ನವೆಂ 8, 2016
ನವೆಂ 6, 2016
ನವೆಂ 5, 2016
ನವೆಂ 4, 2016
ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 3
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ. ರೈತರ ವರ್ಗ ಬೇಡಿಕೆಗಳು
ಬುಡಿ ಬಸಪ್ಪ 1830ರಲ್ಲಿ ನಗರದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿದ್ದ. ತನ್ನ ಪ್ರತಿನಿಧಿಯಾಗಿ ಮಾನಪ್ಪನನ್ನು ನೇಮಿಸಿದ್ದ. ಮಾನಪ್ಪನನ್ನು ಬುಡಿ ಬಸಪ್ಪನ “ಪ್ರಧಾನ ದಂಡನಾಯಕ”ನೆಂದೂ ಕರೆಯಲಾಗುತ್ತಿತ್ತು. (96)
ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ 1830ರ ಆಗಷ್ಟ್ 23ರಂದು ರ್ಯಾಲಿಗೆ ಕರೆ ನೀಡಲಾಗಿತ್ತು. ಸಾವಿರಾರು ರೈತರು ಅದರಲ್ಲಿ ಭಾಗವಹಿಸಿದರು. ನೂರಾರು ಎತ್ತಿನಗಾಡಿಗಳು ಹೊಸಂತೆಯ ಮೈದಾನವನ್ನು ತುಂಬಿದವು ಎಂದು ರಾಮಭಟ್ಟ ಬರೆಯುತ್ತಾರೆ. ರೈತರು ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಬಂದಿದ್ದರು.
ನವೆಂ 3, 2016
ಸರ್ಜಿಕಲ್ ಸ್ಟ್ರೈಕ್ ರಾಜಕೀಯ.
ಸಾಂದರ್ಭಿಕ ಚಿತ್ರ. |
ಡಾ.ಅಶೋಕ್.ಕೆ.ಆರ್
ಯಾವುದು ನಡೆಯಬಾರದಿತ್ತೋ ಅದೇ ನಡೆಯುತ್ತಿದೆ. ಸೈನಿಕ ಕಾರ್ಯಾಚರಣೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ದುರ್ನಡೆಯನ್ನು ನಾನಂತೂ ಇಲ್ಲಿಯವರೆಗೆ ಕಂಡಿರಲಿಲ್ಲ. ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಅತೀವ ಆಸಕ್ತಿ ತೋರುತ್ತಿದೆ. ಈ ಆಸಕ್ತಿಗೆ ಕಾರಣ ಬಾಗಿಲಲ್ಲೇ ಇರುವ ಹಲವು ರಾಜ್ಯಗಳ ಚುನಾವಣೆ. ಅದರಲ್ಲೂ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ. ಸೈನಿಕರ ಬಗ್ಗೆ ಸೈನ್ಯದ ಬಗ್ಗೆ ಯಾವುದೇ ರೀತಿಯ ಪ್ರಶ್ನೆ ಕೇಳುವುದು, ಸೈನಿಕರ ಉಪಟಳಗಳ ಬಗ್ಗೆ ಮಾತಾಡುವುದು, ಅದನ್ನು ಖಂಡಿಸುವುದೇ ದೇಶದ್ರೋಹ ಎನ್ನುವಂತಹ ವಾತಾವರಣವನ್ನೂ ಸೃಷ್ಟಿಸಲಾಗುತ್ತಿದೆ. ಸೈನಿಕರೆಂದರೆ ಪ್ರಶ್ನಾತೀತರೇ? ಸೈನ್ಯವನ್ನು ಹೊಗಳುವುದಷ್ಟೇ ದೇಶಪ್ರೇಮವೇ? ಎಲ್ಲಕ್ಕಿಂತ ಮುಖ್ಯವಾಗಿ ಸೈನಿಕ ಕಾರ್ಯಾಚರಣೆಯನ್ನು ರಾಜಕೀಯ ಪಕ್ಷವೊಂದು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡ ನವ ಭಾರತದ ‘ದೇಶಭಕ್ತ’ರ ದೃಷ್ಟಿಯಲ್ಲಿ ದೇಶದ್ರೋಹವೇ ಹೌದು.
ಅಕ್ಟೋ 31, 2016
ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ - ಸಾಧಕ ಬಾಧಕಗಳು: ಒಂದು ವಿಶ್ಲೇಷಣೆ.
ಲೋಕಸಭೆ ಮತ್ತು ದೇಶದ ಎಲ್ಲಾ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದು ಸೂಕ್ತವೆಂಬ ಶಿಫಾರಸ್ಸನ್ನು ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ನೀಡುವುದರ ಮೂಲಕ ಈ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಗೆ, ಮತ್ತೊಂದಿಷ್ಟು ವಿವಾದಗಳಿಗೆ ನಾಂದಿ ಹಾಡಿದೆ. ಈ ಹಿಂದೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಹ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರ್ಯಾರೂ ಅದರ ಬಗ್ಗೆ ಅಷ್ಟೊಂದು ಗಂಬೀರವಾಗೇನು ಚರ್ಚೆ ಮಾಡಲು ಹೋಗಲಿಲ್ಲ. ಆದರೆ ಇದೀಗ ಚುನಾವಣಾ ಆಯೋಗವೇ ಇಂತಹದೊಂದು ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತ, ಕಾನೂನು ಇಲಾಖೆಗೆ ಈ ಬಗ್ಗೆ ತನ್ನ ಒಪ್ಪಿಗೆಯನ್ನು ಸೂಚಿಸಿರುವುದರಿಂದ ಏಕಕಾಲದ ಚುನಾವಣೆಯ ವಿಷಯವನ್ನು ಚರ್ಚಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. ಆದರೆ ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸರ್ವಾನುಮತದ ಒಪ್ಪಿಗೆಯೂ ಬೇಕೆಂಬ ಮಾತನ್ನೂ ಆಯೋಗವು ಒತ್ತಿ ಹೇಳಿದೆ.
ಅಕ್ಟೋ 28, 2016
ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 2
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಮೊದಲ ಅಲೆ: ಕೂಟವೆಂಬ ಸಾಮೂಹಿಕ ಎಚ್ಚರಿಕೆ
ಹೋರಾಟವು ಮೂರು ಅಲೆಗಳಾಗಿ ನಡೆಯಿತು. ಮೊದಲನೆಯದು ಸಾಮೂಹಿಕ ಚಳುವಳಿ; ಎರಡನೆಯದು ಸಾಮೂಹಿಕ ಕಾರ್ಯ, ಮತ್ತು; ಮೂರನೆಯದರಲ್ಲಿ ಸಶಸ್ತ್ರ ಹೋರಾಟ ಪ್ರಮುಖವಾಗಿತ್ತು.
ಸಾಮೂಹಿಕ ಚಳುವಳಿ ಮತ್ತು ಹೋರಾಟಗಳು 1830ರ ಮೊದಲ ಭಾಗದಲ್ಲೇ ಪ್ರಾರಂಭವಾಯಿತು ಮತ್ತು ಹಲವಾರು ರೂಪಗಳನ್ನು ಪಡೆಯಿತು. ಇವೆಲ್ಲವುಗಳಲ್ಲಿ ಪ್ರಮುಖವಾಗಿದ್ದದ್ದು ಕೂಟ ಅಥವಾ ಸರಳವಾಗಿ ಹೇಳಬೇಕೆಂದರೆ ಜೊತೆ ಸೇರುವಿಕೆ. ಕೂಟದಲ್ಲಿ ಜೊತೆಯಾದ ಕಾರಣದಿಂದ ಸಾಮೂಹಿಕ ಎಚ್ಚರ ಹೊತ್ತಿಕೊಂಡಿತು, ಇದು ಜನಸಮೂಹವನ್ನು ಸಂಘಟತಿರಾಗಿಸುವುದಕ್ಕಿದ್ದ ವಿಶಾಲ ವೇದಿಕೆ. ನಗರದ ಕ್ರಾಂತಿಯ ಸಮಯದಲ್ಲಿ ಕೂಟವು ಸ್ವಾಭಾವಿಕವಾಗಿ ರೂಪುಗೊಂಡಿತು ಎಂದು ತೋರುತ್ತದೆಯಾದರೂ, ಶ್ಯಾಮ ಭಟ್ಟರು ಕರಾವಳಿಯಲ್ಲಿ ನಡೆಸಿರುವ ಅಧ್ಯಯನವು ಕೂಟ ರಚನೆಯು ಕರ್ನಾಟಕದಲ್ಲಿ ಪುರಾತನವಾಗಿದ್ದ ಒಂದು ಪದ್ಧತಿ ಮತ್ತು ಸಾಮಾನ್ಯ ವಿಚಾರವೆಂದು ತಿಳಿದುಬರುತ್ತದೆ. ಹೋರಾಟಗಳು ಸ್ವಾಭಾವಿಕವಾಗಿದ್ದಿರಬಹುದು, ಕೂಟಗಳ ರಚನೆ ತುಂಬ ಅಭಿವೃದ್ಧಿಗೊಂಡ ಪದ್ಧತಿಯಾಗಿತ್ತು. ಇದೇನನ್ನು ತೋರಿಸುತ್ತದೆಯೆಂದರೆ, ರೈತಾಪಿ ವರ್ಗವು ತನ್ನ ವರ್ಗ ಹೋರಾಟದ ದೀರ್ಘೇತಿಹಾಸದಲ್ಲಿ ಮತ್ತು ಬಂಡಾಯಗಳಲ್ಲಿ, ಊಳಿಗಮಾನ್ಯತೆ ವಿರೋಧಿ ಹೋರಾಟದ ಇತಿಹಾಸದ ಭಾಗವಾಗಿ, ಅಳವಡಿಸಿಕೊಂಡಿದ್ದ ಚಳುವಳಿಯ ರೂಪಗಳು ಈ ಹೊಸ ಕಾಲಘಟ್ಟದಲ್ಲೂ ಮುಂದುವರೆಯಿತು ಮತ್ತು ಅದೇ ಸಮಯದಲ್ಲಿ ವಸಾಹತುಶಾಹಿಯನ್ನು ಪ್ರಶ್ನಿಸಲಾರಂಭಿಸಿತು.
ಅಕ್ಟೋ 26, 2016
ಇಂಡಿಯಾದ ಪ್ರಜಾಪ್ರಭುತ್ವದ ಎರಡು ಮುಖ್ಯ ಸಮಸ್ಯೆಗಳು: ಜಾಗತೀಕರಣ ಮತ್ತು ಭಯೋತ್ಪಾದಕತೆ!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದ ಪ್ರಜಾಪ್ರಭುತ್ವಕ್ಕೀಗ ಸರಿ ಸುಮಾರು ಅರವತ್ತೇಳರ ಹರಯ! ಎರಡನೆಯ ಮಹಾಯುದ್ದ ಮುಗಿದ ಕೆಲವೇ ವರ್ಷಗಳಲ್ಲಿ ನಾವು ಪಡೆದ ಸ್ವಾತಂತ್ರ ಇಂಡಿಯಾದ ಜನರಿಗೆ ಪ್ರಜಾಪ್ರಭುತ್ವದಲ್ಲಿ ಬಾಗವಹಿಸುವ ಸೌಭಾಗ್ಯವನ್ನು ಕಲ್ಪಿಸಿದ್ದು ಅಂದಿನ ರಾಷ್ಟ್ರ ನಾಯಕರುಗಳ ಹಿರಿಮೆಯೆಂದೇ ಹೇಳಬೇಕು. ಯಾಕೆಂದರೆ ಅದಾಗ ತಾನೇ ವಿಶ್ವದ ಪಾಲಿಗೆ ಸಿಂಹಸ್ವಪ್ನರಾಗಿ, ಸರ್ವಾಧಿಕಾರಿಗಳಾಗಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ ಮತ್ತುಇಟಲಿಯ ಮುಸಲೋನಿಯವರ ಅಂತ್ಯವಾಗಿದ್ದರೂ ಅವರು ಬಿತ್ತಿಹೋಗಿದ್ದ ರಾಷ್ಟ್ರೀಯವಾದಗಳಾಗಲಿ, ಜನಾಂಗೀಯ ಶ್ರೇಷ್ಠತೆಯ ವ್ಯಸನಗಳಾಗಲಿ ಜನತೆಯ ಮನಸ್ಸಿಂದ ಪೂರ್ಣವಾಗಿ ಮರೆಯಾಗಿರಲಿಲ್ಲ. ಇದರ ಜೊತೆಗೆ ಅಂದಿನ ವಿಶ್ವದ ಪ್ರಬಲ ಶಕ್ತಿಶಾಲಿ ರಾಷ್ಟ್ರವಾಗಿದ್ದ ಸೋವಿಯತ್ ಯೂನಿಯನ್ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟಿದ್ದು, ಪ್ರಪಂಚದ ಇತರೇ ರಾಷ್ಟ್ರಗಳಲ್ಲಿಯೂ ಕಮ್ಯುನಿಸ್ಟ್ ಸರಕಾರಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿತ್ತು. ಇಂಡಿಯಾದ ಆಚೆಗೆ ಇಂತಹ ಫ್ಯಾಸಿಸ್ಟ್ ಸಿದ್ದಾಂತಗಳು, ಕಮ್ಯುನಿಸ್ಟ್ ಸಿದ್ದಾಂತಗಳು ಪ್ರಬಲವಾಗಿದ್ದ ಕಾಲದಲ್ಲಿ ಇಂಡಿಯಾದಂತಹ ಬಹುಮುಖ ಸಂಸ್ಕೃತಿಯ ರಾಷ್ಟ್ರವೊಂದು ಇವ್ಯಾವುದರ ಪ್ರಬಾವಕ್ಕೂ ಒಳಗಾಗದೆ ತನ್ನನ್ನು ಆಳುತ್ತಿದ್ದ ವಸಾಹತುಶಾಹಿ ರಾಷ್ಟ್ರವಾದ ಇಂಗ್ಲೇಂಡಿನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದು ವಿಶೇಷವೇ ಸರಿ. ಈ ವಿಷಯದಲ್ಲಿ ನಾವು ಒಂದು ಹಂತದವರೆಗೂ ಅದೃಷ್ಠಶಾಲಿಗಳೇ ಸರಿ. ಅಕಸ್ಮಾತ್ ಅಂದು ಈ ಪ್ರಜಾಪ್ರಭುತ್ವ ಶೈಲಿಯನ್ನು ಒಪ್ಪಿಕೊಳ್ಳದೇ ಹೋಗಿದ್ದಲ್ಲಿ ಇವತ್ತು ಇಂಡಿಯಾ ದೇಶ ಒಂದು ಸಮಗ್ರ,ಸಾರ್ವಭೌಮ ರಾಷ್ಟ್ರವಾಗಿ ಬದುಕುಳಿಯಲು ಸಾದ್ಯವಿರಲಿಲ್ಲ.
ಅಕ್ಟೋ 25, 2016
ಬಲಾಢ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡಬಾಷಿಕ ಸಮುದಾಯ ಮತ್ತು ಕನ್ನಡ ಚಳುವಳಿ!
ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ.
ಅಕ್ಟೋ 24, 2016
ರಾಮಾ ರಾಮಾ ರೇ: ಹುಟ್ಟು ಸಾವಿನ ನಡುವಿನ ಬದುಕಿನ ಪಯಣ.
ಡಾ. ಅಶೋಕ್. ಕೆ. ಆರ್.
ಸಂಪಿಗೆಯಂಥ ಸಂಪಿಗೆ ಥೀಯೇಟರ್ರಿನ ಬಾಲ್ಕಾನಿ ಹೆಚ್ಚು ಕಡಿಮೆ ಪೂರ್ತಿ ತುಂಬಿಹೋಗಿತ್ತು. ಈ ರೀತಿ ತುಂಬಿ ಹೋಗಿದ್ದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಎಂದರದು ಉತ್ಪ್ರೇಕ್ಷೆಯಲ್ಲ. ಪ್ರಚಾರವಿರಲಿ, ಶುಕ್ರವಾರದ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡದ ರಾಮಾ ರಾಮಾ ರೇ ಚಿತ್ರ ಸಾಮಾಜಿಕ ಜಾಲತಾಣಗಳಿಲ್ಲದ ಸಮಯದಲ್ಲಿ ಬಿಡುಗಡೆಗೊಂಡಿದ್ದರೆ ಒಂದೇ ದಿನಕ್ಕೆ ಚಿತ್ರಮಂದಿರಗಳಿಂದ ಮರೆಯಾಗಿಬಿಡುತ್ತಿತ್ತು. ಸಾಮಾಜಿಕ ಜಾಲತಾಣಗಳು ಜನರನ್ನೇನೋ ಚಿತ್ರಮಂದಿರಕ್ಕೆ ಸೆಳೆದು ತಂದಿದೆ, ಅವರಿಗೆ ತಲುಪಿದೆಯಾ? ಹೇಳುವುದು ಕಷ್ಟ. ಇಂಟರ್ವೆಲ್ಲಿನಲ್ಲಿ ‘ಯಾವ್ದಾರಾ ನಾರ್ಮಲ್ ಪಿಚ್ಚರ್ರಿಗೆ ಕರ್ಕೊಂಡ್ ಹೋಗು ಅಂದ್ರೆ ಇದ್ಯಾವ ಫಿಲಮ್ಮಿಗೆ ಕರ್ಕಂಡ್ ಬಂದಪ್ಪ’ ‘ಮನೇಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಬರ್ತಿತ್ತು. ಅಲ್ಲೇ ಇದ್ದಿದ್ರೆ ಆಗಿರಾದು’ ಅನ್ನೋ ಮಾತುಗಳು ಕೇಳಿಬಂದರೆ ಚಿತ್ರ ಮುಗಿದ ನಂತರ ‘ಫಸ್ಟ್ ಆಫ್ ಸ್ವಲ್ಪ ಬೋರು ಸೆಕೆಂಡ್ ಆಫ್ ಅದ್ಭುತ’ ಅನ್ನುವಂತಹ ಮಾತುಗಳು! ಇಪ್ಪತ್ತೆಂಟಕ್ಕೆ ಇರೋ ಬರೋ ಥಿಯೇಟರುಗಳಿಗೆಲ್ಲ ‘ಮುಕುಂದ ಮುರಾರಿ’ ‘ಸಂತು’ ಚಿತ್ರಗಳು ಬರುತ್ತಿವೆ. ಆ ಚಿತ್ರಗಳಬ್ಬರವನ್ನೆದುರಿಸಿ ರಾಮಾ ರಾಮಾ ರೇ ನಿಲ್ಲಬಲ್ಲದಾ? ಕಷ್ಟವಿದೆ. ಕಾದು ನೋಡುವ!