ಮೇ 20, 2015

Why I will definitely allow my child to become a Doctor in India or elsewhere

What do you see in the image on the left side? If you see a black dot then I am sure you are with majority of the people. Almost all of us clearly see the black dot, very few will have the mindset and patience to appreciate that the blackness is just a small dot in a white canvas! This is what I felt after reading a blog post which has gone viral from a week written by Dr Roshan Radhakrishnan, anaesthetist with a negative title ‘why I will never allow you, my child, to become a doctor in India'. Most of the facts mentioned by Roshan is easily acceptable, one can’t deny that but using those facts to spread an article with negative mindset is certainly not helpful to medical fraternity and to future medical aspirants. And not so surprisingly the article has been shared by many Doctors and Medical students. But is the medical field so bad? I don’t think so.

First confession – I never wanted to join MBBS. 
My dream throughout my highschool and PUC days was Journalism. I always wanted to be a journalist. Unfortunately I scored very good marks in PUC (12th) so option from family side was reduced to Engineering or Medical. Don’t know the reason, I opted MBBS! Do I have any regrets? Nope. The main problem with MBBS students begins when they start comparing their life with Engineers. Our friends who scored less than us in PUC start earning at an early age, at around 22 or 23 yrs while we doing our MBBS are still getting scolding from professors, patients, their relatives and receiving money + scolding from parents! That appears frustrating but is it a matter to get frustrated? We are fortunate enough to get a longer student life when compared to BE students. Let us have a look at our life through 5 and a half years of MBBS!

Initial days of first year were to make new friends. And then begins the horrible battle of understanding the impossible anatomy terminology and biochemistry cycles. Physiology appears quite easier in the beginning; the easiness disappears once we start reading neurophysiology! But the difficulties with the subject will not dampen joviality of students life. When BE students are appearing for their first sem exams we are still relaxing with our first internal results! Once we get hold of the subject, atleast the idea of reading and understanding, fun phase begins. Roaming, Parties, Trips, Movies, Books and what not! First year exams are quite dreadful, once you clear that you will enter the ‘fake’ honeymoon phase. Second term extends for 1½ year, so there is no hurry to read. First six months is fixed for enjoyment, next six for knowing the names of the books in second year! And a good 6-8 hours reading per day in last 4-5 months is enough to clear second year exams! Then comes the ‘real’ honeymoon phase. With just community medicine, ENT and ophthalmology we can forget that we are medical students and do all nasty things that attracts us. By the time we enter final year, we would have learnt the art of writing exams! No issues in passing theory. A little bit of concentration in clinics will surely help us in future. And then comes internship. By this time our Engineering friends are ‘placed’ in some company and getting a handsome amount of salary. And here we are doing night duties, OPD’s, casualty, rounds and a blank future! ‘Is 22 year, a right time to earn?’ My answer is a big NO. Young minds should read and read atleast till 25; Ofcourse we Doctors read still more than that! We, Doctors don’t earn at 22 but we are still gaining knowledge which is equally or many a times more than earning at younger age. These days more and more engineers are opting for Mtech / ME, which is really a good sign. So stop comparing with Engineers, which is completely different way of working and earning. The high presence of social networking might create more jealousy in present day medical students, so be aware of it! Don’t get upset when you see your friends of other profession earning, purchasing and visiting foreign countries frequently.

Unemployment after internship is good for few days. Then comes the dangerous PG exams, they appear more dangerous now when compared to our days (around 7 years back). There will be some friends who are satisfied with MBBS for various reasons and settle in some Primary Health Care Centre. The remaining will start reading and reading and reading for PG entrance. This is the phase when students read in real sense! There is a long list of courses available and it is students choice to decide his/her way of life when opting PG seat. Want to be a clinician and still need some free time without any emergency calls - psychiatry, skin, ENT, ophtho. Want to be a busy practitioner with late night emergency calls then there is medicine, surgery, ortho, OBG, pediatrics etc. Don’t want clinicals, then there is options of pre and paraclinical subjects. I agree that most will get adjusted and adapted to whatever they get, but if you don’t want to blame the entire Medical Profession after certain years better avoid deviating from your aim and desire. 

Second confession – My aim in post graduation was reduced to two subjects, anatomy and forensic. Since I was left with Anatomy seat in counseling I became an Anatomist! 
So I have a relaxing work, work where I interact with students, from 9 to 4. Ofcourse I could have established a clinic as general practitioner to earn some extra bucks (I don’t want to use great words like service for private practice) but I didn’t as I wanted good enough of extra time for my extracurricular activities! If you opt for Clinical subjects, especially in a government college then the difficulty of all those continuous night duties, sleepless nights begins. As I said it is our option not some outside force. Even after seeing Medical teachers ‘relaxed’ life, how many of the students want to opt that? Probably no one. When Clinical subject is ‘our’ choice why to blame the profession in future? There are many clinicians who restrict their work and restrict their earning capability just to have some good personal life. How many of busy practitioners agree to restrict their practice? Again, probably no one. Most of the Doctors Can’t just restrict themselves to a good amount of salary to lead a respectable life. Why to blame the profession when craving for money for lavish lifestyle is the main reason for busy and hectic schedule for many doctors? 

And the common reason why many doctors blame Medical Profession is disrespect from people and society. If you are reading till this sentence please have a look at the image of Black dot on a white canvas at the beginning. Whatever good a Doctor does is washed away by a simple/single mistake. That is not the mistake of society. It is mistake of people’s (including Doctors) mindset. We forget the good things done by a person and we are always eager to point out his/her mistakes. Black dot is always more appreciable than the white canvas. Don’t we have bunch of patients who are always grateful to us. Who always say ‘you saved us’. Why don’t we remember them and forget those who scold us. I am sure Doctors will agree that they have very few patients who scold them and a large number who praise them. Unless you are very bad doctor patients good words exceeds bad words. Negativity gains more publicity in the era of social media (which is evident by Roshan’s articles virality) and 24 x 7 news channels and that is the reason why doctors mistakes are highlighted in the mainstream media. Never get carried away from the media news!

Major benefit of Medical field is our lifestyle is completely in our control. At any moment we can leave the bigger institutions in which we work and just be satisfied with a small clinic in urban/ semi urban/ rural areas. How many of other professionals have this option? There are lacunae in our profession, there is lacunae in society’s view of Doctors but that doesn’t instigate me to avoid my child from opting Medicine if he/she wants to become a Doctor.

Third Confession – I have watched more than 300 movies in theatres during my MBBS days (almost one or two every week), I have read more than 300 non text books during my MBBS days and still I succeeded to clear all years with first class!

Last Confession – I still don’t have a child! 

Though this article doesn’t completely oppose Roshan’s view, the title for this article is to completely oppose Roshan’s title which I don’t agree.

I don’t earn in lakhs now but I am leading a happier and self satisfactory life with my continued hobby of reading, writing, photography.

I am sure this article won’t reach many but still I thought it is my responsibility as a Doctor to oppose some of the views of Dr. Roshan.

Thank you,
Dr Ashok K R

ಮೇ 19, 2015

ಐ.ಎ.ಎಸ್ ಮಾಫಿಯ

M N Vijayakumar
ಅವರು ಮಾಡಿದ ಏಕೈಕ ತಪ್ಪೆಂದರೆ ಐ.ಎ.ಎಸ್ ಅಧಿಕಾರಿಯಾಗಿದ್ದುಕೊಂಡು ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು. ಆಧಾರ ಸಹಿತ ದೂರುಗಳನ್ನು ನೀಡಿದ್ದು. ಐ.ಎ.ಎಸ್ ಅಧಿಕಾರಿಗಳ ಕೃಪಾಕಟಾಕ್ಷಕ್ಕೆ ಒಳಪಟ್ಟ ಸರಕಾರಗಳು ಎಂ.ಎನ್.ವಿಜಯಕುಮಾರರಿಗೆ ಮಾನ ಸಮ್ಮಾನಗಳನ್ನು ನೀಡಲಿಲ್ಲ. ಪದೇ ಪದೇ ವರ್ಗಾವಣೆ ಮಾಡಿದರು. ಸಾಧ್ಯವಾದ ಎಲ್ಲಾ ರೀತಿಗಳಿಂದಲೂ ಅವರಿಗೆ ತೊಂದರೆ ಕೊಟ್ಟರು. ಕೊನೆಗೆ ನಿವೃತ್ತಿಗೆ ಇನ್ನೊಂದು ದಿನವಿರುವಾಗ ಬಲವಂತದಿಂದ ನಿವೃತ್ತರನ್ನಾಗಿಸಿದರು. ನಿವೃತ್ತ ಜೀವನದಲ್ಲಿ ಅವರಿಗೆ ಲಭಿಸಬೇಕಿದ್ದ ಸೌಲಭ್ಯಗಳನ್ನು ಮೊಟಕುಗೊಳಿಸಿ ಮಾನಸಿಕ ಮತ್ತು ಆರ್ಥಿಕ ಹಿಂಸೆಗೆ ಒಳಪಡಿಸಿದರು. ಜೀವನ ಪರ್ಯಂತ ಭ್ರಷ್ಟತೆ ವಿರುದ್ಧ ಹೋರಾಡುತ್ತಲೇ ಬಂದ ವಿಜಯಕುಮಾರವರನ್ನು ಬಲವಂತದಿಂದ ನಿವೃತ್ತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು ಭ್ರಷ್ಟತೆಯ ವಿರುದ್ಧ ಕೂಗು ಹಾಕುತ್ತಲೇ ಅಧಿಕಾರವಿಡಿದ ಮೋದಿ ಸರಕಾರ. ನಮ್ಮದು ಹಗರಣರಹಿತ ಸರಕಾರ ಎಂದು ಕೊಚ್ಚಿಕೊಳ್ಳುವ ಸಿದ್ಧರಾಮಯ್ಯ ‘ನಮಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಕೈತೊಳೆದುಕೊಳ್ಳುವ ಮಾತನಾಡಿದ್ದು ನಿಷ್ಠಾವಂತರ ಬಗೆಗಿನ ಅವರ ಪ್ರೀತಿಗೆ ಸಾಕ್ಷಿ. ಕೇಂದ್ರದ ನಿರ್ಧಾರದಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲದೇ ಇರಬಹುದು, ಆದರೆ ನೈತಿಕ ಬೆಂಬಲ ಕೊಟ್ಟು ಕೇಂದ್ರಕ್ಕೊಂದು ಪತ್ರವನ್ನಾದರೂ ಬರೆದು ನಿಷ್ಠಾವಂತ ಅಧಿಕಾರಿಗಳಿಗೊಂದು ಸಂದೇಶ ನೀಡಬಹುದಿತ್ತಲ್ಲವೇ? ಎಂ. ಎನ್. ವಿಜಯಕುಮಾರ್ ರವರು ಕೇಂದ್ರಕ್ಕೆ, ರಾಜ್ಯಕ್ಕೆ ಬರೆದಿರುವ ಮನವಿ ಪತ್ರದ ಈ ಕನ್ನಡಾನುವಾದ ಹಿಂಗ್ಯಾಕೆಯ ಓದುಗರಿಗೆ ಐ.ಎ.ಎಸ್ ಮಾಫಿಯಾದ ಬಗ್ಗೆ ಪರಿಚಯಿಸಿಕೊಡಲಿದೆ. 
ಎಂ.ಎನ್. ವಿಜಯ್ ಕುಮಾರ್
ಕನ್ನಡಕ್ಕೆ: ಡಾ ಅಶೋಕ್.ಕೆ.ಆರ್

ಇದೇ 2015ರ ಎಪ್ರಿಲ್ 28ಕ್ಕೆ ನಿವೃತ್ತನಾಗಬೇಕಿದ್ದ ನನ್ನನ್ನು ಒಂದು ದಿನ ಮೊದಲು ಬಲವಂತದಿಂದ ನಿವೃತ್ತನಾಗುವಂತೆ ಮಾಡಿದ ಹಿಂದಿನ ಕಾರಣಗಳನ್ನು ಅರಿಯಬೇಕಾದರೆ ಭಾರತದ ಐ.ಎ.ಎಸ್ ಮಾಫಿಯ ಕಾರ್ಯನಿರ್ವಹಿಸುವ ರೀತಿಯನ್ನು ಮತ್ತು ಈ ಮಾಫಿಯ ದೇಶದ ಸಂವಿಧಾನಾತ್ಮಕ ಸಂಸ್ಥೆಗಳನ್ನು ತಪ್ಪುದಾರಿಗೆಳೆಯುವ ವಿಧಾನವನ್ನು ತಿಳಿಯಬೇಕು. 2010ರಲ್ಲಿ ಐ.ಎ.ಎಸ್ ಮಾಫಿಯ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮತ್ತಲವು ಖ್ಯಾತನಾಮರ ಹೆಸರನ್ನು ಬಳಸಿಕೊಂಡು ಕಾನೂನು ಬಾಹಿರ ಕೆಲಸಗಳನ್ನು ಮಾಡಿದ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ಈ ಐ.ಎ.ಎಸ್ ಮಾಫಿಯಾಗೆ ನಾನು ಮಗ್ಗಲು ಮುಳ್ಳಾಗಿದ್ದ ಕಾರಣ ಇರುವ ಎಲ್ಲಾ ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರಿ ನನ್ನನ್ನು ಬಲವಂತದಿಂದ ನಿವೃತ್ತನಾಗುವಂತೆ ಮಾಡುವುದು ಕಷ್ಟವಾಗಲಿಲ್ಲ. ಈ ಮಾಫಿಯಾದ ಸುಳ್ಳುಗಳಿಂದ ವಿಚಲಿತರಾಗದೆ ಉನ್ನತ ಸಂಸ್ಥೆಗಳು ನನಗೆ ನ್ಯಾಯ ದೊರಕಿಸಿಕೊಡಬಲ್ಲವೇ ಎಂಬುದೇ ಈಗ ನನ್ನೆದುರಿಗಿರುವ ಪ್ರಶ್ನೆ. ನನಗನ್ಯಾಯ ಮಾಡಿದವರಿಗೆ ಶಿಕ್ಷೆಯಾಗಿ, ನನಗೆ ನ್ಯಾಯ ದೊರಕಲಿ ಎಂಬ ಆಶಯದಿಂದ ಗೌಪ್ಯವಾಗಿರಬೇಕಿದ್ದ ಈ ಪತ್ರವನ್ನು ಸಾರ್ವಜನಿಕ ಓದಿಗೆ ತೆರೆದಿದ್ದೇನೆ. ಐ.ಎ.ಎಸ್ ಸಂಸ್ಥೆಯ ಇತಿಹಾಸದಲ್ಲಿ ನನ್ನ ಬಲವಂತದ ನಿವೃತ್ತಿ ಹೇಗೆ ಅಪರೂಪವೋ ಹಾಗೆಯೇ ಈ ರೀತಿಯ ಸಾರ್ವತ್ರಿಕ ಸಾರ್ವಜನಿಕ ಮನವಿ ಕೂಡ ಅಷ್ಟೇ ಅಪರೂಪ. ಐ.ಎ.ಎಸ್ ಮಾಫಿಯ ಕಟ್ಟಿರುವ ಬೃಹತ್ ಗೋಡೆಯನ್ನು ಕೆಡವುವುದಕ್ಕೆ ನನಗಿನ್ಯಾವ ದಾರಿಯೂ ತೋಚುತ್ತಿಲ್ಲ.

ಕರ್ನಾಟಕದಲ್ಲಿ ಐ.ಎ.ಎಸ್ ಮಾಫಿಯಾದ ಜನನ

ಅಧಿಕಾರ ಭ್ರಷ್ಟಾಚಾರವನ್ನುಟ್ಟು ಹಾಕುತ್ತದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವಂತದ್ದೇ. ದೀರ್ಘ ಅವಧಿಯವರೆಗೆ ಅಧಿಕಾರದ ರುಚಿ ಹತ್ತಿಸಿಕೊಂಡ ಒಂದು ಗುಂಪಿನ ಜನರು ಮಾಫಿಯಾದ ಹುಟ್ಟಿಗೆ ಕಾರಣಕರ್ತರಾಗುತ್ತಾರೆ ಎಂಬ ಸಂಗತಿ ಬಹಳ ಜನರಿಗೆ ತಿಳಿದಿರಲಾರದು. ಮಾಫಿಯಾದ ಹುಟ್ಟಿಗೆ ದುರ್ಬಲ ಸರಕಾರವಿರಬೇಕಷ್ಟೇ. ಮೊದಲ ಪೋಸ್ಟಿಂಗ್ಸಿನಿಂದ ನಿವೃತ್ತರಾಗುವ ತನಕ ಅಧಿಕಾರದ ರುಚಿ ಹತ್ತಿಸಿಕೊಳ್ಳುವ ಐ.ಎ.ಎಸ್ ಅಧಿಕಾರಿಗಳಿಗೆ ಇಂತಹುದೊಂದು ಅವಕಾಶ ಕರ್ನಾಟಕದಲ್ಲಿ ಲಭಿಸಿದ್ದು 2005ರ ಈಚೆಗೆ. ಭ್ರಷ್ಟ ಅಧಿಕಾರಿಗಳೆಲ್ಲ ಸಂಘಟಿತರಾಗಲು ಪ್ರಾರಂಭಿಸಿದರು. ನೀತಿ ನಿಯಮಗಳನ್ನು ಮೀರಲು ಪ್ರಾರಂಭಿಸುವುದರ ಜೊತೆಜೊತೆಗೆ ಭ್ರಷ್ಟಾಚಾರವನ್ನು ತಡೆಯಲೆಂದಿರುವ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲು ಶುರುಮಾಡಿದರು. ಜುಲೈ 4 2005ರಂದು ಅಂದಿನ ಮುಖ್ಯ ಕಾರ್ಯದರ್ಶಿ ಶ್ರೀ ಕೆ.ಕೆ. ಮಿಶ್ರಾರವರಿಗೆ ವ್ಯಾಪಕಗೊಳ್ಳುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತೆಗೆದುಕೊಳ್ಳಬೇಕಾದ ಸಂಭಾವ್ಯ ನಿರ್ಧಾರಗಳ ಕುರಿತು ಪತ್ರ ಬರೆದೆ. ನಂತರ ನಡೆದಿದ್ದು ಆಹ್ಲಾದ ಕೊಡುವಂತದ್ದಾಗಿರಲಿಲ್ಲ.

ಇಂಧನ ಇಲಾಖೆಯಲ್ಲಿದ್ದು ಕೆಲವು ಐ.ಎ.ಎಸ್. ಅಧಿಕಾರಿಗಳು ಜನರ ಹಣವನ್ನು ದೋಚುವುದರ ಕುರಿತಂತೆ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾರವರಿಗೆ 2005ರಲ್ಲಿ ವಿಸ್ತೃತ ವರದಿ ನೀಡಿದೆ. ನನ್ನ ವರದಿಯನ್ನು ಮಿಶ್ರಾರವರು ಮೆಚ್ಚಿಕೊಂಡರಾದರೂ ವರದಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಭಯ ವ್ಯಕ್ತಪಡಿಸಿದರು ಮತ್ತು ಈ ಭ್ರಷ್ಟ ಅಧಿಕಾರಿಗಳು ನಿಮ್ಮ ಹೆಸರನ್ನು ಹಾಳು ಮಾಡಿ ನಿಮಗೆ ತೊಂದರೆ ಕೊಡುವ ಉದ್ದೇಶದಿಂದ ಯಾವ ನೀಚ ಮಟ್ಟಕ್ಕಾದರೂ ಇಳಿಯಬಹುದು ಎಂದು ಎಚ್ಚರಿಕೆ ನೀಡಿದರು. ನಿವೃತ್ತರಾಗುವುದಕ್ಕೆ ಸ್ವಲ್ಪ ದಿನದ ಮೊದಲು ಕೆ.ಕೆ.ಮಿಶ್ರಾರವರು ನನಗೆ ಕರೆ ಮಾಡಿ ಲೋಕಾಯುಕ್ತ ಸಂಸ್ಥೆಗೆ ಸೇರಲು ನಿಮಗೆ ಇಚ್ಛೆಯಿದೆಯೇ ಎಂದು ಕೇಳಿದರು. ಭ್ರಷ್ಟರ ಬಗ್ಗೆ ನಾನೇ ಕೊಟ್ಟ ವರದಿ ಮತ್ತು ಇತರೆ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ನಿಂತೇ ಹೋಗಿರುವ ಕೇಸುಗಳ ಬಗ್ಗೆ ನೀವು ವಿಚಾರಣೆ ನಡೆಸಿ ಒಂದು ಹಂತಕ್ಕೆ ತರಬಹುದು ಎಂದು ತಿಳಿಸಿದರು. ಅವರ ಮಾತಿಗೆ ಒಪ್ಪಿ ಅಂದಿನ ಲೋಕಾಯುಕ್ತ ಎನ್.ವೆಂಕಟಾಚಲರವರನ್ನು ಭೇಟಿ ಮಾಡಿ ಲೋಕಾಯುಕ್ತ ಸಂಸ್ಥೆಯಲ್ಲಿ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಲಿಕ್ಕಿರುವ ಇಚ್ಛೆಯನ್ನು ಹೇಳಿಕೊಂಡೆ. ಆಗ ಲೋಕಾಯುಕ್ತ ವೆಂಕಟಾಚಲ ಒಪ್ಪಿಗೆಯನ್ನು ಪತ್ರದಲ್ಲಿ ಕೊಟ್ಟು ಮುಖ್ಯಕಾರ್ಯದರ್ಶಿಗೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿ ಎಂದರು. ಇಷ್ಟೊತ್ತಿಗೆ ಮಿಶ್ರಾ ನಿವೃತ್ತರಾಗಿ ಬಿ.ಕೆ.ದಾಸ್ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿದ್ದರು. ಮುಖ್ಯಕಾರ್ಯದರ್ಶಿಯಾಗುವುದಕ್ಕೆ ಮುಂಚೆ ಬಿಕೆ.ದಾಸ್ ಸಾರ್ವಜನಿಕ ಉದ್ದಿಮೆಯ ಇಲಾಖೆಯಲ್ಲಿ ನನ್ನ ಸೀನಿಯರ್ ಆಗಿದ್ದರು. ಆ ಇಲಾಖೆಯಲ್ಲಿದ್ದಾಗ ಬಿಕೆ.ದಾಸ್ ರವರ ಕಾರ್ಯವೈಖರಿಲ್ಲಿದ್ದ ಹುಳುಕುಗಳನ್ನು ಅವರ ಗಮನಕ್ಕೆ ತಂದಿದ್ದೆ. ಎನ್.ವೆಂಕಟಾಚಲರವರು ಸಾರ್ವಜನಿಕವಾಗಿಯೇ ಬಿಕೆ.ದಾಸ್ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದರು. ಇಂತ ಬಿಕೆ.ದಾಸ್ ನನ್ನನ್ನು ಲೋಕಾಯುಕ್ತಕ್ಕೆ ನೇಮಿಸುತ್ತಾರೆ ಎನ್ನುವುದು ಹಗಲುಗನಸೇ ಸರಿ. ನಂತರದ ದಿನಗಳಲ್ಲಿ ನನಗೆ ತಿಳಿದು ಬಂದಂತೆ ಬಿಕೆ.ದಾಸ್ ರವರ ಸೂಚನೆಯ ಮೇರೆಗೆ ಕೆಲವು ಹಿರಿಯ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ಗುಂಪುಗೂಡಿ ಜಿಲ್ಲಾಮಟ್ಟದ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೇರಿ ಅವರೆಲ್ಲರೂ ನನ್ನನ್ನು ಲೋಕಾಯುಕ್ತ ಕಛೇರಿಗೆ ನಿಯೋಜಿಸುವುದನ್ನು ವಿರೋಧಿಸುವಂತೆ ಮಾಡಿದ್ದರು. ವೆಂಕಟಾಚಲರವರು ನನಗೆ ಕರೆ ಮಾಡಿ ನಿಮ್ಮನ್ನು ಲೋಕಾಯುಕ್ತಕ್ಕೆ ತೆಗೆದುಕೊಳ್ಳುವುದು ಕಷ್ಟಸಾಧ್ಯ, ತೆಗೆದುಕೊಳ್ಳದಂತೆ ಕಟ್ಟಿಹಾಕಿದ್ದಾರೆ, ಕೆ.ಕೆ.ಮಿಶ್ರಾರವರಿಗೂ ಈ ಸಂದಿಗ್ಧತೆಯನ್ನು ವಿವರಿಸಿದ್ದೇನೆ ಎಂದರು (ಕೆ.ಕೆ.ಮಿಶ್ರಾ ನಿವೃತ್ತರಾದ ನಂತರ ಮಾಹಿತಿ ಆಯೋಗದ ಅಧ್ಯಕ್ಷರಾದರು). ಇದು ಐ.ಎ.ಎಸ್ ಮಾಫಿಯಾದ ಜನನ. 
http://depenq.com/PRESSRELEASE/14aug06.pdf 

ಕರ್ನಾಟಕದ ಐ.ಎ.ಎಸ್ ಮಾಫಿಯಾ ಬೆಳೆದ ಬಗೆ

ಆಗಸ್ಟ್ 28, 2006ರಂದು, ಕರ್ನಾಟಕ ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ನೇಮಕಗೊಂಡ ಕೆಲವು ದಿನಗಳ ತರುವಾಯ ನಡೆದ ಐ.ಎ.ಎಸ್ ಅಧಿಕಾರಿಗಳ ಸಭೆಯಲ್ಲಿ ಐ.ಎ.ಎಸ್ ಅಧಿಕಾರಿಗಳ ಸಹಕಾರವನ್ನು ಕೋರುತ್ತಾ ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ತಿಯನ್ನು ಸಾರ್ವಜನಿಕರ ಮುಂದೆ ತೆರೆದಿಡುವಂತೆ ಹಿರಿಯ ಐ.ಎ.ಎಸ್ ಅಧಿಕಾರಿಗಳಿಗೆ ಕೇಳಿಕೊಂಡರು. ನಾನು ಮತ್ತು ಇತರೆ ಇಬ್ಬರು ಅಧಿಕಾರಿಗಳು ಈ ಆಸ್ತಿ ಘೋಷಣೆಯ ಸಲಹೆಗೆ ಸಭೆಯಲ್ಲಿಯೇ ಒಪ್ಪಿಗೆ ಸೂಚಿಸಿದೆವು. ಸಭೆ ನಡೆದ ಮರುದಿನವೇ ಅಂದರೆ ಆಗಸ್ಟ್ 29, 2006ರಂದು ನನ್ನ ಮತ್ತು ಕುಟುಂಬ ಸದಸ್ಯರ ಆಸ್ತಿಯ ಸಂಪೂರ್ಣ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ನೀಡಿದೆ. ಲೋಕಾಯುಕ್ತ ಅದೇ ದಿನ ಮೆಚ್ಚುಗೆಯ ಪತ್ರ ಕಳುಹಿಸಿತು. ದುರದೃಷ್ಟವಶಾತ್, ಅಂದಿನ ಸಭೆಯಲ್ಲಿ ಆಸ್ತಿ ಘೋಷಿಸುವುದಾಗಿ ಹೇಳಿದ್ದ ಈರ್ವರು ನಿವೃತ್ತರಾಗುವವರೆಗೂ ಆ ಕೆಲಸ ಮಾಡಲಿಲ್ಲ. ಲೋಕಾಯುಕ್ತಕ್ಕೆ ಆಸ್ತಿ ವಿವರಗಳನ್ನು ನೀಡಿ ಅದನ್ನು ಸಾರ್ವಜನಿಕಗೊಳಿಸುವುದಕ್ಕೆ ಒಪ್ಪಿಗೆ ಕೊಟ್ಟ ದೇಶದ ಮೊದಲ ಐ.ಎ.ಎಸ್ ಅಧಿಕಾರಿ ನಾನು. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಹೆಚ್ಚೆಚ್ಚು ಜನರು ಐ.ಎ.ಎಸ್ ಅಧಿಕಾರಿಗಳ ಆಸ್ತಿ ವಿವರಗಳನ್ನು ಕೇಳಲಾರಂಭಿಸಿದಾಗ ಕರ್ನಾಟಕ ಮಾಹಿತಿ ಆಯೋಗ ಐ.ಎ.ಎಸ್ ಅಧಿಕಾರಿಗಳಿಗೆ ಆಸ್ತಿ ಘೋಷಿಸುವಂತೆ ಸೂಚಿಸಿತ್ತು. ಆದರೆ ಅನೇಕ ಐ.ಎ.ಎಸ್ ಅಧಿಕಾರಿಗಳ ಒತ್ತಡಕ್ಕೆ ಮಣಿದು ಈ ಸೂಚನೆಯನ್ನು ಹಿಂಪಡೆದುಬಿಟ್ಟಿತು. ಅಕ್ರಮ ಆಸ್ತಿ ಹೊಂದಿದ ದೊಡ್ಡ ಸಂಖೈಯ ಐ.ಎ.ಎಸ್ ಅಧಿಕಾರಿಗಳಿಗೆ ಆಗಷ್ಟೇ ಕಣ್ಣುಬಿಡುತ್ತಿದ್ದ ಐ.ಎ.ಎಸ್ ಮಾಫಿಯಾವನ್ನು ಸೇರುವುದರಿಂದ ಬಹಳಷ್ಟು ಪ್ರಯೋಜನಗಳಿವೆ ಎಂಬ ಸತ್ಯ ತಿಳಿಯಿತು. ಲೋಕಾಯುಕ್ತ ಮನವಿ ಐ.ಎ.ಎಸ್ ಅಧಿಕಾರಿಗಳನ್ನು ಆಸ್ತಿ ಘೋಷಣೆಗೆ ಉತ್ಸುಕರನ್ನಾಗಿಸುವ ಬದಲು ಸಂಪೂರ್ಣ ವಿರೋಧಾಭಾಸದ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಿದ್ದು ವಿಪರ್ಯಾಸ.
http://depenq.com/PRESSRELEASE/Loka30AUG06.pdf

ಖ್ಯಾತಿಯ ನೆರಳಲ್ಲಿ ನ್ಯಾಯ ಮರೀಚಿಕೆ

jayalalitha disproportionate assets case
Ashok K R
ಇಂಡಿಯಾದಲ್ಲಿ ಯಾರು ಕೆಟ್ಟೋದ್ರೂ ಕೊನೆಗೆ ನ್ಯಾಯಾಲಯವಾದರೂ ನ್ಯಾಯದ ಪರವಾಗೇ ಕೆಲ್ಸ ಮಾಡುತ್ತವೆಂಬ ನಂಬಿಕೆಯೊಂದು ಜನಸಾಮಾನ್ಯರಲ್ಲಿದೆ. ಆ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಹ ಎರಡು ತೀರ್ಪುಗಳು ಇತ್ತೀಚಿನ ದಿನಗಳಲ್ಲಿ ಬಂತು. ಗಟ್ಟಿಗೊಂಡ ನಂಬಿಕೆಯನ್ನು ಸಂಪೂರ್ಣವಾಗಿ ಶಿಥಿಲಗೊಳಿಸಿ ಉರುಳಿಸಿಯೇ ಬಿಡುವಂತಹ ತೀರ್ಪನ್ನು ಮೇಲ್ಮಟ್ಟದ ನ್ಯಾಯಾಲಯಗಳು ನೀಡಿತು. ‘ನ್ಯಾಯಕ್ಕೆ ಜಯವಾಗಲಿ’ ಎಂದು ಹರ್ಷ ವ್ಯಕ್ತಪಡಿಸಿದವರೆಲ್ಲಾ ಕೆಲವೇ ದಿನಗಳಲ್ಲಿ ‘ನ್ಯಾಯ ಎಲ್ಲಿದೆ’ ಎಂದು ಕೇಳಲಾರಂಭಿಸಿಬಿಟ್ಟರು! ದೂಷಣೆ ಕೇವಲ ನ್ಯಾಯಾಲಯ ಮತ್ತು ನ್ಯಾಯದೀಶರೆಡೆಗೆ ಇರಬೇಕಾ ಅಥವಾ ಇಡೀ ಸಮಾಜ ಇಂತಹ ತೀರ್ಪುಗಳಿಗೆ ಕಾರಣವಾ? ಎರಡೂ ಪ್ರಕರಣಗಳಲ್ಲಿರುವ ಸಾಮಾನ್ಯ ಅಂಶವೆಂದರೆ ಕೆಳ ಹಂತದ ನ್ಯಾಯಾಲಯಗಳಲ್ಲಿ ಅಪರಾಧಿ ಎಂಬ ಆರೋಪ ಹೊತ್ತವರು ಖ್ಯಾತಿವಂತರು. ಒಬ್ಬರು ಸಿನಿಮಾ ಕ್ಷೇತ್ರದಲ್ಲಿ ಹೆಸರುವಾಸಿಯಾದರೆ ಮತ್ತೊಬ್ಬರು ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ತೆರಳಿ ದೊಡ್ಡ ಹೆಸರು ಮಾಡಿದವರು. ಸಲ್ಮಾನ್ ಖಾನ್ ಮತ್ತು ಜಯಲಲಿತಾ ಈ ಬಾರಿಯ ಅಂಕಣದ ಅತಿಥಿಗಳು.

ಅಕ್ರಮ ಆಸ್ತಿಯ ಪ್ರಕರಣದಲ್ಲಿ ಎ1 ಆಗಿದ್ದ ಜಯಲಲಿತಾರ ಮೇಲಿದ್ದ ಆರೋಪ ಸಾಬೀತಾಗಿದೆಯೆಂದು ಘೋಷಿಸಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯ ಜಯಲಲಿತಾರಿಗೆ ನಾಲ್ಕು ವರುಷದ ಜೈಲು ಶಿಕ್ಷೆ ಮತ್ತು ನೂರು ಕೋಟಿ ದಂಡ ವಿಧಿಸಿದ್ದರು. ಪ್ರಕರಣದ ಇನ್ನಿತರ ಆರೋಪಿಗಳಾದ ಅವರ ಸಾಕು ಮಗ ಸುಧಾಕರನ್, ಗೆಳತಿ ಶಶಿಕಲಾ ನಟರಾಜನ್ ಮತ್ತು ಶಶಿಕಲಾರ ಸಂಬಂಧಿಯಾದ ಇಳವರಸಿಗೆ ನಾಲ್ಕು ವರುಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಮತ್ತು ಆ ಮೂವರಿಗೂ ತಲಾ ಹತ್ತು ಕೋಟಿ ದಂಡ ವಿಧಿಸಲಾಗಿತ್ತು. ನ್ಯಾಯಾಲಯದಿಂದ ನೇರವಾಗವರನ್ನು ಜೈಲಿಗೆ ಬೀಳ್ಕೊಡಲಾಗಿತ್ತು. ಜಯಲಲಿತಾರವರ ಮುಖ್ಯಮಂತ್ರಿ ಸ್ಥಾನ ಮತ್ತು ಶಾಸಕತ್ವವೆರಡೂ ತತ್ ಕ್ಷಣದಿಂದಲೇ ರದ್ದಾಗಿತ್ತು. ಪನೀರ್ ಸೆಲ್ವಂ ಮುಖ್ಯಮಂತ್ರಿ ಸ್ಥಾನ ‘ಅಲಂಕರಿಸಿದ್ದರು’. ಎಲ್ಲಾ ಆರೋಪಿಗಳಿಗೂ ಇರುವ ಹಾಗೆ ಜಯಲಲಿತಾರವರಿಗೂ ಮೇಲ್ ಹಂತದ ನ್ಯಾಯಾಲಯಗಳಿಗೆ ಅಪೀಲು ಹೋಗುವ, ತಾವು ನಿರಪರಾಧಿ ಎಂದು ತೋರ್ಪಡಿಸಿಕೊಳ್ಳುವ ಅವಕಾಶವಿತ್ತು. ಜಾಮೀನು ಸಿಗಬಾರದ ಪ್ರಕರಣವೇನಲ್ಲವಾದ ಕಾರಣ ಸ್ವಲ್ಪ ದಿನದ ಜೈಲು ವಾಸದ ನಂತರ ಜಾಮೀನು ಪಡೆದು ಹೊರಬಂದಿದ್ದೂ ಆಯಿತು. ಈಗ ಕರ್ನಾಟಕದ ಹೈಕೋರ್ಟಿನ ನ್ಯಾಯಮೂರ್ತಿ ಕುಮಾರಸ್ವಾಮಿ ಜಯಲಲಿತಾ ಮತ್ತು ಇತರೆ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ. ‘ಅಮ್ಮ’ ಬಿಡುಗಡೆಗೊಂಡಿದ್ದಕ್ಕೆ ಎಐಎಡಿಎಂಕೆಯ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದರೆ ಪ್ರಭಾವಿಗಳಾದರೆ ಏನು ಮಾಡಿಯೂ ತಪ್ಪಿಸಿಕೊಳ್ಳಬಹುದು ಎಂಬ ಸಿನಿಕತನ ಜನರಲ್ಲಿ ಮನೆಮಾಡಿದೆ. ಇವೆಲ್ಲದರ ಮಧ್ಯೆ ನಮ್ಮ ಪ್ರಧಾನ ಮಂತ್ರಿಯೇ ಖುದ್ದಾಗಿ ಜಯಲಲಿತಾರಿಗೆ ಫೋನ್ ಮಾಡಿ ತೀರ್ಪಿಗೆ ಸಂತಸ ವ್ಯಕ್ತಪಡಿಸುತ್ತಾರೆಂದ ಮೇಲೆ ತಮಿಳುನಾಡಿನ ಜನರ ಭಾವನೆಗಳಲ್ಲಿ ತಪ್ಪೇನಿದೆ? ಇಷ್ಟಕ್ಕೂ ಜಯಲಲಿತಾ ನಿರಪರಾಧಿ ಎಂಬ ತೀರ್ಪು ಪ್ರಕಟವಾಗಿದ್ದೇಗೆ?

ಜಯಲಲಿತಾ ಮತ್ತವರ ಸಹಆರೋಪಿಗಳನ್ನು ಖುಲಾಸೆಗೊಳಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಹೈಕೋರ್ಟ್ ಮಾಡಿದೆ ಎಂಬ ಸಂಗತಿ ನ್ಯಾಯಾಲಯದ ಮೇಲೆ ಮತ್ತು ನ್ಯಾಯಮೂರ್ತಿಯ ಮೇಲೆ ಅನುಮಾನ ಮೂಡಿಸುತ್ತದೆ. ಒಟ್ಟು ಆದಾಯದ ಹತ್ತು ಪರ್ಸೆಂಟಿನ ಒಳಗಿನ ಅಕ್ರಮ ಆಸ್ತಿ ಪ್ರಕರಣದಲ್ಲಿ ಆರೋಪಿಯನ್ನು ಅಪರಾಧಿಯನ್ನಾಗಿ ಮಾಡಬೇಕಿಲ್ಲ ಎಂದು ಕೃಷ್ಣಾನಂದ್ ಅಗ್ನಿಹೋತ್ರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೊಟ್ಟಿದ್ದ ತೀರ್ಪನ್ನೇ ನೆಪವಾಗಿಟ್ಟುಕೊಂಡು ಜಯಲಲಿತಾರ ಅಕ್ರಮ ಆಸ್ತಿ ಅವರ ಒಟ್ಟು ಆದಾಯದ ಹತ್ತು ಪರ್ಸೆಂಗಿಂತಲೂ ಕಡಿಮೆ ಇತ್ತು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ನ್ಯಾಯಾಲಯದ ಪ್ರಕಾರ ಜಯಲಲಿತಾರ ಅಕ್ರಮ ಆಸ್ತಿಯಿದ್ದದ್ದು ಅರವತ್ತಾರು ಕೋಟಿ ರುಪಾಯಿಗಳು. ಹೈಕೋರ್ಟಿನ ತೀರ್ಪಿನ ಪ್ರಕಾರ ಜಯಲಲಿತಾರವರ ಅಕ್ರಮ ಆಸ್ತಿ ಮೂರು ಕೋಟಿಗಿಂತಲೂ ಕಡಿಮೆ! ಉಳಿದ ಅರವತ್ತಮೂರು ಕೋಟಿ ಎಲ್ಲಿ ಹೋಯಿತು ಎಂದು ಗಮನಿಸಿದಾಗ ಅಚ್ಚರಿಯ ವಿಷಯಗಳು ತಿಳಿಯುತ್ತವೆ. ಸಾವಿರದ ಆರುನೂರು ಚದರಅಡಿಯಲ್ಲಿ ಕಟ್ಟಡ ಕಟ್ಟುವುದಕ್ಕೆ ಬೇಕಾದ ಹಣವನ್ನು ಕೆಳಹಂತದ ನ್ಯಾಯಾಲಯದಲ್ಲಿ ಹೇಳಿದ್ದಕ್ಕಿಂತ ಕಡಿಮೆಗೊಳಿಸಿದೆ ಹೈಕೋರ್ಟ್. ಇದೊಂದು ಬಾಬ್ತಿನಲ್ಲೇ ಇಪ್ಪತ್ತೆರಡು ಕೋಟಿಯಷ್ಟು ಆಸ್ತಿ ಕಡಿತಗೊಂಡಿದೆ. ಇನ್ನು ಸಾಕು ಮಗ ಸುಧಾಕರ್ ಮದುವೆಗೆ ಆರುವರೆ ಕೋಟಿ ಖರ್ಚಾಗಿತ್ತೆಂದು ಸಾಬೀತಾಗಿತ್ತು. ಹೈಕೋರ್ಟ್ ಜಯಲಲಿತಾರವರ ವಾದವನ್ನು ಮನ್ನಿಸುತ್ತಾ ಜಯಲಲಿತಾ ಖರ್ಚು ಮಾಡಿದ್ದು ಇಪ್ಪತ್ತೆಂಟು ಲಕ್ಷ ಮಾತ್ರ, ಭಾರತದಲ್ಲಿ ಹಿಂದೂ ರಿವಾಜಿನ ಪ್ರಕಾರ ಮದುವೆಯನ್ನು ಹುಡುಗಿಯ ಮನೆಯವರು ಮಾಡಿಕೊಡುತ್ತಾರೆ ಎಂಬುದನ್ನು ಉಲ್ಲೇಖಿಸುತ್ತಾ ಉಳಿದ ಆರೂ ಕಾಲು ಕೋಟಿಯಷ್ಟು ಹಣವನ್ನು ಹುಡುಗಿಯ ಮನೆಯವರು ಮತ್ತು ಎಐಎಡಿಎಂಕೆ ಕಾರ್ಯಕರ್ತರು ಖರ್ಚು ಮಾಡಿದ್ದಾರೆ ಎಂದು ಆರು ಕಾಲು ಕೋಟಿಯಷ್ಟು ಹಣವನ್ನು ಜಯಲಲಿತಾರ ಆಸ್ತಿಯಿಂದ ಕಡಿತಗೊಳಿಸಿದ್ದಾರೆ! ವಿವಿಧ ಬ್ಯಾಂಕುಗಳಿಂದ ಪಡೆದುಕೊಂಡಿದ್ದ ಇಪ್ಪತ್ತನಾಲ್ಕು ಕೋಟಿಯಷ್ಟು ಸಾಲದಲ್ಲಿ ಹದಿನೆಂಟು ಕೋಟಿಯಷ್ಟನ್ನು ಆದಾಯಕ್ಕೆ ಸೇರಿಸಿದ್ದಾರೆ. ಇನ್ನು ದ್ರಾಕ್ಷಿ ತೋಟದಿಂದ ಜಯಲಲಿತಾ ನಲವತ್ತಾರು ಲಕ್ಷ ಕೋಟಿ ರುಪಾಯಿಯಷ್ಟನ್ನು ಸಂಪಾದಿಸಿದ್ದಾರೆ (ನಮ್ಮ ರೈತರು ಆ ತೋಟಗಳಿಗೆ ಹೋಗಿ ಆದಾಯ ಹೆಚ್ಚಿಸುವುದನ್ನು ಕಲಿಯಬಹುದು!). ಉಡುಗೊರೆಯ ರೂಪದಲ್ಲಿ ಒಂದೂವರೆ ಕೋಟಿಯಷ್ಟು ಆದಾಯ ಪಡೆದಿದ್ದಾರೆ. ಪ್ರಕಾಶಕರೆಲ್ಲ ಒದ್ದಾಡುವ ಸಂದರ್ಭಗಳನ್ನು ಕಾಣುವುದೇ ಅಧಿಕ. ಅಂತಹದರಲ್ಲಿ ಜಯಲಲಿತಾರ ಜಯಾ ಪಬ್ಲಿಕೇಷನ್ಸ್ ಬರೋಬ್ಬರಿ ನಾಲ್ಕು ಕೋಟಿ ಆದಾಯ ಗಳಿಸಿದೆ! ಜಯಲಲಿತಾರ ಮನೆಯಲ್ಲಿ ಸಾವಿರಗಟ್ಟಲೆ ಸೀರೆ, ಚಪ್ಪಲಿ, ಕೆಜಿಗಟ್ಟಲೆ ಇದ್ದ ಚಿನ್ನವನ್ನೆಲ್ಲ ಅಕ್ರಮ ಆಸ್ತಿ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಹೈಕೋರ್ಟಿನಲ್ಲಿ ಅಷ್ಟೂ ಸಾಮಾನುಗಳು ಜಯಲಲಿತಾ ಚಿತ್ರರಂಗದಲ್ಲಿದ್ದಾಗ ಚಿತ್ರೀಕರಣದ ಸಲುವಾಗಿ ಪಡೆದುಕೊಂಡಿದ್ದು ಎಂಬ ವಾದವನ್ನು ಒಪ್ಪಿ ಅದನ್ನು ಅಕ್ರಮ ಆಸ್ತಿ ಪಟ್ಟಿಯಿಂದಲೇ ಹೊರಗಿಡಲಾಗಿದೆ. ಹೈಕೋರ್ಟಿನ ಲೆಕ್ಕಾಚಾರದ ಪ್ರಕಾರ ಜಯಲಲಿತಾರ ಆದಾಯ ವಿಪರೀತವಾಗಿ ಹೆಚ್ಚಾಗಿ, ಅಕ್ರಮ ಆಸ್ತಿ ಮೂರು ಕೋಟಿಗಿಂತ ಕಡಿಮೆಯಾಗಿಬಿಟ್ಟಿದೆ. ಒಟ್ಟು ಆದಾಯ ಮೂವತ್ತೈದು ಕೋಟಿಯ ಹತ್ತಿರವಿದ್ದರೆ, ಒಟ್ಟು ಆಸ್ತಿ ಮೂವತ್ತೇಳು ಕೋಟಿಯಷ್ಟಿದೆ. ಅಲ್ಲಿಗೆ ಅಕ್ರಮ ಆಸ್ತಿಯ ಪ್ರಮಾಣ ಹತ್ತು ಪ್ರತಿಶತಃಕ್ಕಿಂತ ಕಡಿಮೆಯಾಗಿ ಜಯಲಲಿತಾ ಆರೋಪ ಮುಕ್ತರಾಗಿ ಜೈಲಿನಿಂದ ಹೊರಬಂದು ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯಾದ ನಂತರ ಆರು ತಿಂಗಳು ಕಳೆಯುವುದರೊಳಗೆ ಶಾಸಕತ್ವ ಪಡೆದುಕೊಳ್ಳುವುದು ಜಯಲಲಿತಾರಿಗೆ ಕಷ್ಟಕರವಾದ ಸಂಗತಿಯೇನಲ್ಲ.

salman khan case
ಇನ್ನು ಹೆಚ್ಚು ಪ್ರಚಾರ ಪಡೆದ ಮತ್ತೊಂದು ಪ್ರಕರಣವೆಂದರೆ ಸಲ್ಮಾನ್ ಖಾನಿನ ಗುದ್ದೋಡು ಪ್ರಸಂಗ. ಬರೋಬ್ಬರಿ ಹದಿಮೂರು ವರುಷಗಳ ಹಿಂದೆ ಪಾನಮತ್ತನಾಗಿ ವಾಹನ ಚಲಾಯಿಸಿ ರಸ್ತೆ ಪಕ್ಕದ ಫುಟ್ ಪಾತಿನಲ್ಲಿ ಮಲಗಿದ್ದವರ ಮೇಲೆ ಕಾರು ಚಲಾಯಿಸಿ ನೂರುಲ್ಲ ಶರೀಫ್ ಎಂಬಾತನ ಸಾವಿಗೆ, ಉಳಿದವರ ಅಂಗಾಂಗ ಊನಕ್ಕೆ ಕಾರಣವಾಗಿದ್ದ ಸಲ್ಮಾನ್ ಖಾನ್. ವಿಚಾರಣೆ ಹದಿಮೂರು ವರುಷಗಳವರೆಗೆ ಎಳೆದಾಡಲಾಯಿತು. ಈ ಎಳೆದಾಡುವಿಕೆಯಲ್ಲಿ ಸರಕಾರವೂ ಶಾಮೀಲಾಗಿತ್ತೆಂಬ ಅನುಮಾನ ಮೂಡುವುದು ಪ್ರಮುಖ ಸಾಕ್ಷಿಗಾದ ಗತಿ. ಸಲ್ಮಾನ್ ಖಾನಿನ ಅಂಗರಕ್ಷಕನಾಗಿದ್ದ ರವೀಂದ್ರ ಪಾಟೀಲ್ ಎಂಬ ಪೋಲೀಸ್ ಪೇದೆ ಈ ಪ್ರಕರಣದ ಪ್ರಮುಖ ಸಾಕ್ಷಿ. ಸಲ್ಮಾನ್ ಖಾನ್ ಕುಡಿದು ಗಾಡಿ ಓಡಿಸುತ್ತಿದ್ದನೆಂಬ ಹೇಳಿಕೆಯನ್ನು ಬದಲಿಸಲು ರವೀಂದ್ರ ಪಾಟೀಲನಿಗೆ ಬಹಳಷ್ಟು ಒತ್ತಡವಿರುತ್ತದೆ. ಸತ್ಯಕ್ಕೆ ಮೋಸ ಮಾಡದಿರುವ ರವೀಂದ್ರ ಪಾಟೀಲನ ನಿರ್ಧಾರ ನಿಧಾನಕ್ಕೆ ಆತನ ಜೀವನ ಮತ್ತು ಜೀವಕ್ಕೆ ಮುಳ್ಳಾಗುತ್ತದೆ. ವಿಪರೀತ ಒತ್ತಡ, ಪಾಟೀ ಸವಾಲಿಗೆಲ್ಲ ಬೆದರಿದ ರವೀಂದ್ರ ಇದ್ದಕ್ಕಿದ್ದಂತೆ ಒಂದು ದಿನ ನಾಪತ್ತೆಯಾಗಿಬಿಡುತ್ತಾನೆ. ನ್ಯಾಯಲಯಕ್ಕೆ ಸಾಕ್ಷಿ ಹೇಳಲು ಬರುವುದೇ ಇಲ್ಲ. ಕೊನೆಗೆ ನ್ಯಾಯಾಲಯ ಆತನ ವಿರುದ್ಧ ಅರೆಸ್ಟ್ ವಾರೆಂಟ್ ಘೋಷಿಸುತ್ತದೆ. ವಿಪರ್ಯಾಸ ನೋಡಿ, ಯಾವ ವ್ಯಕ್ತಿ ಸಲ್ಮಾನ್ ಖಾನನ ವಿರುದ್ಧ ಎಫ್.ಐ.ಆರ್ ದಾಖಲಿಸಿ ಸಲ್ಮಾನನನ್ನು ಜೈಲಿಗೆ ಕಳುಹಿಸುವಲ್ಲಿ ಪ್ರಮುಖ ಸಾಕ್ಷಿಯಾಗಬೇಕಿತ್ತೋ ಅದೇ ವ್ಯಕ್ತಿ ತನ್ನ ಕೆಲಸವನ್ನೂ ಕಳೆದುಕೊಂಡು ಆರ್ಥರ್ ಜೈಲಿನ ಅತಿಥಿಯಾಗುತ್ತಾನೆ. ಮತ್ತು ಆರೋಪಿ ಸ್ಥಾನದಲ್ಲಿದ್ದ ಸಲ್ಮಾನ್ ಖಾನ್ ಬಾಲಿವುಡ್ ಚಿತ್ರಗಳಲ್ಲಿ ಮಿಂಚುತ್ತಾ, ನಟೀಮಣಿಯರ ಜೊತೆಗೆ ಪ್ರೀತಿ – ಕೋಪ – ತಾಪ ಪ್ರದರ್ಶಿಸುತ್ತಾ ಸ್ವಚ್ಛಂದವಾಗಿ ತಿರುಗುತ್ತಿರುತ್ತಾನೆ! ರವೀಂದ್ರ ಪಾಟೀಲ್ ತಲೆಮರೆಸಿಕೊಂಡು ಓಡಾಡುವುದಕ್ಕೆ ಕಾರಣಕರ್ತನಾದ ವ್ಯಕ್ತಿ ತಲೆಎತ್ತಿಕೊಂಡು ಓಡಾಡುತ್ತಿರುತ್ತಾನೆ. ಜೈಲಿನಿಂದ ಹೊರಬಂದ ಸಾಕ್ಷಿ ರವೀಂದ್ರ ಪಾಟೀಲ್ ಮತ್ತೆ ತಪ್ಪಿಸಿಕೊಂಡು ಕೊನೆಗೆ ಕಾಣಿಸಿಕೊಂಡಿದ್ದು ರಸ್ತೆ ಬದಿಯ ಭಿಕ್ಷುಕನಾಗಿ, ಕ್ಷಯ ರೋಗ ಪೀಡಿತನಾಗಿ. 2007ರ ಅಕ್ಟೋಬರಿನಲ್ಲಿ ರವೀಂದ್ರ ಪಾಟೀಲ್ ಕೊನೆಯುಸಿರೆಳೆಯುತ್ತಾನೆ. ಆರೋಪಿ ಸಲ್ಮಾನ್ ಖಾನ್ ‘ಸೇವೆ’ ಮಾಡುತ್ತಾ ‘ಮಾನವೀಯ’ ನಟ ಎಂದು ತೋರ್ಪಡಿಸಿಕೊಳ್ಳುತ್ತಾನೆ, ಜನರ ಅನುಕಂಪ ಗಟ್ಟಿಸಿಕೊಳ್ಳುತ್ತಾ ಸಾಗುತ್ತಾನೆ. ಇಷ್ಟೆಲ್ಲ ವರುಷಗಳ ವಿಚಾರಣೆಯ ನಂತರ ಇದ್ದಕ್ಕಿದ್ದಂತೆ ವಾಹನ ಚಲಾಯಿಸುತ್ತಿದ್ದುದು ಸಲ್ಮಾನ್ ಖಾನ್ ಅಲ್ಲ, ಆತನ ಚಾಲಕ ಅಶೋಕ್ ಸಿಂಗ್ ಎಂಬ ಕಥೆ ಹುಟ್ಟಿಕೊಳ್ಳುತ್ತದೆ. ಕೆಳಹಂತದ ನ್ಯಾಯಾಲಯ ಈ ಸಂಗತಿಯನ್ನು ಪರಿಗಣಿಸದೆ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿ ಐದು ವರುಷಗಳ ಶಿಕ್ಷೆ ವಿಧಿಸುತ್ತದೆ. ಅದೇ ಸಂಜೆ ಥಟ್ ಅಂತ ಸಲ್ಮಾನ್ ಖಾನಿಗೆ ಎರಡು ದಿನಗಳ ಜಾಮೀನು ದೊರಕಿಬಿಡುತ್ತದೆ! ಸಾಕ್ಷಿಗಳೆಲ್ಲ ಪಕ್ಕಾ ಆಗಿರುವ ಪ್ರಕರಣದಲ್ಲಿ ವಿಚಾರಣೆ ಮುಗಿದು ಶಿಕ್ಷೆಯಾಗಲು ಹದಿಮೂರು ವರುಷಗಳು ಹಿಡಿದರೆ, ಶಿಕ್ಷೆಯಾದ ನಂತರ ಜಾಮೀನು ಸಿಗಲು ಒಂದು ದಿನವೂ ಬೇಡ! ಎರಡು ದಿನದ ನಂತರ ಉನ್ನತ ನ್ಯಾಯಾಲಯ ಶಿಕ್ಷೆಯನ್ನೇ ರದ್ದು ಪಡಿಸಿ ಜಾಮೀನು ನೀಡಿಬಿಡುತ್ತದೆ. ಅಲ್ಲಿಗೆ ನೂರುಲ್ಲ ಶರೀಫನ ಸಾವಿಗೆ ನ್ಯಾಯವಿನ್ನೂ ಮರೀಚಿಕೆ. ಸಲ್ಮಾನ್ ಖಾನನಿಗೆ ಶಿಕ್ಷೆಯಾಗುತ್ತಿದ್ದಂತೆ ನಮ್ಮ ಮಾಧ್ಯಮದ ಮಂದಿ, ಸೆಲೆಬ್ರಿಟಿ ಎನ್ನಿಸಿಕೊಂಡವರು ಮತ್ತು ಸಾಮಾನ್ಯ ಜನತೆ ವರ್ತಿಸಿದ ರೀತಿ ಅಪರಾಧಿಯ ‘ಖ್ಯಾತಿ’ ಮತ್ತು ‘ಹಣ’ದ ಪ್ರಭಾವವನ್ನು ತೋರಿಸುತ್ತದೆಯಷ್ಟೇ. ಭಾರತ ದೇಶದ ಆರ್ಥಿಕ – ಸಾಮಾಜಿಕ ಪರಿಸ್ಥಿತಿಯನ್ನೇ ಅರಿಯದ ‘ಖ್ಯಾತ’ನಾಮರು ‘ಫುಟ್ ಪಾತ್ ಇರೋದು ಮಲಗೋದಿಕ್ಕಲ್ಲ’ ಎಂಬ ಅಸಂಬದ್ಧದ ಹೇಳಿಕೆಗಳನ್ನು ನೀಡಿದರು. ಫುಟ್ ಪಾತ್ ಇರೋದು ಕುಡಿದು ಗಾಡಿ ಓಡಿಸುವುದಕ್ಕೂ ಅಲ್ಲ ಎಂಬ ಸಂಗತಿ ಅವರ ಅರಿವಿಗೆ ಹೇಗೆ ಬರಲಿಲ್ಲವೋ? ಇನ್ನೂ ಬಹುತೇಕ ಮಾಧ್ಯಮಗಳಿಗೆ ಸಲ್ಮಾನ್ ಖಾನನ್ನು ನಂಬಿಕೊಂಡು ಬಾಲಿವುಡ್ಡಿನಲ್ಲಿ ಎಷ್ಟು ದುಡ್ಡು ಸುರಿದಿದ್ದಾರೆ ಎಂಬುದರ ಬಗ್ಗೆಯೇ ಚಿಂತೆ. ಇನ್ನೂರು ಕೋಟಿಯಂತೆ ಮುನ್ನೂರು ಕೋಟಿಯಂತೆ ಎಂದು ಒದರಿಕೊಂಡವರಿಗೆ ಸತ್ತ ನೂರುಲ್ಲ ಶರೀಫನ ಜೀವಕ್ಕೆ ರುಪಾಯಿಗಳಿಂದ ಅಳೆಯಲಾಗದ ಒಂದು ಬೆಲೆಯಿತ್ತು ಎಂಬ ಗ್ನಾನವೇ ಇರಲಿಲ್ಲ. ಅಪಘಾತವೆಂಬುದು ಆಕಸ್ಮಿಕವಾಗಿ ಸಂಭವಿಸುವ ಘಟನೆ, ಚಾಲಕನ ನಿಯಂತ್ರಣ ತಪ್ಪುವುದು ವಾಹನ ಚಲಾಯಿಸುವವರೆಲ್ಲ ಅನುಭವಕ್ಕೂ ಬಂದಿರುತ್ತದೆ. ಆದರೆ ಕುಡಿದು ವಾಹನ ಚಲಾಯಿಸಿದಾಗ ಆದ ಅವಘಡವನ್ನು ಆಕಸ್ಮಿಕ ಅಪಘಾತವೆನ್ನಬೇಕೋ ಅಥವಾ ನಿರ್ಲಕ್ಷ್ಯದಿಂದ ಮಾಡಿದ ಹತ್ಯೆಯೆನ್ನಬೇಕೋ?

ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವವರೂ ನಮ್ಮ ನಿಮ್ಮಂತೆ ಮನುಷ್ಯರೇ ತಾನೇ? ವಕೀಲರು, ನ್ಯಾಯಾಧೀಶರು ತಮ್ಮ ವಾದವನ್ನು, ತೀರ್ಪನ್ನು ‘ಜನರ’ ಅಭಿಪ್ರಾಯದ ಕಾರಣದಿಂದ ಸ್ವಲ್ಪವಾದರೂ ಬದಲಿಸಿಕೊಳ್ಳದಷ್ಟು ನಿಷ್ಠುರವಾದಿಗಳಾಗಿರುವ ಸಂಭವ ಕಡಿಮೆ. ನ್ಯಾಯಾಧೀಶರು ನಮ್ಮ ನಿಮ್ಮಂತೆ ಮನುಷ್ಯರೇ ಆಗಿರುವ ಕಾರಣದಿಂದ ಇತರೆ ಹುದ್ದೆಯ ಜನರಲ್ಲಿರುವಷ್ಟೇ ಭ್ರಷ್ಟಾಚಾರ ನ್ಯಾಯಾಂಗದಲ್ಲೂ ಇದೆ. ಚಿಕ್ಕ ಪುಟ್ಟ ಕೋರ್ಟುಗಳಲ್ಲಿ ಸಣ್ಣ ಮಟ್ಟದ ಭ್ರಷ್ಟಾಚಾರ, ಕೋರ್ಟು ದೊಡ್ಡದಾಗುತ್ತ ಹೋದಂತೆ ಭ್ರಷ್ಟಾಚಾರದ ಪ್ರಮಾಣವೂ ದೊಡ್ಡದಾಗುತ್ತದೆ. ಸರಕಾರಿ ವಕೀಲರ ‘ಸಹಕಾರ’ದಿಂದ ಹಳ್ಳ ಹಿಡಿದ ಪ್ರಕರಣಗಳು, ನ್ಯಾಯಾಧೀಶರಿಗೆ ಆಪ್ತರಾದ ವಕೀಲರಿಂದ ಬದಲಾದ ತೀರ್ಪುಗಳು ಸಾಮಾನ್ಯ. ಭ್ರಷ್ಟಾಚಾರಕ್ಕೆ ಒಗ್ಗಿಕೊಂಡ ನ್ಯಾಯಾಲಯ ಪ್ರಭಾವಕ್ಕೂ ಬಗ್ಗದೇ ಇದ್ದೀತೆ? ಖ್ಯಾತ ನಾಮರ ಪ್ರಕರಣಗಳಲ್ಲಿ ಎರಡು ಬೇರೆ ಬೇರೆ ನ್ಯಾಯಾಲಯದ ತೀರ್ಪುಗಳು ತದ್ವಿರುದ್ದ ದಿಕ್ಕಿನಲ್ಲಿ ಸಾಗುವಂತಹ ನಿದರ್ಶನಗಳು ನ್ಯಾಯಾಂಗದ ಮೇಲಿನ ನಂಬುಗೆಯನ್ನು ಕಡಿಮೆ ಮಾಡುತ್ತವೆ. ಮೇಲಿನ ನ್ಯಾಯಾಲಯ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಾಗ ಕೆಳ ಹಂತದ ನ್ಯಾಯಾಧೀಶರನ್ಯಾಕೆ ತಪ್ಪಿತಸ್ಥರನ್ನಾಗಿ ಪರಿಗಣಿಸಬಾರದು? ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಎರಡು ಪ್ರಕರಣಗಳ ಉದಾಹರಣೆಯನ್ನೇ ತೆಗೆದುಕೊಂಡರೆ ಅಕಸ್ಮಾತ್ ಸಲ್ಮಾನ್ ಖಾನ್ ಮತ್ತು ಜಯಲಲಿತಾರಿಗೆ ಮೇಲಿನ ನ್ಯಾಯಾಲಯಕ್ಕೆ ಅಪೀಲು ಹೋಗಲು ಆರ್ಥಿಕ ಸೌಲಭ್ಯವಿರದಿದ್ದಲ್ಲಿ ಅವರು ಶಿಕ್ಷೆ ಅನುಭವಿಸುತ್ತಾ ಜೈಲಿನಲ್ಲೇ ಕೂರಬೇಕಿತ್ತಲ್ಲವೇ? ಮೇಲಿನ ನ್ಯಾಯಾಲಯದ ತೀರ್ಪನ್ನೇ ಸತ್ಯವೆಂದು ನಂಬಿದರೆ ಕೆಳ ಹಂತದ ನ್ಯಾಯಾಧೀಶರ ಅಜ್ಞಾನದಿಂದ ವ್ಯಕ್ತಿಯೋರ್ವ ಜೈಲಿನಲ್ಲಿ ಕೊಳೆಯಬೇಕಾಗುತ್ತಿತ್ತಲ್ಲವೇ? ಒಟ್ಟಿನಲ್ಲಿ ನ್ಯಾಯಾಧೀಶರು ತಮ್ಮ ‘ತಪ್ಪು’ ತೀರ್ಪಿಗಾಗಿ ದಂಡ ತೆರುವಂತಹ ಮಾರ್ಪಾಡಾಗಬೇಕು. ಇನ್ನು ನಮ್ಮ ಕರ್ನಾಟಕದ್ದೇ ಒಂದು ಪ್ರಕರಣವಿದೆ. ರಾಘವೇಂದ್ರ ಸ್ವಾಮಿಗಳ ಮೇಲೆ ಪ್ರೇಮಲತಾ ದಿವಾಕರ್ ಎಂಬಾಕೆ ಹೊರಿಸಿದ ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ಅನೇಕ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದುಬಿಟ್ಟರು. ನ್ಯಾಯಾಧೀಶರ ಮೇಲೆ ಫಿರ್ಯಾದುದಾರರು ಅಪನಂಬುಗೆ ವ್ಯಕ್ತಪಡಿಸಿದರೆ ಅಥವಾ ಪ್ರಕರಣದ ವಿಚಾರಣೆ ಮಾಡುವ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ನೆಂಟಸ್ತನವಿದ್ದರೆ ಹಿಂದೆ ಸರಿಯಬಹುದು. ತಮ್ಮ ಕರ್ತವ್ಯದಿಂದ ವಿಮುಖವಾಗುವ ಅವಕಾಶ ಅಧಿಕೃತವಾಗಿ ಯಾವ ಸರಕಾರಿ ನೌಕರನಿಗೂ ಇಲ್ಲ. ಆ ಅವಕಾಶ ನ್ಯಾಯಾಧೀಶರಿಗಿದೆ. ಯಾವೊಂದು ಕಾರಣವನ್ನೂ ಹೇಳದೆ ನ್ಯಾಯಸ್ಥಾನದಿಂದ ನಿರ್ಗಮಿಸಿಬಿಡಬಹುದು. ಈ ರೀತಿಯ ಕರ್ತವ್ಯ ವಿಮುಖತೆಗೆ ಅವಕಾಶವಿರಬೇಕೆ? ತಮ್ಮ ವಿವಾದಾಸ್ಪದ ಹೇಳಿಕೆಗಳಿಂದಲೇ ಪ್ರಚಲಿತದಲ್ಲಿರುವ ಮಾರ್ಕಂಡೇಯ ಕಟ್ಜು ಇತ್ತೀಚೆಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಭಾರತದ ಮುಖ್ಯ ನ್ಯಾಯಧೀಶರಾದ ಹೆಚ್.ಎಲ್.ದತ್ತು ಮತ್ತವರ ಪತ್ನಿಯ ಅಕ್ರಮ ಆಸ್ತಿಯ ಬಗ್ಗೆ ಬರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಪ್ರಮುಖ ಮಾಧ್ಯಮಗಳಿಗೆ 2014ರಲ್ಲೇ ದತ್ತು ಮುಖ್ಯ ನ್ಯಾಯಮೂರ್ತಿ ಆಗುವುದಕ್ಕೆ ಮೊದಲೇ ಕೊಟ್ಟಿದ್ದರೂ ಯಾವ ಪ್ರಮುಖ ಮಾಧ್ಯಮವೂ ಆ ಸುದ್ದಿಗೆ ಒತ್ತು ನೀಡಲಿಲ್ಲ. ಸುಪ್ರೀಂ ಕೋರ್ಟಿನ ಚೀಫ್ ಜಸ್ಟೀಸ್ ಮೇಲೆಯೇ ಭ್ರಷ್ಟಾಚಾರದ ಆರೋಪವಿರುವಾಗ ಇನ್ನಿತರೆ ನ್ಯಾಯಾಧೀಶರ ಕಥೆಯೇನು. ನ್ಯಾಯಾಧೀಶರು ತಮ್ಮ ಆಸ್ತಿಯ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಂಡು, ತೆರಿಗೆ ಅಧಿಕಾರಿಗಳು, ಲೋಕಾಯುಕ್ತದವರು ನಿಯಮಿತವಾಗಿ ಭ್ರಷ್ಟ ನ್ಯಾಯಾಧೀಶರ, ಭ್ರಷ್ಟ ಸರಕಾರಿ ವಕೀಲರ ಮೇಲೆ ದಾಳಿ ನಡೆಸಿದರೆ ನ್ಯಾಯಾಂಗದ ಭ್ರಷ್ಟಾಚಾರ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು ಎಂದು ಆಶಿಸಬಹುದು. ನ್ಯಾಯಾಧೀಶರ ವಿರುದ್ಧ ಬರೆಯುವ ಲೇಖನಗಳು ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಅದನ್ನು ಮೊದಲು ಅರಿತುಕೊಳ್ಳಬೇಕಾದ ನ್ಯಾಯಾಧೀಶರು ತಮ್ಮ ಭ್ರಷ್ಟತೆಯನ್ನು ಮರೆಮಾಚಿಕೊಳ್ಳಲು ನ್ಯಾಯಾಂಗ ನಿಂದನೆಯ ಮೊರೆ ಹೋಗುವುದು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಇಲ್ಲವಾಗಿಸುತ್ತದೆ ಎಂಬ ಪ್ರಜ್ಞೆ ನ್ಯಾಯಾಸ್ಥಾನದಲ್ಲಿರುವವರಿಗೆಲ್ಲ ಇರಬೇಕು.

ಮೇ 17, 2015

ಸಂಭ್ರಮದ 'ಸಂಕಥನ'ದಾರಂಭ

ದೀಪಾ ಗಿರೀಶ್ ಹಾಡು....

ರಾಜೇಂದ್ರ ಪ್ರಸಾದ್ ಮಾತು...

ಸಂಕಥನ ಬಿಡುಗಡೆಗೊಳಿಸಿದ ಸಿ.ಎನ್.ರಾಮಚಂದ್ರನ್ ಮತ್ತು ಚಂದ್ರಶೇಖರ್ ಆಲೂರು

ರಾಜೇಂದ್ರ ಪ್ರಸಾದ್ 'ಅನೇಕ' ಮಾತು 

ಸಂಕಥನದ ಬಗ್ಗೆ ಸಿ.ಎನ್. ರಾಮಚಂದ್ರನ್ ಮಾತು

ಸಂಕಥನದ ಬಗ್ಗೆ ಪೂರ್ಣಿಮಾ ಆರ್ ಮಾತು

ಸಂಕಥನದ ಬಗ್ಗೆ ಚಂದ್ರಶೇಖರ್ ಆಲೂರ್ ಮಾತು

ವಾಡಿ ಜಂಕ್ಷನ್ .... ಭಾಗ 10

Dr Ashok K R
“ಸರಿ ನೀನ್ಹೇಳಿದ್ದು. ಇಷ್ಟು ಬೇಗ ಇಷ್ಟೊಂದು ಕ್ಲೋಸಾಗಿಬಿಟ್ಟಿದ್ದಾರಲ್ಲ ಈ ನಾಲ್ವರು ಅಂಥ ತರಗತಿಯವರು ಒಂದಷ್ಟು ಅಸೂಯೆಯಿಂದ ನಮ್ಮ ಬಗ್ಗೆ ಮಾತನಾಡಿದರೂ ನಮ್ಮ ನಮ್ಮಲ್ಲೇ ನಾವೆಷ್ಟು ಪರಿಚಿತರಾಗಿದ್ದೇವೆ? ನಮ್ಮ ಹೆಸರು, ಊರು. ತುಷಿನ್ ಹೇಳಿದ ಹಾಗೆ ನಮ್ಮ ಸಿ.ಇ.ಟಿ ರ್ಯಾಂಕು; ಇಷ್ಟು ಬಿಟ್ಟರೆ ನಮ್ಮಗಳ ಬಗ್ಗೆ ಏನೇನು ಗೊತ್ತಿಲ್ಲ ಅಲ್ವಾ? ಹೊಸದಾಗಿ ಪರಿಚಿತರಾಗಿರೋದ್ರಿಂದ ಎಲ್ಲರೂ ಒಳ್ಳೆಯವರಂತೆಯೇ ತೋರಿಸಿಕೊಳ್ತಿದ್ದೇವೇನೋ?” ತುಷಿನ್ ಮಾತಿಗೆ ಪೂರಕವಾಗಿಯೇ ಮಾತನಾಡಿದ ರಾಘವ. ಸಿಗರೇಟು ಉರಿದು ಬೀಳುವವರೆಗೂ ಯಾರೂ ಮಾತನಾಡಲಿಲ್ಲ. ಇನ್ನೇನು ರೂಮು ತಲುಪಿದರೆನ್ನುವಷ್ಟರಲ್ಲಿ ಕ್ರಾಂತಿ “ಒಂದು ಕೆಲಸ ಮಾಡೋಣ. ಇವತ್ತು ರಾತ್ರಿ ಎಲ್ಲಾದರೂ ಹೊರಗೆ ಊಟಕ್ಕೆ ಹೋಗೋಣ. ಡಾಬಾಗೆ ಒಮ್ಮೆಯೂ ಹೋಗಿಲ್ಲ. ಡಾಬಾಗೇ ಹೋಗೋಣ. ಊರೊರಗೆ ಗದ್ದೆ ಮಧ್ಯೆ ಚೆನ್ನಾಗಿರುತ್ತೆ. ಇಷ್ಟು ದಿನ ಮಾತನಾಡಿದ ವಿಷಯಗಳನ್ನು ಬೇರೆ ಮಾತನಾಡೋಣ. ನಾವು ಮೊದಲು ಇಷ್ಟಪಟ್ಟ ಹುಡುಗಿ ಇರಬಹುದು, ಮಾಡಿದ್ಯಾವುದಾದರೂ ದೊಡ್ಡ ತಪ್ಪಿರಬಹುದು. ಅಥವಾ ಒಳ್ಳೇ ಕೆಲಸವಿರಬಹುದು – ಒಟ್ಟಿನಲ್ಲಿ ಇಷ್ಟು ದಿನ ಮಿದುಳಿನಿಂದಷ್ಟೇ ಬರುತ್ತಿದ್ದ ಮಾತುಗಳು ಮನಸ್ಸಿನಿಂದಲೂ ಬರಲಿ. ಏನಂತೀರಾ?” ಉತ್ಸಾಹದಿಂದ ಕೇಳಿದ. ಉಳಿದವರಿಗೂ ಅದು ಸರಿಯೆನ್ನಿಸಿ ನಗುತ್ತಾ ತಲೆಯಾಡಿಸಿದರು. ನಾಲ್ವರೂ ಸಮಾಧಾನದ ನಿಟ್ಟುಸಿರು ಬಿಟ್ಟು ರೂಮು ಸೇರಿದರು.
ಅವತ್ತು ರಾತ್ರಿಯೇ ತುಷಿನ್ ತಾನು ಪತ್ರಕರ್ತನಾಗಬೇಕಿತ್ತು ಎಂದಿದ್ದು, ರಾಘವ ವಸತಿ ಶಾಲೆಗಳೆಂಬ ಜೈಲಿನ ಬಗ್ಗೆ ಮಾತನಾಡಿದ್ದು, ಅಭಯ ತಾನು ಭೂಮಿಗೆ ಬಂದಿದ್ದೇ ತನ್ನ ತಾಯಿ ಆಪರೇಷನ್ ಮಾಡಿಸಿಕೊಳ್ಳಲು ತಡಮಾಡಿದ್ದರಿಂದ ಎಂದು ಬೇಸರಪಟ್ಟುಕೊಂಡದ್ದು, ಕ್ರಾಂತಿ ತನ್ನ ಹೆಸರು ತನ್ನಲ್ಲಿ ಮೂಡಿಸಿರುವ ಕೀಳರಿಮೆಯನ್ನು ತೋಡಿಕೊಂಡಿದ್ದು……

‘ನಾವೆಲ್ಲಾ ಮನಸ್ಸು ತೆರೆದು ಮಾತನಾಡಬೇಕು’ ಅಂತ ಹೇಳಿದ ಅದೇ ಕ್ರಾಂತಿ ಈಗ ‘ಎಲ್ಲಾ ವಿಷಯಾನೂ ಎಲ್ಲರ ಹತ್ರ ಹೇಳೋದಿಕ್ಕಾಗೋಲ್ಲ’ ಅಂದುಬಿಟ್ನಲ್ಲಾ. ಆತ ಬದಲಾಗಿದ್ದೇ ತಿಳಿಯಲಿಲ್ಲವಾ ನಮಗೆ? ನಮಗೂ ಅಲ್ಲ… ನನಗೆ …. ಆ ತುಷಿನ್, ಅಭಿ ಕೂಡ ಗುಟ್ಟುಗಳನ್ನಿಟ್ಟುಕೊಂಡಿದ್ದಾರಂತೆ…. ಬಡ್ಡೆತ್ತವು. ಹಳೆಯದನ್ನೆಲ್ಲಾ ನೆನಪಿಸಿಕೊಂಡಷ್ಟು ಸಿಟ್ಟು ಮತ್ತಷ್ಟು ಏರಿಕೆಯಾಯಿತು. ಸಿಟ್ಟಿನ ಭರಕ್ಕೆ ಸಿಗರೇಟುಗಳೂ ಉರಿದು ಬೂದಿಯಾದವು. ಸತತವಾಗಿ ಐದು ಸಿಗರೇಟು ಸೇದಿದ್ದಕ್ಕೋ ಬೆಳಿಗಿನಿಂದ ಖಾಲಿ ಹೊಟ್ಟೆಯಲ್ಲಿದ್ದಿದ್ದಕ್ಕೋ ತಲೆ ಬವಳಿಸಿದಂತಾಯಿತು. ಹಚ್ಚಲು ತೆಗೆದುಕೊಂಡಿದ್ದ ಆರನೇ ಸಿಗರೇಟನ್ನು ಮತ್ತೆ ಪ್ಯಾಕಿನೊಳಗೆ ಸೇರಿಸಿ ಹಾಸಿಗೆಯ ಮೇಲೆ ಅಡ್ಡಾದ. ತಲೆಸುತ್ತು ಒಂದಷ್ಟು ಕಡಿಮೆಯಾಯಿತು. ಜೊತೆಗೆ ಕೋಪವೂ. ನಿಧಾನಕ್ಕೆ ಮನ ಸ್ಥಿಮಿತಕ್ಕೆ ಬರಲು ಪ್ರಾರಂಭಿಸಿತು. ‘ಇಷ್ಟಕ್ಕೂ ನಾನು ಯಾರ ಮೇಲಾದರೂ ಕೋಪ ಮಾಡಿಕೊಳ್ಳಬೇಕೆಂದರೆ ನನ್ನ ಬಗ್ಗೆಯೇ ಮಾಡಿಕೊಳ್ಳಬೇಕು. ಪರಿಚಯವಾದ ಕೆಲವೇ ದಿನಗಳಲ್ಲಿ ಅವರ ಬಳಿ ಯಾವುದೇ ಮುಚ್ಚುಮರೆಯಿಲ್ಲದೆ ಎಲ್ಲಾ ಹೇಳಿಕೊಂಡಿದ್ದು ನನ್ನದೇ ತಪ್ಪು. ಯಾವಾಗಲೂ ನನ್ನ ಮಾತುಗಳು ಓತಪ್ರೋತವಾಗಿ ಎಲ್ಲೆಲ್ಲಿಗೋ ಹರಿದು ಹೋಗುತ್ತದೆ. ಆ ಭರದಲ್ಲಿ ಆ ಕ್ಷಣಕ್ಕೆ ಏನು ಹೇಳ್ತೀನಿ ಅನ್ನೋದೇ ತಿಳಿಯೋದಿಲ್ಲ. ವಟವಟಗುಟ್ಟೋದೇ ನನ್ನ ಸ್ವಭಾವ ಆಗೋಯ್ತಲ್ಲ. ಛೇ’ ಮುಂದೇನೂ ಯೋಚನೆಗಳು ತಟ್ಟನೆ ಹೊರಬರಲಿಲ್ಲ. ಎರಡರ ವೇಗದಲ್ಲಿ ತಿರುಗುತ್ತಿದ್ದ ಫ್ಯಾನನ್ನೇ ದಿಟ್ಟಿಸಿದ. ಫ್ಯಾನಿನ ಬಿಳಿ ರೆಕ್ಕೆಯನ್ನೇ ನೋಡುತ್ತಿದ್ದವನಿಗೆ ಆ ಬಿಳಿ ಬಣ್ಣದ ರೆಕ್ಕೆ ಯಾವುದೋ ಒಂದು ನಿಗೂಢ ಸಂಕೇತವೆಂದೆನಿಸಿ ಬಿಳಿ ಬಣ್ಣದ ರೆಕ್ಕೆ ನಿಧಾನವಾಗಿ ಬಿಳಿಯ ದುಪ್ಪಟ್ಟವಾಗಿ ಪರಿವರ್ತನೆಗೊಂಡು ದುಪ್ಪಟ್ಟಾದ ಹಿಂದೆ ಆಕಾಶ ನೀಲಿ ಬಣ್ಣದ ಚೂಡಿ ಪ್ರತ್ಯಕ್ಷವಾಗಿ, ಚೂಡಿಯ ಮೇಲೆ ಬಂಗಾರ ಬಣ್ಣದ ದಾರದಲ್ಲಿ ಸೂಕ್ಷ್ಮವಾಗಿ ಮಾಡಿದ ಕುಸುರಿ ಕೆಲಸ, ಚಿಕ್ಕ ಚಿಕ್ಕ ಹೂವುಗಳ ಚಿತ್ತಾರ, ಹೂವುಗಳ ನಡುಮಧ್ಯದಲ್ಲಿ ಪುಟ್ಟ ಪುಟ್ಟ ವಜ್ರದಾಕಾರದ ಕನ್ನಡಿಗಳೂ ಗೋಚರಿಸಿದ ಮೇಲೆ ಆ ದಿರಿಸು ಧರಿಸಿದ ಹುಡುಗಿಯ ಗುರುತು ಸಿಗದಿದ್ದೀತೇ? ‘ಜಯಂತಿ……ಅಬ್ಬಾ’ ಜೋರಾಗೊಮ್ಮೆ ಉಸಿರೆಳೆದುಕೊಂಡ ರಾಘವ. ರೂಮಿನೊಳಗೆ ತುಂಬಿಕೊಂಡಿದ್ದ ಐದೂ ಸಿಗರೇಟಿನ ಹೊಗೆ ಒಮ್ಮೆಲೆ ಶ್ವಾಸಕೋಶವನ್ನು ಆವರಿಸಿ ಮೆಲ್ಲಗೆ ಕೆಮ್ಮಿದ. ಅವಳೂ ಬೇರೆಯವರಂತಯೇ. ನಮ್ಮ ಗುಂಪನ್ನು ನೋಡುತ್ತಿದ್ದಂತೆ ತಲೆಕೆಳಗೆ ಹಾಕಿ ಧರಿಸಿದ ಚಪ್ಪಲಿಯ ಉಂಗುಷ್ಠವನ್ನೇ ದಿಟ್ಟಿಸಿ ನೋಡುವವಳಂತೆ ನಟಿಸುತ್ತಾ ನಮ್ಮನ್ನು ದಾಟಿ ನಡೆಯುವವಳು. ಆದರವತ್ತು! ಮಧ್ಯಾಹ್ನ ಪ್ರಾಕ್ಟಿಕಲ್ಸಿಗೆ ಹೋಗಲು ಮನಸ್ಸಾಗದೆ ಅಫ್ರೋಜ್ ಭಾಯ್ ಅಂಗಡಿಯ ಕಡೆ ಹೆಜ್ಜೆ ಹಾಕಿದ್ದ. ಅಫ್ರೋಜ್ ಭಾಯ್ ಶುಕ್ರವಾರದ ನಮಾಜಿಗೆ ಮಸೀದಿಗೆ ಹೋಗಿದ್ದವರು ಇನ್ನೂ ಬಂದಿರಲಿಲ್ಲ. ಕಾಲೇಜಿನ ಇನ್ನೊಂದು ಬದಿಯಲ್ಲಿದ್ದ ಅಂಗಡಿಗೆ ಹೋದ. ಅದು ಹುಡುಗಿಯರ ಹಾಸ್ಟೆಲ್ಲಿಗೆ ಸಮೀಪವಿತ್ತು. ಅಫ್ರೋಜ್ ಭಾಯ್ ಅಂಗಡಿಯೆಂದರೆ ಒಂದು ಪುಟ್ಟ ತಗಡಿನ ಶೆಡ್ಡು. ಮೇಲೊಂದು asbestos ಶೀಟು. ಅಂಗಡಿಯ ಎದುರಿಗೆ ಎರಡು ಕುರ್ಚಿ, ಒಂದು ಪುಟಾಣಿ ಮೇಜು, ಪಕ್ಕದಲ್ಲಿದ್ದ ಫಾರ್ಮಸಿ ಕಾಲೇಜಿನ ಕಾಂಪೋಂಡಿಗೆ ಅಂಟಿಕೊಂಡಂತೆ ಒಂದು ಬೆಂಚು. ಅಲ್ಲಿ ಸಿಗುತ್ತಿದ್ದದಾದರೂ ಸಿಗರೇಟು, ಬೀಡಿ, ಸೋಂಪು, ಗುಟ್ಕಾ, ಚಾ – ಕಾಫಿ, ಸಂಜೆಯ ಹೊತ್ತಿನಲ್ಲಿ ದಿಲ್ ಪಸಂದ್, ಪಪ್ಸ್ ಅಥವಾ ಆಲೂ ಬನ್ ಇಷ್ಟೇ. ಸಿಗರೇಟು ಸೇದಿದವರ ಬಾಯಿ ವಾಸನೆ ಕಡಿಮೆ ಮಾಡಲು ಒಂದಷ್ಟು ಮಿಂಟ್ ಚಾಕಲೇಟುಗಳು. ಮುಂಚೆ ಅಂಗಡಿಗೆ ಹೊಂದಿಕೊಂಡಿದ್ದಂತೆ ಒಂದು ಎಸ್ಟಿಡಿ ಬೂತ್ ಇಟ್ಟಿದ್ದರಂತೆ. ಮೊಬೈಲಿನ ಹಾವಳಿಯಿಂದಾಗಿ ಎಸ್ಟಿಡಿ ಬೂತಿನ ಪಳೆಯುಳಿಕೆಯ ಜಾಗದಲ್ಲಿ ಒಂದು ಹಳೆಯಮರದ ಸ್ಟೂಲಿನ ಮೇಲೆ ಒಂದು ರುಪಾಯಿ ಕಾಯಿನ್ ಬಾಕ್ಸಿನ ಫೋನಿತ್ತು. ಸಿಗರೇಟು ಸೇದಲು ಬರುವ ಹುಡುಗರು, ಚಾ – ಕಾಫಿಗಾಗಿ ಬರುವವರು – ಇವರಷ್ಟೇ ಅಲ್ಲಿಗೆ ಕಾಯಂ ಅತಿಥಿಗಳು. ಹುಡುಗಿಯರು ಅತ್ತ ಸುಳಿಯುತ್ತಿದ್ದುದೇ ಅಪರೂಪ. ಸಿಗರೇಟು – ಟೀ, ತಿನ್ನಲು ಬಗೆಬಗೆಯ ತಿನಿಸುಗಳು ಸಿಗುತ್ತಿದ್ದ ಅಂಗಡಿಗಳು ಸುತ್ತಮುತ್ತ ಬಹಳಷ್ಟಿದ್ದವಾದರೂ ಸಿಗರೇಟಿನಂತೆ ಅಫ್ರೋಜ್ ಭಾಯ್ ನ ಅಂಗಡಿಯೂ ಹುಡುಗರಿಗೆ ಒಂದು ಚಟವಾಗಿತ್ತು. ಏಲಕ್ಕಿ ಹಾಕಿ ಭಾಯ್ ತಯಾರಿಸುತ್ತಿದ್ದ ವಿಶೇಷ ಚಾಗಿಂತ ಭಾಯ್ ನ ನಡವಳಿಕೆಯೇ ಎಲ್ಲರನ್ನೂ ಹೆಚ್ಚು ಆಕರ್ಷಿಸುತ್ತಿತ್ತೆಂಬುದರಲ್ಲಿ ಅನುಮಾನವಿಲ್ಲ. ಐದಡಿ ಉದ್ದ, ಉದ್ದಕ್ಕಿಂತ ಅಗಲವೇ ಹೆಚ್ಚೆಂಬಂತಿದ್ದ ದೇಹ, ಹೇಮಾಮಾಲಿನಿಯ ಕೆನ್ನೆಯನ್ನೂ ನಾಚಿಸುವಂತಿದ್ದ ನುಣುಪಾದ ಗದ್ದ. ತಲೆಯ ಮೇಲೊಂದು ಮುಸಲ್ಮಾನರ ಟೋಪಿ, ಶುಕ್ರವಾರವನ್ನೊಂದರತು ಪಡಿಸಿದರೆ ಉಳಿದ ದಿನಗಳಲ್ಲಿ ಮಾಮುಲಿ ಪ್ಯಾಂಟು ಶರ್ಟು. ಎಲ್ಲರೊಂದಿಗೂ ನಗುನಗುತ್ತಾ ಮಾತು. ಜೊತೆಗೆ ನಮ್ಮ ಕಾಲೇಜಿನ ಹುಡುಗರಿಗೆ ಬೋನಸ್ಸೆಂಬಂತೆ ಅಫ್ರೋಜ್ ಭಾಯ್ ಸಾಲಕ್ಕೂ ಸಿಗರೇಟು ಕೊಡುತ್ತಿದ್ದರು, ಕೆಲವರ ಸಾಲ ಸಾವಿರ ಮುಟ್ಟುತ್ತಿದ್ದದ್ದೂ ಉಂಟು. ‘ಅಲ್ಲಾ ಅಫ್ರೋಜ್ ಭಾಯ್. ತಿಂಗಳಿಗೆ ನಿಮಗೆ ಲಾಭ ಅಂತ ಬರೋದೆ ಕಡಿಮೆ. ಅಂಥದ್ರಲ್ಲಿ ಇಷ್ಟೊಂದು ಸಾಲಾನೂ ಕೊಟ್ಟರೆ ಜೀವನ ಹೆಂಗೆ? ಎಂದ್ಯಾರಾದರೂ ಕೇಳಿದರೆ ಎರಡೂ ಕೈಯನ್ನು ಆಕಾಶದೆಡೆಗೆ ತೋರಿಸಿ “ಎಲ್ಲಾ ಅವನಿಚ್ಛೆ” ಎಂದು ಮುಗುಳ್ನಗುತ್ತಿದ್ದರು. ಇಂತಿದ್ದ ಅಫ್ರೋಜ್ ಭಾಯ್ ಸಿಡಿಮಿಡಿಗೊಳ್ಳುತ್ತಿದ್ದುದು ಮುಖ್ಯರಸ್ತೆಯಲ್ಲಿದ್ದ ಮದ್ರಾಸಾದ ಹುಡುಗರು ಅಪರೂಪಕ್ಯಾವಾಗಾದರೂ ಅಂಗಡಿಗೆ ಬಂದಾಗ. ‘ಮಕ್ಕಳನ್ನೆಲ್ಲಾ ಮದ್ರಾಸಾಗೆ ಸೇರಿಸಿ. ಕುರಾನ್ ಪಠಣ ಸರಿಯಾಗಿ ಮಾಡಿಸ್ತೀವಿ. ಮೌಲ್ವಿ ಮಾಡ್ತೀವಿ ಅಂತಾರೆ. ಇರೋರೆಲ್ಲಾ ಮೌಲ್ವಿಗಳೇ ಆಗಿಬಿಟ್ಟರೆ ಅವರು ಹೇಳೋದನ್ನ ಕೇಳೋದಿಕ್ಕಾದರೂ ಜನ ಬೇಡವಾ? ನಾವೆಲ್ಲ ಮದ್ರಾಸಾಗೆ ಕಾಲೇ ಇಡದೆ ಅರ್ಥವಾಗುವಷ್ಟರ ಮಟ್ಟಿಗೆ ಕುರಾನ್ ಓದಿಕೊಂಡಿಲ್ವಾ?’ ಎಂದೇನೇನೋ ಗೊಣಗಿಕೊಳ್ಳುತ್ತಿದ್ದರು. ಇರಲಿ, ಆ ದಿನ ರಾಘವನ ಅದೃಷ್ಟಕ್ಕೋ, ದುರಾದೃಷ್ಟಕ್ಕೋ ಅಫ್ರೋಜ್ ಭಾಯ್ ಅಂಗಡಿಯನ್ನಿನ್ನೂ ತೆರೆದಿರಲಿಲ್ಲ. ಹುಡುಗಿಯರ ಹಾಸ್ಟೆಲ್ಲಿನ ಪಕ್ಕದಲ್ಲಿದ್ದ ಅಂಗಡಿ ಆಧುನಿಕವಾಗಿತ್ತು. ‘ಎಂಟಾಣೆ ನಾಳೆ ಕೊಡ್ತೀನಿ’ ದಿನಾ ಆ ಅಂಗಡಿಗೆ ಹೋಗುವವರೂ ಈ ಮಾತು ಹೇಳಿದರೆ ಕೆಕ್ಕರಿಸಿ ನೋಡುತ್ತಿದ್ದ ಅಂಗಡಿಯವನ ಕಣ್ಣ ನೋಟದಿಂದ ಹೇಳಬೇಕೆಂದರೆ ಅಂಗಡಿ ಸಂಪೂರ್ಣ ಆಧುನಿಕವಾಗಿತ್ತು. ಅಂಗಡಿಯ ಒಂದು ಬದಿಯಲ್ಲಿ ಒಂದರ ಹಿಂದೆ ಒಂದರಂತೆ ಮೂರು ಮೇಜು, ಪ್ರತಿ ಮೇಜಿಗೂ ನಾಲ್ಕು ಕುರ್ಚಿ. ಗೋಡೆಯ ಮೇಲೆ ‘ನೋ ಸ್ಮೋಕಿಂಗ್’ ಬೋರ್ಡು. ಇನ್ನೊಂದು ಬದಿಯಲ್ಲಿ ಐವತ್ತು ಪೈಸೆಯ ಕ್ಲೋರೋಮಿಂಟಿನಿಂದ ಹಿಡಿದು ನೋಟುಪುಸ್ತಕದಷ್ಟು ಅಗಲವಿದ್ದ ಕ್ಯಾಡ್ ಬರಿ ಸೆಲಬ್ರೇಷನ್ ವರೆಗೆ ಎಲ್ಲಾ ನಮೂನೆಯ ಚಾಕಲೇಟುಗಳು. ಇದರೊಟ್ಟಿಗೆ ಗಾಜಿನ ಪೆಟ್ಟಿಗೆಗಳಲ್ಲಿ ಒಂದು ರುಪಾಯಿಯ ಕಡ್ಲೆಮಿಠಾಯಿಯಿಂದ ನೂರ ಇಪ್ಪತ್ತು ರುಪಾಯಿಯ ಚಿಕನ್ ಶೌರ್ಮಾವರೆಗೆ ಎಲ್ಲವೂ ಇತ್ತು. ಜೊತೆಗೆ ಸಿಗರೇಟು, ಟೀ, ಕಾಫಿ, ಬಾದಾಮಿ ಹಾಲು – ಹಾಟೂ, ಕೋಲ್ಡೂ – ಜ್ಯೂಸು…. ಇನ್ನೂ ಏನೇನೋ. ಸಿಗರೇಟು ಸೇದುವವರಿಗೆಂದು ಅಂಗಡಿಯ ಹೊರಗೆ ಎಂಟತ್ತು ಪ್ಲಾಸ್ಟಿಕ್ ಕುರ್ಚಿಗಳು. ರಾಘವ ಎಷ್ಟೋ ದಿನಗಳ ಬಳಿಕ ಆ ಅಂಗಡಿಯ ಕಡೆಗೆ ಬಂದಿದ್ದ. ಕಾಲೇಜಿನ ಸಮಯವಾದ್ದರಿಂದ ಹೆಚ್ಚು ಜನರಿರಲಿಲ್ಲ. ಅಂಗಡಿಯ ಒಳಗೆ ಸಿಗರೇಟು ಕೊಳ್ಳಲು ಹೋದಾಗ ಅಲ್ಲೇ ಕುಳಿತಿದ್ದ ಜಯಂತಿ ಕಣ್ಣಿಗೆ ಬಿದ್ದಳು. ಚಾ ಜೊತೆಗೆ ಬನ್ನು ತಿನ್ನುತ್ತಿದ್ದಳು. ಪಕ್ಕದಲ್ಲೇ ಒಂದು ಪ್ಲೇಟಿನಲ್ಲಿ ನಾಲ್ಕೈದು ಪಾರ್ಲೆ ಜಿ ಬಿಸ್ಕೆಟ್ಟಿದ್ದವು. ಅದರ ಕವರ್ರು ಅಲ್ಲೇ ಇದ್ದ ಲೋಟದ ಪಕ್ಕದಲ್ಲಿ ಮುದುರಿ ಕುಳಿತಿತ್ತು. ಒಂದು ಚಿಕ್ಕ ತುಂಡು ಬನ್ನನ್ನು ಕಚ್ಚಿ ತಲೆ ಮೇಲೆತ್ತಿದಳು, ಇನ್ನೇನು ಅವಳ ಕಣ್ಣು ರಾಘವನ ಕಣ್ಣನ್ನು ಸಂಧಿಸಬೇಕು ರಾಘವ ಅಂಗಡಿಯವನ ಕಡೆಗೆ ತಿರುಗಿಬಿಟ್ಟ. ಸಿಗರೇಟು ತೆಗೆದುಕೊಂಡು ಹೊರಗೆ ಗೋಡೆಯ ಮೇಲೆ ಸಿಕ್ಕಿಸಿದ್ದ ಎಲೆಕ್ಟ್ರಿಕಲ್ ಲೈಟರ್ ನಿಂದ ಹೊತ್ತಿಸಿಕೊಂಡು ಜಯಂತಿಗೆ ಬೆನ್ನುಮಾಡಿಕೊಂಡು ಕುಳಿತ. ‘ಏನಿವಳು ಕಾಲೇಜಿಗೆ ಹೋಗಿಲ್ಲ. ಬನ್ನೂ ಬಿಸ್ಕೆಟ್ಟೂ ತಿಂತಿರೋದನ್ನ ನೋಡಿದ್ರೆ ಹುಷಾರಿಲ್ವೇನೋ ಪಾಪ’ ಎಂದುಕೊಂಡ. ಪಕ್ಕದ ಕುರ್ಚಿಯಲ್ಲಿದ್ದ ಟೈಮ್ಸ್ ಆಫ್ ಇಂಡಿಯಾ ಪೇಪರನ್ನು ಕೈಗೆತ್ತಿಕೊಂಡು ಅದರಲ್ಲಿ ಮಗ್ನನಾದ. ಅರ್ಧ ಸಿಗರೇಟು ಮುಗಿದಿತ್ತು. ಪತ್ರಿಕೆಯ ಅಕ್ಷರಗಳ ಮೇಲೆ ನೆರಳು ಬಿದ್ದಂತಾಯಿತು. ಬಾಯಲ್ಲಿದ್ದ ಸಿಗರೇಟನ್ನು ಎಡಗೈಯಿಂದ ಹೊರತೆಗೆದು ತುಟಿಯ ನಡುವಿನಿಂದ ನಿಧಾನಕ್ಕೆ ಹೊಗೆ ಹೊರಹಾಕುತ್ತಾ ತಲೆಯನ್ನೆತ್ತಿದ. ಜಯಂತಿ ನಿಂತಿದ್ದಳು!! ಅವಳ ತಲೆಯ ಬಲಭಾಗದ ಮೇಲೆ ಸೂರ್ಯನ ಮೇಲುಭಾಗವಷ್ಟೇ ಇಣುಕುತ್ತಿತ್ತು. ಇವನೊಳಗೆ ಯಾವುದಾದರೂ ಯೋಚನೆ ಮೂಡುವಷ್ಟರಲ್ಲಿ ಜಯಂತಿಯ ದನಿ ಸಿಡಿಲಿನಂತೆ ಅಪ್ಪಳಿಸಿತು. “ಈ ವಯಸ್ನಲ್ಲಿ ಸಿಗರೇಟು ಸೇದೋದೆ ಮಹಾಪಾಪ. ಅಂಥದ್ರಲ್ಲಿ ರಾಜಾರೋಷವಾಗಿ ಕ್ಲಾಸ್ ಮೇಟ್ ಒಬ್ಬಳು ಎದುರಿಗೆ ಕುಳಿತಿದ್ದರೂ ಸೇದ್ತೀಯಲ್ಲ. ನಾಚಿಕೆ ಆಗಲ್ಲ ನಿಂಗೆ” ಇಷ್ಟು ಹೇಳಿದವಳೇ ದಡದಡನೆ ಹಾಸ್ಟೆಲ್ಲಿನ ಕಡೆಗೆ ಹೆಜ್ಜೆ ಹಾಕಿದಳು. ನಾಲ್ಕೈದು ಮಾರು ಹೋಗುವಷ್ಟರಲ್ಲಿ ಒಂದೊಂದು ಹೆಜ್ಜೆಯ ನಡುವಿನ ಅಂತರ ಕಡಿಮೆಯಾಗುತ್ತಾ ಹೋಯಿತು. ರಾಘವನ ಮನದಲ್ಲುಳಿದಿದ್ದು ಅವಳ ಸಿಡಿಲಿನಂತಹ ಮಾತು, ಆಕಾಶ ನೀಲಿ ಬಣ್ಣದ ಚೂಡಿ, ಜ್ವರದಿಂದ ಕೆಂಪಾದಂತಿದ್ದ ಅವಳ ಕಣ್ಣುಗಳು. ‘ಇದೇನ್ ನಿಜವಾಗ್ಲೂ ಅವಳು ನನ್ನ ಬಳಿ ಮಾತನಾಡಿದ್ದೋ ಅಥವಾ ಕನಸಾ?’ ಎಂದು ತಲೆಕೆರೆದುಕೊಳ್ಳುತ್ತಾ ಪತ್ರಿಕೆಯನ್ನು ಕುರ್ಚಿಯ ಮೇಲಿಟ್ಟು ಅಂಗಡಿಯವನಿಗೆ ದುಡ್ಡು ಕೊಟ್ಟು ಅವಳ ಹಿಂದೆಯೇ ಓಡಿದ. ಅವಳೇನು ಹೆಚ್ಚು ದೂರ ಸಾಗಿರಲಿಲ್ಲ.

ಮೇ 16, 2015

ಅಸಹಾಯಕ ಆತ್ಮಗಳು - ತಾನೇ ತೋಡಿಕೊಂಡ ಖೆಡ್ಡಾ

ಕು. ಸ. ಮಧುಸೂದನ್
ಸಮುದ್ರದ ಮೊರೆತ ಕೇಳುವಷ್ಟು ಹತ್ತಿರವಿದ್ದ, ಬಡವರೇ ಹೆಚ್ಚಾಗಿದ್ದ ಊರು ನನ್ನದು. ಹತ್ತಿರದ ಹೆಂಚಿನ ಫ್ಯಾಕ್ಟರಿಗೆ ಹೋಗುವ ಅಪ್ಪ, ಮನೆಯಲ್ಲಿ ಬೀಡಿ ಕಟ್ಟುವ ಅಮ್ಮ, ವಯಸ್ಸಿನಲ್ಲಿ ನನಗಿಂತಲೂ ಹತ್ತು ವರ್ಷಗಳಷ್ಟು ಚಿಕ್ಕವರಾದ ತಮ್ಮ ತಂಗಿಯರು ಮತ್ತು ನಾನು, ಇಷ್ಟೇ ಜನರಿದ್ದ ಚೊಕ್ಕ ಸಂಸಾರ ನಮ್ಮದು.

ಏಳನೇ ತರಗತಿಯವರೆಗೆ ಮಾತ್ರವಿದ್ದ ನಮ್ಮ ಊರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ನಾನು ಹೈಸ್ಕೂಲಿಗಾಗಿ ಮೂರು ಕಿ.ಮೀ. ದೂರದ ಪೇಟೆಗೆ ಹೋಗಬೇಕಾಗಿ ಬಂತು. ಬಹುಶಃ ನನ್ನ ಬದುಕು ಮತ್ತೊಂದು ತಿರುವಿಗೆ ಎದುರಾದದ್ದೇ ಅಲ್ಲಿಂದ. ಏಳನೇ ತರಗತಿಗಾಗಲೇ ನೋಡುವವರ ಕಣ್ಣುಕುಕ್ಕುವಷ್ಟು ಬೆಳೆದಿದ್ದ ನಾನು, ಸುಂದರಿಯಾಗಿದ್ದೆ. ಮೊದಲಿನಿಂದಲೂ ಹಾಡು ಮತ್ತು ನೃತ್ಯದಲ್ಲಿ ಹೆಚ್ಚು ಆಸಕ್ತಿಯಿದ್ದ ನಾನು ಶಾಲೆಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಸೌಂದರ್ಯ, ಪ್ರತಿಭೆ ಹಾಗೂ ನನ್ನ ಟೀಚರ್ಸ್ ನೀಡಿದ ಬೆಂಬಲದಿಂದ ಫೇಮಸ್ ಆಗಿಬಿಟ್ಟಿದ್ದೆ. ಹತ್ತನೇ ತರಗತಿಗೆ ಬರುವಷ್ಟರಲ್ಲಿ ನಾನೊಬ್ಬಳು ಸಿನೆಮಾ ತಾರೆಯಾಗಬೇಕೆಂಬ ಕನಸು ಶುರುವಾಗಿತ್ತು. ಅದ್ಯಾಕೆ ಆ ಆಸೆ ಚಿಗುರೊಡೆಯಿತೋ ಗೊತ್ತಿಲ್ಲ. ಈ ಕನಸಿನ ಗುಂಗಲ್ಲೇ 10ನೇ ತರಗತಿಯನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸು ಮಾಡಿ, ಮನೆಯಲ್ಲಿ ಕಷ್ಟವಿದ್ದರೂ, ಅದೇ ಪೇಟೆಯ ಜೂನಿಯರ್ ಕಾಲೇಜಿಗೆ ಸೇರಿದೆ. 

ಮೊದಲನೇ ವರ್ಷದ ಪಿ.ಯು.ಸಿ. ಓದುವಾಗ ಡಿಸೆಂಬರಿನಲ್ಲಿ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಾವುದೋ ಸಿನೆಮಾ ಹಾಡಿಗೆ ನನ್ನದೊಂದು ಡ್ಯಾನ್ಸ್ ಇತ್ತು. ಆ ಕಾರ್ಯಕ್ರಮದ ಫೋಟೋ ತೆಗೆಯಲು ಹತ್ತಿರದ ಸ್ಟುಡಿಯೋದ ಹುಡುಗನೊಬ್ಬ ಬಂದಿದ್ದ. ಡ್ಯಾನ್ಸ್ ಮುಗಿದ ನಂತರ ಅವನನ್ನು ಭೇಟಿ ಮಾಡಿ, ಫೋಟೋಗಳನ್ನು ಯಾವಾಗ ಕೊಡ್ತೀರಿ ಎಂದೆ. ಆಗ ರೀಲು ಹಾಕಿ ತೆಗೆದ ಫೋಟೋಗಳನ್ನು ತೊಳೆದು ಪ್ರಿಂಟ್ ಹಾಕಬೇಕಾದ್ದರಿಂದ, ಎರಡು ದಿನ ಬಿಟ್ಟು ಸ್ಟುಡಿಯೋ ಬಳಿ ಬನ್ನಿ ಕೊಡುತ್ತೇನೆ ಎಂದ. ಐದು ರೂಪಾಯಿ ಕೊಟ್ಟು ಒಂದು ಕಾಪಿ ತೆಗೆದುಕೊಳ್ಳುವುದಷ್ಟೇ ನನ್ನ ಉದ್ದೇಶವಾಗಿತ್ತು. 

ನನ್ನ ಜೀವನದಲ್ಲಿ ನಾನು ಮೊದಲು ಮಾಡಿದ ತಪ್ಪು ಫೋಟೋಗ್ರಾಫರನ ಮಾತು ಕೇಳಿ ಅವನ ಸ್ಟುಡಿಯೋ ಬಳಿ ಹೋಗಿದ್ದು. ನಗುನಗುತ್ತಾ ಬರಮಾಡಿಕೊಂಡ ಅವನು ನನ್ನ ಮುಂದೆ ನನ್ನದೊಂದು ಫೋಟೋ ಹಿಡಿದ. ಸೈಡಿನಿಂದ ತೆಗೆದ್ದರಿಂದ ಮುಖ ಸರಿಯಾಗಿ ಕಾಣದ ಕಾರಣ ನನಗೆ ಬೇಜಾರಾಯಿತು. ಸರಿಯಾಗಿ ಮುಖ ಕಾಣ್ತಿಲ್ಲ ಎಂದಾಗ ನಿಮ್ಮ ಡ್ಯಾನ್ಸ್ ಅಷ್ಟು ಫಾಸ್ಟ್ರಿ, ಫೋಟೋ ತೆಗೆಯೋದೆ ಕಷ್ಟವಾಯ್ತು ಎಂದ. ನನಗೆ ಈ ಫೋಟೋ ಬೇಡ ಎಂದು ಹೊರಡಲನುವಾದೆ. ಅಷ್ಟರಲ್ಲವನು ತಡೀರಿ ಅನ್ನುತ್ತಾ ಒಂದು ಸಣ್ಣ ಕವರನ್ನು ಕೈಗೆ ಕೊಟ್ಟ. ಏನು ಎನ್ನುತ್ತಲೇ ಅದನ್ನು ತೆರೆದರೆ ನನ್ನದೇ ವಿವಿಧ ಭಂಗಿಯ, ಒಂದಕ್ಕಿಂತ ಒಂದು ಸುಂದರವಾದ ಫೋಟೋಗಳು. ಶಾಲೆಯವರು ಹೇಳಿದ್ದಕ್ಕಿಂತ ಜಾಸ್ತಿ ಫೋಟೋ ತೆಗೆದೆ, ನೀವು ತುಂಬಾ ಸುಂದರವಾಗಿದೀರಿ ಡ್ಯಾನ್ಸೂ ತುಂಬಾ ಚನ್ನಾಗಿ ಮಾಡ್ತೀರಿ. ಬೇಸರವಾಗಿದ್ರೆ ಸ್ಸಾರಿ ಎಂದ. ಇಷ್ಟು ಚಂದದ ಫೋಟೋ ತೆಗೆದವನ ಮೇಲೆ ಬೇಸರವೇಕೆ ಎಂದು ಪರವಾಗಿಲ್ಲ ಎಂದೆ. ಫೋಟೋ ಕೊಳ್ಳಲು ದುಡ್ಡಿಲ್ಲ ಎಂದಾಗ ನನ್ನ ಗಿಫ್ಟ್ ಅಂತ ತೆಗೊಳಿ ಪ್ಲೀಸ್ ಎಂದ. ಸಂತೋಷದಿಂದ ಫೋಟೋ ತೆಗೆದುಕೊಂಡು ಮನೆಗೆ ಬಂದವಳು ಮನೆಯವರಿಗೆ ಗೊತ್ತಿಲ್ಲದಂತೆ, ಆಗಾಗ ನೋಡಿ ಖುಷಿ ಪಡುತ್ತಿದ್ದೆ.

ಆ ನಂತರ ಒಂದು ದಿನ ಕಾಲೇಜಿನ ದಾರಿಯಲ್ಲಿ ಸಿಕ್ಕವನು “ಏನ್ರಿ, ಸ್ಟುಡಿಯೋ ಕಡೆ ಬರಲೇ ಇಲ್ಲ” ಎಂದಾಗ ಬಾಯಿ ತಪ್ಪಿ ನಾಳೆ ಮಧ್ಯಾಹ್ನ ಬರುತ್ತೇನೆ ಎಂದೆ. ಹಾಗಾದರೆ ಮಧ್ಯಾಹ್ನ ನಿಮಗಾಗಿ ಕಾಯ್ತಾ ಇರ್ತೀನಿ ಎಂದು ಹೊರಟುಬಿಟ್ಟ. ಮರುದಿನ ಮಧ್ಯಾಹ್ನ ಸ್ಟುಡಿಯೋ ಬಳಿ ಹೋದಾಗ ಅದು ಇದು ಮಾತನಾಡುತ್ತಾ, ನೀವ್ಯಾಕೆ ಸಿನೆಮಾದಲ್ಲಿ ಆಕ್ಟ್ ಮಾಡಬಾರದು? ಎಂದು ನನ್ನ ಮನಸ್ಸಿನಲ್ಲಿ ಇದ್ದದ್ದನ್ನೇ ಕೇಳಿದಾಗ ಅವನ ಮೇಲೆ ಅಭಿಮಾನವೆನಿಸಿತು. ಮಾಡಬಹುದು ಅವಕಾಶ ಸಿಗಬೇಕಲ್ಲ, ನಾನೂ ಆಕ್ಟರ್ ಆಗಬಹುದಾ? ಎಂದು ಅನುಮಾನಿಸಿದಾಗ, ಎಂತೆಂತವರೋ ಮಾಡುವಾಗ ನೀವು ಮಾಡಬಾರದ, ನೀವು ವಿವಿಧ ಡ್ರೆಸ್ ಹಾಕಿರೋ ಫೋಟೋಗಳನ್ನು ತೆಗೆದು ನಿರ್ಮಾಪಕರಿಗೆ ನೀಡಿದರೆ ಅವರಿಗಿಷ್ಟವಾದರೆ ನಿಮಗೆ ಅವಕಾಶ ಸಿಗುತ್ತೆ, ಎಂದ. ಹಾಗೆ ಫೋಟೋ ತೆಗೆಸಲು ನನ್ನ ಬಳಿ ಬೇರೆ ಬೇರೆ ಬಟ್ಟೆಯಾಗಲೀ, ದುಡ್ಡಾಗಲೀ ಇಲ್ಲ, ಎಂದೆ. ಒಂದು ನಿಮಿಷ ಸುಮ್ಮನಾದವನು, ಬಟ್ಟೆನಾ ನಾನೇ ಅರೆಂಜ್ ಮಾಡಿ, ಫೋಟೋನ ಫ್ರೀಯಾಗಿ ತೆಗೆದುಕೊಡ್ತೇನೆ, ನಟಿಯಾದ ಮೇಲೆ ಹಣ ವಾಪಸ್ಸು ಕೊಡುವಿರಂತೆ ಎಂದ. 

ಹದಿನಾರು ತುಂಬಿ ಹದಿನೇಳಕ್ಕೆ ಕಾಲಿಟ್ಟು ಸುಂದರಿಯೆಂದು ಬೀಗುತ್ತಿದ್ದ ಹುಡುಗಿಯೊಬ್ಬಳ ಮನಸ್ಸನ್ನು ಊಹೆ ಮಾಡಿಕೊಳ್ಳಿ, ಆ ಕ್ಷಣದಲ್ಲಿ ನಾನು ಹೇಗೆ ಪ್ರತಿಕ್ರಿಯಿಸಿರಬಹುದು. ಯಾವುದರ ಬಗ್ಗೆಯೂ ಯೋಚಿಸುವ ಸಹನೆಯಿಲ್ಲದ ನಾನು ಆ ಕೂಡಲೇ ಸರಿಯೆಂದು ಬಿಟ್ಟೆ. ಸರಿ ರಜಾ ದಿನ ಗಿರಾಕಿಗಳ ಕಾಟ ಇರುವುದಿಲ್ಲವಾದ್ದರಿಂದ ಒಂದು ಭಾನುವಾರ ಫೋಟೋ ತೆಗೆಯುವುದೆಂದು ನಿಶ್ಚಯವಾಯ್ತು. 

ನಂತರ ಒಂದು ಭಾನುವಾರ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ ಅಂತ ಮನೆಯವರಿಗೆ ಸುಳ್ಳು ಹೇಳಿ ಸ್ಟುಡಿಯೋಗೆ ಬಂದೆ. ನನ್ನ ಮುಂದೆ ಸುರಿದ ರಾಶಿ ಬಟ್ಟೆಯಲ್ಲಿ ಯಾವುದನ್ನು ಮೊದಲು ಹಾಕೋದು ಎಂದು ತಬ್ಬಿಬ್ಬಾದಾಗ, ನಾನು ಒಂದೊಂದೇ ಕೊಡುತ್ತೇನೆ ಹಾಕಿಕೊಂಡು ಬನ್ನಿ ಎಂದ. ಡ್ರೆಸ್ ಬದಲಾಯಿಸಲು ಬೇರೆ ರೂಮಿಲ್ಲದ್ದರಿಂದ, ವಿಧಿಯಿಲ್ಲದೆ ಅಲ್ಲೇ ಇದ್ದ ಮರದ ಹಲಗೆಯ ಹಿಂದೆ ಬದಲಾಯಿಸಿಕೊಂಡು ಬಂದೆ. ನಂತರ ಫೋಟೋ ತೆಗೆಯುತ್ತಾ ಹೋದ. ಬಹುತೇಕ ಎಲ್ಲಾ ಬಟ್ಟೆಗಳನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡೆ. ಎರಡು ದಿನಗಳಲ್ಲಿ ನನ್ನ ಫೋಟೋಗಳನ್ನು ನೋಡುವ ಸಂತೋಷದೊಂದಿಗೆ ಸಂಜೆಯಾಗುವಷ್ಟರಲ್ಲಿ ಮನೆಗೆ ವಾಪಸ್ಸು ಬಂದೆ. 

ಎರಡು ದಿನಗಳ ನಂತರ ಹೋಗಿ ಫೋಟೋಗಳನ್ನು ನೋಡಿದಾಗ ನನಗೆ ಆಕಾಶವೇ ಕೈಗೆ ಸಿಕ್ಕಂತಾಗಿತ್ತು. ಅಷ್ಟು ಸುಂದರವಾಗಿದ್ದೆ. ಇವನ್ನೆಲ್ಲಾ ಇವತ್ತೇ ನಿರ್ಮಾಪಕರಿಗೆ ಕಳುಹಿಸುತ್ತೇನೆ ಎಂದು ಹೇಳಿದವನಿಗೆ ಸರಿಯೆಂದು ಹೇಳಿ ಬಂದೆ. ಆಮೇಲೆ ದಿನವೂ ಕಾಲೇಜಿನ ಬಳಿ ಸಿಗುತ್ತಿದ್ದ ಅವನು ಸಿನೆಮಾ ಬಗ್ಗೆ ಚಕಾರವೆತ್ತದೆ, ಕೇವಲ ಯೋಗಕ್ಷೇಮ ವಿಚಾರಿಸುತ್ತಿದ್ದ. ಎರಡು ತಿಂಗಳ ಬಳಿಕ ತಡೆಯಲಾರದೆ ನಾನೇ ಸಿನೆಮಾ ಕಥೆ ಏನಾಯಿತು ಎಂದಾಗ, ನಿರ್ಮಾಪಕರಿಗೆ ಬೇರೆ ತರದ ಫೋಟೋಗಳು ಬೇಕಂತೆ, ತೆಗೆಯಬೇಕು ಭಾನುವಾರ ಸ್ಟುಡಿಯೋ ಹತ್ತಿರ ಬನ್ನಿ ಎಂದ. 

ಸರಿ ಮುಂದಿನ ಭಾನುವಾರ ಸ್ಟುಡಿಯೋಗೆ ಹೋದೆ. ಒಳಗೆ ಕುಳಿತವಳಿಗೆ, ಪತ್ರಿಕೆಯಲ್ಲಿನ ಕೆಲವೊಂದು ಫೋಟೋ ತೋರಿಸಿ, ಇಂತಹ ಫೋಟೋಗಳನ್ನು ಕಳಿಸಬೇಕಂತೆ, ನಿಮಗೆ ಸಂಕೋಚವಾದರೆ ಬೇಡ ಎಂದ, ನಾನು ಹಿಂದೆಮುಂದೆ ಯೋಚಿಸದೆ ಒಪ್ಪಿದೆ. ಮೊದಲೇ ಗೊತ್ತಿತ್ತೇನೋ ಅನ್ನುವ ಹಾಗೆ ಕೆಲವು ಬಟ್ಟೆಗಳನ್ನು ಕೊಟ್ಟ.. ಅವು ಎಷ್ಟು ಚಿಕ್ಕವೆಂದರೆ ಹಾಕಿಕೊಂಡು ಅವನ ಮುಂದೆ ನಿಲ್ಲಲು ಮುಜುಗರವಾಯ್ತು.. ಆದರೆ ಸಿನೆಮಾ ಕನಸು ನಿಲ್ಲುವಂತೆ ಮಾಡಿತು. ಅವನು ನನ್ನ ಎದೆ ತೊಡೆಗಳು ಎದ್ದು ಕಾಣುವಂತೆ ಫೋಟೋ ತೆಗೆಯುತ್ತಾ ಹೋದ. ನಾನು ಸಹಕರಿಸುತ್ತಾ ಹೋದೆ. ಸಂಜೆಯಷ್ಟರಲ್ಲಿ, ಕೂದಲು, ಬಟ್ಟೆ ಸರಿ ಮಾಡುವ ನೆಪದಲ್ಲಿ, ನನ್ನಿಡೀ ಮೈಯನ್ನು ಮುಟ್ಟಿದ್ದ. 

ಸಿನೆಮಾದೊಂದಿಗೆ ಅವನನ್ನೂ ಬಿಟ್ಟಿರಲಾರದಷ್ಟು ತುಂಬಾ ಹಚ್ಚಿಕೊಂಡಿದ್ದೆ ಅನ್ನಿಸುತ್ತೆ. ಆಮೇಲಾಮೇಲೆ ಸಿನೆಮಾ ಬಗ್ಗೆ ಕೇಳುವ ನೆಪದಲ್ಲಿ ಸ್ಟುಡಿಯೋಗೆ ಹೆಚ್ಚು ಹೋಗಲು ಶುರು ಮಾಡಿದೆ. ಹೀಗೆ ಮೂರು ತಿಂಗಳು ಕಳೆದ ನಂತರ ಒಂದು ದಿನ ಯಾರೋ ನಿರ್ಮಾಪಕರು ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ, ಯಾವಾಗ ಹೋಗೋಣ ಎಂದು ಕೇಳಿದ. ಮನೆಯವರು ಒಪ್ಪುವುದಿಲ್ಲವೆಂದು ಗೊತ್ತಿದ್ದರೂ, ಸಿನೆಮಾದ ಹುಚ್ಚು ಅವರಿಗೆ ತಿಳಿಸದೆ ಹೋಗುವ ಧೈರ್ಯ ತಂದಿತ್ತು. ನೀನು ಯಾವಾಗೆಂದರೆ ಆವಾಗ ಎಂದು ಒಪ್ಪಿಗೆ ಕೊಟ್ಟೆ. 

ಅದಾದ ನಂತರ, ಒಂದು ದಿನ ಕಾಲೇಜಿಗೆಂದು ಬಂದವಳು, ಅವನ ಜೊತೆ ಬೆಂಗಳೂರಿನ ಬಸ್ಸು ಹತ್ತಿದೆ. ಬೆಂಗಳೂರಿನ ಅವನ ಗೆಳೆಯನೊಬ್ಬನ ಮನೆಯಲ್ಲಿ ಉಳಿದುಕೊಂಡೆವು. ದಿನ ಹೊರಗೆ ಹೋಗುತ್ತಿದ್ದವನು, ನಿರ್ಮಾಪಕರು ಸಿಕ್ಕಿಲ್ಲ, ನಾಳೆನಾಡಿದ್ದು ಅಂತ ವಾರ ಕಳೆದುಬಿಟ್ಟ. ಈ ನಡುವೆ ಅವನ ದೇಹದ ಹಸಿವಿಗೆ ಬಲಿಯಾಗಿ ಬಿಟ್ಟಿದ್ದೆ. ಒಂದು ರಾತ್ರಿ ತಡವಾಗಿ ಬಂದವನು ಇಲ್ಲಿ ಯಾಕೋ ಸರಿಯಾಗ್ತಿಲ್ಲ, ಬಾಂಬೆಗೆ ಹೋಗೋಣ, ಅಲ್ಲಿ ಅವಕಾಶ ಸಿಗುತ್ತೆ ಎಂದು ಬಾಂಬೆಗೆ ಕರೆದುಕೊಂಡು ಬಂದ. 

ಬಾಂಬೆಗೆ ಬಂದವನೇ ಒಂದು ಡಾನ್ಸ್ ಬಾರಿಗೆ ಕರೆದೊಯ್ದು, ಅಲ್ಲಿನ ಮ್ಯಾನೇಜರಿಗೆ ಪರಿಚಯಿಸಿದ. ಮ್ಯಾನೇಜರ್ ಹೇಗೂ ನಿನಗೆ ಡ್ಯಾನ್ಸ್ ಬರುತ್ತಲ್ಲ. ನಮ್ಮ ಹೋಟೆಲಿನಲ್ಲಿ ಡ್ಯಾನ್ಸ್ ಮಾಡು, ಇಲ್ಲಿ ಬರುವ ನಟರು ನಿರ್ಮಾಪಕರ ಕಣ್ಣಿಗೆ ಬಿದ್ದರೆ ಅದೃಷ್ಟ ಖುಲಾಯಿಸುತ್ತೆ. ಎಂದು ಹೇಳಿದಾಗ ನಾನು ಒಪ್ಕೊಂಡೆ.

ಅಲ್ಲಿಂದ ಶುರುವಾಯ್ತು ನನ್ನ ಜೀವನದ ಮತ್ತೊಂದು ಮಜಲು. ಡ್ಯಾನ್ಸ್ ಬಾರಿನವರು ನನ್ನಂಥ ಹೆಣ್ಣುಮಕ್ಕಳಿಗಾಗಿಯೇ ಒಂದು ಮನೆ ಮಾಡಿದ್ದರು. ಅಲ್ಲಿ ಹನ್ನೆರಡು ಹುಡುಗಿಯರಿದ್ದೆವು. ಅವರದೇ ಗಾಡಿಯಲ್ಲಿ ಸಂಜೆ ಏಳು ಗಂಟೆಗೆ ಬಾರಿಗೆ ಬಂದು ಸರದಿಯಂತೆ ಡ್ಯಾನ್ಸ್ ಮಾಡಿ, ರಾತ್ರಿ ಹನ್ನೊಂದಕ್ಕೆ ವಾಪಾಸ್ಸಾಗಬೇಕಿತ್ತು. ದಿನಕ್ಕಿಷ್ಟು ಸಂಬಳವೆಂದು ನಿಗಧಿಯಾಗಿತ್ತು. ಖುಶಿಪಟ್ಟು ಗಿರಾಕಿಗಳು ನಮ್ಮ ಮೇಲೆ ಎಸೆಯುತ್ತಿದ್ದ, ಹಣದಲ್ಲಿ ಮುಕ್ಕಾಲು ಪಾಲು ಮೇನೇಜರಿನ ಬೊಕ್ಕಸ ಸೇರುತ್ತಿತ್ತು. ನನ್ನನ್ನು ಇಲ್ಲಿ ಬಂದು ಸೇರಿಸಿದವನು ಮತ್ತೆ ಬರದೇ ಹೋದಾಗಲೇ ತಿಳಿದಿದ್ದು, ಅವನು ನನ್ನನ್ನು ಇಪ್ಪತ್ತು ಸಾವಿರಕ್ಕೆ ಮಾರಿದ್ದಾನೆ ಎಂದು. ಮೊದಮೊದಲು ಕುಡಿದು ಕುಪ್ಪಳಿಸುತ್ತಿದ್ದ, ಜನರ ಮುಂದೆ ಡ್ಯಾನ್ಸ್ ಮಾಡಲು ಮುಜುಗರಪಡುತ್ತಿದ್ದವಳು, ಇಂದಲ್ಲ ನಾಳೆ ಸಿನೆಮಾ ಅವಕಾಶ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ಹೀಗೆ ಕಾಲ ಉರುಳುತ್ತಿತ್ತು. ನಾನಲ್ಲಿ ಸೇರಿಕೊಂಡ ನಾಲ್ಕು ತಿಂಗಳ ನಂತರ, ಮ್ಯಾನೇಜರ್, ನನ್ನ ಕರೆದು, ಯಾರೋ ಒಬ್ಬರು ಶ್ರೀಮಂತರು ನಿನ್ನ ಡ್ಯಾನ್ಸ್ ಒಬ್ಬರೇ ನೋಡಬೇಕಂತೆ ಹೋಗಿ ಬಾ ಕೈ ತುಂಬಾ ದುಡ್ಡುಕೊಡುತ್ತಾರೆ ಎಂದ. ಒಬ್ಬರೇ ನೋಡುವ ಉದ್ದೇಶದ ಅರಿವಿದ್ದರೂ ಅಸಹಾಯಕತೆ ಆ ಶ್ರೀಮಂತನೊಡನೆ ಹೋಗುವಂತೆ ಮಾಡಿತ್ತು. ಆ ವ್ಯಕ್ತಿ ಯಾವುದೋ ಫಾರಂ ಹೌಸಿಗೆ ಕರೆದುಕೊಂಡು ಹೋಗಿ ಸಂಜೆಯವರೆಗೂ ಕುಡಿಯುತ್ತಾ ನನ್ನನ್ನು ಅನುಭವಿಸಿದವನು, ವಾಪಾಸ್ಸು ಬಿಡುವಾಗ ಕೈತುಂಬಾ ದುಡ್ಡು ಕೊಟ್ಟು ಹೋದ. ಸದ್ಯ ಆ ಹಣದಲ್ಲಿ ಮ್ಯಾನೇಜರನಿಗೆ ಪಾಲಿರಲಿಲ್ಲ. ಆಮೇಲೆ ಪ್ರತಿವಾರಕ್ಕೆ ಎರಡೋ ಮೂರೋ ಬಾರಿ, ಹೀಗೆ ಹೋಗಿ ಬರುವುದು ಒಂದು ರೀತಿ ಪಿಕ್ನಿಕ್ ಆಗಿಬಿಟ್ಟಿತ್ತು. 

ಹೀಗೆ ಒಂದು ವರ್ಷ ಕಳೆದು ಹೋಯಿತು. ನನ್ನನ್ನು ನಟಿಯಾಗಿ ಮಾಡಲು ಯಾವ ನಿರ್ಮಾಪಕ-ನಟನೂ ಬರಲಿಲ್ಲ. ಎಟುಕದ ಕನಸಿಗೆ ಏರಲು ನೀಡುವ ಸುಳ್ಳಿನ ಏಣಿ ಅದು ಎಂದು ಗೊತ್ತಾಯಿತು. 

ದುರಂತ ನೋಡಿ ಒಂದು ದಿನ ಮ್ಯಾನೇಜರ್ ಬಂದು ನೀವೆಲ್ಲಾ ಬಂದು ಒಂದು ವರ್ಷವಾಯ್ತು. ಈಗ ಗಿರಾಕಿಗಳು ಹೊಸಮುಖಗಳನ್ನು ಕೇಳ್ತಾ ಇದಾರೆ. ಆದ್ದರಿಂದ ನಿಮ್ಮನ್ನೆಲ್ಲಾ, ನಮ್ಮ ಬೇರೆ ಬಾರಿಗೆ ಶಿಫ್ಟ್ ಮಾಡುತ್ತೇವೆ ಎಂದು ಮತ್ತೊಂದು ಮೂಲೆಯ ಬಾರಿಗೆ ಕಳುಹಿಸಿಬಿಟ್ಟರು, ಅದು ಕೆಳದರ್ಜೆಯ ಬಾರಾಗಿದ್ದು, ಅಸಲಿಗೆ ವೇಶ್ಯಾವಾಟಿಕೆಯ ಅಡ್ಡವಾಗಿತ್ತು. ನಾವು ಹುಡುಗಿಯರ ಬದುಕಿನ ಎಲ್ಲಾ ದಾರಿಗಳು ಮುಚ್ಚಿದ್ದರಿಂದ, ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಬೇಕಾಯ್ತು. ಐದು ವರ್ಷಗಳ ಕಾಲ ಆ ನರಕದಲ್ಲಿ ನಾನು, ಪೋಲೀಸ್ ಠಾಣೆ, ಜೈಲು, ಕೋರ್ಟು ಕಛೇರಿ, ನಿರಾಸೆ ರೋಷ, ಸಂಕಟ, ನೋವು, ರೊಚ್ಚು, ಕಾಯಿಲೆ-ಕಸಾಲೆ ಎಲ್ಲವನ್ನೂ ಅನುಭವಿಸಿಬಿಟ್ಟೆ.. ಇದು ಸಾಲದೆ ಟಿ.ಬಿ. ಅಂಟಿಕೊಂಡದ್ದರಿಂದ, ಈಗ ಈ ಬಾರಿಗೆ ಬಂದು ಬಾರ್ ಹುಡುಗಿಯರ ಕೇರ್ ಟೇಕರ್ ಆಗಿ, ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾ ಕಾಲತಳ್ಳುತ್ತಿದ್ದೇನೆ. ಊಟ ತಿಂಗಳಿಗಿಷ್ಟು ಸಂಬಳ ನೀಡುತ್ತಾರೆ. 

ತಮಾಷೆಯೆಂದರೆ ಒಂದು ದಿನವೂ ನನ್ನವರ, ಮನೆಯ, ಊರಿನ ನೆನಪಾಗಲೇ ಇಲ್ಲ. ನೋಡಬೇಕೂ ಎಂದೂ ಅನಿಸಲಿಲ್ಲ. ಯಾವತ್ತೂ ನಾನು ನನ್ನ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದ್ದುದೇ ಕಾರಣವಿರಬೇಕು. ನಮ್ಮೂರಿನ ಕಡೆಯವರನ್ನೂ ಭೇಟಿಯಾಗಿಲ್ಲ. ಮುಂದೆ ಆಗುವುದು ಬೇಡ. ಮನೆಯವರ ಪಾಲಿಗೆ ನಾನು ಸತ್ತು ವರ್ಷಗಳೇ ಕಳೆದಿವೆ.. ಹಾಗೆ ಸತ್ತೇ ಇರುತ್ತೇನೆ.

ನೋವಾಗುತ್ತೆ. ಅರಿಯದ ಬಣ್ಣದ ಬದುಕಿನ ಕನಸಿಗೆ ಬಲಿಯಾದ ತಪ್ಪಿಗೆ. ನನ್ನನ್ನು ಈ ನರಕಕ್ಕೆ ತಳ್ಳಿದವನಿಗೆ ಅಷ್ಟು ಆಸೆಯಿದ್ದಿದ್ದರೆ, ಅಲ್ಲೇ ನನ್ನನ್ನು ಅನುಭವಿಸಬಹುದಿತ್ತು. ಸಾಯುವತನಕ ಅವನ ಜೊತೆ ಮಲಗುತ್ತಿದ್ದೆನೇನೋ? ಆದರೆ ಅವನು ಒಂದಷ್ಟು ದಿನದ ತೆವಲಿಗೆ, ಖಾಲಿ 20 ಸಾವಿರದ ಆಸೆಗೆ ನನ್ನ ಬದುಕನ್ನು ಮೂರಾಬಟ್ಟೆಯಾಗಿಸಿಬಿಟ್ಟ. ತಪ್ಪು ನನ್ನದೂ ಇದೆ. ನನ್ನ ದೌರ್ಬಲ್ಯವನ್ನು ಚನ್ನಾಗಿ ಬಳಸಿಕೊಂಡ. ಆದರೂ ಸರ್ ಗಂಡಸರ್ಯಾಕೆ ಹೆಣ್ಣುಗಳ ಮೇಲೆ ಇಂತಹ ದೌರ್ಜನ್ಯ ಮಾಡುತ್ತಾರೋ ಗೊತ್ತಿಲ್ಲ. ಇವತ್ತು ನಾನು ಏನೂ ಅಲ್ಲ. ಯಾರಿಗೂ ಸಹಾಯವನ್ನೂ ಮಾಡಲಾರೆ. ಅದರೆ ದಾರಿತಪ್ಪಿ ಬಂದ ಹೆಣ್ಣುಮಕ್ಕಳಿಗೆ ಸಮಾಧಾನ ಮಾಡಬಲ್ಲೆ. ಅವರ ಆರೋಗ್ಯದ ಬಗ್ಗೆ ಎಚ್ಚರವಹಿಸುವ ತಿಳುವಳುಕೆ ನೀಡಬಲ್ಲೆ. ಒಬ್ಬ ಸೂಳೆಯಿಂದ ಇನ್ನೇನು ಬಯಸಬಹುದು ಸಮಾಜ.?

ನೀವು ನಮ್ಮ ರಾಜ್ಯದವರು, ತೊಂದರೆಯಿಲ್ಲವೆಂದರೆ ಇವತ್ತು ರಾತ್ರಿ ಇಲ್ಲೇ ಉಳಿದು ಹೋಗಿ. ನಮ್ಮಲ್ಲಿ ಒಳ್ಳೆಯ ಹುಡುಗಿಯರಿದ್ದಾರೆ. ಮಾತು ಮುಗಿಸಿದವಳ ಕಣ್ಣಲ್ಲಿ ನೀರು ತುಂಬಿದ್ದವು. ನನ್ನ ಮನೆಯವರ ಬಗ್ಗೆ ಚಿಂತೆಯಿಲ್ಲ, ಅವರ ಬಗ್ಗೆ ಯೋಚಿಸುವುದೂ ಇಲ್ಲವೆಂದು ಅವಳು ಹೇಳಿದ್ದು ಸುಳ್ಳು ಎಂದು ನನಗೆ ಗೊತ್ತಾಯಿತು. ನನ್ನ ವಿಸಿಟಿಂಗ್ ಕಾರ್ಡ್ ಅವಳ ಕೈಗಿತ್ತು ನಮ್ಮ ಕಡೆ ಬಂದಾಗ ನಮ್ಮ ಮನೆಗೆ ಬನ್ನಿ ಎಂದು ನಮಸ್ಕಾರ ಹೇಳಿ ಹೊರಬಂದವನಿಗೆ, ಇಳಿಸಂಜೆಯಲಿ ಸುಂದರವಾಗಿ ಕಾಣಬೇಕಿದ್ದ ಪ್ರಪಂಚ ಒಂದು ಕಸಾಯಿಖಾನೆಯಂತೆ ಕಂಡಿತು.

ಮೇ 15, 2015

Trash plant containers!

trash plant container
Beginning!
Ashok K R
The easiest and quickest way to make our terrace/ balcony garden greener is to purchase the ‘ready to water’ plants from nearby nursery, no muddy hands. Easier method is to buy some well built ceramic/ plastic pots and start planting the seeds/ seedlings. Using ‘waste’ items in and around home to build plant container is tougher, yet exciting and creative method. Old buckets, Paint buckets (stronger and tougher) are commonly used to grow all varities of plants. Large paint buckets can be successively used to grow ‘trees’. When all old plastic items were exhausted to grow chilly plant and some flowers i started looking for other trash which can be converted to plant container with minimal expenditure. Used some plastic bottles, but somehow still i am finding it difficult to grow some plant in them. Finally my eyes fell on old, unused, partially destroyed wooden door which was bearing the brunt of all three seasons in backyard. 

Send your innovative ideas of terrace gardening to hingyake@gmail.com

DIY plant container
Plastic bush to raise the door
Using a wooden door has its advantages and disadvantages. I had no doubt that the door will bear the weight of the potting media and the plants but placing the door directly on the floor of the terrace means continous wetness beneath the door which might seep through the roof. Problem would be solved by creating a small gap between the door and the floor. Since i could not find any trash to heighten the door, i thought of alternatives. There were few cement bricks lying in the roof but if the height is more then stability will be less. Finally i decided to buy 6 plastic bush from nearby hardware store and fixed it to the door with screws. 2 inches of gap below the door is good enough for cleaning purposes.
DIY plant container
Good enough space for cleaning
Took 6 unequal wooden bars from Home Trash store! Fixed it vertically at the ends and in the middle of the door. Ofcourse opposite to the plastic bush! Now the door looked like container and only thing missing was side wall to support the potting media.
wooden plant container
Vertical wooden bars
For side wall i opted an old plastic tarpaulin sheet and tied it to the vertical wooden bars. (Now after seeing the status of other tarpaulin sheet i have decided not to use them in future. Weather will wither the sheets in a year or so and its almost impossible to remove the tiny bits of plastic from the potting media)
plant container innovative ideas
Final makeover with seedlings! Used some waste paper carton to provide additional support to side walls
Potting media consisted of red soil, cocopeat and kitchen waste compost. Filled the door, now a container, with potting media upto 1 – 11/2 feet. Fortunaltely, the plastic bush and the plastic sheet did not broke! Shifted and planted 3 chilly and one okra seedlings from small containers to the newly made Trash plant container. Its 3 months since i prepared this container. It has withstood the heavy rains last month. Okra plant was heavily infested with spider mites, had to remove it. Chilly plants are happily flowering and have harvested more than 250 gm of chillies and still counting!
plant container
After 3 months, healthy chillies and 'infested' Okra
Total cost for container: For plastic bush, screws and nails – 40 / -
Time consumed: 1 hour
Worthfulness: Cannot be priced!
diy plant container
Started harvesting!

ತಲೆಮೇಲೆ ಸೂರಿಲ್ಲದ ಬಡವರ ಮನೆಮುಂದೆ ಶ್ರೀಮಂತರ ರೆಸಾರ್ಟೂ, ಮೋಜಿನಾಟದ ಗಾಲ್ಫ್ ಕೋರ್ಟೂ...

ಮಂಗಳೂರು ನಗರದ ಕೂಗಳತೆಯ ದೂರದಲ್ಲಿರುವ ಬೆಂಗರೆ ಸಮುದ್ರ ತೀರದ ಸುಂದರ ಊರು. ಹದಿನೈದು ಸಾವಿರ ಜನಸಂಖ್ಯೆ, ಎರಡೂವರೆ ಸಾವಿರ ಮನೆಗಳನ್ನು ಹೊಂದಿರುವ ಬೆಂಗರೆಯಲ್ಲಿ ಬ್ಯಾರಿ ಮುಸ್ಲಿಮರು, ಮೊಗವೀರ ಸಮುದಾಯದವರು ಸಮ ಸಂಖ್ಯೆಯಲ್ಲಿದ್ದಾರೆ. ಮೀನುಗಾರಿಕೆ ಸಂಭಂಧಿಸಿ ಸಮುದ್ರವನ್ನೇ ನೆಚ್ಚಿ ಬದುಕುವ ಈ ಕಡಲ ಮಕ್ಕಳ ಬದುಕಿನ ಮೇಲೆ ಬಂಡವಾಳಶಾಹಿ ಕರಿನೆರಳು ಬಿದ್ದಿದೆ. ಇವರ ಊರಿನ ಉದ್ದಕ್ಕೂ ಮೈಚಾಚಿ ಮಲಗಿರುವ ನೂರೈವತ್ತು ಎಕರೆ ಸಮುದ್ರ ತೀರವನ್ನು ಸರಕಾರ ಪಿ ಪಿ ಪಿ ಯೋಜನೆಯನ್ವಯ ಖಾಸಗಿ ಶ್ರೀಮಂತ ಉದ್ಯಮಿಗೆ ಬಹುತೇಕ ಉಚಿತವಾಗಿ ಧಾರೆ ಎರದಿದೆ. ಉದ್ಯಮಿ ಈ ಚಿನ್ನದಂತ ಸಮುದ್ರ ದಂಡೆಯಲ್ಲಿ ನೂರೈವತ್ತು ಗೆಸ್ಟ್ ಹೌಸ್ ವಿಲ್ಲ ರೆಸಾರ್ಟ್, ಧಣಿಗಳ ಮೋಜಿನಾಟದ ಗಾಲ್ಫ್ ಕೋರ್ಟ್ ನಿರ್ಮಿಸಲು ಹೊರಟಿದ್ದಾರೆ. ಅದಕ್ಕಾಗಿ ಊರು ಮತ್ತು ಸಮುದ್ರ ದಂಡೆಯನ್ನು ಬೇರ್ಪಡಿಸಲು ಹತ್ತಡಿ ಎತ್ತರದ ರಕ್ಷಣಾಗೋಡೆ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದ ಬೆಂಗರೆಯ ಬಡಪಾಯಿ ಜನತೆ ಭೀತಿಗೊಂಡಿದ್ದಾರೆ. ತಮ್ಮ ಮತ್ತು ಸಮುದ್ರದ ಮದ್ಯೆ ಮೇಲೇಳುತ್ತಿರುವ ಗೋಡೆ ಸಮುದ್ರದ ಜೊತೆಗಿನ ತಮ್ಮ ಶತಮಾನದ ನಂಟನ್ನು ಕೊನೆಗೊಳಿಸುವುದನ್ನು ಕಂಡು ಕಂಗಾಲಾಗಿದ್ದಾರೆ. ಈಗಲೇ crz ನೆಪಹೇಳಿ ಡೋರ್ ನಂಬ್ರ, ವಿದ್ಯುತ್, ನೀರು ಕೊಡದೆ ಅಕ್ರಮವಾಸಿಗಳು ಎಂದು ಕರೆಯುವ ಸರಕಾರ, ಸಮುದ್ರದೊಂದಿಗೆ ತಮ್ಮ ನಂಟನ್ನು ಕೊನೆಗೊಳಿಸಿ ಮೀನುಗಾರಿಕೆ ಮಾಡದಂತೆ ತಡೆಯುವುದಲ್ಲದೆ, ಮೋಜಿನಾಟಕ್ಕೆ ಬರುವ ಶ್ರೀಮಂತರ ಅನುಕೂಲಕ್ಕಾಗಿ ತಮ್ಮನ್ನು ಒಕ್ಕಲೆಬ್ಬಿಸುವುದು ನಿಶ್ಚಿತ ಎಂದು ಆತಂಕಿತರಾಗಿದ್ದಾರೆ. ಬಡವರ ಗುಡಿಸಲುಗಳ ಮುಂದೆ ತಲೆ ಎತ್ತಲಿರುವ ಶ್ರೀಮಂತರ ಮೋಜಿನಾಟದ ಯೋಜನೆಯ ವಿರುದ್ದ dyfi ಧ್ವನಿ ಎತ್ತಿದೆ, ಇಂದು ಸ್ಥಳೀಯ ಜನತೆಯ ಪಾಲ್ಗೊಳ್ಳುವಿಕೆಯೊಂದಿಗೆ ಹೋರಾಟಕ್ಕೆ ಚಾಲನೆ ದೊರಕಿದೆ. ಬಡವರ ಗುಡಿಸಲ ಮುಂದೆ ಮಹಲುಗಳ ಘರ್ಜನೆಯ ಸಹಿಸಲಾಗದು...
(ಮುನೀರ್ ಕಾಟಿಪಳ್ಳರವರ ಫೇಸ್ ಬುಕ್ ಪುಟದಿಂದ)

ಮೇ 14, 2015

ಹದಿನೇಳರಿಂದ 'ಸಂಕಥನ'ದ ಸಂಭ್ರಮ.

ಸಾಹಿತ್ಯ ಪತ್ರಿಕೆಗಳು ನಿಜಕ್ಕೂ ಅವಶ್ಯಕವೇ ಎಂಬ ಪ್ರಶ್ನೆ ನನಗೆ ಹತ್ತಲವು ಬಾರಿ ಕಾಡಿದ್ದಿದೆ. ಮುಖ್ಯ ಕಾರಣ ಯಾವೊಂದು ಸಾಹಿತ್ಯ ಪತ್ರಿಕೆಯ ಸಂಪರ್ಕಕ್ಕೂ ಬರದೇ ಇದ್ದಿದ್ದು. ಸಾಹಿತ್ಯದ ವಿದ್ಯಾರ್ಥಿಯೂ ಅಲ್ಲ, ಸಾಹಿತಿಗಳ ಅಥವಾ ಅವರ ವಿದ್ಯಾರ್ಥಿಗಳ ಪರಿಚಯವೂ ಇಲ್ಲದೆ ಸಾಹಿತ್ಯದ (ಮುಖ್ಯವಾಗಿ ಗದ್ಯದ) ಪರಿಚಯ ಮಾಡಿಕೊಂಡ ನನಗೆ ಒಂದು ಪುಟ್ಟ ಸರ್ಕುಲೇಷನ್ ಇರುವ ಸಾಹಿತ್ಯ ಪತ್ರಿಕೆಗಳು ಪ್ರಕಟವಾಗುತ್ತವೆಂಬ ಅರಿವು ಮೂಡಿದ್ದೇ ತುಂಬ ತಡವಾಗಿ. ಅದೂ ಮಯೂರ, ಪ್ರಜಾವಾಣಿಯ ಸಾಪ್ತಾಹಿಕ, ಹಾಯ್ ಬೆಂಗಳೂರಿನ ಲೇಖನಗಳಲ್ಲಿ ಆವಾಗಿವಾಗ 'ರುಜುವಾತು' 'ಶೂದ್ರ' 'ದೇಶಕಾಲ'ದ ಬಗೆಗೆ ಓದಿದಾಗ. ಅಂತಹ ಪತ್ರಿಕೆಗಳನ್ನು ಕೊಳ್ಳುವುದೆಲ್ಲಿ, ಚಂದಾದಾರವಾಗಬೇಕೆಂದರೆ ಅದು ಹೇಗೆ ಎಂಬುದು ತಿಳಿಯಲೇ ಇಲ್ಲ. ಈಗೇನೋ ಫೇಸ್ ಬುಕ್ಕಿನಲ್ಲಿ ಅಪರಿಚಿತ ಪರಿಚಿತರ ಹತ್ತಿರ ಕೇಳಿಕೊಂಡು ವಿಷಯ ತಿಳಿದುಕೊಳ್ಳಬಹುದು. ಆಗ ಆ ಸೌಕರ್ಯವಿರಲಿಲ್ಲ. ಕಲಬುರ್ಗಿಯ ನವ ಕರ್ನಾಟಕ ಪುಸ್ತಕ ಮಳಿಗೆಯಲ್ಲಿ ಕೊಂಡುಕೊಂಡ 'ಹೊಸತು' ಪತ್ರಿಕೆ ನಾನು ಓದಿದ ಮೊದಲ ಆಫ್ ಬೀಟ್ ಪತ್ರಿಕೆ. ಪಠ್ಯದಂತಿದ್ದ ಪತ್ರಿಕೆಯನ್ನು ಕಲಬುರ್ಗಿಯಲ್ಲಿದ್ದಾಗ ಅನಿಯಮಿತವಾಗಿ ಓದುತ್ತಿದ್ದುದಕ್ಕೆ ಪತ್ರಿಕೆಯ ಎಡಪಂಥೀಯ ಒಲವು ಕಾರಣ. ಕಲಬುರ್ಗಿಯ ನಂಟು ಕಳೆದು ಸುಳ್ಯಕ್ಕೆ ಬಂದ ಮೇಲೆ 'ಹೊಸತು' ಪತ್ರಿಕೆಯ ನಂಟೂ ಕಳೆಯಿತು. ಸಾಹಿತ್ಯಕ್ಕೆ ಸಂಬಂಧಪಟ್ಟವರ ಚೂರು ಪಾರು ಪರಿಚಯ ಪ್ರಾರಂಭವಾದದ್ದು ಸುಳ್ಯಕ್ಕೆ ಬಂದಮೇಲೆ. ಶ್ರೀಪಾದ್ ಭಟ್ ರವರು ಪ್ರೀತಿಯಿಂದ 'ಆದಿಮ' ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಕೋಟಗಾನಹಳ್ಳಿ ರಾಮಯ್ಯನವರ ಬರಹದ ಶೈಲಿಯ ಪರಿಚಯವಾಯಿತು ಮತ್ತು ನಾಮದೇವ ನಿಮ್ಗಾಡೆ ಎಂಬ ಅದ್ಭುತ ವ್ಯಕ್ತಿಯ ಬಗ್ಗೆ ತಿಳಿದಿದ್ದು 'ಆದಿಮ'ದಿಂದ. ಶ್ರೀಪಾದ್ ಭಟ್ ಸಿಕ್ಕಾಗ 'ಸರ್  ಪತ್ರಿಕೆಯ ದುಡ್ಡು' ಎಂದಿದ್ದೆ. 'ಸದ್ಯಕ್ಕೆ ಆದಿಮ ಬರುತ್ತಿಲ್ಲ. ಒಂದಷ್ಟು ಬದಲಾವಣೆಗಳೊಂದಿಗೆ ತರೋ ಐಡಿಯಾ ಇದೆ. ನಂತರ ಕೊಡುವಿರಂತೆ ಬಿಡಿ' ಎಂದಿದ್ದರು. ಹಣಕಾಸಿನ ತೊಂದರೆಯಿಂದ, ಸೈದ್ಧಾಂತಿಕ ತೊಂದರೆಯಿಂದ, ವಿಚಾರಗಳ ಗೊಂದಲದಿಂದ ನಿಯಮಿತ ಪತ್ರಿಕಗಳೇ ಅನಿಯಮಿತವಾಗಿ ಕಣ್ಣು ಮುಚ್ಚುವುದನ್ನು ಕಾಣುವಾಗ ಸೀಮಿತ ಮಾರುಕಟ್ಟೆಯ ಸಾಹಿತ್ಯ ಪತ್ರಿಕಗಳ ಆಯಸ್ಸು ಎಷ್ಟಿರಬಹುದು? ಮೇಲಾಗಿ ಕಡಿಮೆ ಜನರನ್ನು ತಲುಪುವ ಪತ್ರಿಕೆಗಳು ಸಮಾಜದ ಚಲನಶೀಲತೆಗೆ ನೀಡುವ ಕೊಡುಗೆಯೇನು? ಒಂದು ಮಾತನ್ನಂತೂ ಒಪ್ಪಲೇ ಬೇಕು, ಲಕ್ಷ ಸರ್ಕುಲೇಷನ್ನಿನ ಪತ್ರಿಕೆಗಳಿಗಿಂತ ಸೀಮಿತ ಮಾರುಕಟ್ಟೆಯ ಸಾಹಿತ್ಯ ಪತ್ರಿಕೆಗಳು ವಿಚಾರವನ್ನು ರೂಪಿಸುವುದಕ್ಕೆ ನೀಡುವ ಕಾಣ್ಕೆ ದೊಡ್ಡದು. ಈ ಕಾರಣದಿಂದಲೇ ಅಲ್ಲವೇ ಮುಖ್ಯವಾಹಿನಿಯ ಅಂಕಣಗಳಲ್ಲೂ ಆಗಾಗ ಸಾಹಿತ್ಯ ಪತ್ರಿಕೆಗಳ ಪ್ರಸ್ತಾಪವಾಗುವುದು. ಸಾಹಿತ್ಯ ಪತ್ರಿಕೆಗಳ ಬಗೆಗಿನ ನನ್ನ ಇಷ್ಟೆಲ್ಲ ಗೊಂದಲಗಳಿಗೆ 'ಅನೇಕ ಗೆಳೆಯರು' ಪ್ರಾರಂಭಿಸುತ್ತಿರುವ 'ಸಂಕಥನ' ಪತ್ರಿಕೆ ಉತ್ತರವಾಗುತ್ತದಾ? 'ಅನೇಕ ಗೆಳೆಯರ' ತಂಡದಲ್ಲಿನ ರಾಜೇಂದ್ರ ಪ್ರಸಾದ್ ಮತ್ತು ಗಿರೀಶ್ ಹಂದಲಗೆರೆ ಫೇಸ್ ಬುಕ್ಕಿನ ಅಪರಿಚಿತ ಪರಿಚಿತರು!  ಇದೇ ಭಾನುವಾರ (ಮೇ 17ಕ್ಕೆ) ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ 'ಸಂಕಥನ'ದ ಬಿಡುಗಡೆಯ ಸಂಭ್ರಮವಿದೆ. 'ಸಂಕಥನ'ಕ್ಕೆ ಒಳ್ಳೆಯದಾಗಲಿ. 'ಸಂಕಥನ'ದ ಮೂಲಕ ಸಮಾಜಕ್ಕೂ ಒಂದಷ್ಟು ಒಳ್ಳೆಯದಾಗಲಿ.

ಅನೇಕ ಗೆಳೆಯರು ~ 2013ನೇ ವರ್ಷದ ನಡುಭಾಗದಲ್ಲಿ ಹುಟ್ಟಿಕೊಂಡ ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಕಲಿಯುತ್ತಿರುವ, ದುಡಿಯುತ್ತಿರುವ ಗ್ರಾಮೀಣ ಸೃಜನಶೀಲ ಯುವ ಸಾಹಿತ್ಯಾಸಕ್ತರ ಸಮುದಾಯ . ಕಲೆ - ಸಾಹಿತ್ಯ - ಸಂಗೀತ - ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ , ಸಂಕಥನ , ಕೃತಿ ಪ್ರಕಟಣೆ - ಪ್ರಸರಣ , ವಿಶೇಷವಾಗಿ ಗಾಂಧೀಯ ಚಿಂತನೆ.. ಕಳೆದುಹೋಗುತ್ತಿರುವ ನೆಲಮೂಲ ಸಂಸ್ಕೃತಿಯ ಕುರಿತು ಅರಿವು, ಅಧ್ಯಯನ ಇದರ ಮೂಲ ಭೂಮಿಕೆ.

ಆಧುನಿಕ ಜೀವನದ ಧಾವಂತಗಳಲ್ಲಿ ಹೊಸಪೀಳಿಗೆ ತನ್ನ ಬಹುಪರಂಪರೆಯ ನೆಲೆಗಳನ್ನು, ಅದರ ಮಾರ್ಗಗಳನ್ನು ಹತ್ತಾರು ಸೃಜನಶೀಲ ವಲಯಗಳಲ್ಲಿ ಕಂಡುಕೊಳುವುದಕ್ಕೆ ಪ್ರಯತ್ನಿಸುತ್ತಲೇ ಇದೆ ಮತ್ತು ಏಕಕಾಲದಲ್ಲಿ ಇನ್ನೊಂದು ಕಡೆ ಈ ಎಲ್ಲ ನೆಲೆಗಳ ಬಗ್ಗೆ ವಿಸ್ಮೃತಿಯೊಂದು ಆವರಿಸಿ ಪಾಶ್ಚಿಮಾತ್ಯ ಸ್ವರೂಪದ '' ಒಂದು ರಾಷ್ಟ್ರ ~ ಒಂದು ಸಂಸ್ಕೃತಿ'' ಎಂಬುವ ಅಪಾಯಕಾರಿ ಮಾದರಿಯೊಂದನ್ನು ಬೆನ್ನತ್ತಿದೆ. ಹೀಗಿರುವಾಗ 'ವಿವಿಧತೆಯಲ್ಲಿ ಏಕತೆ'ಯನ್ನು, ಉಪಖಂಡವು ರೂಪಿಸಿಕೊಂಡ ಸಂವಿಧಾನವನ್ನು ನಂಬಿದ ಸೃಜನಶೀಲ ಯುವಮನಸ್ಸುಗಳ ಸಮೂಹ ಇದಾಗಿದೆ.

ಈ ಪತ್ರಿಕೆಯ ಪರಿಕಲ್ಪನೆ ರಾಜೇಂದ್ರ ಪ್ರಸಾದ್ ಅವರದ್ದು 
ರಾಜೇಂದ್ರ ಓದಿದ್ದು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ M.Com. ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ಅಪಾರ ಆಸಕ್ತಿ. ಮಂಡ್ಯ ನಗರದಲ್ಲಿ ವಾಸ. ಕಳೆದ 4-5 ವರ್ಷಗಳಿಂದ ಈ ರೀತಿಯ ಒಂದು ಪತ್ರಿಕೆ ಮಾಡುವ ಯೋಜನೆ ಅವರದಾಗಿತ್ತು. 'ಅನೇಕ ಗೆಳೆಯರು' ಎಂಬ ಒಂದು ಸಮೂಹವನ್ನು ಫೇಸ್ಬುಕ್ ಮುಖಾಂತರ ಸೃಷ್ಟಿಸಿ ಸಾಹಿತ್ಯದ ಪುಟ್ಟ ಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅದೇ ಸಮೂಹದ ಬಲದಿಂದ ಈಗ 'ಸಂಕಥನ' ಸಾಹಿತ್ಯ ಪತ್ರಿಕೆ ಹೊರಬರುತ್ತಿದೆ. 

ರಾಜೇಂದ್ರ ಅವರ ಜೊತೆಗೆ 
* ಪ್ರವರ ಕೊಟ್ಟೂರು ( MCA ಓದು , ಕಾಲೇಜಿನಲ್ಲಿ ಉಪನ್ಯಾಸಕ) 
* ಶರತ್ ಚಕ್ರವರ್ತಿ ( ಸುದ್ದಿ ಮಾಧ್ಯಮದಲ್ಲಿ ಕಾರ್ಯಕ್ರಮ ನಿರ್ಮಾಪಕ ) 
* ಹರವು ಸ್ಪೂರ್ತಿ ( ಪತ್ರಿಕೋದ್ಯಮ ಓದು, ಸುದ್ದಿ ಚಾನಲ್ ನಲ್ಲಿ ಕೆಲಸ) 
* ಸಂತೋಷ್ ಕುಮಾರ್ ( ಸಾಫ್ಟ್ ವೇರ್ ಎಂಜನಿಯರ್ )
* ನಿತೇಶ್ ಕುಮಾರ್ ( ಸಾಫ್ಟ್ ವೇರ್ ಎಂಜನಿಯರ್ 
* ಭರತ್ ಎಂ.ವಿ. ( ಸಾಫ್ಟ್ ವೇರ್ ಎಂಜನಿಯರ್ )
* ಗಿರೀಶ್ ಹಂದಲಗೆರೆ 
* ಸತೀಶ್ ಬೆಂಗಳೂರು ( ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ) 

ಇನ್ನೂ ಬಹಳಷ್ಟೂ ಜನ ಪತ್ರಿಕೆಯಲ್ಲಿ ಸೇರಿಕೊಂಡಿದ್ದಾರೆ 
ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಸಾಹಿತ್ಯ ಪತ್ರಿಕೆಗಳು ಬಂದಿವೆ ಹೋಗಿವೆ ಮತ್ತು ಇಂದಿಗೂ ಬರುತ್ತಲಿವೆ. ಅಡಿಗರ 'ಸಾಕ್ಷಿ' , U. R. ಅನಂತ ಮೂರ್ತಿಯವರ 'ಋಜುವಾತು' , ಚಂಪಾ ಅವರ 'ಸಂಕ್ರಮಣ' , ವಿವೇಕ್ ಶಾನಭಾಗರ 'ದೇಶಕಾಲ' ಇನ್ನೂ ಬಹಳಷ್ಟೂ ಇವೆ. ಆದರೆ ಇವೆಲ್ಲವೂ ಸಾಹಿತ್ಯ ಕ್ಷೇತ್ರದ ಹೆಸರುಳ್ಳ ಸಾಹಿತಿಗಳಿಂದ ಆರಂಭಗೊಂಡ ಪತ್ರಿಕೆಗಳು. ಹಾಗಾಗಿ ಅವುಗಳ ಬೆಳವಣಿಗೆ ಚೆನ್ನಾಗಿಯೇ ಇತ್ತು. ಕಾಲಕ್ರಮೇಣ ಸ್ಥಗಿತವೂ ಉಂಟಾಯಿತು.

ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿ ಬರುತ್ತಿರುವ ಸಾಹಿತ್ಯ ಪತ್ರಿಕೆಗಳನ್ನು ನೋಡಿದ್ರೆ ಕನ್ನಡ ಭಾಷೆಯಲ್ಲಿ ಇವತ್ತಿನ ಮಟ್ಟಿಗೆ ಅಂತಹ ಒಳ್ಳೆಯ ಸಾಹಿತ್ಯ ಪತ್ರಿಕೆ ಇಲ್ಲ. ತುಂಬಾ ಚೆನ್ನಾಗಿಯೇ ಬರುತ್ತಿರುವ ಸಂಚಯ ಮತ್ತು ಸಂಕ್ರಮಣ ಪತ್ರಿಕೆಗಳು ಕೂಡ ಎಲ್ಲರಿಗೂ ಮುಟ್ಟುತ್ತಿಲ್ಲ... ಹೊಸ ಪೀಳಿಗೆಯನ್ನು ಸೆಳೆದುಕೊಳ್ಳುತ್ತಿಲ್ಲ . 

ಇಂತಹ ಸನ್ನಿವೇಶದಲ್ಲಿ ನಮ್ಮ ಪತ್ರಿಕೆ ಕಿರಿಯ ಬರಹಗಾರರಿಂದ ಶುರುವಾಗುತ್ತಿದೆ. 

ಇಲ್ಲಿ ನೀವು ಇಷ್ಟು ಗಮನಿಸಬಹುದು 

* ನಾವೆಲ್ಲರೂ ಬಹುತೇಕ 30 ವರ್ಷ ಒಳಗಿನವರು. 
* ಸಾಹಿತ್ಯ ವನ್ನು ತರಗತಿಗಳಲ್ಲಿ ಅಭ್ಯಾಸ ಮಾಡಿದವರು ಅಲ್ಲ ಬದಲು ಪ್ರೀತಿಯಿಂದ ಓದಿಕೊಂಡವರು
* ನಮ್ಮ ಪತ್ರಿಕೆಯ ಬಗ್ಗೆ ಯಾವುದೇ ಮಹತ್ತರವಾದುದು ನಾವು ಸಾಧಿಸುತ್ತೇವೆಂದಾಗಲಿ, ಅದ್ಬುತವಾಗಿರುವುದನ್ನು ತರುತ್ತೇವೆಂದಾಗಲೀ ಭ್ರಮೆಗಳಿಲ್ಲ.. ಬದಲಾಗಿ ಇವತ್ತಿನ ತಲ್ಲಣಗಳ ಅಭಿವ್ಯಕ್ತಿಗೆ ಒಂದು ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆಂದು ನಂಬಿದ್ದೇವೆ.
* ಔಪಚಾರಿಕತೆ ಮತ್ತು ಅಕಾಡೆಮಿಕ್ ನೆಲೆಗಳನ್ನು ಬಿಟ್ಟು ವಾಸ್ತವದ ಬದುಕಿನ ನೆಲಗಟ್ಟಿನಲ್ಲೇ ಸಾಹಿತ್ಯವನ್ನು ಓದುವ ಮತ್ತು ಎಲ್ಲರೂ ತಲುಪಿಸುವ ಆಶಯ ನಮ್ಮದು. 
* ಪತ್ರಿಕೆ ಬರಿಯ ಕಾವ್ಯ, ಕಥನ, ಟಿಪ್ಪಣಿಗಳಿಗೆ ಸೀಮಿತವಾಗದೇ ಈ ಕಾಲಘಟ್ಟದ ಸಾಹಿತ್ಯದ ಹಲವು ಮೂಲನೆಲೆಗಳಿಂದ ಬರಹಗಳನ್ನು ತರುತ್ತಿದೆ. ಇತಿಹಾಸ, ತತ್ವಜ್ಞಾನ, ವಿಜ್ಞಾನ, ತಂತ್ರಜ್ಞಾನಗಳನ್ನು ಜೊತೆಗಿರಿಸಿಕೊಂಡಿದ್ದೇವೆ. 
* ಅನೇಕ ಹಿರಿಯ ಬರಹಗಾರರೊಂದಿಗೆ ಕಿರಿಯ ಬರಹಗಾರಾರೂ ಜೊತೆಯಾಗಿ ಬರೆಯುತ್ತಿದ್ದಾರೆ. 
* ಸಂಕಥನ - ಸಾಹಿತ್ಯ ಪತ್ರಿಕೆಯು ಯುಗಾದಿಯಿಂದ ಮೊದಲುಗೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಹೊರಬರಲಿದೆ.
* ಚಂದಾದಾರರಿಗೆ ನೇರವಾಗಿ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಹೊರಗೆ ಎಲ್ಲೂ ಪತ್ರಿಕೆ ಲಭ್ಯವಿಲ್ಲ. 
* ಪತ್ರಿಕೆಯ ವಾರ್ಷಿಕ ಚಂದಾ ರೂ. 250 ಇದೆ ಅದನ್ನು ನೇರವಾಗಿ Online ನಲ್ಲಿ direct pay ಮಾಡಬಹುದುದಾಗಿದೆ. 

ಮೇ 9, 2015

ಅಸಹಾಯಕ ಆತ್ಮಗಳು - ಚಿಕ್ಕಮ್ಮನ ಚಕ್ರವ್ಯೂಹ

ಕು.ಸ.ಮಧುಸೂದನ್
ಅಪ್ಪನಿಗೆ ಹಳ್ಳಿಯಲ್ಲಿ ಒಂದೆರಡು ಎಕರೆ ಜಮೀನಿತ್ತು. ಆದರದರಲ್ಲಿ ಬರುವ ಆದಾಯಕ್ಕಿಂತ ಅವನು ಮಾಡುತ್ತಿದ್ದ ಲೇವಾದೇವಿಯಿಂದಲೇ ಜೀವನ ಸಾಗುತ್ತಿತ್ತು. ಉಣ್ಣೋಕೆ ತಿನ್ನೋಕೆ ಏನೂ ಕೊರತೆಯಿರದೇ ಬೆಳೆಯುತ್ತಿರುವಾಗಲೇ ಅಮ್ಮ ಮನೆ ಹಿಂದಿದ್ದ ಕಲ್ಲಿನ ಬಾವಿಗೆ ಬಿದ್ದು ಸತ್ತು ಹೋದಳು. ತಾತ ತೆಗೆಸಿದ ಬಾವಿಗೆ ಸುತ್ತ ಕಲ್ಲು ಕಟ್ಟಿದ್ದರೂ ಅದುಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿತ್ತು. ಆ ಬಾವಿ ಮುಚ್ಚಿಸಿ ಅಂತಾ ಅಮ್ಮ ಎಷ್ಟು ಬಡಕೊಂಡರು ಅಪ್ಪ ಅವಳ ಮಾತು ಕೇಳಿರಲಿಲ್ಲ. ಕೊನೆಗೆ ಅವಳೇ ಅದಕ್ಕೆ ಬಲಿಯಾಗಿ ಹೋದಳು. ಅವಳು ಸತ್ತಾಗ ನಾನು ನಾಲ್ಕನೇ ಕ್ಲಾಸಲ್ಲಿ ಓದ್ತಾ ಇದ್ದೆ.

ಅಮ್ಮ ಸತ್ತ ಒಂದಷ್ಟು ದಿನದವರೆಗೂ ಇಡೀ ಊರಲ್ಲಿ ಅಪ್ಪನೇ ಅಮ್ಮನ್ನು ಹೊಡೆದು ಬಾವಿಗೆ ಹಾಕಿದಾನೆ ಅಂತ ಗುಸುಗುಸು ಹಬ್ಬಿತ್ತು. ಆ ಮಾತುಗಳು ನನ್ನ ಕಿವಿಗೆ ಬಿದ್ದರೂ ಅದೆಲ್ಲ ಅರ್ಥ ಆಗೋ ವಯಸ್ಸು ನನಗಾಗಿರಲಿಲ್ಲ. ತಿನ್ನೋಕೆ ಗತಿಯಿಲ್ಲದ ಸ್ಥಿತಿಯಲ್ಲಿದ್ದ ಅಮ್ಮನ ತವರು ಮನೆಯವರು ಅದರ ಬಗ್ಗೆ ಏನನ್ನು ಕೇಳಲಿಲ್ಲ. ಆದರೆ ಊರಲ್ಲಿ ಹಬ್ಬಿದ ಆ ಗಾಳಿಮಾತುಗಳು ಸತ್ಯವಿರಬಹುದೆಂಬ ಅನುಮಾನ ನನಗೆ ಬಂದಿದ್ದು ಅಮ್ಮ ಸತ್ತ ಮೂರೇ ತಿಂಗಳಿಗೆ ಅಪ್ಪ ಪಕ್ಕದ ಹಳ್ಳಿಯ ಗಂಡ ಸತ್ತ ಹೆಂಗಸೊಬ್ಬಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಾಗ!


ಹಳ್ಳಿಯ ಜನವಂತೂ ಈಗ ಅಪ್ಪನೇ ಅಮ್ಮನನ್ನು ಸಾಯಿಸಿದ್ದಾನೆಂದು ನಂಬಿಬಿಟ್ಟರು. ಆದರೆ ಯಾರಿಗೂ ಹೊರಗೆ ಮಾತಾಡೋ ಧೈರ್ಯವಿರಲಿಲ್ಲ. ಯಾಕೆಂದರೆ ಹಳ್ಳಿಯೊಳಗಿನ ಬಹಳಷ್ಟು ಜನ ಅಪ್ಪನ ಹತ್ತಿರ ಲೇವಾದೇವಿ ಇಟ್ಟುಕೊಂಡೋರೆ ಆಗಿದ್ದರು. ಹಾಗೆ ಅಪ್ಪ ಮದುವೆಯಾಗಿ ಮನೆಗೆ ಕರೆದುಕೊಂಡ ಬಂದ ಹೆಂಗಸಿನ ಬಗ್ಗೆಯೂ ಯಾರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅವಳ ಗಂಡ ಇವಳ ಕಿರುಕುಳ ತಾಳಲಾರದೆ ನೇಣು ಹಾಕಿಕೊಂಡು ಸತ್ತುಹೋದ ಅಂತ ಜನ ಮಾತಾಡ್ತಾ ಇದ್ದರು. ನಾನು ಸಣ್ಣ ಹುಡುಗಿಯಾಗಿದ್ದರಿಂದ ಇದೆಲ್ಲ ನನಗೆ ಅರ್ಥವಾಗಲ್ಲ ಅನ್ನೋ ಧೈರ್ಯದಿಂದ ನನ್ನ ಎದುರಿಗೇ ಮಾತಾಡಿಕೊಳ್ತಿದ್ದರು. ಅದರಲ್ಲೂ ಅಪ್ಪನ ಅಣ್ಣತಮ್ಮಂದಿರಿಗೆ ಮುಂಚಿನಿಂದಲೂ ಅಪ್ಪನ ಕಂಡರೆ ಯಾಕೋ ದ್ವೇಷ. ಇಂತಹ ಸುದ್ದಿಗಳನ್ನೆಲ್ಲ ಅವರೇ ಹೆಚ್ಚು ಹಬ್ಬಿಸ್ತಾ ಇದ್ದರು. ಒಟ್ಟಲ್ಲಿ ಯಾವುದು ಸುಳ್ಳು ಯಾವುದು ಸತ್ಯ ಅಂತ ತಿಳಿದುಕೊಳ್ಳೋ ಆಸಕ್ತಿಯಾಗಲಿ, ಅಂತ ಬುದ್ದಿವಂತಿಕೆಯಾಗಲಿ ನನಗಿರಲಿಲ್ಲ.

ನಾನು ಏಳನೇ ಕ್ಲಾಸು ಮುಗಿಸಿ ಎಂಟನೇ ಕ್ಲಾಸಿಗೆ ಬಂದ ಒಂದೇ ತಿಂಗಳಿಗೆ ಮೈನೆರೆದೆ. ಇದನ್ನೇ ನೆವವಾಗಿಟ್ಟುಕೊಂಡ ಚಿಕ್ಕಮ್ಮ ಮೈನೆರೆದ ಹುಡುಗಿ ಪಕ್ಕದೂರಿಗೆ ಹೋಗಿ ಓದೋದೇನು ಬೇಕಾಗಿಲ್ಲ ಅಂತ ಅಪ್ಪನ ಕಿವಿ ಚುಚ್ಚಿ ಸ್ಕೂಲ್ ಬಿಡಿಸಿ ಬಿಟ್ಟಳು. ಅಪ್ಪ ಹೆಂಡತಿ ಹೇಳ್ತಿರೋದು ಮನೆಯ ಗೌರವ ಮತ್ತು ಮಗಳ ಭವಿಷ್ಯದ ಹಿತದೃಷ್ಠಿಯಿಂದ ನಂಬಿದ್ದ. ಅಲ್ಲೀತನಕ ನೆಮ್ಮದಿಯಾಗಿ ಆಟ ಆಡಿಕೊಂಡಿದ್ದ ನನಗೆ ಅಲ್ಲಿಂದ ನರಕ ಶುರುವಾಯ್ತು ನೋಡಿ. ಅಪ್ಪ ಮನೆ ಬಿಟ್ಟು ಹೊರಗೆ ಹೋದ ತಕ್ಷಣ ಅವಳ ಕಾಟ ಶುರುವಾಗೋದು. ಆ ಕೆಲಸ ಮಾಡು ಈ ಕೆಲಸ ಮಾಡು ಅಂತಾ ಒಂದು ನಿಮಿಷ ಕೂರೋಕೆ ಬಿಡದ ಹಾಗೆ ಕಂಬ ಸುತ್ತಿಸೋಳು. ಹೀಗೇ ಮೂರು ವರ್ಷ ಕಳೆಯುವಷ್ಟರಲ್ಲಿ ಹೊಲಕ್ಕೆ ಹೋದ ಅಪ್ಪ ಅಲ್ಲೇ ಸತ್ತು ಹೋಗಿದ್ದ. ಅವನಿಗಾಗದ ಯಾರೋ ಅವನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದರು. ಹಳ್ಳಿಗೆ ಬಂದ ಪೋಲಿಸರು ಅವರಿವರನ್ನು ವಿಚಾರಣೆ ಮಾಡಿ ಅಪ್ಪನ ದಾಯಾದಿಗಳ ಪೈಕಿ ಮೂರು ಜನರನ್ನು ಅರೆಸ್ಟ್ ಮಾಡಿಕೊಂಡು ಹೋದರು. ನೆಂಟರಿಷ್ಟರೆಲ್ಲ ಬಂದು ತಿಥಿಗಿಥಿ ಎಲ್ಲ ಪೂರೈಸಿಕೊಂಡು ಹೋದ ಮೇಲೆ ಚಿಕ್ಕಮ್ಮನ ಗೊಣಗಾಟ ಶುರುವಾಯಿತು. ನಿಮ್ಮಪ್ಪ ಯಾರ್ಯಾರಿಗೆ ದುಡ್ಡು ಕೊಟ್ಟು ಸತ್ತು ಹೋದನೋ ಏನೋ ಈಗ ನಾನೆಲ್ಲಿ ವಸೂಲಿ ಮಾಡಿ ಜೀವನ ಕಳೀಲಿ. ನಿನ್ನ ಮದುವೆ ಹೆಂಗೆ ಮಾಡಲಿ ಅಂತ ನಿಮಿಷ ನಿಮಿಷಕ್ಕೂ ರಾಗ ಎಳೆಯೋಳು. ಈ ಕಾಟವಲ್ಲದೆ ಅಪ್ಪ ಇರೋತನಕ ತೋರಿಕೆಗಾದ್ರು ಮಗಳು ಅಂತ ನಾಟಕ ಮಾಡಿ ಅವರಿವರ ಮನೆಗೆ ಹೋಗೋಕೆ ಬಿಡ್ತಿದ್ದವಳು, ಈಗ ಪಕ್ಕದ ಮನೆಯವರ ಜೊತೆ ಮಾತಾಡೋಕು ಬಿಡದಷ್ಟು ಕಠೋರವಾಗಿಬಿಟ್ಟಳು.

ಕೊನೆಗೊಂದು ದಿನ ಅವಳ ತಮ್ಮ ಅನಿಸಿಕೊಂಡೋನು ಸಹ ನಮ್ಮ ಮನೆಗೇ ಬಂದು ಇರೋಕೆ ಶುರು ಮಾಡಿಬಿಟ್ಟ. ಮುಂಚೇನು ಅಪ್ಪ ಇದ್ದಾಗ ವರ್ಷಕ್ಕೊಂದೆರಡು ಬಾರಿ ಹಬ್ಬಹುಣ್ಣಿಮೆಗೆ ಬಂದು ಹೋಗ್ತಿದ್ದೋನು ಈಗ ಇನ್ನು ಮೇಲೆ ಇಲ್ಲೇ ಇರ್ತೀನಿ ಅಕ್ಕ ನಿನಗೆ ತಾನೆ ಯಾರಿದ್ದಾರೆ ಹೇಳು ಅಂತಾ ಝಾಂಡಾ ಹೂಡಿಬಿಟ್ಟ. ಅಷ್ಟಕ್ಕು ನಾನು ಕೇಳಿದ ಸುದ್ದಿ ಪ್ರಕಾರ ಅವನೇನು ಅವಳ ಸ್ವಂತ ತಮ್ಮ ಆಗಿರಲಿಲ್ಲ ಜೊತೆಗೆ ಯಾವುದೋ ದೂರದ ಸಂಬಂಧದವನಾಗಿದ್ದ. ಅಂತೂ ಮನೆಗೆ ಮೂರನೆಯವನೊಬ್ಬ ಬಂದು ಸೇರಿಕೊಂಡಿದ್ದು ನನಗೇನೂ ಇಷ್ಟವಾಗಲಿಲ್ಲ. ಅದೂ ಅಲ್ಲದೆ ಮುಂಚೇನು ಮನೆಗೆ ಬಂದಾಗ ನನ್ನ ತಿನ್ನೋ ಹಾಗೆ ನೋಡೋನು. ಅವನ ನೋಟ ನಡತೆ ಯಾವುದು ನನಗಿಷ್ಟವಾಗಿರಲಿಲ್ಲ. ಅವನಿಗಾಗಲೆ ಮುವತ್ತು ವರ್ಷ ಮೀರಿತ್ತು. ಬೆಂಗಳೂರಲ್ಲಿ ಅದೇನು ಕೆಲಸ ಮಾಡ್ತಿದ್ದನೊ ದೇವರಿಗೆ ಗೊತ್ತು, ಯಾವಾಗಲು ಒಳ್ಳೆ ಬಟ್ಟೆ ಹಾಕ್ಕೊಂಡು ಶೋಕಿ ಮಾಡ್ತಾ ಇದ್ದ. 

ಅವನು ಬಂದ ಮೇಲೆ ಚಿಕ್ಕಮ್ಮ ನನಗೇನಾದ್ರು ಕೆಲಸ ಹೇಳಿದ್ರೆ ಪಾಪ ಆಮೇಲೆ ಮಾಡ್ತಾಳೆ ಬಿಡು ಅವಳಿಗೂ ಸುಸ್ತಾಗಿರಬೇಕು ಅಂತೆಲ್ಲ ಹೇಳಿ ನನ್ನ ಪರವಹಿಸಿಕೊಂಡು ಮಾತಾಡೋನು. ಒಂದು ದಿನ ಚಿಕ್ಕಮ್ಮ ಬಂದು ನನ್ನ ಹತ್ತಿರ ಕರೆದು ನೋಡು ನಿನಗೂ ಹದಿನೇಳು ತುಂಬುತ್ತಾ ಬಂತು, ಈಗ ನಿನ್ನ ಮದುವೆಮಾಡಬೇಕು, ವರದಕ್ಷಿಣೆ ತುಂಬಾ ಕೇಳಿದರೆ ನಾನೆಲ್ಲಿಂದ ತರಲಿ? ಅಂತ ನಯವಾಗಿ ಮಾತು ಶುರು ಮಾಡಿದೋಳು, ಸುಮ್ಮನೆ ನನ್ನ ತಮ್ಮನನ್ನು ಮದುವೆಯಾಗು, ಅವನೇನು ದೂರದವನ ಖರ್ಚಿಲ್ಲದೆ ಮದುವೆಯಾಗುತ್ತೆ. ನಿನ್ನ ಚೆನ್ನಾಗಿ ನೋಡಿಕೊಳ್ತಾನೆ. ಮದುವೆ ಆದಮೇಲೆ ನೀವಿಬ್ಬರೂ ಬೆಂಗಳೂರಿಗೆ ಹೋಗಿ ಬಿಡಿ. ನನ್ನದು ಹೇಗಿದ್ದರೂ ನಡೆಯುತ್ತೆ. ನಿಮ್ಮಪ್ಪ ಇದ್ದಿದ್ದರೆ ನಾನೀ ಮಾತನ್ನ ಹೇಳೋ ಕಾಲ ಬರ್ತಿರಲಿಲ್ಲ. ಹೊಟ್ಟೇಲಿ ಹುಟ್ಟದಿದ್ರೂ ನೀನು ನನ್ನ ಮಗಳೇ ಅಲ್ವಾ ಅಂತೆಲ್ಲ ಹೇಳಿದಳು. ಆ ಕ್ಷಣಕ್ಕೆ ಏನು ಹೇಳಬೇಕೊ ನನಗೆ ಗೊತ್ತಾಗಲಿಲ್ಲ. ಸುಮ್ಮನೆ ಅಳ್ತಾ ಕೂತೆ. ನನಗೆ ಮದುವೆ ಅನ್ನೋದೆ ಒಂದು ಅನಿರೀಕ್ಷಿತವಾದ ವಿಷಯವಾಗಿತ್ತು ಅದರಲ್ಲೂ ಅವನನ್ನು ಆಗೋದು ಅಂದ್ರೆ ನಾನ್ಯಾವತ್ತು ಅದನ್ನೆಲ್ಲ ಊಹೆ ಮಾಡಿಕೊಂಡೋಳಲ್ಲ.

ಆದರೆ ಚಿಕ್ಕಮ್ಮ ಸಾಮಾನ್ಯದವಳಲ್ಲ. ದಿನಾ ಇದೇ ಮಾತಾಡಿ ಮಾತಾಡಿ ನನಗೆ ಸಂಕಟ ಆಗೋಹಾಗೆ ಮಾಡಿದಳು. ಕೊನೆಗೊಂದು ದಿನ ಇದಕ್ಕೆ ಒಪ್ಪಲಿಲ್ಲ ಅಂದ್ರೆ ನಾನು ನನ್ನ ತಮ್ಮನ ಜೊತೆ ಬೆಂಗಳೂರಿಗೆ ಹೋಗಿ ಬಿಡ್ತೀನಿ ನೀನು ನಿಮ್ಮಪ್ಪನ ಹೊಲ ಲೇವಾದೇವಿ ನೋಡ್ಕೊಂಡು ಇಲ್ಲೇ ಇರು ಅಂತ ಹೆದರಿಸಿಬಿಟ್ಟಳು. ನಿಜಕ್ಕೂ ಅದನ್ನ ನಾನು ಕನಸಲ್ಲೂ ನೆನೆಸಿರಲಿಲ್ಲ. ದಾಯಾದಿಗಳು ಜೈಲಿಗೆ ಹೋದಮೇಲೆ ಆ ಕುಟುಂಬದವರು ನಮಗೆ ಹೊಲದಲ್ಲಿ ಬೆಳೆ ಬೆಳೆಯೋಕೆ ಸಾಕಷ್ಟು ತೊಂದರೆ ಕೊಡ್ತಾ ಇದ್ದರು. ಅಂತದ್ದರಲ್ಲಿ ನಾನೊಬ್ಬಳೇ ಆಗಿಬಿಟ್ಟರೆ ನನ್ನ ಸಾಯಿಸೋದು ಗ್ಯಾರಂಟಿ ಅನ್ನಿಸ್ತು.

ಆಮೇಲೊಂದು ದಿನ ಮನಸು ಗಟ್ಟಿ ಮಾಡಿಕೊಂಡು ಹೂ ಅಂದು ಬಿಟ್ಟೆ. ಹಾಗೆ ಒಪ್ಪಿಕೊಂಡ ತಕ್ಷಣ ಚಿಕ್ಕಮ್ಮನ ವರಸೆಯೇ ಬದಲಾಗಿ ಹೋಯಿತು. ಏನು ಹೊಟ್ಟೇಲಿ ಹುಟ್ಟಿದ ಮಗಳಿಗೂ ಅಂತ ಸೇವೆನಾ ಯಾರೂ ಮಾಡಲ್ಲ. ಹಾಗೆ ನನ್ನ ಒಂದೂ ಕೆಲಸ ಮಾಡೋಕೆ ಬಿಡದೆ ತಾನೇ ಎಲ್ಲ ಕೆಲಸ ಮಾಡಿ ಕೂತಕಡೆಗೆ ಊಟ ತಂದು ಕೊಡೋಳು. ನನಗೆ ಇದೆಲ್ಲ ಒಂದು ತರ ಅನ್ನಿಸಿ ಚಿಕ್ಕಮ್ಮ ನೀವು ಹೀಗೆಲ್ಲ ಮಾಡಬೇಡಿ ಅಂದುಬಿಟ್ಟೆ. ಇಷ್ಟವಿತ್ತೊ ಇರಲಿಲ್ಲವೊ ಮದುವೆಗೆ ಒಪ್ಪಿದ್ದೆ, ನಂದೂ ಹರಯದ ವಯಸ್ಸಲ್ವಾ ಮದುವೆ ಮನೆ ಮಕ್ಕಳು ಬಗ್ಗೆ ಏನೇನೋ ಕನಸು ಕಾಣೋಕೆ ಶುರು ಮಾಡಿದೆ.

ಹಾಗಿರೋವಾಗ ಒಂದು ರಾತ್ರಿ ಚಿಕ್ಕಮ್ಮ ನನಗೆ ಮಲಗೋಕೆ ಅವಳ ತಮ್ಮನ ರೂಮಿಗೆ ಹೋಗೋಕೆ ಹೇಳಿದಳು. ನನಗೆ ಆಶ್ಚರ್ಯವಾಗಿ ಏನು ಚಿಕ್ಕಮ್ಮ ಮದುವೆಗೆ ಮುಂಚೇನೆ ಒಟ್ಟಿಗೆ ಮಲಗ್ತಾರಾ ಅಂದೆ. ಅದಕ್ಕವಳು ಇನ್ನೇನು ಮೂರು ತಿಂಗಳಲ್ಲಿ ಮದುವೆ ಆಗುತ್ತಲ್ಲ. ಅವನೇನು ಹೊಸಬನಾ, ಸುಮ್ಮನೇ ಹೋಗು ನಾನು ನಿಮ್ಮಮ್ಮ ಹೇಳ್ತಿದಿನಿ ಅಂದು ಬಿಟ್ಟಳು. ಸತ್ಯ ಹೇಳ್ತೀನಿ ಅವಳು ನಾನು ನಿಮ್ಮಮ್ಮ ಅಂದ ಒಂದು ಮಾತಿಗೆ ನಾನು ಮರು ಮಾತಾಡದೆ ಒಳಗೆ ಹೋಗಿ ಬಿಟ್ಟೆ. ರೂಮಿನಲ್ಲಿದ್ದ ಅವನು ನನ್ನಿಷ್ಟ ಕಷ್ಟ ಏನನ್ನೂ ಕೇಳದೆ ಇಡೀರಾತ್ರಿ ನನ್ನ ಹಿಚುಕಿ ಹಾಕಿಬಿಟ್ಟ. ಬೆಳಿಗ್ಗೆ ಎಷ್ಟೊತ್ತಾದರು ಏಳದೆ ಮಲಗಿ ಬಿಟ್ಟಿದ್ದೆ. ಇದೇನೋ ಒಂದು ದಿನದ ಕಥೆ ಅಂದುಕೊಂಡಿದ್ದರೆ ಊಹೂ ಸತತವಾಗಿ ಆರು ತಿಂಗಳು ಮದುವೆಯಾಗದೆ ಅವನ ಜೊತೆ ಸಂಸಾರ ಮಾಡಿಬಿಟ್ಟೆ. ಹೊರಗಿನ ಒಬ್ಬರಿಗೂ ಗೊತ್ತಾಗದೆ ಇದೆಲ್ಲ ನಡೆಯುತ್ತ ಇತ್ತು. ನಾನೂ ಸಹ ಮನೆಯಿಂದಾಚೆ ಇಣುಕುವುದನ್ನೇ ಬಿಟ್ಟಿದ್ದೆ. ಮದುವೆ ಮಾತೆತ್ತಿದಾಗೆಲ್ಲ ಚಿಕ್ಕಮ್ಮ ಇನ್ನೆರಡು ತಿಂಗಳು ಒಳ್ಳೆಯ ಮುಹೂರ್ತವಿಲ್ಲ ತಡಿ ಅನ್ನುತ್ತಲೇ ಬಂದಳು. ಇದು ತಪ್ಪು ಅಂತ ಗೊತ್ತಿದ್ದರು ನಾನು ಏನೂ ಮಾಡದ ಸ್ಥಿತಿಯಲ್ಲಿದ್ದೆ.

ಆದರೆ ನಾನು ಸುಮ್ಮನಿದ್ದರೂ ದೇವರು ಸುಮ್ಮನಿರ್ತಾನಾ? ನನ್ನ ಹೊಟ್ಟೇಲಿ ಅವನ ಪಿಂಡ ಬೆಳೆಯೋಕೆ ಶುರುವಾಯಿತು. ಈ ವಿಷಯ ಗೊತ್ತಾದ ಕೂಡಲೆ ಅದುವರೆಗೂ ಹೊರಗೆ ವಿಷಯ ಗೊತ್ತಾಗದಂತೆ ನೋಡಿಕೊಂಡಿದ್ದ ಚಿಕ್ಕಮ್ಮ ಮನೆಯಂಗಳದಲ್ಲಿ ಬಾಯಿ ಬಡಿದುಕೊಂಡು ಅಯ್ಯೋ ನಮ್ಮನೆ ಮಾರ್ಯಾದೆ ತಗದಳಲ್ಲಪ್ಪ, ಮದುವೆಗೆ ಮುಂಚೇನೆ ಕದ್ದು ಬಸಿರಾಗಿದಾಳೆ ಅನ್ನುತ್ತ ಊರು ಕೇರಿ ಒಂದು ಮಾಡಿಬಿಟ್ಲು. ಚಿಕ್ಕಮ್ಮನ ವರ್ತನೆ ನನಗೆ ಅರ್ಥವಾಗದೆ ಮನೆಯೊಳಗೆ ಅಳುತ್ತಾ ಕೂತೆ. ಊರವರೆಲ್ಲ ಬಂದು ಚಿಕ್ಕಮ್ಮನಿಗೆ ಅಯ್ಯೋ ಪಾಪ ಅಂತ ಸಮಾಧಾನ ಹೇಳಿ ಹೋದರೆ ಹೊರತು ನನಗೆ ಯಾರು ಏನೂ ಕೇಳಲಿಲ್ಲ.

ಹೀಗೆ ಎರಡುದಿನದ ಅವಳ ಅಳುವಿನ ನಾಟಕ ಮುಗಿದ ಮೇಲೆ ಒಂದು ದಿನಾ ಸುಮ್ಮನೆ ಅವನ ಜೊತೆ ಬೆಂಗಳೂರಿಗೆ ಹೋಗು ಅಂತ ಹೇಳಿ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ನಮ್ಮಿಬ್ಬರನ್ನೂ ಬೆಂಗಳೂರಿಗೆ ಕಳಿಸಿಬಿಟ್ಟಳು. ಬೆಂಗಳೂರಿಗೆ ಬೆಳಗಿನ ಜಾವ ಬಂದ ನನ್ನನ್ನು ಒಂದು ಲಾಡ್ಜಿನ ರೂಮಲ್ಲಿ ಇರಿಸಿ, ಇಲ್ಲೇ ಇರು ಸಾಯಂಕಾಲ ಬರ್ತೀನಿ ಅಂತ ಹೊರಟು ಹೋದ. ನನಗಾಮೇಲೆ ಗೊತ್ತಾಗಿದ್ದೆಂದರೆ ಅವನು ವಾಪಾಸು ಹಳ್ಳಿಗೆ ಹೋಗಿ ನಾನೆಲ್ಲೊ ಓಡಿ ಹೋಗಿದ್ದೀನಿ ಅನ್ನೋ ತರಾ ಹುಡುಕಾಡಿದ ನಾಟಕವಾಡಿ ರಾತ್ರಿ ಹತ್ತು ಗಂಟೆಗೆಲ್ಲ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಸುಮಾರು ಒಂದು ವಾರ ಹೀಗೇ ನಾಟಕವಾಡಿದ ಅವನು ಕೊನೆಗೊಂದು ದಿನ ಸಣ್ಣ ಮನೆ ಮಾಡಿ ನನ್ನ ಕರೆದುಕೊಂಡು ಹೋದ. ನಾನು ನಮ್ಮ ಮದುವೆಯ ಮಾತೆತ್ತಿದರೆ, ಸ್ವಲ್ಪ ದಿನ ತಡಿ ಅಂತ ಹೇಳುತ್ತ ಬಂದ. ಹಾಗೆ ದಿನ ತಳ್ಳುತ್ತಲೇ ಒಂದು ದಿನ ನನ್ನನ್ನು ಸೂಳೆಗಾರಿಕೆಯ ನರಕಕ್ಕೆ ತಳ್ಳಿಬಿಟ್ಟ. ಮನೆಯನ್ನೆ ಕಸುಬಿನ ಅಡ್ಡೆ ಮಾಡಿಕೊಂಡವನಿಗೆ ಗಿರಾಕಿಗಳನ್ನು ಕರೆತರೋದೇ ಕೆಲಸವಾಗಿ ಬಿಡ್ತು. ಅವನ ಮಾತು ನಡವಳಿಕೆಗಳಿಂದ ನನಗೆ ಗೊತ್ತಾಗಿದ್ದೆಂದರೆ ಅವನು ಬೆಂಗಳೂರಿನಲ್ಲಿ ಮುಂಚೆ ಮಾಡುತ್ತಿದ್ದುದು ಇದೇ ತಲೆಹಿಡುಕನ ಕೆಲಸ. ಒಂದು ದಿನ ನಾನು ಅವನ ಜೊತೆ ಜೋರುದನಿಯಲ್ಲಿ ಜಗಳವಾಡಿ ಇದೆಲ್ಲ ನಿಮ್ಮಕ್ಕನಿಗೆ ಗೊತ್ತಾದರೆ ಏನು ಮಾಡ್ತೀಯಾ ಅಂದೆ. ಕುಡಿದ ಅಮಲಿನಲ್ಲಿದ್ದ ಅವನು ಏಯ್ ನಾಯಿ ಅವಳೇನು ನನ್ನ ಅಕ್ಕ ಏನೇ ದೂರದ ಸಂಬಂಧಿ, ನಿಮ್ಮಪ್ಪನ ಜೊತೆ ಅವಳು ಮದುವೆ ಆಗೋಕೆ ಮುಂಚೇನೆ ಅವಳ ಜೊತೆ ಮಲಗಿದೀನಿ. ಇದೆಲ್ಲ ಅವಳಿಗೆ ಗೊತ್ತೆ ಮಾಡ್ತಿರೋದು ಅಂದುಬಿಟ್ಟ. ಅಲ್ಲಿಗೆ ನನಗೆ ಚಿಕ್ಕಮ್ಮ ಅನ್ನಿಕೊಂಡೋಳ ಯೋಗ್ಯತೆ ಏನು ಅಂತ ಗೊತ್ತಾಗಿ ಹೋಯಿತು. ಆದರೀಗ ಅದನ್ನು ತಿಳಿದುಕೊಂಡು ನಾನೇನು ಮಾಡುವಂತಿರಲಿಲ್ಲ. 

ಹೀಗೆ ಒಂದು ವರ್ಷ ಕಳೆದ ಮೇಲೆ ಅವನು ಇದ್ದಕ್ಕಿದ್ದಹಾಗೆ ನನ್ನ ಬಿಟ್ಟು ಎಲ್ಲಿಗೋ ಓಡಿಹೋಗಿಬಿಟ್ಟ. ಅಷ್ಟರಲ್ಲಿ ನನಗೆ ನನ್ನ ಜೀವನ ಇಷ್ಟೇ ಅನ್ನೋದು ಅರ್ಥವಾಗಿ ಹೋಗಿತ್ತು. ಜೊತೆಗೆ ಬೆಂಗಳೂರಿನ ದಂಧೆ ಮಾಡುವ ಲಾಡ್ಜುಗಳು ಪರಿಚಯವಾಗಿದ್ದವು. ಒಬ್ಬಳೇ ಒಂಟಿಯಾಗಿ ಮನೇಲಿದ್ದು ವ್ಯವಹಾರ ಮಾಡೋದು ಕಷ್ಟದ ಕೆಲಸವಾಗಿತ್ತು. ಆ ಮನೆ ಖಾಲಿ ಮಾಡಿ ಒಂದು ಲಾಡ್ಜಿನ ಮಾಮೂಲಿ ಸದಸ್ಯಳಾಗಿಬಿಟ್ಟೆ. ಹಗಲೂ ರಾತ್ರಿ ಅಲ್ಲಿ ದಂಧೆ ನಡೆಯೋದು. ದುಡಿದ ದುಡ್ಡನ್ನ ಯಾರಿಗೆ ಕೊಡಬೇಕಾಗಿತ್ತು ಹೇಳಿ. ಇಡೀ ಪ್ರಪಂಚದಲ್ಲಿ ನಾನೊಬ್ಬಳೆ, ನನಗೇ ಅಂತ ಯಾರೂ ಇಲ್ಲ ಅನ್ನೊ ಸತ್ಯ ಅರಗಿಸಿಕೊಳ್ಳೋಕೆ ಮೊದಮೊದಲು ಕಷ್ಟವಾಯಿತು. ಅದನ್ನ ಮರೆಯೋಕೆ ಕುಡಿತ ಕಲಿತೆ, ಜೊತೆಗೆ ಬೇರೆಬೇರೆ ಗಿರಾಕಿಗಳು ಕಲಿಸಿಕೊಟ್ಟ ಡ್ರಗ್ಸ್ ಗಳಿಗೂ ದಾಸಿಯಾದೆ. 

ಮನುಷ್ಯರೇನು ಅಮೃತ ಕುಡಿದು ಬಂದಿರ್ತೀವಾ? ಎಲ್ಲರಿಗೂ ಬರೋ ಹಾಗೆ ನನಗೂ ಚಿತ್ರವಿಚಿತ್ರವಾದ ಕಾಯಿಲೆಗಳು ಬಂದವು. ಹೇಗೋ ಸಂಬಾಳಿಸಿಕೊಂಡು ಬದುಕಿದೆ. ಈಗ ನನಗೆ ನಲವತ್ತಾರು ವರ್ಷ. ಲೆಕ್ಕ ಹಾಕಿನೋಡಿ ನಾನೆಷ್ಟು ವರ್ಷ ಈ ಪಾಪದ ಕೆಲಸ ಮಾಡಿರಬೇಕು ಅಂತ! ಅಷ್ಟು ವರ್ಷ ದುಡಿದ ದುಡ್ಡಲ್ಲಿ ಒಂದು ರೂಪಾಯಿನೂ ಉಳಿಸಲಿಲ್ಲ ಬಿಡಿ.ಕೊನೆಗಿನ್ನು ನನ್ನ ಕೈಲಿ ಈ ಕೆಲಸ ಮಾಡೋಕಾಗಲ್ಲ ಅಂದಾಗ ಈ ಆಶ್ರಮಕ್ಕೆ ಸೇರಿಕೊಂಡು ಕಾಲಕಳೀತಾ ಇದೀನಿ. ತಮಾಷೆ ಅಂದರೆ ನನ್ನ ಈ ಆಶ್ರಮಕ್ಕೆ ಸೇರಿಸಿದೋನು ಈ ಆಶ್ರಮದ ಸ್ವಾಮಿಯ ಪರಮ ಭಕ್ತ ಮತ್ತು ಒಂದು ಕಾಲದ ನನ್ನ ಖಾಯಂ ಗಿರಾಕಿ. ಪಾಪ ಅವನಿಗೆ ಮನೇಲೇನು ಸಮಸ್ಯೆನೋ ನನ್ನ ಹತ್ತಿರ ಬರ್ತಾ ಇದ್ದ. ಈಗ ಅವನಿಲ್ಲಿಗೆ ವಾರಕ್ಕೆರಡು ಸಾರಿ ಸಂಸಾರದೊಂದಿಗೆ ಬರ್ತಾನೆ. ನಾನವನ್ನು ಮಾತಾಡಿಸಿ ತೊಂದರೆ ಕೊಡೋಕೆ ಹೋಗಲ್ಲ. ನಮ್ಮಂತವರು ಬಚ್ಚಲಿನಹುಳುಗಳ ತರಾ! ನೋಡಿದರೆ ಅಸಹ್ಯ ಅನಿಸುತ್ತೆ. ಆದರೆ ನೀವು ಇಷ್ಟು ಹೊತ್ತು ತಾಳ್ಮೆಯಿಂದ ಕೂತು ನನ್ನ ಕಥೆ ಕೇಳಿದಿರಿ. ಅದಕ್ಕೆ ನಾನು ನಿಮಗೆನಮಸ್ಕಾರ ಹೇಳಬೇಕು.

ಆಯಿತು ಸಾರ್, ಸಾಯಂಕಾಲದ ಪ್ರಾರ್ಥನೆಯ ಟೈಮ್ ಆಯಿತು. ಇಲ್ಲೇ ವಾಸ ಮಾಡೋರು ತಡವಾಗಿ ಹೋದರೆ ಸ್ವಾಮಿಗಳಿಗೆ ಕೋಪ ಬರುತ್ತೆ. ನಾನಿನ್ನು ಬರ್ತೀನಿ.

ಮಾತು ಮುಗಿಸಿ ಎದ್ದು ಹೋದವಳ ಕಣ್ಣಲ್ಲಿ ದು:ಖವಿದ್ದರೂ ಅವಳ ಹೃದಯ ಹಗುರವಾಗಿರಬಹುದೆ ಎಂದುಕೊಂಡೆ ಆಶ್ರಮದ ಗೇಟಿನಾಚೆಗೆ ಬಂದೆ.