ಸೆಪ್ಟೆಂ 4, 2015

ಸ್ವಾಮ್ಗಳ್ ಮಾತ್ಗಳು!

raghaweshwara swamy rape case
ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಪ್ರಕರಣ ದಾಖಲಿಸಿದ ಮಹಿಳೆಯ ವೈದ್ಯಕೀಯ ಪರೀಕ್ಷೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಡೆಯುತ್ತಿದೆ. ಸ್ವಾಮಿಗಳ ಹೆಸರು ಕೆಡಿಸಲು ಮತ್ತೊಂದು ಪ್ರಯತ್ನವಿದು ಎಂಬ ಅಭಿಪ್ರಾಯಕ್ಕೇನೂ ಕೊರತೆಯಿಲ್ಲ. ಆ ಮಹಿಳೆಯ ಜೊತೆ ದೂರು ಕೊಡಲು ಹೋಗಿದ್ದ ಜನವಾದಿ ಸಂಘಟನೆಯ ವಿಮಲಾ “ರಾಘವೇಶ್ವರ ಸ್ವಾಮಿಗಳ ಮೇಲೆ ಮೊದಲು ಕೇಸು ಹಾಕಿದ್ದು ಪ್ರೇಮಲತಾ. ಅವರಿಗೆ ನ್ಯಾಯ ಸಿಕ್ಕಿದೆಯಾ? ಸಾಕ್ಷಿ ಸಂಗ್ರಹ ಅದೂ ಇದೂ ಅಂತ ದೇಶ ಪೂರ್ತಿ ತಿರುಗಿಸುತ್ತಿದ್ದಾರೆ. ಅವರ ಮನೆಯವರಿಗೆ ಕೊಡಬಾರದ ಕಷ್ಟಗಳನ್ನೆಲ್ಲ ಕೊಡುತ್ತಿದ್ದಾರೆ. ಇವೆಲ್ಲವನ್ನೂ ಕೇಳಿ ನೋಡಿದ ಮೇಲೆಯೂ ಒಂದು ಹೆಣ್ಣುಮಗಳು ಸುಖಾಸುಮ್ಮನೆ ಸ್ವಾಮಿಗಳ ಮೇಲೆ ಕಂಪ್ಲೇಂಟ್ ಕೊಟ್ಟು ತೊಂದರೆಗ್ಯಾಕೆ ಒಳಗಾಗುತ್ತಾಳೆ?” ಎಂದು ಪ್ರಶ್ನಿಸುತ್ತಾರೆ. ಅತ್ಯಾಚಾರದ ದೂರು ನೀಡಿದಾಕ್ಷಣ ಪೋಲೀಸರೇನು ಇತರೆ ಅತ್ಯಾಚಾರ ಪ್ರಕರಣಗಳಲ್ಲಿ ಮಾಡುವಂತೆ ಓಡಿಹೋಗಿ ಸ್ವಾಮೀಜಿಯನ್ನು ಬಂಧಿಸಿಲ್ಲ. ಕಾರಣ ಇಲ್ಲಿ ಎಲ್ಲರೂ ಸಮಾನರು ಕೆಲವರು ಹೆಚ್ಚು ಸಮಾನರು!

ಇವೆಲ್ಲದರ ಮಧ್ಯೆ ವಾಟ್ಸಪ್ಪಿನಲ್ಲಿ ರಾಘವೇಶ್ವರ ಸ್ವಾಮೀಜಿಗಳದ್ದು ಎನ್ನಲಾದ ಧ್ವನಿಮುದ್ರಿಕೆಯೊಂದು ಹರಿದಾಡುತ್ತಿದೆ. ತಮ್ಮ ಶಿಷ್ಯ ರಾಮಚಂದ್ರ ಎಂಬುವವರೊಡನೆ ಅವರಾಡಿರುವ ಮಾತುಗಳು ಸ್ವಾಮೀಜಿಯೆಂದರೆ ದೈವಾಂಶ ಸಂಭೂತವೆಂದುಕೊಂಡವರಿಗೆ ಕಪಾಳ ಮೋಕ್ಷ ಮಾಡಿದಂತಿದೆ. ಅವರಿಗೂ ಭಯವಿದೆ, ತಮ್ಮ ಸ್ಥಾನ ಗಟ್ಟಿಯಾಗಿಲ್ಲವೆಂಬ ಗಾಬರಿಯಿದೆ, ಕೋಪ – ತಾಪವಿದೆ, ತಮ್ಮ ಪ್ರಭಾವ ಬಳಸಿ ಏನನ್ನಾದರೂ ಅರಗಿಸಿಕೊಳ್ಳುವೆನೆಂಬ ಅಹಂಭಾವವೂ ಇದೆ. ಆ ಧ್ವನಿಮುದ್ರಿಕೆಯ ಮಾತುಗಳಿವು:

“ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ…. ಈ ದಾರಿ ನಾವೇ ನಿಮಗೆ ಹೇಳಿಕೊಟ್ಟಿದ್ದೀವಿ. ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ. ಇರಲಿ. 

ಅದು ಅವರ ಜಾತಿ ಸ್ವಭಾವ ಅದು ಜನ್ಮ ಸ್ವಭಾವ ಅದು.

ನಮ್ಮ ಸಮಸ್ಯೆ ಇರೋದು ನಮ್ಮ ಜೊತೆಗೆ ಇರೋರ ಬಗ್ಗೆ. ಬಸ್ ಸ್ಟ್ಯಾಂಡಿನಲ್ಲಿ ಬಾಯಿಗೆ ಬಂದಂತೆ ಮಾತಾಡ್ತಿರೋವಾಗ ನಿಮ್ಮ ಪೌರುಷ ಎಲ್ಲಿತ್ತು. ಶಿಷ್ಯರುಗಳ ಪೌರುಷ ಎಲ್ಲಿತ್ತು ಅಂತ. ನಮ್ಮ. . . . ನಮ್ಮ ಧ್ವನಿ ಅರ್ಥ ಮಾಡ್ಕೋ ರಾಮಚಂದ್ರ.

ಸಮಾಜವನ್ನ ಉದ್ಧಾರ ಮಾಡೋ ಕೆಲ್ಸ ನಮ್ದು. ಆದರೆ ಗುರುಪೀಠ ಕಾದುಕೊಳ್ಳೋ ಕೆಲ್ಸ ನಿಮ್ದು. ಧರ್ಮೋ ರಕ್ಷತಿ ರಕ್ಷಿತಃ.

ಲಂಕೇಶ್ ಪತ್ರಿಕೆ ಜೊತೆಗೆ ನಾವ್ ಹೋರಾಟ ಮಾಡೋಕೆ ಸಾಧ್ಯ ಇಲ್ಲಾ. ಬೀದಿ ಬಸವರಿಗೆ ನಾವ್ ಉತ್ತರ ಕೊಡ್ಲಿಕ್ಕೆ ಸಾಧ್ಯ ಇಲ್ಲ. ನೀನ್ ಉತ್ರ ಕೊಡ್ಬೇಕು ಅದಕ್ಕೆ.

ಎಲ್ಲಿದ್ರೀ ನೀವು? ನಿಮ್ಮ ಗುರುವನ್ನು ವಾಚಾಮಾಗೋಚರವಾಗಿ ನಿಂದೆ ಮಾಡುವಾಗ ಸಾಮೂಹಿಕ ನಾಶ ಮಾಡೋ ರೀತಿಯಲ್ಲಿ ಸಮಾಜದಲ್ಲಿ ಒಂದು …. ಈ ರೀತಿ ಅಡೆತಡೆ……ಎಲ್ಲಿದ್ರಿ ನೀವು?

ನಾವ್ ಕೇಳ್ತಿರೋ ಪ್ರಶ್ನೆ ಅದು. ನಮಗೆ….ನಮ್ ಸಾಮರ್ಥ್ಯ ಕಡಿಮೆ ಆಗಲಿಲ್ಲ. ನಿನಗ್ ಹೇಳ್ತೇನ್ ಕೇಳು.

ಜೀವನಪರ್ಯಂತ ಇಂಥಾ ಸಂಗ್ರಾಮಗಳನ್ನ ಎದುರಿಸ್ತೇವೆ ನಾವು. ಇಡೀ ಜಗತ್ತು ಮುಗಿದು …. ಮುರಿದುಬಿದ್ರೂ ಕೂಡ ಎದುರಿಸ್ತೇವೆ ನಾವು. ಆ ಛಾತಿ ಇದೆ ನಮಗೆ ಇವತ್ತೂ ಕೂಡ. ಯಾರಿಗಾಗಿ ಅನ್ನೋ ಪ್ರಶ್ನೆ ನಮಗೆ. ಯಾರಿಗಾಗಿ? ಯಾರ ಜೊತೆ ಮಾಡಬೇಕು ಸಂಗ್ರಾಮವನ್ನು? ನಾವಾಗ್ಲೇ ಹೇಳಿದ್ವು. ಹೊರಗಿನವರ್ಯಾರ ಜೊತೇನೂ ಸಂಗ್ರಾಮ ಮಾಡೋ ಸಂದರ್ಭ ಅಲ್ಲ ಇದು. ಒಳಗಿನವರ ಜೊತೆ ಮಾಡಬೇಕಾದ ಸಂಗ್ರಾಮ ಉದ್ಭವವಾಗಿಬಿಟ್ಟಿದೆ.

ನಿನಗೆ ಬೇಕು ಅಂತ ನಮಗ್ ಗೊತ್ತಾಗೋದ್ ಹ್ಯಾಗೆ? ಗುರು ಪೀಠ ಬೇಕು ಅಂತ ಗೊತ್ತಾಗೋದ್ ಹ್ಯಾಗೆ?

ಹಾಗಾಗಿ ಒಂದು ವಿಷಯ ಪುನಃ ಸ್ಪಷ್ಟಪಡಿಸುತ್ತೇನೆ. ಯಾರೋ ವಿರೋಧ ಮಾಡಿದ್ರು ನಿಂದನೆ ಮಾಡಿದ್ರು ಅಂತ ನಾವ್ ಹೆದರಿ ಹೊರಡ್ತಾ ಇರೋದ್ ಅಲ್ಲ. ಸಾಮರ್ಥ್ಯ ಕಡಿಮೆ ಆಗಿಲ್ಲ ಅಥವಾ ಅನುಭವ ಕಡಿಮೆ ಆಗಿಲ್ಲ. ಅವತ್ತು ನಮಗೇನ್ ಅನುಭವ ಇತ್ತೋ ಅದಕ್ಕಿಂತ ಹೆಚ್ಚೆಚ್ಚು ಅನುಭವ ಇದೆ, ಇವತ್ತಿದೆ.

ಇಂಥದನ್ ನಿಭಾಯಿಸಕ್ಕೆ ಬೇಕಾದಂತಹ ಎಲ್ಲವೂ ನಮ್ಮತ್ರ ಇದೆ. ಮಾಡಬೇಕಾ? ಯಾರಿಗಾಗಿ ಮಾಡಬೇಕು? ಯಾರಿಗಾಗ್ ಮಾಡಬೇಕೋ ಅವರೆಲ್ಲಾ ಕೂತ್ಕೊಂಡಿದ್ದಾರೆ ಅವರ ಜೊತೆಗೆ ….. ಅಲ್ಲ ಸುಮ್ನಿದ್ದಾರೆ”

‘ಎರಡನೇದ್ ಸತ್ಯ’

“ಉಳಿಸಿಕೊಳ್ಳುವ ಪ್ರಯತ್ನ ನೀವ್ ಮಾಡದಿದ್ರೆ ಉಳಿಯೋದಿಲ್ಲ. ನೀವ್ ಉಳಿಸ್ಕೊಂಡ್ರೆ ಉಳೀತದೆ ಇದು. ಒಂದು ನಿಮಗೆ ನಾವ್ ಪುನಃ ಪುನಃ ಸ್ಪಷ್ಟಪಡಿಸ್ತೀನಿ. ಇವತ್ತಿನವರೆಗೂ ಸಾರಥ್ಯವನ್ನು ನಾವೇ ಮಾಡಿದ್ದೇವೆ. ಸಂಗ್ರಾಮವನ್ನೂ ನಾವೇ ಮಾಡಿದ್ದೇವೆ. ಇನ್ನು ಎರಡೂ ಆಗ್ಲಿಕ್ಕಿಲ್ಲ. ನಿಮ್ ಕೆಲ್ಸ ನೀವ್ ಮಾಡಿ. ಪುನಃ ಹೇಳ್ತೇವೆ. ಸಮಾಜಕ್ಕೆ ಬೇಕಾದ್ ಎಲ್ಲಾನೂ ನಾವ್ ಮಾಡ್ತೇವೆ. ಆದ್ರೆ ಈ ವಿರೋಧದ ಅಲೆಗಳು ಏಳ್ತಾವಲ್ಲ ನೀವದನ್ನ ಎದುರಿಸಿ. ಅದು ನಿಮ್ ಕೆಲ್ಸ ಅದು. ನಿಮಗ್ ಬಂದ್ರೆ ನಾವ್ ನೋಡ್ಕೊಳ್ತೇವೆ. ಈ ಸಮಾಜದ ಕೊನೆಯ ಮಗುವಿಗೆ ಒಂದ್ ಆಪತ್ತು ಬಂದ್ರೆ ನಾವ್ ನಿಂತು ಮೊದಲು, ಆ ಮಗುವಿಗಿಂತ ಮೊದ್ಲು, ಏಟು ನಮಗ್ ಬೀಳ್ಬೇಕು. ಮುಂದೆ ನಿಂತು ಮಾತಾಡ್ತೇವೆ. ಆದ್ರೆ ಪೀಠ ಕಾಪಾಡೋ ಕೆಲ್ಸ ಯಾರದ್ದು? ಪೀಠದ ಮರ್ಯಾದೆ ಕಾಪಾಡೋ ಕೆಲ್ಸ ಯಾರದ್ದು? ಬರ್ತಾ ಬರ್ತಾ ನಮಗ್ ಅಭ್ಯಾಸ ಆಗೋಯ್ತಲ್ಲ ಅಂತ.

ಅದೇನ್ ವಿಷಯ ಲಂಕೇಶಲ್ಲಿ ಬಂದ್ರೇನು, ಹಾಯ್ ಬೆಂಗಳೂರಲ್ಲಿ ಬಂದ್ರೇನು ಇವನ್ ಮಾತಾಡಿದ್ರೇನು ಅವನ್ ಮಾತಾಡಿದ್ರೇನು ಅನ್ನೋ ತರಹ ಆದ್ರೆ…..ನೋಡು ರಾಮಚಂದ್ರ ಕೆಲ್ಸ ಮಾಡೋಕ್ ಒಂದ್ ವಾತಾವರಣ ಬೇಕು. ಆ ವಾತಾವರಣ ಇಲ್ದೆ ಕೆಲ್ಸ ಮಾಡ್ಲಿಕ್ಕೆ ಸಾಧ್ಯ ಇಲ್ಲ.

ನಾವೆಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ಎಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ನಾವೆಲ್ಲಿರ್ತೇವೆ ಅಲ್ಲಿ ಕೆಲ್ಸ ಆಗತ್ತೆ ತಮ್ಮಷ್ಟಕ್ಕೆ.

ಇಂಥದೇ ಸಾಮ್ರಾಜ್ಯಾನ ರಾಜಸ್ಥಾನದಲ್ಲಿ ಕಟ್ಬೋದು. ನೆನಪಿರಲಿ. ಸವಾಲಾಗಿ ಹೇಳ್ತಿದ್ದೇವೆ ನಾವು. ಇವತ್ತೇನ್ ಸಾಮ್ರಾಜ್ಯ ಇದೆ ನಮ್ದು ಇಂಥದೇ ಸಾಮ್ರಾಜ್ಯವನ್ನ ರಾಜಸ್ಥಾನಕ್ಕೆ ಹೋಗಿ ಕಟ್ತೇವೆ ನಾವು ಬೇಕಿದ್ರೆ. ಬಿಹಾರಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ಬಂಗಾಳಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ನಿಮಗ್ ಗೊತ್ತಿರ್ಲಿ, ಬೆಂಗ್ಳೂರಲ್ಲಿ ಎಷ್ಟು ದೊಡ್ಡ ಒಂದು ವಲಯ ಇದೆ ನಮ್ದು ಅದಕ್ಕಿಂತ ದೊಡ್ಡ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಶ್ರೀಮಂತರಲ್ಲಿ ಶ್ರೀಮಂತರಿಂದ ಬಡವರಲ್ಲಿ ಬಡವರವರೆಗೆ ಬೆಂಗ್ಳೂರಿಗಿಂತ ಪೀಠಕ್ಕೆ ಶರಣಾಗಿರುವಂತಹ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಸಾಮರ್ಥ್ಯ ಕಡಿಮೆಯಾಗಿ ಅಧ್ಯೆರ್ಯದಿಂದ ಆಡ್ತಿರೋ ಮಾತಲ್ಲ ಇದು. ನಿಮಗೆ ಬೇಕಾ ಅಂತಾ?”

‘ಶ್ರೀಗಳೋರು ಕ್ಷಮಿಸಬೇಕು. ನನಗರ್ಥ ಆಯ್ತು ಧಣಿ. ನನಗರ್ಥ ಆಯ್ತು ಧಣಿ’

ಸೆಪ್ಟೆಂ 3, 2015

ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

Muzaffarnagar baaqi hai
Dr Ashok K R
ದೃಶ್ಯ 1: 
ಪುಟ್ಟ ಹುಡುಗನನ್ನು ಸಂದರ್ಶನಕಾರರು ಮಾತನಾಡಿಸುತ್ತಿರುತ್ತಾರೆ. ಬಾಗಿಲ ಹೊರಗೆ ಗೋಡೆಗೊರಗಿಕೊಂಡು ನಿಂತಿರುತ್ತಾನೆ ಹುಡುಗ. ನಿಮ್ಮ ಊರು ಬಿಟ್ಟು ಇಲ್ಲಿಗ್ಯಾಕೆ ಬಂದೆ ಎನ್ನುತ್ತಾನೆ ಸಂದರ್ಶಕ. ‘ನಮ್ಮ ಮನೆ ಅಂಗಡಿಗೆಲ್ಲ ಬೆಂಕಿ ಹಚ್ಚಿಬಿಟ್ಟಿದ್ದರು. ಅದಕ್ಕೆ ಇಲ್ಲಿಗೆ ಬಂದೆ’.
‘ಶಾಲೆಗೆ ಹೋಗುತ್ತಿದ್ದಾ ಅಲ್ಲಿ’
‘ಹ್ಞೂ’
‘ಈಗ ಹೋಗ್ತಿಲ್ವಾ ಶಾಲೆಗೆ’
‘ಇಲ್ಲ’
‘ಯಾಕೆ’
ಹುಡುಗ ಒಂದರೆಕ್ಷಣ ಯೋಚಿಸುತ್ತಾನೆ ‘ಹೋಗ್ತೀನಿ ಇನ್ಮೇಲೆ’ ಎಂದ್ಹೇಳಿ ಒಳಗೋಡುತ್ತಾನೆ. ಒಂದೇ ಕೋಣೆಯ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ ಅಮ್ಮ. ‘ಅಮ್ಮ ಅಮ್ಮ ನಾನು ಶಾಲೆಗೆ ಹೋಗ್ತೀನಲ್ವಾ’ ಎಂದು ಕೇಳುತ್ತಾನೆ. ಅಮ್ಮನ ಬಳಿ ಸರಿಯಾದ ಉತ್ತರವಿರುವುದಿಲ್ಲ.
ದೃಶ್ಯ 2:
ರೈತರ ಸಂಘಟನೆಯ ಮುಖಂಡನೊಡನೆ ಮಾತುಕತೆ. ‘ಕಬ್ಬಿಗೆ ಬೆಲೆ ಸಿಕ್ಕಿಲ್ಲವಲ್ಲ ಯಾಕೆ?’
‘ಪ್ರತಿ ವರ್ಷ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಹೋರಾಟ ಮಾಡುತ್ತಿದ್ದೋ. ಕಾರ್ಖಾನೆಯವರು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿದ್ದರು’
‘ಈಗ’
‘ಈಗೆಲ್ಲಿ ಗಲಭೆ ನಡೆದ ನಂತರ ರೈತರೆಲ್ಲ ಮುಸ್ಲಿಂ ಜಾಟ್, ಹಿಂದೂ ಜಾಟ್ ಆಗಿಬಿಟ್ಟಿದ್ದಾರೆ. ರೈತ ಹೋರಾಟ ಹಳ್ಳಹಿಡಿದಿದೆ. ಮೊದಲು ಮುಸ್ಲಿಮರು ಅಲ್ಲಾಹೋ ಅಕ್ಬರ್ ಅಂದ್ರೆ ಹಿಂದೂ ಹರಹರ ಮಹಾದೇವ್ ಅಂತ ಪ್ರತಿಕ್ರಿಯಿಸುತ್ತಿದ್ದ. ಈಗ ಹರಹರ ಮಹಾದೇವ್ ಅಷ್ಟೇ ಉಳಿದಿದೆ. ಅದೂ ಇಲ್ಲ ಹರಹರ ಮೋದಿ ಅಷ್ಟೇ ಉಳಿದಿದೆ.
Muzaffarnagar baaqi hai
ಗಲಭೆಗೆ ಬಲಿಯಾದ ಬಾಲ್ಯ
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯ ಬಗ್ಗೆ ನಕುಲ್ ಸಿಂಗ್ ಸಾಹ್ನಿ ತೆಗೆದಿರುವ ‘ಮುಜಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಎರಡು ದೃಶ್ಯಗಳಿವು. ಇಡೀ ಕೋಮುಗಲಭೆಯಿಂದ ಅನ್ಯಾಯಕ್ಕೊಳಗಾದವರಾರೆಂದು ಈ ಎರಡೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ. ಬಾಲ್ಯ ಕಳೆದುಕೊಂಡ ಮಕ್ಕಳು, ಹಕ್ಕಿನ ಹೋರಾಟ ಕಳೆದುಕೊಂಡ ರೈತರು ಇಡೀ ಕೋಮುಗಲಭೆಯೆಂಬ ಪೂರ್ವನಿಯೋಜಿತ ಹಿಂಸಾ ನಾಟಕದಿಂದ ನೊಂದವರು. ಕೋಮುಗಲಭೆಯ ಸಂದರ್ಭವನ್ನನುಸರಿಸಿ ತೆಗೆಯುವ ಸಾಕ್ಷ್ಯಚಿತ್ರಗಳು ಒಂದು ಧರ್ಮದ ಪರವಾಗಿ ಮತ್ತೊಂದು ಧರ್ಮದ ವಿರುದ್ಧವಾಗಿ ವಾದ ಮಂಡಿಸಿಬಿಡುವ ಸಾಧ್ಯತೆಗಳೇ ಹೆಚ್ಚು. ತಮಗೆ ಬೇಕಾದವರ ಮಾತುಗಳನ್ನಷ್ಟೇ ಚಿತ್ರೀಕರಿಸಿಕೊಂಡು ತಮ್ಮಲ್ಲಿರುವ ಸ್ಥಾಪಿತ ಸತ್ಯಕ್ಕೆ ಮತ್ತಷ್ಟು ಪುರಾವೆಗಳನ್ನು ಸೃಷ್ಟಿಸಿಕೊಳ್ಳುವುದು ಸುಲಭದ ಕೆಲಸ. ಮನಸ್ಸಿನಲ್ಲಿ ಸ್ಥಾಪಿತವಾದ ಸತ್ಯಗಳನ್ನೆಲ್ಲ ತೊಡೆದುಹಾಕಿ ಹೊಡೆದವರ ಹೊಡೆಸಿಕೊಂಡವರನ್ನೆಲ್ಲಾ ಚಿತ್ರಿಸಿ ಕಣ್ಣಿಗೆ ಕಾಣಿಸುವ ಸತ್ಯದ ಹಿಂದಿರುವ ಸತ್ಯಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಈ ಸಾಕ್ಷ್ಯಚಿತ್ರ ಮಾಡಿದೆ. 
Muzaffarnagar riots documentary
ಧರ್ಮ ರಕ್ಷಿಸುವ ಕೆಲಸ...

ಮುಜಾಫರ್ ನಗರ ಗಲಭೆಯಲ್ಲಿ ಹಿಂದೂಗಳು ಹೊಡೆಯುವವರಾಗಿದ್ದರು, ಮುಸ್ಲಿಮರು ಹೊಡೆಸಿಕೊಂಡವರಾಗಿದ್ದರು. ಬಹುತೇಕ ಎಲ್ಲಾ ನಿರಾಶ್ರಿತರ ಶಿಬಿರಗಳು ಮುಸ್ಲಿಮರದೇ ಆಗಿತ್ತು. ಒಂದೇ ಒಂದು ನಿರಾಶ್ರಿತ ಶಿಬಿರ ಹಿಂದೂಗಳಿಗಿತ್ತು. ಅಲ್ಲಿಗೆ ಮುಸ್ಲಿಮರು ತಮ್ಮ ಕೈಲಾದ ಮಟ್ಟಿಗೆ ಹಿಂಸೆಯಲ್ಲಿ ಪಾಲ್ಗೊಂಡಿದ್ದು ನಿಚ್ಚಳವಾಗಿತ್ತು. ಆ ಹಿಂದೂ ನಿರಾಶ್ರಿತ ಶಿಬಿರದಲ್ಲಿದ್ದವರೆಲ್ಲ ಕೂಲಿ ನಾಲಿ ಮಾಡುತ್ತಿದ್ದ ದಲಿತರು. ಇನ್ನು ಮುಸ್ಲಿಂ ನಿರಾಶ್ರಿತ ಶಿಬಿರಗಳಲ್ಲೂ ಹೆಚ್ಚಿನ ಸಂಖೈಯಲ್ಲಿದ್ದಿದ್ದು ಕೂಲಿ ಕಾರ್ಮಿಕರೇ. ಐವತ್ತು ಚಿಲ್ಲರೆ ಬಾಗಿಲಿದ್ದ ಮನೆಯ ಒಡೆಯರು, ಸಣ್ಣ ಪುಟ್ಟ ಅಂಗಡಿ ನಡೆಸುತ್ತಿದ್ದವರು ಕೂಡ ಬೀದಿಗೆ ಬಿದ್ದಿದ್ದರು. ಒಂದು ಕೋಮುಗಲಭೆಗೆ ಎರಡೂ ಕೋಮಿನ ಜನರ ತಪ್ಪುಗಳಿರುವುದೇ ಅಧಿಕ. ಮುಜಾಫರ್ ನಗರದಲ್ಲೂ ಹಾಗೆಯೇ ಆಗಿತ್ತೆ? 

ಎಳೆಎಳೆಯಾಗಿ ಕೋಮುರಾಜಕಾರಣದ ಬಿಡಿಸುತ್ತಾ ಸಾಗುತ್ತದೆ ಸಾಕ್ಷ್ಯಚಿತ್ರ. ಮುಜಾಫರ್ ನಗರದ ಗಲಭೆಗೆ ಆರು ತಿಂಗಳ ಹಿಂದೆಯವರೆಗೂ ಆ ಪ್ರದೇಶದಲ್ಲಿನ ಪ್ರಮುಖ ಪತ್ರಿಕೆಗಳು ರಾಜಕೀಯದ, ಸಮಾಜದ ಸಂಕಟಗಳ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುತ್ತಿರುತ್ತವೆ. ಆರು ತಿಂಗಳಿನಿಂದ ಬಹುತೇಕ ಪತ್ರಿಕೆಗಳಲ್ಲಿ ‘ಒಂದು ಕೋಮಿನ ಹುಡುಗ ಮತ್ತೊಂದು ಕೋಮಿನ ಹುಡುಗಿಯನ್ನು ಚುಡಾಯಿಸಿದ’ ಎನ್ನುವುದೇ ವಿವಿಧ ರೀತಿಯಲ್ಲಿ ಮರುಪ್ರಕಟವಾಗುತ್ತಿರುತ್ತದೆ. ಅಷ್ಟೊಂದು ಪ್ರಕರಣಗಳು ನಡೆದವಾ ಎಂದು ಗಮನಿಸಿದರೆ ಇಲ್ಲವೆಂಬ ಉತ್ತರ ಸಿಗುತ್ತದೆ. ಇದರ ಜೊತೆಜೊತೆಗೆ ಲವ್ ಜಿಹಾದ್ ಎಂಬ ಭೂತವನ್ನು ತೋರಿಸಿ ಬೆದರಿಸಲಾಗುತ್ತದೆ. ಹಿಂದೂ ಸಂಘಟನೆಯೊಂದರ ಮುಖಂಡನನ್ನು ಇದರ ಬಗ್ಗೆ ಸಂದರ್ಶಿಸಿದಾಗ ಆತ ಲವ್ ಜಿಹಾದ್ ಇದೆ ಎನ್ನುತ್ತಾನೆ. ‘ಸರಿ. ಲವ್ ಜಿಹಾದ್ ಇಂದ ತೊಂದರೆಗೊಳಗಾದ ಒಂದು ಹುಡುಗಿಯ ಕುಟುಂಬವನ್ನು ಪರಿಚಯಿಸಿ’ ಎಂದು ಸಂದರ್ಶನಕಾರ ಕೇಳಿಕೊಂಡಾಗ ತನ್ನ ಶಿಷ್ಯರಿಗೆ ಹಲವು ಫೋನ್ ಮಾಡುತ್ತಾನೆ. ಆ ಹುಡುಗಿ ಈಗ ಇಲ್ಲ, ಅವರ ಕುಟುಂಬ ಊರು ಬಿಟ್ಟಿದೆ, ಅವರು ಮಾತನಾಡಲು ತಯಾರಿಲ್ಲ ಎಂಬಂತಹ ಉತ್ತರಗಳೇ ದೊರಕುತ್ತವೆ. ಒಟ್ಟಿನಲ್ಲಿ ಒಂದು ಗಲಭೆಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಮುಜಾಫರ್ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ರಾಜಕೀಯ ಭಾಷಣಗಳಲ್ಲಿ ಎಲ್ಲರೂ ಪರಧರ್ಮ ನಿಂದನೆಯನ್ನೇ ಪ್ರಮುಖವಾಗಿಸಿಕೊಂಡುಬಿಡುತ್ತಾರೆ. ಕೊನೆಗೆ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದನ್ನು ನೆಪವಾಗಿಸಿಕೊಂಡು ಮುಸ್ಲಿಂ ಹುಡುಗನನ್ನು ಸಾಯುವವರೆಗೆ ಹೊಡೆಯುತ್ತಾರೆ. ಇತ್ತ ಮುಸ್ಲಿಮರು ಆ ಹಿಂದೂ ಹುಡುಗರಲ್ಲಿಬ್ಬರನ್ನು ಹೊಡೆದು ಸಾಯಿಸುತ್ತಾರೆ. ಕೋಮುಗಲಭೆ ಹೊತ್ತಿಕೊಳ್ಳಲು ಇದಕ್ಕಿಂತ ಹೆಚ್ಚು ಕಾರಣ ಬೇಕೆ? ಅದೂ ಗಲಭೆಯ ಆಟವಾಡಲು ಭೂಮಿಕೆ ಸಿದ್ಧವಾಗಿರುವಾಗ? ಕೋಮುಗಲಭೆಯ ಜ್ವಾಲೆಗಳು ಎಲ್ಲೆಡೆ ಹರಡಲು ವಾಟ್ಸಪ್ಪು ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹುಡುಗರಿಬ್ಬರನ್ನು ಸಾಯಿಸಿದ ವೀಡಿಯೋ ಕೂಡ ಪ್ರಮುಖ ಕಾರಣ. ಬಿಜೆಪಿಯ ನಾಯಕರೂ ಈ ವೀಡಿಯೋವನ್ನು ಹಂಚುತ್ತಾರೆ. ಅಸಲಿಗೆ ಆ ವೀಡಿಯೋ ಪಾಕಿಸ್ತಾನದಲ್ಯಾವಗಲೋ ಚಿತ್ರಿತವಾಗಿದ್ದು ಎಂಬ ಸಂಗತಿ ತಿಳಿಯುವುದರೊಳಗೆ ಹಿಂಸೆ ವ್ಯಾಪಕವಾಗಿ ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ. ಒಂದು ಊರಿನ ಬೀದಿಯಲ್ಲಿನ ಎರಡು ಅಂಗಡಿಯ ಮೇಲೆ ಹಿಂದೂ ಹೆಸರಿದೆ. ಮಧ್ಯದ ಅಂಗಡಿಯ ಮೇಲೆ ಮುಸ್ಲಿಂ ಹೆಸರಿದೆ. ಹಿಂದೂ ಅಂಗಡಿಗಳು ಸುರಕ್ಷಿತವಾಗಿದ್ದರೆ ಮುಸ್ಲಿಂ ಅಂಗಡಿ ಸುಟ್ಟು ಕರಕಾಲಗಿರುವ ದೃಶ್ಯ ಇಡೀ ಮುಜಾಫರ್ ನಗರ ಗಲಭೆಯಲ್ಲಿ ಹಾನಿಗೀಡಾದವರು ಯಾರು ಎನ್ನುವುದನ್ನು ತಿಳಿಸಿಬಿಡುತ್ತದೆ. 
muzaffarnagar baaqi hai
ಒಂದು ಬದಲಾವಣೆಗೆ ಪ್ರಯತ್ನಿಸುವವರು.....
ಸಂತ್ರಸ್ತರ ಗೋಳು, ರಾಜಕಾರಣಿಗಳ ಕಪಟ ಮಾತುಗಳು, ಮತಾಂಧ ಸಂಘಟನೆಯ ಕಾರ್ಯಕರ್ತರ ಅಟ್ಟಹಾಸದ ನಡುವೆ ಅಲ್ಲಲ್ಲಿ ಇದ್ದಕ್ಕಿದ್ದಂತೆ ರೈತ, ಕಬ್ಬು, ಆಲೆಮನೆ, ಸಕ್ಕರೆ ಕಾರ್ಖಾನೆಗಳನ್ನು ತೋರಿಸುತ್ತಾರೆ. ಕೋಮುಗಲಭೆಯಲ್ಲಿ ರೈತನ ಚಿತ್ರಣವ್ಯಾಕೆ ಎನ್ನುವುದಕ್ಕೆ ಉತ್ತರ ಸಾಕ್ಷ್ಯಚಿತ್ರ ಸಾಗಿದಂತೆ ತಿಳಿಯುತ್ತದೆ. ರೈತನಾಗಿದ್ದ ರೈತನಲ್ಲಿ ಮುಸ್ಲಿಂ ರೈತ ಹಿಂದೂ ರೈತ ಎಂಬ ಭಿನ್ನಾಭಿಪ್ರಾಯ ಮೂಡುತ್ತದೆ. ಜೊತೆಜೊತೆಯಾಗಿದ್ದವರೇ ಹೊಡೆದಾಡಿಕೊಳ್ಳುತ್ತಾರೆ. ಧರ್ಮಭೇದವಿಲ್ಲದೇ ಒಂದಾಗಿದ್ದ ರೈತ ಸಂಘಟನೆಗಳು ಧರ್ಮಾಧಾರಿತವಾಗಿ ವಿಭಜಿತವಾಗಿ ಬಿಟ್ಟ ಮೇಲೆ ಎಲ್ಲಿಯ ರೈತ ಹೋರಾಟ? ‘ಗಲಭೆಯಿಂದ ಹೆಚ್ಚು ಲಾಭ ಪಡೆದುಕೊಂಡಿದ್ದು ಸಕ್ಕರೆ ಕಾರ್ಖಾನೆಗಳು. ಅವರು ಕೊಟ್ಟಷ್ಟೇ ದುಡ್ಡಿಗೆ ನಾವೀಗ ಕಬ್ಬು ಹೊಡೆಯಬೇಕು. ಯಾಕೆಂದರೆ ನಮ್ಮಲ್ಲೀಗ ಹೋರಾಟವಿಲ್ಲ. ಮುಸ್ಲಿಂ ರೈತ ಬಂದರೆ ಹಿಂದೂ ಬರೋದಿಲ್ಲ, ಹಿಂದೂ ಬಂದರೆ ಮುಸ್ಲಿಂ ಬರೋದಿಲ್ಲ’ ಎಂದೊಬ್ಬ ಬೆಳೆಗಾರ ಹೇಳುವ ದೃಶ್ಯ ಒಂದು ಗಲಭೆಯ ದುರ್ಬಾಹುಗಳು ಎಲ್ಲಿಯವರೆಗೆ ಚಾಚಲು ಸಾಧ್ಯ ಎಂದು ತಿಳಿಸುತ್ತದೆ. ಅಯೋಧ್ಯಾ ಗಲಭೆಯ ಸಂದರ್ಭದಲ್ಲೂ ಶಾಂತವಾಗಿದ್ದ ಹಳ್ಳಿಗಳಲ್ಲಿ ಈ ಬಾರಿ ಗಲಭೆ ನಡೆಯಿತು. ಇದೆಲ್ಲದರ ಲಾಭ ಪಡೆದಿದ್ಯಾರು? 

ಇವೆಲ್ಲದರ ಆಯೋಜಕ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಎಂದು ನಿಸ್ಸಂಶಯವಾಗಿ ಹೇಳಬಹುದು. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಪ್ರಾಮುಖ್ಯತೆ ಜಾಸ್ತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹತ್ತು ಸ್ಥಾನಗಳನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಎಲ್ಲ ಗಲಭೆಯ ನಂತರ ನಡೆದ ಚುನಾವಣೆಯಲ್ಲಿ ಬರೋಬ್ಬರಿ ಎಪ್ಪತ್ತು ಸ್ಥಾನಗಳಲ್ಲಿ ಗೆದ್ದು ಬೀಗಿತು. ಅದು ನಡೆಸಿದ ಕೋಮುಗಲಭೆಯ ರಾಜಕೀಯ ಧರ್ಮಾಧಾರಿತವಾಗಿ ಹಿಂದೂಗಳೆಲ್ಲರೂ ಬಿಜೆಪಿಗೆ ಮತ ಹಾಕುವಂತೆ ಮಾಡಿತು. ಮುಸ್ಲಿಮರ ಪರ ಎಂಬ ಸೋಗಿನ ಸಮಾಜವಾದಿ ಪಕ್ಷ ನಿರಾಶ್ರಿತ ಶಿಬಿರಗಳಲ್ಲಿರುವ ಜನರ ಸಂಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುವುದನ್ನು ಬಿಟ್ಟು ನಿರಾಶ್ರಿತ ಶಿಬಿರಗಳನ್ನೇ ರಾತ್ರೋರಾತ್ರಿ ಬೀಳಿಸಿ ನಿರಾಶ್ರಿತರನ್ನು ಮತ್ತೊಮ್ಮೆ ಬೀದಿಗೆ ತಳ್ಳಿದರು. ‘ದೀದಿ ಒಮ್ಮೆ ಗಲಭೆಯಲ್ಲಿ ತೊಂದರೆಗೊಳಗಾದವರನ್ನು ಭೇಟಿಯಾಗಿಬಿಟ್ಟಿದ್ದರೆ ಎಲ್ಲೆಡೆಯೂ ಅವರೇ ಗೆಲ್ಲುತ್ತಿದ್ದರು. ಅವರ ಸುತ್ತಲಿರುವ ಮೂವರು ಬ್ರಾಹ್ಮಣರು ನಮ್ಮನ್ನವರು ಭೇಟಿಯಾಗಲು ಬಿಡಲಿಲ್ಲ’ ಎಂದು ಮಾಯವತಿಯ ಬಿ.ಎಸ್.ಪಿಯ ಸೋಲನ್ನು ಅಲ್ಲಿಯವರು ವಿಶ್ಲೇಷಿಸುತ್ತಾರೆ. ಒಂದು ಅಪಾಯಕಾರಿ ಗಲಭೆಯನ್ನು ಪ್ರಾಯೋಜಿಸಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗುತ್ತದೆ ಬಿಜೆಪಿ. ಈ ಎಲ್ಲಾ ರಾಜಕಾರಣಿಗಳ ನಡುವೆ ಭಗತ್ ಸಿಂಗನ ಒಂದು ಫೋಟೋ ಹಿಡಿದುಕೊಂಡು ಐದು ಹುಡುಗರು ಹಳ್ಳಿ ಹಳ್ಳಿ ತಿರುಗುತ್ತಾರೆ. ವಸ್ತುಸ್ಥಿತಿಯನ್ನು ವಿವರಿಸುತ್ತಾರೆ. ಗಲಭೆಯ ದೆಸೆಯಿಂದ, ಕೋಮು ರಾಜಕಾರಣದ ದೆಸೆಯಿಂದ ಹೇಗೆ ಊರಿನ ನಿಜವಾದ ಸಮಸ್ಯೆಗಳು ಚರ್ಚೆಗೇ ಬರದೆ ಹೋಗುತ್ತಿದೆ ಎಂದು ವಿವರಿಸಿ ಹೇಳುತ್ತಾರೆ. ಹೌದೆಂದು ತಲೆಯಾಡಿಸುವ ಜನ ಧರ್ಮಾಧಾರಿತವಾಗಿ ಮತ ಚಲಾಯಿಸುತ್ತಾರೆ....... ಉಳುವುದಕ್ಕೆ ಭೂಮಿಗೆ ಕಾಲಿಟ್ಟ ರೈತನಿಗೆ ಧರ್ಮವಿಲ್ಲ; ಕೋಮುಗಲಭೆಯ ದೆಸೆಯಿಂದ ಈಗಾತ ಒಬ್ಬಂಟಿ......

ಒಂದು ಸಶಕ್ತ ಸಾಕ್ಷ್ಯಚಿತ್ರವಿದು. ಪ್ರಮುಖ ಅಂಶಗಳ ಬಗ್ಗೆಯಷ್ಟೇ ಇಲ್ಲಿ ಬರೆದಿದ್ದೇನೆ. ಇಡೀ ಸಾಕ್ಷ್ಯಚಿತ್ರದಲ್ಲಿ ಸತ್ಯದ ಮಾತನಾಡುವವರು ಮಹಿಳೆಯರು. ಗಂಡಸರ ದ್ವಂದ್ವಗಳನ್ನವರು ಈಚೆಗೆಳೆಯುತ್ತಾರೆ! ಭಯೋತ್ಪಾದನೆ, ಉಗ್ರತೆಗಳೆಲ್ಲವೂ ಮುಸ್ಲಿಮರದೇ ಕೃತ್ಯ, ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಲು, ಉಗ್ರಗಾಮಿಗಳಾಗಲು ಸಾಧ್ಯವೇ ಇಲ್ಲ ಎಂದಿನ್ನೂ ನಂಬುವವರು ಈ ಸಾಕ್ಷ್ಯಚಿತ್ರವನ್ನು ನೋಡಲೇಬೇಕು. ಕೈಯಲ್ಲಿ ಬಂದೂಕು ಹಿಡಿದವ ಮಾತ್ರ ಭಯೋತ್ಪಾದಕನಲ್ಲ, ಮನಸ್ಸಿನ ತುಂಬ ನಂಜು ತುಂಬಿಕೊಂಡು ಅನ್ಯಧರ್ಮದವನ ಮನೆ ಸುಡಲೆಂದೇ ಜೇಬಿನಲ್ಲೊಂದು ಬೆಂಕಿಪಟ್ಟಣ ಇಟ್ಟುಕೊಂಡವನೂ ಭಯೋತ್ಪಾದಕನೇ ಎಂಬ ಸತ್ಯದ ಅರಿವಾಗುತ್ತದೆ.
ಟ್ರೇಲರ್ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಬರ

ಮೌನಯೋಗಿ
ಬಿಸಿದ ಬುವಿಗೆ
ಮೋಡ ಬಸಿದು ಹನಿಯಾಗದೆ
ಕಾರ್ಮೋಡ ಕಗ್ಗತ್ತಲು ಕವಿಯುವ ಮುನ್ನ


ಕನಸ ಕಡಲೋಳ್
ನವೆ ನೂಕುವ ಭಾರ
ಹನಿ ನೀರಿಗೂ ಇಲ್ಲಿ ತತ್ವಾರ

ಮುಸುಕು ತೆಗೆ ತಾಯೆ
ಹಸಿವೆಯ ಹದ್ದು
ಹರಿದು ನುಂಗುವ ಮುನ್ನ

ಶೋಷಣೆಯ ಮುಸುಕ ಸರಿಸಲು
ಬುದ್ಧ, ಬಸವರ ಪ್ರಯತ್ನವೆಷ್ಟೊ
ಕಷ್ಟಕೂಟಲೆಗಳ ಜೀವಿತ

ವ್ಯರ್ಥವಾಗಿ ಹೋಯಿತೆ
ದಾಸ ಶ್ರೇಷ್ಠರ ಹೋರಾಟ
ಸಂಘಟನೆಗಳ ಹಮ್ಮೀರರ ಹಾರಾಟ ಚೀರಾಟ

ಸ್ನೇಹ ಸೌಹಾರ್ದತೆಯ ಬೀಜ
ಬಿದ್ದು ಬೆಳೆಯಲಿ ಇಲ್ಲಿ
ಶೋಷಣೆ ರಹಿತ ಸಮಾಜ ನಿರ್ಮಾಣವಾಗಲಿ.
ಸಾಂದರ್ಭಿಕ ಚಿತ್ರ: ಅಂತರ್ಜಾಲ

ಸೆಪ್ಟೆಂ 1, 2015

ದುಡ್ಡಿನರಮನೆಯಲ್ಲಿ ಕಳೆದುಹೋಗಿರುವ ಮಾಧ್ಯಮ ಸಂವೇದನೆ ಮೂಡಿಸುವುದೆಂತು?

Dr Ashok K R
ಮೊನ್ನೆ ಭಾನುವಾರ ಬೆಳಿಗ್ಗೆ ಹತರಾದ ಡಾ.ಎಂ.ಎಂ.ಕಲಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಲು ಮತ್ತು ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಲು ಬೆಂಗಳೂರಿನ ಟೌನ್ ಹಾಲ್ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ಬೋಳುವಾರು ಮೊಹಮದ್ ರವರ ಪರಿಚಯವಾಯಿತು. ಹೊಸಬನೊಡನೆ ಸರಾಗವಾಗಿ ಮಾತನಾಡುತ್ತಿದ್ದರು. ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಅವರ ಧ್ವಜವನ್ನು ಹೊರತೆಗೆದಾಗ ‘ಯಾವ ಸಂಘದ ಕಾರ್ಯಕ್ರಮವೂ ಅಲ್ಲ. ಇಲ್ಲಿ ಫ್ಲ್ಯಾಗ್ ಇಟ್ಕೊಂಡು ಪ್ರಚಾರ ಮಾಡ್ಕೊಳ್ಳೋದ್ಯಾಕೆ’ ಎಂದು ರೇಗಿದರು. ಉಳಿದವರೂ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಧ್ವಜಗಳನ್ನು ಮಡಿಚಿಟ್ಟರು. ‘ಏನ್ ಕರ್ಮಾರೀ ಇವರ್ದು, ಅರವತ್ತು ವರ್ಷ ವಯಸ್ಸಾದ್ರೆ ಏನೋ ಮುತ್ಸದ್ಧಿ ಅಂತ ತೋರಿಸ್ಕೊ‍ಳ್ಳೋ ಚಟಕ್ಕೆ ಗಡ್ಡ ಬಿಟ್ಕೊಳ್ಲಿ. ಇಪ್ಪತ್ತು ವರ್ಷಕ್ಕೆ ಗಡ್ಡ ಬಿಟ್ಕೊಂಡು ಅಸಹ್ಯವಾಗಿ ಕಾಣ್ತಾರಪ್ಪ’ ಎಂದು ಗೊಣಗಿದರು. ನನ್ನ ಕುರುಚಲು ಗಡ್ಡ ಕೆರೆದುಕೊಂಡೆ. ಜಿ.ರಾಮಕೃಷ್ಣರವರನ್ನು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಬೇಕೆಂದು ಮುಂದಕ್ಕೆ ಕರೆದರು. ಆ ವಯಸ್ಸಿನಲ್ಲೂ ಸಾಹಿತಿ – ಸಂಶೋಧಕನ ಹತ್ಯೆಗೆ ಪ್ರತಿಭಟನೆ ಸೂಚಿಸಲು ಬಂದಿದ್ದ ಜಿ.ಆರ್ ಟೌನ್ ಹಾಲಿನ ಮೆಟ್ಟಲಿಳಿದು ಮೈಕ್ ಕೈಗೆತ್ತಿಕೊಳ್ಳುವಷ್ಟರಲ್ಲಿ ಗಿರೀಶ್ ಕಾರ್ನಾಡ್ ಆಗಮಿಸಿದರು. ಟಿವಿ ವಾಹಿನಿಯವರೆಲ್ಲರೂ ಮೈಕು ಕ್ಯಾಮೆರಾಗಳೊಂದಿಗೆ ಗಿರೀಶ್ ಕಾರ್ನಾಡರತ್ತ ಧಾವಿಸಿದರು. ಜಿ.ಆರ್ ಮಾತನಾಡಲಿ ಮೊದಲು ಎಂದು ಕೆಲವರು ಕೂಗಿದರೂ ವಾಹಿನಿಯವರದು ಜಾಣ ಕಿವುಡು. ಮೈಕ್ ಹಿಡಿದುಕೊಂಡ ಜಿ.ಆರ್ ಮೌನದಿಂದ ನಿಂತಿದ್ದರು. ಬಿಡಿ, ಸಾಮಾನ್ಯರಿಗೆ ಗಿರೀಶ್ ಕಾರ್ನಾಡರನ್ನಷ್ಟೇ ಗುರುತಿಸುವುದು ಸಾಧ್ಯ, ಕಾರಣ ಅವರೊಬ್ಬ ನಟರಾದ್ದರಿಂದ ಅಲ್ಲಿಲ್ಲಿ ನೋಡಿರುತ್ತೇವೆ. ಮಾಧ್ಯಮದವರಿಗಾದರೂ ಯಾರ ಮಾತಿಗೆ ನಾವು ಅಡ್ಡಿಪಡಿಸುತ್ತಿದ್ದೇವೆ, ಯಾರು ನಮ್ಮಿಂದ ಕಾಯುವಂತಾಗಿದ್ದಾರೆ ಎಂಬ ಪ್ರಜ್ಞೆಯೂ ಇರಬೇಡವೇ? ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸುವವರ ಸಂಖೈ ಹೆಚ್ಚು, ಅವರ ಮಾತಿಗೆ ಕೊನೇಪಕ್ಷ ಟಿವಿಯಲ್ಲಿ ಟಿ.ಆರ್.ಪಿ ಹೆಚ್ಚು ಎನ್ನುವುದನ್ನು ಒಪ್ಪೋಣ. ಗಿರೀಶ್ ಕಾರ್ನಾಡರದ್ದೇ ಬೈಟ್ ತೆಗೆದುಕೊಳ್ಳಲಿ; ಆದರೆ ಆ ಬೈಟಿಗಾಗಿ ಒಂದರೆಕ್ಷಣ ಕಾಯುವಷ್ಟೂ ಪುರುಸೊತ್ತಿಲ್ಲದಂತಾಯಿತೇ ನಮ್ಮ ಮಾಧ್ಯಮ ಮಿತ್ರರಿಗೆ? ಇಷ್ಟೊಂದು ಸಂವೇದನಾರಹಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯವಾದರೂ ಏನು? ‘ಆ ಟಿವಿಯವರು ಬೈಟ್ ತೆಗೆದುಕೊಂಡಿದ್ದಾರೆ. ನೀನ್ಯಾಕೆ ತೆಗೆದುಕೊಂಡಿಲ್ಲ’ ಎಂದವರ ಮಾಲೀಕರು ಬೈಯ್ಯುತ್ತಾರಾ?

ಮನೆಗೆ ವಾಪಸ್ಸಾದ ನಂತರ ಟಿವಿ ಹಾಕಿದರೆ ವಾಹಿನಿಯೊಂದರಲ್ಲಿ ಶಿವರಾಜ್ ಕುಮಾರ್ ತನ್ನ ಭಾವೀ ಅಳಿಯನಿಗೆ ಗಿಫ್ಟಾಗಿ (ಇದು ವರದಕ್ಷಿಣೆಯೇ ಅಲ್ಲವೇ?!) ಕೊಡುವ ಕಾರಿನ ಬಗೆಗಿನ ಚರ್ಚೆ! ಭಾವೀ ಅಳಿಯನ ಸಂದರ್ಶನ ಬೇರೆ... ಥೂ ಇವರ ಯೋಗ್ಯತೆಗೆ ಎಂದುಕೊಂಡೆ. ಸಹೋದ್ಯೋಗಿಯ ಬಗ್ಗೆ ಇದೇ ವಿಷಯ ಚರ್ಚಿಸುವಾಗ ‘ರೀ. ಅಳಿಯನ ಸಂದರ್ಶನವೇ ವಾಸಿ. ಅಡುಗೆ ಮಾಡೋರತ್ರ, ಡೆಕೊರೇಷನ್ ಮಾಡೋರ್ ಮುಖದ್ ಮುಂದೆ ಮೈಕಿಡ್ದು ಶಿವಣ್ಣನ ಮಗಳ ಮದುವೆ ಕೆಲಸ ಮಾಡ್ತಿದ್ದೀರಲ್ಲ ನಿಮಗೇನನ್ಸುತ್ತೆ? ಗೀತಕ್ಕ ನಿಮಗೇ ಇಂತಿಂತದೇ ಮಾಡ್ಬೇಕು ಅಂದ್ರಾ? ಅಂತೆಲ್ಲ ಕೇಳ್ತಿದ್ರು’ ಅಂದರು. ಮದುವೆ ಹಿಂದಿನ ದಿನದ ಸಮಾರಂಭ, ಮದುವೆ ದಿನದ ಸಂಪೂರ್ಣ ಲೈವ್ ಪ್ರಸಾರ....... ಮಾಧ್ಯಮ ಉದ್ಯಮವೆಂಬುದು ಸತ್ಯ, ಲಾಭದಲ್ಲಿದ್ದರಷ್ಟೇ ಮುಂದುವರೆಯಲು ಸಾಧ್ಯ ಎಂಬುದೂ ಸತ್ಯ.... ಆ ಕಾರಣಕ್ಕೆ ಇಷ್ಟೊಂದು ಕೆಳ ಮಟ್ಟಕ್ಕಿಳಿಯಬೇಕೆ? 

ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ ದೊಡ್ಡ ಹೆಸರು. ತಂದೆ ರಾಜ್ ಕುಮಾರ್ ಪ್ರಭಾವಳಿಯಿಂದ ಚಿತ್ರರಂಗಕ್ಕೆ ಅವರ ಮಕ್ಕಳು ಬಂದವರಾದರೂ ತಮ್ಮದೇ ಪ್ರತಿಭೆ, ಶ್ರಮದಿಂದ ಚಿತ್ರರಂಗದಲ್ಲಿ ನೆಲೆನಿಂತವರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರರೆಲ್ಲರೂ ಗೌರವಕ್ಕೆ, ಆದರಕ್ಕೆ ಅರ್ಹರು. ಅವರ ಮಕ್ಕಳು ಯಾವ ರೀತಿಯ ಸಾಧಕರು? ಅವರ ಮದುವೆಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ. ಓಕ್ಕೋಳ್ಳಿ, ಮದುವೆ ಸಮಾರಂಭವನ್ನು ಬಹುತೇಕ ಪತ್ರಿಕೆಗಳು ಚಿಕ್ಕದಾಗಿ ಪ್ರಕಟಿಸಿರುವಂತೆ ಒಂದೈದು ನಿಮಿಷದ ಸುದ್ದಿ ಮಾಡಿದರೆ ಒಪ್ಕೋಬಹುದು. ದಿನವಿಡೀ ಲೈವ್ ಆಗಿ ತೋರಿಸೋ ದರ್ದೇನು ಮಾಧ್ಯಮದವರಿಗೆ? ‘ಸಿದ್ಧರಾಮಯ್ಯ ಬಂದ್ರು, ಸಿದ್ಧರಾಮಯ್ಯ ಸ್ಟೇಜ್ ಹತ್ತುದ್ರು, ಸಿದ್ಧರಾಮಯ್ಯ ಕೈ ಕೊಟ್ರು, ಸಿದ್ಧರಾಮಯ್ಯ ಕೆಳಗಿಳಿದ್ರು’ ಅಂತ ರನ್ನಿಂಗ್ ಕಾಮೆಂಟ್ರಿ ಬೇರೆ! ಹೋಗ್ಲಿ ಮದುವೆಯೇನಾದ್ರೂ ತುಂಬ ವಿಭಿನ್ನವಾಗಿ, ಸಮಾಜಕ್ಕೆ ಮಾದರಿಯಾಗಿ ನಡೆಯಿತಾ? ಇಲ್ಲವಲ್ಲ. ಅದೊಂದು ಐಷಾರಾಮಿ ಮದುವೆ. ಅವರ ದುಡ್ಡು ಅವರ ಐಷಾರಾಮಿತನ ಅವರಿಷ್ಟ. ಖಾಸಗಿ ಐಷಾರಾಮಿತನವನ್ನು ಲೈವ್ ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಕೊಡುತ್ತಿವೆ ಮಾಧ್ಯಮಗಳು? ಇದೆಲ್ಲಕ್ಕಿಂತಲೂ ಅಸಹ್ಯವೆಂದರೆ ‘ದೊಡ್ಮನೆ ಮದುವೆ ದೊಡ್ಮನೆ ಮದುವೆ’ ಅಂತ ಬಡಕೊಂಡಿದ್ದು. ದೊಡ್ಮನೆ ಚಿಕ್ಮನೆಗಳೆಲ್ಲವೂ ಊಳಿಗಮಾನ್ಯ ಪದ್ಧತಿಯ ಸಂಕೇತವಲ್ಲವೇ? ಯಾವ ದೊಡ್ಮನೆಯಲ್ಲಿ ರಾಜ್ ಕುಮಾರ್ ಕುಟುಂಬ ಒಟ್ಟಿಗಿದೆ ಎಂಬುದನ್ನು ಅರಿಯದಷ್ಟು ದಡ್ಡರೇ ಮಾಧ್ಯಮದವರು. ‘ಲೈವ್ ಪ್ರೋಗ್ರಾಮ್ ಮಾಡಬೇಡಿ’ ಎಂದು ಹೇಳುವ ಮೂಲಕ ಶಿವರಾಜ್ ಕುಮಾರ್ ಆದರೂ ‘ದೊಡ್ಡ’ತನ ತೋರಿಸಬಹುದಿತ್ತು. ಈ ಅಪಸವ್ಯಗಳೆಲ್ಲ ಮದುವೆಗೇ ಮುಗಿದು ಕ್ಯಾಮೆರಾ ಎತ್ತಿಕೊಂಡು ಹನಿಮೂನು ಪ್ರಸ್ಥದ ಮನೆ ಅಂಥ ತೋರಿಸದಿದ್ದರೆ ಕನ್ನಡಿಗರ ಪುಣ್ಯ.

ಆಗ 31, 2015

ಭೂಮಿಗೀತೆ ಮತ್ತು ಜೀವತಲ್ಲಣಗಳ ಆತ್ಮಕಥನ ಪುಸ್ತಕಗಳ ಬಿಡುಗಡೆ ಸಮಾರಂಭದ ಚಿತ್ರಗಳು.

ಆಗಸ್ಟ್ 30ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಟಿ.ಎಸ್.ವಿವೇಕಾನಂದರ ಭೂಮಿಗೀತೆ ಮತ್ತು ಜೀವತಲ್ಲಣಗಳ ಆತ್ಮಕಥನ ಪುಸ್ತಕಗಳ ಬಿಡುಗಡೆಯಾಯಿತು. ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಗಳಾಗಿದ್ದರು. ಭೂಮಿಗೀತೆ ಪುಸ್ತಕದ ಬಗ್ಗೆ ಪ್ರೊ.ಎಲ್.ಮುಕುಂದರಾಜ್ ಮಾತನಾಡಿದರೆ ಜೀವತಲ್ಲಣಗಳ ಆತ್ಮಕಥನದ ಬಗ್ಗೆ ಮಾತನಾಡಿದ್ದು ಪ್ರೊ.ಪ್ರದೀಪ್ ರಮಾವತ್. ತೇಜಸ್ವಿ ಪ್ರಕಾಶನದ ಮೊದಲ ಪ್ರಕಟಣೆಯಿದು.

ಭೂಮಿಗೀತೆಯ ಬಗ್ಗೆ ಪ್ರೊ.ಮುಕುಂದರಾಜ್ ಮಾತುಗಳು.
 ಇದನ್ನೂ ಓದಿ: ಪ್ಲಾಚಿಮಡದ ಜಲ ಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ
ಜೀವತಲ್ಲಣಗಳ ಆತ್ಮಕಥನ ಕುರಿತು ಪ್ರದೀಪ್ ರಮಾವತ್
 ಇದನ್ನೂ ಓದಿ: ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?
ಕೋಟಿಗಾನಹಳ್ಳಿ ರಾಮಯ್ಯ 

ದಿನೇಶ್ ಅಮೀನ್ ಮಟ್ಟು

ಟಿ.ಎಸ್.ವಿವೇಕಾನಂದ

ಡಾ.ಎಲ್. ಹನುಮಂತಯ್ಯ

ಆಗ 30, 2015

ಆತುರದ ತೀರ್ಮಾನಗಳೇಕೆ?

MM Kalburgi
ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ವರದಿಗಳ ಪ್ರಕಾರ ಇಪ್ಪತ್ತರ ಆಸುಪಾಸಿನ ಯುವಕ ಅವರ ಮನೆ ಪ್ರವೇಶಿಸಿ ಗುಂಡಿಕ್ಕಿ ಕೊಂದಿದ್ದಾನೆ. ಕಾರಣಗಳು ಇನ್ನೂ ಪತ್ತೆಯಾಗಿಲ್ಲವಷ್ಟೇ. ತನಿಖೆ ಪ್ರಾರಂಭವಾಗಿ prima facie ಇಂತಹ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಪೋಲೀಸರು ನಿರ್ಧರಿಸುವವರೆಗೂ ಕಾಯು ತಾಳ್ಮೆ ನಮ್ಮಲ್ಲಿಲ್ಲವೇ? ಎಂಬ ಬೇಸರ ಮೂಡುವುದು ಸಾಮಾಜಿಕ ಜಾಲತಾಣಗಳಲ್ಲಿನ ಜನರ ವರ್ತನೆಯನ್ನು ಗಮನಿಸಿದಾಗ.
ಕಲಬುರ್ಗಿಯವರನ್ನು ನಮ್ಮಂತವರು ಓದಿಕೊಂಡಿರುವುದು ಪತ್ರಿಕೆಗಳಲ್ಲಿನ ಅವರ ಅಂಕಣಗಳ ಮುಖಾಂತರ ಮಾತ್ರ. ಹಿಂದೂ ಧರ್ಮದ ಸೋಗಲಾಡಿತನಗಳ ವಿರುದ್ಧ ಬರೆಯುತ್ತಿದ್ದರು, ಮಾತನಾಡುತ್ತಿದ್ದರು. ಆ ಕಾರಣಕ್ಕಾಗಿ ಬಲಪಂಥೀಯ ಸಂಘಟನೆಗಳು ಅವರ ಮೇಲೆ ಕೋಪಗೊಂಡಿದ್ದು, ಆ ಕೋಪ ಅವರ ಮೇಲಿನ ಹಲ್ಲೆಗೂ ಪ್ರೇರೇಪಿಸಿದ್ದು, ಕಲಬುರ್ಗಿಯವರಿಗೆ ಪೋಲೀಸ್ ಬೆಂಗಾವಲು ನೀಡಿದ್ದೆಲ್ಲವೂ ಸತ್ಯವೇ. (ಬೆಂಗಾವಲು ಸಾಕೆಂದು ಇತ್ತೀಚೆಗೆ ಅವರು ಹೇಳಿದ್ದರಂತೆ). ಅಲ್ಲಿಗೆ ಬಲಪಂಥೀಯರಿಂದ ಹತ್ಯೆಗೊಳಗಾಗಿರಬಹುದಾದು ಒಂದು ಸಾಧ್ಯತೆಯೇ ಹೊರತು ಅದೇ ಕಾರಣ ಎಂದು ಖಡಾಖಂಡಿತವಾಗಿ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ. 
ಇದು ಉಗ್ರ ಬಲಪಂಥೀಯರದೇ ಕೃತ್ಯ ಎಂದು ನೋಡಿ ಬಂದವರಂತೆ ಹೇಳುತ್ತಿರುವವರ ನಡುವೆ, 'ನೋಡಿ, ಈ ವಿಚಾರವಾದಿಗಳು ಈ ಘಟನೆಯನ್ನು ಬಲಪಂಥೀಯರ ತಲೆಗೆ ಕಟ್ಟಿಬಿಡುತ್ತಾರೆ. ವೈಯಕ್ತಿಕ ಕಾರಣಕ್ಕಾಗಿ ಕೊಲೆ ನಡೆದಿದ್ದರೂ ಬಲಪಂಥೀಯರದೇ ಕೃತ್ಯ ಎಂದು ಗೂಬೆ ಕೂರಿಸುತ್ತಾರೆ' ಎಂದು ಹೇಳುವವರ ಸಂಖೈಯೂ ಕಡಿಮೆಯಿಲ್ಲ. ಬಲಪಂಥೀಯರು ಮಾಡೇ ಇಲ್ಲ ಎನ್ನುವ ಖಚಿತತೆ ಅವರಲ್ಲಿದೆಯಾ? ಉಹ್ಞೂ. ಫೇಸ್ ಬುಕ್ನಂತಹ ಒಂದು ವೇದಿಕೆಯಿದೆ ಒದರಿಕೊಂಡುಬಿಡೋಣ ಎಂಬ ಮನಸ್ಥಿತಿಯಷ್ಟೇ. 'ಹಿಂದೂಗಳನ್ನು ಟೀಕಿಸುತ್ತಿದ್ದ. ಹಿಂಗೇ ಸಾಯ್ಬೇಕು. ವಿಚಾರವಾದಿಗಳೆಲ್ಲರಿಗೂ ಇದೇ ಗತಿ' ಎಂದು ಅಟ್ಟಹಾಸ ಮಾಡುತ್ತಿರುವವರೂ ಇದ್ದಾರೆ! 
ಈ ತರಹದ ಅನಗತ್ಯ ಆತುರದ ತೀರ್ಮಾನಗಳಿಂದ ಆಗುವ ಅನಾಹುತಗಳೇನು ಅನ್ನುವುದನ್ನು ಕರ್ನಾಟಕದಲ್ಲೇ ಕಂಡಿದ್ದೇವೆ. ಡಿ.ಕೆ.ರವಿಯ ಸಾವಿನಲ್ಲಿ. ಅದು ಆತ್ಮಹತ್ಯೆಯೆಂದೇ ತೀರ್ಮಾನಿಸಿಬಿಟ್ಟ ಜನರು ಪೋಲೀಸ್ ಅಧಿಕಾರಿಗಳು prima facie ಹೇಳಿದ್ದನ್ನೂ ನಂಬಲಿಲ್ಲ, ಪ್ರಾಥಮಿಕ ತನಿಖೆಯ ನಂತರ ನಮ್ಮ ಪೋಲೀಸರು ಹೇಳಿದ್ದನ್ನೂ ನಂಬಲಿಲ್ಲ. ಕೊನೆಗೆ ಸಿಬಿಐ ಇದು ಹತ್ಯೆ ಎಂದು ಹೇಳಿತಾ? ಒಂದು ಕೊಲೆಗೆ/ಸಾವಿಗೆ ಹತ್ತಾರು ಕೋನಗಳಿರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಒಂದೆರಡು ದಿನಗಳಲ್ಲೇ ಅಸಲೀ ಕಾರಣ ಪೋಲೀಸರಿಗೆ ತಿಳಿಯುತ್ತದೆ. ತುಂಬ ಬುದ್ಧಿವಂತಿಕೆಯ ಕೊಲೆ ಪ್ರಕರಣಗಳಲ್ಲಿ ಒಂದಷ್ಟು ತಡವಾಗಬಹುದು. ಒಂದೆರಡು ದಿನ ಕಾಯುವ ತಾಳ್ಮೆಯೂ ನಮ್ಮಲ್ಲಿ ಸತ್ತುಹೋಗಿದೆಯೇ?
ಸಂಶೋಧಕರೊಬ್ಬರ ಹತ್ಯೆಯ ಸಂದರ್ಭದಲ್ಲಿ ನಿಜ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಆಶಿಸೋಣ, ಪೋಲೀಸರು, ಸರಕಾರ ನಿಷ್ಕ್ರಿಯತೆ ತೋರಿಸಿದರೆ ಪ್ರತಿಭಟಿಸೋಣ. ಊಹೆಗಳೊಂದಿಗೆ, ನಮ್ಮದೇ ಕಥೆಗಳೊಂದಿಗೆ, ದ್ವೇಷದೊಂದಿಗೆ ಸತ್ತ ಜೀವಕ್ಕೆ ಅವಮಾನ ಮಾಡದಿದ್ದರದೇ ಪುಣ್ಯ.

ಆಗ 29, 2015

ಮೀಸಲಾತಿ; ಇನ್ನೂ ಒಂದು ತಲೆಮಾರೂ ಮುಗಿದಿಲ್ಲ....

ಡಾ.ಸಿ.ಎಸ್.ದ್ವಾರಕಾನಾಥ್
ಗುಜರಾತಿನಲ್ಲಿ ಮತ್ತೆ ಮೀಸಲಾತಿಗೆ ಬೆಂಕಿ ಇಟ್ಟಿದ್ದಾರೆ!? ಗುಜರಾತಿನ ಮೀಸಲಾತಿ ವಿರೋಧಿ ಚಳುವಳಿಯ ಹಿನ್ನೆಲೆ, ಸಂಘಪರಿವಾರದ ನಡುವಳಿಕೆಗಳು, ಮನುವಾದಿ ಹಿನ್ನೆಲೆಯಿಂದ ಬಂದ ಹಾರ್ದಿಕ್ ಪಟೇಲ್ ಎಂಬ ’ಬಾಲಅಸ್ತ್ರ’! ಅವನ ಭಾಷೆ, ಅವನ ನುಡಿಕಟ್ಟು ಅವನ ಮನಸ್ಥಿತಿ ಎಲ್ಲವನ್ನು ಕಂಡಾಗ ಇದು ಒಂದು ಪೂರ್ವಗ್ರಹ ಪೀಡಿತ ಮೀಸಲಾತಿ ವಿರೋಧಿಗಳ ಷಡ್ಯಂತ್ರದಂತೆ ಕಾಣುತ್ತಿದೆ... ಆದರೆ... ಈ ನೆಪವನ್ನಿಟ್ಟುಕೊಂಡ ಸಂಘಪರಿವಾರದ ಮನಸ್ಸುಗಳು ಫೇಸ್‍ಬುಕ್ ಮತ್ತು ವಾಟ್ಸಪ್ಪುಗಳಲ್ಲಿ ಮೀಸಲಾತಿ ಬಗ್ಗೆ ಹಿಂದಿನಿಂದಲೂ ಮಾಡಿಕೊಂಡು ಬಂದ ವಾದವನ್ನೇ ಮತ್ತೆಮತ್ತೆ ಮಂಡಿಸುತ್ತಿವೆ... “...ಮೀಸಲಾತಿ ನೀಡುವುದಿದ್ದರೆ ಆರ್ಥಿಕ ಆಧಾರದ ಮೇಲೆ ನೀಡಬೇಕು, ಮೇಲ್ಜಾತಿಗಳಲ್ಲಿ ಬಡವರಿಲ್ಲವೆ? ಶೇ.35ಕ್ಕೆ ಸೀಟು, 95ಕ್ಕೆ ಸೀಟಿಲ್ಲ! ಇದ್ಯಾವ ನ್ಯಾಯ? ಮೀಸಲಾತಿಯಿಂದ ಪ್ರತಿಭೆ (ಮೆರಿಟ್) ನಾಶವಾಗುತ್ತಿದೆ, ಜಾತಿಗಳನ್ನು ಹುಟ್ಟುಹಾಕುವ ಮೀಸಲಾತಿಯನ್ನು ಕಿತ್ತು ಹಾಕಬೇಕು, ಇನ್ನೆಷ್ಟು ದಿನ ಮೀಸಲಾತಿ ನೀಡಬೇಕು? ಮೀಸಲಾತಿ ತೆಗೆಯುವವರೆಗೂ ಈ ದೇಶ ಉದ್ದಾರವಾಗಲ್ಲ...” ಮುಂತಾದ ವಾದಗಳನ್ನು ತಲೆಗೊಂದರಂತೆ ಮಂಡಿಸುತ್ತಿದ್ದಾರೆ ಇವಕ್ಕೆಲ್ಲಾ ಎಷ್ಟೇ ತರ್ಕಬದ್ದವಾಗಿ ಉತ್ತರಿಸಿದರೂ ಅಂತವರು ನಮ್ಮ ಯಾವ ಮಾತುಗಳನ್ನು ಒಪ್ಪುವಂತ ಮನಸ್ಥಿತಿ ಹೊಂದಿಲ್ಲ. ಆದ್ದರಿಂದ ಇಲ್ಲಿ ಒಂದಷ್ಟು ಒಳಹೊಕ್ಕು ಸರಳೀಕರಿಸಿ ಮೀಸಲಾತಿಯ ಅನಿವಾರ್ಯತೆಯನ್ನು ಹೇಳಬೇಕಾಗಿದೆ ಯಾಕೆಂದರೆ ಇಲ್ಲಿ ಮೀಸಲಾತಿ ವಿರೋಧಿಗಳೊಂದಿಗೆ ಮೀಸಲಾತಿ ಪಡೆಯುತ್ತಿರುವ ಅರಿವಿಲ್ಲದ “ಶೂಭ್ರಾ”ಗಳು ಸೇರಿಕೊಂಡವರಿದ್ದಾರೆ.!!

ಈಗ ಮೀಸಲಾತಿ ಪಡೆಯಲು ಹೊರಟಿವುದು ಬಹುತೇಕ ಈಗ ಅಕ್ಷರ ಜ್ಞಾನ ಪಡೆಯುತ್ತಿರುವ ಮೊದಲ ತಲೆಮಾರು... ಕಳೆದ ಪಾರ್ಲಿಮೆಂಟಿನಲ್ಲಿ ಕೇಂದ್ರ ಸಚಿವರಾಗಿದ್ದ ನಾರಾಯಣಸ್ವಾಮಿಯವರು ಮಂಡಿಸಿದ ಅಂಕಿ-ಅಂಶಗಳ ಪ್ರಕಾರ SC ಗಳಿಗೆ 22.5ಶೇ ಮೀಸಲಿದ್ದು ಅದರಲ್ಲಿ ಈವರೆಗೂ ಬಳಸಿರುವುದು ಸುಮಾರು 8.5% ಅಷ್ಟೆ. ST ಗಳಿಗೆ 7.5% ಇದ್ದು ಬಳಕೆಯಾಗಿರುವುದು ಕೇವಲ 3.5%, ಅಂತೆಯೇ OBC ಗಳಿಗೆ 27% ಇದ್ದು ಅದು ಬಳಕೆಯಾಗಿರುವುದು 4.5 ರಿಂದ 5% ಮಾತ್ರ! ಇನ್ನೂ ಪೂರ್ತಿಯಾಗಿ ಮೀಸಲಾತಿ ಒಂದು ತಲೆಮಾರಿನ ಮೂರನೇ ಒಂದು ಭಾಗಕ್ಕೂ ತಲುಪಲಿಲ್ಲ ಅಷ್ಟರಲ್ಲಿ ಏನೆಲ್ಲಾ ತಂತ್ರ, ಕುತಂತ್ರ, ಷಡ್ಯಂತ್ರ ನೋಡಿ.

ಜಾತಿಯನ್ನೇ ನೀತಿಯನ್ನಾಗಿ ಮಾಡಿಕೊಂಡ ದೇಶವಿದು, ಇದು ಕುಲಕಸುಬುಗಳನ್ನೇ ನುಂಗಿ ನೀರು ಕುಡಿದ ದೇಶ ಕೂಡ. ನಮ್ಮ ತಲೆಮಾರನ್ನು ಹೊರತುಪಡಿಸಿ ಹಿಂದಿನ ತಲೆಮಾರುಗಳನ್ನು ಒಮ್ಮೆ ಅವಲೋಕಿಸೋಣ. ಹಿಂದು ಧರ್ಮದ ತಳಪಾಯವಾದ ಚರ್ತುವರ್ಣ ಸಿದ್ಧಾಂತದ ಮೇಲಿನ ಮೂರು ವರ್ಗಗಳಾದ ಪುರೋಹಿತರು, ರಾಜರು(ಚಕ್ರವರ್ತಿಗಳು) ಮತ್ತು ವ್ಯಾಪಾರಸ್ತರೇ ಮುಂತಾದವರಿಗೆ ನಾಲ್ಕನೇ ವರ್ಣದ ಶೂದ್ರರು, ದಲಿತರು, ಅಲ್ಪಸಂಖ್ಯಾತರು ಸೇವೆ ಮಾಡುತ್ತಲೇ ಬಂದರು. ಇಂದು ಅದೇ ತಳಸಮುದಾಯ ಕುಡಿಗಳೇ ಮೀಸಲಾತಿಯನ್ನು ಬೇಡುತ್ತಿರುವುದು.

ಇಲ್ಲಿ ಅನೇಕ ಕುಲಗಳು ಮಾತನಾಡುತ್ತಿವೆ, ಒಮ್ಮೆ ಸಾವದಾನದಿಂದ ನೋಡಿ... ನಿಮ್ಮ ಮೂರೂ ವರ್ಣಗಳಿಗೆ ಕ್ಷೌರ ಮಾಡುತ್ತಲೇ ಬಂದ ಕ್ಷೌರಿಕ, ನಿಮಗೆ ಬಟ್ಟೆ ನೇಯ್ದುಕೊಟ್ಟ ದೇವಾಂಗ, ಅದನ್ನು ಹೊಲೆದುಕೊಟ್ಟ ಸಿಂಪಿಗ, ಅದನ್ನು ಒಗೆದು ಇಸ್ತ್ರಿ ಮಾಡಿಕೊಟ್ಟ ಅಗಸ, ನಿಮಗೆ ಚಪ್ಪಲಿ ಮಾಡಿಕೊಟ್ಟ ಚಮ್ಮಾರ, ನಿಮಗೆ ಕುಡಿಯಲಿಕ್ಕೆ, ಸ್ನಾನಕ್ಕೆ ನೀರುಕೊಟ್ಟ ನೀರಗಂಟಿ, ನಿಮ್ಮ ಸಂಧ್ಯಾವಂದನೆ, ಪೂಜೆಗಾಗಿ, ನಿಮ್ಮ ಗರ್ಭಗುಡಿಗೆ ದೇವರ ವಿಗ್ರಹ ಮಾಡಿಕೊಟ್ಟ ವಿಶ್ವಕರ್ಮ, ದೇವರ ದೀಪ ಹಚ್ಚಲು ಮಣ್ಣ ದೀಪ ಮಾಡಿಕೊಟ್ಟ ಕುಂಬಾರ, ಅದಕ್ಕೆ ಬತ್ತಿ ಮಾಡಿಕೊಟ್ಟ ಒಕ್ಕಲಿಗ, ಅದಕ್ಕೆ ಎಣ್ಣೆ ಮಾಡಿಕೊಟ್ಟ ಗಾಣಿಗ, ದೇವರ ಪೂಜೆಗೆ ಹೂವು ಬೆಳೆದು ಹರಿಶಿನ, ಕುಂಕುಮ ತಂದುಕೊಟ್ಟ ಬಲಿಜ, ನಿಮ್ಮ ಹೂವಿಗೆ ಬುಟ್ಟಿ ಮಾಡಿಕೊಟ್ಟ ಮೇದರ... ನಿಮಗೆ ಊದುಕಡ್ಡಿ ಮಾಡಿಕೊಟ್ಟ ಸಾಬಿ, ನೀವು ಪೂಜೆಗೆ ಕೂರಲು ಪೀಠಮಾಡಿಕೊಟ್ಟ ಬಡಗಿ... ಹೀಗೆ ಇಡೀ ಪೂಜೆಯಲ್ಲಿ ಮೇಲಿನವರದು ಮಂತ್ರದ ಉಗುಳು ಎನ್ನುವುದನ್ನು ಬಿಟ್ಟರೆ ಮಿಕ್ಕದ್ದೆಲ್ಲಾ ಕೆಳಗಿನವರು ತಮ್ಮ ‘ಮೆರಿಟ್’ನಿಂದ ಮಾಡಿಕೊಟ್ಟಿದ್ದೆ.

ನಿಮಗೆ ಅನ್ನ ಕೊಟ್ಟವನು ರೈತ (ಇಲ್ಲಿ ಒಕ್ಕಲಿಗ, ಲಿಂಗಾಯಿತರಾದಿಯಾಗಿ ಅನೇಕ ಜಾತಿವರ್ಗಗಳಿವೆ) ನಿಮಗೆ ತರಕಾರಿ ಬೆಳೆದು ಕೊಟ್ಟವನು ತಿಗಳ, ತರಕಾರಿ ಕೊಯ್ಯಲು ಕತ್ತಿ, ಯುದ್ದಮಾಡಲು ಕಠಾರಿ ಮಾಡಿಕೊಟ್ಟವನು ಕಮ್ಮಾರ, ನಿಮ್ಮ ಸಾರಿಗೆ ಉಪ್ಪು ಮಾಡಿಕೊಟ್ಟವನು ಉಪ್ಪಾರ, ನಿಮಗೆ ಹಾಲು, ಮೊಸರು, ಬೆಣ್ಣೆ ತುಪ್ಪ ಕೊಟ್ಟವನು ಗೊಲ್ಲ, ಕಾಡಿನ ಜೇನು, ಉತ್ಪನ್ನ ಕೊಟ್ಟವನು ಬೇಡ, ನಿಮ್ಮ ಮಲವನ್ನು ತಲೆಮೇಲೆ ಹೊತ್ತವನು ಭಂಗಿ, ನಿಮ್ಮ ಬೀದಿ ಗುಡಿಸಿ ಸ್ವಚ್ಚಗೊಳಿಸಿದವನು ಹೊಲೆಯ, ನಿಮ್ಮ ಸೂರಿಗೆ ಕಲ್ಲು, ಮಣ್ಣು ಹೊತ್ತವರು ವಡ್ಡರು, ನಿಮ್ಮ ಸೂರಿಗೆ ಕಲ್ಲು,ಮಣ್ಣು ಹೊತ್ತವನು ಒಡ್ಡ, ನೀವು ಮಲಗಲು ಹಾಸಿಗೆ ಮಾಡಿಕೊಟ್ಟವನು ಪಿಂಜಾರ, ನಿಮಗೆ ಬೆಚ್ಚಗೆ ಹೊದೆಯಲು ಕಂಬಳಿ ಮಾಡಿಕೊಟ್ಟವನು ಕುರುಬ, ನಿಮಗೆ ಬೇಕಾದಾಗ ಮತ್ತುನೀಡಲು ಸೇಂದಿ ಮಾಡಿಕೊಟ್ಟವನು ಈಡಿಗ... ನಿಮ್ಮ ಕಾಯಿಲೆಗೆ ಔಷಧಿ ಮಾಡಿಕೊಟ್ಟವರು, ನಿಮಗೆ ಮನರಂಜನೆ ನೀಡಿದವರು ದೊಂಬ, ದೊಂಬಿದಾಸ, ಸುಡುಗಾಡು ಸಿದ್ದರಾದಿಯಾಗಿ ಅನೇಕ ಅಲೆಮಾರಿಗಳು, ಆದಿವಾಸಿಗಳು... ಮಿಕ್ಕಂತೆ ನಿಮಗೆ ಅನೇಕ ರೀತಿಯಲ್ಲಿ ಪ್ರತ್ಯಕ್ಷವಾಗೋ, ಪರೋಕ್ಷವಾಗೋ ನಿಮ್ಮ ಸುತ್ತಾ ನಿಮ್ಮನ್ನು ತಾವು ಶ್ರಮದಿಂದ ರೂಪಿಸಿದ ಅದೆಷ್ಟೊ ಹೇಳ ಹೆಸರಿಲ್ಲದ ನೂರಾರು ಸಮುದಾಯಗಳಿವೆ... ಕಡೆಗೆ ನಿಮ್ಮ ಚಿತಾಭಸ್ಮವನ್ನು ನೀರ ಮೇಲೆ ಕೊಂಡೊಯ್ಯುವವನು ಬೆಸ್ತ..

ದುರಂತವೆಂದರೆ ಮೇಲಿನ ಯಾವುದೇ ಶ್ರಮವನ್ನು, ಕುಶಲ ಕುಲವೃತ್ತಿಗಳನ್ನು ಶಿಕ್ಷಣವನ್ನಾಗಿ ಪರಿಗಣಿಸದ ಈ ದೇಶದ ಮೇಲ್ಜಾತಿ ಮನಸ್ಸು, ಕುಂತು ಚಿಂತಿಸುವ, ಯೋಚಿಸುವ, ಮಂತ್ರ ವದರುವ, ಮಾತನಾಡುವಂತಹ ಬುದ್ಧಿ ಪೂರ್ವಕ ಕ್ರಿಯೆಯನ್ನೇ ಶಿಕ್ಷಣವೆಂದು ಪರಿಗಣಿಸಿತು. ಹಾಗಾಗಿ ಈ ದೇಶದ ಶಿಕ್ಷಣ ಪದ್ದತಿ ಬುದ್ಧಿ ಆಧಾರಿತವಾಯಿತೆ ಹೊರತು ಶ್ರಮ ಆಧಾರಿತವಾಗಲಿಲ್ಲ, ಇದರೊಂದಿಗೆ ತಲೆಮಾರುಗಳಿಂದಲೂ ಮೇಲಿನವರಾದ ನೀವು ಹೇಳುವವರಾಗೇ ಮುಂದುವರೆದಿರಿ, ಕೆಳಗಿನವರಾದ ನಾವು ಕೇಳುವವರಾಗಿಯೇ ಮುಂದುವರೆದೆವು, ನೀವು ಮಂತ್ರ ಹೇಳಿದಿರಿ ಅದು ನಮಗರ್ಥವಾಗದಿದ್ದರೂ ಅರ್ಥವಾದವರಂತೆ ತಲೆತೂಗಿದೆವು, ನೀವು ಹರಿಕತೆ ಮಾಡಿದಿರಿ ನಾವು ತಣ್ಣಗೆ ತೂಕಡಿಸುತ್ತಾ ಕೇಳಿಸಿಕೊಂಡೆವು, ನೀವು ವೇದ, ಉಪನಿಷತ್ತು, ಭಗವತ್ಗೀತೆ, ಪಾರಾಯಣ, ಭಾಗವತಗಳನ್ನು ತೋರಿ ‘ಅದರಲ್ಲಿ ಏನೆಲ್ಲಾ ಇದೆ’ ಅಂದಿರಿ, ನಾವು ಪ್ರಶ್ನಿಸದೆ ಒಪ್ಪಿಕೊಂಡೆವು, ನೀವು, ನಮಗೂ, ನಾವು ಕಾಣದ ದೇವರಿಗೂ ಮಧ್ಯೆ ಮಧ್ಯವರ್ತಿಗಳಾದಿರಿ, ನಮಗೆ ದೇವರು, ಸ್ವರ್ಗ, ನರಕದ ಬಗ್ಗೆ ಹೇಳುತ್ತಾ ನಮ್ಮನ್ನು ಭಯ ಭಕ್ತಿಯಿಂದ ಇರುವಂತೆ ನೋಡಿಕೊಂಡಿರಿ, ನೀವು ಆಳಿದಿರಿ ನಾವು ಆಳಿಸಿಕೊಂಡೆವು, ನಾವು ಬೆಳೆದದ್ದನ್ನು, ರೂಪಿಸಿದ್ದನ್ನು ನಮ್ಮಿಂದ ಪಡೆದು ನಮಗೇ ಮಾರಿದಿರಿ ನಾವು ನಮ್ರವಾಗಿ ಕೊಂಡುಕೊಂಡೆವು... ಕೆಳಸಮುದಾಯಗಳು ಉತ್ಪಾದಕ ಸಮುದಾಯಗಳಾಗೇ ಉಳಿದುಬಿಟ್ಟವು, ಮೇಲುಸಮುದಾಯಗಳು ಅನುತ್ಪಾದಕ ಸಮುದಾಯಗಳಾಗಿಯೇ ಮುಂದುವರೆದವು.!

ನೀವು ನಿಮ್ಮ ಬುದ್ಧಿ ಪೂರ್ವಕ ಶಿಕ್ಷಣದಿಂದ ನಮ್ಮ ಎಲ್ಲಾ ವೃತ್ತಿ, ಕುಲವೃತ್ತಿಗಳನ್ನು ಕಸಿದು ಶಿಕ್ಷಣವನ್ನಾಗಿ, ತಾಂತ್ರಿಕತೆಯನ್ನಾಗಿ ಪರಿವರ್ತಿಸಿದಿರಿ ಆದರೆ ನಮಗೆ ಅಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಿಲ್ಲ!? ಯಾಕೆಂದರೆ ನಮಗೆ ಬುದ್ಧಿ ಆಧಾರಿತ ಶಿಕ್ಷಣವೇ ಇರಲಿಲ್ಲ... ನೀವು ಮುಂದುವರೆದವರಾಗಿಯೇ ಮುಂದುವರೆದಿರಿ ಸಹಜವಾಗಿಯೇ ನಾವು ಹಿಂದುಳಿದವರಾಗೇ ಹಿಂದುಳಿದೆವು. ನೀವು ಈ ದೇಶದ ಸಂಪನ್ಮೂಲಗಳನ್ನು, ಅಧಿಕಾರವನ್ನು, ಆಡಳಿತವನ್ನು, ವ್ಯಾಪಾರ ವಹಿವಾಟುಗಳನ್ನು ನಿಮ್ಮ ಕೈಯಲ್ಲಿ ಹಿಡಿದಿರಿ, ನಾವು ಕುಲವೃತ್ತಿಗಳನ್ನು ಕಳಕೊಂಡು ಬರಿಗೈ ಆದೆವು. ನಿಮ್ಮೊಂದಿಗೆ ನಿಮ್ಮ ಬೌದ್ದಿಕ ಶಿಕ್ಷಣದ ಸ್ಪರ್ಧೆಯಲ್ಲಿ ಸ್ಪರ್ಧಿಸಲಾರದೆ ಸೋತೆವು.

ಈ ಹಿನ್ನೆಲೆಯನ್ನರಿತ ‘ಬೆಳಕು’ ಡಾ.ಅಂಬೇಡ್ಕರ್ ಎಂಬ ಈ ಜಗತ್ತು ಕಂಡರಿಯದ ಸಮಾಜ ಶಾಸ್ತ್ರಜ್ಞ, ಮಾನವತವಾದಿ, ಪ್ರಜಾಪ್ರಭುತ್ವವಾದಿ ನಮಗಾಗಿ ಜನ್ಮತಾಳಿ ಬಂದರು, ತಾವು ಬರೆದ ಸಂವಿಧಾನದಲ್ಲಿ ಅವಕಾಶವಂಚಿತರಿಗೆ ಅವಕಾಶಗಳನ್ನು ಕಲ್ಪಿಸಬೇಕೆಂದು ಮೀಸಲಾತಿ ಕೊಟ್ಟರು, ಇದನ್ನು ‘ಪ್ರಾತಿನಿದ್ಯ’ ಎಂದರು, ಶತಶತಮಾನಗಳಿಂದ ವಂಚಿತರಾದವರಿಗೆ ದೇಶ ಕಟ್ಟುವ, ಶಾಸನ ರೂಪಿಸುವ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದರು. ಇದರಿಂದಾಗಿ ಅಸಮಾನತೆಯನ್ನೇ ಉಸಿರಾಡುವ ಈ ದೇಶಕ್ಕೆ ಸಮಾನತೆಯ ಹೊಸ ಗಾಳಿ ಬರಲಾಂಭಿಸಿತು... ದನಿಯಿಲ್ಲದ ಜಾತಿವರ್ಗಗಳಿಗೆ ಧ್ವನಿನೀಡಿ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದರು, ಸಂವಿಧಾನದ ಮೊದಲ ಫಲಗಳನ್ನು ಅನುಭವಿಸುತ್ತಿರುವ ಮೊದಲ ತಲೆಮಾರು ಇಂದಿನದು. ಈ ಒಂದು ತಲೆಮಾರಾದರೂ ಕೊಂಚ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತದೇನೋ ಎನ್ನುವಷ್ಟರಲ್ಲಿ ಇದನ್ನು ಸಹಿಸಲಾರದ ಮನಸ್ಸುಗಳು ಈ ಮೀಸಲಾತಿಯೆಂಬ ಸಮಾನತೆಯ ಆಶಯಕ್ಕೆ ಬೆಂಕಿ ಇಡುತ್ತಿವೆ!!

ಸುಮಾರು ಐದು ಸಾವಿರ ವರ್ಷಗಳಿಂದ ವಂಚಿತರಾದವರಿಗೆ ಸಂವಿಧಾನಬದ್ಧ ಮೀಸಲಾತಿಯಿಂದಾಗಿ ಕೇವಲ ಈ 50 ವರ್ಷಗಳಿಂದ ಸ್ಥಾನಮಾನ ದೊರಕುತ್ತಿದೆ, ಉಂಡವರು ಅದನ್ನು ಸಹಿಸದಿದ್ದರೆ ಹೇಗೆ?

ಇಲ್ಲೊಂದು ಸವಾಲಿದೆ, ಇದನ್ನು ನೀವು ಸ್ವೀಕರಿಸಬೇಕಿಲ್ಲ, ಕೇವಲ ಮಾತಿಗಾಗಿ... ಒಮ್ಮೆ ಈ ಬಗ್ಗೆ ಚಿಂತಿಸಿ ಅಥವಾ ಕಲ್ಪಿಸಿಕೊಳ್ಳಿ ಸಾಕು... ಶತಶತಮಾನಗಳಿಂದ ಶಿಕ್ಷಣ ಮತ್ತು ಶಿಕ್ಷಣದ ಲಾಭಗಳನ್ನು ಪಡೆದ ನೀವು ಕೇವಲ 10 ವರ್ಷ ಅಕ್ಷರದಿಂದ ದೂರವಿಡಿ, ನಿಮ್ಮ ಮನೆಮಠಗಳಲ್ಲಿ ಈ ಹತ್ತು ವರ್ಷ ಯಾರೂ ಅಕ್ಷರ ಕಲಿಯದಂತೆ ಇದ್ದುಬಿಡಿ, ನಿಮ್ಮವರೆಲ್ಲರನ್ನು ಅಕ್ಷರ ಜ್ಞಾನದಿಂದ ದೂರವಿರಿಸಿ, ಹತ್ತು ವರ್ಷದ ಆಚೆಗೆ ಶಿಕ್ಷಣ ಕೊಡಿ, ಈ ಹತ್ತು ವರ್ಷ ನಿಮಗೆ ಶಿಕ್ಷಣ ನಿರಾಕರಿಸಿದ ಪರಿಣಾಮ ಈ ದೇಶದ ಬಹುಜನರೆಲ್ಲಾ ಸೇರಿ ಸೂರ್ಯ-ಚಂದ್ರರಿರುವರೆಗೂ ನಿಮಗೆ ಮೀಸಲಾತಿ ನೀಡುವಂತೆ ನೋಡಿಕೊಳ್ಳುತ್ತೇವೆ. ಸಂವಿಧಾನವನ್ನು ತಿದ್ದುಪಡಿ ಮಾಡಿಸುತ್ತೇವೆ..., ಹತ್ತು ನಿಮಿಷ ಕಣ್ಣುಕಟ್ಟಿದರೇನೆ ಇರಲು ಸಾಧ್ಯವಾಗದವರಿಗೆ ಶತಶತಮಾನಗಳ ಕಾಲ ಕತ್ತಲ ಲೋಕದಲ್ಲಿದ್ದವರ ಬದುಕು ಹೇಗೆ ಅರ್ಥವಾಗಬೇಕು? ಒಮ್ಮೆ ದಯವಿಟ್ಟು ಅನ್ಯತಾ ಭಾವಿಸದೆ ಆತ್ಮಾವಲೋಕನ ಮಾಡಿಕೊಳ್ಳಿ...

ಯಾವುದೇ ಚಾರಿತ್ರಿಕ ಹಿನ್ನೆಲೆಗಳನ್ನು, ಕಟುವಾಸ್ತವಗಳನ್ನು ಅರಿಯದೆ ಯಾರದೋ ಶ್ರಮವನ್ನು ತಿನ್ನುತ್ತಾ ತೇಗುತ್ತಾ ಸುಮ್ಮನೆ ಕೂತು ವಿರೋಧಿಸಬಾರದು. ಬೀಸು ಹೇಳಿಕೆಗಳನ್ನು ನೀಡಬಾರದು.

ಈ ದೇಶದ ರಾಷ್ಟ್ರಗ್ರಂಥ ಸಂವಿಧಾನವೊಂದೆ, ಸಂವಿಧಾನದ ಆಶಯಗಳಿಗೆ ವಿರೋಧ ವ್ಯಕ್ತಪಡಿಸುವವನು ದೇಶದಲ್ಲಿ ರಾಷ್ಟ್ರೀಯವಾದಿಯಾಗಿ ಇರಲಾರ.... ಅಂತವನನ್ನು ರಾಷ್ಟ್ರಪ್ರೇಮಿ ಎಂದು ಕರೆಯಲು ಸಾಧ್ಯವಿಲ್ಲ....

ಆಗ 28, 2015

Stop the Political Assault on Education in India: Dissolve FTII Society

ftii
When i first read about protests in FTII against the appointment of Gajendra Chauhan i thought both the appointment and protest is politically motivated. Appointing a chairman of their favour is not new. Congress has done the same, BJP – the so called different party will also do the same. Nothing surprising in that. But why the protest? In almost all main stream media the FTII issue is related only to Gajendra Chauhan and till date i believed the same. But when i received a pamphlet from students/supporters of FTII protest i understood the reality of the protest. There protest is completely justified. Read it and make your decision.

Students of the Film and Television Institute of India (FTTI) have been on strike since 12th June 2015. This strike came as a difficult and yet spontaneous decision on the part of the students after the constitution of the new FTII society by the ruling government, headed by the newly appointed chairman, Mr Gajendra Chauhan and consisting of several questionable appointments in the society itself. The process by which these appointments were made also subsequently and immediately came into question.

The objections of the students of FTII and a rather large and growing body of people of the nation are extremely serious and urgent and bring into question the kind of vision, ethos and level of seriousness the ruling government has towards India’s premier film school as well as higher education in our nation. Our concerns are serious enough for us to abandon our studies, the only thing we have assembled from all over the country for, putting our professional and financial future’s in limbo for each day that this stike goes on. The very fundamentals of our objections are summarized in the following points. 

1. Gajendra Chauhan. 

The stature of previous chairmen (Girish Karnad, Adoor Gopalkrishnan, U.R. Ananthamurthy, Saeed Mirza) is a clear testament to the kind of academic experience and rigor of practice they have epitomized. Unfortunately, Mr Chauhan’s academic inexperience and body of work does not meet the requirements needed to head and steer an internationally renowned institution in the field of Film and Television education. 

2. Anagha Ghaisas 

Anagha Ghaisas, who has a strong RSS background, has made documentary films supporting Prime Minister Narendra Modi and about Ayodhya. Her comments in mainstream media in wake of the protests and her extreme position vis-a-vis the students, has caused a great deal of anxiety about her presence in the apex body. Additionally, her professional integrity has been questioned by the court of law. The court verdict states the she “does not know the difference between fiction and documentary”, her nomination as an ‘eminent persons of the art’ is therefore unacceptable 

3. Dr. Narendra Pathak 

Dr. Pathak was the head of ABVP (a right inclined student wing), whose members physically assaulted FTII students following a film screening and cultural program at the film archives, Pune. The court case regarding the incident is still going on. Dr. Pathaks statements like ‘there shouldn’t be any anti-national activity at the institute’ and “students ko sabak sikhaana hoga” (students need to be taught a lesson) is perceived as an open threat to the physical safety of the students and cast doubts about his commitment towards upholding the tenets of freedom of expression and thought. Such a person is not conducive to the spirit of learning. 

4. Rahul Solarpurkar 

Rahul has acknowledged to having strong political ideologies and was in contention for a BJP ticket in last year’s state assembly elections. In spite of his fairly large body of work, his insinuation that we as citizens of this nation are behaving in an anti – national manner by simply expressing our views is disturbing. Such statements made by future decision makers at institutes of higher learning threatens the learning environment for students. 

5. Shailesh Gupta 

Mr. Shailesh Gupta, is an FTII alumnus who has worked primarily in the advertisement industry and also as an assistant cameraperson and photographer in a few commercial bollywood films.

His appointment is contentious because of his selection over the many eminent FTII alumnus who have far greater accomplishments and might have been willing to serve at this post. A particular film made by Mr. Gupta is indicative of his political inclinations and it sets a bad precedence where an individual may not be selected despite his credentials in the face of political subservience.

We must mention that it is not the content of the film that disturbs us and neither do we aim to take a higher creative standpoint but we do feel the quality of this video speaks for itself and raises several questions over his position in the governing council of the FTTI


Such appointments have been practiced so far with humility, even with the previous government and these appointments in particular demotivate legions of former, current and prospective students of FTII; rendering such esteemed positions farcical.

The students of the FTII, as well as several experienced voices of our film fraternity and student organisations throughout the country have seamlessly connected to our issues. Because our is not an isolated case of government interference in academia. The appointees at the Tata Institute of Fundamental Research, National Book Trust of India, Indian Council for cultural relations and indian council of historical research and the looming threat of the changes at the IIM’s are ominous signs as well.

We sincerely believe that these moves by the government reek of a very serious effort to destabilize and color the educational institutions of the country. It undermines the very basic pillars and ethos of any education system and raises serious and disconcerting questions about how they want the future generations of this nation to be educated.

On 3rd July 2015, a panel comprising of eminent people from the film industry including oscar winner Resul Pookutty and National award winning filmmaker Girish Kasaravalli and student body memebers held and hour long dialogue with Hon I & B Minister Arun Jaitley, only for him to repeatedly evade all questions related to the credibility of the government’s appointees which makes this petition all the more imperative, since our first round of talks were inconclusive.

For students losing out on their education for every day that this strike goes on, the lack of answers is most disconcerting and reflects on the arrogance and lack of transparency of the incumbent government over this issue.

The students of the FTII urgently appeal to all the students of the nation, to the youth, to the parents, to anyone who believes that th educational institutions of the nation cannot be tampered with in this manner; to appeal to the Hon. Minister, Mr Arun Jaitley, to hold in a passive state the newly formed Society and in the interim, constitute a committee of experts to suggest norms and guidelines for setting up a new FTII society, which would make such appointments diligent, transparent and free from political intentions.

We sincerely appeal to you to help us solidify what might well be the last bastion of fighting against the colouring and degradation of the critical educational institutions of our nation and end the anguish of the students who have had no option but to fight this battle, and in the process set an important and historic precedent that this nation will not let its educational institutions be compromised.

image source: abpnews.abplive.in 

ಆಗ 27, 2015

ದಿನೇಶ್ ಅಮೀನ್ ಮಾತುಗಳು.

ಮಂಗಳೂರು ವಿಶ್ವವಿದ್ಯಾಲಯ 125ನೇ ನೆಹರೂ ಜಯಂತಿಯ ಸಂದರ್ಭದಲ್ಲಿ ಏರ್ಪಡಿಸಿದ್ದ ರಾಜಕೀಯ ನಾಯಕತ್ವದ ಬೌದ್ಧಿಕ ಕಮ್ಮಟದಲ್ಲಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು. ಒಂದು ಘಂಟೆ ದಿನೇಶ್ ಅಮೀನ್ ಮಟ್ಟುರವರ ಮಾತುಗಳಿವೆ. ನಂತರ ಅರ್ಧ ತಾಸಿನಷ್ಟು ಪ್ರಶ್ನೋತ್ತರವಿದೆ. 



ಆಡಿಯೋ ರೆಕಾರ್ಡ್ ಮಾಡಿದ್ದು: ಲಿಂಗರಾಜು ಪ್ರಜಾಸಮರ.

ಮೂಗಿನ ಸರ್ಜರಿಗೆ ಮೂವತ್ತು ದಿನ ಪೆರೋಲ್!

ಅಕ್ರಮ ಶಸ್ತ್ರಾಸ್ತ್ರವನ್ನು 'ಮನೆಯವರ ರಕ್ಷಣೆಯ' ನೆಪದಲ್ಲಿ ಶೇಖರಿಸಿಟ್ಟಿದ್ದ ಸಂಜಯ್ ದತ್ ಎಂಬ ನಟನಿಗೆ ಐದು ವರುಷಗಳ ಜೈಲು ಶಿಕ್ಷೆಯಾಗಿತ್ತು. ಜೈಲಿನಲ್ಲಿರುವುದಕ್ಕಿಂತ ಸಂಜಯ್ ದತ್ ಹೊರಗಿರುವುದೇ ಜಾಸ್ತಿ ಎಂಬಂತಾಗಿದೆ. ಕಳೆದ ವರುಷ 118 ದಿನಗಳನ್ನು ಜೈಲಿನಿಂದ ಹೊರಗಡೆ ಕಳೆದ ಸಂಜಯ್ ದತ್ ಮತ್ತೆ ಜೈಲು ಸೇರಿದ್ದು ಡಿಸೆಂಬರ್ 2014ರಂದು. ಈಗ ಮತ್ತೆ ಸಂಜಯ್ ದತ್ ಗೆ ಜೈಲಿನಿಂದ ಹೊರಬರುವ ಭಾಗ್ಯ! ಪೆರೋಲ್ ಹೆಸರಿನಲ್ಲಿ ಸಂಜಯ್ ದತ್ ಒಂದು ತಿಂಗಳು ಶಿಕ್ಷಾ ಅವಧಿಯನ್ನು ಯಾವುದೇ ರೀತಿಯಿಂದ ಹೆಚ್ಚಿಸಿಕೊಳ್ಳದೆ ಹೊರಬಂದು ತಿರುಗಾಡಿ ಸಂಭ್ರಮಿಸಲು ಅವಕಾಶ ನೀಡಲಾಗಿದೆ. Ofcourse ಪೆರೋಲ್ ಪಡೆದುಕೊಳ್ಳಲು ಸಂಭ್ರಮದ ಕಾರಣವನ್ನಂತೂ ನೀಡುವಂತಿಲ್ಲವಲ್ಲ! ಸಂಜಯ್ ದತ್ ನೀಡಿರುವ ಕಾರಣ ಆತನ ಮಗಳಿಗೆ ನಡೆಯುವ ಆಪರೇಷನ್.
ವಿಕಿಪೀಡಿಯಾದ ಪುಟದ ಪ್ರಕಾರ ಭಾರತದಲ್ಲಿ ಒಂದು ತಿಂಗಳ ಪೆರೋಲ್ ಪಡೆಯುವ ಅವಕಾಶವಿದೆ. ಮನೆಯವರು ಸತ್ತಾಗ, ಅತೀವ ಖಾಯಿಲೆಯಿಂದ ನರಳುತ್ತಿರುವಾಗ, ಮಗು ಜನಿಸಿದಲ್ಲಿ ಈ ರೀತಿಯ ಪೆರೋಲ್ ಪಡೆಯಬಹುದಾಗಿದೆ. ದೇಶದ ಭದ್ರತೆಗೆ ಧಕ್ಕೆ ತಂದವರಿಗೆ, ವಿದೇಶಿಗರಿಗೆ, ಮಕ್ಕಳ ಮೇಲೆ ಅತ್ಯಾಚಾರ  ಎಸಗಿದವರಿಗೆ, ಒಂದಾದ ಮೇಲೊಂದರಂತೆ ಕೊಲೆ ಮಾಡಿದವರಿಗೆ ಪೆರೋಲ್ ನೀಡಲಾಗುವುದಿಲ್ಲ. ಸಂಜಯ್ ದತ್ ಅಕ್ರಮವಾಗಿ ಶಸ್ತ್ರಸ್ತ್ರ ಇಟ್ಟುಕೊಂಡಿದ್ದು ಮುಂಬೈ ಸ್ಪೋಟದ ಸಮಯದಲ್ಲಿ, ಆತನ ಮೇಲೆ ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕೊನೆಗಾತನಿಗೆ ಶಿಕ್ಷೆಯಾಗಿದ್ದು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ್ದಕ್ಕಾಗಿ. ಸಂಜಯ್ ದತ್ ಗೆ ಪೆರೋಲ್ ಸಿಗುವುದು ಕಾನೂನುಬದ್ಧವೇ ಹೌದು. ಆದರೆ ಸಂಜಯ್ ದತ್ ನೀಡಿರುವ ಕಾರಣ ಮಗಳ ಮೂಗಿನ ಸರ್ಜರಿ. ಅದ್ಯಾವ ಮೂಗಿನ ಸರ್ಜರಿಗೆ ಒಂದು ತಿಂಗಳ ಸಮಯ ಹಿಡಿಯುತ್ತದೆ? ಸಂಜಯ್ ದತ್ ಎಂಬ ನಟನಿಗೆ ಸಿಗುವ ಈ ಸೌಲಭ್ಯ ನಿಜಕ್ಕೂ ಅವಶ್ಯಕತೆ ಇರುವ ಎಷ್ಟು ಜನ ಖೈದಿಗಳಿಗೆ ಸಿಗುತ್ತದೆ? 
ನ್ಯಾಯದೇವತೆಗೆ ಕಪ್ಪು ಪಟ್ಟಿ ಕಟ್ಟಿರುವುದು ಎಲ್ಲರನ್ನೂ ಸಮಾನವಾಗಿ ಕಾಣಲೆಂದು. ಪೆರೋಲ್ ನೀಡುವ ಜನರ ಕಣ್ಣಿಗೇನೂ ಪಟ್ಟಿ ಕಟ್ಟಿರುವುದಿಲ್ಲವಲ್ಲ..... ಲಲಿತ್ ಮೋದಿಯಂತಯ ಆಪಾದಿತನಿಗೆ ಹೆಂಡತಿಯ ಖಾಯಿಲೆಯ ನೆಪದಲ್ಲಿ ವಿದೇಶಗಳಲ್ಲಿ ಅಡ್ಡಾಡುವುದಕ್ಕೆ 'ಮಾನವೀಯತೆ' ದೃಷ್ಟಿಯಿಂದ ದೇಶದ ವಿದೇಶಾಂಗ ಸಚಿವರೇ ಸಹಕರಿಸುವಾಗ ದೇಶದೊಳಗಡೆ ಸಂಜಯ್ ದತ್ ಗೆ ಪೆರೋಲ್ ಕೊಡುವ  'ಮಾನವೀಯ' ಕೆಲಸಗಳು ಅಚ್ಚರಿ ತರುವುದಿಲ್ಲ ಬಿಡಿ.