ಜನ 11, 2017

ಡಿ.ಎಂ.ಕೆ.ಯ ಅರವತ್ಮೂರರ ಯುವನಾಯಕ ಸ್ಟಾಲಿನ್

ಸ್ಟಾಲಿನ್ ಮತ್ತು ಕರುಣಾನಿಧಿ (ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಕೊನೆಗೂ ಕರುಣಾನಿದಿಯವರ ಪುತ್ರರೂ ಡಿ.ಎಂ.ಕೆ.ಪಕ್ಷದ ಯುವ ನಾಯಕರೂ ಆದ ಶ್ರೀ ಸ್ಟಾಲಿನ್ ಅವರಿಗೆ ಪಕ್ಷದ ಕಾರ್ಯಾದ್ಯಕ್ಷ ಹುದ್ದೆ ಲಬಿಸಿದೆ. ಈ ಹುದ್ದೆಗೆ ನಿಜಕ್ಕೂ ಅರ್ಹರಾಗಿದ್ದ ಸ್ಟಾಲಿನ್ ಅವರಿಗೆ ಈ ಹುದ್ದೆ ಸಿಕ್ಕಿರುವುದು ಅವರ 63ನೇ ವಯಸ್ಸಿನಲ್ಲಿ ಎನ್ನುವುದೇ ವಿಷಾದದ ಸಂಗತಿಯಾಗಿದೆ. 1977ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸ್ಟಾಲಿನ್ ಎಂಭತ್ತರ ದಶಕದ ಉತ್ತರಾರ್ದದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡ ಸ್ಟಾಲಿನ್ ಅವರದು ಪಕ್ಷದ ಅದ್ಯಕ್ಷರಾಗುವ ತನಕದ ಹಾದಿ ಬಹಳ ಕಠಿಣವಾದದ್ದೇನು ಅಲ್ಲದಿದ್ದರೂ ಬಹಳ ಸಹನೆ ಬಯಸುವಂತಹದ್ದಾಗಿತ್ತು ಎನ್ನುವುದೇ ವಿಶೇಷ! ಇದಕ್ಕೆ ಕಾರಣ ಇಂಡಿಯಾದ ರಾಜಕಾರಣಿಗಳ ಪಟ್ಟಭದ್ರ ಮನಸ್ಥಿತಿ ಮತ್ತು ಪಾಳೇಗಾರಿಕೆಯ ನಡವಳಿಕೆಗಳೇ ಕಾರಣವೆಂದರೆ ತಪ್ಪಾಗಲಾರದು.

ಜನ 8, 2017

ಆರ್.ಬಿ.ಐಗೆ ಪಬ್ಲಿಕ್ ಅಕೌಂಟ್ಸ್ ಸಮಿತಿ ಕೇಳಿರುವ ಹತ್ತು ಪ್ರಶ್ನೆಗಳು.

ಕೆ.ವಿ. ಥಾಮಸ್ ನೇತೃತ್ವದ ಪಬ್ಲಿಕ್ ಅಕೌಂಟ್ಸ್ ಸಮಿತಿಯು ಆರ್.ಬಿ.ಐ ಗವರ್ನರ್ ಊರ್ಜಿತ್ ಪಟೇಲ್ ರವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಜನವರಿ 28ರಂದು ಸಮಿತಿಯ ಮುಂದೆ ಬಂದು ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ತಿಳಿಸಿದ್ದಾರೆ.

ಪ್ರಶ್ನೆ 1: ಕೇಂದ್ರ ಸಚಿವರಾದ ಪಿಯುಶ್ ಗೋಯಲ್ ರವರು ಸಂಸತ್ತಿನಲ್ಲಿ ನೋಟು ಅಮಾನ್ಯದ ನಿರ್ಧಾರವನ್ನು ತೆಗೆದುಕೊಂಡಿದ್ದು ಆರ್.ಬಿ.ಐ. ಸರಕಾರ ಅದರ ಸಲಹೆಯಂತೆ ಕೆಲಸ ಮಾಡಿತಷ್ಟೇ ಎಂದು ತಿಳಿಸಿದ್ದಾರೆ. ನೀವಿದನ್ನು ಒಪ್ಪುವಿರಾ?

ಪ್ರಶ್ನೆ 2: ನಿರ್ಧಾರ ಆರ್.ಬಿ.ಐದ್ದೇ ಎನ್ನುವುದು ಹೌದಾದರೆ ಭಾರತದ ಅನುಕೂಲಕ್ಕಾಗಿ ನೋಟು ಅಮಾನ್ಯಗೊಳಿಸುವ ನಿರ್ಧಾರವನ್ನು ಆರ್.ಬಿ.ಐ ತೆಗೆದುಕೊಂಡಿದ್ಯಾವಾಗ?

ನೀರುಗಂಟಿಗಳಿಗೆ ನ್ಯಾಯ ಸಿಗಲಿ.

ಎಸ್. ಅಭಿ ಹನಕೆರೆ
ನಿಮ್ಮ ಮನೆಗೆ ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲವೆಂದಾಗ ನೀರು ಬಿಡುವ ನೀರುಗಂಟಿಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತೀರಿ, ಅದೇ ಏನೂ ತೊಂದರೆ ಆಗದೆ ನಲ್ಲಿ ನೀರು ಬರುತ್ತಿದ್ದರೆ, ಅಪ್ಪಿ ತಪ್ಪಿಯೂ ಹೊಗಳುವುದಿಲ್ಲ. ಹೊಗಳಿಕೆ ತೆಗಳಿಕೆ ಪಕ್ಕಕ್ಕಿಟ್ಟು ಅವರಿಗೆ ಬರುತ್ತಿರುವ ಸಂಬಳ, ಅವರಿಗೆ ಸರ್ಕಾರ ಕೊಡುತ್ತಿರುವ ಸವಲತ್ತು, ಕೆಲಸ ನಿರ್ವಹಿಸುವಾಗ ಜೀವರಕ್ಷಕ ಸಾಧನಗಳಿಲ್ಲದೆಯೇ ಎಂತಹಾ ಕಠಿಣ ಪರಿಸ್ಥಿತಿಯಲ್ಲಿಯೂ ದುಡಿಯಬೇಕಾದ ಅನಿವಾರ್ಯತೆ, ಇವುಗಳನ್ನೆಲ್ಲಾ ಕೇಳುವಾಗ ಎಂಥವರಿಗೂ ಕಣ್ಣೀರು ಬರುತ್ತದೆ. ನಲ್ಲಿ ನೀರಿನಿಂದ ಉಪಯೋಗವಾದರೂ ಇದೆ, ಕಣ್ಣೀರಿನಿಂದ ಏನು ಪ್ರಯೋಜನ?

ಜನ 6, 2017

ಮುಂದಿನ ವಿದಾನಸಭಾ ಚುನಾವಣೆಯ ಹೊತ್ತಿಗೆ ಧೃವೀಕರಣಗೊಳ್ಳಲಿರುವ ಮೇಲ್ವರ್ಗಗಗಳು.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ವಿಷಯವಾಗಿ ನಾವೀಗ ಮಾತಾಡುವುದು ತೀರಾ ಅವಸರದ ವಿಚಾರವೆನಿಸಿದರು, ಇನ್ನು ಹದಿನೈದು ತಿಂಗಳಲ್ಲಿ ಬರಲಿರುವ ರಾಜ್ಯ ವಿದಾನಸಭಾ ಚುನಾವಣೆಗಳ ಹೊತ್ತಿಗೆ ಅಹಿಂದ ರಾಜಕಾರಣದ ವಿರುದ್ದ ಸೃಷ್ಠಿಯಾಗಬಹುದಾದ ಮೇಲ್ವರ್ಗದ ರಾಜಕಾರಣದ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಠಿಯಿಂದ ಇದನ್ನು ಬರೆಯಲೆಬೇಕಾಗಿದೆ.

ಕಳೆದ ಐದು ವರ್ಷಗಳಿಂದ ಅಂದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕ್ಷಣದಿಂದಲೇ ಹುಟ್ಟಿಕೊಂಡ ಅಹಿಂದಕ್ಕೆ ಪರ್ಯಾಯವಾದ ಒಂದು ರಾಜಕಾರಣ ಯಾವುದೇ ಗೊತ್ತು ಗುರಿಯಿಲ್ಲದೆ ನಡೆಯುತ್ತ ಬಂದಿದ್ದು, ಇದುವರೆಗೂ ಒಂದು ಪ್ರಬಲ ಪರ್ಯಾಯವಾಗಿ ಬೆಳೆದಿರಲಿಲ್ಲ. ಆದರೆ ವಿದಾನಸಭಾ ಚುನಾವಣೆಗಳು ಹತ್ತಿರವಾಗತೊಡಗಿದಂತೆ ಅಹಿಂದವನ್ನು ವಿರೋಧಿಸುವ ರಾಜಕೀಯ ಶಕ್ತಿಗಳಿಗೆ ತಾವು ಒಂದಾಗಿ ರಾಜಕೀಯ ಮಾಡುವ ಅನಿವಾರ್ಯತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ಆ ಶಕ್ತಿಗಳು ಕೆಲಸ ಮಾಡತೊಡಗಿವೆ. ಇದು ಕರ್ನಾಟಕದ ಮಟ್ಟಿಗೆ ಹೊಸ ಬೆಳವಣಿಗೆ ಏನಲ್ಲ.ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳಾಗಿದ್ದ ಶ್ರೀದೇವರಾಜ್ ಅರಸುರವರು ಜಾರಿಗೆ ತಂದ ಹಲವಾರು ಜನಪರ ಯೋಜನೆಗಳು ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯಹಿತಾಸಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದಾಗ ರಾಜ್ಯದ ಮೇಲ್ವರ್ಗಗಳು ಜನತಾ ಪರಿವಾರದ ರೂಪದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಕಾರಣವಾಗಿದ್ದವು.

ಡಿಸೆಂ 31, 2016

ಅಂಗಾಧಿಪತಿ

ಸವಿತ ಎಸ್ ಪಿ
ಬಾಲ್ಯದಿಂದಲೂ....
ನಿನ್ನ ಹುಟ್ಟಿನ ಬಗ್ಗೆ ಅಪರಿಮಿತ ಸಂತಾಪ...
ನಿನ್ನ‌ ಶ್ರದ್ಧೆ,ಗುರುಭಕ್ತಿಯ ಪ್ರಕೋಪ....
ಅಜರಾಮರ ಸ್ನೇಹದ ಬಗ್ಗೆ ಒಲುಮೆ
ನಿಸ್ವಾರ್ಥ ತ್ಯಾಗದ ಬಗ್ಗೆ ಹೆಮ್ಮೆ...
ಮುಂತಾಗಿ....
ಬೆಳೆಸಿಕೊಂಡ‌ ನನ್ನ ಯೋಚನಾಲಹರಿಯ 
ದಿಕ್ಕು ಬದಲಾಗಿದೆ....
ದುಷ್ಟರ‌ ಜೊತೆ‌ ಸೇರಿ ಅನ್ಯಾಯಕ್ಕೆ...
ಅಧರ್ಮಕ್ಕೆ.... 
ಪರೋಕ್ಷವಾಗಿಯಾದರೂ
‌ಕೈ ಜೋಡಿಸಿದೆಯಲ್ಲ.....
ಒಂದು ಹೆಣ್ಣಿನ ಮಾನಾಪಹರಣದ 
ಸಮಯದಲೂ ನೀ ಕೈಕಟ್ಟಿ ಕುಳಿತೆಯಲ್ಲ...
ಧರ್ಮದ ಬೆಳಕಲಿ ನೀ ನಡೆದಿದ್ದರೆ.....
ದುಷ್ಟರ ಕೂಟದಲಿ ಗುರುತಿಸಿಕೊಳ್ಳುವ
ದುರಾದೃಷ್ಟ ನಿನಗೆ ಒದಗುತ್ತಿರಲಿಲ್ಲ...
ಅಲ್ಲವೇ ದಾನಶೂರವೀರ‌ಕರ್ಣ...

ಡಿಸೆಂ 30, 2016

ಮೇಕಿಂಗ್ ಹಿಸ್ಟರಿ: ಸವಾಲು, ಭ್ರಾಂತಿ ಮತ್ತು ಬಿಕ್ಕಟ್ಟು

Saketh Rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬಂಡಾಯವನ್ನು ಹತ್ತಿಕ್ಕಲು ಕಾಸಾಮೈಯೂರ್ ಹತ್ತಲವು ಲೆಕ್ಕಾಚಾರಗಳನ್ನು ಮಾಡಿದ. ಮೊದಲಿಗೆ ಆತ ಸೈನ್ಯವನ್ನು ಪ್ರಮುಖ ಪಟ್ಟಣ ಮತ್ತು ಕೋಟೆಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಕಳುಹಿಸಿದ. ಆದರೆ ಸೈನ್ಯ ಅಲ್ಲಿಂದ ತೆರಳುತ್ತಿದ್ದಂತೆಯೇ ಪಟ್ಟಣ ಹಾಗೂ ಕೋಟೆಗಳು ಮರಳಿ ಗೆರಿಲ್ಲಾಗಳ ವಶವಾಗಿಬಿಡುತ್ತಿದ್ದವು. ಆದ್ದರಿಂದ ಆತ ಇನ್ನೂ ಹೆಚ್ಚಿನ ಸೈನ್ಯಕ್ಕಾಗಿ ವಿನಂತಿಸಿಕೊಂಡ, ಬ್ರಿಟೀಷ್ ಸೈನ್ಯವನ್ನು ಕರೆಸಿಕೊಂಡ ಮತ್ತು ನಿರಂತರವಾಗಿ ಸೈನ್ಯದ ಬಲವನ್ನು ಹತ್ತಿರತ್ತಿರ ಹತ್ತು ಸಾವಿರದಷ್ಟು ಹೆಚ್ಚಿಸಿದ, ಇದರಲ್ಲಿ ಅರ್ಧದಷ್ಟು ಸೈನಿಕರನ್ನು ಮೈಸೂರೇ ಪೂರೈಸಿತ್ತು. 

ಡಿಸೆಂ 27, 2016

ಸೀತಾ ಸ್ವಗತ

ಸವಿತ ಎಸ್ ಪಿ
ಬಿಲ್ಲ ಹೆದೆಯೇರಿಸಿ ನನ್ನ ವರಿಸಿದ 
ಸೀತಾರಾಮ‌....
ನಿನ್ನ ಅರಮನೆಗೆ, ಮನಕೆ ಬೆಳಕಾಗಿ, 
ಹೆಜ್ಜೆಗೆ ಹೆಜ್ಜೆ ಸೇರಿಸಿದ ನನಗೆ 
ನಿನ್ನ ಜೊತೆಗಿನ ವನವಾಸವೂ ಸಹ್ಯವಾಗಿತ್ತು...

ರಾಷ್ಟ್ರ ರಾಜಕಾರಣದತ್ತ ಮಮತಾ ಬ್ಯಾನರ್ಜಿ ಚಿತ್ತ!

ಕು.ಸ.ಮಧುಸೂದನ
ರಾಷ್ಟ್ರ ರಾಜಕೀಯದ ಇತ್ತಿಚೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು, ತೃಣಮೂಲ ಕಾಂಗ್ರೆಸ್ಸಿನ ನಾಯಕಿಯೂ ಆದ ಮಮತಾಬ್ಯಾನರ್ಜಿಯವರು ನಿದಾನವಾಗಿ ಆದರೆ ಬಹಳ ಎಚ್ಚರಿಕೆಯಿಂದ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವತ್ತ ಮನಸ್ಸು ಮಾಡಿರುವುದನ್ನು ಗಮನಿಸಬಹುದಾಗಿದೆ. ನೋಟ್ ಬ್ಯಾನಿನಂತಹ ಪ್ರಮುಖವಾದ, ಆದರೆ ಅಷ್ಟೇ ಸೂಕ್ಷ್ಮವಾದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಲುವುಗಳನ್ನು ಆಧರಿಸಿ ಈ ನಿರ್ದಾರಕ್ಕೆ ಬರಬಹುದಾಗಿದೆ. 

ಡಿಸೆಂ 23, 2016

ಮೇಕಿಂಗ್ ಹಿಸ್ಟರಿ: ಶತ್ರು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧವು ಅಳವಡಿಸಿಕೊಂಡ ಮತ್ತೊಂದು ಕ್ರಮವೆಂದರೆ ಶತ್ರು ಪಾಳಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು. 1833ರ ಮಾರ್ಚಿ ತಿಂಗಳಿನಲ್ಲಿ, ಬರ್ರಿನ ಸಿಪಾಯಿ ನದೀಮ್ ಖಾನ್, ಬ್ರಿಟೀಷ್ ಅಧಿಕಾರಿ ಮೇಜರ್ ಜೇಮ್ಸ್ ಮೇಲೆ ಬೆಂಕಿಪುರದಲ್ಲಿ (ಇವತ್ತಿನ ಭದ್ರಾವತಿ) ಅಂತಹುದೊಂದು ದಾಳಿಯನ್ನು ಆಯೋಜಿಸಿದ. ಮಾರ್ಚಿ 25ರ ರಾತ್ರಿ ಜೇಮ್ಸ್ ತನ್ನ ಟೆಂಟಿಗೆ ವಾಪಸ್ಸಾಗುವ ಸಮಯದಲ್ಲಿ, ಬಂಧನಕ್ಕೊಳಗಾಗುವ ಮುನ್ನ ನದೀಮ್ ಖಾನ್ ತನ್ನ ಖಡ್ಗದಿಂದ ಅವನ ತೋಳ ಮೇಲೆ, ತಲೆಯ ಮೇಲೆ ದಾಳಿ ನಡೆಸಿದ, ತದನಂತರ ನದೀಮ್ ಖಾನನನ್ನು ನೇಣಿಗೇರಿಸಲಾಯಿತು. (166) 

ಡಿಸೆಂ 22, 2016

ಸುಪ್ತಭಾವ

ಸವಿತ ಎಸ್ ಪಿ
ಹುಣ್ಣಿಮೆ ಚಂದಿರನ
ಮನೋಹರ ರೂಪ
ನೆನಪಿಸಿಹುದು ಏನನು
ನಿನ್ನ ಮುದ್ದುಮೊಗವನು....

ತಂಪು ತಂಗಾಳಿ ಸುಳಿದಾಡಿ
ಶೀತಲ ಸ್ಪರ್ಶ‌ದಲೂ