ಏಪ್ರಿ 20, 2018

ಅತೃಪ್ತ ಆತ್ಮಗಳ ಸ್ಥಳಾಂತರ ಪ್ರಕ್ರಿಯೆಗಳು!!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
(ಇದೀಗ ಕರ್ನಾಟಕದ ಉದ್ದಗಲಕ್ಕೂ ಅತೃಪ್ತ ಆತ್ಮಗಳು ಅಡ್ಡಾಡುತ್ತಿದ್ದು ಸ್ವಪಕ್ಷೀಯರಿಂದ ಅತೃಪ್ತಿ ಶಮನವಾಗದಿದ್ದ ಆತ್ಮಗಳು ಪರಪಕ್ಷಗಳ ಸೆರಗಿನ ಚುಂಗು ಹಿಡಿದು ತಮ್ಮ ಅತೃಪ್ತಿಯನ್ನು ತಣಿಸಿಕೊಳ್ಳಲು ಪ್ರಯತ್ನಿಸುತ್ತಿವೆ, ಹಾಗೆಯೇ ಇಂತಹ ಆತ್ಮಗಳನ್ನು ಹಿಡಿದು ತಂದು ಅವಕ್ಕೊಂದು ಭದ್ರನೆಲೆ ಕಲ್ಪಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅಪಾರವಾಗಿ ಶ್ರಮಿಸುತ್ತಿವೆ. ಆ ಬಗ್ಗೆ ಒಂದು ಟಿಪ್ಪಣಿ)

ಅವೇ ಕ್ಷೇತ್ರಗಳು, ಅವೇ ಹೆಸರುಗಳು, ಅವೇ ಮುಖಗಳು, ಆದರೆ-ಪಕ್ಷದ ಬಾವುಟ ಮತ್ತು ಚಿಹ್ನೆ ಬೇರೆ. ಮೇ ಹನ್ನೆರಡನೆ ತಾರೀಖಿನಂದು ನಡೆಯಲಿರುವ ಕರ್ನಾಟಕ ವಿದಾನಸಭೆಯ ಚುನಾವಣೆಗಳಿಗೆ ಸ್ಪರ್ದಿಸಿರುವ ಸಾಕಷ್ಟು ಕ್ಷೇತ್ರಗಳಲ್ಲಿ ಈ ಮಾತು ನಿಜವಾಗುತ್ತಿದೆ. 2013ರ ಚುನಾವಣೆಯನ್ನು, ಆಗ ಯಾವ್ಯಾವ ಪಕ್ಷದಿಂದ ಯಾರ್ಯಾರು ಸ್ಪರ್ದಿಸಿದ್ದರೆಂಬುದನ್ನು ನಿಖರವಾಗಿ ನೆನಪಿಟ್ಟುಕೊಂಡವರಿಗೆ ನನ್ನ ಮಾತುಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ.

ಏಪ್ರಿ 19, 2018

ಪ್ರದಾನಿಗಳೆ ಘೋಷಣೆಯನ್ನು ಬದಲಾಯಿಸಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹೆಣ್ಣಿನ ಬಗ್ಗೆ ನಮಗಿರುವ ಪೂರ್ವಾಗ್ರಹ ಮನಸ್ಥಿತಿಯನ್ನು ಒಮ್ಮೆ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಿದೆ. ಆಳಿಸಿಕೊಳ್ಳುವವರಿರಲಿ, ಆಳುವವರು ಸಹ ಹೆಣ್ಣನ್ನು ಒಬ್ಬ ಸ್ವತಂತ್ರಜೀವಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಒಂದು ಜೀವಿಯಂತೆ ಪರಿಗಣಿಸುತ್ತಿರುವುದನ್ನು ನಾವು ನೋಡಬಹುದು.ಇದಕ್ಕೆ ತತ್‌ಕ್ಷಣದ ಉದಾಹರಣೆಯೆಂದರೆ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಪ್ರದಾನಮಂತ್ರಿಯವರಾದ ನರೇಂದ್ರಮೋದಿಯವರು ಹೆಣ್ಣುಮಕ್ಕಳ ಬಗ್ಗೆ ಒಂದು ಘೋಷಣೆಯನ್ನು ಹರಿಯಬಿಟ್ಟರು. ಮಾಧ್ಯಮಗಳು ಸಹ ಆ ಘೋಷಣೆಯ ಹಿಂದಿರುವ ಮನಸ್ಥಿತಿಯನ್ನು ವಿಶ್ಲೇಷಣೆ ಮಾಡಲು ಹೋಗದೆ ಪ್ರದಾನಿಯವರನ್ನು ಕೊಂಡಾಡಿದ್ದೇ ಕೊಂಡಾಡಿದ್ದು!  
“ಬೇಟಿ ಬಚಾವ್-ಬೇಟಿ ಪಡಾವ್” 
“ಮಗಳನ್ನು ರಕ್ಷಿಸಿ- ಮಗಳನ್ನು ಓದಿಸಿ” 
ಎನ್ನುವುದೇ ಆ ಜನಪ್ರಿಯ ಘೋಷಣೆಯಾಗಿತ್ತು. 

ಏಪ್ರಿ 5, 2018

ನೀವಲ್ಲವೇ?

ಪಮ್ಮಿದರಲಗೋಡು (ಪದ್ಮಜಾ ಜೋಯಿಸ್)
ಅಪರಿಚಿತರಾಗಿ ಎದುರಾಗಿದ್ದ ಕ್ಷಣಗಳಲಿ
ಮುಡಿಯಲಿ ಸದಾ ನಗುವ ಅಂಬರಮಲ್ಲಿಗೆ
ಮಾಲೆಗೆ
ಮನಸೋತು ಹೆಸರ ತಿಳಿಯ ಬಯಸಿ
ಹಿಂದೆ-ಹಿಂದೆ ತಿರುಗಿದವರು ನೀವಲ್ಲವೇ ?

ಪ್ರಜಾಪ್ರಭುತ್ವದ ಜಯದ ಹಿಂದೆ ಪ್ರಜೆಯ ಸೋಲು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರಜಾಪ್ರಭುತ್ವ ಜಯಸಾದಿಸಿದೆ!

ಪ್ರತಿ ಚುನಾವಣೆಗಳ ಪಲಿತಾಂಶಗಳು ಹೊರಬಿದ್ದಾಗಲು ನಮ್ಮ ಮಾಧ್ಯಮಗಳ ಮೊದಲಪುಟದ ತಲೆಬರಹವೇ ಇದಾಗಿರುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಮತ್ತು ನಮ್ಮ ಖಾಸಗಿ ಮಾತುಗಳ ನಡುವೆಯೂ ಇಂಡಿಯಾದ ಪ್ರಜಾಪ್ರಭುತ್ವದ ನಿಜವಾದ ಗೆಲುವಿರುವುದೇ ಶಾಂತಿಯುತ ಚುನಾವಣಾ ಪ್ರಕ್ರಿಯೆಯಲ್ಲಿ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ,

ಹಾಗಿದ್ದರೆ ನಿಜಕ್ಕೂ ನಮ್ಮ ಪ್ರಜಾಪ್ರಭುತ್ವ ಗೆಲ್ಲುತ್ತಿದೆಯಾ? ಶಾಂತಿಯುತ ಮತದಾನದ ಮಾನದಂಡವೊಂದರಿಂದಲೇ ನಮ್ಮ ಪ್ರಜಾಪ್ರಭುತ್ವದ ಯಶಸ್ಸನ್ನುಅಲೆಯಬಹುದಾ? ಚುನಾವಣಾ ಪ್ರಕ್ರಿಯೆಯ ಉಳಿದ ಯಾವ ವಿಷಯಗಳಿಗು ಇಲ್ಲಿ ಮಹತ್ವವೇ ಇಲ್ಲವಾ? ಇದು ನನ್ನನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಈ ಬಾರಿಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದ ಹಂತದಿಂದಲೇ ನೋಡೋಣ:

ಮಾರ್ಚ್ 21, 2018

ಕಾಂಗ್ರೆಸ್ಸನ್ನು ಹೊರಗಿಟ್ಟು ಹುಟ್ಟುಹಾಕುವ ಸಂಯುಕ್ತರಂಗದ ಯಶಸ್ಸು ಮರೀಚಿಕೆಯಷ್ಟೆ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೇಸ್ಸೇತರ ತೃತೀಯ ರಂಗ ಅಥವಾ ಸಂಯುಕ್ತರಂಗವೊಂದರ ಸ್ಥಾಪನೆಯ ಮಾತು ಮತ್ತೆ ಕೇಳಿ ಬರತೊಡಗಿದೆ. ಕೇಂದ್ರದ ಮಲತಾಯಿ ಧೋರಣೆಯ ವಿರುದ್ದ ಸಿಡಿದೆದ್ದಿರುವ ತೆಲಂಗಾಣ ಮುಖ್ಯಮಂತ್ರಿ ಶ್ರೀ ಕೆ.ಚಂದ್ರೇಖರ್ರಾವ್ ಪ್ರಸ್ತಾಪಿಸಿರುವ ಕಾಂಗ್ರೇಸ್ಸೇತರ ತೃತೀಯರಂಗವೊಂದರ ಬಗ್ಗೆ ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನಜರ್ಿಯಂತವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನುಳಿದ ಹಲವಾರು ಪ್ರಾದೆಶಿಕಪಕ್ಷಗಳು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬಹುದೆಂಬ ನಂಬಿಕೆಯಲ್ಲಿ ರಾವ್ ಓಡಾಡುತ್ತಿದ್ದಾರೆ. ಕನರ್ಾಟಕದ ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅದ್ಯಕ್ಷರಾದ ದೇವೇಗೌಡರು ಸಹ ರಾವ್ ಯತ್ನವನ್ನು ಸ್ವಾಗತಿಸಿರುವುದು ವಿಶೇಷವಾಗಿದೆ. ಅದರಲ್ಲೂ ಉತ್ತರಪ್ರದೇಶ ಮತ್ತು ಬಿಹಾರದ ಉಪಚುನಾವಣೆಗಳಲ್ಲಿ ಬಂದ ಬಾಜಪ ವಿರೋಧ ಪಲಿತಾಂಶಗಳ ನಂತರ ಈ ವಾದಕ್ಕೆ ಮತ್ತಷ್ಟು ಪುಷ್ಠಿ ಬಂದಂತೆ ಕಾಣುತ್ತಿದೆ

ಫೆಬ್ರ 17, 2018

ಹಾದಿ ತಪ್ಪುತ್ತಿರುವ ಚುನಾವಣಾ ಪ್ರಚಾರ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಅಂದುಕೊಂಡಂತೆಯೇ ಕರ್ನಾಟಕ ರಾಜ್ಯದ ಬರಲಿರುವ ಚುನಾವಣಾ ಪ್ರಚಾರದ ಹಾದಿ ತಪ್ಪುತ್ತಿದೆ. ಪ್ರಜಾಸತ್ತೆಯಲ್ಲಿ ಪ್ರತಿ ಐದು(ಕೆಲವು ಅಪವಾದಗಳನ್ನು ಹೊರತು ಪಡಿಸಿ)ವರುಷಗಳಿಗೊಮ್ಮೆ ಬರುವ ಚುನಾವಣೆಗಳು ರಾಜ್ಯದ ಪ್ರಗತಿಗೆ ಮತ್ತು ತನ್ಮೂಲಕ ಜನರ ಜೀವನ ಸುದಾರಿಸುವ ನಿಟ್ಟಿನಲ್ಲಿ ಬಹುಮಹತ್ವಪೂರ್ಣವಾಗಿದ್ದು, ನಿಷ್ಪಕ್ಷಪಾತವಾದ ಹಾಗು ವಿಷಯಾಧಾರಿತ ಚುನಾವಣೆಗಳು ಜನರ ಈ ಆಶಯವನ್ನು ಯಶಸ್ವಿಗೊಳಿಸುವುದು ಸಹಜ. ಇಂತಹ ಚುನಾವಣೆಗಳಲ್ಲಿ ಬಹಳ ಮುಖ್ಯವಾದ ಹಂತವೆಂದರೆ ಚುನಾವಣ ಪ್ರಚಾರವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವೈಯುಕ್ತಿಕವಾಗಿ ಅಭ್ಯರ್ಥಿಗಳು ಮತ್ತು ಸಮಗ್ರವಾಗಿ ರಾಜಕೀಯ ಪಕ್ಷಗಳು ಕೈಗೊಳ್ಳುವ ಚುನಾವಣಾ ಪ್ರಚಾರವೇ ಮುಖ್ಯವಾಗಿದ್ದು, ಇದು ಆಡಳಿತದ ಚುಕ್ಕಾಣಿ ಹಿಡಿಯಲಿರುವ ಪಕ್ಷವೊಂದನ್ನು ಆಯ್ಕೆ ಮಾಡಲು ಜನರಿಗೆ ನೆರವಾಗುತ್ತದೆ. ಅದರಲ್ಲೂ ಸಂಪೂರ್ಣವಾಗಿ ಸಾಕ್ಷರವಾಗದ ಇವತ್ತಿಗೂ ಶೇಕಡಾ 28ರಷ್ಟು ಅನಕ್ಷರಸ್ಥರನ್ನು ಹೊಂದಿರುವ ಕರ್ನಾಟಕದಂತಹ ರಾಜ್ಯದಲ್ಲಿ ಪಕ್ಷಗಳು ನಡೆಸುವ ಬಹಿರಂಗ ಪ್ರಚಾರಗಳೇ ಕನಿಷ್ಠ ಶೇಕಡಾ ಐವತ್ತರಷ್ಟು ಮತದಾರರನ್ನು ಪ್ರಭಾವಿಸುವ ಶಕ್ತಿ ಹೊಂದಿರುತ್ತದೆ. 

ಈ ಹಿನ್ನೆಲೆಯಲ್ಲಿ ಪ್ರತಿ ರಾಜಕೀಯ ಪಕ್ಷಗಳು ನಡೆಸುವ ಸಮಾವೇಶಗಳು, ಯಾತ್ರೆಗಳು, ಬಹಿರಂಗ ಸಭೆಗಳು, ರೋಡ್ ಶೋಗಳು ಮುಖ್ಯವಾಗಿದ್ದು, ಅವುಗಳ ನಾಯಕರುಗಳು ಮಾಡುವ ಸಾರ್ವಜನಿಕ ಬಾಷಣಗಳು ಜನರನ್ನು ತಲುಪುವ ಸುಲಭ ಮಾರ್ಗಗಳಾಗಿರುತ್ತವೆ. ಪಕ್ಷಗಳು ಹೊರತರುವ ಪ್ರಣಾಳಿಕೆಗಳು ಸಹ ಪಕ್ಷಗಳ ಸಿದ್ದಾಂತಗಳನ್ನು, ಅವು ಜನಕಲ್ಯಾಣಕ್ಕಾಗಿ ಜಾರಿಗೆ ತರಲು ಉದ್ದೇಶಿಸಿರಬಹುದಾದ ಹಲವು ಯೋಜನೆಗಳ ಮಾಹಿತಿಗಳನ್ನು ಜನತೆಗೆ ತಿಳಿಸುವಲ್ಲಿ ಯಶಸ್ವಿಯಾಗುತ್ತವೆ. ಹೀಗೆ ಸಂಸದೀಯ ಪ್ರಜಾಸತ್ತೆಯಲ್ಲಿ ನಮ್ಮನ್ನು ಅಳಲು ಇಚ್ಚಿಸುವ ರಾಜಕೀಯ ಪಕ್ಷಗಳು ಅಂತಿಮವಾಗಿ ಜನರನ್ನು ತಲುಪಲು ಅಗತ್ಯವಿರಬಹುದಾದ ಎಲ್ಲಾ ಮಾರ್ಗಗಳನ್ನೂ ಬಳಸುವುದು ಸಹಜ ಕ್ರಿಯೆ.

ಫೆಬ್ರ 15, 2018

ಮಿತ್ರಪಕ್ಷಗಳನ್ನು ನಿರ್ಲಕ್ಷಿಸುತ್ತಿರುವ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಾಜಪದ ಬಹುಮುಖ್ಯ ಮಿತ್ರಪಕ್ಷಗಳೆಂದರೆ ಶಿವಸೇನೆ, ಅಕಾಲಿದಳ ಮತ್ತು ತೆಲುಗುದೇಶಂ! ಇದೀಗ ಬಾಜಪದ ದೊಡ್ಡಣ್ಣನ ರೀತಿಯ ನಡವಳಿಕೆಯಿಂದ ಅದರ ಮಿತ್ರಪಕ್ಷಗಳಲ್ಲಿ ನಿದಾನವಾಗಿ ಅಸಮಾದಾನ ಹೊಗೆಯಾಡುತ್ತಿದ್ದು, 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಈ ಮೈತ್ರಿಕೂಟದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದರ ಬಗ್ಗೆ ಒಂದಿಷ್ಟು ನೋಡೋಣ:

ಚುನಾವಣೆಗಳನ್ನು ಗೆಲ್ಲಲು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಮಾಡಿಕೊಳ್ಳುವ ಮೂಲಕ, ತಮ್ಮ ಅಸ್ತಿತ್ವ ಇಲ್ಲದ ರಾಜ್ಯಗಳಲ್ಲಿ ಬೇರು ಬಿಡಲು ಪ್ರಯತ್ನಿಸುವುದು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಮಾಮೂಲಿ ವರಸೆಯಾಗಿದೆ. ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡ ನಂತರದಲ್ಲಿ ಎಂಭತ್ತರ ದಶಕದಿಂದೀಚೆಗೆ ಇಂತಹ ಮೈತ್ರಿಗಳು ಸರ್ವೇಸಾದಾರಣವಾಗಿವೆ. ತೊಂಭತ್ತರ ದಶಕದಲ್ಲಿ ರಾಷ್ಟ್ರದಾದ್ಯಂತ ಬಲಿಷ್ಠ ಶಕ್ತಿಯಾಗಿ ಬೆಳೆಯುತ್ತಿದ್ದ ತೃತೀಯ ರಂಗವನ್ನು ಇಲ್ಲವಾಗಿಸಲು ಕಾಂಗ್ರೆಸ್ ಮತ್ತು ಬಾಜಪಗಳು ನಿದಾನವಾಗಿ ತಮ್ಮ ಪ್ರಯತ್ನ ಪ್ರಾರಂಭಿಸಿದವು ತೃತೀಯ ರಂಗದ ಅಂಗಪಕ್ಷಗಳನ್ನು ( ಎಡಪಕ್ಷಗಳನ್ನು ಹೊರತು ಪಡಿಸಿ) ಒಂದೊಂದಾಗಿ ತಮ್ಮ ತೆಕ್ಕೆಗೆ ಸೆಳೆಯುತ್ತ ತಾವು ಗಟ್ಟಿಯಾಗಿ ಬೆಳೆಯುತ್ತ ಹೋದವು. 

ಜನ 27, 2018

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂದ ಹಾಗೆ ಬೆಕ್ಕು ಎಲ್ಲಿದೆ?

ಕು.ಸ.ಮಧುಸೂದನ ನಾಯರ್ ರಂಗೇನಹಳ್ಳಿ
ರಾಜ್ಯ ರಾಜಕಾರಣದಲ್ಲಿ ಇಂತಹದೊಂದು ಸನ್ನಿವೇಶ ಎದುರಾಗಬಹುದೆಂದು ಜನರಿರಲಿ, ನಮ್ಮ ಯಾವುದೇ ರಾಜಕೀಯ ಪಕ್ಷಗಳಾಗಲಿ ಅದರ ನಾಯಕರುಗಳೇ ಆಗಲಿ ನಿರೀಕ್ಷಿಸಿರಲಿಲ್ಲ. ಎಂಭತ್ತರ ದಶಕದ ನಂತರ ಮೊತ್ತಮೊದಲಬಾರಿಗೆ, ರಾಜ್ಯದ ವಿದಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆ ಮತ್ತು ರಾಜ್ಯ ರೈತರ ಸ್ವಾಭಿಮಾನದ ಪ್ರಶ್ನೆಯೊಂದು ಚುನಾವಣಾ ವಿಷಯವಾಗುವ ಸುವರ್ಣ ಅವಕಾಶವೊಂದು ಎದುರಾಗಿದೆ.

ಹಾಗಂತ ಈ ವಿಷಯಗಳು ಚುನಾವಣೆಯಲ್ಲಿ ಪ್ರಸ್ತಾಪವಾಗಲೇ ಬೇಕೆಂದೇನು ನಮ್ಮ ರಾಜಕೀಯ ಪಕ್ಷಗಳು ಬಯಸುತ್ತಿಲ್ಲ. ಆಕಸ್ಮಿಕವಾಗಿ ಜರುಗಿದ ಹಲವು ವಿದ್ಯಾಮಾನಗಳು ಕನ್ನಡದ ಮತ್ತು ರೈತರ ಸಮಸ್ಯೆಗಳನ್ನು ಹೆಚ್ಚೂ ಕಡಿಮೆ ಚುನಾವಣಾ ಪ್ರಚಾರದ ಕೇಂದ್ರಬಿಂದುವನ್ನಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಲೂ ನಮ್ಮ ರಾಜಕೀಯ ಪಕ್ಷಗಳು ಇವನ್ನು ಚುನಾವಣಾ ಪ್ರಚಾರದಿಂದ ದೂರವಿಡಲು ಪ್ರಯತ್ನಿಸುವುದು ಖಚಿತ. ಹಾಗಾಗಿ ಈಗ ಮುನ್ನೆಲೆಗೆ ಬಂದಿರುವ ಈ ವಿಚಾರಗಳನ್ನು ಚುನಾವಣೆಯ ಮುಖ್ಯ ವಿಚಾರಗಳನ್ನಾಗಿಸಿ ಮತದಾನ ಮಾಡಿಸಬೇಕಿರುವುದು ನಮ್ಮ ಕನ್ನಡಪರ ಸಂಘಟನೆಗಳ ಮತ್ತು ರೈತ ಸಂಘಟನೆಗಳ ಆದ್ಯ ಕರ್ತವ್ಯವಾಗಬೇಕಿದೆ.