ಡಿಸೆಂ 31, 2016

ಅಂಗಾಧಿಪತಿ

ಸವಿತ ಎಸ್ ಪಿ
ಬಾಲ್ಯದಿಂದಲೂ....
ನಿನ್ನ ಹುಟ್ಟಿನ ಬಗ್ಗೆ ಅಪರಿಮಿತ ಸಂತಾಪ...
ನಿನ್ನ‌ ಶ್ರದ್ಧೆ,ಗುರುಭಕ್ತಿಯ ಪ್ರಕೋಪ....
ಅಜರಾಮರ ಸ್ನೇಹದ ಬಗ್ಗೆ ಒಲುಮೆ
ನಿಸ್ವಾರ್ಥ ತ್ಯಾಗದ ಬಗ್ಗೆ ಹೆಮ್ಮೆ...
ಮುಂತಾಗಿ....
ಬೆಳೆಸಿಕೊಂಡ‌ ನನ್ನ ಯೋಚನಾಲಹರಿಯ 
ದಿಕ್ಕು ಬದಲಾಗಿದೆ....
ದುಷ್ಟರ‌ ಜೊತೆ‌ ಸೇರಿ ಅನ್ಯಾಯಕ್ಕೆ...
ಅಧರ್ಮಕ್ಕೆ.... 
ಪರೋಕ್ಷವಾಗಿಯಾದರೂ
‌ಕೈ ಜೋಡಿಸಿದೆಯಲ್ಲ.....
ಒಂದು ಹೆಣ್ಣಿನ ಮಾನಾಪಹರಣದ 
ಸಮಯದಲೂ ನೀ ಕೈಕಟ್ಟಿ ಕುಳಿತೆಯಲ್ಲ...
ಧರ್ಮದ ಬೆಳಕಲಿ ನೀ ನಡೆದಿದ್ದರೆ.....
ದುಷ್ಟರ ಕೂಟದಲಿ ಗುರುತಿಸಿಕೊಳ್ಳುವ
ದುರಾದೃಷ್ಟ ನಿನಗೆ ಒದಗುತ್ತಿರಲಿಲ್ಲ...
ಅಲ್ಲವೇ ದಾನಶೂರವೀರ‌ಕರ್ಣ...

ಡಿಸೆಂ 30, 2016

ಮೇಕಿಂಗ್ ಹಿಸ್ಟರಿ: ಸವಾಲು, ಭ್ರಾಂತಿ ಮತ್ತು ಬಿಕ್ಕಟ್ಟು

Saketh Rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬಂಡಾಯವನ್ನು ಹತ್ತಿಕ್ಕಲು ಕಾಸಾಮೈಯೂರ್ ಹತ್ತಲವು ಲೆಕ್ಕಾಚಾರಗಳನ್ನು ಮಾಡಿದ. ಮೊದಲಿಗೆ ಆತ ಸೈನ್ಯವನ್ನು ಪ್ರಮುಖ ಪಟ್ಟಣ ಮತ್ತು ಕೋಟೆಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಕಳುಹಿಸಿದ. ಆದರೆ ಸೈನ್ಯ ಅಲ್ಲಿಂದ ತೆರಳುತ್ತಿದ್ದಂತೆಯೇ ಪಟ್ಟಣ ಹಾಗೂ ಕೋಟೆಗಳು ಮರಳಿ ಗೆರಿಲ್ಲಾಗಳ ವಶವಾಗಿಬಿಡುತ್ತಿದ್ದವು. ಆದ್ದರಿಂದ ಆತ ಇನ್ನೂ ಹೆಚ್ಚಿನ ಸೈನ್ಯಕ್ಕಾಗಿ ವಿನಂತಿಸಿಕೊಂಡ, ಬ್ರಿಟೀಷ್ ಸೈನ್ಯವನ್ನು ಕರೆಸಿಕೊಂಡ ಮತ್ತು ನಿರಂತರವಾಗಿ ಸೈನ್ಯದ ಬಲವನ್ನು ಹತ್ತಿರತ್ತಿರ ಹತ್ತು ಸಾವಿರದಷ್ಟು ಹೆಚ್ಚಿಸಿದ, ಇದರಲ್ಲಿ ಅರ್ಧದಷ್ಟು ಸೈನಿಕರನ್ನು ಮೈಸೂರೇ ಪೂರೈಸಿತ್ತು. 

ಡಿಸೆಂ 27, 2016

ಸೀತಾ ಸ್ವಗತ

ಸವಿತ ಎಸ್ ಪಿ
ಬಿಲ್ಲ ಹೆದೆಯೇರಿಸಿ ನನ್ನ ವರಿಸಿದ 
ಸೀತಾರಾಮ‌....
ನಿನ್ನ ಅರಮನೆಗೆ, ಮನಕೆ ಬೆಳಕಾಗಿ, 
ಹೆಜ್ಜೆಗೆ ಹೆಜ್ಜೆ ಸೇರಿಸಿದ ನನಗೆ 
ನಿನ್ನ ಜೊತೆಗಿನ ವನವಾಸವೂ ಸಹ್ಯವಾಗಿತ್ತು...

ರಾಷ್ಟ್ರ ರಾಜಕಾರಣದತ್ತ ಮಮತಾ ಬ್ಯಾನರ್ಜಿ ಚಿತ್ತ!

ಕು.ಸ.ಮಧುಸೂದನ
ರಾಷ್ಟ್ರ ರಾಜಕೀಯದ ಇತ್ತಿಚೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು, ತೃಣಮೂಲ ಕಾಂಗ್ರೆಸ್ಸಿನ ನಾಯಕಿಯೂ ಆದ ಮಮತಾಬ್ಯಾನರ್ಜಿಯವರು ನಿದಾನವಾಗಿ ಆದರೆ ಬಹಳ ಎಚ್ಚರಿಕೆಯಿಂದ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವತ್ತ ಮನಸ್ಸು ಮಾಡಿರುವುದನ್ನು ಗಮನಿಸಬಹುದಾಗಿದೆ. ನೋಟ್ ಬ್ಯಾನಿನಂತಹ ಪ್ರಮುಖವಾದ, ಆದರೆ ಅಷ್ಟೇ ಸೂಕ್ಷ್ಮವಾದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಲುವುಗಳನ್ನು ಆಧರಿಸಿ ಈ ನಿರ್ದಾರಕ್ಕೆ ಬರಬಹುದಾಗಿದೆ. 

ಡಿಸೆಂ 23, 2016

ಮೇಕಿಂಗ್ ಹಿಸ್ಟರಿ: ಶತ್ರು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧವು ಅಳವಡಿಸಿಕೊಂಡ ಮತ್ತೊಂದು ಕ್ರಮವೆಂದರೆ ಶತ್ರು ಪಾಳಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು. 1833ರ ಮಾರ್ಚಿ ತಿಂಗಳಿನಲ್ಲಿ, ಬರ್ರಿನ ಸಿಪಾಯಿ ನದೀಮ್ ಖಾನ್, ಬ್ರಿಟೀಷ್ ಅಧಿಕಾರಿ ಮೇಜರ್ ಜೇಮ್ಸ್ ಮೇಲೆ ಬೆಂಕಿಪುರದಲ್ಲಿ (ಇವತ್ತಿನ ಭದ್ರಾವತಿ) ಅಂತಹುದೊಂದು ದಾಳಿಯನ್ನು ಆಯೋಜಿಸಿದ. ಮಾರ್ಚಿ 25ರ ರಾತ್ರಿ ಜೇಮ್ಸ್ ತನ್ನ ಟೆಂಟಿಗೆ ವಾಪಸ್ಸಾಗುವ ಸಮಯದಲ್ಲಿ, ಬಂಧನಕ್ಕೊಳಗಾಗುವ ಮುನ್ನ ನದೀಮ್ ಖಾನ್ ತನ್ನ ಖಡ್ಗದಿಂದ ಅವನ ತೋಳ ಮೇಲೆ, ತಲೆಯ ಮೇಲೆ ದಾಳಿ ನಡೆಸಿದ, ತದನಂತರ ನದೀಮ್ ಖಾನನನ್ನು ನೇಣಿಗೇರಿಸಲಾಯಿತು. (166) 

ಡಿಸೆಂ 22, 2016

ಸುಪ್ತಭಾವ

ಸವಿತ ಎಸ್ ಪಿ
ಹುಣ್ಣಿಮೆ ಚಂದಿರನ
ಮನೋಹರ ರೂಪ
ನೆನಪಿಸಿಹುದು ಏನನು
ನಿನ್ನ ಮುದ್ದುಮೊಗವನು....

ತಂಪು ತಂಗಾಳಿ ಸುಳಿದಾಡಿ
ಶೀತಲ ಸ್ಪರ್ಶ‌ದಲೂ

ಗುಜರಾತ್: ನಿಗದಿತ ಅವಧಿಗೆ ಮುನ್ನವೇ ರಾಜ್ಯ ವಿದಾನಸಭೆಗೆ ಚುನಾವಣೆ ನಡೆಸಲು ರಾಜಕೀಯ ಕಸರತ್ತು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಡಳಿತಾರೂಢ ಪಕ್ಷವೊಂದು ತನ್ನ ಅಧಿಕಾರದ ಅವಧಿ ಮುಗಿದ ನಂತರ ನಡೆಯಲಿರುವ ಚುನಾವಣೆಗಳಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡಾಗ, ತನ್ನ ಅನುಕೂಲಕ್ಕೆ ತಕ್ಕಂತೆ ಅವಧಿಗೆ ಮುಂಚಿತವಾಗಿಯೇ ಚುನಾವಣೆಗಳನ್ನು ನಡೆಸಿ ಗೆಲ್ಲಲೆತ್ನಿಸುವುದು ಇಂಡಿಯಾದ ರಾಜಕಾರಣದಲ್ಲಿ ಸಹಜವಾಗಿ ನಡೆದು ಬಂದ ಬೆಳವಣಿಗೆ. ಅದಿಕಾರದಲ್ಲಿ ಇರುವ ಪಕ್ಷವೊಂದು ತನಗೆ ಬೇಕಾದಾಗ ವಿದಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದರಲ್ಲಿ ಯಾವ ಕಾನೂನಿನ ತೊಡಕೂ ಇಲ್ಲ. ಸರಕಾರ ಕೇಳಿದಾಗ ಚುನಾವಣೆ ನಡೆಸುವುದಷ್ಟೆ ಆಯೋಗದ ಕೆಲಸವಾಗಿದ್ದು, ಒಂದು ವಿದಾನಸಭೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ತಾನು ಚುನಾವಣೆ ನಡೆಸುವುದೆಂದು ಹೇಳುವ ಅಧಿಕಾರ ಆಯೋಗಕ್ಕೆ ಇಲ್ಲವಾಗಿರುವುದೆ ಇದಕ್ಕೆ ಕಾರಣ ಎನ್ನಬಹುದು. ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಈ ತೆರನಾದ ಅವಧಿಪೂರ್ವ ಚುನಾವಣೆಗಳು ನಡೆದಿವೆ. ತನ್ಮೂಲಕ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು ಮಾತ್ರವಲ್ಲದೆ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಲ್ಲಿಯೂ ಸಫಲವಾಗಿವೆ. ಇಂತಹ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಗಳನ್ನು ಕಟುವಾಗಿ ಟೀಕಿಸುತ್ತಿದ್ದ ಬಾಜಪ ಕೂಡ ಇದೀಗ ಅದೇ ದಾರಿಯಲ್ಲಿ ನಡೆಯಲು ತೀರ್ಮಾನಿಸಿದ್ದು, ತಾನು ಯಾವ ವಿಚಾರದಲ್ಲು ಕಾಂಗ್ರೆಸ್ಸಿಗಿಂತ ಭಿನ್ನವೇನಲ್ಲ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ.

ಡಿಸೆಂ 16, 2016

ಮೇಕಿಂಗ್ ಹಿಸ್ಟರಿ: ಮಳೆ ಮತ್ತು ಭೂಪ್ರದೇಶದ ಲಾಭ ಪಡೆದುಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ವಿಭಾಗವು ಸಮೃದ್ಧ ಮಲೆನಾಡಿನಿಂದ ಸುತ್ತುವರಿದಿತ್ತು ಮತ್ತಿದನ್ನು ಗೆರಿಲ್ಲಾಗಳು ತುಂಬಾ ಚೆಂದಾಗಿ ಉಪಯೋಗಿಸಿಕೊಂಡರು. ದಟ್ಟ ಅರಣ್ಯ ಪ್ರದೇಶವನ್ನು ತಮ್ಮನುಕೂಲಕ್ಕೆ ಬಳಸಿಕೊಂಡಿದ್ದು ಹೋರಾಟದ ಅಸ್ತಿತ್ವ ಉಳಿಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಭೂಪ್ರದೇಶವು ಎಷ್ಟು ಉತ್ತೇಜನಕಾರಿಯಾಗಿತ್ತೆಂದರೆ ಹಲವು ಪಾಳೇಗಾರರು ಕೂಡ ತಮ್ಮ ಕೋಟೆಯನ್ನು ತೊರೆದು ಅರಣ್ಯದೊಳಗೆ ರಕ್ಷಣೆ ಪಡೆದುಕೊಂಡರು. 

ಸಶಸ್ತ್ರ ಹೋರಾಟದುದ್ದಕ್ಕೂ, ಗೆರಿಲ್ಲಾ ಯುದ್ಧದ ಪ್ರತಿಯೊಂದು ಪ್ರಮುಖ ತಂತ್ರ ರೂಪುಗೊಂಡಾಗಲೂ, ಅದನ್ನು ಅರಣ್ಯ ಕೊಟ್ಟ ಅನುಕೂಲತೆಗಳಾಧಾರದ ಮೇಲೆಯೇ ಮಾಡಲಾಗಿತ್ತು ಎನ್ನುವುದನ್ನು ಗಮನಿಸಬಹುದು.

ಡಿಸೆಂ 15, 2016

ಗೋವಾ: ಆಮ್ಆದ್ಮಿಯ ಆಕ್ರಮಣಾಕಾರಿ ಪ್ರಚಾರ

goa elections
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈಗಾಗಲೇ ದೆಹಲಿಯ ಗದ್ದುಗೆಯನ್ನು ಹಿಡಿದಿರುವ ಶ್ರೀ ಅರವಿಂದ್ ಕೇಜ್ರೀವಾಲಾರವರ ಆಮ್ ಆದ್ಮಿ ಪಕ್ಷ ಇದೀಗ ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿದಾನಸಭಾ ಚುನಾವಣೆಗಳ ಮೇಲೆ ಕಣ್ಣು ನೆಟ್ಟಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಈ ಎರಡೂ ರಾಜ್ಯಗಳಲ್ಲಿ ಕೆಲವು ಪ್ರಮುಖ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನೂ ಘೋಷಿಸಿದೆ. ಜೊತೆಗೆ ಲಭ್ಯವಿರುವ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣಾ ಪ್ರಚಾರವನ್ನೂ ಪ್ರಾರಂಭಿಸಿದೆ. ಈಗಾಗಲೇ ಕಳೆದ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿರುವ ಪಂಜಾಬನ್ನು ಹೊರತು ಪಡಿಸಿ ಇದೇ ಮೊದಲ ಬಾರಿಗೆ ಚುನಾವಣಾ ರಂಗಕ್ಕೆ ಕಾಲಿರಿಸಿರುವ ಗೋವಾ ರಾಜ್ಯದಲ್ಲಿ ಆ ಪಕ್ಷ ತೀರಾ ಆಕ್ರಮಣಾ ಕಾರಿ ರಾಜಕಾರಣ ಶುರು ಮಾಡಿದೆ. ಈಗಾಗಲೇ ಗೋವಾದಲ್ಲಿ ಒಂದು ರ್ಯಾಲಿಯನ್ನೂ ನಡೆಸಿರುವ ಅರವಿಂದ್ ಕೇಜ್ರೀವಾಲರ ಸಿದ್ದತೆಗಳನ್ನು ಮತ್ತು ಪಕ್ಷದ ನಾಯಕರುಗಳ ಉತ್ಸಾಹವನ್ನು ನೋಡಿದರೆ ಈ ಬಾರಿ ಕಾಂಗ್ರೆಸ್ ಮತ್ತು ಬಾಜಪಕ್ಕೆ ಈ ಚುನಾವಣೆ ಕಷ್ಟವಾಗುವುದಂತು ಖಚಿತವೆನಿಸುತ್ತಿದೆ.

ಡಿಸೆಂ 11, 2016

ಪಂಜಾಬ್ ಚುನಾವಣೆ: ದಲಿತರ ಓಲೈಕೆ ಮತ್ತು ಡ್ರಗ್ಸ್ ಮಾಫಿಯಾ ವಿರುದ್ದ ಹೋರಾಟಗಳೇ ಪ್ರಮುಖ ವಿಷಯಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪಂಜಾಬ್ ರಾಜ್ಯದ ವಿದಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ಒಳಗೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈ ಚುನಾವಣಾ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿರುವವರಿಗೆ ಪ್ರಮುಖವಾಗಿ ಗೋಚರಿಸುತ್ತಿರುವ ಎರಡು ವಿಷಯಗಳಿವೆ. ಅದರಲ್ಲಿ ಮೊದಲನೆಯದು ಪಂಜಾಬಿನಲ್ಲಿ ತೀವ್ರವಾಗಿ ಚರ್ಚಿತವಾಗುತ್ತಿರುವ ಡ್ರಗ್ಸ್ ಮಾಫಿಯಾದ ಕಾನೂನುಬಾಹಿರ ಚಟುವಟಿಕೆಗಳು. ಇನ್ನೊಂದು ಪಂಜಾಬಿನ ರಾಜಕೀಯ ವಲಯದಲ್ಲಿ ಅಷ್ಟೇನೂ ಪ್ರಾಮುಖ್ಯ ಪಡೆಯದ ದಲಿತ ರಾಜಕಾರಣ ಎಲ್ಲ ಪಕ್ಷಗಳ ಒಳಗೆ ಚರ್ಚಿತವಾಗುತ್ತಿರುವುದಾಗಿದೆ. ಅದು ಇದುವರೆಗು ಪಂಜಾಬಿನ ರಾಜಕಾರಣದಲ್ಲಿ ದಲಿತ ಶಕ್ತಿಯ ಪ್ರಭಾವವೇ ಇರದಂತಹ ವಾತಾವರಣವಿದ್ದು, ಇದೀಗ ಅದು ಬದಲಾಗುವ ಮುನ್ಸೂಚನೆಯೊಂದು ಕಾಣುತ್ತಿರುವುದಾಗಿದೆ. ಈ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ: