ಡಿಸೆಂ 7, 2011

ಶಿಕ್ಷಣದ ಮಾಧ್ಯಮ ಯಾವುದಿರಬೇಕು?

ಡಾ ಅಶೋಕ್. ಕೆ. ಆರ್
ಶಿಕ್ಷಣದ ಮೂಲಉದ್ದೇಶ ನಮ್ಮನ್ನು ಸಾಕ್ಷರಗೊಳಿಸುವುದರ ಜೊತೆಗೆ ನಮ್ಮನ್ನು ವಿಚಾರಪ್ರಿಯರನ್ನಾಗಿ ಮಾಡಿ ನಮ್ಮ ವೈಚಾರಿಕತೆಯನ್ನು ಉನ್ನತ ಮಟ್ಟಕ್ಕೇರಿಸಿ ಹಳೆಯ ಆಚಾರ ವಿಚಾರಗಳಲ್ಲಿ ಉತ್ತಮವಾದ ನಂಬಿಕೆಗಳನ್ನು ಉಳಿಸಿಕೊಂಡು ಮೂಢನಂಬಿಕೆಗಳನ್ನು ತೊಡೆದು ಜಾತಿ – ಧರ್ಮದ ಕಂದಕ ಅಂತರವನ್ನು ಕಡಿಮೆಗೊಳಿಸಿ ಉತ್ತಮ ಮಾನವರನ್ನಾಗಿ ಮಾಡುವುದು. ಆದರಿವು ಆಗುತ್ತಿದೆಯಾ? ಅತಿ ಹೆಚ್ಚು ಅಂಕಗಳನ್ನು ಪಡೆಯುವ, ಹೆಚ್ಚು ಶಿಕ್ಷಿತರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತರೂ {ಕೇವಲ ಸಾಕ್ಷರರು ಎಂಬುದು ಸರಿಯಾದ ಪದ} ಕೂಡ ಮಡೆ ಮಡೆ ಸ್ನಾನದಂತಹ ಆಚರಣೆಗೆ ಬೆಂಬಲ ವ್ಯಕ್ತಪಡಿಸುವ ರೀತಿ, ಉಗ್ರ ಬಲಪಂಥೀಯ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಭದ್ರಗೊಳಿಸಿಕೊಳ್ಳುತ್ತಿರುವ ಬಗೆಯನ್ನು ನೋಡಿದರೆ ಎಲ್ಲೋ ನಮ್ಮ ಶಿಕ್ಷಣ ಹಾದಿ ತಪ್ಪಿದೆ ಎನ್ನಿಸುವುದಿಲ್ಲವೇ? ನಮ್ಮ ತಂದೆಯವರ ಮದುವೆಯ ಕಾಲದಲ್ಲಿ ಪ್ರಾಮುಖ್ಯತೆ ಪಡೆಯದ ಜಾತಕಫಲ, ಜ್ಯೋತಿಷ್ಯಗಳು [ಆ ಕಾಲದ ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕವೇ ಸರಿಯಾಗಿ ತಿಳಿದಿರುತ್ತಿರಲಿಲ್ಲ, ಇನ್ನು ಜಾತಕ ಕೂಡಿಸುವುದು ಎಲ್ಲಿ ಬಂತು?!] ‘ವಿದ್ಯೆ’ಯ ಮಟ್ಟ ಹೆಚ್ಚುತ್ತಿದ್ದಂತೆ ಪ್ರಮುಖವಾಗುತ್ತಿವೆ ಏಕೆ?

ಡಿಸೆಂ 1, 2011

ಶುಚಿಗೊಳ್ಳದ ಮನಗಳು ಮತ್ತು ಮಡೆ ಮಡೆ ಸ್ನಾನ


 
ಜನರ ನಂಬಿಕೆಗಳೇ ಮೌಡ್ಯದಿಂದ ಕೂಡಿರುವಾಗ ಆಳುವ ‘ಜವಾಬ್ದಾರಿಯುತ’ ಸರಕಾರಗಳು ಆ ಮೌಡ್ಯವನ್ನು ಮತ್ತಷ್ಟು ಉತ್ತೇಜಿಸಬೇಕೋ ಅಥವಾ ಇಂದಿನವರ ಭಾವನೆಗಳಿಗೆ ಕೊಂಚ ಧಕ್ಕೆಯಾದರೂ ಚಿಂತಿಲ್ಲ ಎಂಬ ಧೃಡಮನಸ್ಸಿನಿಂದ ಆ ಮೌಡ್ಯಗಳನ್ನು ತೊಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೋ?

ನವೆಂ 25, 2011

ಪತ್ರಕರ್ತನ ಹತ್ಯೆಗೆ ಪತ್ರಕರ್ತೆಯ ಸಹಾಯ ಹಸ್ತ?!

ಜೆ ಡೆ source - youthkiawaaz.com

ಜೂನ್ ಹನ್ನೊಂದು ೨೦೧೧ರಲ್ಲಿ ಹತ್ಯೆಯಾದ ಮಿಡ್ ಡೇ ಪತ್ರಿಕೆಯ ಪತ್ರಕರ್ತ ಜೆ ಡೆಯ ಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಏಶಿಯನ್ ಏಜ್ ನ ಪತ್ರಕರ್ತೆ, ಡೆಪ್ಯುಟಿ ಬ್ಯುರೋ ಚೀಫ್ 'ಜಿಗ್ನ ವೋರ'ಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಅಕ್ಟೋ 26, 2011

ಕೊನೆಯ ಪುಟಗಳು


ಡಾ. ಅಶೋಕ್. ಕೆ. ಆರ್.
          ಅಕ್ಟೋಬರ್ 1 – ಪ್ರತಿಯೊಬ್ಬನಿಗೂ ವರ್ಷದ ಯಾವುದಾದರೊಂದು ದಿನ ಪ್ರಮುಖವಾಗಿರುತ್ತೆ. ಹೈಸ್ಕೂಲಿನಲ್ಲಿ ಪುಂಡಾಟಗಳು; ಮುಂಜಾನೆ ಟ್ಯೂಷನ್ನೂ, ಬೆಳಿಗ್ಗೆ ಕಾಲೇಜು, ಸಂಜೆ ಮತ್ತೊಂದೆರಡು ಟ್ಯೂಷನ್ನೂ, ರಾತ್ರಿ ಒಂದಷ್ಟು ಓದು – ಪಿ ಯು ಸಿಯಲ್ಲಿ ಬೇರೇನನ್ನೂ ಯೋಚಿಸಲು ಸಮಯವಿರಲಿಲ್ಲ. ಓದಿದ್ದು ವ್ಯರ್ಥವಾಗದೆ ಮೆಡಿಕಲ್ ಸೀಟು ಸಿಕ್ಕಿ ಇವತ್ತಿಗಾಗಲೇ ಹತ್ತು ವರ್ಷವಾಯಿತು. ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದ ಚೇತನ್ ನ ಪರಿಚಯವಾದ ದಿನವಿದು. ನನ್ನ ಜೀವನದ ಪ್ರಮುಖ ದಿನ. ಕೆಲವು ವರ್ಷಗಳ ಹಿಂದಿನವರೆಗೂ ನನ್ನಲ್ಲಿ ಉತ್ಸಾಹ ಮೂಡಿಸುತ್ತಿದ್ದ ದಿನ. ಆದರೀಗ? ಆತ್ಮಸಾಕ್ಷಿಯ ಇರಿತಕ್ಕೆ ಜರ್ಝರಿತನಾಗಿದ್ದೇನೆ.

ಅಕ್ಟೋ 15, 2011

ಅಂತ್ಯ ಕಾಣದ ತೆಲಂಗಾಣ ಚಳುವಳಿ

telangana;source - wikipedia
ಡಾ. ಅಶೋಕ್. ಕೆ. ಆರ್
           ಮತ್ತೆ ತೆಲಂಗಾಣ ಸುದ್ದಿಯಲ್ಲಿದೆ. ಎಲ್ಲ ಸಂಚಾರ ಮಾರ್ಗಗಳನ್ನು ಮುಚ್ಚಿಸಲಾರಂಭಿಸಿದ್ದಾರೆ ತೆಲಂಗಾಣ ರಾಜ್ಯ ಪರ ಹೋರಾಟಗಾರರು. ಕನ್ನಡ ಪತ್ರಿಕೆಗಳಲ್ಲಿ ಈ ಹೋರಾಟದಿಂದ ಕರ್ನಾಟಕ್ಕೆ ವಿದ್ಯುತ್ ಉತ್ಪಾದಿಸಲು ಸರಬರಾಜಾಗುವ ಕಲ್ಲಿದ್ದಲ್ಲಿನ ಬಗೆಗಿನ ಚಿಂತೆಯೇ ಅಧಿಕವಾಗಿ ಪ್ರಕಟವಾಗುತ್ತಿದೆ. ದಶಕಗಳ ಹೋರಾಟದ ಇತಿಹಾಸದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲುತ್ತಿರುವವರೇ ಕಡಿಮೆ. ತೆಲಂಗಾಣ ಹೋರಾಟದ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಸಂಕ್ಷಿಪ್ತ ಕನ್ನಡಾನುವಾದ ಹಿಂಗ್ಯಾಕೆ?!ಯಲ್ಲಿ.

ಅಕ್ಟೋ 11, 2011

ಅನ್ನದ ಉತ್ಪಾದಕರಿಗೆ ಮೂರು ಫೇಸು ಮೂರೇ ತಾಸು

-      ಡಾ.ಅಶೋಕ್. ಕೆ. ಆರ್
ಅನಧಿಕೃತವಾಗಿ ಹೋಗುತ್ತಿದ್ದ ವಿದ್ಯುತ್ತಿಗೆ ಈಗ ಅಧಿಕೃತೆಯ ಮುದ್ರೆ ಬಿದ್ದಿದೆ; ಅಷ್ಟೇ ವ್ಯತ್ಯಾಸ! ಆಳುವ ವರ್ಗದ ಹಿತಾಸಕ್ತಿಗಳೇನು ಎಂಬುದನ್ನು ಅರಿಯಲು ಸರಕಾರದ ಈ ಅಧಿಕೃತ ಲೋಡ್ ಶೆಡ್ಡಿಂಗ್ ವಿವರವನ್ನು ಪರಿಶೀಲಿಸಬೇಕು. ಬೆಂಗಳೂರು ನಗರದಲ್ಲಿ ಲೋಡ್ ಶೆಡ್ಡಿಂಗಿಲ್ಲ, ಇತರೆ ನಗರಗಳಲ್ಲಿ ಒಂದು ತಾಸಿನ ಶೆಡ್ಡಿಂಗ್. ಹಳ್ಳಿಗಳಿಗೆ ಮೂರು ತಾಸು ಮಾತ್ರ ಮೂರು ಫೇಸಿನ ವಿದ್ಯುತ್. ಸಂಜೆ ಆರರಿಂದ ಮಾರನೇ ಬೆಳಿಗ್ಗೆ ಆರರವರೆಗೆ ಬಲ್ಬುಗಳು ಹತ್ತುವುದಕ್ಕೇ ಏದುಸಿರುಬಿಡುವ ಒಂದು ಫೇಸಿನ ವಿದ್ಯುತ್. ಆರು ತಾಸು ಕೊಡಲಾಗುತ್ತಿದ್ದ ಮೂರು ಫೇಸಿನ ವಿದ್ಯುತ್ತನ್ನು ಈಗ ಮೂರು ತಾಸಿಗೆ ಇಳಿಸಲಾಗಿದೆ. ಕಾರಣ?- ಬೆಂಗಳೂರು ಮತ್ತಿತರ ನಗರಗಳಿಗೆ ಅಭಾದಿತ ವಿದ್ಯುತ್ ಪೂರೈಕೆ ಮಾಡಬೇಕಿರುವುದು.

ಅಕ್ಟೋ 3, 2011

ಸುಳ್ಯದಲ್ಲಿ ನಲವತ್ತನೇ ವರ್ಷದ ದಸರಾ ಮಹೋತ್ಸವ.


ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ಸುಳ್ಯ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ಜಂಟಿಯಾಗಿ ನಡೆಸುತ್ತಿರುವ ದಸರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು. ಇದು ನಲವತ್ತನೇ ವರ್ಷದ ಮಹೋತ್ಸವ ಎಂಬುದು ವಿಶೇಷ. ಪ್ರಾರಂಭೋತ್ಸವದ ಒಂದಷ್ಟು ಚಿತ್ರಗಳು. 

ಸೆಪ್ಟೆಂ 27, 2011

ಪೀಠದ ಬಾಗಿಲಲ್ಲಿ ಅಜ್ಞಾನದ ಪ್ರಭೆ!

-      ಡಾ ಅಶೋಕ್. ಕೆ. ಆರ್.

ಚಂದ್ರಶೇಖರ ಕಂಬಾರರಿಗೆ ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಸಿಕ್ಕಿದೆ. ಕನ್ನಡಕ್ಕೆ ದಕ್ಕಿದ ಎಂಟನೇ ಜ್ಞಾನಪೀಠ. ಈ ಬಗ್ಗೆ ಸಮಸ್ತರೂ ಸಂತಸ ಪಡಬೇಕಾದ ಸಮಯದಲ್ಲಿ ‘ಅಯ್ಯೋ ನಮ್ಮ ಭೈರಪ್ಪನವರಿಗೆ ಸಿಗಲಿಲ್ಲವಲ್ಲ. ಬರೀ ರಾಜಕೀಯ’ ಎಂದು ಕೆಲವರು ಹಲುಬುತ್ತಿದ್ದಾರೆ. ನನ್ನ ಗೆಳೆಯನೊಬ್ಬ ‘ಭೈರಪ್ಪನವರಿಗೆ ಸಿಕ್ಕದ ಜ್ಞಾನಪೀಠ ಅದು ಅಜ್ಞಾನಪೀಠ’ ಎಂದು ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ಬರುವ ‘ಹಿಂದೂ’ ಧರ್ಮದ ರಕ್ಷಕನಂತೆಯೇ ಉಗ್ರವಾಗಿ ಮೆಸೇಜು ಕಳುಹಿಸಿದ್ದ. ಮೂರು ವರ್ಷದ ನಂತರ ಭೈರಪ್ಪನವರಿಗೆ ಜ್ಞಾನಪೀಠ ದೊರಕಿದಾಗಲೂ ಆಗಲೂ ಈ ಭಕ್ತಿವೃಂದ ‘ರಾಜಕೀಯವಿದು’ ಎಂದು ಹಲುಬುತ್ತಾರಾ?!

ಸೆಪ್ಟೆಂ 22, 2011

ಕರ್ನಾಟಕದ ಸೊಮಾಲಿಯ ಮತ್ತು ಬಡತನ ರೇಖೆ.

ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಬಂದ ಕೆಳಗಿನ ಎರಡು ವರದಿಗಳು ಮೇಲ್ನೋಟಕ್ಕೆ ಸಂಬಂಧಪಟ್ಟಿಲ್ಲದವು ಎಂದು ತೋರಿದರೂ ಎರಡಕ್ಕೂ ನೇರಾ ನೇರ ಸಂಬಂಧವಿದೆ. ಒಂದು ಕಡೆ ಬಡವರನ್ನು ‘ಬಡವನಲ್ಲ ಶ್ರೀಮಂತ’ನೆಂದು ಗುರುತಿಸಲು ಸಾಧ್ಯವಾಗುವಂಥ ಸರಕಾರದ ವರದಿ. ಮತ್ತೊಂದೆಡೆ ಆಹಾರದ ಕೊರತೆಯಿಂದ ನರಳುತ್ತಿರುವ ಮಕ್ಕಳ ಕರುಣಾಜನಕ ಕಥನ. “Shining India”ದ ಮತ್ತೊಂದು ರೂಪ.

TV 9 report about malnutrition in raichur