ಯಾಮೆರಾವೊಂದನ್ನು ನಿಕಾನ್ ಪರಿಚಯಿಸಿದೆ. ಅದುವೇ ನಿಕಾನ್ ಪಿ 1000. ಸೂಪರ್ ಜೂಮ್ ಕ್ಯಾಮೆರಾಗಳಲ್ಲಿ ಹೊಸತೊಂದು ವರ್ಗವನ್ನೇ ಈ ಕ್ಯಾಮೆರಾ ಸೃಷ್ಟಿಸಲಿದೆ.

ಸೂಪರ್ ಜೂಮ್ ಕ್ಯಾಮೆರಾಗಳೆಂದರೆ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾಗಳಷ್ಟೇ. ಡಿ.ಎಸ್.ಎಲ್.ಆರ್ ಗಳಲ್ಲಿರುವಂತೆ ಇದರಲ್ಲಿ ಲೆನ್ಸ್ ಬದಲಿಸುವ ಅವಶ್ಯಕತೆಯಿರುವುದಿಲ್ಲ. ಡಿ.ಎಸ್.ಎಲ್.ಆರ್ ಗಳಷ್ಟು ಸ್ಪಷ್ಟ ಚಿತ್ರಗಳು ಇದರಲ್ಲಿ ಮೂಡುವುದಿಲ್ಲವಾದರೂ ನಿಮ್ಮೊಳಗಿನ ಕ್ಯಾಮೆರಾಮೆನ್ ಉತ್ತಮನಾಗಿದ್ದರೆ, ಕೋನಗಳನ್ನು ನಿಮ್ಮದೇ ಶೈಲಿಯಲ್ಲಿ ಕಲೆ ನಿಮಗೆ ಕರಗತವಾಗಿದ್ದರೆ ಅಥವಾ ಅಪರೂಪಕ್ಕೆ ಚಿತ್ರ ತೆಗೆಯುವ ಹವ್ಯಾಸಿ ನೀವಾಗಿದ್ದರೆ ದುಬಾರಿ ಬೆಲೆಯ ಪದೇ ಪದೇ ಲೆನ್ಸುಗಳ ಖರೀದಿಗೆ ಹಣ ಬೇಡುವ ಡಿ.ಎಸ್.ಎಲ್.ಆರ್ ಗಿಂತ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾಗಳು ಉತ್ತಮ. 

ಜುಲೈ 23, 2018

ನಿನಗೇಕಿಂದು ನನ್ನ ನೆನಪಾಗುವುದಿಲ್ಲ??

ಪದ್ಮಜಾ ಜೋಯಿಸ್ 
ನಿನಗೇಕಿಂದು ನನ್ನ 
ನೆನಪಾಗುವುದಿಲ್ಲ,??

ಅದೊಂದು ಕಾಲದಲ್ಲಿ
ಸುಳಿಯುವ ಕೋಲ್ಮಿಂಚಿಗೆ
ದಡಬಡಿಸುವ ಗುಡುಗಿಗೆ 
ಸಿಡಿದ ಸಿಡಿಲಿನಾರ್ಭಟದಿಂದ
ಬೆಚ್ಚಿದೆಯಾ ಬೆದರಿದೆಯಾ
ಎಂದು ಮರಮರಳಿ ಸಾಂತ್ವನಿಸುತ್ತಿದ್ದ
ನಿನ್ನ ದನಿ ಇಂದೇಕೆ ಮೌನವಾಗಿದೆ ??

ಜುಲೈ 22, 2018

ಪಕ್ಷಿ ಪ್ರಪಂಚ: ನವಿಲು.

ಚಿತ್ರ ೧: ಗಂಡು ನವಿಲು
ಡಾ. ಅಶೋಕ್. ಕೆ. ಆರ್. 
ಭಾರತದ ರಾಷ್ಟ್ರಪಕ್ಷಿಯಾದ ನವಿಲೆಂದರೆ ಯಾರಿಗೆ ಇಷ್ಟವಿಲ್ಲ! ಅದರಲ್ಲೂ ರೆಕ್ಕೆ ಬಿಚ್ಚಿ ಕುಣಿಯುವ ಗಂಡು ನವಿಲೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಆಂಗ್ಲ ಹೆಸರು: Indian Peacock (ಇಂಡಿಯನ್ ಪಿಕಾಕ್), Peahen (ಪಿಹೆನ್) 

ವೈಜ್ಞಾನಿಕ ಹೆಸರು: Pavo Cristatus (ಪಾವೋ ಕ್ರಿಸ್ಟೇಟಸ್)

ನವಿಲನ್ನು ಗುರುತುಹಿಡಿಯದವರು ಇಲ್ಲವೇ ಇಲ್ಲ ಅಲ್ಲವೇ! ಉದ್ದ ಪುಕ್ಕಗಳ ಬಾಲವನ್ನೊಂದಿರುವ ಗಂಡು ನವಿಲು ಆಕರ್ಷಣೀಯ. ಒರಟೊರಟಾದ ಧೃಡವಾದ ಕಾಲುಗಳು, ನೀಳವಾದ ಉದ್ದನೆಯ ನೀಲಿ ಬಣ್ಣದ ಕತ್ತು, ಕುಸುರಿ ಮಾಡಿದಂತಿರುವ ನೀಲಿ ಕಿರೀಟದ ಗುಚ್ಛ, ಕಣ್ಣಿನ ಮೇಲೆ ಕೆಳಗೆ ಬಿಳಿ ಪಟ್ಟಿಯಿದ್ದರೆ, ಕಣ್ಣಿನ ಸುತ್ತಲೂ ನೀಲಿ ಪಟ್ಟಿ. ಎದೆಯ ಭಾಗದಲ್ಲಿ ನೀಲಿ - ಹಸಿರು - ಕಂದು ಬಣ್ಣಗಳನ್ನು ಕಾಣಬಹುದು. ರೆಕ್ಕೆಯಲ್ಲಿ ಕಪ್ಪು ಬಿಳಿ ಬಣ್ಣಗಳ ಪಟ್ಟಿಗಳಿವೆ. ದೇಹಕ್ಕೆ ಬಾಲವಂಟಿರುವ ಜಾಗದಲ್ಲಿ ಹೊಳೆಯುವ ಹಸಿರು ಹೊಂಬಣ್ಣವಿದೆ. ಹೆಣ್ಣನ್ನಾಕರ್ಷಿಸುವ ಸಲುವಾಗಿ ಪುಕ್ಕ ಬಿಚ್ಚಿ ನರ್ತಿಸುತ್ತವೆ ಗಂಡು ನವಿಲುಗಳು. ಆಳೆತ್ತರದ ಈ ಪುಕ್ಕಗಳಲ್ಲಿ ಕಣ್ಣುಗಳಂತೆ ಕಾಣಿಸುವ ವರ್ಣ ಸಂಯೋಜನೆಯಿದೆ. ಗಾಢ ನೀಲಿ, ಆಕಾಶ ನೀಲಿ, ಬೂದು - ಕಂದು, ಹಸಿರು ಬಣ್ಣಗಳು ನಿರ್ದಿಷ್ಟ ಪ್ರಮಾಣದಲ್ಲಿದ್ದು ಕಣ್ಣಿನ ರೂಪ ನೀಡುತ್ತವೆ. ಈ ಕಣ್ಣುಗಳು ಕಣ್ಣೀರು ಹಾಕುವುದಿಲ್ಲ! 

ಜುಲೈ 19, 2018

ವರ್ಷಾಂತ್ಯದ ಮೂರು ರಾಜ್ಯಗಳ ಚುನಾವಣೆಗಳ ಮಹತ್ವ.

ಕು.ಸ.ಮಧುಸೂದನ ರಂಗೇನಹಳ್ಳಿ 
2019ರ ಲೋಕಸಭಾ ಚುನಾವಣೆಗಳಿಗೂ ಮೊದಲೇ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೂರು ರಾಜ್ಯಗಳ ವಿದಾನಸಭಾ ಚುನಾವಣೆಗಳಿಗೆ ಈ ಬಾರಿ ವಿಶೇಷವಾದ ರಾಷ್ಟ್ರೀಯ ಮಹತ್ವವೊಂದು ಬಂದು ಬಿಟ್ಟಿದೆ. ಮದ್ಯಪ್ರದೇಶ, ರಾಜಾಸ್ಥಾನ್ ಮತ್ತು ಮಿಜೋರಾಂ ರಾಜ್ಯಗಳಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳು 2019ರ ಲೋಕಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಬಹುದೆಂಬುದು ಬಹುತೇಕ ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ. 

ಇವುಗಳಲ್ಲಿ ಕೇವಲ ನಲವತ್ತು ಸ್ಥಾನಗಳನ್ನು ಹೊಂದಿರುವ ಈಶಾನ್ಯರಾಜ್ಯ ಮಿಜೋರಾಂ ಬಿಟ್ಟರೆ ಉಳಿದೆರಡು ರಾಜ್ಯಗಳಾದ ಮಧ್ಯಪ್ರದೇಶ(230ಸ್ಥಾನ) ರಾಜಾಸ್ಥಾನ(200ಸ್ಥಾನ)ಗಳಲ್ಲಿ ಬಾಜಪ ಅಧಿಕಾರದಲ್ಲಿದ್ದು 2019ರ ಲೋಕಸಭಾ ಚುನಾವಣೆಗಳಲ್ಲಿ ಸುಮಾರು 54 ಸಂಸತ್ ಸದಸ್ಯರನ್ನು ಆರಿಸಿ ಕಳಿಸಿಕೊಡಲಿವೆ. 2014ರ ಚುನಾವಣೆಯಲ್ಲಿ ರಾಜಾಸ್ಥಾನದ 24 ಸ್ಥಾನಗಳಲ್ಲಿ ಬಾಜಪ 20 ಸ್ಥಾನಗಳನ್ನು ಗೆದ್ದಿದ್ದರೆ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ ಬಾಜಪ 26 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಬಾಜಪ ಬಹುಮತ ಪಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದವು. ಹಾಗೆ ನೋಡಿದರೆ. 2013ರಲ್ಲಿ ಈ ರಾಜ್ಯಗಳಲ್ಲಿ ನಡೆದ ವಿದಾನಸಭೆಯ ಚುನಾವಣೆಗಳು 2014ರ ಸಾರ್ವತ್ರಿಕ ಚುನಾವಣೆಗಳಿಗೆ ಬಾಜಪಕ್ಕೆ ಪೂರ್ವಸಿದ್ದತೆಯ ಚುನಾವಣೆಗಳಾಗಿದ್ದು, ಶ್ರೀ ನರೇಂದ್ರ ಮೋದಿಯವರ ಜನಪ್ರಿಯತೆಯ ಮೊದಲ ರಿಹರ್ಸಲ್ ಆಗಿತ್ತೆನ್ನಬಹುದು.ಅವತ್ತು ಆ ಎರಡೂ ರಾಜ್ಯಗಳಲ್ಲಿ ಪಡೆದ ಬಾರಿ ಬಹುಮತದ ಆತ್ಮವಿಶ್ವಾಸವೇ ನಂತರದಲ್ಲಿ ಬಾಜಪ ರಾಷ್ಟ್ರದಾದ್ಯಂತ ಬಿರುಸಿನ ಆಕ್ರಮಣಕಾರಿ ಚುನಾವಣಾ ಪ್ರಚಾರ ಕೈಗೊಳ್ಳಲು ಸ್ಪೂರ್ತಿದಾಯಕವಾಗಿತ್ತು. 

ಇದೀಗ ಬಾಜಪ ಈ ಎರಡೂ ರಾಜ್ಯಗಳಲ್ಲಿ ಹೆಚ್ಚುಕಡಿಮೆ ಐದು ವರ್ಷಗಳ ಕಾಲ ನಿರಾತಂಕವಾಗಿ ತನ್ನ ಆಳ್ಬಿಕೆ ನಡೆಸಿದೆ. ಇವತ್ತು ಬಾಜಪ ಮತ್ತು ಕಾಂಗ್ರೆಸ್ ಎಂಬ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಈ ರಾಜ್ಯಗಳ ಚುನಾವಣೆಗಳು ಹಲವು ಕಾರಣಗಳಿಗಿಂದಾಗಿ ಮಹತ್ವಪೂರ್ಣವಾಗಿವೆ. ಯಾಕೆಂದು ಸ್ವಲ್ಪ ನೋಡೋಣ: 

ಜುಲೈ 18, 2018

ಏಕಕಾಲದ ಚುನಾವಣೆಗಳ ಮಾತು: ಹಿಂದಿರುವ ರಾಜಕೀಯ ಕಾರಣಗಳು

ಕು.ಸ. ಮಧುಸೂದನ ರಂಗೇನಹಳ್ಳಿ
ಕು.ಸ.ಮಧುಸೂದನ ರಂಗೇನಹಳ್ಳಿ
ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂಬ ಹೇಳಿಕೆ ನೀಡುವ ಮೂಲಕ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರ ಮಟ್ಟದ ಚರ್ಚೆಯೊಂದಕ್ಕೆ ಮತ್ತೊಮ್ಮೆ ನಾಂದಿ ಹಾಡಿದ್ದಾರೆ.

ಯಾವುದೋ ಚುನಾವಣೆಯ ಪ್ರಚಾರಸಭೆಯಲ್ಲಿಯೋ ಇಲ್ಲ ಖಾಸಗಿ ಸಮಾರಂಭಗಳಲ್ಲಿ ಪ್ರದಾನಿಯವರು ಈ ಮಾತನ್ನಾಡಿದ್ದರೆ ನಾವು ನಿರ್ಲಕ್ಷಿಸಬಹುದಿತ್ತು. ಆದರೆ ಮೊನ್ನೆ ನೀತಿ ಆಯೋಗದ ಸಭೆಯ ಸಮಾರೋಪ ಸಮಾರಂಭದಲ್ಲಿ ದೇಶದ ಹಲವಾರು ಮುಖ್ಯಮಂತ್ರಿಗಳ ಹಾಗು ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಈ ಮಾತುಗಳನ್ನು ಆಡಿರುವುದರಿಂದ ಅದಕ್ಕೊಂದು ಮಾನ್ಯತೆ ಬಂದಿದೆ ಜೊತೆಗೆ ರಾಜಕೀಯ ಪಕ್ಷಗಳೂ ಸೇರಿದಂತೆ ಚುನಾವಣಾ ತಜ್ಞರುಗಳು, ವಿವಿಧಕ್ಷೇತ್ರಗಳಪರಿಣಿತರು ಈ ವಿಷಯದ ಮೇಲೆ ಚರ್ಚೆ ನಡೆಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. 2016ರಲ್ಲಿ ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಇಂತಹದೊಂದು ಶಿಫಾರಸ್ಸನ್ನು ಮಾಡಿತ್ತುಅಲ್ಲದೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಹ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರ್ಯಾರೂ ಅದರ ಬಗ್ಗೆ ಅಷ್ಟೊಂದು ಗಂಬೀರವಾಗೇನು ಚರ್ಚೆ ಮಾಡಲು ಹೋಗಿರಲಿಲ್ಲ..

ಆದರೆ ಇದೀಗ ನೀತಿ ಆಯೋಗದ ಸಭೆಯಲ್ಲಿ ಪ್ರದಾನಮಂತ್ರಿಯವರು ಅಧಿಕೃತವಾಗಿಯೇ ಈ ಮಾತನ್ನು ಹೇಳಿರುವುದರಿಂದ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ತಿಳಿಯುವುದರ ಜೊತೆಗೆ ಆ ಬಗ್ಗೆ ಚರ್ಚೆ ನಡೆಸಬೇಕಾಗಿರುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಕಾನೂನು ಸಚಿವಾಲಯವೇ ಹೇಳಿದಂತೆ ಇದಕ್ಕೆ ದೇಶದ ಎಲ್ಲ ರಾಜಕೀಯ ಪಕ್ಷಗಳ ಸಮ್ಮತಿ ಬೇಕಾಗುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಮಾತಾಡಿರುವುದು ಇದು ಹೊಸದೇನಲ್ಲ. ಆದರೆ ಇದರ ಹಿಂದಿನ ರಾಜಕೀಯ ಉದ್ದೇಶಗಳನ್ನು ಚರ್ಚಿಸುವ ಮೊದಲು ನಮ್ಮ ಚುನಾವಣೆಗಳು ನಡೆಯುತ್ತಿದ್ದ ಮತ್ತು ನಡೆಯುತ್ತಿರುವ ರೀತಿಗಳನ್ನು ಸ್ವಲ್ಪ ಹಿಂದಕ್ಕೆ ಹೋಗಿ ನೋಡೋಣ:

ಜುಲೈ 16, 2018

ಕರಾಳ ರಾತ್ರಿಯೆಂಬ ಸರ್ಪ್ರೈಸ್ ಪ್ಯಾಕೇಜು!

ಡಾ. ಅಶೋಕ್.ಕೆ.ಆರ್ 
‘ಆ ಕರಾಳ ರಾತ್ರಿ’ ಎಂಬೆಸರಿನ ಸಿನಿಮಾವೊಂದು ಬಿಡುಗಡೆಯಾಗಿರುವ ವಿಷಯವೇ ತಿಳಿದಿರಲಿಲ್ಲ ಎಂದ ಮೇಲೆ ಅದು ಯಾವ ಥಿಯೇಟರಿನಲ್ಲಿದೆ ಅನ್ನುವುದನ್ನೆಲ್ಲ ಹುಡುಕಾಡಿ ಸಿನಿಮಾ ನೋಡುವುದು ದೂರದ ಮಾತೇ ಸೈ! ಬೆಂಗಳೂರು ಮಿರರ್ ನ ಶ್ಯಾಮ್ ಪ್ರಸಾದ್ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ಮೂರುವರೆ ಸ್ಟಾರ್ ಕೊಟ್ಟಿದ್ದೇ ಈ ಸಿನಿಮಾ ನೋಡಲು ಕಾರಣ! ಯಾವ ಸಿನಿಮಾವನ್ನೂ ಸುಖಾಸುಮ್ಮನೆ ಶ್ಯಾಮ್ ಪ್ರಸಾದ್ ಹೊಗಳೋರಲ್ಲ ಅನ್ನೋ ನಂಬುಗೆಯಿಂದ ಚಿತ್ರಮಂದಿರದೊಳಗೆ ಕಾಲಿಟ್ಟಾಗಲೇ ಗೊತ್ತಾಗಿದ್ದು ಇದು ದಯಾಳ್ ಪದ್ಮನಾಭನ್ ನಿರ್ಮಾಣ ನಿರ್ದೇಶನದ ಚಿತ್ರವೆಂದು! 

ದಯಾಳ್ ಅವರ ಸಿನಿಮಾಗಳು ಯಾವುವೂ ಹೇಳಿಕೊಳ್ಳುವಷ್ಟು ಮೆಚ್ಚುಗೆಯಾಗಿರಲಿಲ್ಲ ನನಗೆ. ಇದು ಹೇಗಿದೆಯೋ ಅಂದುಕೊಂಡೇ ಕುಳಿತಿದ್ದೆ. ದೂರದ ಊರೊಂದರ ಚಿತ್ರಣ, ಆ ಊರಲ್ಲೊಂದು ಪುಟ್ಟ ಸಂಸಾರ: ಗಂಡ (ರಂಗಾಯಣ ರಘು), ಹೆಂಡತಿ (ವೀಣಾ ಸುಂದರ್), ಮಗಳು (ಮಲ್ಲಿಕಾ - ಅನುಪಮ ಗೌಡ). ಸಾರಾಯಿ ಅಂಗಡಿಯನ್ನೇ ನೆಚ್ಚಿಕೊಂಡ ಗಂಡ, ಹೆರಿಗೆ ಮಾಡಿಸುವುದರಲ್ಲಿ ಪರಿಣಿತಳಾದ ಹೆಂಡತಿ, ಮನೆಯಲ್ಲಿನ ಬಡತನದ ಕಾರಣದಿಂದ ಇನ್ನೂ ಮದುವೆಯಾಗದ ಹಪಾಹಪಿಯ ಮಗಳು. ಪ್ರತಿ ಪಾತ್ರವನ್ನೂ ತುಂಬಾ ಗಮನವಿಟ್ಟು ಕಟ್ಟಿಕೊಡುತ್ತಾರೆ ನಿರ್ದೇಶಕರು. 

ಜುಲೈ 15, 2018

ಪಕ್ಷಿ ಪ್ರಪಂಚ: ನೀಲಿ ಮಿಂಚುಳ್ಳಿ.

ಚಿತ್ರ ೧: ಹಾರಲು ಸಿದ್ಧವಾದ ನೀಲಿ ಮಿಂಚುಳ್ಳಿ. 
ಡಾ. ಅಶೋಕ್. ಕೆ. ಆರ್ 
ನೀರಿನ ಮೂಲಗಳ ಬಳಿಯಲ್ಲಿನ ಗಿಡಗಳ ಮೇಲೆ, ಕೊಂಬೆಗಳ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ನೀಲಿ ಬಣ್ಣದ ಪಕ್ಷಿಯನ್ನು ನೀವು ಕಂಡಿರುವಿರಾದರೆ ಅದು ನೀಲಿ ಮಿಂಚುಳ್ಳಿಯೇ ಸೈ! 

ಆಂಗ್ಲ ಹೆಸರು: Common kingfisher (ಕಾಮನ್ ಕಿಂಗ್ ಫಿಷರ್), small blue kingfisher (ಸ್ಮಾಲ್ ಬ್ಲೂ ಕಿಂಗ್ ಫಿಷರ್), river kingfisher (ರಿವರ್ ಕಿಂಗ್ ಫಿಷರ್) 

ವೈಜ್ಞಾನಿಕ ಹೆಸರು: Alcedo Atthis (ಅಲ್ಕೆಡೋ ಅಥಿಸ್) 

ಪುಟ್ಟ ಕಾಲುಗಳು, ಚಿಕ್ಕ ಬಾಲ, ಡುಮ್ಮ ದೇಹ, ಉದ್ದ ಕೊಕ್ಕಿನ ಪಕ್ಷಿಯಿದು. ನಮ್ಮಲ್ಲಿ ಕಾಣಸಿಗುವ ಮಿಂಚುಳ್ಳಿಗಳಲ್ಲಿ ಇದೇ ಪುಟ್ಟದು. ಹಾಗಾಗಿ ಕಿರು ಮಿಂಚುಳ್ಳಿಯೆಂದೂ ಕರೆಯುತ್ತಾರೆ. ಬೆನ್ನು, ಬಾಲದ ಬಣ್ಣವೆಲ್ಲಾ ಪಳ ಪಳ ಹೊಳೆಯುವ ಕಡು ನೀಲಿ. ಎದೆಯ ಭಾಗ ಹೊಂಬಣ್ಣವನ್ನೊಂದಿದೆ. ನೆತ್ತಿ ನೀಲಿ ಬಣ್ಣದ್ದು, ಕಣ್ಣಿನ ಸುತ್ತ ಹೊಂಬಣ್ಣದ ಪಟ್ಟಿಯಿದೆ, ಇದರ ಹಿಂದೆ ಬಿಳಿ ಬಣ್ಣದ ಪಟ್ಟಿಯಿದೆ. ಇವುಗಳ ಕೆಳಗೆ ಮತ್ತೆ ನೀಲಿ ಬಣ್ಣದ ಪಟ್ಟಿಯಿದೆ, ಈ ನೀಲಿ ಬಣ್ಣ ಬೆನ್ನಿನ ಮೇಲೆ ಮುಂದುವರಿಯುತ್ತದೆ. ಕತ್ತಿನ ಭಾಗದಲ್ಲಿ ಕೊಂಚ ಬಿಳಿ ಬಣ್ಣವನ್ನು ಕಾಣಬಹುದು. ಕೊಕ್ಕಿನ ಬಣ್ಣ ಕಪ್ಪು.

ಜುಲೈ 14, 2018

ಕೊರಳಮಾಲೆ

ಶೈಲಾ ಶ್ರೀನಿವಾಸ್

ಎದೆಯ ಭಾವ ನುಡಿದೆ ನೀನೇ 

ಅಂದು ನನ್ನ ಶ್ಯಾಮನೇ......!

ಜಡದ ಒಳಗೂ ನುಡಿವ ವೀಣೆ

ಅಹುದೇ ನನ್ನ ಜೀವವೇ....?



ಮನದ ಮುಗಿಲಲಂದು ನಕ್ಕೆ

ಹರಿಸಿ ಹಾಲು ಹುಣ್ಣಿಮೆ....!!

ಒಡೆದ ಚೂರು ಚುಕ್ಕಿಯಾಗಿ 

ಹೊಳೆಯುವೆ ಇಂದು ಕಣ್ಣಿಗೆ..?


ಮೈತ್ರಿಯ ಲಾಭ ನಷ್ಟಗಳು! ಯಾರ್ಯಾರಿಗೆ ಎಷ್ಟೆಷ್ಟು?

ಕು.ಸ.ಮಧುಸೂದನರಂಗೇನಹಳ್ಳಿ
ಮತೀಯವಾದಿ ಬಾಜಪವನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ಮೊದಲ ಬಜೆಟ್ಟನ್ನೂ ಮಂಡಿಸಿಯಾಗಿದೆ.104 ಸ್ಥಾನಗಳನ್ನು ಗೆದ್ದೂ ಅದಿಕಾರ ಹಿಡಿಯಲಾಗದ ಹತಾಶೆಯಲ್ಲಿರುವ ಬಾಜಪ ಈ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಕರೆಯುತ್ತಿದೆ. ಹಾಗೆ ನೋಡಿದರೆ ಚುನಾವಣೋತ್ತರ ಮೈತ್ರಿಗಳ ಹಿಂದಿರುವುದು ಕೇವಲ ಅಧಿಕಾರದಾಹ ಮಾತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ!. 2006ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದ್ದ ಜನತಾದಳ ಮದ್ಯರಾತ್ರಿಯ ರಕ್ತರಹಿತ ಕ್ರಾಂತಿಯಲ್ಲಿ(ಅವತ್ತಿನ ಮಟ್ಟಿಗೆ ಕುಮಾರಸ್ವಾಮಿ ಮತ್ತು ಅವರ ಗೆಳೆಯರ ದೃಷ್ಠಿಯಲ್ಲಿ ಅದು ಕ್ರಾಂತಿಯೇ ಆಗಿತ್ತೆನ್ನಬಹುದು) ಬಾಜಪದ ಜೊತೆ ಸೇರಿ ಅಧಿಕಾರ ಹಿಡಿದಿದ್ದು ಸಹ ಅಪವಿತ್ರ ಮೈತ್ರಿಯ ಫಲವೇ ಆಗಿತ್ತೆಂಬುದನ್ನು ಬಾಜಪದ ನಾಯಕರುಗಳು ಮರೆತಂತಿದೆ. ಶಕ್ತಿ ರಾಜಕಾರಣವೇ ವಿಜೃಂಭಿಸುತ್ತಿರುವ ಇವತ್ತಿನೀ ಕಾಲಘಟ್ಟದಲ್ಲಿ ಪವಿತ್ರ ಎನ್ನುವ ಶಬ್ದ ತನ್ನ ನಿಜಾರ್ಥ ಕಳೆದುಕೊಂಡಾಗಿದೆ. ಕಳೆದ ವರ್ಷ ಗೋವಾದಲ್ಲಿ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಸ್ವತ: ಬಾಜಪವೇ ಇಂತಹ ಹಲವು ಅಪವಿತ್ರ ಮೈತ್ರಿಗಳ ರೂವಾರಿಯಾಗಿದ್ದನ್ನು ಬಾಜಪದ ನಾಯಕರಿಗೆ ನಾವೇನು ನೆನಪು ಮಾಡಿಕೊಡುವ ಅಗತ್ಯವಿಲ್ಲ.

ಇರಲಿ, ಈ ಮೈತ್ರಿ ಇಲ್ಲಿಗೆ ಮುಗಿಯುವುದಿಲ್ಲ, ಬದಲಿಗೆ ಮುಂದಿನ 2019ರ ಲೋಕಸಭಾ ಚುನಾವಣೆಗಳಿಗೂ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಸರಕಾರದಲ್ಲಿ ಆಂತರಿಕವಾಗಿ ಮತ್ತು ಬಹಿರಂಗವಾಗಿ ಭಿನ್ನಮತೀಯ ಚಟುವಟಿಕೆಗಳು ನಡೆಯ ತೊಡಗಿದ್ದು ಸರಕಾರದ ಸ್ಥಿರತೆಯ ಬಗ್ಗೆಯೇ ಅನುಮಾನ ಹುಟ್ಟಿದೆ. ಸಚಿವ ಸ್ಥಾನ ಹಂಚಿಕೆ, ಖಾತಿಗಳ ಹಂಚಿಕೆ, ನಿಗಮ ಮಂಡಳಿಗಳಿಗೆ ಮಾಡಬೇಕಿರುವ ನೇಮಕಾತಿಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಬಹುಶ: ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಗೆ ಕಂಟಕವಾಗಬಹುದಾದಷ್ಟು ಭಿನ್ನಮತೀಯ ಚಟುವಟಿಕೆಗಳು ತಲೆ ಎತ್ತುವುದರಲ್ಲಿ ಸಂಶಯವಿಲ್ಲ.